Oppanna.com

ನೀರು- ನಮ್ಮ ಜೀವನದ ಬೇರು

ಬರದೋರು :   ಸುವರ್ಣಿನೀ ಕೊಣಲೆ    on   20/06/2010    24 ಒಪ್ಪಂಗೊ

ಸುವರ್ಣಿನೀ ಕೊಣಲೆ

ಇಲ್ಲಿ ಇಪ್ಪ ಎಲ್ಲಾ ಹವ್ಯಕ ಬಾಂಧವರಿಂಗೂ ಎನ್ನ ಹೃತ್ಪೂರ್ವಕ ನಮಸ್ಕಾರ.
ಎಲ್ಲಕ್ಕಿಂತ ಮೊದಾಲು ಶ್ರೀಗುರುಗಳ ಆಶೀರ್ವಾದ ಬೇಡಿಗೊಳ್ತೆ, ಇಲ್ಲಿ ಬರೆವಲೆ ಅವಕಾಶ ಕೊಟ್ಟ ಎಲ್ಲರಿಂಗೂ ಧನ್ಯವಾದ ಹೇಳ್ತಾ ಎನ್ನ ಈ ಮೊದಲಾಣ ಲೇಖನವ ಶುರು ಮಾಡ್ತೆ.
ಇನ್ನು ಮೇಲೆ ಆನು ವಾರಕ್ಕೊಂದರಿ ಬರೆತ್ತೆ ಹೇಳುವ ಸಂಗತಿ ನಿಂಗೊಗೆ ಗೊಂತಿದ್ದು.
ಎಂತರ ಬಗ್ಗೆ ಹೇಳಿದೇ ಗೊಂತಾಯ್ದಲ್ಲದಾ? “ಆರೋಗ್ಯ”ದ ಬಗ್ಗೆ ರಜ್ಜ ಮಾತಾಡುಂವ ಹೇಳಿ ಗ್ರೇಶಿದ್ದೆ, ಅಕ್ಕನ್ನೆ?
ಹೆದರೆಡಿ… ಎಂತದೋ ಅರ್ಥ ಆಗದ್ದ ವೈದ್ಯಕೀಯ ವಿಷಯಂಗಳ ಬಗ್ಗೆ ಬರೆತ್ತಿಲ್ಲೆ. ಎಲ್ಲರಿಂಗೂ ಅರ್ಥ ಅಪ್ಪ ಹಾಂಗೆ ನಮ್ಮ ದಿನನಿತ್ಯದ ವಿಚಾರಂಗಳ ಮೇಲೆ ಗಮನ ಕೊಡುವ ಪ್ರಯತ್ನ.
ಎನಗೆ ತಿಳುದ ಕೆಲವು ವಿಷಯಂಗಳ ಹಂಚಿಗೊಳ್ತೆ. ನಿಂಗಳುದೇ ಎಂತಾರು ಸಂಶಯ, ಸಮಸ್ಯೆ ಅಥವಾ ಪ್ರಶ್ನೆ ಇದ್ದರೆ ಕೇಳ್ಲಕ್ಕು.
ಹೀಂಗೆ ಮಾಡಿರೆ ಒಂದು ರೀತಿಲಿ ವಿಚಾರ ವಿಮರ್ಶೆ ಮಾಡಿದ ಹಾಂಗೆ ಆವ್ತು, ನಿಂಗೊಗೆ ಹೊಸತ್ತು ವಿಷಯ ಗೊಂತಕ್ಕು, ಎನಗುದೇ ಹಲವು ಸಂಗತಿಗೊ ತಿಳುಕ್ಕೊಂಬಲಕ್ಕು.
ಈಗ “ಆರೋಗ್ಯ”ದ ಬಗ್ಗೆ ರಜ್ಜ ಹೇಳ್ತೆ. ಎಲ್ಲಾ ನವಗೆ ಗೊಂತಿಪ್ಪದೇ, ಆದರೆ ರಜ್ಜ ಮರತ್ತುಹೋಯ್ದು ಅಷ್ಟೆ !!

ಕುಡಿವ ನೀರು..
ಕುಡಿವ ನೀರು..

(WHO) ವಿಶ್ವ ಆರೋಗ್ಯ ಸಂಸ್ಥೆ ಆರೋಗ್ಯದ ವ್ಯಾಖ್ಯಾನ ಹೀಂಗೆ ಕೊಡ್ತು, “ಆರೋಗ್ಯ ಹೇಳಿರೆ ರೋಗರಹಿತವಾಗಿ ಇಪ್ಪದು ಮಾಂತ್ರ ಅಲ್ಲ, ದೈಹಿಕ, ಮಾನಸಿಕ, ಸಾಮಾಜಿಕ, ಭಾವನಾತ್ಮಕ, ನೈತಿಕ ಮತ್ತೆ ಆಧ್ಯಾತ್ಮಿಕ ಹೀಂಗೆ ಜೀವನದ ಎಲ್ಲ ಸ್ಥರಂಗಳಲ್ಲಿದೇ ಕ್ಷೇಮಲ್ಲಿ ಇಪ್ಪದು”.
ಉದಾಹರಣೆ ಕೊಡ್ತೆ, ಒಬ್ಬ ಆರಾರು ಎಂತಾರು ಒಟ್ರಾಶಿ ಮಾತಾಡಿರೆ ನಾವು ಹೇಳ್ತಿಲ್ಲೆಯ…. “ಅಂವ ಅರೆಪಿರ್ಕಿ’ ಹೇಳಿ!
ಇನ್ನು ಕೆಲವು ಜನ ಇರ್ತವು, ಅವಕ್ಕೆ 4 ಜೆನ ಸೇರಿದಲ್ಲಿ ಹೇಂಗೆ ಇರೆಕ್ಕು ಹೇಳಿ ಗೊಂತಿರ್ತಿಲ್ಲೆ, ಮತ್ತೆ ಕೆಲವರಿಂಗೆ ಬೇಗ ಕೂಗುಲೆ ಬಪ್ಪದು, ಬೇಗ ಕೋಪ ಬಪ್ಪದು….ಇತ್ಯಾದಿ.
ಇದೆಲ್ಲದೇ ಒಂದು ರೀತಿಲಿ ಸಮಸ್ಯೆಯೇ.
ಇದೆಲ್ಲಾ ಸರಿ, ಆದರೆ ಹೀಂಗೆ ರಜ್ಜ ಹೆಚ್ಚು ಕಮ್ಮಿ ಇಲ್ಲದ್ದ ಮನುಷ್ಯ ಇಕ್ಕಾ? ಇದು ನಿಂಗಳ ಪ್ರಶ್ನೆ ಆದಿಕ್ಕು ಈಗ. ಖಂಡಿತಾ ಇದ್ದವು. ಮೇಲೆ ಹೇಳಿದ ಜೀವನದ ಎಲ್ಲಾ ಸ್ತರಂಗಳಲ್ಲಿದೇ ಸಮತೋಲನಲ್ಲಿ ಇಪ್ಪವ್ವುದೇ ಇದ್ದವು.
ಅವ್ವೆಲ್ಲರುದೇ ದೈವತ್ವಕ್ಕೆ ಹತ್ತರೆ ಇರ್ತವು. ಸಾಮಾನ್ಯ ಬದುಕು ನೆಡಶುವ ನಾವು ಆ ಎತ್ತರಕ್ಕೆ ಏರುದು ಕಷ್ಟವೇ,ಆದರೆ….
ಉತ್ತಮ ಆರೋಗ್ಯದ ಬಗ್ಗೆ ನಾವು ರಜ್ಜ ಪ್ರಯತ್ನ ಮಾಡಿರೆ, ನಮ್ಮ ಆರೋಗ್ಯ, ಕುಟುಂಬದ ಆರೋಗ್ಯ, ಸಮಾಜದ ಆರೋಗ್ಯ ಎಲ್ಲವೂ ಒಳ್ಳೆದಕ್ಕು ಹೇಳಿ ಎನ್ನ ಅಭಿಪ್ರಾಯ. ನಿಂಗಳುದೇ ಇದರ ಒಪ್ಪುತ್ತಿ ಹೇಳಿ ಗ್ರೇಶುತ್ತೆ.
ಹಾಂಗಾರೆ ಇದರ ಎಲ್ಲ ಸರಿಯಾಗಿ ಹೇಂಗೆ ತೆಕ್ಕೊಂಡು ಹೋಪದು?
ಇದಕ್ಕೆ ಉತ್ತರ ಹೇಳುದೇ ಎನ್ನ ಕೆಲಸ.
ಯಾವುದೇ ವಿಷಯ ಆದಿಕ್ಕು, ಅದು ತಪ್ಪು ಅಥವಾ ಸರಿ ಹೇಳಿ ಹೇಳೆಕ್ಕಾರೆ ಮೊದಲು ನವಗೆ ಅದರ ಬಗ್ಗೆ ಗೊಂತಿರೆಕು. ನಮ್ಮ ಆರೋಗ್ಯದ ಬಗ್ಗೆ, ಅದರ ಸರಿಯಾಗಿ ಕಾಪಾಡಿಗೊಂಬದರ ಬಗ್ಗೆ ತಿಳ್ಕೊಳ್ಳೆಕ್ಕು. ಇದೆಲ್ಲದಕ್ಕೆ ಸಂಬಂಧಪಟ್ಟ ಹಾಂಗೆ ಒಂದೊಂದು ವಿಷಯ ಒಂದೊಂದು ವಾರ!!
ಈ ವಾರದ ವಿಷಯ ಎಂತಪ್ಪಾ ಹೇಳಿರೆ…..
ಕೇಳುವಗ ಬರೀ ಸಾಮಾನ್ಯ ಹೇಳಿ ಕಾಂಗು ಆದರೆ ಇದು ಇಷ್ಟು ಆಳ ಆಲೋಚನೆ ಮಾಡೆಕಾದ್ದಾ! ಹೇಳಿ ಆಶ್ಚರ್ಯ ಅಕ್ಕು.
ಇಷ್ಟು ಪೀಠಿಕೆ ಯಾವ್ದಕ್ಕೆ ಗೊಂತಿದ್ದಾ? “ನೀರು”….
ನವಗೆ ದಕ್ಷಿಣ ಕನ್ನಡದೋರಿಂಗೆ ಹತ್ತರಾಣ ಸಂಬಂಧಿ!
ಮಲ್ಪೆ, ಪಣಂಬೂರು ಸಮುದ್ರ ನೋಡದ್ದವ್ವಾರು? ಮಳೆಗಾಲದ ಗೌಜಿಯಂತೂ ಕೇಳುದೇ ಬೇಡ.
ಎಲ್ಲರಿಂಗೂ ಗೊಂತಿಪ್ಪ ವಿಚಾರ ಎಂತ ಹೇಳಿರೆ ನಮ್ಮ ಶರೀರದ 70% ಇಪ್ಪದು ಬರೀ ನೀರು!
ನೆತ್ತರಿಲ್ಲಿ, ಮಾಂಸಖಂಡಲ್ಲಿ, ಮೆದುಳಿಲ್ಲಿ, ಬೇರೆ ಎಲ್ಲಾ ಅಂಗಾಂಗಲ್ಲಿಯೂ ಹೆಚ್ಚು ಇಪ್ಪದು ನೀರು, ಕಡೇಂಗೆ ಎಲುಗಿಲ್ಲಿಯೂ ನೀರು ಇದ್ದೇ ಇದ್ದು.
ನಿಜ ಸಂಗತಿ ಹೀಂಗಿಪ್ಪಗ ನಾವು ನೀರು ಕುಡಿಯಕ್ಕಾದ್ದು ಎಷ್ಟು ಅಗತ್ಯ ಅಲ್ಲದಾ? ನೀರು ಕುಡಿವದರಿಂದ ಇಪ್ಪ ಉಪಕಾರಂಗೊ ಎಷ್ಟಿದ್ದು ಗೊಂತಿದ್ದಾ? ಬರದು ಪೂರೈಸ.
ಇಂದ್ರಾಣ ಈ ಕಾಲಲ್ಲಿ ಸಣ್ಣ ಸಣ್ಣ ಸಂಗತಿಗೊಕ್ಕೂ ಹೆಚ್ಚು ಪ್ರಾಮುಖ್ಯತೆ ಕೊಡೆಕ್ಕಾವ್ತು.
ನಮ್ಮ ಆರೋಗ್ಯ ನೇರ್ಪಲ್ಲಿ ಇರೆಕ್ಕಾರೆ,ನಾವು ನೀರು ಕುಡಿವಲೆ ಕಲಿಯಕ್ಕಾದ ಅಗತ್ಯ ಇದ್ದು! ಅಪ್ಪು, ಯಾವಗ ನೀರು ಕುಡಿವಲಕ್ಕು, ಯಾವಗ ಆಗ, ಎಷ್ಟು ನೀರು ಕುಡಿಯಕ್ಕು ಎಲ್ಲದರ ಮಾಹಿತಿಯೂ ಅಗತ್ಯ.
ಒಬ್ಬ ಮನುಷ್ಯಂಗೆ ದಿನಕ್ಕೆ ಕಮ್ಮಿಲಿ ಎರಡು ಲೀಟರ್ ನೀರು ಬೇಕೇ ಬೇಕು.
ಇಷ್ಟನ್ನೂ ಒಟ್ಟಿಂಗೇ ಕುಡಿಯಕ್ಕಾ? ಇಲ್ಲೆ, ರಜ್ಜ ರಜ್ಜ ಆಗಿ ಕುಡಿಯಕ್ಕು.
ಎಂತಗೆ ಹೇಳಿರೆ ನಮ್ಮ ದೇಹಲ್ಲಿ ಇಪ್ಪ ಕಲ್ಮಶಂಗಳ ಹೆರ ಹಾಕೆಕ್ಕಾರೆ ನೀರಿನ ಅಗತ್ಯ ಇದ್ದು. ನಾವು ಕುಡುದ ನೀರು ನೆತ್ತರಿನೊಟ್ಟಿಂಗೆ ಸೇರ್ತು, ಅಲ್ಲಿಂದ ಕಿಡ್ನಿಗೆ ಹೋವ್ತು, ಅಲ್ಲಿ ದೇಹಂದ ಹೆರ ಹೋಯಕ್ಕಾದ ತ್ಯಾಜ್ಯಂಗಳ ತೆಕ್ಕೊಂಡು ಮೂತ್ರದ ಮೂಲಕ ಶರೀರಂದ ಹೆರ ಹೋವ್ತು.
ಇನ್ನು ನೀರು ಕುಡಿವಗ ನೆಂಪಿಲ್ಲಿ ಮಡುಗೆಕ್ಕಾದ ಮುಖ್ಯ ವಿಷಯ ಹೇಳಿರೆ..
ಯಾವಗ ನೀರು ಕುಡಿವಲಾಗ?:
ಆಹಾರ ತೆಕ್ಕೊಂಬಗ ಆದಷ್ಟು ಕಮ್ಮಿ ನೀರು ಕುಡಿಯಕ್ಕು, ಊಟಂದ ಕಾಲು ಗಂಟೆ ಮೊದಲು ಅಥವಾ ಊಟ ಆಗಿ ಒಂದು ಗಂಟೆ ಕಳುದಮೇಲೆ ಧಾರಾಳ ನೀರು ಸೇವನೆ ಮಾಡ್ಲಕ್ಕು.
ಎಂತಕ್ಕೆ ಹೇಳಿರೆ, ಆಹಾರದ ಒಟ್ಟಿಂಗೆ ಹೆಚ್ಚು ನೀರು ಕುಡುದರೆ ಹೊಟ್ಟೆಲಿ ಉತ್ಪತ್ತಿ ಅಪ್ಪ ಆಮ್ಲಂಗಳ ಶಕ್ತಿ ಕಮ್ಮಿ ಆಗಿ ಆಹಾರ ಕರಗುಲೆ ರಜ್ಜ ನಿಧಾನ ಅಕ್ಕು,
ಯಾವ ನೀರು ಕುಡಿಯಕ್ಕು?:
ಕೊದುಶಿ ತಣುಶಿದ ನೀರು ಒಳ್ಳೆದು, ಅಥವಾ aqua guard ನ ನೀರುದೇ ಅಕ್ಕು. ಒಟ್ಟಿಲ್ಲಿ ಶುದ್ಧ ನೀರು ಕುಡಿಯಕ್ಕು.
ಇಷ್ಟೆಲ್ಲಾ ಬರದ್ದು ದಿನನಿತ್ಯದ ಉಪಯೋಗಂಗಳ ಬಗ್ಗೆ.
ಇನ್ನು ನೀರಿನ ಮದ್ದಿನ ಹಾಂಗೆ ಹೇಂಗೆ ಉಪಯೋಗ್ಸುಲಕ್ಕು ಹೇಳಿ ತಿಳುಶುತ್ತೆ. ಆಶ್ಚರ್ಯ ಆತ? ನೀರು ಮದ್ದು ಹೇಂಗೆ ಆವ್ತಪ್ಪಾ ಹೇಳಿ? (hyperacidity) ಅಸಿಡಿಟಿ ಸಮಸ್ಯೆ ಇದ್ದವ್ವು ಊಟಂದ ಕಾಲುಗಂಟೆ ಮೊದಲು ಅರ್ಧ ಗ್ಲಾಸು ಹೂಬೆಶಿ ನೀರಿನ ಕುಡಿಯಕ್ಕು.
ಇನ್ನು ಅಜೀರ್ಣದ ಸಮಸ್ಯೆ ಇಪ್ಪವ್ವುಅರ್ಧ ಗ್ಲಾಸು ತಣ್ಣಂಗೆ ಇಪ್ಪ (ice cold) ನೀರಿನ ಊಟಂದ ಕಾಲು ಗಂಟೆ ಮೊದಲು ಕುಡಿಯಕ್ಕು.
ಉಪವಾಸ ಮಾಡುವ ಸಂದರ್ಭಲ್ಲಿ ಹೆಚ್ಚು ನೀರು ಕುಡಿಯಕ್ಕಾದ್ದು ತುಂಬಾ ಅಗತ್ಯ.
ದೇಹದ ಹಲವಾರು ಸಮಸ್ಯೆಗೊಕ್ಕೆ ಕಾರಣ ಬೇಡದ್ದ ಕಶ್ಮಲಂಗೊ ತುಂಬಿದ್ದು, ನೀರು ಹೆಚ್ಚು ಕುಡುದಷ್ಟುದೇ ಇದರ ಸ್ವಚ್ಛ ಮಾಡ್ಲೆ ಒಳ್ಳೆದು.
ಇದರಿಂದಾಗಿ ಅನಾರೋಗ್ಯಂಗಳ ಬಾರದ್ದ ಹಾಂಗೆ ತಡವಲೆ ಎಡಿಗು. ಅಲ್ಲದ್ದೇ, ಈಗ ಇಪ್ಪ ಸುಮಾರು ಸಮಸ್ಯೆಗೊಕ್ಕೆ ಪರಿಹಾರ ಕಂಡುಗೊಂಬಲಕ್ಕು.
ಜ್ವರ, ಮೂತ್ರಪಿಂಡ/ಕೋಶದ ಕಲ್ಲು(renal calculi), ಉರಿಮೂತ್ರ(burning micturition), ಮೂತ್ರನಾಳದ ಸೋಂಕು(urinary tract infection) ಇತ್ಯಾದಿ ಸಮಸ್ಯೆಗೊಕ್ಕೆ ನೀರು ಒಂದು ಪವಾಡ ರೀತಿಯ ಮದ್ದು.
ಈ ಸಂದರ್ಭಂಗಳಲ್ಲಿ ಆದಷ್ಟು ಹೆಚ್ಚು ನೀರು ದೇಹಕ್ಕೆ ಬೇಕು.
ನೆಗ್ಗಿನ ಮುಳ್ಳಿನ ಕಷಾಯ, ಬಾರ್ಲಿ ನೀರು, ಬಾಳೆದಂಡಿನ ಎಸರು….ಇವೆಲ್ಲವನ್ನುದೇ ಕುಡಿವಲಕ್ಕು.
ಹೀಂಗೆ..
“ನೀರು” ಬರೀ ನೀರಲ್ಲ ! ಒಂದು ರೀತಿಲಿ ಅಮೃತ.
ನೀರಿಲ್ಲದ್ದೆ ಬದುಕ್ಕುದು ಅಸಾಧ್ಯ. ಹೀಂಗಿಪ್ಪಗ ನೀರಿನ ಸುಮ್ಮನೆ ವ್ಯರ್ಥ ಮಾಡ್ಲಾಗ.
ನಮ್ಮಂದ ಸಾಧ್ಯ ಆದಷ್ಟು ಮಟ್ಟಿಂಗೆ ಉಳಿತಾಯ ಮಾಡುಂವ. bank account ಲ್ಲಿ ಪೈ ಗೆ ಪೈ ಸೇರ್ಸಿ ನಾವು ಹೇಂಗೆ ಭವಿಷ್ಯವ ಭದ್ರ ಮಾಡ್ತೋ ಅದೇ ರೀತಿ ನೀರಿನ ಉಳುಶಿರೆ ನಮ್ಮ..
ಈ ಭೂಮಿಯ ಭವಿಷ್ಯ ತುಂಬಾ ಲಾಯ್ಕ ಅಕ್ಕು.
ಯಾವುದೇ ಪ್ರಶ್ನೆ ಇದ್ದರೆ ಕೇಳ್ಲಕ್ಕು, ಅಥವಾ ಆನು ಹೇಳಿದ್ದರ್ಲಿ ತಪ್ಪು ಇದ್ದರೆ ತಿಳುಶಿ, ತಿದ್ದಿಗೊಳ್ತೆ. ಇನ್ನಾಣ ವಾರ ಇನ್ನೂ ಹೊಸ ವಿಷಯಂಗಳೊಟ್ಟಿಂಗೆ ನಿಂಗಳ ಕಾಣ್ತೆ.
ಅಷ್ಟನ್ನಾರ, take care..
~
ನಿಂಗಳ
ಸುವರ್ಣಿನೀ

24 thoughts on “ನೀರು- ನಮ್ಮ ಜೀವನದ ಬೇರು

  1. ಒಳ್ಳೆ ಮಾಹಿತಿ ಇಪ್ಪ ಉತ್ತರ …
    ಜೆಪ ಮಾಡುವಾಗ ತೆಕ್ಕೊಂಬ ನೀರಿಂಗೆ ಒಂದು ಕೊಡಿ ತೊಳಶಿ ಎಲೆ ಹಾಕಿಕೊಂಡರೆ ಒಳ್ಳೇದು. ಕೊದಿಶಿದ ನೀರಿಂಗೆ ರಾಮಚ್ಚ, ಲವಂಗ , ಕೊತ್ತಂಬರಿ ಹೀಂಗೆ ಬೇಕಾದ ಪರಿಮಳವನ್ನು ಸೇರ್ಸಿಗೊಂಡರೆ multiple ಅನುಕೂಲ ಇದ್ದು ಹೇಳಿ ಅಮ್ಮ ದಿನಾ ಎಂತದರೊಂದು ಹಾಕುತ್ತ ಇರ್ತು !

    1. ಇರುಳು ನೀರಿಂಗೆ ಕೊತ್ತಂಬರಿ ಹಾಕಿ ಮಡುಗಿ, ಉದಿಯಪ್ಪಗ ಖಾಲಿ ಹೊಟ್ಟೆಲಿ ಆ ನೀರಿನ ಕುಡುದರೆ ಮೈಗ್ರೇನಿಂಗೆ ಒಳ್ಳೆದು.

  2. ಆಯುರ್ವೆದ ಲ್ಲಿ ತಣ್ನೀರನ್ನೆ ಕುಡಿಯೆಕ್ಕು ಹೇಳಿ ಇದ್ದಲ್ಲದ?ಹಾಂಗಾಗಿ ನಮ್ಮ ಬೈಲಿಲಿ ಇಪ್ಪ ಬಾವಿ,ಕೆರೆ,ಸೊರಂಗ ಲ್ಲಿ ಸಿಕ್ಕುವ ಶುದ್ದ ತಣ್ನೀರು ಕುಡುದರೆ ಆಗದಾ?ನಮ್ಮ ಅನುಪತ್ಯಂಗಳಲ್ಲಿ ಉಂಬಗ ನೀರು ಕೇಳಲೀ ಬೇಕು. ಅದರ ಸರೀ ಹೇಳುತ್ತಿರಾ?

    1. ತಣ್ಣೀರು ಕುಡಿಯಕ್ಕು ಹೇಳುದು ಅಪ್ಪು, ಆದರೆ ಈಗಾಣ ಕಾಲಲ್ಲಿ ಅಷ್ಟು ಶುದ್ಧ ನೀರು ಎಲ್ಲಿ ಸಿಕ್ಕುತ್ತು? ಮನೆ ಹತ್ತರೆ ನೀರ ಒರತೆ ಇದ್ದರೆ ಅಕ್ಕು 🙂 ಆ ಅದೃಷ್ಟ ಇಪ್ಪವ್ವು ಈಗ ತುಂಬಾ ಕಮ್ಮಿ ಜನ 🙁 ಹಾಂಗಾಗಿ ಕೊದುಶಿ ತಣುಶಿದ ನೀರು ಒಳ್ಳೆದು.
      ಉಂಬಗ ನೀರು ಕುಡಿವಲೇ ಆಗ ಹೇಳಿ ಅಲ್ಲ, ಆದಷ್ಟು ಕಮ್ಮಿ ಕುಡಿಯಕ್ಕು. ನಾವು ಹೆಚ್ಚು ಮಸಾಲೆ, ಎಣ್ಣೆಪಸೆ ಇಪ್ಪ ಆಹಾರ ತೆಕ್ಕೊಂಡ್ರೆ ಹೆಚ್ಚು ನೀರು ಬೇಕಾವ್ತು. ಹೊಟ್ಟೆಯ ಅರ್ಧ ಭಾಗ ಘನ ಆಹಾರ (), ಕಾಲು ಭಾಗ ದ್ರವ ಆಹಾರ () ಇನ್ನು ಉಳುದ ಕಾಲು ಭಾಗ ಖಾಲಿ ಇರೆಕ್ಕು ಹೇಳಿ ಇದ್ದು, ಹೀಂಗೆ ಇದ್ದರೆ ಜೀರ್ಣ ಅಪ್ಪಲೆ ಸುಲಾಬ ಹೇಳಿ. ಇದರ್ಲಿ ಹೇಳಿದ ಕಾಲು ಭಾಗ ನೀರು ನಾವು ಉಂಬ ಊಟಲ್ಲಿ ಇರ್ತು..ಸಾರು, ಕೊದಿಲು, ತಂಬ್ಳಿ ಇತ್ಯಾದಿ…..ಇದರೊತ್ತಿಂಗೆ ರಜ್ಜ…. ಕಾಲು ಗ್ಲಾಸಿನಷ್ಟು ನೀರು ಕುಡುದರೆ ತೊಂದರಿಲ್ಲೆ, ಹೆಚ್ಚು ಕುಡಿವದು ಅಷ್ಟು ಒಳ್ಳೆದಲ್ಲ.

    1. 🙂 ದಿನದ ಶುರು ಅಪ್ಪದು ನೀರು ಕುಡಿವದರೊಟ್ಟಿಂಗೆ !! ಜೀವನದ ಶುರು ಅಪ್ಪದುದೇ!!!

  3. ಸುವರ್ಣಿನೀ…
    ತುಂಬಾ ಲಾಯಿಕಿದ್ದು ಈ ಶುದ್ದಿ..
    ಒಂದೇ ಸರ್ತಿ ಓದಿ ಅಪ್ಪಗ ಬೆಗರಿಳುದತ್ತು!
    ಮತ್ತೆ ಹೋಗಿ ನೀರು ಕುಡುದೆ, ಸರೀ ಆತು..! 🙂
    ಶುದ್ದಿ ಬರೆಯಿ, ಬರಕ್ಕೋಂಡಿರಿ..

    1. hmmm..ಕುಡಿವದರ ಬಗ್ಗೆದೇ ಎಷ್ಟು ವಿಷಯಂಗೊ ಇದ್ದಲ್ಲದಾ? ಆದರೆ ಏಂತ ಕುಡಿತ್ತಿ ಹೇಳುದು ಮುಖ್ಯ 🙂 ಅಲ್ಲದಾ? ನೀರು, ಹಾಲು, ಜ್ಯೂಸು,ಬೊಂಡ,ಮಜ್ಜಿಗೆ ಇದರ ಎಲ್ಲ ಕುಡುದರೆ ಒಳ್ಳೆದು, ಇನ್ನು ಕುಡಿವಲಾಗದ್ದರ ಲಿಸ್ಟುದೇ ತುಂಬಾ ಉದ್ದ ಇದ್ದು 🙂

      1. ಕುಡಿವಲಾಗದ್ದು ಹೇಳಿ ಏಂತದು ಇಲ್ಲೆಡ ವಿಷವ ಬಿಟ್ಟು. ಎವದರ ಏಷ್ಟು ಕುಡಿಯೆಕ್ಕು ಹೇಳಿ ಮಾಂತ್ರ ಲೆಕ್ಕ ಮಡುಗೆಕ್ಕಡ. ಪುತ್ತೂರು ಭಾವಂಗೆ ಅವನ ರೂಂ-ಮೇಟ್ ಹೇಳಿದ್ದಡ.

        1. ಹಾಂಗೆ ನೋಡ್ತರೆ ವಿಷವನ್ನುದೇ ಕೆಲಾವು ಸರ್ತಿ, ಮದ್ದಿನ ಹಾಂಗೆ ಉಪಯೊಗ್ಸೆಕ್ಕಾವ್ತು !! ಕೆಲಾವು ಮದ್ದಿಲ್ಲಿ alcohol ನ ಅಂಶ ಇರ್ತು, ಆದರೆ ಅದು ಮದ್ದು!! alcohol ಕುಡಿವಲಾಗ ಹೇಳಿ ಹೇಳುದು ಎನ್ನ ಕರ್ತವ್ಯ 🙂 ಕುಡಿವವರ ಕೈ ಕಟ್ಟುಲೆ ನವಗೆ ಎಡಿಗಾ?

  4. @ಗೋಪಾಲ ಮಾವ , ಧನ್ಯವಾದಂಗೊ 🙂 ನಿಂಗೊಗೆ ನಿರಾಶೆ ಮಾಡ್ತಿಲ್ಲೆ.
    @ಕೆಪ್ಪಣ್ಣ, ಧನ್ಯವಾದ. ನಿಂಗಳ ಹಾಂಗೆ ಓದಿ, ಒಪ್ಪ ಬರೆತ್ತಾ ಇದ್ದರೆ ಎನಗೂ ಸಂತೋಷ.

  5. ’ನೀರಿ’ನ ಬಗ್ಗೆ ’ನೀರೆ’ಬರದ ಲೇಖನ ಲಾಯ್ಕಾ ಆಯಿದು!… ಒಪ್ಪಂಗಳೂ ಲಾಯ್ಕ ಇದ್ದು… ಭರಪೂರ ಮಾಹಿತಿಯ ಕಣಜ
    ಏ ನೀರು-ನೀನು ಇರೆಕಾರೆ
    ಬೀಳ ಎಂಗಳ ಆರೋಗ್ಯಕ್ಕೆ ಬರೆ!

  6. ಒಳ್ಳೆ ಮಾಹಿತಿಯುಕ್ತ ಲೇಖನ. ಒಪ್ಪಣ್ಣನ ಬೈಲಿಲ್ಲಿ ಆರೋಗ್ಯದ ಬಗ್ಗೆ ಬತ್ತದು ನೋಡಿ ಕೊಶೀ ಆತು. ಬೈಲಿನವರ ಪ್ರಶ್ಣೆ ಅದಕ್ಕೆ ಅವರದ್ದೇ ಆದ ಉತ್ತರಂಗೊ ಎಲ್ಲವೂ ಲಾಯಕಿದ್ದು. ಪ್ರತೀ ವಾರವೂ ಒಳ್ಳೊಳ್ಳೆ ಲೇಖನಂಗೊ ಬತ್ತಾ ಇರಳಿ.

  7. ಒಳ್ಳೆ ಲೇಖನ. ಉಂಡ ಕೂಡ್ಳೆ ನೀರು ಕುಡಿವ ಅಭ್ಯಾಸ ಒಳ್ಳೆದಾ?
    ತೋರ ಆಯೆಕ್ಕಾರೆ ಉಂಬ ಮೊದಲು ನೀರು ಕುಡಿರಿ, ಸಪುರ ಆಯೆಕ್ಕಾರೆ ಉಂಡ ಮೇಲೆ ನೀರು ಕುಡಿರಿ ಹೇಳುವ ಹಾಂಗೆ ಒಂದರಿ ಪೇಪರಿಲಿ ಬರದಿತ್ತಿದ್ದವು.
    ಪೇಪರುಗಳಲ್ಲಿ ಬಪ್ಪ “ಆರೋಗ್ಯ”ದ ಪುಟಂಗಳಲ್ಲಿ ಒಂದೊಂದರಿ ಒಂದೊಂದು ರೀತಿ ಬತ್ತು. ಯಾವುದು ಸರಿ ಯಾವುದು ತಪ್ಪು ಹೇಳಿ ಗೊಂತಾವುತ್ತಿಲ್ಲೆ.
    ಬೈಲಿಂಗೆ ಡಾಗುಟ್ರಕ್ಕ ಬಂದದು ಲಾಯ್ಕಾತು.

    1. ಕೆಲವು ಜೆನ ಕೆಲವು ರೀತಿ ಹೇಳ್ತವು 🙁 ಅದೇ ಸಮಸ್ಯೆ ಆದ್ದು !! ಉಂಡ ಕೂಡ್ಲೆ ನೀರು ಕುಡುದರೆ ಜೀರ್ಣಕ್ರಿಯೆ ನಿಧಾನ ಆವ್ತು ಅಥವಾ ಸರಿಯಾಗಿ ಆವ್ತಿಲ್ಲೆ, ಹಾಂಗಾಗಿ ಉಂಡಕೂಡ್ಲೆ ತುಂಬಾ ನೀರು ಕುಡಿವಲಾಗ. ಇದರ ಬಗ್ಗೆ ಆನು ಲೇಖನಲ್ಲಿ ಬರದ್ದೆ, “”ತೋರ ಆಯೆಕ್ಕಾರೆ ಉಂಬ ಮೊದಲು ನೀರು ಕುಡಿರಿ, ಸಪುರ ಆಯೆಕ್ಕಾರೆ ಉಂಡ ಮೇಲೆ ನೀರು ಕುಡಿರಿ ಹೇಳುವ ಹಾಂಗೆ ಒಂದರಿ ಪೇಪರಿಲಿ ಬರದಿತ್ತಿದ್ದವು.”” ಉಂಬ ಮೊದಲು ನೀರು ಕುಡುದರೆ ತಿಂದದು ಸರೀ ಕರಗಿ ಶರೀರಕ್ಕೆ ಸೇರ್ತು, ಹಾಂಗಾಗಿ ತೋರ ಅಕ್ಕು, ಉಂಡ ಮತ್ತೆ ನೀರು ಕುಡುದರೆ ಜೀರ್ಣ ಸರಿಯಾಗಿ ಆಗದ್ದೆ ತಿಂದದು ಶರೀರಕ್ಕೆ ಹಿಡಿಯದ್ದೆ ಸಪೂರ ಅಪ್ಪದಾಯಿಕ್ಕು 😉 ಅನುಶ್ರೀ…ನೀರು ಹೆಚ್ಚು ಕುಡೀರಿ, ಆರೋಗ್ಯಕ್ಕೆ ಒಳ್ಳೆದು, ಚರ್ಮಕ್ಕುದೇ ತುಂಬಾ ಒಳ್ಳೆದು 🙂 ಎಲ್ಲ ಬೀಳುದು ಕಮ್ಮಿ ಆವ್ತು 🙂 ಬತ್ತು 🙂

      1. ಕೆಲವು ಜೆನ ಕೆಲವು ರೀತಿ ಹೇಳ್ತವು 🙁 ಅದೇ ಸಮಸ್ಯೆ ಆದ್ದು !! ಉಂಡ ಕೂಡ್ಲೆ ನೀರು ಕುಡುದರೆ ಜೀರ್ಣಕ್ರಿಯೆ ನಿಧಾನ ಆವ್ತು ಅಥವಾ ಸರಿಯಾಗಿ ಆವ್ತಿಲ್ಲೆ, ಹಾಂಗಾಗಿ ಉಂಡಕೂಡ್ಲೆ ತುಂಬಾ ನೀರು ಕುಡಿವಲಾಗ. ಇದರ ಬಗ್ಗೆ ಆನು ಲೇಖನಲ್ಲಿ ಬರದ್ದೆ, “”ತೋರ ಆಯೆಕ್ಕಾರೆ ಉಂಬ ಮೊದಲು ನೀರು ಕುಡಿರಿ, ಸಪುರ ಆಯೆಕ್ಕಾರೆ ಉಂಡ ಮೇಲೆ ನೀರು ಕುಡಿರಿ ಹೇಳುವ ಹಾಂಗೆ ಒಂದರಿ ಪೇಪರಿಲಿ ಬರದಿತ್ತಿದ್ದವು.”” ಉಂಬ ಮೊದಲು ನೀರು ಕುಡುದರೆ ತಿಂದದು ಸರೀ ಕರಗಿ ಶರೀರಕ್ಕೆ ಸೇರ್ತು, ಹಾಂಗಾಗಿ ತೋರ ಅಕ್ಕು, ಉಂಡ ಮತ್ತೆ ನೀರು ಕುಡುದರೆ ಜೀರ್ಣ ಸರಿಯಾಗಿ ಆಗದ್ದೆ ತಿಂದದು ಶರೀರಕ್ಕೆ ಹಿಡಿಯದ್ದೆ ಸಪೂರ ಅಪ್ಪದಾಯಿಕ್ಕು 😉 ಅನುಶ್ರೀ…ನೀರು ಹೆಚ್ಚು ಕುಡೀರಿ, ಆರೋಗ್ಯಕ್ಕೆ ಒಳ್ಳೆದು, ಚರ್ಮಕ್ಕುದೇ ತುಂಬಾ ಒಳ್ಳೆದು 🙂 pimple ಎಲ್ಲ ಬೀಳುದು ಕಮ್ಮಿ ಆವ್ತು :)glow ಬತ್ತು 🙂

  8. ನೀರಿಲ್ಲಿ ಜಲಜನಕ, ಆಮ್ಲಜನಕ ಎರಡುದೇ basic components,H2O. ಆದರೆ ಅದರ್ಲಿ ಬೇರೆ ಬೇರೆ ಅಂಶಂಗೊ ಇರೆಕ್ಕು, ಹೇಳಿರೆ, ಖನಿಜಾಂಶ , ಲವಣಂಗೊ..ಇತ್ಯಾದಿ. ನಿಂಗೊ ಹೇಳಿದ ಹಾಂಗೆ, ಕ್ಲೊರಿನ್ ಅಥವ Florine ಲೆಕ್ಕಂದ ಹೆಚ್ಚು ಇದ್ದರೆ ತೊಂದರೆಯೇ, ಆರ್ಸೆನಿಕ್ ಅಥವ ಅದರ ಹಾಂಗಿಪ್ಪ ಕೆಲವು ವಿಷ ವಸ್ತುಗಳುದೇ ಇರ್ತು ಕೆಲವು ಸರ್ತಿ. ಇದರಿಂದ ಎಲ್ಲೆ ಮುಕ್ತಿ ಸಿಕ್ಕೆಕ್ಕಾರೆ…ನಾವೆಲ್ಲರೂ ಪ್ರಯತ್ನ ಮಾಡೆಕ್ಕು, ಅಂತರ್ಜಲ ಉಳುಶೆಕ್ಕು, ಮಳೆ ನೀರಿನ ಕೊಯ್ಲು…ಹೀಂಗೇ..ಯಾವ ಎಲ್ಲ ಮಾರ್ಗ ಇದ್ದೋ ಹುಡುಕ್ಕಿ ನಮ್ಮ ಅಳಿಲು ಸೇವೆ ..ಈ ನಮ್ಮ ಭೂಮಿಯ ಉಳ್ಸುಲೆ ನಾವು ಮಾಡೆಕ್ಕು 🙂

  9. ನೀರಿಲಿ ಗಡಸು ನೀರು ಮತ್ತು ಮೆದು ನೀರು ಹೇಳಿ ಎರಡು ಬಗೆ ಇದ್ದಲ್ದಾ ಸುವರ್ಣಿನಿ ಅಕ್ಕಾ?.ಇದರ ಇಂಗ್ಲೀಶಿಲಿ ಎಂತ ಹೇಳ್ತವು ಹೇಳಿ ಎನಗೆ ಗೊಂತಿಲ್ಲೆ. ಹಾಂಗೆ ನೋಡಿದರೆ, ಶುದ್ಧ ನೀರಿಲಿ ಇಪ್ಪದು ಹೈಡ್ರೋಜನ್‌ ಮತ್ತು ಆಕ್ಸಿಜನ್‌ ಮಾತ್ರ. ಹೇಳಿರೆ , ಜಲಜನಕ ಮತ್ತು ಆಮ್ಲಜನಕದ ಅಣುಗ ಮಾತ್ರ. ಆದರೆ ಇಂದು ನೀರಿಲಿ ಇವೆರಡೇ ಒಳುದ್ದದು ಅಲ್ಲ.. ಮತ್ತೂ ಸುಮಾರು ಮಾರಕ ರಾಸಾಯನಿಕಂಗ ಇದರ್ಲಿ ಮಿಶ್ರ ಅಪ್ಪದು ನವಗೆ ಕಾಣ್ತು. ನೀರು ಶುದ್ಧಗೊಳಿಸುವ ಪ್ರಕ್ರಿಯೆಲಿ ಸೇರ್ಸುವ ಕ್ಲೋರಿನ್‌ ಕೂಡಾ ನಮ್ಮ ದೇಹಕ್ಕೆ ಮಾರಕವೇ. ಭೂಮಿಯಾಳದ ನೀರಿಲಿಪ್ಪ ಫ್ಲೋರೈಡ್‌ ಮೂಳೆ ಸವೆತ ತಂದೊಡ್ಡುವ ಮೂಲಕ ಪ್ರಮುಖ ಆರೋಗ್ಯ ಸಮಸ್ಯೆಯಾಗಿ ಬೆಳೆತ್ತು….
    ನಮ್ಮ ದೇಶದ ಸುಮಾರು ದಿಕ್ಕೆ ಫ್ಲೋರೈಡ್ಯುಕ್ತ ನೀರು ದೊಡ್ಡ ಸಮಸ್ಯೆಯಾಗಿ ಕಾಡುತ್ತು . ಅಂತರ್ಜಲ ಮಟ್ಟ ಕುಸಿದ ಹಾಂಗೆ ನೀರಿಲಿ ಫ್ಲೋರೈಡ್ ಅಂಶ ಹೆಚ್ಚುತ್ತು . ಒಂದು ಲೀಟರ್ ಕುಡಿವ ನೀರಿಲಿ ಹೆಚ್ಚು ಹೇಳಿರೆ ಒಂದು ಗ್ರಾಂ ಫ್ಲೋರೀನ್ ಇರೆಕ್ಕಡ. ಆದರೆ ನೀರಿಲ್ಲಿ ೩ ಗ್ರಾಂ ಗಿಂದ ಹೆಚ್ಚು ಪ್ರಮಾಣದ ಫ್ಲೋರಿನ್‌ ಕಾಣಿಸುವದು ಜನಂಗಳ ಅಂಗ ವೈಕಲ್ಯಕ್ಕೆ ಕಾರಣ ಆವ್ತು.. . ಇದೇ ರೀತಿಲಿ ನೀರಿಲಿ ಆರ್‍ಸೆನಿಕ್, ಸೆಲೀನಿಯಂ ಇತ್ಯಾದಿ ರಾಸಾಯನಿಕ ಅಂಶಂಗ ಹೆಚ್ಚಾಗಿ , ಕುಡಿವ ನೀರೇ ರೋಗದ ಮೂಲ ಆವ್ತಾ ಇಪ್ಪದು ವಾಸ್ತವದ ಸಂಗತಿ..
    ಹೀಂಗಾಗಿ ಶುದ್ಧ ನೀರು ಕುಡಿರಿ. ಪ್ರತಿ ಮಳೆಗಾಲಲ್ಲೂ ಅದು ನಮ್ಮ ಮನೆಯ ಮೇಲೆ ಯಥೇಚ್ಛವಾಗಿ ಬೀಳುತ್ತು . ಅದರ ಶೇಖರಿಸಿ ಮಡುಗೆಕ್ಕು.. ಹೆಚ್ಚುವರಿ ನೀರಿನ ಅಂತರ್ಜಲಕ್ಕೆ ಸೇರ್ಸಿ.. ಈ ಪ್ರಕ್ರಿಯೆ ಪ್ರತಿಯೊಬ್ಬನೂ ಮಾಡಿದರೆ ನೀರಿನ ಕೊರತೆ ಖಂಡಿತಾ ಬಾರ, ಅದರಿಂದಾಗಿ ಬಪ್ಪ ಸಮಸ್ಯೆಗ ದೂರ ಅಕ್ಕು ಅಲ್ದಾ ಅಕ್ಕಾ?

    1. ಕುಡಿವ ನೀರಿನ ಬಗ್ಗೆ IS 10500 ಹೇಳಿ ಸ್ಟೇಂಡಾರ್ಡ್ ಇದ್ದು. ಅದರ ಪ್ರಕಾರ ಫ್ಲೋರೈಡ್ ಅಂಶ 1 ಲೀಟರ್ ನೀರಿಲ್ಲಿ 1 ಮಿಲ್ಲಿ ಗ್ರಾಮ್ ಗಿಂತ ಹೆಚ್ಚು ಇಪ್ಪಲೆ ಆಗ. ಇನ್ನು ನಿಂಗ ಹೇಳುವ ಜಲ ಜನಕ ಮತ್ತೆ ಆಮ್ಲ ಜನಕ (H2O) ಮಾತ್ರ ಇಪ್ಪ ಶುದ್ಧ ನೀರು ಹೇಳಿರೆ ಡಿಸ್ಟಿಲ್ಲ್ ಮಾಡಿದ ನೀರು. ಇದು ತುಂಬಾ corrossive. ಇದರ ಉಪಯೋಗ ಬೇಟರಿಗೊಕ್ಕೆ ಮಾತ್ರ ಆವುತ್ತಷ್ಟೆ. ಹಾಂಗೇ ion exchange (ಲವಣ ತೆಗವದು) ಕ್ರಮಲ್ಲಿ ನೀರಿನ ಶುದ್ಧೀಕರಿಸಿ ಕಾರ್ಖಾನೆಗಳಲ್ಲಿ ಬಾಯ್ಲರ್ ಗಳಲ್ಲಿ ಉಪಯೋಗಿಸುತ್ತವು. ಹೆಚ್ಚು ಪ್ರೆಷರ್ ಇಪ್ಪ ಬಾಯ್ಲರ್ ಗೊಕ್ಕೆ ಶುದ್ಧ ನೀರೇ ಆಯೆಕ್ಕು. ಅದರಲ್ಲಿ ಲವಣದ ಅಂಶ ಇಪ್ಪಲೆ ಆಗ.
      ಮೃದು ನೀರಿಂಗೆ ಇಂಗ್ಲಿಷ್ ಲ್ಲಿ ಸೋಫ್ಟ್ ವಾಟರ್ ಹೇಳಿಯೂ ಗಡಸು ನೀರಿಂಗೆ ಹಾರ್ಡ್ ವಾಟರ್ ಹೇಳಿಯೂ ಹೇಳ್ತವು. ನೀರಿಲ್ಲಿ ಇಪ್ಪ ಲವಣಂಗಳ ಪ್ರಮಾಣದ ಮೇಲೆ ಇದರ ನಿಶ್ಚಯ ಮಾಡ್ಲೆ ಆವುತ್ತು. ಎಲ್ಲಾ ನೀರಿಲ್ಲಿಯೂ ಲವಣದ ಅಂಶ ಇದ್ದೇ ಇರ್ತು. (ಮಳೆ ನೀರು ಭೂಮಿಲಿ ಹರಿವಗ ಲವಣವ ಕರಗಿಸಿಯೊಂಡು ಹೋವುತ್ತು.)
      ಮುಖ್ಯವಾಗಿ ನೀರಿಲ್ಲಿ ಕೇಲ್ಶಿಯಮ್ ಮತ್ತೆ ಮೆಗ್ನೀಶಿಯಮ್ ನ ಕಾರ್ಬೊನೇಟ್ ಮತ್ತೆ ಬೈ ಕಾರ್ಬೊನೇಟ್ ಇರ್ತು. ಕಾರ್ಬೋನೇಟ್ ಅಂಶ permanent hardness ಉಂಟು ಮಾಡ್ತು. ಬೈಕಾರ್ಬೊನೇಟ್ ಅಂಶ temporaray hardness ಉಂಟು ಮಾಡ್ತು.
      ಇದರಲ್ಲಿ ಬೈಕಾರ್ಬೊನೇಟ್ ಅಂಶ, ನೀರಿನ ಕೊದಿಶಿ ಅಪ್ಪಗ ಕಮ್ಮಿ ಆವುತ್ತು. ಆದರೆ ಕಾರ್ಬೊನೇಟ್ ಅಂಶ ಮಾತ್ರ ಹಾಂಗೇ ಒಳಿತ್ತು.
      ಮಂಗಳೂರಿಲ್ಲಿ ನೇತ್ರಾವತಿ ನದಿ ನೀರು soft water ಹೇಳ್ಲೆ ಅಕ್ಕು. ಬೋರ್ವೆಲ್ಲ್ ನೀರು ಹೆಚ್ಚಾಗಿ ತುಂಬಾ ಅಡೀಂದ ಬಪ್ಪ ಕಾರಣ ಅದರಲ್ಲಿ ಲವಣಂಗಳ ಅಂಶ ಹೆಚ್ಚು ಇರ್ತು ಮತ್ತೆ ಅದು hard water ಆಗಿರ್ತು.
      ನೀರಿಲ್ಲಿ ಇಪ್ಪ ಆರ್ಸೆನಿಕ್, ಸೆಲೇನಿಯ್ಂ ಮತ್ತೆ ಕೆಲವು heavy metals ಗೊ ಆರೊಗ್ಯಕ್ಕೆ ತುಂಬಾ ಹಾಳು.ಯುರೇನಿಯಂ ಮತ್ತೆ ಸ್ಟ್ರೋಂಚಿಯಂ ಹೇಳುವ radio active ಅಂಶ ಕೂಡಾ ಕೆಲವು ನೀರಿಲ್ಲಿ ಇರ್ತು.
      ಇದೇ ರೀತಿ Colliform bacteria ಇಪ್ಪ ನೀರು ಕೂಡ ಆರೋಗ್ಯಕ್ಕೆ ಹಾಳು.
      ಇನ್ನು ಎಂತಾದರೂ ನೀರಿನ Quality ಬಗ್ಗೆ ಸಂಶಯ ಇದ್ದರೆ ಪರಿಹರಿಸಲೆ ಪ್ರಯತ್ನ ಮಾಡ್ತೆ.

      1. ನಿಂಗೊ ಕೊಟ್ಟ ಮಾಹಿತಿಗೊಕ್ಕೆ ತುಂಬಾ ಧನ್ಯವಾದಂಗೊ 🙂

  10. ನೀರಿನ ಬಗ್ಗೆ ಬರದ್ದು ಲಾಯಿಕ್ ಆಯಿದು. ನೀರು ಇಲ್ಲದ್ದೆ ಜೀವನ ಇಲ್ಲೆ.
    ಉದಿಯಪ್ಪಗ ಎದ್ದ ಕೂಡ್ಲೇ 1 ಲೀಟರ್ ನಷ್ಟಾದರೂ ನೀರು ಕುಡುದರೆ ಒಳ್ಳೆದು ಹೇಳ್ತವು. ಅಪ್ಪಾ?
    ನಾವು ಹೆರ ಹೋದಿಪ್ಪಗ ನೀರು ದುಡಿವಲೆ ಎಷ್ಟು ಜಾಗ್ರತೆ ಮಾಡಿರೂ ಸಾಕಾವ್ತಿಲ್ಲೆ. ಎಂತಕೆ ಹೇಳಿರೆ ನೀರು ಈಗ ಅಷ್ಟು ಕಲುಷಿತ ವಾಯಿದು. ಗ್ಲಾಸಿಲ್ಲಿ ನೀರು ಕೊಡುವಾಗ ಕೈ ಬೆರಳಿನ ನೀರಿಲ್ಲಿ ಅದ್ದಿಗೊಂಡು ಕೊಡುವ ಅಭ್ಯಾಸ ಕೆಲವು ಜನಂಗೊಕ್ಕೆ ಇರ್ತು. ಹೋಟ್ಲುಗಳಲ್ಲಿ ಅಂತೂ ಇದು ಸರ್ವೇ ಸಾಮಾನ್ಯ. ಇನ್ನು ನಮ್ಮ ಜೆಂಬಾರಂಗಳಲ್ಲಿ ಬೆಶಿ ನೀರು ಹೇಳಿರೆ, ಕೊದಿತ್ತ ನೀರಿಂಗೆ ಒಂದಷ್ಟು ಹಸಿ ನೀರಿನ ಸೇರಿಸಿ ಹದ ಬೆಶಿ ಮಾಡಿ ಕೊಡ್ವದು ಇದ್ದು. ಇದೆಲ್ಲಾ ಅನರೋಗ್ಯಕ್ಕೆ ಕಾರಣ ಆವುತ್ತು. ಹಾಂಗೆ ಹೇಳಿಂಡು ಹೋವುತ್ತಲ್ಲಿಂಗೆ ಎಲ್ಲಾ ನೀರಿನ ಕುಪ್ಪಿ ಹಿಡ್ಕಂಡು ಹೋಪಲೆ ಆವುತ್ತಿಲ್ಲೆ ಅಲ್ಲದ. ಇದರ ಲಾಭ ಪಡಕ್ಕೊಂಬದು ನೀರಿನ “ಪೆಟ್” ಬಾಟ್ಲಿಗಳಲ್ಲಿ ಮಾರುವ ಕಂಪೆನಿಯವು. ಅದು ಕುಡಿವಲೆ ಎಷ್ಟು ಶುದ್ಧ ಇದ್ದು -ದೇವರಿಂಗೇ ಗೊಂತು. ನೀರಿನ ಶುದ್ಧತೆ ಕಾಪಾಡುವದು ನಮ್ಮೆಲ್ಲರ ಕರ್ತವ್ಯ

    1. ಉದಿಯಪ್ಪಗ ಎದ್ದ ಕೂಡ್ಲೆ (ಹಲ್ಲು ತಿಕ್ಕಿ ಆದಮೇಲೆ ) ನೀರು ಕುಡಿವದು ಒಳ್ಳೆ ಅಭ್ಯಾಸವೇ, ಆದರೆ ಒಂದು ಲೀಟರ್ ಅಲ್ಲ. ಒಂದು ಗ್ಲಾಸ್ ನೀರು. ರಜ್ಜ ಬೆಶಿ ಮಾಡಿ ಕುಡುದರೆ ಒಳ್ಳೆದು 🙂
      ಎಲ್ಲಾ ಕಡೇಂಗುದೇ ನೀರಿನ ಕುಪ್ಪಿ ತೆಕ್ಕೊಂಡು ಹೋಪಲೆ ಕಷ್ಟ, ಆದರೆ ಎಡಿಗಾಷ್ಟು ಪ್ರಯತ್ನ ಮಾಡೆಕು 🙂
      ಲೇಖನ ಓದಿ , ನಿಂಗಳ ಅಭಿಪ್ರಾಯ ತಿಳ್ಸಿದ್ದಕ್ಕೆ ಧನ್ಯವಾದಂಗೊ

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×