Oppanna.com

ಗಿಳಿಬಾಗಿಲಿಂದ -ಎ೦ಗಳ ಭಾಷೆ ರಜ್ಜ ಬೇರೆ

ಬರದೋರು :   ಲಕ್ಷ್ಮಿ ಜಿ.ಪ್ರಸಾದ    on   25/09/2013    18 ಒಪ್ಪಂಗೊ

ನಮ್ಮ ಬೈಲಿನ ಶುದ್ದಿಗಳ ಓದಿ ಪ್ರೋತ್ಸಾಹ ಕೊಟ್ತುಗೊ೦ಡು ಇತ್ತಿದ್ದ ಲಕ್ಷ್ಮಿ ಅಕ್ಕ ಬೈಲಿನ ನೆ೦ಟ್ರಿ೦ಗೆ ಶುದ್ದಿಗಳ ಹ೦ಚುಲೆ ಬಯಿ೦ದವು.
ಭಾಷೆ, ಸ೦ಸ್ಕೃತಿ, ಜಾನಪದ ಇತ್ಯಾದಿ ವಿಷಯ೦ಗಳಲ್ಲಿ ವಿಶೇಷ ಆಸಕ್ತಿ ಇಪ್ಪ ಲಕ್ಷ್ಮಿ ಅಕ್ಕ°, ಸ೦ಸ್ಕೃತ, ಕನ್ನಡ, ಹಿ೦ದಿ ಭಾಷೆಗಳಲ್ಲಿ ಎ೦.ಎ. ಪದವೀಧರೆ. ಈಗ ಕನ್ನಡ ಭಾಷೆಯ ಉಪಾನ್ಯಾಸಕಿ ಆಗಿ ವೃತ್ತಿನಿರತರಾಗಿದ್ದವು.

ನಮ್ಮ ಭಾಷೆಲಿ ನಾಟಕವನ್ನೂ ಬರದ್ದವು.
ಇವರ ಹಲವಾರು ಕೃತಿಗೊ ಪುಸ್ತಕರೂಪಲ್ಲಿ ಪ್ರಕಟ ಆಯಿದು.
ಬನ್ನಿ, ಅಕ್ಕನ ಶುದ್ದಿಗಳ ಓದುವ°, ಪ್ರೋತ್ಸಾಹಿಸುವ°..
~
ಗುರಿಕ್ಕಾರ
°.

ಒಂದೆರಡು ತಿಂಗಳು ಹಿಂದೆ  ಮೋರೆಪುಟಲ್ಲಿ ಎನ್ನ ಸಣ್ಣಾದಿಪ್ಪಗಣ ಗೆಳೆಯ(ನೆಂಟ್ರು ) ಸೂರ್ಯನಾರಾಯಣ ತೆಂಕ ಬೈಲು (ಈಗ ಅವ° ದೇಲಂತ ಬೆಟ್ಟಿನ ದೊಡ್ಡ ಶಾಲೆ ಮಾಷ್ಟ್ರ°) ಹವ್ಯಕ ಭಾಷೆಲಿ ಬರೆ, ಓದುಲೆ ಕೊಶಿ ಆವುತ್ತು ಹೇಳಿ ಸಲಹೆ ಕೊಟ್ಟ°. ಸುಮಾರು ಸಮಯಂದ ಆನು ಹವ್ಯಕ ಭಾಷೆಲಿ ರಜ್ಜ ಏನಾರು ಎಂತಾದರು ಬರೆಯಕ್ಕು ಹೇಳಿ ಜಾನ್ಸಿಗೊಂಡು ಇತ್ತಿದೆ. ಅದಕ್ಕೆ ಸೂರ್ಯ ನಾರಾಯಣನ ಮಾತು ಬಲ ಕೊಟ್ಟತ್ತು. ಹಾಂಗಾಗಿ ಹವ್ಯಕ ಭಾಷೆಲಿ ಬರವಲೆ ಸುರು ಮಾಡಿದ್ದೆ. ನಾಲ್ಕು ವರ್ಷ ಮೊದಲು ಬೆಳ್ಳಾರೆ ಗವರ್ಮೆಂಟು ಕೋಲೇಜಿಲಿ ಕನ್ನಡ ಲೆಕ್ಚರು ಕೆಲಸಕ್ಕೆ ಸೇರಿದ ಒಂದೆರಡು ದಿನಂಗಳಲ್ಲಿಯೇ ಅಲ್ಯನೋ(ಣ) ರ ಹವ್ಯಕ ಭಾಷೆಗೂ ಎಂಗಳ ಹವ್ಯಕ ಭಾಷೆಗೂ ತುಂಬಾ ವ್ಯತ್ಯಾಸ ಇದ್ದು ಹೇಳಿ ಎನಗೆ ಗೊಂತಾತು. ಅಲ್ಯನೋರ ಹವ್ಯಕ ಭಾಷೇಲಿ ಕನ್ನಡದ ಪದಂಗ ಜಾಸ್ತಿ ಇದ್ದು. ಅದರ ಮೂಡ್ಲಾಗಿ (ಹವ್ಯಕ) ಭಾಷೆ ಹೇಳಿಹೇಳ್ತವು. ಅವು ಎನಗೆ ಹೇಳುದರ ಎನಿಗೆ ಹೇಳಿ ಹೇಳ್ತವು. ನಮ್ಮ ಉಂಡೆಯ ಅವು ಕಡುಬು ಹೇಳಿ ಹೇಳ್ತವು. ಹೀಂಗೆ ತುಂಬಾ ಕಡೆ ಅವರ ಭಾಷೆ ನಮ್ಮ ಭಾಷೆಂದ ಬೇರೆ ತರ ಇದ್ದು. ಪಡ್ಲಾಗಿ ಭಾಷೆಲಿದೆ ರಜ್ಜ ಬೇರೆ ತರ ಇಪ್ಪ ಹವ್ಯಕ ಭಾಷೆಯ ಒಂದು ವಿಧ ಅಲ್ಲಿನ ಕೆಲವು ಕುಟುಂಬಗಳಲ್ಲಿ ಅಲ್ಲಿ ಇದ್ದು. ಹೋವುಕೆ ಬರುಕೆ ಇತ್ಯಾದಿ ಪದಂಗ ಅದರಲ್ಲಿ ಇದ್ದು. ಅದು ರಜ್ಜ ಭೈರಂಗಳ ಕನ್ನಡ ಭಾಷೆಯ ಹಾಂಗೆ ಇದ್ದು. ಉತ್ತರ ಕನ್ನಡದೋರ ಹವ್ಯಕ ಭಾಷೆಗೂ ಎಂಗಳ ಭಾಷೆಗೂ ತುಂಬಾ ವ್ಯತ್ಯಾಸ ಇಪ್ಪದು ಎನಗೆ ಗೊಂತಿತ್ತು. ಬೆಳ್ಳಾರೆಗೆ ಹೋದ ಮೇಲೆ ಅಲ್ಯಣ ಮೂಡ್ಲಾಗಿ ಭಾಷೆ ಮತ್ತೆ ಅದರ ಇನ್ನೊಂದು ವಿಧ ಇಪ್ಪದು ಗೊಂತಾತು.
ಮತ್ತೆ ಕೊಡೆಯಾಲ ಕಾಸರಗೋಡು ವಿಟ್ಲ ಪುತ್ತೂರು ಮೊದಲಾದ ಜಾಗೆಗಳ ಹವ್ಯಕ ಭಾಷೆದೆ ಎಂಗಳ ಹವ್ಯಕ ಭಾಷೆ(ಕೋಳ್ಯೂರು ಸೀಮೆದು )ದೆ ಒಂದೇ ರೀತಿ ಇಕ್ಕು ಹೇಳಿ ಆನು ಗ್ರೇಶಿತ್ತಿದೆ. ಆದರೆ ಒಪ್ಪಣ್ಣನ ಒಪ್ಪಂಗೊ ಓದುತ್ತಾ ಇದ್ದಾಂಗೆ ಎಂಗಳ ಭಾಷೆಗೂ ಅಲ್ಲಿ ಇಪ್ಪ ಭಾಷೆಗೂ ತುಂಬ ವ್ಯತ್ಯಾಸ ಇಪ್ಪದರ ನೋಡಿ ಎಂಗಳ ಭಾಷೆ ರಜ್ಜ ಬೇರೆ ಹೇಳಿ ಗೊಂತಾತು ಎನಗೆ. ಅದರಲ್ಲಿ ಒ ಕಾರದ ಬಳಕೆ ಹೆಚ್ಚು ಇದ್ದು. ಅಭಿನಂದನೆಗೊ, ಒಪ್ಪಂಗೊ ಮಂತ್ರಂಗೊ, ಗಾದೆಗೊ ಇತ್ಯಾದಿ. ಎಂಗಳ ಭಾಷೆಲಿ ಇಂತ ಕಡೆ “ಒ” ಕಾರ ಇಲ್ಲೆ. ಅಭಿನಂದನೆಗ, ಗಾದೆಗ, ಮಂತ್ರಗ ಹೇಳಿ ಇರ್ತು. ಮತ್ತೆ ಎಂಗಳ ಭಾಷೆಲಿ ಹೇತು, ಹೇದು ಹೇದರೆ ಕೇಟವು ಇಂತ ಪದಂಗ ಇಲ್ಲೆ ಇದರ ಬದಲು.ಹೇಳಿತ್ತು, ಹೇಳಿ, ಹೇಳಿದರೆ ಕೇಳಿದವು ಹೇಳಿ ಇದ್ದು .
ಆನು ಭಾಷಾ ತಜ್ಞೆ ಅಲ್ಲ. ಎನ್ನ ತಲೆಗೆ ಬಂದ ಕೆಲವು ನುಡಿಗಟ್ಟುಗಳ ಬಗ್ಗೆ ಭಾಷೆಯ ಬಳಕೆಯ ವೈಶಿಷ್ಟ್ಯಂಗಳ ಬಗ್ಗೆ ಬರವ ಪ್ರಯತ್ನ ಮಾಡ್ತಾ ಇದ್ದೆ. ರಾಮಚಂದ್ರಣ್ಣ ಪದ್ಯಾಣರ ಪ್ರೋತ್ಸಾಹಂದಾಗಿ ಎನಗೆ  ಈ ಬಗ್ಗೆ ಬರವಲೆ ಹುರುಪು  ಹುಟ್ಟಿದ್ದು. ಎನ್ನ ತಲೆಗೆ ಬಂದದರ ಇಲ್ಲಿ ಬರದ್ದೆ. ಇದು ಗಿಳಿ ಬಾಗಿಲಿಂದ ನಿಲ್ಕಿ ನೋಡಿಯಪ್ಪಗ ಒಳಾಣದ್ದು ರಜ್ಜ ರಜ್ಜ ಕಾನ್ತಿಲ್ಲೆಯ? ಹಾಂಗೆ ಆನು ಗಮನಿಸಿದ ವಿಚಾರಂಗ ಅಷ್ಟೇ.
ಇನ್ನು ಮುಂದಣ ದಿನಂಗಳಲ್ಲಿದೆ ಎನಗೆ ಬರೆಯಕ್ಕು ಹೇಳಿ ಎನ್ಸಿದ್ದರ ಎಂಗಳ ಹವ್ಯಕ ಭಾಷೆಲಿ ಒಪ್ಪಣ್ಣನ ಬೈಲಿಲಿ ಬರೆತ್ತೆ. ನಿಂಗ ಎಲ್ಲ ತಿಳುದೋರು ಹಂಸ ಕ್ಷೀರ ನ್ಯಾಯದ ಹಾಂಗೆ (ನೀರು ಸೇರ್ಸಿದ ಹಾಲಿನ ಹಂಸದ ಎದುರು ಮಡುಗಿದರೆ ಅದು ಹಾಲಿನ ಮಾತ್ರ ಕುಡುದು ನೀರಿನ ಹಾಂಗೆ ಬಿಡ್ತಡ! ಇದೊಂದು ಕವಿ ಸಮಯ ) ಒಳ್ಳೆದರ ಮಾತ್ರ ತೆಕ್ಕೊಂಡು ಬೆನ್ನು ತಟ್ಟಕ್ಕು ಹೇಳಿ ಕೇಳಿಗೊಂಡಿದೆ.
ಇನ್ನೊಂದರಿ ಕಾಂಬ° ನಮಸ್ಕಾರ .

18 thoughts on “ಗಿಳಿಬಾಗಿಲಿಂದ -ಎ೦ಗಳ ಭಾಷೆ ರಜ್ಜ ಬೇರೆ

  1. ನಿಂಗಳ ಬರಹ … ಅದರ ಮೇಲೆ ಬೈಲ ನೆಂಟ್ರ ಒಪ್ಪಂಗೊ ಭಾರೀ ಆಸಕ್ತಿಕರವಾಗಿದ್ದು. ..ಹೀಂಗೇ ಬರೆತ್ತಾ ಇರಿ..

  2. ನಿಂಗಳ ಗಿಳಿಬ್ಲಾಗಿನ ಆನೂ ನೋಡಿದ್ದೆ…. ಲಾಯ್ಕ ಇದ್ದು…
    ಹೀಂಗೇ ಬರಕ್ಕೊಂಡಿರಿ….

  3. ನಮಸ್ತೆ ವೆಂಕಟ್ರಮಣಣ್ಣಯ್ಯ.
    ಆರಾಮ್ ಇದ್ಯನ? ಹಿಂಗೊದು ಗುರ್ತ ಆಗಿದ್ದು ಚೊಲೊ ಆತು ನೋಡು. ಬೆಂಗ್ಳೂರಲ್ಲಿ ಎನ್ ತಮ್ಮ ಇದ್ದ. ಯಾವಾಗಾರು ಒಂದೊಂದ್ಸರ್ತಿ ಬತ್ತಾ ಇರ್ತಿ.
    ಆನು ಒಂದೊಂದರಿ ಒಪ್ಪಣ್ಣನ ಬಯಿಲಿಲ್ಲಿ ತಿರಿಗಿಯೊಂಡಿತ್ತಿದ್ದೆ. ಭಾಷೆ ಬಗ್ಗೆ ನಿಂಗಳ ಆಸಕ್ತಿ ನೋಡಿಯಪ್ಪಗ ಜಾಲಿಂಗೆ ಬಂದು ರಜ ಪಟ್ಟಂಗ ಹಾಕುವಾ ಹೇಳಿ ಕಂಡತ್ತು. ಮನೆಗೆ ನೆಂಟ್ರು ಬಂದಪ್ಪಗ ಅವಿಭಜಿತ ದಕ್ಷಿಣ ಕನ್ನಡದ ಹವ್ಯಕರ ಮನೆಗಳಲ್ಲಿ ಎಂತ ಹೇಳಿ ಮಾತಾಡ್ಸಿರೆ ಉ.ಕ.ಭಾಗಲ್ಲಿ ಮಾತಾಡ್ಸಿದಿ/ಆರಾಮ? ಹೇಳಿ ಮಾತಾಡ್ಸುತ್ತವು.
    ಯಂಗೊ ಉಜಿರೆಗೆ ಬಂದ ಸುರುವಾಣ ದಿನಂಗಳಲ್ಲಿ ಆರದ್ದಾರು ಮನೆಗೆ ಹೋಗಿಯಪ್ಪಗ ಅವು ಎಂತ? ಹೇಳಿ ಮಾತಾಡ್ಸಿರೆ ಎಂತ ಇಲ್ಲೆ ಹೇಳಿಯೊಂಡಿತ್ತಿದ್ದೆಯೊಂ. ಅಮ್ಮ ಅದು ಹಾಂಗಲ್ಲ ಹೀಂಗೆ ಹೇಳಿ ಹೇಳಿಯೊಂಡಿತ್ತಿದ್ದವು. ಅಂದ್ಹಾಂಗೆ ಎನ್ನ ಆಯಿಗೆ ಕುಂಬ್ಳೆ ಸೀಮೆ ಆತು. ಈಗ ಆನೂ ಕುಂಬ್ಳೆ ಸೀಮೆಲ್ಲೆ ಇದ್ನೊ ಅಣ್ಣಯ್ಯ.
    ಇನ್ನೊಂದಿನ ಸಿಗನ (ಇನ್ನೊಂದರಿ ಕಾಂಬ)
    ಎಲ್ಲರಿಗೂ ನಮಸ್ತೆ.
    ಅನುಪಮಾ

  4. ಅನುಪಮಕ್ಕಂಗೆ ನಮಸ್ಕಾರ, ಆನು ಬೆಂಗಳೂರು ಮಂಡಲ, ಬನಶಂಕರಿ ವಲಯದ ಚಿಕ್ಕಲಸಂದ್ರ ಘಟಕದ ಗುರಿಕ್ಕಾರನಾಗಿ ಗುರು ಸೇವೆ ಸಲ್ಲಿಸುತ್ತಿದ್ದು, ಸುಮಾರು ೨೦ ಮನೆ ಉತ್ತರ ಕನ್ನಡ, ೧೨ ಮನೆ ದಕ್ಷಿಣ ಕನ್ನಡದ್ದೂ ಎನ್ನ ವ್ಯಾಪ್ತಿಗೆ ಬತ್ತು. ಎರಡೂ ಭಾಷೆ ತಿಳುದಿದ್ದರೆ ಗುರುಸೇವೆಗೆ ಅನುಕೂಲ. ಆದಕಾರಣ ನಿಂಗೊ ಎರಡೂ ಭಾಷೆಗೊಂತಿಪ್ಪವು ಸರಳವಾಗಿ ದಿನನಿತ್ಯದ ಉಪಯೋಗಕ್ಕೆ ಬೇಕಪ್ಪ ವಾಕ್ಯಂಗಳ ತಿಳಿಸಿ. ಹರೇ ರಾಮ.

  5. ಲಕ್ಶ್ಮಿ ಅಕ್ಕಂಗೆ ಸ್ವಾಗತ.
    ಓ ಮನ್ನೆ ಇತ್ಲಾಗಿ ನಿಂಗೊ ಸುಳ್ಯದ ಹತ್ತರೆ ಸಿಕ್ಕಿದ ಬುದ್ಧನ ವಿಗ್ರಹ ಮತ್ತೆ ಕೆಲವು ವಿಗ್ರಹಂಗಳ ಬಗ್ಗೆ ಬರದ ಶುದ್ಧಿ ಓದಿದ್ದೆ. ತುಂಬಾ ಕುತೂಹಲಕಾರಿಯಾಗಿ ಬರೆತ್ತಿ. ಹವ್ಯಕಲ್ಲಿಯೂ ಬರೆರಿ, ಬೈಲಿಂಗೆ ಬಂದುಗೊಂಡಿರಿ.

  6. ನಿನ್ಗಳೆಲ್ಲರ ಪ್ರೋತ್ಸಾಹಕ್ಕೆ ಆತ್ಮೀಯತೆಗೆ ಆನು ಋಣಿಯಾಗಿದ್ದೆ ನಮ್ಮ ಭಾಷೆಲಿಪ್ಪ ಆನು ಗಮನಿಸಿದ ಕೆಲವು ವಿಶಿಷ್ಟ ಪದ ಪ್ರಯೋಗಂಗಲ ಬಗ್ಗೆ ಮುಂದೆ ಬರೆತ್ತೆ ,ನಿಂಗಳ ಎಲ್ಲೋರ ಬೆಂಬಲ ಸದಾ ಇರಲಿ ,ಧನ್ಯವಾದಂಗ

  7. ಲಕ್ಷ್ಮಿ ಅಕ್ಕ, “ಎಂಗಳ ಭಾಷೆಲಿ ಬರೆತ್ತೆ” ಹೇಳಿದ್ದಿ. ಇಲ್ಲಿ “ಎಂಗಳ” ಬೇಡ, “ನಮ್ಮ” ಅಕ್ಕು. ಯಾವ ಸೀಮೆಂದ ಬಂದರೂ , ಯಾವ ರೂಪಲ್ಲಿದ್ದರೂ ‘ಹವ್ಯಕಭಾಷೆ’ ‘ನಮ್ಮ’ದೇ. ಒಂದೇ ಮನೆಯೋರ ಹಾಂಗೆ ಶುದ್ಧಿ ಹೇಳಿಗೊಂಡು, ಕೇಳಿಗೊಂಡು ಮುಂದೆ ಹೋಪ°- ಆಗದಾ?

  8. ನಮ್ಮ ಬೈಲಭಾವಯ್ಯ೦ಗೆ ಅರಬೀಒ(ಕ)ಡಲಿನ ನ೦ಟಸ್ತನವಾದರೂ,
    ಅವು ಎದುರುಗೊ೦ಡು ಸ್ವಾಗತ ಹೇಳೂವುದೂ
    ಮೂಡ್ಲಾಗಿಯ ಗ೦ಗಾಸಾಗರದ ತಳದ ಬಾಗಿಲ್ಲಲೆ.
    ಹಾ೦ಗೇ.
    (ಅವು ಹೇಳಿ೦ದಾಗೆ)
    ಸೂರ್ಯ ಎಲ್ಲಿದ್ದರೂ,
    ”ಗಿಳಿವಿ೦ಡೋ” ತೆಗವಾಗ
    ಬೈಲಿ೦ಗೆ ಬೆಣಚ್ಹೂ
    ಕ೦ಡರೆ ಆತು.
    ಭಾ ಷೆಯ ಸಕ್ಕರೆ ಯಾವ ಸೀಮೆದೆ ಆದರೂ,
    ಸೀವಿ೦ಗೆ ಆದರೆ ಆತು. ಎ೦ಗಳ೦ತಹ ಬೈಲ ಇರುವೆಗ ಕೊದಿಬಿಡಲೆ ಸಾಕು.

  9. ಹರೇ ರಾಮ ಅಕ್ಕೋ. ಮದಾಲು ಬೈಲಿಂಗೆ ಸ್ವಾಗತ. ಉಂಡೆ ತಿಂದಾತೋ? ನವಗಿದಾ ಇಂದು ತೆಳ್ಳವು, ಕೇಟತ್ತನ್ನೇ
    ಗಿಳಿಬಾಗಿಲ್ಯಾಗಿ ಇಣ್ಕಿ ನೋಡಿದ್ದು ಲಾಯಕ ಆಯ್ದು. ತೆಂಕಬೈಲಿನೋರು ನಿಂಗೊಗೆ ಚಾಲನೆ ಕೊಟ್ಟದು ಕೊಶಿ ಆತು.
    ಪ್ರಾದೇಶಿಕವಾಗಿ ಬಾಷೆಲಿ ಸ್ವಲ್ಪವೋ ಅಲ್ಪವೋ ವೆತ್ಯಾಸ ಹೆಚ್ಚಿಕಮ್ಮಿ ಎಲ್ಲಾ ಭಾಷೆಲಿಯೂ ಇದ್ದಾಂಗೆ ಕಾಣ್ತಪ್ಪೋ. ಅಂದರೂ ಅಡ್ಡಿ ಇಲ್ಲೆ, ವಿಷಯ ನವಗೆ ಅರ್ತ ಆದರೆ ಸಮ ಅಲ್ಲದಾ. ಎಂತಾರು ನಮ್ಮ ಅಬ್ಬೆ ಬಾಷೆಯೇ ನವಗೆ ಮಾತಾಡ್ಳೆ ಚೆಂದ. ಅಂದರೂ ಆಚಿಚೀಗಾಣ ಪದಪ್ರಯೋಗ ಕೇಳ್ಳೆ ಗಮ್ಮತಾವ್ತಪ್ಪೋ.
    ಬಂದುಗೊಂಡಿರಿ, ಬರಕ್ಕೊಂಡಿರಿ.

  10. ದಕ್ಷಿಣ ಕನ್ನಡ ಹವ್ಯಕ ಭಾಷೆ ಮತ್ತೆ ಉತ್ತರ ಕನ್ನಡ ಹವ್ಯಕಭಾಷೆ ಎರಡೂ ಭಾಷೆಗಳ ಸರಳ ವಾಕ್ಯರೂಪಲ್ಲಿ ಯಾರಾದರೂ ತಿಳಿಸಿದರೆ ನಮ್ಮ ಭಾಷೆ ಅವಕ್ಕೂ ಅವರ ಭಾಷೆ ನಮಗೂ ಸುಲಭವಾಗಿ ಅರ್ಥ ಅಕ್ಕು. ಬೆಂಗಳೂರಿಲ್ಲಿ ವಿಶೇಷವಾಗಿ ಎರಡೂ ಕಡೆಯವು ಇಪ್ಪಕಾರಣ ನಾವು ಇಬ್ಬರೂ ಹವ್ಯಕರಾಗಿದ್ದರೂ ಕನ್ನಡಲ್ಲಿ ಮಾತಾಡೆಕ್ಕಾವುತ್ತು. ಉದಾಃ-
    ದಕ್ಷಿಣ ಕನ್ನಡ
    ಎನ್ನ ಹೆಸರು ಕೆ.ವಿ. ಭಟ್, ನಿಂಗಳ ಹೆಸರು ಎಂತರ?ಉತ್ತರಕನ್ನಡ———–?????????????-

    1. ಎನ್ಹೆಸ್ರು ಅನುಪಮಾ (ಪ್ರಸಾದ್).ನಿನ್ಹೆಸರೆಂತದೋ?ನಿಮ್ಹೆಸರೆಂತಾತು? (ಉತ್ತರ ಕನ್ನಡ ಹವ್ಯಕ ಭಾಷೆಲ್ಲಿ ಸಂಬಂಧಿಕರೊಳ ಹಿರಿಯವಕ್ಕಾರುದೆ ಕಿರಿಯವಕ್ಕಾರುದೆ ಬಹುವಚನ ುಪಯೋಗ ಕಮ್ಮಿ. ಆನು ಉತ್ತರ ಕನ್ನಡ ದಕ್ಷಿಣ ಕನ್ನಡ ಮಿಶ್ರ ಜಾತಿ. (ನಮ್ಮಿಂದ ಸಣ್ಣವಾದರೆ ತಮ್ಮಾ/ತಂಗಿ. ದೊಡ್ಡವಾದ್ರೆ ಚಿಕ್ಕಯ್ಯ/ಕವ್ವಾ ಹೇಳುವ ಸಂಬೋಧನೆ ಜಾಸ್ತಿ.)
      ಅನುಪಮಾ ಪ್ರಸಾದ್.

  11. ದಕ್ಷಿಣ ಕನ್ನಡ ಹವ್ಯಕ ಭಾಷೆ ಮತ್ತೆ ಉತ್ತರ ಕನ್ನಡ ಹವ್ಯಕಭಾಷೆ ಎರಡೂ ಭಾಷೆಗಳ ಸರಳ ವಾಕ್ಯರೂಪಲ್ಲಿ ಯಾರಾದರೂ ತಿಳಿಸಿದರೆ ನಮ್ಮ ಭಾಷೆ ಅವಕ್ಕೂ ಅವರ ಭಾಷೆ ನಮಗೂ ಸುಲವಾಗಿ ಅರ್ಥ ಅಕ್ಕು. ಬೆಂಗಳೂರಿಲ್ಲಿ ವಿಶೇಷವಾಗಿ ಎರಡೂ ಕಡೆಯವು ಇಪ್ಪಕಾರಣ ನಾವು ಇಬ್ಬರೂ ಹವ್ಯಕರಾಗಿದ್ದರೂ ಕನ್ನಡಲ್ಲಿ ಮಾತಾಡೆಕ್ಕಾವುತ್ತು. ಉದಾಃ-
    ದಕ್ಷಿಣ ಕನ್ನಡ ಉತ್ತರ ಕನ್ನಡ
    ಎನ್ನ ಹೆಸರು ಕೆ.ವಿ. ಭಟ್, ನಿಂಗಳ ಹೆಸರು ಎಂತರ? ???????????????

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×