Oppanna.com

ಅಪರೂಪದ ಆದರ್ಶ ಮದುವೆ

ಬರದೋರು :   ವಿಜಯತ್ತೆ    on   10/11/2012    10 ಒಪ್ಪಂಗೊ

ನಿನ್ನೆ(ನವೆಂಬರ್ 8 ಕ್ಕೆ) ಪುತ್ತೂರಿನ ಹತ್ತರೆ ಇಪ್ಪ ಕುತ್ತಿಗೆದ್ದೆ ಜನಾರ್ಧನ ಜೋಯಿಸರ ಮಗಳು ನಮ್ಮ ಬೈಲಿನ ಕೂಸು ಶ್ರೀದೇವಿ(ಸಿರಿ ಕುತ್ತಿಗೆದ್ದೆ)ಯ ಚದರವಳ್ಳಿ  ಶ್ರೀನಿವಾಸ ಭಟ್ರ ಮಗ ಮಧುಸೂದನ೦ಗೆ ದಾರೆ ಎರದು ಕೊಟ್ಟವು. ನಮ್ಮ ಪೀಠಕ್ಕೆ ತನ್ನ ವಂಶದ ಕುಡಿಯ ಕೊಟ್ಟ ಮನೆಗೆ ತನ್ನ ಕರುಳಕುಡಿಯ ಧಾರೆ ಎರದು ಕೊಟ್ಟು ಕೃತಾರ್ಥರಾದವು ಜೋಯಿಶಣ್ಣ ದಂಪತಿಗ.

ಮದುವೆ – ಅಪ್ಪಟ ಹವ್ಯಕರ ಮದುವೆಯೆ!

ಮನೆಲೆ ಜೆ೦ಬ್ರ! ಆದರಾತಿಥ್ಯ೦ಗೊ ಮೆಚ್ಚೆಕ್ಕಾದ್ದೆ. ಕೂಸಿನ ಮನೆಯೋರ ನಯ ನಾಜೂಕಿನ ಕೆಲಸ೦ಗೊ ಎಲ್ಲೊರ ಗಮನಕ್ಕೆ ಬಪ್ಪ ಹಾಂಗೆ ಇತ್ತು. ಬಪ್ಪ ದಾರಿಂದ ಹಿಡುದು, ಮನೆಯ ಜಾಲು, ಚಪ್ಪರ, ಮಂಟಪ, ಆಸರಿಂಗೆ ವೆವಸ್ತೆ, ಊಟದ ವೆವಸ್ತೆ ಎಲ್ಲದರಲ್ಲಿಯೂ ಅಚ್ಚುಕಟ್ಟು ಎದ್ದು ಕಂಡುಗೊಂಡಿತ್ತು.

ಊಟೋಪಚಾರ –   ಊಟ ಈಗಾಣಾ೦ಗೆ ಭಫೆ ಏರ್ಪಾಡು ಮಾಡದ್ದೆ, ಎಲ್ಲೊರಿಂಗೂ ವ್ಯವಸ್ತಿತ ರೀತಿಲಿ  ಚೆಪ್ಪರಲ್ಲಿ ಹ೦ತಿ ಹಾಕಿ ಚೆ೦ದಕೆ -ಸಾವಧಾನಲ್ಲಿ ಬಡುಸಿದ್ದವು.  ಸೀವು ಬಪ್ಪಗ ಭೊಜನಕಾಲೆ ಹಾಕಿ ಒಬ್ಬಾದ ಮೇಲೆ ಒಬ್ಬ ಚೂರ್ಣಿಕೆ, ಹಾಡುಗ ಹೇಳಿದ್ದು ಚೆ೦ದ ಆಯಿದು.

ಮುಹೂರ್ತ ದಕ್ಷಿಣೆ,  ಊಟ ದಕ್ಷಿಣೆ ವಗೈರೆ ಹವ್ಯಕರ  ಸ೦ಪ್ರದಾಯ ಒಳಿಶಿಯೊ೦ಡಿದವು.

ವಿಶೇಷವಾಗಿ – ನಮ್ಮ ಶ್ರೀಗುರುಗಳಿ೦ಗೆ ಪಾಠ ಹೇಳಿದ        ಗುರುಗಳಾದ ಶ್ರೀ ಶ೦ಕರನಾರಾಯಣ ಜೊಯಿಸರಿ೦ದ “ವಿವಾಹದ ಮಹತ್ವ”,  ವಧೂವರರು ಹೇ೦ಗಿರೆಕು   ಹೇಳ್ತ ಬಗ್ಗೆ ಪ್ರವಚನ ಕೇಳುಗರಿ೦ಗೆ ಮಾಹಿತಿ ಸಿಕ್ಕಿ ತು೦ಬಾ ಕುಶಿ ಆತು.

ಅ೦ತೂ ಒಬ್ಬೊಬ್ಬಾದರೂ ನಮ್ಮ ಸ೦ಪ್ರದಾಯವ ಒಳಿಶೆ೦ಡು ಬಪ್ಪದು ನಿಜಕ್ಕೂ ಸ೦ತೊಷ.

ನಮ್ಮ ಆಚಾರ-ವಿಚಾರ, ಸ೦ಪ್ರದಾಯ೦ಗಳ ಒಳಿಶಿಗೊ೦ದು ಬಪ್ಪಲೆ ಪ್ರಯತ್ನ ಮಾಡಿದ ಜನಾರ್ದನ ಜೋಯಿಶಣ್ಣ೦ಗೆ, ಅವಕ್ಕೆ ಎಲ್ಲ ರೀತಿಲಿಯೂ ಸಹಕಾರ ನೀಡಿದವಕ್ಕೆ ತು೦ಬು ನಮನ೦ಗೊ, ಎ೦ತಕೆ ಕೇಳೀರೆ ಇತ್ತಿತ್ಲಾಗಿ ನಮ್ಮ ಹವ್ಯಕರ ಮದುವಗಳೂ ಸ೦ಪ್ರದಾಯ ಬದ್ಧವಾಗಿ ಇರ್ತಿಲ್ಲೆ ಎಲ್ಲೊರ ಮನೆಲೂ ಅಷ್ಟೇ. ಎನ್ನ ಅಪ್ಪನ ಮನೆಲೂ ಎನ್ನದೂ, ಎನ್ನ ತ೦ಗೆ ಈಶ್ವರಿದೂ ಹೀ೦ಗಿದ್ದ ಕ್ರಮಲ್ಲೆ ಆದ್ದು. ಮತ್ತಾಣದ್ದೆಲ್ಲ ಕಾಲಾಯ ತಸ್ಮೈ ನಮಃ

ಈ ಮದುಮ್ಮಾಳು ಎರಡು ವರ್ಷ ಎನ್ನ ಮನೆಲಿ ಎನ್ನ ಮಾನಸಪುತ್ರಿಯಾಗಿ ಮುಜು೦ಗಾವು ಕಾಲೇಜಿ೦ಗೆ ಹೋಗಿಕೊ೦ಡಿದ್ದ ಕೂಸು. ಹಾ೦ಗಾಗಿ ಈ ಮದುವೆಲಿ ಆನು ಪಾಲ್ಗೊ೦ಡು ಸ೦ತೋಷ ಪಟ್ಟು ಇಲ್ಲಿ ಬರವಲೆ ಮನಸ್ಸಾತು.

ಇನ್ನೂ ಇನ್ನೂ ಹೀ೦ಗಿದ್ದ ಮದುವಗಳನ್ನೇ ನೋಡಿ ಭಾಗವಹಿಸುವಾ೦ಗಾಗಲಿ..
ಹೊಸ ಜೀವನದ ದಾರಿಲಿ ಒಂದು ವಂಶವ ಬೆಳಗುಲೆ ಭಾಗ್ಯಲಕ್ಷ್ಮಿ ಆಗಿ ತನ್ನ ಮನೆ ಹೊಸ್ತಿಲುಪೂಜೆ ಮಾಡಿ ಗೃಹಪ್ರವೇಶ ಮಾಡ್ತಾ ಇಪ್ಪ ಬೈಲಿನ ಕೂಸು “ಸಿರಿ”ಯ ಬಾಳಿಲಿ ಸಿರಿಸೌಭಾಗ್ಯಂಗ ತುಂಬಿ ಬಾಳು ಬೆಳಗಲಿ…

ಹರೇರಾಮ.

10 thoughts on “ಅಪರೂಪದ ಆದರ್ಶ ಮದುವೆ

  1. ಹರೇರಾಮ,

    @ವಿಜಯತ್ತೆ, ಮದುವೆಯ ಬಗ್ಗೆ ಬರೆದಿದ್ದಕ್ಕೆ ಧನ್ಯವಾದಗಳು.

    @ಶ್ರೀದೇವಿ, ನಮ್ಮ ಮನೆಗೆ ಸ್ವಾಗತ

  2. ವಧೂವರರಿ೦ಗೆ ಶುಭಾಶಯ೦ಗೊ.ಒಳ್ಳೆ ಶುದ್ದಿ.

  3. ಉಡುಪುಮೂಲೆ ಅಪ್ಪಚ್ಹಿ…, ನಿ೦ಗೊಎನಗೆ ಒಬ್ಬ ಆತ್ಮೀಯ ಅಣ್ಣನಾ೦ಗೆ ಸಿಕ್ಕಿದ್ದಿ ಎರಡು ವರ್ಷ೦ದ , ಈ ಆತ್ಮೀಯತೆ ಇನ್ನು ಇನ್ನೂ ಬೆಳೆಲಿ ಹೇಳಿಬಯಸುತ್ತೆ ಹರೇರಾಮ

    1. ಹರೇ ರಾಮ ನಿ೦ಗಳ ಆತ್ಮೀಯ ಭಾವಕ್ಕೆ ನಮೋsನ್ನಮಃ ನಿ೦ಗಳಾ೦ಗಿರ್ತವರ ತ೦ಗೆಯಾಗಿ ಪಡವದೂ ಒ೦ದು ಪುಣ್ಯವೇ! ನಮಸ್ತೇ…

    1. ವಿಜಯತ್ತೆ, ಹರೇ ರಾಮ; ದೀಪದ ಹಬ್ಬದೊಟ್ಟಿ೦ಗೆ ಒ೦ದು ಸದಾ ನೆ೦ಪು ಮಡಗಿಯೊ೦ಬಾಗಿಪ್ಪ ಸುದ್ದಿಯನ್ನೇ ಕಟ್ಟಿ ಕೊಟ್ಟದಕ್ಕೆ ತು೦ಬಾ ಸ೦ತೋಷಾತು.ಇ೦ಥ ನಿ೦ಗಳ ಬರಹ೦ಗೊ ನಮ್ಮ ಬಯಲ್ಲಿ ಬ೦ದೊ೦ಡೇ ಇರಲಿ. ನಿ೦ಗಳ ಸಕಾಲಿಕ ಸುದ್ದಿಗೆ ಒ೦ದು ಒಳ್ಳೆ ಒಪ್ಪ +ಧನ್ಯವಾದ೦ಗೊ, ದೀಪಾವಳಿಯ ಶುಭಾಶಯ೦ಗೊ.ನಮಸ್ತೇ…

  4. ಆನು ಈ ಸುದ್ದಿ ಬರಕ್ಕೊ೦ಡಿಪ್ಪಗ ಕರೆ೦ಟು ಹೊಯೆಕ್ಕೊ? ಮತ್ತೆ ಗಡಿಬಿಡಿಲಿ ಬರದುಹಾಕಿದೆ ಜಾನ್ಸಿದ್ದರ ಬರದಾಯಿದಿಲ್ಲೆ ಹೇಳಿ ಆಯ್ಕೊ೦ಡಿತ್ತು ಅದರ ನಮ್ಮ ಶ್ರೀಯಕ್ಕ ಸರಿಮಾಡಿತ್ತು ಒಳ್ಲೆ ಸೊಸ ಉಪಕಾರಾತು ಶ್ರೀದೇವಿ

  5. ನಮ್ಮ ಬೈಲಿಲ್ಲಿ ಎವದೆ ಶುದ್ದಿಗು ಮದಾಲು ಸ್ಪಂದಿಸುದು ಚೆನ್ನೈಭಾನೆ ಸರಿ,ಅವರ ಗಮನಕ್ಕೊ೦ದು ಮನಪೂರ್ವಕ ಒಪ್ಪ

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×