Oppanna.com

ಒಂದು ಅನಿಸಿಕೆ: ಹವಿಗನ್ನಡ – ಸವಿಗನ್ನಡ

ಬರದೋರು :   ಸರ್ಪಮಲೆ ಮಾವ°    on   22/02/2011    23 ಒಪ್ಪಂಗೊ

ಸರ್ಪಮಲೆ ಮಾವ°
ಇದು ಕೇವಲ ಚರ್ಚೆಯ ಹುಟ್ಟು ಹಾಕುವ ಉದ್ದೇಶಂದ ಬರದ್ದು.
ಆನು ಭಾಷಾ ವಿಜ್ಞಾನಿ ಅಲ್ಲ, ತಜ್ಞನೂ ಅಲ್ಲ, ಸಾಹಿತಿಯೂ ಅಲ್ಲ, ಸಾಹಿತ್ಯ ಹೆಚ್ಚು ಓದಿದವನೂ ಅಲ್ಲ.
ಆದರೂ ಇತ್ತೀಚಗೆ ಅಲ್ಲಿ ಇಲ್ಲಿ ಕೆಲವು ಹವ್ಯಕ ಭಾಷೆಯ ಬರವಣಿಗಗಳ ಓದುವಾಗ ತಲೆಲಿ ಹೊಳದ ಒಂದು ಯೋಚನೆಯ ಇಲ್ಲಿ ಬರೆತ್ತಾ ಇದ್ದೆ.
ಕನ್ನಡದ ಉಪಭಾಷಗಳ (ಗೌಡಕನ್ನಡ, ಕುಂದಗನ್ನಡ, ಬೈರಕನ್ನಡ ಇತ್ಯಾದಿ) ಪೈಕಿ ನಮ್ಮ ಹವ್ಯಕರ ಭಾಷೆಲಿ ಆದಷ್ಟು ಸಾಹಿತ್ಯದ ಬೆಳವಣಿಗೆ ಬೇರೆ ಯಾವದೇ ಭಾಷೆಲಿ ಆಯಿದಿಲ್ಲೆ ಹೇಳಿ ಪ್ರೊ.ಭರಣ್ಯ ಹರಿಕೃಷ್ಣ ಬಾವ ಬರದ್ದರ (ಕಸ್ತೂರಿ, ಫೆಬ್ರವರಿ 2011) ಓದಿದೆ.
ಅವರ ಕೆಲವು ಬರಹಂಗಳ ಮದಲೆಯೂ ಓದಿದ್ದೆ; ಪುಸ್ತಕಂಗಳ ನೋಡಿದ್ದಿಲ್ಲೆ. ಈ ಭಾಷೆಯ ಹವಿಗನ್ನಡ ಹೇಳುವದೇ ಸರಿ ಹೇಳಿ ಅವರ ಅಭಿಪ್ರಾಯ.
ಇದು ಬರೇ ಹವ್ಯಕರಿಂಗೆ ಮಾಂತ್ರ ಸೀಮಿತವಾದ (ಅಥವಾ ಸೀಮಿತವಾಗಿರೆಕಾದ) ಭಾಷೆ ಅಲ್ಲ. ಕನ್ನಡ ಗೊಂತಿಪ್ಪವಕ್ಕೆಲ್ಲ ಅರ್ಥ ಅಪ್ಪ ಭಾಷೆ.
ನಮ್ಮ ನೆರೆಕರೆಲಿ ನೋಡಿದರೆ ಹವ್ಯಕರಲ್ಲದ್ದವುದೆ ನಮ್ಮ ಭಾಷೆಲಿ ನಮ್ಮ ಹಾಂಗೇ ಮಾತಾಡುವವು ಕಾಂಬಲೆ ಸಿಕ್ಕುತ್ತವು. (ಈ ಅನುಭವ ಎನಗೆ ಸಾಕಷ್ಟು ಇದ್ದು.)
ಹವಿಗನ್ನಡಲ್ಲಿ ಎಲ್ಲ ರೀತಿಯ – ಕಥೆ, ನಾಟಕ, ಕವಿತೆ, ಕಾದಂಬರಿ, ಇತ್ಯಾದಿ – ಸಾಹಿತ್ಯವೂ ಬೆಳೆತ್ತಾ ಇದ್ದು ಹೇಳಿ ಆ ಲೇಖನಲ್ಲಿ ಹೇಳಿದ್ದವು. ಹವಿಗನ್ನಡದ ಒಂದು ಕಾದಂಬರಿ ತಮಿಳಿಂಗೆ ಭಾಷಾಂತರವೂ ಆಯಿದಡ.
ಕನ್ನಡದ ಉಪಭಾಷಗಳ ಮಾತಾಡುವವೆಲ್ಲ ಇಪ್ಪದು ಕರ್ನಾಟಕಲ್ಲೆ. ಕನ್ನಡ ಲಿಪಿಯನ್ನೇ ಉಪಯೋಗಿಸಿ ಬರವವು.
ಅಲ್ಲದ್ದೆ ಕನ್ನಡ ಗೊಂತಿಪ್ಪವಕ್ಕೆಲ್ಲ ಈ ಭಾಷಗಳ ಅರ್ಥ ಮಾಡಿಗೊಂಬಲೆ ಹೆಚ್ಚು ಕಷ್ಟ ಇಲ್ಲೆ. ಈ ಭಾಷಗೊ ಕನ್ನಡಕ್ಕೆ ಪ್ರತಿಸ್ಪರ್ಧಿಗೊ ಅಲ್ಲ; ಪೂರಕವೇ ಹೇಳಿ ಹೇಳ್ಳಕ್ಕು.
ಈಗ ಕನ್ನಡ ಕಥೆ ಕಾದಂಬರಿಗಳಲ್ಲಿ ಪ್ರಾದೇಶಿಕವಾದ ಗ್ರಾಮ್ಯ ಭಾಷೆಯ ಉಪಯೋಗ ಧಾರಾಳವಾಗಿ ಮಾಡುತ್ತವು. ಉತ್ತರ ಕರ್ನಾಟಕದ ಅಥವಾ ಮೈಸೂರು ಪ್ರದೇಶದ ಗ್ರಾಮ್ಯ ಕನ್ನಡಲ್ಲಿ ಬರದ ಕಥೆ, ಕಾದಂಬರಿ, ಕವಿತೆ ಇತ್ಯಾದಿ ನಮ್ಮ ಊರಿನವಕ್ಕೆ ಎಷ್ಟು ಅರ್ಥ ಆವುತ್ತು?
ಅದರ ಕನ್ನಡ ಸಾಹಿತ್ಯ ಹೇಳಿಯೇ ಹೇಳುತ್ತವಿಲ್ಲೆಯೊ? ಗ್ರಂಥಸ್ಥ ಕನ್ನಡಂದ(!?) ಅದಕ್ಕಿಪ್ಪಷ್ಟು ಅಂತರ ಹವಿಗನ್ನಡಕ್ಕೆ ಇಲ್ಲೆ.
ಮೇಗೆ ಹೇಳಿದ ಉಪ ಭಾಷಗಳಲ್ಲಿ ಬರದ್ದು ಆ ಗ್ರಾಮ್ಯ ಭಾಷಗಳಿಂದ ಹೆಚ್ಚು ಅರ್ಥ ಅಪ್ಪದಲ್ಲಿ ಕಂಡಿತ  ಸಂಶಯ ಇಲ್ಲೆ. ಈ ಉಪ ಭಾ ಷಗಳ ಮಾತಾಡುವ ಎಷ್ಟೋ ಜೆನ ಕನ್ನಡ ಸಾಹಿತ್ಯವ ಬೆಳೆಶಲೆ ಕೆಲಸ ಮಾಡಿದ್ದವು.
ಕನ್ನಡ ಸಾಹಿತ್ಯಕ್ಕೆ ಹವ್ಯಕರ ಕೊಡುಗೆ ಮಹತ್ವದ್ದು; ಹವ್ಯಕರಲ್ಲಿ ಕನ್ನಡ ಪಾಂಡಿತ್ಯದ ಪರಂಪರೆಯೇ ಇದ್ದು. ಮುಳಿಯ, ಸೇಡಿಯಾಪು, ಕಡೆಂಗೋಡ್ಲು, ತೆಕ್ಕುಂಜ – ಹೀಂಗೆ ಕನ್ನಡ ಭಾಷೆಯೂ ಸಾಹಿತ್ಯವೂ ಬೆಳವಲೆ ಜೀವಮಾನ ಇಡೀ ಕೆಲಸ ಮಾಡಿದ ಹವ್ಯಕರ ಹೆಸರು ಹೇಳುತ್ತರೆ ದೊಡ್ಡ ಪಟ್ಟಿಯೇ ಮಾಡ್ಲಕ್ಕು. ವ್ಯಾಕರಣ, ಛಂದಸ್ಸು, ಹಳೆಗನ್ನಡ ಕಾವ್ಯದ ಕ್ಷೇತ್ರಂಗಳಲ್ಲಿ ಅವು ಮಾಡಿದ ಹಾಂಗಿಪ್ಪ ಪಾಂಡಿತ್ಯಪೂರ್ಣ ಕೆಲಸ ಮಾಡಿದವು ಬೇರೆ ಎಷ್ಟು ಜೆನ ಇದ್ದವು? ಮೊನ್ನೆ ನೆಡದ ಬೆಂಗಳೂರು ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪ್ರೊ. ವೆಂಕಟಸುಬ್ಬಯ್ಯ ಟೈಮ್ಸ್ ಆಫ್ ಇಂಡಿಯ ಪತ್ರಿಕಗೆ ಕೊಟ್ಟ ಸಂದರ್ಶನಲ್ಲಿ ಸೇಡಿಯಾಪು ಕೃಷ್ಣ ಭಟ್ರ ಬಗ್ಗೆ ಹೇಳಿದ್ದರ ಓದಿದ್ದೀರೊ? “ಹಳೆ ಮೈಸೂರು ಪ್ರದೇಶದ ಎಂಗೊಗೆ ಪೆರಿಯಕ್ಕರ, ಕಿರಿಯಕ್ಕರ ವೃತ್ತಂಗಳ ಹೇಂಗೆ ಓದುವದು ಹೇಳಿಯೇ ಗೊಂತಿತ್ತಿಲ್ಲೆ. ಅಕ್ಕರ ವೃತ್ತಂಗಳ ಬಗ್ಗೆ ಒಂದು ಸಾಹಿತ್ಯ ಸಮ್ಮೇಳನಲ್ಲಿ ಸೇಡಿಯಾಪು ಕೃಷ್ಣ ಭಟ್ಟ ಓದಿದ ಪ್ರಬಂಧವ ಮರವಲೆ ಸಾಧ್ಯವೇ ಇಲ್ಲೆ. ಆ ಪ್ರಬಂಧಲ್ಲಿ ಅಕ್ಕರ ವೃತ್ತಂಗಳ ಹೇಂಗೆ ಓದೆಕ್ಕು ಹೇಳಿ ವಿದ್ವತ್ತುಪೂರ್ಣವಾಗಿ ವಿವರಿಸಿದ್ದು ನೋಡಿ ಬಿ.ಎಮ್.ಶ್ರೀಕಂಠಯ್ಯ ಆ ಪ್ರಬಂಧವ ಸೇಡಿಯಾಪಿನವರ ಕೈಂದ ಕೇಳಿ ತೆಕ್ಕೊಂಡು ಜೀವನದ ಕಡೆವರೆಂಗೆ ಮಡಿಕೊಂಡಿತ್ತಿದ್ದ…..ಉಡುಪಿಗೆ ಹೋಪದು ಹೇಳಿರೆ ಎನಗೆ ಎರಡು ರೀತಿಯ ತೀರ್ಥಯಾತ್ರೆ – ಒಂದು ಕೃಷ್ಣನ ನೋಡ್ಳೆ, ಇನ್ನೊಂದು ಸೇಡಿಯಾಪು ಕೃಷ್ಣನ ನೋಡ್ಳೆ…..
{ “One particular edition (of Sahitya Sammelana) that  I always remember is the one where writer Sediyapu Krishnabhat presented a paper on Akkara Vritta – a form of poetry. We from old Mysore side did not know how to read periyakkara and kiriyakkara. Sediyapu’s lecture was so brilliant that it established beyond doubt how to read the Akkara Vrittas. Prof B M Srikantaiah was so impressed that he went up to Sediyapu and requested him to give him the paper and kept it with him till the end as if it were a treasure.” Sediyapu and Prof GV later became good friends and when Sediyapu wrote his magnum opus Kannada Chandassu he invited Prof GV to launch it at Udupi. “By then Sediyapu had lost his eyesight and the book was dictated by him for someone to take down. Going to Udupi was like two pilgrimages – one to see Krishna and other to see Sediyapu………}
ಈಗ ಕೂಡಾ ನಮ್ಮ ಊರಿನ ಹವ್ಯಕರೆಲ್ಲ ಶುದ್ಧ ಕನ್ನಡಲ್ಲಿ ಮಾತಾಡುವ, ಬರವ ಅಭ್ಯಾಸ ಇಪ್ಪವು.
ಕನ್ನಡಲ್ಲಿ ಬರವವು, ಓದುವವು ಕಮ್ಮಿ ಆಯಿದವು ಹೇಳುವದು ಒಪ್ಪಲೆ ಸಾಧ್ಯ ಇಲ್ಲೆ. ಐಟಿ, ಬಿಟಿಲಿಪ್ಪ ನಮ್ಮ ಹವ್ಯಕ ಮಕ್ಕಳಲ್ಲಿ ಹೆಚ್ಚಿನವು ಕನ್ನಡಲ್ಲಿ ಲಾಯಿಕಿಲ್ಲಿ ಬರವ ಸಾಮರ್ಥ್ಯ ಇಪ್ಪವು.
ಅಂತರ್ಜಾಲಲ್ಲಿಪ್ಪ ನೂರಾರು (ಸಾವಿರಾರು? ಸಾಮಾನ್ಯ ೫೦೦ರಷ್ಟು ಪಟ್ಟಿ ಮಾಡಿದ್ದೆ) ಕನ್ನಡದ ಬ್ಲಾಗುಗಳ ನೋಡಿ.
ಇಂಗ್ಲಿಷ್ ಭಾಷೆಯ ಶಬ್ದಂಗಳ ಅಗತ್ಯ ಇಲ್ಲದ್ದೆ ಕನ್ನಡದ ನಡುವಿಲ್ಲಿ ತುರುಕುಸೊತ್ತವಿಲ್ಲೆ. ವಿದೇಶಲ್ಲಿ ಕೆಲಸ ಮಾಡುವ ಎಷ್ಟೋ ಜೆನ ಶುದ್ಧ ಕನ್ನಡಲ್ಲಿ ಬರೆತ್ತವು. ಇಂತವರಲ್ಲಿ ಎಷ್ಟೋ ಜೆನ ಹವ್ಯಕರಿದ್ದವು.
ಈಗ ಕನ್ನಡದ ಎಷ್ಟೊ ಸಾಹಿತಿಗೊ, ಕನ್ನಡದ ಉಟ್ಟು ಓರಾಟಗಾರಂಗೊ, ಮಾತಾಡುವ, ಬರವ ಕನ್ನಡವ ನೋಡಿ. ಇದು ಶಾಸ್ತ್ರೀಯ ಭಾಷೆಯೊ?
ಇದಕ್ಕೆ ಯಾವ ಶಾಸ್ತ್ರ ಇದ್ದು?
ಈಗ ಭಾಷೆ ಬೇರೆ, ಸಾಹಿತ್ಯ ಬೇರೆ ಹೇಳುತ್ತವು; ವಾಕ್ಯಂಗಳೇ ಸರಿ ಇರುತ್ತಿಲ್ಲೆ; ಹೇಳಿರೆ ಈಗಾಣ ಸಾಹಿತ್ಯ ಭಾಷೆ ಇಲ್ಲದ್ದ ಸಾಹಿತ್ಯ.
ವ್ಯಾಕರಣ ಕಲಿಯದ್ದರೂ ಶುದ್ಧ ಭಾಷೆಲಿ ಮಾತಾಡುವ, ಬರವ ಜೆನಂಗೊ ಎಷ್ಟೊ ಇದ್ದವು. ಜೀವಂತ ಭಾಷಗೂ ವ್ಯಾಕರಣ ಇದ್ದು. (ಜೀವಂತ ಭಾಷಗೆ ವ್ಯಾಕರಣ ಬೇಡ ಹೇಳಿದರೆ, ಸತ್ತ ಭಾಷಗೆ ಬೇಕು ಹೇಳಿ ಅರ್ಥವೊ?)
ಅದು ಹಾಂಗಿರಲಿ; ನಮ್ಮ ಕನ್ನಡ ಸಾಹಿತ್ಯ ಸಮ್ಮೇಳನಂಗಳಲ್ಲಿ ಸಾಹಿತ್ಯದ ಬಗ್ಗೆ ಮಾಂತ್ರ ಚರ್ಚಿಸುವ ಬದಲು ಸಾಹಿತ್ಯಕ್ಕೆ ಸಮ್ಮಂದ ಇಲ್ಲದ್ದ ಆರ್ಥಿಕ, ರಾಜಕೀಯ, ಸಾಮಾಜಿಕ ಹೇಳಿ ಬೇರೆ ವಿಷಯಂಗಳ ಬಗ್ಗೆಯೂ ಮಾತಾಡುತ್ತವು; ಗೋಷ್ಟಿಗಳ ನೆಡೆಶುತ್ತವು; ನಿರ್ಣಯಂಗಳ ಮಾಡುತ್ತವು. ಜಾಗತೀಕರಣ, ಪರಿಸರ, ಆರ್ಥಿಕ ವಿಚಾರಂಗಳ ಬಗ್ಗೆ ಆ ವಿಷಯಕ್ಕೆ ಸಮ್ಮಂದ ಪಟ್ಟ ಸಮ್ಮೇಳನಂಗಳಲ್ಲಿ, ವಿಷಯ ತಜ್ಞರು ಚರ್ಚಿಸಲಿ.
ಸಾಹಿತ್ಯ ಸಮ್ಮೇಳನಲ್ಲಿ ಭಾಷೆ, ಸಾಹಿತ್ಯದ ವಿವಿಧ ಪ್ರಕಾರಂಗಳ ಬಗ್ಗೆ ವಿಷಯ ನಿಷ್ಠ ಚರ್ಚೆ ನೆಡೆಕು ಹೇಳಿ ಎನ್ನ ಅಭಿಪ್ರಾಯ.
ಕನ್ನಡದ ಉಪಭಾಷಗಳ ಬಗ್ಗೆ ಒಟ್ಟಾಗಿ (ಕನ್ನಡದ ಪ್ರಾದೇಶಿಕ ಪ್ರಭೇದಂಗೊ, ಗ್ರಾಮ್ಯ ಭಾಷೆ ಇತ್ಯಾದಿಗಳನ್ನೂ ಸೇರುಸಲಕ್ಕು) ಒಂದು ಗೋಷ್ಟಿ ನೆಡೆಶಿದರೆ ಒಳ್ಳೆದು ಹೇಳಿ ಎನ್ನ ಭಾವನೆ.
ನಮ್ಮ ಹವ್ಯಕ ಸಭಗೊ, ಕೂಟಂಗೊ, ನಮ್ಮ ಭಾಷೆ, ಭಾಷೆಯ ಸಾಹಿತ್ಯ ಇತ್ಯಾದಿಗಳ ಬಗ್ಗೆ ವಿಶೇಷ ಗಮನ ಕೊಟ್ಟದು ಕಾಣುತ್ತಿಲ್ಲೆ; ನಮ್ಮ ಸಂಸ್ಕೃತಿ ಹೇಳಿದರೆ ಬರೇ ಧಾರ್ಮಿಕ ವಿಚಾರಂಗೊ ಮಾಂತ್ರ ಅಲ್ಲ;
ಭಾಷೆ  ಸಂಸ್ಕೃತಿಯ ಒಂದು ಪ್ರಧಾನ ಅಂಗ. ತುಳು, ಕೊಂಕಣಿ, ಕೊಡವ, ಬ್ಯಾರಿ ಭಾಷಗಳ ಅಭಿವೃದ್ಧಿಗೆ ನಿಗಮಂಗಳ ಮಾಡಿದ್ದವು.
ಈ ಭಾಷಗಳ ಸಾಹಿತ್ಯ ಸಮ್ಮೇಳನಂಗೊ ನೆಡೆತ್ತು; ಕೃತಿಗೊಕ್ಕೆ, ಸಾಧಕರಿಂಗೆ ಸನ್ಮಾನ ಮಾಡಿ ಪ್ರೊತ್ಸಾಹಿಸುತ್ತವು. ನಮ್ಮ ಭಾಷಗೆ ಬೆಳವಣಿಗೆಯ ಸಾಮರ್ಥ್ಯ ಇದ್ದರೂ, ಕೆಲವು ಜೆನ ವೈಯಕ್ತಿಕ ಆಸಕ್ತಿಂದ ಸಾಧನೆ ಮಾಡಿದ್ದರೂ (ನಮ್ಮ ಒಪ್ಪಣ್ಣನ ಕೆಲಸ ಒಳ್ಳೆ ಉದಾಹರಣೆ) ಸಮಾಜ ಒಟ್ಟಾಗಿ ಇದರ ಬಗ್ಗೆ ಗಮನ ಕೊಟ್ಟದು ಕಾಣುತ್ತಿಲ್ಲೆ.
ಧಾರ್ಮಿಕ ವಿಷಯಂಗಳ ಬಗ್ಗೆ ಮಠ ಇದ್ದು, ಗುರುಗೊ ಇದ್ದೊವು, ಒಳ್ಳೆ ಕೆಲಸ ನೆಡೆತ್ತಾ ಇದ್ದು. ಭಾಷಾವಿಚಾರದ ಬಗ್ಗೆ ಹವ್ಯಕ ಒಕ್ಕೂಟಂಗಳೇ ಆಸಕ್ತಿ ವಹಿಸಿದರೆ ಒಳ್ಳೆದು. ಹವ್ಯಕ ಸಭಗಳಲ್ಲಿ ಹಪ್ಪಳ ಸಂಡಿಗೆಯ ಬದಲು ಹವಿಗನ್ನಡದ ಪುಸ್ತಕಂಗಳ ಪ್ರದರ್ಶನ, ಮಾರಾಟ ಮಾಡುವ ಬಗ್ಗೆ ಯೋಚನೆ ಮಾಡ್ಳೆ ಆಗದೊ?

ಸದ್ಯವೇ ವಿಶ್ವಕನ್ನಡ ಸಮ್ಮೇಳನ ನೆಡವಲಿದ್ದು. ವಿಶ್ವಕನ್ನಡ ಸಮ್ಮೇಳನಲ್ಲಿ ವಿಶಾಲ ಭಾವನೆ ಬೆಳೆಯಲಿ. ಕನ್ನಡದ ವಿವಿಧ ಪ್ರಭೇದಂಗಳೇ ಆದ ಉಪಭಾಷಗಳ(ಹವಿಗನ್ನಡವೂ ಸೇರಿ)ಬಗ್ಗೆ ಕನಿಷ್ಟ ಗಮನ ಸೆಳವ ಕೆಲಸವಾದರೂ ಆಗಲಿ!

23 thoughts on “ಒಂದು ಅನಿಸಿಕೆ: ಹವಿಗನ್ನಡ – ಸವಿಗನ್ನಡ

  1. ಹವಿಗನ್ನಡಲ್ಲಿ ಮಾತಾಡುವಾಗ ಹವಿಕರಲ್ಲದ್ದವರನ್ನೂ ಹೆಮ್ಮಕ್ಕಳನ್ನೂ “ಅದು” ಹೇಳಿ ಹೇಳ್ತದು ನವಗೆ ಅಭ್ಯಾಸ ಆದರೂ ಕೇಳುವವಂಗೆ ಅಸಮಧಾನ ಅಪ್ಪಲೆ ಸಾಧ್ಯ ಇಪ್ಪ ಕಾರಣ ನಾವು ಹಾಂಗಿಪ್ಪ ಪರಿಸ್ತಿತಿಲಿ ಆದಷ್ಟೂ ಹೆಸರೇ ಉಪಯೋಗ ಮಾದುಸ್ಸೊಳ್ಲೆದಲ್ಲದೋ?ಅದು ಸಾದ್ಃಯ ಆಗದ್ದಿಪ್ಪಗ,ಉದಾಹರಣಗೆ ಕೂಸುಗಳ ಪರಿಚಯ ಮಾಡುವಾಗ “ಇವು” ಹೇಳ್ತದರಲ್ಲೇನೂ ತಪ್ಪಿಲ್ಲೆನ್ನೆ?ಹವಿಕರಲ್ಲದ್ದವಿಪ್ಪಗ ಆದಷ್ಟು ಕನ್ನಡ ಅಥವಾ ಇನ್ನ್ಯಾವದೇ ಎಲ್ಲೋರಿಂಗೂ ಗೊಂತಿಪ್ಪ ಭಾಷೆಲಿ ಮಾತಾಡಿರೆ ರಗಳೆಯೇ ಇಲ್ಲೆದಾ.

  2. ಸರ್ಪಮಲೆ ಮಾವನ ಉತ್ತರ ಸಿಕ್ಕಿರೆ ಇನ್ನಣದ್ದರ ಬರೆತ್ತೆ, ಧನ್ಯವಾದಂಗೊ.

    1. ಬೊಳುಂಬು ಕೃಷ್ಣ ಭಾವಾ, ಆನು ಉತ್ತರ ಕೊಡೆಕ್ಕಾದ್ದು ಎಂತದೂ ಇಲ್ಲೆ.
      {ಈಗ ಕನ್ನಡ ಭಾಷೆ ಉಪಯೋಗುಸುವವು ವ್ಯಾಕರಣದ ಬಗ್ಗೆ ಗಮನ ಕೊಡ್ತವಿಲ್ಲೆ ಹೇಳಿರೆ ಆನು ಒಪ್ಪುವೆ} ಆನು ‘ವಾಕ್ಯಂಗಳೇ ಸರಿ ಇರುತ್ತಿಲ್ಲೆ’ ಹೇಳಿದ್ದು ಇದೇ ಅರ್ಥಲ್ಲಿ. ಭಾಷೆ ಇಲ್ಲದ್ದ ಸಾಹಿತ್ಯ ಹೇಳಿದ್ದು ಕೂಡಾ ಇದೇ ಅರ್ಥಲ್ಲಿ. ಸಾಹಿತಿಗೊ ವ್ಯಾಕರಣ ಪಂಡಿತರಾಗಿರೆಕು ಹೇಳಿ ಇಲ್ಲೆ. ಶಬ್ದಂಗೊ, ವಾಕ್ಯಂಗೊ ಸರಿ ಇಲ್ಲದ್ದ ಸಾಹಿತ್ಯ ಎಂತ ಸಾಹಿತ್ಯ?
      {ಏವದೇ ಭಾಷಗಾದರೂ ಅದರದ್ದೇ ಆದ ಹುಟ್ಟುಗುಣ ಇರ್ತು} ಆನು ಬರದ ವಾಕ್ಯ ಹೀಂಗಿದ್ದುಃ ‘ಪ್ರತಿಯೊಂದು ಭಾಷಗೂ ಅದರದ್ದೇ ಆದ ವೈಶಿಷ್ಟ್ಯ ಇರುತ್ತು.’ ಆದ ಕಾರಣ ‘ಅದು’ ಹೇಳುವ ಪ್ರಯೋಗ ನಮ್ಮ ಭಾಷೆಯ ‘ಹುಟ್ಟುಗುಣ’ ಹೇಳಿದರೆ ಒಪ್ಪುತ್ತೆ. ಆದರೆ ಕೆಲವು ಸಂದರ್ಭಲ್ಲಿ ಅದು ಹೇಂಗೆ ತಪ್ಪು ಕಲ್ಪನೆಗೆ ಎಡೆ ಮಾಡುತ್ತು ಹೇಳಿ ಒಂದೆರಡು ಜೆನ ವಿವರಿಸಿದ್ದವು.
      ಕನ್ನಡಲ್ಲಿ ಅಥವಾ ನಮ್ಮ ಭಾಷೆಲಿ ಯೋಚನೆ ಮಾಡಿ ಅದೇ ರೀತಿ ಇಂಗ್ಲಿಷಿಲ್ಲಿ ವಾಕ್ಯ ಮಾಡಿ ಮಾತಾಡಿದರೆ ಸರಿ ಅಕ್ಕೇ? “ಇನ್ನೊದು ಭಾಷೆಲಿ ಯೋಚನೆ ಮಾಡಿ ನಮ್ಮದರಲ್ಲಿ ಉಪಯೋಗುಸುವದು ಸರಿಯಾದ ರೀತಿಯಲ್ಲ.” ಈ ಮಾತು ನೂರಕ್ಕೆ ನೂರು ಸರಿ.
      “ಕಾಂತಣ್ಣನೂ ಹೇಳಿದ್ದು ಇದನ್ನೇ.” — ಇದು ಮಾಂತ್ರ ಗೊಂತಾತಿಲ್ಲೆ. ಕಾಂತಣ್ಣ ಆರು, ಎಲ್ಲಿ ಹೇಳಿದ್ದು ಹೇಳಿ ಎನಗೆ ಗೊಂತಿಲ್ಲೆನ್ನೆ! ಇಲ್ಲಿ ಬಂದ ಪ್ರತಿಕ್ರಿಯೆಗಳಲ್ಲಿ ಕಾಂತಣ್ನನ ಕಾಣುತ್ತಿಲ್ಲೆನ್ನೆ!

      1. ಸರ್ಪಮಲೆ ಮಾವಾ,

        [ಕೆಲವು ಸಂದರ್ಭಲ್ಲಿ ಅದು ಹೇಂಗೆ ತಪ್ಪು ಕಲ್ಪನೆಗೆ ಎಡೆ ಮಾಡುತ್ತು ಹೇಳಿ ಒಂದೆರಡು ಜೆನ ವಿವರಿಸಿದ್ದವು.]
        ಮೇಗೆ ಆನು ಬರದ್ದರಲ್ಲಿ “ಹೆಮ್ಮಕ್ಕಳ ಏಕವಚನಲ್ಲಿ ಅವ- ಹೇಳಿ ಮಾಡಿಗೊಂಡರೆ ತಪ್ಪಿಲ್ಲೆ” ಹೇಳಿ ಇಪ್ಪದು.
        “ಹುಟ್ಟುಗುಣ” ಹೇಳ್ತ ಶಬ್ದವ ಆನು ಉಪಯೋಗುಸಿದ್ದು ಭಾಷಗೆ ಸಹಜವಾದ ಸಂರಚನೆ(structure) ಹೇಳುವ ಅರ್ಥಲ್ಲಿ.
        ಅವ- ಬಂದ- ಹೇಳಿ ಭಾಷಗೆ ಸಹಜವಾದ ಸಂರಚನಗೆ ಅಡ್ಡಿಯಾಗದ್ದ ಹಾಂಗೆ ಹೇಳಲೆಡಿಗು, ಆದರೆ ‘ಅದರೊಟ್ಟಿಂಗೆ’ ಹೇಳಿ ಇಪ್ಪದರ ಹೇಂಗೆ ಹೇಳೆಕ್ಕು? ‘ಅವಳೊಟ್ಟಿಂಗೆ’ ಹೇಳಲಕ್ಕು. ಅಲ್ಲಿ ಳ ಇದ್ದರೂದೇ ಇಲ್ಲದ್ದ ಹಾಂಗೆ ತಿಳ್ಕೊಳ್ಳೆಕ್ಕು ಅಥವಾ ಇಲ್ಲದ್ದರೂ ಇಪ್ಪ ಹಾಂಗೆ. 🙂

        ‘ಬೇರೆ ಜಾತಿಯವರ ಅದು ಹೇಳಲಾಗ’ ನಿಂಗೊ ಹಾಂಗೆ ಹೇಳ್ತರೆ ಅದಕ್ಕೆ ಎನ್ನ ಸಹಮತ ಇದ್ದು.

        [ಏವದೇ ಭಾಷಗಾದರೂ ಅದರದ್ದೇ ಆದ ಹುಟ್ಟುಗುಣ ಇರ್ತು. ಹಾಂಗಿಪ್ಪಗ ಕನ್ನಡದ ಹುಟ್ಟುಗುಣ ಕನ್ನಡಕ್ಕೂ ಇರೆಕ್ಕು]
        ಕನ್ನಡದ ಸಂರಚನಗೆ ತಕ್ಕ ಹಾಂಗೆ ಕನ್ನಡ ಭಾಷೆಯ ಪ್ರಯೋಗ ಆಯೆಕ್ಕು ಹೇಳಿ ಅದರ ಸಾರ. ಬೇರೆ ಭಾಷಗಳ ಅನುಕರಣೆ ಮಾಡುವ ವಿಷಯವನ್ನೂ ಹೇಳಿದ್ದೆ. ನಮ್ಮ (ಕನ್ನಡದ) ವ್ಯಾಕರಣವ ಇನ್ನೊಂದರಿ ಮುರುದು ಕಟ್ಟೆಕ್ಕಾದ ಆವಶ್ಯಕತೆ ಇದ್ದು.

        ಅಲ್ಲದ್ದೆ ‘ಮುರಿವದು’ ಹೇಳಿರೆ ಬಗ್ಗುಸುವದು ಹೇಳ್ತ ಅರ್ಥ ಈಗ ಆರಿಂಗೂ ಗೊಂತಿಲ್ಲೆ. ‘ತುಂಡುಮಾಡುವದು’ ಹೇಳುವ ಅರ್ಥಲ್ಲಿ ಇಪ್ಪದು ‘ಮುಱಿವದು’, ಅದು ಶಕಟರೇಫ. ‘ಎಡಮುರಿ’, ‘ಬಲಮುರಿ’ ಎಡಕ್ಕೋ ಬಲಕ್ಕೋ ಬಗ್ಗಿಗೊಂಡಿಪ್ಪ ಕಾರಣ ಹಾಂಗೆ ಹೇಳ್ತದು.

        ಕನ್ನಡಕ್ಕೆ ಱ, ೞ ಅಕ್ಷರಂಗೊ ಬೇಕು ಹೇಳಿ ಎನ್ನ ವಾದ. ಣವುದೇ ನವುದೇ ಆದಮತ್ತೆ ಬಪ್ಪ ಅನುಸ್ವಾರವನ್ನೂ ಒಡದರೆ ತೊಂದರೆಯಾಗ. (ತೊನ್ದರೆ, ಕಣ್ಡಿತ, ಹೇಳ್ತಹಾಂಗೆ.) ಶಂಕರ ಭಟ್ಟರ ವಾದಂಗೊ ಮತ್ತದಕ್ಕೆ ಎನ್ನ ಪ್ರತಿವಾದಂಗಳ ಕೆಳಕಾಂಬ ಸಂಕೋಲೆಲಿ ನೇತರೆ ನೋಡಲಕ್ಕು:
        http://sampada.net/blog/aniljoshi/13/02/2011/30419#comment-135342

        [ಕನ್ನಡಲ್ಲಿ ಅಥವಾ ನಮ್ಮ ಭಾಷೆಲಿ ಯೋಚನೆ ಮಾಡಿ ಅದೇ ರೀತಿ ಇಂಗ್ಲಿಷಿಲ್ಲಿ ವಾಕ್ಯ ಮಾಡಿ ಮಾತಾಡಿದರೆ ಸರಿ ಅಕ್ಕೋ?]
        ಇಂಗ್ಲೀಷಿಲಿ ಮಾತಾಡುವಗ ಆದಷ್ಟು ಇಂಗ್ಲೀಷಿಲಿ ಆಲೋಚಿಸುವ ಪ್ರಯತ್ನ ಮಾಡೆಕ್ಕು. ಆದರೂ ನಾವು ಇಂಗ್ಲೀಷಿನ ಮೂಲದವಲ್ಲನ್ನೇ? 🙂

        ಕಾಂತಣ್ಣನ ಬಗ್ಗೆ ಪೂರ್ತಿ ವಿವರ ಗೊಂತಾಯೆಕ್ಕಾರೆ ಕೆಳಕಾಂಬ ಸಂಕೊಲೆಲಿ ನೇಲೆಕ್ಕು:
        https://oppanna.com/nerekare/geervaanee
        ಮತ್ತೆ ಆನು ಹೇಳಿದ ಅವರ ಮಾಯುಗೊ ಇಪ್ಪದು ಇಲ್ಲಿ:
        https://oppanna.com/lekhana/siriramana/bhashe-bhava

  3. ಸರ್ಪಮಲೆ ಮಾವಾ,
    [ಈಗ ಭಾಷೆ ಬೇರೆ, ಸಾಹಿತ್ಯ ಬೇರೆ ಹೇಳುತ್ತವು; ವಾಕ್ಯಂಗಳೇ ಸರಿ ಇರುತ್ತಿಲ್ಲೆ; ಹೇಳಿರೆ ಈಗಾಣ ಸಾಹಿತ್ಯ ಭಾಷೆ ಇಲ್ಲದ್ದ ಸಾಹಿತ್ಯ.]
    ಈಗ ಕನ್ನಡ ಭಾಷೆ ಉಪಯೋಗುಸುವವು ವ್ಯಾಕರಣದ ಬಗ್ಗೆ ಗಮನ ಕೊಡ್ತವಿಲ್ಲೆ ಹೇಳಿರೆ ಆನು ಒಪ್ಪುವೆ. ಮೊದಲಾಣದ್ದು ವಿಭಕ್ತಿಪ್ರತ್ಯಯಂಗೊ. ವಿಭಕ್ತಿಪ್ರತ್ಯಯಂಗಳೇ ಕನ್ನಡಲ್ಲಿ ಬೇಕಾವುತಿಲ್ಲೆ ಹೇಳ್ತವು ಇದ್ದವು. ಸೇಡಿಯಾಪು ಕೃಷ್ಣಭಟ್ಟರು ಈ ವಿಷಯದ ಬಗ್ಗೆ ‘ವಿಚಾರ ಪ್ರಪಂಚ’ ಹೇಳ್ತ ಪುಸ್ತಕಲ್ಲಿ ಬರದ್ದದು ಎನಗೆ ಎನ್ನ ಒಬ್ಬ ಸ್ನೇಹಿತನ ಮೂಲಕ ಓದಲೆ ಸಿಕ್ಕಿತ್ತು. ಆ ವಿವರಂಗಳ ಇನ್ನೊಂದರಿ ಹೇಳ್ತೆ.

    ಇನ್ನೊಂದು ವಿಷಯ ಹೇಳಲೆ ಇಪ್ಪದು – ಏವದೇ ಭಾಷಗಾದರೂ ಅದರದ್ದೇ ಆದ ಹುಟ್ಟುಗುಣ ಇರ್ತು. ಹಾಂಗಿಪ್ಪಗ ಕನ್ನಡದ ಹುಟ್ಟುಗುಣ ಕನ್ನಡಕ್ಕೂ ಇರೆಕ್ಕು. “ನಮ್ಮಲ್ಲಿ ಎಷ್ಟಿದೆ ಅಷ್ಟನ್ನೂ ತೆಗೆದುಕೊಂಡು” ಹೀಂಗಿಪ್ಪ ಪ್ರಯೋಗಂಗೊ ಈಗ ಈಗ ಹೆಚ್ಚಾಗಿಯೊಂಡಿದ್ದು. ಅದು ಹಿಂದಿಂದ ನೇರ ಅನುವಾದ ಮಾಡುವ ರೀತಿ. ಇನ್ನೊದು ಭಾಷೆಲಿ ಯೋಚನೆ ಮಾಡಿ ನಮ್ಮದರಲ್ಲಿ ಉಪಯೋಗುಸುವದು ಸರಿಯಾದ ರೀತಿಯಲ್ಲ. ಕಾಂತಣ್ಣನೂ ಹೇಳಿದ್ದು ಇದನ್ನೇ.

    ಕೇಶಿರಾಜ ಹೇಳಿದ್ದು ನೋಡಿ: ಆವನಧಿಕಪುಣ್ಯನವನೇ ಸೇವ್ಯಂ – ಇದು ಸಂಸ್ಕೃತಾನುಕರಣೆಯ ವಾಕ್ಯ ಹೇಳಿಗೊಂಡು.
    ಬಿಡುಸಿ ಬರದರೆ ಹೀಂಗಾವುತ್ತು. ಆವನ್+ಅಧಿಕ+ಪುಣ್ಯನ್+ಅವನೇ+ಸೇವ್ಯಂ
    ‘ಯಾವನು ಗೆಯ್ವನೋ ಅವನು ಉಣ್ಣುವನು’
    ಸಂಸ್ಕೃತಾನುಕರಣೆ ಮಾಡ್ಲಾಗ ಹೇಳಿ ಕೇಶಿರಾಜ ಉದಾಹರಣೆ ಕೊಟ್ಟದು. ಸಂಸ್ಕೃತದ ಶಬ್ದಂಗಳ ಉಪಯೋಗ್ಸಲಾಗ ಹೇಳಿ ಅಲ್ಲ, ‘ಸಂಸ್ಕೃತದ ಸಂರಚನೆಗೆ ತಕ್ಕ ಹಾಂಗೆ ಕನ್ನಡಲ್ಲಿ ವಾಕ್ಯಗಳ ಕಟ್ಟುಲಾಗ’ ಹೇಳಿ ಕೇಶಿರಾಜನ ಅಭಿಮತ. ಈಗಾಣ ಟಿವಿ ಚಾನಲುಗಳಲ್ಲಿ ಅಪ್ಪದು ಹಿಂದಿಯ ಅನುಕರಣೆ.

    ಒಳುದ್ದದರ ಇನ್ನೊಂದರಿ ಹೇಳ್ತೆ, ಸಿಕ್ಕುವೊ°…

  4. ಮಾವ,

    ಪ್ರಬುದ್ಧ ಬರಹ. ನಿಜ,ನಮ್ಮ ಭಾಷೆಲಿ ಸಾಹಿತ್ಯಕ್ಕೆ ಪ್ರೋತ್ಸಾಹ ಸಿಕ್ಕಿದ್ದು ಕಮ್ಮಿಯೇ.ಆನು ಬಾಳಿಲ ಪರಮೇಶ್ವರ ಭಟ್ತರು ಬರದ ಮಹಾಭಾರತ ಕಾವ್ಯವ ಓದಿ ಇದೇ ಮಾತಿನ ಗ್ರೇಶಿತ್ತಿದ್ದೆ.ಎಷ್ಟು ಲಾಯಿಕ ಇಪ್ಪ ಆ ಸಾಹಿತ್ಯ ಕೃತಿಯ ವಿಷಯ ಬಹುಶ್ಶ ನಮ್ಮಲ್ಲಿ ಹೆಚ್ಚಿನವಕ್ಕೆ ಗೊ೦ತಿರ. ಪ್ರೋತ್ಶಾಹ ಸಿಕ್ಕಿರೆ ಕವಿಗಳ ಉತ್ಸಾಹ ವೃದ್ಧಿಯೂ ಅಕ್ಕು,ಕೃತಿಗಳೂ ಹೆಚ್ಚಕ್ಕು,ಭಾಷೆಯೂ ಬೆಳಗು.

    {ನಮ್ಮ ಭಾಷಗೆ ಬೆಳವಣಿಗೆಯ ಸಾಮರ್ಥ್ಯ ಇದ್ದರೂ, ಕೆಲವು ಜೆನ ವೈಯಕ್ತಿಕ ಆಸಕ್ತಿಂದ ಸಾಧನೆ ಮಾಡಿದ್ದರೂ (ನಮ್ಮ ಒಪ್ಪಣ್ಣನ ಕೆಲಸ ಒಳ್ಳೆ ಉದಾಹರಣೆ) ಸಮಾಜ ಒಟ್ಟಾಗಿ ಇದರ ಬಗ್ಗೆ ಗಮನ ಕೊಟ್ಟದು ಕಾಣುತ್ತಿಲ್ಲೆ.}.ಒಪ್ಪಣ್ಣನ ಪ್ರಯತ್ನವ ಎಷ್ಟು ಬರದರೂ ಮುಗಿಯ ಮಾವ.ಸಮಾಜ ಹೇಳಿರೆ ನಾವೇ ಅಲ್ಲದೋ? ಬೈಲಿಲಿ ಇಪ್ಪ ಒಪ್ಪಣ್ಣನ ಒಪ್ಪ ಲೇಖನ೦ಗಳ ಮುದ್ರಣ ಮಾಡಿರೆ ನಮ್ಮ ಸಮಾಜದ ಆಸಕ್ತರೆಲ್ಲೋರಿ೦ಗೂ ತಲುಪುಗು.ಅಭಿರುಚಿ ಬೆಳಗು,ಬರವವ್ವೂ ಹೆಚ್ಚು ಜೆನ ಹುಟ್ಟಿಗೊ೦ಗು. ಈ ಯೋಚನೆ ತಲೆಲಿ ಇದ್ದು,ಬೇಗಲ್ಲಿ ನಿಜ ಆಯೆಕ್ಕು ಹೇಳುವ ಆಸೆಯೂ ಇದ್ದು.
    ಹಿರಿಯರು ಮಾರ್ಗದರ್ಶನ ಮಾಡೊದು ಹೇಳಿರೆ ಹೇಳಿರೆ ಹೀ೦ಗೆ,ಈ ಲೇಖನ ಒ೦ದು ಉದಾಹರಣೆ.ಧನ್ಯವಾದ ಮಾವ.

    1. ರಘುಭಾವಾ.. ಈ ಬಾಳಿಲ ಪರಮೇಶ್ವರ ಭಟ್ರು ಎನ್ನ ಸೋದರಮಾವ°.. ಆದರುದೆ ಎನಗೆ ಇಷ್ಟರವರೇ೦ಗುದೆ ನಿ೦ಗೊ ಸೂಚಿಸಿದ ಪುಸ್ತಕವ ಓದಲೆ ಆಯಿದಿಲ್ಲೆ.. 🙁
      ಈಗ ಮಾರ್ಚಿಲ್ಲಿ ಊರಿ೦ಗೆ ಬಪ್ಪಗ ಎಡಿಗಾದರೆ ಓದಿ ನೋಡೆಕು ಹೇಳಿ ಇದ್ದು..

      1. ಬಾಳಿಲ ಪರಮೇಶ್ವರ ಭಟ್ರು ಬರದ “ಧರ್ಮ ವಿಜಯ” ಹೇಳ್ತ ಈ ಪುಸ್ತಕವ ಆನು ಪೂರ್ತಿ ಓದಿದ್ದೆ. ಹವ್ಯಕ ಭಾಷೆಲಿ ಮಹಾಭಾರತ ಕತೆಯ ಲಾಯಕಿಲ್ಲಿ ವಿವರುಸಿದ್ದವು. ಕತೆ ಓದುವಗ ಮಹಾಭಾರತ, ಹವ್ಯಕ ಮನೆಯ ಕಥೆಯ ಹಾಂಗೆ ಅನಿಸುತ್ತು. ಪಾಂಡವ/ಕೌರವರ ಜಗಳ ಓದುವಗ ನಮ್ಮ ಮನೆಗಳ ಪಾಲು ಪಂಚಾಯ್ತಿ ನೆಂಪಿಂಗೆ ಬತ್ತು. ನಮ್ಮ ಬೈಲಿನವು ಎಲ್ಲೋರು ಓದೆಕಾದ ಒಳ್ಳೆ ಪುಸ್ತಕ ಇದು.

        1. ಹಳೆಹಿತ್ತಿಲು ಶಂಕರನಾರಾಯಣ ಭಟ್ಟ ಹೇಳುವವ್ವು ‘ಹೈಗ ಭಾರತ’ ಹೇಳಿ ಬರದ್ದವಡ. ಎನ್ನ ಒಬ್ಬ ಮಾವನ ಸಂಗ್ರಹಲ್ಲಿ ಇದ್ದದು. ಆದರೆ ಅದು ಅಸಂಪೂರ್ಣ. 🙁
          ಬರದಷ್ಟು ಭಾಗ ತುಂಬಾ ಲಾಯ್ಕಿದ್ದು.
          ‘ಧರ್ಮ ವಿಜಯ’ ಪುಸ್ತಕ ನಿಂಗಳತ್ರ ಇದ್ದ ಮಾವ?

          1. ಖಂಡಿತಾ ಇದ್ದು. ಓದೆಕಾರೆ ಕೊಡ್ಳಕ್ಕು. ಬೇರೆ ಪ್ರತಿ ಕ್ರಯ ಕೊಟ್ಟು ತೆಕ್ಕೋಳ್ತ ಅಂದಾಜು ಇದ್ದರೆ ತರುಸಿ ಬೇಕಾರೆ ಕೊಡ್ಳಕ್ಕು. ಸಿಕ್ಕುತ್ತೋ ನೋಡೆಕಷ್ಟೆ.

  5. (ನಮ್ಮ ನೆರೆಕರೆಲಿ ನಮ್ಮ ಭಾಷೆ ನಮ್ಮ ಹಾಂಗೇ ಮಾತಾಡುವ..) ಖಂಡಿತ ಅಪ್ಪು. ಹೆಚ್ಚಿಗೆ ಹೇಳ್ತರೆ- ಅವು ಕನ್ನಡ ಮಾತಾಡುದರಿಂದ ಲಾಯ್ಕಲ್ಲಿ ನಮ್ಮ ಭಾಷೆಯ ಮಾತಾಡ್ತವು. ಬೇಕಾರೆ ನಮ್ಮ ಬೈಲಿಲ್ಲೇ ಇಪ್ಪ ಬಟ್ಯನನ್ನೋ ಸುಂದರಿಯನ್ನೋ ಕೇಳಿನೋಡಿ..!! 😉
    –ಈ ಪರಿಸ್ಥಿತಿಲಿ ನಾವು ಇನ್ನಾದರೂ ಇತರರ(ಹವ್ಯಕೇತರರ) ಸಂಭೋದಿಸುವಗ ’ಅದು’ಹೇಳುವದರ ಬಿಟ್ಟು ’ಅವ*”ಹೇಳುವದು ರಜ ಒಳ್ಳೆಯದು ಹೇಳಿ ಎನ್ನ ಅಭಿಪ್ರಾಯ-ಬಯಲಿನವರ ಅನಿಸಿಕೆ ಹೇಂಗೊ??

    1. ಈಗ ವಿದ್ಯಾವಂತರಲ್ಲಿ ಎಷ್ಟೋ ಜೆನ ‘ಅವ°’ ಹೇಳಿ ಮಾತಾಡುತ್ತವು. ಆದರೆ ಎಲ್ಲೋರೂ ಈ ರೀತಿ ಬದಲಾಯೆಕಾದರೆ ತುಂಬಾ ವರ್ಷ ಬೇಕಕ್ಕು. ಸಣ್ಣ ಇಪ್ಪಗ ಲಾಗಾಯಿತು ‘ಅದು’ ಹೇಳಿಯೇ ಅಭ್ಯಾಸ ಆದವಕ್ಕೆ ‘ಅವ°’ ಹೇಳಿ ಮಾತಾಡ್ಳೆ ರಜ ಕಷ್ಟ ಅಕ್ಕು. ಎಷ್ಟೇ ಪ್ರಯತ್ನ ಮಾಡಿದರೂ, ಅಭ್ಯಾಸ ಬೇಗ ಬಿಟ್ಟು ಹೋಗ. ನಾವು ಮಕ್ಕೊಗೆ ಎಲ್ಲೋರನ್ನೂ ‘ಅವ°’ ಹೇಳಿಯೇ ಹೇಳೆಕ್ಕು, ‘ಅದು’ ಹೇೞೆ ಆಗ ಹೇಳಿ ಕಲಿಶಿದರೆ, ಮುಂದಾಣ ಪೀಳಿಗೆಲಿ ಸರಿ ಅಕ್ಕು. ಅದೇ ರೀತಿ ಹವ್ಯಕೇತರ ಹಿರಿಯರ ‘ನಿಂಗೊ’, ‘ಅವು’ ಹೇಳಿ ಹೇಳೆಡದೊ?ಪೇಟೆಲಿ ಕೆಲವು ಜೆನ ನಾಯಿಯ ಕೂಡಾ ‘ಅವ°’, ‘ಇವ°’ ಹೇಳುವದರ ಕೇಳಿದ್ದೆ.
      ನಮ್ಮ ಭಾಷೆಲಿ ಸ್ತ್ರೀ ಲಿಂಗ ಇಲ್ಲೆನ್ನೆ; ಹೆಮ್ಮಕ್ಕಳ ‘ಅದು’ ಹೇಳಿಯೇ ಹೇಳೆಕ್ಕಾವುತ್ತನ್ನೆ! ಪ್ರತಿಯೊಂದು ಭಾಷಗೂ ಅದರದ್ದೇ ಆದ ವೈಶಿಷ್ಟ್ಯ ಇರುತ್ತು. ಹಿಂದಿಲಿ ಸ್ತ್ರೀ ಲಿಂಗ, ಪುಲ್ಲಿಂಗ ಎರಡೆ ಇಪ್ಪದನ್ನೆ!
      ಆದರೆ ‘ಅದು’ ಹೇಳುವದು ಜಾತಿ ಆಧಾರಿತ ಅಲ್ಲ ಹೇಳಿ ಸಾಧಿಸಲೆ ಸಾಧ್ಯ ಇಲ್ಲೆ. ಹವ್ಯಕರಲ್ಲದ್ದವು ಎದುರ ಇಪ್ಪಗ ‘ಅದು’ ಹೇಳುವ ಶಬ್ದ ಉಪಯೋಗಿಸಿರೆ, ಅವಕ್ಕೆ ಹೇಂಗೆ ಅಕ್ಕು?

      1. ಒಪ್ಪುತ್ತೆ ಭಾವ,ಬದಲಾವಣೆಗೆ ಸಮಯ ಬೇಕು,ಆದರೆ ನಮ್ಮ ಬಯಲಿಲ್ಲಿ ಒಪ್ಪ ಬರವಗಳುದೆ ಹವ್ಯಕೇತರರ ’ಅದು’ ಹೇಳಿ ಸಂಬೋಧಿಸಿ ಬರವದು ನೋಡಿಯಪ್ಪಗ ಎನಗೆ ನಮ್ಮ ಬಗ್ಗೆಯೆ ಒಂಥರಾ ’ಕೀಳುರಿಮೆ’ ಬಂದ ಹಾಂಗೆ ಆತು.ಆನು ಎನ್ನ ಎರಡು ಜನ ಮಕ್ಕೊಗು ’ಅದು’ ಹೇಳುವ ಸಂಬೋಧನೆ ಕಲಿಸಿದ್ದಿಲ್ಲೆ,ಹೆಂಡತಿಯನ್ನೂ (ಕಷ್ಟಂದ) ತಿದ್ದುತ್ತಾ ಇದ್ದೆ.ಆದರೆ ಸ್ತ್ರೀ/ನಪುಂಸಕ ಲಿಂಗ ಒಂದೇ ಆದ ಕಾರಣ ಕೂಸುಗಳ/ಮಹಿಳೆಯರ ’ಅದು’ ಹೇಳಿಯೇ ಸಂಬೋಧಿಸಕಾವುತ್ತು,ಅಕ್ಕಂದಿರ ಎಲ್ಲ ’ಅವು/ನಿಂಗೊ’ ಹೇಳಿದರೆ ಆತ್ಮೀಯತೆಯೇ ಹೋದ ಹಾಂಗೂ ಅನುಸುತ್ತು.

        1. @ ಶಂಕರ್
          ಹುಟ್ಟು, ಸಾವು , ವಾಹನ ಅಪಘಾತಂಗೋ ,ಪ್ರಕೃತಿ ವಿಕೊಪಂಗಳ ಬಿಟ್ಟರೆ; ಸರ್ಪಮಲೆ ಭಾವ ಹೇಳಿದ ಹಾಂಗೆ ಬದಲಾವಣೆ ಬರೆಕ್ಕಾರೆ ತಲೆಮಾರುಗಳಸ್ತು ಸಮಯ ಬೇಕಾವುತ್ತು. ನಾವು ಪ್ರತಿಯೊಬ್ಬನು ನಮ್ಮ ಮನೆಗಳಲ್ಲಿ ಈ ತರದ ಬದಲಾವಣೆಯ ತನ್ದಪ್ಪಗ ಸಮಾಜವೇ ಬದಲಾವುತ್ತು. ನಮ್ಮ ಹೆರಿಯೋರ ನವಗೆ ಬದಲುಸುಲೆ ಕಷ್ಟ. ಅವಾಗಿ ಬದಲಾವಣೆಗಳ ಒಪ್ಪಿಗೋಳ ದ್ದರೆ ನಾವು ಬದಲುಸುಲೆ ಹೋಪದು ಸಾಧುವಲ್ಲ ಹೇಳಿ ಎನ್ನ ಅಭಿಪ್ರಾಯ.ನಿಂಗೋ ಹೇಳಿದ ಹಾನ್ಗಿಪ್ಪ ಬದಲಾವಣೆಗಳ ಎಂಗೋ ಮಕ್ಕೊಗೆ ಕಲಿಶಿದ್ದೆಯೋ.ಎನ್ಗಲದ್ದು ಹಳ್ಳಿ ಮನೆ .ಆಳೋಗಳನ್ನು ಮಕ್ಕಳಹತ್ತರೆ ಹೇಳುವಾಗ ಅವ ಇವ ಹೇಳಿಯೇ ಸಂಭೋಧಿಸುದು.
          ನಿಂಗೋ ಇಲ್ಲಿ ಈ ವಿಚಾರವ ವ್ಯಕ್ತ ಪಡಿಸಿದ್ದು ಎನಗೆ ತುಂಬ ಖುಷಿ ಆತು. ಈ ತರದ ಹಲವು ವಿಚಾರಂಗಳ ತಲೆಲಿ ಮಾಡಿಕೊಂಡು ಆನು ಮೊನ್ನೆ ” ಆದರೆ ನಮ್ಮದು ಹೇಳುವ ಸನ್ಕುಚಿತ ಮನ್ನೊಭಾವನೆ ಇಲ್ಲಿ ಬೆಳವಲಾಗ. ನಮ್ಮ ಭಾಶೆ ,ನಮ್ಮ ಸಮ್ಸ್ಕ್ರಿತಿ,ನಮ್ಮ ಆಚಾರ ವಿಚಾರಲ್ಲಿ ಅಭಿಮಾನ ಇರಲಿ .ಆದರೆ ಇನ್ನೊಬ್ಬರದ್ದರಕ್ಕೆ ಬೆಲೆ ಕೊಡದಸ್ತು ಅನ್ಧಕಾರ ಇಪ್ಪಲಾಗ”. ಹೇಳಿ ಪರೋಕ್ಷವಾಗಿ ಒಂದು ಸಲಹೆ ಕೊಟ್ಟಿತಿದ್ದೆ . ‘ ಅವರ ಹಾಂಗೆ’ ‘ಇವರ ಹಾಂಗೆ’ ಹೇಳಿ ನಾವು ಹವ್ಯಕೇತರರ ಉದಾಹರಣೆ ತೆಕ್ಕೊಂಡು ಹೇಳುದು ಬೇಡ ಹೇಳಿ ಆನು ಹೇಳಿದ ಅರ್ಥ . ನಾವು ನಮ್ಮದರ ಗೌರವಿಸುವ ಹಾಂಗೆ ಅವು ಅವರ ಅಚಾರಂಗಳ ಗೌರವಿಸುತ್ತವಲ್ಲದ ? ನವಗೆ ನಮ್ಮೊರ ಅಥವಾ ಬೇರೆಯೋರ ಕೆಲವು ಕ್ರಮ ಹಿಡಿಸದ್ದರೆ ನಾವು ನೋಡುವ ದೃಸ್ತಿಕೊನಲ್ಲಿ ಅದು ತಪ್ಪಾಗಿ ಕಾನ್ಥಸ್ತೆ ವಿನಃ ಅದು ಅವರ ತಪ್ಪಲ್ಲ ಹೇಳಿ ಆನು ಗ್ರೆಶುದು ..

      2. ಎನಗೆ ಈ ತರದ ಒಂದು ಅನುಭವ ಆಯಿದು. ಎನ್ನ ಮಗಳು ಅದರ ಹವ್ಯಕೇತರ ಗೆಳತಿಯರ ಎಂಗಳ ಮನಗೆ ಕರಕ್ಕೊಂಡು ಬಂದಿಪ್ಪಗ ” ಅಮ್ಮ ಇದು ಮಾಲತಿ ಅದು ದಿವ್ಯ” ಹೇಳಿ ಪರಿಚಯ ಮಾಡಿ ಕೊಟ್ಟತ್ತು” ಏನೇ ನಮ್ಮನ್ನು ಅದು ಇದು ಅಂತಿಯಾ”? ಹೇಳಿ ಆಕೂಸು ಕುಶಾಲಿನ್ಗೆ ಮಗಳ ದಬಾಯಿಸಿತ್ತು. ಅಸ್ತಪ್ಪಗಳಲೇ ಆನು ಒಂದು ವಿಚಾರಕ್ಕೆ ಬಂದೆ. ಹವ್ಯಕೀತರ ಕನ್ನಡಿಗರಿಪ್ಪಗ ನಾವು ನಮ್ಮ ಮನೇಲಿ ಆದರುದೆ ಕನ್ನಡ ಮಾತಾಡುದು ಒಳ್ಳೇದು ಹೇಳಿ( ಒಟ್ಟಿಲಿ ಹೇಳ್ತಾರೆ ಆ ಸಂದರ್ಭಲ್ಲಿ ನವಗೂ ಅವಕ್ಕೂ ಗೊಂತಿಪ್ಪ ಭಾಷೆ ಮಾತಾಡುದು ಒಳ್ಳೇದು)

        1. ನಿ೦ಗೊ ಹೇಳಿದ್ದು ಒ೦ದು ಭಾರೀ ಒಳ್ಳೆ ಪಾಯಿ೦ಟ್.. ಯಾವತ್ತೂ ನಾವು ಒ೦ದು ಗು೦ಪಿಲ್ಲಿ ಇದ್ದರೆ, ಎಡಿಗಾದಷ್ಟೂ ಎಲ್ಲೋರಿ೦ಗುದೆ ಅರ್ಥ ಆವ್ತ ಭಾಷೆಲಿಯೇ ಮಾತಾಡೆಕು ಹೇಳುವದು ಒ೦ದು ಅಲಿಖಿತ ನಿಯಮ. ಅದು ನಮ್ಮ ಒಟ್ಟಿ೦ಗೆ ಇಪ್ಪವರ ಗೌರವಿಸುವ ರೀತಿಯೂ ಅಪ್ಪು..

      3. ಸರ್ಪಮಲೆ ಮಾವಾ,
        ಹೆಮ್ಮಕ್ಕಳ ಏಕವಚನಲ್ಲಿ ಅವ- ಹೇಳಿ ಮಾಡಿಗೊಂಡರೆ ತಪ್ಪಿಲ್ಲೆ. ಸಾಗರದ ಹವ್ಯಕರ ನಡುವೆ ಹಾಂಗೇ ಇಪ್ಪದು. ಅವನ್ = ಅವ°, ಇದು ಪುಲ್ಲಿಂಗ ಆತು. ಇಲ್ಲಿ ಒಂದು ಅನುನಾಸಿಕ (nasal) ಇದ್ದು. ಅವ- ಹೇಳುವಲ್ಲಿ ಅನುನಾಸಿಕ ಇಲ್ಲೆ. ಅವಳ್ = ಅವ-, ಇದು ಸ್ತ್ರೀಲಿಂಗ. ಬೇರೆ ದ್ರಾವಿಡ ಭಾಷೆಗಳ ಕುರಿತು ಇಲ್ಲಿ ಹೇಳಲೆ ಹೆರಡುತ್ತಿಲ್ಲೆ. 🙂
        ಉದಾ:
        ಅವ- ಬಂದ-. ಅವ ಆದಮತ್ತೆ ಒಂದು pause ಕೊಡೆಕ್ಕಾವುತ್ತು.
        ಅವ° ಬಂದ°. ಇಲ್ಲಿ ನಿಲ್ಲುಸಿ ಉಚ್ಚರುಸೆಕ್ಕಾದ್ದಿಲ್ಲೆ.

        ಹೋದವ° > ಹೋದವ-
        ಬಂದವ° > ಬಂದವ-

        ಆರು ಹೋದವ° > ಆರು ಹೋದವ-
        ಆರು ಬಂದವ° > ಆರು ಬಂದವ-

        ಲೊಟ್ಟೆ: ಹೋದೋಳು, ಬಂದೋಳು – ಹೀಂಗುದೇ ಹೇಳ್ತರೆ ಅಡ್ಡಿಯಿಲ್ಲೆ. ಆದರೆ ನಿರ್ದಿಷ್ಟವಾದ ಕ್ರಿಯೆಯೊಂದು ಇಲ್ಲದ್ದಿಪ್ಪಗ -ಓಳು ಹೇಳಲೆ ಎಡಿತ್ತಿಲ್ಲೆ. ನಿರ್ದಿಷ್ಟವಾದ ಕ್ರಿಯೆಯೊಂದು ಇಲ್ಲದ್ದರೂ ಅವ- ಹೇಳಿ ಹೇಳಲಾವುತ್ತು.

        ಅಜಕ್ಕಳ ಗಿರೀಶಣ್ಣ ಇಲ್ಲಿಯೇ ಒಂದರಿ ಇದಕ್ಕೆ ಸಂಬಂಧಪಟ್ಟ ಒಂದು ವಿಷಯ ಬರದ್ದವು.
        ಗಿರೀಶಣ್ಣನ ಮಾತಿಲಿ ಕೆಳ ಕಾಂಬ ಹಾಂಗೆ:

        “ನಮ್ಮ ಭಾಷೆಯ ಇನ್ನೊಂದು ವಿಶೇಷ ಹೇಳಿರೆ ಅಮ್ಮನ ಅಥವಾ ಹಿರಿ ಹೆಮ್ಮಕ್ಕಳ ಏಕವಚನಲ್ಲಿ ನೀನು ಹೋಗು ಹೇಳಿ ಎಲ್ಲ ಹೇಳಿರೂ “ಅಬ್ಬೆ ಹೇಳಿದ”, “ಅಬ್ಬೆ ಹೋದ” (ಇಲ್ಲಿ ಮೇಲೆ ಹಾಕುವ ಸಣ್ಣ ಸೊನ್ನೆಯ ಉಚ್ಚಾರ ಇಲ್ಲೆ) ಹೇಳಿ ಹೇಳುವ ಕ್ರಮ ಇತ್ತು ಹೊರತು ಹೋತು ಬಂತು ಹೇಳುವ ಕ್ರಮ ಇತ್ತಿಲ್ಲೆ. ಈಗಾಣ ಜವ್ವನಿಗರಿಂಗೆ ಅದು ಗೊಂತಿಲ್ಲದ್ದೆ ಇಪ್ಪಲೂ ಸಾಕು.”

        ಅವು ಹೇಳುವದು ಹಿರಿಯ ಹೆಮ್ಮಕ್ಕಳ ಬಗ್ಗೆ. ಆನು ಹೇಳಿದ್ದು ಎಲ್ಲಾ ಹೆಮ್ಮಕ್ಕಳ ಬಗ್ಗೆ.
        https://oppanna.com/bhashe/bhashe-bagge-kelavu-vishayango

  6. ಹವ್ಯಕ ಭಾಷೆಯ ಸರಿಯಾಗಿಯೇ ಹೇಳಿದ್ದವು ಸರ್ಪಮಲೆ ಮಾವ. ನಮ್ಮ ಭಾಷೆ, ಕನ್ನಡ ಭಾಷೆಗೆ ಪೂರಕವಾಗಿಯೇ ಇದ್ದು ಹೇಳ್ತದೂ ಸತ್ಯ. ಹವ್ಯಕ ಸಭೆಗಳಲ್ಲಿ ಹವ್ಯಕ ಭಾಷೆಗೆ ಆದಷ್ಟು ಪ್ರಾಮುಖ್ಯತೆ ಕೊಡೆಕು ಹೇಳ್ತದೂ ನಿಜ. ಹೆಚ್ಚಿನ ಕಾರ್ಯಕ್ರಮಂಗಳೂ ಹವ್ಯಕ ಭಾಷೆಲೇ ನೆಡೆತ್ತು. ಭಾಷಣಂಗಳೂ ಹೆಚ್ಚಾಗೆ ಹವ್ಯಕ ಭಾಷೆಲಿ ಇರುತ್ತು. ಒಂದೆರಡು ಸರ್ತಿ ಹವ್ಯಕ ಭಾಷೆಲಿ ಕವನ ವಾಚನವನ್ನೂ ನೆಡೆಸಿದ್ದೆಯೊ/ ನೆಡೆಸಿದ್ದವು. ಸಾಂಸ್ಕೃತಿಕ ಕಾರ್ಯಕ್ರಮಂಗಳಲ್ಲಿಯುದೆ ನಮ್ಮ ಭಾಷೆ ಇರುತ್ತು. ಹವ್ಯಕ ಸಾಹಿತ್ಯದ ಬಗ್ಗೆ ಚರ್ಚೆ, ಹವ್ಯಕ ಪುಸ್ತಕ ಮಾರಾಟದ ಬಗ್ಗೆ ಹವ್ಯಕ ಸಭೆಗಳಲ್ಲಿ ಅಳವಡಿಸೆಕು ನಿಜ. ಈ ವಿಚಾರಲ್ಲಿ ಹವ್ಯಕ ಸಭೆಗೆ ಖಂಡಿತಾ ತಿಳುಸುವೊ.

    ಹವ್ಯಕ ಸಭಗಳಲ್ಲಿ ಹಪ್ಪಳ ಸಂಡಿಗೆಯ ಒಟ್ಟಿಂಗೆ ಹವಿಗನ್ನಡದ ಪುಸ್ತಕಂಗಳ ಪ್ರದರ್ಶನ, ಮಾರಾಟ ಮಾಡುವ ಬಗ್ಗೆ ಯೋಚನೆ ಮಾಂತ್ರ ಅಲ್ಲ, ಕಾರ್ಯಗತ ಮಾಡ್ಳೆ ಬೇಕು.

  7. ನಮ್ಮ ಭಾಷೆಯ ಪುಸ್ತಕಂಗಳ ನಮ್ಮವರ ಸಭೆಲಿ ಪ್ರದರ್ಶಿಸುವ ಕಾರ್ಯ ಅಗತ್ಯವಾಗಿ ಆಯೆಕ್ಕು.ಸಂಘಟಕರಿಂಗೆ ನೆಂಪು ಮಾಡೆಕ್ಕು ಈ ವಿಷಯ.
    ನಾವು ಕನ್ನಡಿಗರಾಗಿಯೇ ಉಳಿದು ನಮ್ಮ ಭಾಷೆಯ ಅಭಿವೃದ್ಧಿಯನ್ನೂ ಮಾಡೆಕ್ಕು.

  8. ಲಾಯಿಕ ಆಯಿದು .’ ಕನ್ನಡದ ಉಟ್ಟು ಓರಾಟಗಾರಂಗ’ಳ ಏತ್ತಿ ಹಿಡುದ ವಾಕ್ಯ ಎನಗೆ ಎಲ್ಲದಕ್ಕಿನ್ಥ ಖುಶಿ ಆತು.

  9. ಸರ್ಪಮಲೆ ಮಾವ ಹೇಳಿದ ವಿಚಾರಂಗೊ ನೂರಕ್ಕೆ ನೂರರಷ್ಟು ಸತ್ಯ. ಇಲ್ಲಿ ಹೇಳಿದ ಕೆಲವೊಂದು ಅಂಶಂಗೊ ‘ಜನಗಣತಿ’ಲಿ ಭಾಷೆ ಬರಶುವ ಬಗ್ಗೆ ಚರ್ಚೆ ಅಪ್ಪಗ ಆನು ವ್ಯಕ್ತಪಡಿಸಿದ ಅಭಿಪ್ರಾಯಕ್ಕೆ ಪೂರಕವಾಗಿ ಬಂದದು ಕಂಡು ತುಂಬ ಕೊಶಿ ಆತು.

    ಹವಿಗನ್ನಡ ಭಾಷೆಯ ಆಳ-ಅಗಲದ ಚಿತ್ರಣವ ಆಧಾರಸಹಿತವಾಗಿ ಮಾಡಿಕೊಟ್ಟ ಮಾವಂಗೆ ಅಭಿನಂದನೆ, ಧನ್ಯವಾದ ಎರಡೂ..

    (ನಮ್ಮ ನೆರೆಕರೆಲಿ ನಮ್ಮ ಭಾಷೆ ನಮ್ಮ ಹಾಂಗೇ ಮಾತಾಡುವ..) ಖಂಡಿತ ಅಪ್ಪು. ಹೆಚ್ಚಿಗೆ ಹೇಳ್ತರೆ- ಅವು ಕನ್ನಡ ಮಾತಾಡುದರಿಂದ ಲಾಯ್ಕಲ್ಲಿ ನಮ್ಮ ಭಾಷೆಯ ಮಾತಾಡ್ತವು. ಬೇಕಾರೆ ನಮ್ಮ ಬೈಲಿಲ್ಲೇ ಇಪ್ಪ ಬಟ್ಯನನ್ನೋ ಸುಂದರಿಯನ್ನೋ ಕೇಳಿನೋಡಿ..!! 😉

  10. ಎನ್ನದೊಂದು ಓಟು ಇದ್ದು ಇದಕ್ಕೆ.

    ಸರ್ಪಮಲೆ ಮಾವ ಕೂದು ರಜಾ ಕೆಲ್ಸ ಮಾಡಿದ್ದವು ಇದರ ಸ್ಟಡಿ ಮಾಡ್ಲೆ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×