ಚೋಲು - ಡಬ್ಬಲ್ ಚೋಲು

ಬೈಲಿನ ಶುದ್ದಿಗೊ:

ಬೈಲಿನ ನೆರೆಕರೆ:

ಗುರಿಕ್ಕಾರ°ಒಪ್ಪಣ್ಣಶೇಡಿಗುಮ್ಮೆ ಪುಳ್ಳಿಚೆನ್ನಬೆಟ್ಟಣ್ಣಅಕ್ಷರ°ಪುಟ್ಟಬಾವ°ಕಾವಿನಮೂಲೆ ಮಾಣಿಪೆರ್ಲದಣ್ಣಅಡ್ಕತ್ತಿಮಾರುಮಾವ°ನೆಗೆಗಾರ°ಕೆದೂರು ಡಾಕ್ಟ್ರುಬಾವ°ಡಾಗುಟ್ರಕ್ಕ°ಮಂಗ್ಳೂರ ಮಾಣಿಪವನಜಮಾವದೊಡ್ಡಮಾವ°ವಿದ್ವಾನಣ್ಣಯೇನಂಕೂಡ್ಳು ಅಣ್ಣವಸಂತರಾಜ್ ಹಳೆಮನೆಪೆಂಗಣ್ಣ°ಅನು ಉಡುಪುಮೂಲೆಬಟ್ಟಮಾವ°ಎರುಂಬು ಅಪ್ಪಚ್ಚಿಮುಳಿಯ ಭಾವಗೋಪಾಲಣ್ಣಜಯಶ್ರೀ ನೀರಮೂಲೆಚೂರಿಬೈಲು ದೀಪಕ್ಕತೆಕ್ಕುಂಜ ಕುಮಾರ ಮಾವ°ದೇವಸ್ಯ ಮಾಣಿಕೇಜಿಮಾವ°ದೊಡ್ಡಭಾವಹಳೆಮನೆ ಅಣ್ಣಸುವರ್ಣಿನೀ ಕೊಣಲೆಪುತ್ತೂರಿನ ಪುಟ್ಟಕ್ಕಕೊಳಚ್ಚಿಪ್ಪು ಬಾವಅಜ್ಜಕಾನ ಭಾವಅನುಶ್ರೀ ಬಂಡಾಡಿಕಳಾಯಿ ಗೀತತ್ತೆಡಾಮಹೇಶಣ್ಣದೀಪಿಕಾಸರ್ಪಮಲೆ ಮಾವ°ಬಲ್ನಾಡುಮಾಣಿನೀರ್ಕಜೆ ಮಹೇಶವೇಣಿಯಕ್ಕ°ಡೈಮಂಡು ಭಾವಶ್ರೀಅಕ್ಕ°ಪುತ್ತೂರುಬಾವವೇಣೂರಣ್ಣಶಾಂತತ್ತೆಗಣೇಶ ಮಾವ°ಚೆನ್ನೈ ಭಾವ°ಮಾಷ್ಟ್ರುಮಾವ°ಶುದ್ದಿಕ್ಕಾರ°ಅಕ್ಷರದಣ್ಣಚುಬ್ಬಣ್ಣಒಪ್ಪಕ್ಕಸುಭಗಸಂಪಾದಕ° (editor)ಬೊಳುಂಬು ಮಾವ°ಬಂಡಾಡಿ ಅಜ್ಜಿಶರ್ಮಪ್ಪಚ್ಚಿಶ್ಯಾಮಣ್ಣ


ಅಷ್ಟಮಿಯ ಮೂಡೆ-ಕೊಟ್ಟಿಗೆ ಮಾಡಿದಿರೋ?

August 22, 2011 ರ 12:00 amಗೆ ನಮ್ಮ ಬಂಡಾಡಿ ಅಜ್ಜಿ ಬರದ್ದು, ಇದುವರೆಗೆ 11 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಮೊನ್ನೆಂದ ನೆಗೆಮಾಣಿದು ಒಂದೇ ರಾಗ.. ಕ್ರಿಷ್ಣ ವೇಷ ಸ್ಪರ್ಧೆಗೆ ಹೋಯೆಕ್ಕು ಹೇಳಿಗೊಂಡು.. ಅದಕ್ಕೆ ಒಂದು ವಾರಂದ ತೆಯಾರಿ ಆಗಿಂಡಿದ್ದತ್ತು..
ಒಪ್ಪಕ್ಕ ಪುಸ್ತಕದೆಡೇಲಿ ಮಡಗಿದ ನವಿಲುಗರಿ ತಂದು, ಚೂರಿಬೈಲು ದೀಪನ ಹತ್ತರೆ ಚೆಂದದೊಂದು ಕಿರೀಟ ಎಲ್ಲ ಮಾಡುಸಿ, ಭಾರದ್ವಾಜದ ದೇವಿಯತ್ತರೆ ಜಿಗಿಬಿಗಿ ಕಚ್ಚೆ ತೆಕ್ಕೊಂಡು, ಎಲ್ಲಾ ಏರ್ಪಾಡುಗಳನ್ನೂ ಮಾಡಿಕ್ಕಿ ಇದ್ದ ಮೊಸರಿನ ಪೂರ ಬಗ್ಗುಸಿ ತೆಕ್ಕೊಂಡು ಹೋಯಿದ°.. ಎಂತ ವೇಷ ಹಾಕಿದನೋ.. ಉಮ್ಮಪ್ಪ ಅಲ್ಲಿ ಕಿಟಿಕಿಲಿ ಒಸ್ತ್ರಕ್ಕೆ ಹಾಕುತ್ತ ನೀಲಿ ಕಾಣ್ತಿಲ್ಲೆ.. ಇನ್ನು ಅದನ್ನೇ ಮೈಗೆ ಉದ್ದಿಗೊಂಬಲೆ ಕೊಂಡೋಯಿದನೋ ಎಂತ್ಸೊ…  ಅಂತೂ ಇಂತೂ ಮುಗಾತದ ಕ್ರಿಷ್ಣ ವೇಷ ಸ್ಪರ್ಧೆ.. ಅಲ್ಲ ಅವ ಪ್ರಯಿಸು ಬಾರದ್ದರೂ ಆನೇ ಪಷ್ಟು ಹೇಳಿಕ್ಕುಗು ನಂಬಿಕ್ಕೆಡಿ ಆತೊ..

ಹೇಳಿದಾಂಗೆ ಅಷ್ಟಮಿಗೆ ನಿಂಗೊ ಎಂತ ಮಾಡಿದಿ..?
ಮಕ್ಕೊ ವೇಷ ಹಾಕಲೆ ಹೋಯಿದಿರೋ? ಗೆಂಡುಮಕ್ಕೊ ಮೊಸರಿನ ಅಳಗೆ ಒಡವಲೆ ಹೋಯಿದಿರೋ?
ಹೆಮ್ಮಕ್ಕೊ ಅಡಿಗೆ ಮಾಡಿದಿರೋ?
ಅದರ್ಲಿಯೂ, ಕೊಟ್ಟೆ (ಮೂಡೆ) ಕೊಟ್ಟಿಗೆ ಮಾಡಿದಿರೋ…
ಮಾಡದ್ದರೆ ಆ ಲೆಕ್ಕಲ್ಲಿ ಒಂದರಿ ಮಾಡಿಕ್ಕಿ, ಆತೋ? ನೆಂಪು ಹೇಳಿಕ್ಕಲೆ ಬಂದದು ಈಗ.

ಕೊಟ್ಟೆ ಕೊಟ್ಟಿಗೆಗೆ ಬಾಳೆಕೀತು ಕಟ್ಟಿದ್ದು...

ಮಾಡ್ತ ಕ್ರಮ ನೆಂಪಿದ್ದನ್ನೇ.. ಹಿಂದಾಣ ದಿನ ಹೊತ್ತೊಪ್ಪಾಗಳೇ ಅಕ್ಕಿ, ಉದ್ದು ಎಲ್ಲ ಬೊದುಲುಲೆ ಹಾಕಿ ಉದಿಯಪ್ಪಗ ಕಡದು ಮಡುಗುದು ಹುಳಿ ಬಪ್ಪಲೆ.. ಮತ್ತೆ ಹೊತ್ತೊಪ್ಪಾಗ ಬೇಶುದು..

ಬೇಶುದು ಅಂತೆ ಕೊಟ್ಟಿಗೆಯಾಂಗಲ್ಲ ಅದುವೇ ವಿಶೇಷ ಇದಾ.. ರೆಜ ಅಗಲ ಅಗಲ ಇಪ್ಪ ಬಾಳೆಕೀತುಗೊ ಆಯೇಕು..
ಬಾಳೆಕೀತು ಮಾಡೊಗ ದಂಟಿಂದ ಬಾಳೆಬಳ್ಳಿಯನ್ನೂ ತೆಗದು ಮಡಿಕ್ಕೊಳೇಕು..
ಸುರುವಿಂಗೆ ಬಾಳೆಯ ಉರುಟಿಂಗೆ ಮಡುಸಿ ಒಂದು ಹೊಡೆ ಬಾಳೆಬಳ್ಳಿಲಿ ಕಟ್ಟುದು..
ಮತ್ತೆ ಒಂದು ಗ್ಳಾಸಿನ ಒಳವೋ ಪಾಟೆಯ ಒಳವೋ ಮಣ್ಣ ಮಡುಗಿ ಹಿಟ್ಟೆರವದು ನಿದಾನಕ್ಕೆ.. ದಣಿಯ ಎರವಲಾಗ, ಹದಾಕೆ.. ಎರದಾದಿಕ್ಕಿ ಇನ್ನೊಂದು ಹೊಡೆಯನ್ನೂ ಕಟ್ಟಿತ್ತು.. ಹೀಂಗೇ ಮಾಡಿಕ್ಕಿ ಅಟ್ಟಿನಳಗೆಲಿ ಮಡುಗಿ ಬೇಶಿದರಾತದ..
ಇದರೊಟ್ಟಿಂಗೆ ಸೀವು ಅವಲಕ್ಕಿಯುದೇ ಮಾಡ್ತ ಕ್ರಮ ಇದ್ದು… ಕಾಯಿಗೆ ಬೆಲ್ಲ ಕೆರಸಿ ಹಾಕಿ, ಎಳ್ಳೊ ಏಲಕ್ಕಿಯೊ ಎಂತಾರು ಹಾಕಿ ಮಾಡ್ತದು… ಬೆಲ್ಲವ ರವೆಯ ಹಾಂಗೆ ಮಾಡಿರೆ ರಜ ದಿನ ಒಳಿತ್ತಿದ ಅವಲಕ್ಕಿ…
ರವೆ ಹೇಳೊಗ ನೆಂಪಾತದ.. ಉದಿಯಪ್ಪಗಣ ಕಾಪಿಗೆ ದೋಸೆಯೊ, ಉಂಡೆಯೊ ಮಾಡಿರೆ ಕೂಡುಲೆ ಎಂತ ಇಲ್ಲದ್ದರೆ ರವೆ ಮಾಡುದು ಕ್ರಮ ಅಲ್ಲದೋ.. ಏವಗಳೂ ಮಾಡುಲೆ ಪುರುಸೊತ್ತಾವುತ್ತಿಲ್ಲೆ ಹೇಳಿಗೊಂಡು ರಜ ಮಾಡಿಮಡುಗುದಿದಾ..
ಓ ಮೊನ್ನೆ ನೆಗೆಮಾಣಿ ಬಂದಿಪ್ಪಗ ಅವಂಗೆ ನಾಕು ತೆಳ್ಳವು ಕೊಟ್ಟದು.. ರವೆ ಕರಡಿಗೆಯನ್ನೂ ಹತ್ತರೆ ಮಡಿಗಿತ್ತಿದೆ ಬೇಕಾದಷ್ಟು ಹಾಕಿಗೊಳ್ಳಲಿ ಹೇಳಿಗೊಂಡು.. ಚೆಲಾ ಮಾಣಿಯೇ, ನಾಕು ದೋಸೆಗೆ ನಾಕು ಕುಡ್ತೆ ರವೆ ಕಾಲಿ… ರಾಮ ರಾಮಾ.. ಇವ° ಎಂತ ಬೆಲ್ಲ ಬೇನ್ಸೊಪ್ಪಿನ ಸೆಸಿಲಿ ಸುಲಬಲ್ಲಿ ಸಿಕ್ಕುತ್ತೂಳಿ ಗ್ರೇಶಿದ್ದನೋ ಹೇಂಗೆ.. ಇನ್ನು ಎಣ್ಣೆಯುದೇ ಉಪ್ಪಿನಕಾಇ ಎಸರುದೇ ಮಾಂತ್ರ ಕೊಡುದು ಹೇಳಿ ಆಲೋಚನೆ ಮಾಡಿದ್ದೆ.. ನೋಡೊ ಎಂತ ಮಾಡ್ತಾ°ಳಿ…
ಹ್ಮ್ ಅದಿರಳಿ ಅಷ್ಟೆಮಿಗೆ ಕೊಟ್ಟೆ ಕೊಟ್ಟಿಗೆಯೂ ಸೀವವಲಕ್ಕಿಯೂ ಮಾಡಿ ದೇವರಿಂಗೆ ನೈವೇದ್ಯ ಮಾಡಿಕ್ಕಿ ತಿಂಬದದ… ಮೂಡೆಗೆ ಒಟ್ಟಿಂಗೆ ಕೂಡಿಗೊಂಬಲೆ ಕಾಯಿಹಾಲು ಲಾಯಿಕಾವುತ್ತು.. ಹಾಂಗೆ ಮತ್ತೆ ಪುರುಸೊತ್ತಿದ್ದರೆ ಪಾಯಿಸವೊ ಹಸರ ಸೀವೋ ಮಾಡುಲಕ್ಕು ಹೇಳುವ.. ವಿಶೇಷ ಅಡಿಗೆಗಳ ಮಾಡಿಗೊಂಡು, ಒಳ್ಳೆ ಆಚಾರ-ವಿಚಾರಲ್ಲಿ ದೇವರ ಬೇಡಿಗೊಂಡು ಮನಸ್ಸಿಂಗೆ ನೆಮ್ಮದಿ ತಂದುಗೊಂಬದೇ ಅಲ್ದೊ ಹಬ್ಬದ ಆಚರಣೆ ಹೇಳಿರೆ…
ಅಷ್ಟಮಿಯ ಮೂಡೆ-ಕೊಟ್ಟಿಗೆ ಮಾಡಿದಿರೋ?, 5.0 out of 5 based on 3 ratings
ಶುದ್ದಿಶಬ್ದಂಗೊ (tags): , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ ಬಂಡಾಡಿ ಅಜ್ಜಿ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 11 ಒಪ್ಪಂಗೊ

  1. ತೆಕ್ಕುಂಜ ಕುಮಾರ ಮಾವ°
    ತೆಕ್ಕುಂಜ ಕುಮಾರ ಮಾವ°
    VN:F [1.9.3_1094]
    Rating: 0 (from 0 votes)

    ಬಾಳೆ ಎಲೆ ಕಟ್ಟಿ ಮೂಡೆ ಮಾಡಿದ್ದಿಲೆ, ತಟ್ಟೆಲಿ ಎರದು ಕೊಟ್ಟಿಗೆ ತಿಂದದು. ಅಜ್ಜಿಯ ಶುದ್ದಿ ಓದಿ ಮೂಡೆ ತಿಂದ ಹಾಂಗೆ ಆತಿದ.

    [ಉತ್ತರುಸಿ]

  2. ಚೆನ್ನೈ ಭಾವ
    ಚೆನ್ನೈ ಭಾವ°
    VA:F [1.9.3_1094]
    Rating: 0 (from 0 votes)

    ಆಹಾ ಸವಿವರ ಲಾಯಕ್ಕ ಆಯ್ದು ಅಜ್ಜಿ. ಓದಿ ಮುಗಿಶಿಯಪ್ಪಗ ತಿಂಬಲೆ ಕೊದಿಯೂ ಆತು. ಒಂದು ಬಾಳೆ ಕೀತಿಂಗೆ ಮೂರು ರುಪಾಯಿ, ಒಂದು ಕೊಡಿ ಬಾಳಗೆ ಐದು ರೂಪಾಯಿ ಹೇದು ಕೇಟಪ್ಪಗ ಈ ಕೊಟ್ಟಿಗೆ ತಿಂದರೆ ಕರಗ ಹೇದು ಕಂಡತ್ತು. ಹೇಳಿದಾಂಗೆ ಆ ಮಾಣಿ ಇದರ ಹಿಡ್ಕೊಂಡು ಅಜ್ಜಿ ಹೆಗ್ಳ ನ ಸುಟ್ಟು ಹಾಕಿದ್ದು ಹೇಳಿ ನೆಗೆ ಮಾಡಿದ್ದ ಇಲ್ಯೋ.! ವಿಷುವಿಂಗೆ ಹಲಸಿನ ಎಲೇಲಿ ಮೂಡೆ ಕಟ್ಟಿ ಕೊಟ್ಟಿಗೆ ಮಾಡಿ ಕೊಟ್ಟಿಕ್ಕಿ ಆತೋ ಆ ನೆಗೆಗಾರ ಮಾಣಿಗೆ. ಗಾಳಿಪಟ ಕೈಲಿ ಹಿಡ್ಕೊಂಡು ಓಡಿಯೊಂಡು ಹೋವ್ತಾಂಗೆ ಈ ಮೂಡೆಯ ಹಿಡ್ಕೊಂಡು ಕುಣಿಗದಾ ನಮ್ಮ ನೆಗೆಮಾಣಿ.
    ‘ಜೈ ಕೃಷ್ಣ ಅಷ್ಟಮಿ – ಜೈ ಅಜ್ಜಿ ಕೊಟ್ಟಿಗೆ’.

    [ಉತ್ತರುಸಿ]

  3. ಮಂಗ್ಳೂರ ಮಾಣಿ...
    ಮಂಗ್ಳೂರ ಮಾಣಿ
    VA:F [1.9.3_1094]
    Rating: 0 (from 0 votes)

    ಅಜ್ಜೀ,
    ನಿನ್ನೆ ಅಕ್ಕನ ಮನೆಗೆ ಹೋಗಿತ್ತಿದ್ದೆ… ಅಲ್ಲಿ ತುಂಬ ಪ್ರೀತಿಲೆ ಅತ್ತೆ ೪ ಕೊಟ್ಟಿಗೆ ಬಳುಸಿದವು..
    ನಿಂಗಳ ಲೇಖನ ಓದಿ ಅಷ್ಟೇ ಕುಶಿ ಆತಿದಾ…

    “ವಿಶೇಷ ಅಡಿಗೆಗಳ ಮಾಡಿಗೊಂಡು, ಒಳ್ಳೆ ಆಚಾರ-ವಿಚಾರಲ್ಲಿ ದೇವರ ಬೇಡಿಗೊಂಡು ಮನಸ್ಸಿಂಗೆ ನೆಮ್ಮದಿ ತಂದುಗೊಂಬದೇ ಅಲ್ದೊ ಹಬ್ಬದ ಆಚರಣೆ ಹೇಳಿರೆ…”- ನಿಂಗೊ ಹೇಳಿರೆ ಸರಿಯೇ… ಮತ್ತೆ ಮಾತಿಲ್ಲೆ..

    [ಉತ್ತರುಸಿ]

  4. ರಘು ಮುಳಿಯ
    ಮುಳಿಯ ಭಾವ
    VA:F [1.9.3_1094]
    Rating: 0 (from 0 votes)

    ಅಜ್ಜಿ,ನಿನ್ನೆ ಇರುಳೇ “ಬಿ.ಬಿ.ಸಿ.”ಲಿ ತಾಜಾ ವರದಿ ಒಪ್ಪುಸಿದ್ದೆ – ಎ೦ಗಳಲ್ಲಿ ಇ೦ದು ಉದಿಯಪ್ಪಗ ಕೊಟ್ಟಿಗೆ,ರಸಾಯನ.ಮಧ್ಯಾಹ್ನ ಆಫೀಸಿನ ದೋಸ್ತಿಗೊಕ್ಕೂ ಹ೦ಚುಲೆ ಇದ್ದಿದಾ..

    [ಉತ್ತರುಸಿ]

  5. ಗಣೇಶ
    ಗಣೇಶ ಪೆರ್ವ
    VA:F [1.9.3_1094]
    Rating: 0 (from 0 votes)

    ಅಜ್ಜಿಯ ಕಾಣದ್ದೆ ಸುಮಾರು ಸಮಯ ಆತನ್ನೆ!! ಕೃಷ್ಣಾಷ್ಟಮಿಯ ಲೆಕ್ಕಲ್ಲಿ ಆದರೂ ಬೈಲಿ೦ಗೆ ಬ೦ದಿರನ್ನೆ! ಅದೇ ದೊಡ್ಡದು. ಎನಗೆ ಇಲ್ಲಿ ಕೊಟ್ಟಿಗೆ ಎ೦ತ ಮಾಡ್ಳೆ ಎಡಿಗಾಯಿದಿಲ್ಲೆ. ಕೃಷ್ಣಾಷ್ಟಮಿಯುದೆ ಬಾಕಿ ಎಲ್ಲಾ ದಿನ೦ಗಳ ಹಾ೦ಗೆ ಅ೦ತೆ ಹೋತು ಅಷ್ಟೇ..
    ಅಪ್ಪೊ ಅಜ್ಜೀ, ಕಡೆಕೊಡಿ ಕಟ್ಟಿದ ಕೊಟ್ಟಿಗೆ ಹೇಳಿರೆ ಇದುವೇ ಅಲ್ಲದೊ? ಹಾ೦ಗೆಯೇ ಬಾಳೆ ಎಲೆ ಸುರುವಿ೦ಗೆ ಬಾಡುಸೆಡದೊ ಅಜ್ಜೀ?

    [ಉತ್ತರುಸಿ]

  6. Sumana Bhat Sankahithlu
    VA:F [1.9.3_1094]
    Rating: 0 (from 0 votes)

    [ವಿಶೇಷ ಅಡಿಗೆಗಳ ಮಾಡಿಗೊಂಡು, ಒಳ್ಳೆ ಆಚಾರ-ವಿಚಾರಲ್ಲಿ ದೇವರ ಬೇಡಿಗೊಂಡು ಮನಸ್ಸಿಂಗೆ ನೆಮ್ಮದಿ ತಂದುಗೊಂಬದೇ ಅಲ್ದೊ ಹಬ್ಬದ ಆಚರಣೆ ಹೇಳಿರೆ…] ಎನಗೆ ತುಂಬಾ ಖುಶಿ ಆತು ಈ ವಾಕ್ಯವ ಓದಿ.

    [ಉತ್ತರುಸಿ]

  7. anu
    ಅನು ಉಡುಪುಮೂಲೆ
    VN:F [1.9.3_1094]
    Rating: 0 (from 0 votes)

    ಕೊಟ್ಟಿಗೆ ಸುದ್ದಿ ಕೇಳುಗ ಖುಶಿ ಆತು. ಎನಗೂ ಮಗ೦ಗೂ ಅತ್ತೆ ಮಾದಿದ ಕೊಟ್ಟಿಗೆ ತಿ೦ಬಲೆ ಪುರುಸೊತ್ತಾಯಿದಿಲ್ಲೆ. ಗಡಿಬಿಡಿಲಿ ರಜ್ಜ ಮುಕ್ಕಿಕ್ಕಿ ಓಡಿದ್ದು. ಮಗ೦ಗೆ ಯಕ್ಷಗಾನ ಇತ್ತು. ಅ೦ತೂ ಅಶ್ತಮಿ ಗೌಜಿ…………

    [ಉತ್ತರುಸಿ]

  8. ಬೊಳುಂಬು ಗೋಪಾಲ ಮಾವ
    ಬೊಳುಂಬು ಮಾವ°
    VA:F [1.9.3_1094]
    Rating: 0 (from 0 votes)

    ಓ, ಮನ್ನೆ ಟಿವಿಲಿ ಕೃಷ್ಣ ವೇಶ ಸ್ಪರ್ದೆಯ ತೋರುಸೆಂಡಿತ್ತಿದ್ದವು. ಅದರಲ್ಲಿ “ನೆಗೆ ಮಾಣಿ”ದುದೆ ಇತ್ತೋ ಅಂಬಗ. ರಜಾ ಜಾಸ್ತಿ ನೀಲಿ ಬಣ್ಣ ಆದ್ದದು ಅವನದ್ದೇ ಆಯ್ಕಂಬಗ. ಅಜ್ಜಿಯ ಬರಹ ಏವತ್ತುದೆ ಚೆಂದ. ಲಾಯಕಾತದ.
    ಅಷ್ಟಮಿ ದಿನ ಎಂಗೊ ಒಂದರಿ ಕೊಟ್ಟೆ ಕೊಟ್ಟಿಗೆ ಮಾಡುವೋ ಹೇಳಿ ಗ್ರೇಶಿದೆಯೊ. ಮತ್ತೆ ತಡ ಆವ್ತು ಹೇಳಿ, “ಸೆಕೆಗೆ” ಎರದಿಯೊ°.
    “ಕಾಯಲು” ಮಾಡದ್ದೆ ಕಳಿಗೊ. ಮಾಡಿತ್ತು ಹೇಳುವೊ°. ಅಷ್ಟಮಿ ಗಮ್ಮತು ಆತು. ಶಕ್ತಿನಗರ ದೇವಸ್ತಾನಲ್ಲಿ ಹೆಮ್ಮಕ್ಕೊಗೆ ರಂಗವಲ್ಲಿ, ಮಕ್ಕೊಗೆ ಚಿತ್ರ ಸ್ಪರ್ದೆ ಎಲ್ಲವುದೆ ಇತ್ತು. ಹಗಲಿಂಗೆ ಹೋದಿಯೊ. ಇರುಳು ಡೇನ್ಸು, ತಾಳಮದ್ದಳೆ ಎಲ್ಲ ಇತ್ತಾಡ. ಒಳ್ಳೆ ಏರ್ಪಾಟು ಮಾಡಿದ್ದವು.

    [ಉತ್ತರುಸಿ]

  9. ಲಕ್ಷ್ಮಿ ಭಟ್ಟ
    VA:F [1.9.3_1094]
    Rating: 0 (from 0 votes)

    ಬಾಳೆಕೀಳೆಲಿ ಮಾಡು ಕೊಟ್ಟೆ ಇಡ್ಲಿ ಕಡಿಮೆ ಆಗ್ತಿಪ್ಪ ಈ ಕಾಲದಲ್ಲಿ ಬ೦ದ ಈ ಲೇಖನ ಚೊಲೊ ಇದ್ದು..ಬಾಳೆ ಕೀಳೆಯಾ ಬಾಡಿಸಿಕೊಳ್ಳಗದ್ದೆ ಮಡಚಿದ್ರೆ ಬಾಳೆಕೀಳೆ (ತು) ಒಡೆದು ( ಸೀಳಿ ) ಹೋಗ್ತಿಲ್ಯಾ….
    .ಹಳೆಯ ನೆನಪು ಮರುಕಳಿಸ್ದಾಗೆ ಆತು….

    [ಉತ್ತರುಸಿ]

  10. Suvarnini Konale
    ಸುವರ್ಣಿನೀ ಕೊಣಲೆ
    VA:F [1.9.3_1094]
    Rating: 0 (from 0 votes)

    ಕೊಟ್ಟಿಗೆ ಮಾಡಿದ್ದಿಲ್ಲೆ :( ನೋಡುವಗ ಆಶೆ ಆವ್ತು ಅಜ್ಜಿ…. ಇನ್ನಾಣ ವರ್ಷ ನಿಂಗಳಲ್ಲಿಗೆ ಬಂದು ನಿಂಗೊ ಮಾಡಿದ ಕೊಟ್ಟಿಗೆ ರುಚಿ ನೋಡುದು :)
    ನೆಗೆಮಾಣಿಯ ಕಥೆ ಈಗ ಗೊಂತಾತಿದ ! ಎನಗೆ ಓ ಮೊನ್ನೆ ಸಿಕ್ಕಿ ತನಗೇ ಪಸ್ಟ್ ಪ್ರಯಿಸು ಸಿಕ್ಕಿದ್ದು ಕೃಷ್ಣ ಚಾಮಿಯ ವೇಷ ಹಾಕುತ್ತ ಸ್ಪರ್ಧೆಲಿ ಹೇಳಿ, ಎನ್ನ ಹತ್ತರೆ ಒಂದು ದೊಡ್ಡ ಚಾಕಲೇಟು ವಸೂಲಿ ಮಾಡಿಗೊಂಡು ಹೋಯ್ದ !! ಮೊನ್ನೆಯೇ ನಿಂಗಳ ಶುದ್ದಿ ಓದದ್ದೆ ಮೋಸಹೋದೆ ಆನು !! ಇರಲಿ ತೊಂದರಿಲ್ಲೆ, ನಮ್ಮ ನೆಗೆಮಾಣಿ ಅಲ್ಲದಾ, ಕೃಷ್ಣಚಾಮಿ ಬೆಣ್ಣೆ ಕದ್ದುಗೊಂಡಿತ್ತಿದ್ದಾಡ, ಇವಂದು ಚಾಕ್ಲೇಟು ವಸೂಲಿ !!!

    [ಉತ್ತರುಸಿ]

  11. ವಿದ್ಯಾ ರವಿಶಂಕರ್
    ವಿದ್ಯಾ ರವಿಶಂಕರ್
    VN:F [1.9.3_1094]
    Rating: 0 (from 0 votes)

    ಬಂಡಾಡಿ ಅಜ್ಜಿಯ ಕೊಟ್ಟಿಗೆಂದಾಗಿ ಬೈಲಿಲೂ ಅಷ್ಟಮಿ ಜೋರಾಗಿ ನಡವಾಂಗಾತನ್ನೆ.

    [ಉತ್ತರುಸಿ]

ಒಪ್ಪ ಕೊಡ್ಳೆ ಇಲ್ಲಿ ಬರೆಯಿ:

ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಸದ್ಯದ ಪಟಂಗೊ

ಮಳೆಗಾಲದ ಅಟ್ಟಣೆಲಿ ಅಟ್ಟ-ಕೊಟ್ಟಗೆ ತುಂಬಿತ್ತೋ?ಪರೀಕ್ಷಾ ಫಲಿತಾಂಶ: ಚಿಂತೆ ಬಿಡಿ, ಚಿಂತನೆ ಮಾಡಿ!ಶ್ರೀಮದ್ಭಗವದ್ಗೀತಾ – ತೃತೀಯೋsಧ್ಯಾಯಃ – ಕರ್ಮಯೋಗಃ – ಶ್ಲೋಕಂಗೊ – 31- 40

ಬೆಶಿ ಬೆಶಿ ಒಪ್ಪಂಗೊ..

Switch to our mobile site

Powered By Indic IME