Oppanna.com

ಪತ್ತನಾಜೆ ಕಳ್ತು

ಬರದೋರು :   ಗೋಪಾಲಣ್ಣ    on   28/05/2011    12 ಒಪ್ಪಂಗೊ

ಗೋಪಾಲಣ್ಣ

ಪತ್ತನಾಜೆ ಕಳುದುಬಪ್ಪ ಮಳೆಗಾಲವ ಸ್ವಾಗತಿಸುವ ಹುಂಡುಪದ್ಯ

ಪತ್ತನಾಜೆಯು ಕಳ್ತು ಮಳೆಗಾಲ ಬಂತು
ಮುತ್ತಿತ್ತು ಮುಗಿಲೆಲ್ಲ ಮಬ್ಬು ಕವಿದತ್ತು || 1 ||

ಮೂಲೆ ಮೂಲೆಲಿ ಬಿದ್ದ ಕೊಡೆ ಎಲ್ಲಿ ಹೋತು?|
ಮುಟ್ಟಾಳೆ,ಟೊಪ್ಪಿಗಳ ಉದ್ದಿಡೆಕ್ಕಿತ್ತು || 2 ||

ಶಾಲೆ ಚೀಲವ ತನ್ನಿ ಪುಸ್ತಕವ ತುಂಬಿ
ಸಮವಸ್ತ್ರ,ಮಳೆಯಂಗಿ ಎಲ್ಲವನು ತುಂಬಿ || 3||

ಒಣಗಿದ್ದ ಹಪ್ಪಳವ ಒಳ ಮಡುಗಿ ಬೇಗ
ಅಡಕೆ,ತೆಂಗಿನಕಾಯಿ ಅಟ್ಟಕೇರ್ಸೀಗ || 4 ||

ಸೌದಿ ಮಡ್ಲುಗಳೆಲ್ಲ ಹಾಕು ಕೊಟ್ಟಗೆಗೆ
ನೀರಕಣಿಗಳ ಮಣ್ಣು ಬಿಡಿಸು ಅತ್ಲಾಗೆ || 5 ||

ಓಡಿನೆಡಕ್ಕಿಲಿ ನೀರು ಸೋರದ್ದ ಹಾಂಗೆ
ಹಾಳೆ ತುಂಡಿನ ಮಡುಗು ಮನೆಯ ಮಾಡಿಂಗೆ || 6 ||

ಹಶುಗೊಕ್ಕೆ ತಿಮ್ಮಪ್ಪ  ಬೈಹುಲ್ಲು ತರಲಿ
ಹಟ್ಟಿ ಅಟ್ಟದಿ  ತುಂಬ ಒತ್ತಿ ತುಂಬಿಸಲಿ || 7 ||

ಹೀಂಗಿಕ್ಕು ಹಳ್ಳಿ,ಮಳೆಗಾಲದಟ್ಟಣೆಲಿ
ಮಳೆರಾಯ ಬಂದ ಇದ!ಈಗಲೇ ಇಲ್ಲಿ || 8 ||

~*~*~*~

12 thoughts on “ಪತ್ತನಾಜೆ ಕಳ್ತು

  1. ಆಹಾ, ಗೋಪಾಲಣ್ಣ,ಕೊಶಿ ಆತು.

    ಒಲಿಮಡಲ ಕೊಡೆ ಹಿಡುದ ಬಾಲ್ಯ ನೆ೦ಪಾತು
    ಗೆದ್ದೆ ಹೂಡುವ ಚೆ೦ದ ಕಣ್ಮು೦ದೆ ಬ೦ತು ||

    ಮಳೆಗೆ ಶಾಲೆಗೆ ರಜೆಯು ಸಿಕ್ಕಿಯಪ್ಪಗಳೆ
    ಕೆರೆಗಿಳಿದ ರಸಘಳಿಗೆ ಮತ್ತೆ ನೆ೦ಪಾತು ||

    1. ಸಂತೋಷ. ಎಲ್ಲರಿಂಗೂ ಧನ್ಯವಾದ.

  2. ಮಳೆಗಾಲದ ಹಳ್ಳಿಯ ಜೀವನವ ಲಾಯ್ಕಲ್ಲಿ ಹೇಳಿದ್ದಿ ಗೋಪಾಲಣ್ಣಾ.

  3. ಪದ್ಯ ಕುಶಿ ಆಯೆದು.ಮಳೆಗಾಲದ ಪೂರ ಚಿತ್ರನ ಫಸ್ತ್ ಕ್ಲಸ್ಸ್

  4. ಗೋಪಾಲಣ್ಣಾ,

    ತುಂಬಾ ಚೆಂದದ ಹುಂಡುಪದ್ಯ!!! ಮಳೆಗಾಲಕ್ಕೆ ಸ್ವಾಗತ ಮಾಡಿದ ಹಾಂಗೆ ಆತು. ನಮ್ಮ ತಯಾರಿಗಳ ನೆಂಪು ಮಾಡಿದ ಹಾಂಗೆದೇ ಆತಿದಾ. ಒಪ್ಪಣ್ಣನ ಶುದ್ದಿಗೆ ಪೂರಕ ಆಗಿ ಬಂದದು ಇನ್ನೂ ಲಾಯ್ಕ ಆತು.

    ಬತ್ತಾ ಇರಲಿ ಹೀಂಗೆ ನಿಂಗಳ ಪದ್ಯಂಗೊ, ಕಥೆಗೊ.

  5. ಭಾರೀ ಲಾಯಿಕಾಯಿದು ಗೋಪಾಲಣ್ಣಾ..
    ಸಕಾಲಿಕ, ಮನೋಹರ. ಎ೦ಗೊ ಸಣ್ಣಾದಿಪ್ಪಗ ಜಾಲ ನೀರು ಹೋವ್ತ ದಾರಿ ಬಿಡುಸಿಕೊಟ್ಟ೦ಡಿತ್ತಿದ್ದು, ಮಳೆಗಾಲಕ್ಕಿಪ್ಪ ಸೌದಿ ಎಲ್ಲ ರೆಡಿ ಮಾಡಿ ಮಡುಗುವದು, ಮಾಡು ರಿಪೇರಿ ಮಾಡುವದು, ಎಲ್ಲ ನೆ೦ಪಾತು.

  6. ಪ್ರಾಸ ತಾಳಂಗಳೊಟ್ಟಿಂಗೆ ಹಳ್ಳಿಯ ಜೀವನದ ಚಿತ್ರಣ ಲಾಯಕು ಬಯಿಂದು. ಹಳತ್ತೆಲ್ಲವನ್ನು ನೆಂಪು ಮಾಡಿತ್ತು. ಇಂತ ಪದ್ಯಂಗೊ ಗೋಪಾಲಣ್ಣನ ಕೀಮಣೆಂದ ಅಂಬಗಂಬಗ ಹೆರ ಬತ್ತಾ ಇರಳಿ.

  7. ಕತೆಗಾರ ಗೋಪಲಣ್ಣನ ನೋಡಿ ತಿಳ್ಕೊಂಡಾಯಿದು, ಈಗ ಕವಿ ಗೋಪಾಲಣ್ಣನ ಪರಿಚಯ ಆತು.
    ನಾವೆಲ್ಲೊರೂ ನೋಡಿ ಅನುಭವಿಸಿದ ವಿಚಾರಂಗಳ ಅತ್ಯಂತ ಸುಂದರವಾಗಿ ಕವನ ಬರದ ಗೋಪಾಲಣ್ಣಂಗೆ ಅಭಿನಂದನೆಗೊ. ಈ ಕವನ ಓದಿ ತುಂಬ ಖುಶಿ ಆತು.

    1. ಸಂತೋಷ.ಆನು ಕವಿ ಹೇಳುವಷ್ಟು ದೊಡ್ಡ ಕಾವ್ಯ ಬರೆದ್ದಿಲ್ಲೆ.ಎನ್ನ ಎರಡು ಕವನ ಸಂಕಲನ ಕಳೆದ ವರ್ಷ ಪ್ರಕಟ ಆಯಿದು. ಅದರ ಕೆಲವು ಪದ್ಯ ಸಂಪದ.ಕಾಮ್ ಲಿ ಹಾಕಿದ್ದೆ. ಬಾಕಿ ಸಮಯ ಇಪ್ಪಾಗ ಹಾಕುತ್ತೆ.
      ನಿಂಗಳ ಪ್ರೀತಿಗೆ ಋಣಿ.

  8. ಲಾಯಕ ಆಯ್ದು ಗೋಪಾಲಣ್ಣ. ದೃಶ್ಯ ಪದ್ಯ ರೂಪಲ್ಲಿ ಕಂಡ ಹಾಂಗೆ ಆತು. ಒಪ್ಪ.

    ತಪ್ಪಲೆ ಬಾಲ್ದಿ ಮಡುಗಲೆ ಇಲ್ಯೋ . ಹಾಳೆಲಿ ನಿವೃತ್ತಿ ಆವ್ತೋ !. ಫೋನ್ ರಿಸೀವರ್ ತೆಗದು ಮಡುಗು, ಮೊಬೈಲ್ ಸ್ವಿಚ್ ಆಫ ಮಾಡಿ ಬಿಡು, ಕಡ್ಪ ಕತ್ತಿ ಜಾಲಿಂಗೆ ಇಡುಕ್ಕು , ಕುರ್ವೆ ಹಿಡ್ಕೊಂಡು ಓಡು ಮಾವಿನ ಹಣ್ಣು ಹೆರ್ಕಲೆ ಬೇಗ ಹೇಳಿ ಗುಡುಗು ಸೆಡ್ಳು ಗಾಳಿ ಬೀಸಲೆ ಸುರುವಪ್ಪಗ ಹೇಳ್ವೋ ಅಪ್ಪೋ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×