Oppanna.com

ಸಮಸ್ಯೆ 112 : ಕಮಲ ಕೆ೦ಪೇರಿತ್ತು ಸೂರ್ಯನ ಶಾಖ ತಡೆಯದ್ದೆ

ಬರದೋರು :   ಸಂಪಾದಕ°    on   27/02/2016    13 ಒಪ್ಪಂಗೊ

ಈ ವಾರದ ಸಮಸ್ಯೆ ಸೆಕೆಗಾಲದ್ದು.ಶಿವರಾತ್ರಿಗೆ ಮದಲೇ ಇಷ್ಟು ಸೆಕೆ ಆದರೆ ಹೇ೦ಗೆ ?

ಭಾಮಿನಿ ಷಟ್ಪದಿಲಿಪ್ಪ ಸಮಸ್ಯೆಗೆ ಪರಿಹಾರ೦ಗೊ ಬರಲಿ.

ಸಮಸ್ಯೆ  : ಕಮಲ ಕೆ೦ಪೇರಿತ್ತು ಸೂರ್ಯನ ಶಾಖ ತಡೆಯದ್ದೆ

13 thoughts on “ಸಮಸ್ಯೆ 112 : ಕಮಲ ಕೆ೦ಪೇರಿತ್ತು ಸೂರ್ಯನ ಶಾಖ ತಡೆಯದ್ದೆ

  1. ಬೆಳಿ ಹೂಗು ಸೂರ್ಯನ ಶಾಖಕ್ಕೆ ಕೆಂಪಾತು.. ರೇವತಿ ಅಕ್ಕನ ನವ ಕಲ್ಪನೆ ತುಂಬಾ ಲಾಯ್ಕ ಇದ್ದು . ಸಣ್ಣ ತಿದ್ದುಪಡಿ ಮಾಡಿದೆ .

    ಅಮಿತ ಒಲವಿಂದ ಉದಿಯಪ್ಪಗ
    ಮಮತೆಲಿಯೆ ಕಾದುಗೊಂಡಿತ್ತಾ
    ಅಮಲ ಒಲುಮೆಯ ತುಂಬು ದಳಗಳ ಹೂಗು ಕೆಸರಿನೊಳ
    ತಮವ ಓಡುಸಿ ಬಂದ ರವಿಯಾ
    ಗಮನದಾ ರಭಸಕ್ಕೆ ಆ ಬೆಳಿ
    ಕಮಲ ಕೆಂಪೇರಿತ್ತು ಸೂರ್ಯನ ಶಾಖ ತಡೆಯದ್ದೆ.

    1. ತಪ್ಪು ಇಪ್ಪಲ್ಲಿ ಅಥವಾ ಸರಿ ಕಾಣದ್ದಲ್ಲಿ ಧಾರಾಳವಾಗಿ ತಿದ್ದುಪಡಿ ಮಾಡ್ಲಕ್ಕು ರಘು ಅಣ್ಣ. ಧನ್ಯವಾದಂಗೊ,

  2. ಅಮಿತ ಒಲವಿಂದ ಉದಿಯಪ್ಪಗ
    ಮಮತೆಲಿಯೆ ಕಾದುಗೊಂಡಿತ್ತಾ
    ಅಮಲ ಒಲುಮೆಯ ದಳಗಳಲಿ ತುಂಬಿದಾ ಶ್ವೇತಾಂಬುಜ
    ತಮವ ಓಡುಸಿ ಬಂದ ರವಿಯಾ
    ಗಮನದಾ ರಭಸಕ್ಕೆ ಆ ಬೆಳಿ
    ಕಮಲ ಕೆಂಪೇರಿತ್ತು ,ಸೂರ್ಯನ ಶಾಖ ತಡೆಯದ್ದೆ.

  3. ಹಿಮದ ಗುಡ್ಡೆಯ ಕೊಡಿಲಿ ಮನ್ಮಥ
    ಅಮರಿ ಬಿಟ್ಟಾ ಪ೦ಚ ಬಾಣಕೆ
    ಗಮನ ತಪ್ಪಿದ ಶಿವನ ಮೂರನೆ ಕಣ್ಣು ಒಡೆವದ್ದೆ
    ದಮನವಾದನೊ ಮದನ ಕಿಡಿ ನೋ
    ಡುಮೆಯೆ ಹೆದರಿತ್ತೊ೦ದು ಚಣ ಮುಖ
    ಕಮಲ ಕೆ೦ಪೇರಿತ್ತು ಸೂರ್ಯನ ಶಾಖ ತಡೆಯದ್ದೆ

  4. ಗಮಕ ನವ್ಯದ ಸುಳಿಯ ನೀರಿನ
    ಸಮಲುವಿಕೆಯಬ್ಬರಕೆ ಸಿಕ್ಕುವ
    ನಮುನೆಯಾತನ್ನೆಪ್ಪ ಚಳಿಗಾಲಲ್ಲಿ ಈ ವರುಷ |
    ತಮವ ನೂಕಿದ ಘಳಿಗೆ ಚಿರ ಸ೦
    ಗಮದ ಆಸೆಲಿ ಮೋರೆಯರಳಿದ
    ಕಮಲ ಕೆ೦ಪೇರಿತ್ತು ಸೂರ್ಯನ ಶಾಖ ತಡೆಯದ್ದೆ ||

  5. ಕಾಯಕ
    ಸುಮತಿ ಹೆರಟದು ಕೆಲಸದ ಮನಗೆ
    ಅಮರಿದ ಮಗುವಿನಾ ಎಳೆಯ ಮುಖ-
    ಕಮಲ ಕೆಂಪೇರಿತ್ತು ಸೂರ್ಯನ ಶಾಖ ತಡೆಯದ್ದೆ
    ವಿಮಲ ಜಲವುದೆ ಅಶನ ವಸನವು-
    ದೆ ಮನೆಯುದೆ ಬೇಕು ಮನುಜ ಕುಲಕೆ
    ಮಮತೆ ತುಂಬಿದ ಮಾತೃ ಮಡಿಲಿನ ಕೆಲಸ ನಿತ್ಯದ್ದೆ
    (ವಿಮಲ=ಶುದ್ಧವಾದ )

    1. ಪೂರಣ ಲಾಯ್ಕ ಆಯಿದು ಮಾವ .
      ಅಲ್ಲಲ್ಲಿ ಯತಿ ಸಮಸ್ಯೆ , ಐದನೆ ಸಾಲಿಲಿ ರಜ ಹೆಚ್ಚು .

  6. ಗಮನ ಹರುಸೀ ಚೆಂದ ನೋಡಲೆ
    ನಮಿಸಿ ಭಕುತಿಲಿ ಪುಣ್ಯ ಪಡವಲೆ
    ತಮಿಳುನಾಡಿನ ವಿವಿಧ ಜಾಗೆಲಿ ಪಯಣ ಹೊಡದತ್ತು |
    ಅಮರ ಲೋಕದ ರಂಭೆ ಬೆಡಗಿನ
    ನಮುನೆ ತೋರುವ ಲಲನೆಯಾಮುಖ
    ಕಮಲ ಕೆಂಪೇರಿತ್ತು ಸೂರ್ಯನ ಶಾಖ ತಡೆಯದ್ದೆ ||

    ಕೆಂಪೇರಿ, ಮತ್ತೆ ಕರಟಿ ಕಪ್ಪುದೆ ಆತು !

    1. ಹ..ಹಾ.. ನವನವೀನ ಪೂರಣ .ಕಲ್ಪನೆ ಲಾಯಕ ಆಯಿದು ಬೊಳುಂಬು ಮಾವಾ .ಆ ಲಲನೆ ಜಯ – ಲಲಿತೆಯೋ ?

  7. ಕಮಲಮಿತ್ರನು ಹೊತ್ತಿ ಉರಿವಗ
    ಕಮಲನೇತ್ರಗೆ ಕಣ್ಣುಬೇನೆಯು
    ಕಮಲಪೀಠನ ಮನೆಯ ಬಾಗಿಲು ಕಾದುಹೋಯಿದಡ |
    ಕಮಲಮುಖಿ ಶಿವೆಯ ನೆಲ ಕರಗುಗು
    ಕಮಲನಾಭಗೆ ಉಷ್ಣ ಹೆಚ್ಚುಗು
    ಕಮಲ ಕೆಂಪೇರಿತ್ತು ಸೂರ್ಯನ ಶಾಖ ತಡೆಯದ್ದೆ ||

    1. ಕಮಲ ಶಬ್ದವನ್ನೇ ಉಪಯೋಗ ಮಾಡಿ ಒ೦ದು ಪೂರಣ ಮಾಡಿದ್ದರ ನೋಡಿ ಬೈಲಿನ ಮುಖಕಮಲ ಅರಳಿತ್ತು .. ಭಲೇ ಅತ್ತೆ ..

  8. ಭ್ರಮೆಯ ಸುಖಲಿದ ಹಸಿರು ಪರಿಸರ
    ತಮಕೆ ನೂಕಿರೆ ಮಲಿನ ಹೆಚ್ಚಿಕಿ
    ಕಮಲ ಕೆಂಪೇರಿತ್ತು ಸೂರ್ಯನ ಶಾಖ ತಡೆಯದ್ದೆ |
    ಕ್ರಮವೆ ತಪ್ಪುಗು ಕಾಲ ಚಕ್ರದ
    ಹಿಮವು ಕರಗಿರೆ ಬಂದು ಭರನೆರೆ
    ಸಮಲಿ ಹೋಕದ ಕಲಕಿ ಶಾಂತಿಯ ವಿಕೃತಿ ಹೆರವೊಳವು ||

    1. ಶೈಲಜಕ್ಕಾ , “ಕಾಲ ಚಕ್ರದ ಹಿಮವು ಕರಗಿರೆ” – ಒಳ್ಳೆ ಪೂರಣ, ಅಭಿನ೦ದನೆ .

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×