Oppanna.com

ಗಿಳಿ ಬಾಗಿಲಿಂದ -ಅದು ಮಹಾ ಕೊದಂಟಿ

ಬರದೋರು :   ಲಕ್ಷ್ಮಿ ಜಿ.ಪ್ರಸಾದ    on   04/12/2013    3 ಒಪ್ಪಂಗೊ

” ಅದು ಮಹಾ ಕೊದಂಟಿ !ಎಂತಕ್ಕೂ ಆಗ ಆರೊಬ್ಬಂಗೂ ಒಂದಿನಿತು ಉಪಕಾರ ಆಗ ಅದರಂದ.ಆರಿಂಗುದೆ ಅಕ್ರದ ಕಡ್ಡಿ (ಅಕ್ರದ ಕಡ್ಡಿ ಹೇಳ್ರೆ ಎಂತದು ?!ಮಲೆಯಾಳಲ್ಲಿಯೂ ಈ ಬಳಕೆ ಇದ್ದು ) ಉಪಕಾರ ಮಾಡಿಕ್ಕ”.
ಅಪ್ಪು!ಇದು ನಮ್ಮ ಭಾಷೆಲಿ ಇಪ್ಪ ಬೈಗಳಿನ ಪದ .ಕೊದಂಟಿ ಸಾಕಷ್ಟು ಖಾರದ ಗರಂ ಬೈಗಳು.ಎನಗೂ ಅಕ್ಕಂಗೂ ಒಂದೆರಡು ಸರ್ತಿ ಈ ಬೈಗಳು ಅಮ್ಮನ ಕೈಂದ ,ಅಜ್ಜಿ ಕೈಂದ ಸಿಕ್ಕಿದ್ದು ಇದ್ದು ಸಣ್ಣಾದಿಪ್ಪಗ .ಅಷ್ಟಪ್ಪಗ ಎಂಗೊಗೆ ಭಾರೀ ಅವಮರ್ಯಾದಿ ಆಗಿ ಕೊಂಡು ಇತ್ತು.ಆದರೆ ಅಸಲಿಂಗೆ ಕೊದಂಟಿ ಹೇಳ್ರೆ ಎಂತ ಅರ್ಥ ಹೇಳಿ ಎನಗೆ ಗೊಂತಿತ್ತಿಲ್ಲೆ .ಅರ್ಥ ಗೊಂತಿಲ್ಲದ್ದ ಕಾರಣ ಅದು ಮಹಾ ಬೈಗಳು ಭಾರೀ ಭಯಂಕರದ್ದು ಹೀನಾಯಕರ ಆವಾ,ಅವಮಾನಕರ ! ಹೇಳಿ ಆನು ಭಾವಿಸಿತ್ತಿದೆ !
ರಜ್ಜ ದೊಡ್ಡ ಆದಪ್ಪಗ ,ತಿಳುವಳಿಕೆ ಬಂದ ಮೇಲೆ ಅಕ್ಕಿ ಮುಡಿ ಕಟ್ಟುವ ಒಂದಡಿಯಷ್ಟು ಉದ್ದದ ಮರದ ಸಲಕರಣೆಗೆ ಕೊದಂಟಿ ಹೇಳ್ತವು ತುಳುವಿಲಿ ಹೇಳ್ತವು ಹೇಳಿ ಗೊಂತಾತು !.ಕೊದಂಟಿ ಹೇಳ್ರೆ ಅದೇ ಹೇಳಿ ಭಾವಿಸಿತ್ತಿದೆ ಆನು .ಅಂಬಗಳೂ ಅದೆಂತಕೆ ಬೈಗಳಿನ ಪದ ಆತಪ್ಪಾ?! ಹೇಳಿ ಗ್ರೇಶಿಗೊಂಡು ಇತ್ತಿದೆ.
ಮೊನ್ನೆ ಗಿಳಿ ಬಾಗಿಲಿಂಗೆ ಎಂತರ ಬರವದೂ ಹೇಳಿ ಯೋಚನೆ ಮಾಡಿ ಗೊಂಡು ಇಪ್ಪಗ “ಮಹಾ ಕೊದಂಟಿ” ಹೇಳುವ ನಮ್ಮ ಭಾಷೆಯ ನುಡಿಗಟ್ಟು ನೆಂಪು ಆತು .ಆದರೆ ಅದರ ಅರ್ಥ ,ಪದದ ಮೂಲ ಯಾವುದೂ ಗೊಂತಾತಿಲ್ಲೆ !ಮತ್ತೆ ತಲೆ ಬುಡ ಗೊಂತಾಗದ್ದೆ ಅಮ್ಮನ ಹತ್ತರೆ ಫೋನ್ ಮಾಡಿ ಕೇಳಿದೆ.ಅಂಬಗ ಅಮ್ಮ “ಕೊದಂಟಿ ಹೇಳ್ರೆ ಮರದ ಗೆಂಟು ಅದು ಎಂತಕ್ಕೂ ಪ್ರಯೋಜನಕ್ಕೆ ಆವುತ್ತಿಲ್ಲೆ”ಹೇಳಿ ಹೇಳಿದ .ಅಂಬಗ ಎನಗೂ ಆದಿಕ್ಕು ಹೇಳಿ ಅನ್ಸಿತ್ತು .ಆದರೂ ರಜ್ಜ ಸಂಶಯ.”ಅದು ಒಲೆಗೆ ಕಿಚ್ಚು ಹಾಕುಲೆ ಅವುತ್ತಿಲ್ಲೆಯ ?”ಹೇಳಿ ಕೇಳಿದೆ .””ಅದರ ಅಡಿಗೆ ಒಲೆಗೆ ಹಾಕುಲೆ ಅವುತ್ತಿಲ್ಲೆ.ಅದು ಗೆಂಟು ಆದ ಕಾರಣ ಸಪೂರಕ್ಕೆ ತುಂಡು ಮಾಡುಲೆ ಎಡಿತ್ತಿಲ್ಲೆ .ಸರಿಯಾಗಿ ಹೊತ್ತುತ್ತೂ ಇಲ್ಲೇ ಸುಮ್ಮನೆ ಹೊಗೆ ಸುತ್ತುತ್ತು ಅಷ್ಟೇ !ಬೆಶ್ರೋಟ್ಟೆಲಿ ಒಲೆಗೆ ದೊಡ್ಡ ಕಿಚ್ಚು ಹಾಕುತ್ತರೆ ಬೇರೆ ಸೌದಿ ಒತ್ತಿಂಗೆ ಹಾಕಿದರೆ ಹೊತ್ತುತ್ತು ಅದು ಬಿಟ್ರೆ ಅದರಂದ ಎಂತ ಉಪಕಾರ ಇಲ್ಲೆ” ಹೇಳಿ ಅಮ್ಮ ಹೇಳಿದ.
ಎನಗುದೆ ಸರಿ ಇಪ್ಪಲೂ ಸಾಕು ಹೇಳಿ ಅನ್ಸಿತ್ತು .ಕೋಲು ಗಂಟು >ಕೊದಂಟಿ ಆದಿಪ್ಪ ಸಾಧ್ಯತೆ ಇದ್ದು.ಅದೊಂದು ಉಪಕಾರಕ್ಕೆ ಸಿಕ್ಕದ್ದ ವಸ್ತು ಆದ ಕಾರಣ ಕೆಲಸ ಮಾಡದ್ದೋರ /ಉಪಕಾರಕ್ಕೆ ಸಿಕ್ಕದ್ದೋರ ಬಗ್ಗೆ ಹೇಳುವಗ ಬಳಕೆ ಆದ ಬೈಗಳಿನ ಪದ ಇದು ಆದಿಕ್ಕು ಅಲ್ಲದ ?ನಿಂಗ ಎಲ್ಲ ಎಂತ ಹೇಳ್ತಿ ?ನಿಂಗಳ ಅಭಿಪ್ರಾಯ ತಿಳಿಸಿ.

3 thoughts on “ಗಿಳಿ ಬಾಗಿಲಿಂದ -ಅದು ಮಹಾ ಕೊದಂಟಿ

  1. ಉಮ್ಮ ., ಕೊದಂಟಿ ಎಂಗಳಲ್ಲಿಯೂ ಇದ್ದಪ್ಪ 😀
    [ಎನಗೂ ಅಕ್ಕಂಗೂ ಒಂದೆರಡು ಸರ್ತಿ…] – ಕೊದಂಟಿ ಅಂಬಗ ಸ್ತ್ರೀಲಿಂಗ, ಕೊದಂಟ ಪುಲ್ಲಿಂಗ – ಹೇದ° ಅಡಿಗೆ ಸತ್ಯಣ್ಣ°.
    ಕೊದಂಟಿ, ಅಕ್ರದ ಕಡ್ಡಿಗಳ ನಿಂಗ ಈಗ ಬಲುಗಿ ಹಾಕಿ ಅದು ಆರಿಂದ ಸುರುವಾತು ಹೇದು ಹೇಳ್ಸರ ಅರಡಿಯೆಕ್ಕಾಯ್ದನ್ನೆ ಎನಗುದೇ ಏ°
    ಶುದ್ದಿ ಲಾಯ್ಕ ಆಯ್ದು ಹೇಳಿತ್ತು – ‘ಚೆನ್ನೈವಾಣಿ’

  2. ಅಕ್ರದ ಕಡ್ಡಿ ಹೇಳಿದರೆ ನಾಲಗೆಯ ಅಗ್ರವ ತೆಗವ ತೆಂಗಿನ ಗರಿಂದ ಮಾಡಿದ ಕಡ್ಡಿಯಾಗಿಕ್ಕು. ಹರೇ ರಾಮ.

  3. ಅದು ದೊಡ್ಡ ಕೊದಂಟಿಯ ಹಾಂಗೆ ಇದ್ದು ಹೇಳಿಯೂ ಹೇಳ್ತವು.ಕೊದಂಟಿಯ ಬಡಿವಲೆ ಉಪಯೋಗುಸುವ ಮರದ ತುಂಡು ಹೇಳುವ ಅರ್ಥಲ್ಲಿಯೂ ಬಳಕೆ ಮಾಡ್ತವು.ಅವನಲ್ಲಿಗೆ ಹೋದರೆ ಅಕ್ರದ ಕಡ್ಡಿ(ಸಣ್ಣ ತುಂಡು ಕಡ್ಡಿ)ಯೂ ಸಿಕ್ಕ.ಈ ರೀತಿಯ ಪ್ರಯೋಗ ಇದ್ದು.ಅಕ್ರದ ಕಡ್ಡಿ(ತುಳುವಿಲ್ಲಿ-ಅಕ್ಕರ್ದ ಕಡ್ಡಿ,ಅಕ್ರಂತ ಕಡ್ಡಿ) ಹೇಳಿದರೆ ಕ್ಷುಲ್ಲಕ ವಸ್ತು,ಉಪಯೋಗಶೂನ್ಯ ವಸ್ತು ಅರ್ಥಲ್ಲಿ ಪ್ರಯೋಗ ಆವ್ತು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×