Oppanna.com

ದುಂಡಪ್ಪನ ಸಂಕಟ

ಬರದೋರು :   ಗೋಪಾಲಣ್ಣ    on   17/05/2011    14 ಒಪ್ಪಂಗೊ

ಗೋಪಾಲಣ್ಣ

ದುಂಡಪ್ಪ ಹಲವು ವರ್ಷ ಹೋರಾಟ ಮಾಡಿ ,ಪಕ್ಷ ಕಟ್ಟಿ ಬೆಳೆಶಿದ್ದವು .ಕಳೆದ ಸರ್ತಿ ಅವರ ಪಕ್ಷಕ್ಕೆ ಶಾಸನ ಸಭೆಲಿ ಬಹುಮತಕ್ಕೆ ಮೂರು ಸ್ಥಾನ ಕಮ್ಮಿ ಆಗಿಹೋತು.ಅಷ್ಟಪ್ಪಗ ಕೆಲವು ಪಕ್ಷೇತರರು ಅವಕ್ಕೆ ಬೆಂಬಲ ಕೊಟ್ಟು ಅವರ ಸರಕಾರ ಸ್ಥಾಪನೆ ಆತು .ಪಕ್ಷೇತರರು ಬೆಂಬಲ ಕೊಟ್ಟ ಮೇಲೆ ಅವರ ವಿರೋಧಪಕ್ಷಲ್ಲಿ ಇದ್ದ ಸದಸ್ಯರ ಸಂಖ್ಯೆ ಅವರ ಪಕ್ಷಕ್ಕೆ ಸುರುವಿಂಗೆ ಸಿಕ್ಕಿದ ಸ್ಥಾನದಷ್ಟೆ ಇದ್ದತ್ತು!

ಒಂದು ವರ್ಷ ಕಳೆದತ್ತು.

ಒಟ್ಟು ಶಾಸನ ಸಭೆಲಿ ಇದ್ದ ಸದಸ್ಯರ ಪೈಕಿ ,ಒಟ್ಟು ಸಂಖ್ಯೆಯ ವರ್ಗಮೂಲದಷ್ಟು ಜೆನಂಗೊ ದುಂಡಪ್ಪಂಗೆ ಬೆಂಬಲ ಇಲ್ಲೆ ಹೇಳಿ ರಾಜ್ಯಪಾಲಂಗೆ ಬರೆದು ಕೊಟ್ಟವು.

ವಿಶ್ವಾಸಮತಂದ ಮೊದಲು ವಿರೋಧ ಪಕ್ಷಂದ ೧೦ ಜೆನ ಶಾಸಕರುಅವರ ಸದಸ್ಯತನಕ್ಕೆ,ಪಕ್ಷಕ್ಕೆ ರಾಜೀನಾಮೆ ಕೊಟ್ಟು ,ದುಂಡಪ್ಪನ ಪಕ್ಷಕ್ಕೆ ಬಂದವು.ಅವರ ಶಾಸನಸಭೆ ಸದಸ್ಯತ್ವ ಹೋತು.

ಸ್ಪೀಕರ್ ಎಂತ ಮಾಡಿದವು?ಬೆಂಬಲ ಹಿಂದೆ ತೆಕ್ಕೊಂಡ ಶಾಸಕರನ್ನೂ ಅನರ್ಹ ಹೇಳೀ ಮಾಡಿದವು.

ಆದರೂ ವಿಶ್ವಾಸ ಮತಲ್ಲಿ ಎಡವಟ್ಟಾತು.ವಿರೋಧ ನಿಂತ ಶಾಸಕರ ಸಂಖ್ಯೆ ಪರವಾಗಿ ನಿಂತ ಶಾಸಕರ ಸಂಖ್ಯೆಂದ ಒಂದೇ ಒಂದು ಹೆಚ್ಚಾಗಿ ಹೋತು.ಸ್ಪೀಕರ್ ದುಂಡಪ್ಪನ ಪಕ್ಷದವರೇ ಆದರೂ ಅವಕ್ಕೆ ಮತ ಹಾಕಲೆ ಆಸ್ಪದ ಸಿಕ್ಕಿದ್ದಿಲ್ಲೆ.

ಹಾಂಗಾರೆ ವಿಧಾನ ಸಭೆಯ ಒಟ್ಟು ಸದಸ್ಯ ಬಲ ಎಷ್ಟು?

ದುಂಡಪ್ಪನ ಪಕ್ಷಕ್ಕೆ ಸುರುವಿಂಗೆ ಸಿಕ್ಕಿದ ಸ್ಥಾನ ಎಷ್ಟು?

ವಿಶ್ವಾಸ ಮತದ ದಿನ ಸ್ಪೀಕರ್ ಸೇರಿ ಎಷ್ಟು ಜೆನ ಇತ್ತಿದ್ದವು?

ಬೆಕ್ಕಿಗೆ ಆಟ-ಇಲಿಗೆ ಪ್ರಾಣಸಂಕಟ ಹೇಳುವ ಹಾಂಗೆ,ಈ ದುಂಡಪ್ಪನ ಸಂಕಟದ ಎಡಕ್ಕಿಲೂ ನಿನ್ನ ಲೆಕ್ಕವೊ?ಹೇಳಿ ಬೈಯೆಡಿ.

14 thoughts on “ದುಂಡಪ್ಪನ ಸಂಕಟ

  1. ಸಂತೋಷ.ಎಲ್ಲರಿಂಗೂ ಧನ್ಯವಾದ.
    ಇಂದು ನಮ್ಮ ರಾಜ್ಯದ ಸಂಕಟವೂ ಪರಿಹಾರ ಆದ ಸುದ್ದಿ ಬಂತು-ಒಂದು ಯೋಗಾಯೋಗ!

  2. ಎರಡನೆ ಉತ್ತರಲ್ಲಿ ಪಕ್ಷೇತರರ ಸಂಖ್ಯೆ ೫ .ಒಟ್ತು ಸದಸ್ಯರು ೨೨೫.ಬೆಂಬಲ ಹಿಂದೆ ತೆಕ್ಕೊಂಡವರು ೧೫.ವಿಪಕ್ಷಕ್ಕೆ ರಾಜಿನಾಮೆ ಕೊಟ್ಟವರು ೧೦.ಹಾಂಗಾಗಿ ಅದೂ ಸರಿ ಹೇಳಿ ತಿಳಿವಲೆ ಆವುತ್ತು.

    1. ಖ೦ಡಿತ ಸರಿ, ಎಲ್ಲಾ ರೀತಿಲಿಯುದೆ ಎರಡನೆ ಉತ್ತರವುದೆ ಸರಿಯೇ.. ಆನೇ ಗಡಿಬಿಡಿಲಿ ೨೨೫ ರ ವರ್ಗಮೂಲ ೧೫ ಹೇಳಿ ಗೊ೦ತಿದ್ದ೦ಡುದೆ, ೨೫ ಕಳಕ್ಕ೦ಡಿತ್ತಿದ್ದದು. ಎನ್ನದೇ ತಪ್ಪು. ಗಡಿಬಿಡಿ ಮಾಡಿ ಉತ್ತರ ತಪ್ಪು ಹೇಳಿದ್ದಕ್ಕೆ ಎಲ್ಲೋರುದೆ ಕ್ಷಮಿಸಿಕ್ಕಿ..

  3. 🙂 ಪ್ರಕಾಶಣ್ಣ೦ಗೆ ಅಭಿನ೦ದನೆಗೊ..

  4. ಉತ್ತರ ಸರಿಯಾಗಿದೆ!
    ವಿಶೇಷ ಅಭಿನಂದನೆಗೋ.

  5. ದುಂಡಪ್ಪಂಗೆ ಒರಕ್ಕು ಬಾರ ಈಗ. ನಿಂಗೊ ಆರಾಮ ಒರಗಿ.
    ಫಿಕ್ಸಿಂಗ? ಇಲ್ಲಿ ಆರ ಪೈಸೆಯೂ ಇಲ್ಲೆ.ಇಲ್ಲಿ ಡಕ್ವರ್ಥ್ ಲೂಯಿಶ್ ಮೆತಡ್ ಕೂಡ ಇಲ್ಲೆ.
    ಸುಳಿವು ಕೊಡ್ತೆ-ಬಹುಮತ ಹೇಳಿರೆ ಉಳಿದವರ ಒಟ್ಟು ಸೇರ್ಸಿರೆ ಸಿಕ್ಕುದರಿಂದ ಒಂದಾದರೂ ಹೆಚ್ಚು ಸ್ಥಾನ ಇರೆಕ್ಕು.
    ಈ ಸಮಸ್ಯೆಗೆ ಎರಡು ಉತ್ತರ ಇದ್ದು.ಎರಡನ್ನೂ ಹೇಳಿದರೆ ವಿಶೇಷ ಗೌರವ ಕೊಡಲಾವುತ್ತು.

    1. uttara 1: Ottu 196 Dundappa 96 vishvasa mathada dina ottu 172.(Dundappa 85, Virodha paksha 86, 1 speaker)
      Uttara 2: Ottu 225 Dundappa 110 Vishvasamathada dina ottu 200.(Dundappa 99, Virodha paksha 100,1 speaker)

      1. ಎರಡನೆ ಉತ್ತರ, ವರ್ಗ ಮೂಲದ ನಿಬ೦ಧನೆಯ ಪೂರೈಸುತ್ತಿಲ್ಲೆಯೋ ಹೇಳಿ ಸ೦ಶಯ!!

  6. ಅಲ್ಲ ಭಾವಯ್ಯ… ಇದರ ಓದಿ ಯೋಚನೆ ಮಾಡ್ಲೆ ಶುರು ಮಾಡಿರೆ ಒರಕ್ಕು ಬಾರ ಹೇಳಿ ಆನು ಕೈ ಬಿಟ್ಟೆ….

  7. ಹ ಹ ಹಾ.,
    ಪೆರ್ವ ಗಣೇಶಣ್ಣ ಎಲ್ಲಿದ್ದರೂ ಬೇಗನೆ ಬಾ. ತೆಕ್ಕುಂಜ ಕುಮಾರಣ್ಣ ಬೇಗ ಒರಗ್ಗು ಇದರ ಓದಿಕ್ಕಿ. ನವಗೋ…. ? ಸುಭಗಣ್ಣ ಹೇಳುಗು.!

    1. ಎನಗೆ ಉತ್ತರ ಗೊ೦ತಾಯಿದು ಭಾವಾ.. ಆದರೆ ಆನು ಹೇಳೆ!!! ಅಷ್ಟು ಸುಲಾಭಲ್ಲಿ ನಿ೦ಗೊಗೆ ಉತ್ತರ ಸಿಕ್ಕಲೆ ಬೇಕಾಗಿ ಅಲ್ಲದೊ? 🙂

      1. ಹೋ ಹೋ … ಎಂತದೋ ಪಿಕ್ಸಿಂಗು ನಡದ್ದು ಅಂಬಗ ಗಣೇಶ ಬೇಗಕ್ಕೆ ಹೇಳಿಕ್ಕೇಡ ಹೇಳಿ!. ನಗದು ಕಾಸೋಲೆ ಹೇಳಿ ಖಂಡಿತಾ ಗೋಪಾಲಣ್ಣ ಒಪ್ಪಿಕ್ಕವು. ಹಪ್ಪಳ ಕಟ್ಟ, ಬಾಳ್ಕು, ಸೆಂಡಗೆ ಮತ್ತೋ , ಅಲ್ಲಾ, ತೆಂಗಿನೆಣ್ಣೆ, ಪೆರಟಿ, ವಾ ಉಪ್ಪಿನಕಾಯಿ ಕುಪ್ಪಿಯೋ ಅಲ್ಲಾ ಸಾಂತಾಣಿಯೋ?!

        ಸಂಗತಿ ಗೊಂತಿದ್ದೋ…! ಬೈಲಿಲಿ ಹಲವರಿಂಗೆ ಉತ್ತರ ಗೊಂತಾಯ್ದು. ಆದರೆ ನಿಂಗಳೆ ಮದಾಲು ಹೇಳೆಕು ಹೇಳಿ ಕಾದೊಂಡಿದ್ದವು.!!

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×