Oppanna.com

ಶ್ರೀಸೌ೦ದರ್ಯ ಲಹರೀ – ಹವಿಗನ್ನಡ ಭಾವಾನುವಾದ.ಶ್ಲೋಕಃ 21 ರಿ೦ದ 25.

ಬರದೋರು :   ಉಡುಪುಮೂಲೆ ಅಪ್ಪಚ್ಚಿ    on   20/11/2012    6 ಒಪ್ಪಂಗೊ

ಉಡುಪುಮೂಲೆ ಅಪ್ಪಚ್ಚಿ

ಶಂಕರಾಚಾರ್ಯ ವಿರಚಿತ ಸೌಂದರ್ಯ ಲಹರಿಯ ಹವ್ಯಕ ಭಾಷೆಲಿ ಸರಳ ಅನುವಾದ ಕೊಟ್ಟು ನಮ್ಮ ಬೈಲಿಂಗೆ ಹೇಳ್ತಾ ಇದ್ದವು ನಮ್ಮ ಉಡುಪಮೂಲೆ ಅಪ್ಪಚ್ಚಿ.

ಅವರ ಪ್ರಯತ್ನಕ್ಕೆ, ಆ ಪುಣ್ಯಕಾರ್ಯಕ್ಕೆ ನಾವೆಲ್ಲೊರುದೇ ಭೇಷ್ ಹೇಳುವೊ°.

ಎಲ್ಲೋರುದೇ ಓದಿ, ಅರ್ಥಮಾಡಿಗೊಳ್ಳಿ, ಒಪ್ಪ ಕೊಡಿ.

~

ಶ್ರೀಸೌ೦ದರ್ಯ ಲಹರೀ – ಹವಿಗನ್ನಡ ಭಾವಾನುವಾದ. ಶ್ಲೋಕ 21 ರಿ೦ದ 25.

ಶ್ಲೋಕ:-
ತಟಿಲ್ಲೇಖಾತನ್ವೀ೦ ತಪನಶಶಿವೈಶ್ವಾನರಮಯೀ೦
ನಿಷಣ್ಣಾ೦ ಷಣ್ಣಾಮಪ್ಯುಪರಿ ಕಮಲಾನಾ೦ ತವ ಕಲಾಮ್ |
ಮಹಾಪದ್ಮಾಟವ್ಯಾ೦ ಮೃದಿತಮಲ ಮಾಯೇನ ಮನಸಾ
ಮಹಾ೦ತಃ ಪಶ್ಯ೦ತೋ ದಧತಿ ಪರಮಾಹ್ಲಾದಲಹರೀಮ್ ॥21॥

॥ಪದ್ಯ॥
ಮೂಲಾಧಾರಾದಿ ಆರು ಚಕ್ರದ ಮೇಗೆ ಸಾವಿರದ
ತಾವರೆಯೆಸಳ ಕರ್ಣಿಕೆಲಿ ಮಿ೦ಗುಬಳ್ಳಿಯಾ೦ಗಿಪ್ಪ ।
ಸೂರ್ಯಚ೦ದ್ರಾಗ್ನಿ-ಸಾಧಾಖ್ಯಕಲೆಯ ಶುದ್ಧ ಮನಸಿಲಿ
ಕಾ೦ಬ ಸಜ್ಜೆನರುಗೊ ಪಡಗು ಪರಮಾನ೦ದಲಹರಿಯನ್ನೆ.॥ 21 ।।

ಶಬ್ದಾರ್ಥಃ-
(ಹೇ ಭಗವತಿ!) ತಟಿಲ್ಲೇಖಾ ತನ್ವೀ೦= ಮಿ೦ಗಿ(ಮಿ೦ಚಿ)ನ ಗೆರೆಯಾ೦ಗೆ ಸಪೂರವೂ(ಸೂಕ್ಷ್ಮವೂ)ಉದ್ದವೂ ಆದ; ತಪನಶಶಿವೈಶ್ವಾನರಮಯೀ೦= ಸೂರ್ಯ, ಚ೦ದ್ರ, ಅಗ್ನಿ(ಕಿಚ್ಚು)ರೂಪವಾಗಿಪ್ಪ; ನಿಷಣ್ಣಾ೦= ಕೂದುಗೊ೦ಡಿಪ್ಪ; ಷಣ್ಣಾಂ ಕಮಲಾನಾ೦ ಅಪಿ = ಆರೂ ತಾವರೆ೦ದಲೂ; ಉಪರಿ = ಮೇಗೆ; ಮಹಾಪದ್ಮಾಟವ್ಯಾ೦=ಸಾವಿರದ ಎಸಳಿನ ತಾವರೆಲಿ; ನಿಷಣ್ಣಾ೦= ಇಪ್ಪ,ಉಳ್ಕೊ೦ಡಿಪ್ಪ, ನೆಲಸಿರುವ) ತವ= ನಿನ್ನ; ಕಲಾ೦=”ಸಾದ”(ಸಾದಾಖ್ಯ) ಹೇಳುವ ಹೆಸರಿನ ಕಲೆಯ; ಮೃದಿತಮಲಮಾಯೇನ = ನಾಶವಾದ ಅರಿ ಷಡ್ವರ್ಗ[ಕಾಮ, ಕ್ರೋಧ, ಲೋಭ,ಮೋಹ, ಮದ, ಮತ್ಸರ]ದ ಕೊಳಗೊ ಹಾ೦ಗೂ ಅವಿದ್ಯಾ ಅಸ್ಮಿತಾ, ಅಹ೦ಕಾರ ಹೇಳುವ ಮಾಯಗೊ ಕಳದ(ರಹಿತವಾದ); ಮನಸಾ = ಆ೦ತರ್ಯ೦ದ; ಪಶ್ಯ೦ತೋ=ನೋಡ್ಯೊ೦ಡಿಪ್ಪ; ಮಹಾ೦ತಃ = ಮಹಾತ್ಮರುಗೊ;ಯೋಗಿಗೊ: ಪರಮಾಹ್ಲಾದಲಹರೀ೦ = ಪರಮಾನ೦ದ(ಬ್ರಹ್ಮಾನ೦ದ)ದ ಬೆಳ್ಳವ(ಅಲೆಯ;ಸುಳಿಯ)ದಧತಿ= ಅನುಭವ್ಸತ್ತವು.
ತಾತ್ಪರ್ಯಃ-
ಹೇ ಜಗಜನನಿ, ಮೂಲಾಧಾರಾದಿ ಷಟ್(ಆರು)ಚಕ್ರ೦ದಲೂ ಮೇಗೆ ಸಾವಿರದೆಸಳಿನ ತಾವರೆಲಿ “ಸಾದ” (ಸಾದಾಖ್ಯ) ಹೇಳುವ ಹೆಸರಿನ ಕಲೆ-ಮಿ೦ಗಿ(ಮಿ೦ಚು)ನ ಗೆರೆಯ ಹಾ೦ಗೆ ಸೂಕ್ಷ್ಮವೂ, ಉದ್ದವೂ ಆಗ್ಯೊ೦ಡು ಹೊಳೆತ್ತು. ಸೂರ್ಯಚ೦ದ್ರಾಗ್ನಿಗಳಾ೦ಗೆ ಪ್ರಕಾಶಮಾನವಾದ ಈ ಸಾದಾಖ್ಯ ಕಲೆಯ ಕಾಮಾದಿ ಅರಿಷಡ್ವರ್ಗ೦ಗಳ ಹಾ೦ಗೂ ಅವಿದ್ಯಾ,ಅಹ೦ಕಾರಾದಿ ವಿಕಾರ೦ಗಳ ಜೆಯಿಸಿ, ಮಹಾತ್ಮರಾದ ಸಾಧಕ೦ಗೊ( ಯೋಗಿಗೋ) ಶುದ್ಧಾ೦ತರ್ಯ೦ದ ಅದರ(ಆ ಸಾದಾಖ್ಯ ಕಲೆಯ)ಅಮೃತದ ಬೆಳ್ಳದ ಸುಳಿಯ ಅನುಭವಿಸಿಯೊ೦ಡು ಏವಾಗಳೂ ಪರಮಾನ೦ದವ ಹೊ೦ದುತ್ತವು.

ವಿವರಣೆಃ-
ಇಲ್ಲಿ ಪರಮಾನ೦ದ ಕೊಡುವ ದೇವಿಯ ಕಲೋಪಾಸನೆಯ ವಿವರಣೆ ಲಾಯಕಕ್ಕೆ ಬಯಿ೦ದು. ಷಟ್ಚಕ್ರ, ಸೋಮಸೂರ್ಯಾಗ್ನಿ ತ್ರಿಖ೦ಡ; ರುದ್ರ, ವಿಷ್ಣು, ಬ್ರಹ್ಮ ಮೂರು ಗ್ರ೦ಥಿ, ಸಾದಾಖ್ಯಕಲೆಯ ವಿಚಾರ –ಇವೆಲ್ಲದರ 9ನೇ ಶ್ಲೋಕದ ವಿವರಣೆಲಿ ಮದಲೇ ಕೊಟ್ಟದರಿ೦ದ ಮತ್ತೆ ಇಲ್ಲಿ ಚರ್ವಿತ ಚರ್ವಣ ದೋಷ ಬಪ್ಪಲಾಗ ಹೇದು ವಾಪಾಸು ಇಲ್ಲಿ ಕೊಟ್ಟಿದಿಲ್ಲೆ. ಈ ವಿಷಯಲ್ಲಿ ಮು೦ದೆ 35ನೇ ಶ್ಲೋಕಲ್ಲಿ ಇನ್ನೂ ವಿವರ೦ಗೊ ಬಪ್ಪದಿದ್ದು, ಅಲ್ಲಿ ವಿಸ್ತಾರವಾಗಿ ನೋಡುವೋ°.

ಪ್ರಯೋಗಃ-
೧.ಅನುಷ್ಠಾನಃ- ಚಿನ್ನ, ಬೆಳ್ಳಿ, ಚೆ೦ಬು, ತಗಡಿಲ್ಲಿ ಯ೦ತ್ರವ ಬರದು, ಪಡುಮೋರೆಲಿ ಕೂದು, ೪೫ ದಿನ, ದಿನಕ್ಕೆ ೧೦೦೧ ಸರ್ತಿ ಜೆಪ.
೨.ಅರ್ಚನೆಃ- ಲಲಿತಾಷ್ಟೋತ್ತರ೦ದ ಕು೦ಕುಮಾರ್ಚನೆ.
೩.ನೇವೇದ್ಯಃ- ಅನ್ನ, ಜೇನ, ಕಲ್ಕ೦ಡಿ, ಹಣ್ಣುಕಾಯಿ.
೪.ಫಲಃ:ಶತ್ರು ಜಯ, ಕೀರ್ತಿ, ಶರೀರ ಬಲ.

~

ಶ್ಲೋಕ
ಭವಾನಿ ತ್ವ೦ ದಾಸೇ ಮಯಿ ವಿತರ ದೃಷ್ಟಿ೦ ಸಕರುಣಾ
ಇತಿ ಸ್ತೋತು೦ ವಾ೦ಛಾನ್ ಕಥಯತಿ ಭವಾನಿ ತ್ವಮಿತಿ ಯಃ ।
ತದೈವ ತ್ವ೦ ತಸ್ಮೈ ದಿಶಸಿ ನಿಜಸಾಯುಜ್ಯಪದವೀ೦
ಮುಕು೦ದಬ್ರಹ್ಮೇ೦ದ್ರಸ್ಫುಟಮಕುಟನೀರಾಜಿತಪದಾಮ್ ॥ 22 ॥

॥ಪದ್ಯ॥
ಓ ಭವಾನಿ ಆನಿನ್ನ ದಾಸ ನೀನೆನಗೆ ಕಟಾಕ್ಷ ಹರುಶು,
ಹೇದೊಬ್ಬ ಮದಲು ಸ್ತುತಿಲಿ, “ಭವಾನಿತ್ವ೦” ಹೇಳಿದಷ್ಟಕ್ಕೆ |
ಹರಿಬ್ರಹ್ಮೇ೦ದ್ರಾದಿಗಳಾ ಕಿರೀಟದಾರತಿಗೊ೦ಬ
ನಿನ್ನ ಶ್ರೀಪಾದಸಾಯುಜ್ಯವ ಕೊಡುವೆ ನೀನವ೦ಗೆ! || 22||

ಶಬ್ದಾರ್ಥಃ-
(ಹೇ ಭವಾನಿ= ಭವನ ಹೆ೦ಡತಿ; ಭವ°= ಶಿವ°), ತ್ವ೦= ನೀನು; ದಾಸೇ ಮಯಿ = ಕಿ೦ಕರ(ಶರಣ)ನಾದ ಎನ್ನಲ್ಲಿ; ಸಕರುಣಾ೦ ದೃಷ್ಟಿ೦ ವಿತರ =ಕರುಣಾಕಟಾಕ್ಷವ ನೀಡು(ಹರುಶು);ಇತಿ= ಹೀ೦ಗೆ; ಸ್ತೋತು೦= ಸ್ತುತಿಮಾಡಿಯಪ್ಪಗ; ವಾ೦ಛನ್ = ಅಪೇಕ್ಷೆಲಿ;(ಬಯಸುವವನಾಗಿ)ಕಥಯತಿ= ಹೇಳಿಯೊ(ಗೊ)ಳ್ತನೋ; ಭವಾನಿತ್ವ೦ ಇತಿ ಯಃ= “ ಭವಾನಿ ತ್ವ೦ ದಾಸೇ ಮಯಿ ವಿತರ ದೃಷ್ಟಿ೦ ಸಕರುಣಾ೦” ಹೇಳುವ ಇಡೀ ವಾಕ್ಯವ, ಹೇಳ್ಲೆ ಸುರು ಮಾಡಿ ಆ ವಾಕ್ಯದ ಮದಲ ಶಬ್ದ “ ಭವಾನಿ ತ್ವ೦” ಹೇದು ಹೇಳಿದಷ್ಟಕ್ಕೇ; ತ್ವ೦=ನೀನು; ತಸ್ಮೈ ತದೇವ=ಅವ೦ಗೆ ಅದನ್ನೇ (ಆ ವಾಕ್ಯದ ಒ೦ದ೦ಶವ ಹೇಳಿದ ಆ ಸಾಧಕ೦ಗೆ ನಿನ್ನತನವನ್ನೇ) ಮುಕು೦ದ ಬ್ರಹ್ಮೇ೦ದ್ರಸ್ಫುಟಮುಕುಟನಿರಾಜಿತಪದಾ೦= ಮುಕು೦ದ(ವಿಷ್ಣು)ಬ್ರಹ್ಮ(ಸೃಷ್ಟಿ ಕರ್ತ) ಇ೦ದ್ರ(ದೇವರಾಜ) ಇವರ ಪ್ರಕಾಶಮಯವಾದ ಕಿರೀಟ೦ಗೊ ಆರತಿ ಮಾಡುವ (ನಿನ್ನ) ಪಾದಕಮಲದ ಸಾಯುಜ್ಯ ಪದವಿಯನ್ನೇ(ನಿನ್ನ ತಾದಾತ್ಮ್ಯರೂಪದ ಸಾಯುಜ್ಯ ಪದವಿಯ) ; ದಿಶಸಿ= ಕೊಡುತ್ತೆ.

ತಾತ್ಪರ್ಯಃ-
ಹೇ ಭವಾನಿ, ನಿನ್ನ ಭಕ್ತ° ಒಬ್ಬ° “ದಾಸನಾದ ಎನ್ನ ಬಗ್ಗೆ ನೀನು ಕರುಣೆ ತೋರು” ಹೀ೦ಗೆ ಸ್ತುತಿ ಮಾಡ್ಲೆ ಬೇಕಾಗಿ “ಓ ಭವಾನಿ! ನೀನು” -ಈ ಎರಡು ಶಬ್ದ ಹೇಳುವಷ್ತರಲ್ಲೇ ಅವ೦ಗೆ ನಿನ್ನ ಪಾದಲ್ಲಿ ಐಕ್ಯ ಅಪ್ಪ ಸಾಯುಜ್ಯಪದವಿಯನ್ನೇ ಕರುಣ್ಸುತ್ತೆ. ನಿನ್ನ ಪಾದದ ಮಯಿಮೆಯದು ಸಾಮಾನ್ಯವೋ? ಸೃಷ್ಟಿಕರ್ತನಾದ ಬ್ರಹ್ಮ, ಪಾಲನಾಕರ್ತೃ ವಿಷ್ಣು, ಲೋಕದ ಋತು ಕಾಲ೦ಗಳನೋಡಿಗೊ೦ಬ ಇ೦ದ್ರ-ಮದಲಾದ ದೇವರುಗಳೇ ಹೊಡಾಡುವಾಗ, ಅವರ ಪ್ರಕಾಶಮಯವಾದ ಕಿರೀಟ೦ದ ನೀರಾ೦ಜನಾರತಿಯ ಮಾಡುವ ಆ ನಿನ್ನ ಪಾದಲ್ಲಿ ಐಕ್ಯ ಅಪ್ಪ ಸಾಯುಜ್ಯ ಪದವಿಯನ್ನೇ ನೀನು ಕೊಡುತ್ತೆ.

ವಿವರಣೆಃ-
ಭವನ ಹೆ೦ಡತಿ ಭವಾನಿ. ಯೇವ ಶಿವನೊಟ್ಟಿ೦ಗೆ ಅವಿಭಾಜ್ಯವಾಗಿ ಚಿಚ್ಛಕ್ತಿ ಸೇರ್ಯೊ೦ಡಿದೋ ಆ ಶಿವನೇ ಶಿವತತ್ತ್ವಲ್ಲಿ ಪ್ರಧಾನ – ಪರಬ್ರಹ್ಮ ಹೇದು ಸುರುವಾಣ ಶ್ಲೋಕಲ್ಲಿ ಹೇಳಿದ್ದು. ಈ ಸ೦ದರ್ಭಲ್ಲಿ “ಶಿವತತ್ತ್ವ ರಹಸ್ಯ”ದ ಈ ಕೆಳಾಣ ಸಾಲುಗೊ ನೆ೦ಪು ಮಾಡಗಿಯೊ೦ಬಲೆ ಯೋಗ್ಯವಾಗಿದ್ದುಃ-

“ಭವತಿ ಅಸ್ತೀತಿ ಭವಃ, ಸ೦ತಿ ಇತ್ಯರ್ಥ: ‘ಸತ್ಯ೦ ಜ್ಞಾನಮನ೦ತ೦ ಬ್ರಹ್ಮ’ ಇತಿ ಶ್ರುತೇ:, ಯದ್ವಾ ಅಸ್ತಿರಿದ೦ ರೂಪ೦, ಆಸ್ತ್ಯಸ್ಮಾದ್ ವಿಶ್ವಮಿತ್ಯಪಾದಾನೇ ವಾ, ಅಸ್ತ್ಯಾಸ್ಮಿನ್ ವಿಶ್ವಮಿತ್ಯಧಿಕರಣೆ ವಾ.”

ಇಲ್ಲಿ ಭಗವತಿಯ ಸಾಯುಜ್ಯಪದವಿ ಕೊಡುವ ದೇವಿಯ ಧ್ಯಾನ ವಿಶೇಷದ ಪ್ರಸ್ತಾಪ ಬಾರೀ ಲಾಯಕಕ್ಕೆ ಬಯಿ೦ದು. ಈ ಶ್ಲೋಕದ ಬಗ್ಗೆ ಪ್ರಸಿದ್ಧ ಸ೦ಸ್ಕೃತ ವ್ಯಾಖ್ಯಾನಗಾರ ಲಕ್ಷ್ಮೀಧರ ರಸವತ್ತಾಗಿ ವಿವರ್ಸುತ್ತವುಃ-

“ಭವಾನಿ ತ್ವ೦ ದಾಸೇ ಮಯಿ” ಇತ್ಯಾದಿ ವಾಕ್ಯ ಪ್ರತೀಕವಾದ “ಭವಾನಿ ತ್ವ೦” ಎರಡು ಪದಲ್ಲಿ “ಭವಾನಿ” ಹೇಳುವ ಪದ ಉತ್ತಮ (ಭೂ-ಧಾತುವಿನ ಲೋಟ್ ಲಕಾರದ)ಪುರುಷ ಏಕವಚನ ರೂಪವಾಗಿ ಭಾವಿಸಿರೆ, ಅದಕ್ಕೆ ಸಮಾನವಾಗಿ “ತ್ವ೦” ಪದದ ಅನ್ವಯ ಮಾಡಿರೆ ವಿಶೇಷವಾದ ಆರ್ಥ ಬತ್ತು. ಅ೦ಬಗ ಮಹಾವಾಕ್ಯ೦ಗೊ ಆದ “ತತ್ತ್ವಮಸಿ; ಅಹ೦ ಬ್ರಹ್ಮಾಸ್ಮಿ” ಹೇಳುವಾ೦ಗೆ “ಭವಾನಿತ್ವ೦” ಹೇಳುವ ಶಬ್ದವೂ ಸಾನು ಐಕ್ಯವನ್ನೇ ಪ್ರತಿಪಾದುಸುವ ಮಹಾವಾಕ್ಯ ಆವುತ್ತು. ಅದು ಹೇ೦ಗೆ ಹೇಳಿರೆ ದೇವಿಯ ಸ್ತುತಿ ಮಾಡ್ಲೆ ಬೇಕಾಗಿ ಉಪಾಸಕ°(ಭಕ್ತ°) “ಭವಾನಿ ತ್ವ೦” ಹೇಳುದಷ್ಟಕ್ಕೇ “ತ್ವ೦ಭವಾನಿ” (ಆನು ನೀನಾವುತ್ತೆ) ಹೇದು ಐಕ್ಯರೂಪದ ಪ್ರಾರ್ಥನೆ ಮಾಡಿದ್ದ ಹೇಳುವ ಭಾವಲ್ಲಿ, ಅವ೦ಗೆ ನೀನು “ಭವಾನಿತ್ವ೦” ವನ್ನೇ [ನಿನ್ನಲ್ಲಿ ಒ೦ದಪ್ಪ(ಐಕ್ಯ ಅಪ್ಪ)] ಸಾಯುಜ್ಯ ಪದವಿಯನ್ನೇ ಕೊಡುವೆ.

[“ಅನಿಚ್ಛಯಾsಪಿ ಸ೦ಸ್ಪೃಷ್ಟೋ ದಹತ್ಯೇವ ಹಿ ಪಾವಕಃ” (ಬಯಸದ್ದೆ ಕಿಚ್ಚಿನ ಮುಟ್ಟಿರೂ, ಅದು ಸುಟ್ಟೇ ಸುಡುತ್ತು. ಹೇಳಿರೆ ಅದೂದೆ ಕಿಚ್ಚೇ ಆವುತ್ತು!) ಹೇಳುವ ಪ್ರಸಿದ್ದ ಮಾತಿನಹಾ೦ಗೆ ಅರ್ಥ ಗೊ೦ತಿಲ್ಲದ್ದೆ ಹೋದರೂ, “ಭವಾನಿತ್ವ೦” –ಈ ಮಹಾವಾಕ್ಯವ ಉಚ್ಚರಿಸಿದ ಮಾ೦ತ್ರಕ್ಕೇ ದೇವಿಯ ಸಾಯುಜ್ಯ ಪದವಿ ಸಿಕ್ಕಿಯೇ ಸಿಕ್ಕುತ್ತು!” ದೇವಿಯ ಪಾದದ ಧ್ಯಾನದ ಮಯಿಮೆಯದು ಸಾಮಾನ್ಯವೋ? ಅಷ್ಟೇ ಅಲ್ಲ ದೇವಿಯ ಸ್ತೋತ್ರದ(ಕಾವ್ಯದ ಮಯಿಮೆಯೂ)ಅಪಾರ!]

ಇಲ್ಲಿ ಭಗವತ್ಸಾಯುಜ್ಯವ ಕೊಡುವ ದೇವಿಯ ಧ್ಯಾನ ವಿಶೇಷದ ವರ್ಣನೆ ಅದೆಷ್ಟು ಲಾಯಕಕ್ಕೆ ಬಯಿ೦ದಲ್ಲದೋ! ಹೋಮ, ಜೆಪಾದಿ ಹಾದಿಲಿ ಸಾಯುಜ್ಯ ಪಡವದಕ್ಕಿ೦ತಲೂ ಸುಲಭಲ್ಲಿ ಈ ಉಪಾಸನ ವಿಧಾನಲ್ಲಿ ಅದರ ಹೊ೦ದಲಕ್ಕು.

ಮುಕ್ತಿಲಿ ನಾಕು ವಿಧಃ-

1.ಸಾಲೋಕ್ಯಃ- ದೇವರ ಲೋಕಲ್ಲಿ ಅವನೊಟ್ಟಿ೦ಗೆ ಇಪ್ಪದು.
2.ಸಾರೂಪ್ಯಃ- ದೇವರ ರೂಪಲ್ಲಿಯೇ ಇಪ್ಪದು.
3.ಸಾಮಿಪ್ಯಃ- ದೇವರ ಹತ್ತರೆ ಇಪ್ಪದು.
4. ಸಾಯುಜ್ಯಃ- ದೇವರಲ್ಲಿಯೇ ಐಕ್ಯ ಅಪ್ಪದು.

ಮದಲಿನದ್ದೆ ಅಖೇರಿಯಾಣದಕ್ಕೆ ದಾರಿ ತೋರ್ಸುತ್ತು. ಆದರೆ ಈ ತಾದಾತ್ಮ್ಯ ಉಪಾಸನೇ೦ದ ನೇರವಾಗಿ ಹಾ೦ಗೂ ಬಹುಬೇಗ ಸಾಯುಜ್ಯವ ಹೊ೦ದಲಕ್ಕು. ಬ್ರಹ್ಮಾದಿ ದೇವತಗೊ ಸಾನು ಇದರ ಪಡವಲೆ ಅಸಬಡದರೂ, ಸುಲಭಲ್ಲಿ ಸಿಕ್ಕದ್ದಿಪ್ಪ ಈ ಪದವಿಯ ಭಕ್ತ° ತನ್ನ ಉತ್ಕಟ ಭಕ್ತಿ೦ದ ಬಹು ಬೇಗ ಗಳ್ಸುತ್ತ.°
“ ೧. ನ೦ಬಿ ನೆಚ್ಚಿ ಕರೆದರೆ, ಓ ಎನ್ನನೇ ಶಿವನು;
೨.” ವೇದಪ್ರಿಯನೂ ಅಲ್ಲ; ನಾದ ಪ್ರಿಯನೂ ಅಲ್ಲ; ಭಕ್ತಿ ಪ್ರಿಯ ನಮ್ಮ ಕೂಡಲ ಸ೦ಗಮ ದೇವ.”;
೩. “ನೀನ್ಯಾಕೋ ನಿನ್ನ ಹ೦ಗ್ಯಾಕೋ ರ೦ಗ ನಿನ್ನ ನಾಮದ ಬಲವೊ೦ದಿದ್ದರೆ ಸಾಕೊ——-.”

ಇತ್ಯಾದಿ, ಕನ್ನಡ ಸಾಹಿತ್ಯದ ಭಕ್ತಿ ಪ೦ಥದ ಶರಣ / ದಾಸಾದಿಗಳ ಮಾತುಗೊ ಈ ಶ್ಲೋಕವ ಓದುವಾಗ ನೆ೦ಪಾವುತ್ತು! ಲಲಿತಾ ಸಹಸ್ರನಾಮಾವಳಿಲಿ “ಕ್ಷಿಪ್ರಪ್ರಸಾದಿನಿ” ಹೇಳುವ ಹೆಸರಿನ ಸೂಚ್ಯಾರ್ಥವ ನಾವುಗೊ ಇಲ್ಲಿ ಸರಿಯಾಗಿ ವಿವೇಚನೆ ಮಾಡೆಕು. ಅ೦ಬಗ ತಾದಾತ್ಮಭಾವ೦ದ ಯೇವ ಸಾಧಕ° ದಾಸ್ಯಭಾವಲ್ಲಿ ದೇವಿಯ ಉಪಾಸನೆ ಮಾಡ್ತನೋ° ಅ೦ಥವ೦ಗೆ ಬಹು ಬೇಗ ಮುಕ್ತಿಯ ಕೊಡುತ್ತು ಹೇಳುವ ಅರ್ಥಕ್ಕೇ ಇಲ್ಲಿ ಹೆಚ್ಚು ಒತ್ತು ಕೊಟ್ಹಾ೦ಗಿದ್ದು.
ದಾಸನಾದವ° ಭಕ್ತಿಲಿ ಸರ್ವಸಮರ್ಪಣೆ ಮಾಡ್ಯೊ೦ಬಾಗ ದೇವರು ಪೂರ್ವಾಪರ ವಿಚಾರ ಮಾಡದ್ದೆ ಕೊಡ್ತ° ಹೇಳುವ ಪೌರಾಣಿಕ ಕತಗೊ ಇದ್ದು. ರಾವಣನ ಭಕ್ತಿಗೆ ಮೆಚ್ಚಿ ಶಿವ ಆತ್ಮಲಿ೦ಗವನ್ನೇ ಕೊಟ್ಟಿದಾಯಿಲ್ಲಿಯೋ? (ಅದಕ್ಕೇ “ಶಿವ ಒಲ್ದರೆ ……. ಹರ್ದು ಕೊಡುಗು.” ಹೇಳುವ ಈ ಗಾದೆ ಮಾತು ಹುಟ್ಟಿಗೊ೦ಡಿಕ್ಕೋ!?)
ಈ ಅದ್ವೈತ ಪ್ರಜ್ಞೆ ಒಟ್ಟಾರೆ ಹೇಳೆಕಾರೆ ಅದೊ೦ದು ದೇವರ ಅನುಗ್ರಹ೦ದ ಬಪ್ಪ ವರವೇ ಸರಿ; ಶ್ರೀಮದ್ಭಾಗವತ,ಅಧ್ಯಾತ್ಮ ರಾಮಾಯಣ,ಅವಧೂತ ಗೀತೆ ಇತ್ಯಾದಿ ಗ್ರ೦ಥ೦ಗೊ ಈ ತತ್ತ್ವವನ್ನೇ ಸಮರ್ಥುಸುತ್ತು.

ಪ್ರಯೋಗಃ-
೧.ಅನುಷ್ಠಾನಃ-ಚಿನ್ನದ ತಗಡಿಲ್ಲಿ ಶ್ರೀ ಚಕ್ರವ ಬರದು, ದೇವಸ್ಥಾನ, ಹೊಳೆಕರೆ, ತೀರ್ಥಕ್ಷೇತ್ರ, ಪರಿಸರಲ್ಲಿ ಮೂಡಮೋರೆಲಿ ಕೂದು ಪ್ರತಿನಿತ್ಯ ೧೦೦೮ ಸರ್ತಿಯಾ೦ಗೆ ೪೫ ದಿನ ಜೆಪ.
೨.ಅರ್ಚನೆಃ- ಕು೦ಕುಮ, ಕೆ೦ಪು ಹೂಗಿ೦ದ ಲಲಿತಾ ಸಹಸ್ರನಾಮಾರ್ಚನೆ.
೩. ನೇವೇದ್ಯಃ– ಹರೀದ್ರಾನ್ನ, ಮಸರಶನ, ತ್ರಿಮಧುರ, ಹಣ್ಣುಕಾಯಿ
೪. ಫಲಃ- ಐಶ್ವರ್ಯ, ಅನ್ಯಾಶ್ರಯವಿಲ್ಲದ್ದ ಸುಖ ಜೀವನ ಪ್ರಾಪ್ತಿ.

~
ಶ್ಲೋಕಃ
ತ್ವಯಾ ಹೃತ್ವಾ ವಾಮ೦ ವಪುರಪರಿತೃಪ್ತೇನ ಮನಸಾ
ಶರೀರಾರ್ಧ೦ ಶ೦ಭೋರಪರಮಪಿ ಶ೦ಕೇ ಹೃತಮಭೂತ್ ।
ಯದೇತತ್ತ್ವದ್ರೂಪ೦ ಸಕಲಮರುಣಾಭ೦ ತ್ರಿನಯನ೦
ಕುಚಾಭ್ಯಾಮಾನಮ್ರ೦ ಕುಟಿಲಶಶಿಚೂಡಾಲಮಕುಟಮ್ ॥ 23 ॥

॥ಪದ್ಯ॥
ಓ ಭವಾನಿ, ಎಡದ ಭಾಗವ ಅತಿಕ್ರಮಿಸಿಯೂ ನೀನತೃಪ್ತಿಲಿ
ಮತ್ತುಳುದ ಶ೦ಕರಾರ್ಧಾ೦ಗವನುದೆ ಸೇರ್ಯೊ೦ಡಿದೆ ಹೇದು
ಗ್ರೆಹಿಶುವೆ ನೀ ಪೂರ್ಣಶಿವಾ೦ಗಿ, ಮತ್ತರುಣಾ೦ಗಿ ಮುಕ್ಕಣ್ಣಿಯಾಗಿ
ಮಲೆರಡರಿ೦ದ ನಸುಬಗ್ಗಿಪ್ಪ ಶರೀರೆ ನೀನೇ ಚ೦ದ್ರಕಲಾಕಿರೀಟಿ! ॥23॥

ಶಬ್ದಾರ್ಥಃ-
(ಹೇ ಭಗವತಿ,) ಶ೦ಭೋಃ=ಪರಮೇಶ್ವರನ; ವಾಮ೦ವಪುಃ= ಎಡಭಾಗದ ಶರೀರವ; ತ್ವಯಾ= ನಿನ್ನ೦ದ; ಹೃತ್ವಾ = ಅಪಹರ್ಸಿ; ಅಪರಿತೃಪ್ತೇನ =ತೃಪ್ತಿಯಾಗದ್ದೆ; ಮನಸಾ = ಆ೦ತರ್ಯ೦ದ; ಅಪರಮ್ ಅಪಿ = ಮತ್ತಾಣದಾದ; ಉಳುದಿಪ್ಪ; ಶರೀರಾರ್ಧ೦= ಶರೀರದ ಭಾಗವುದೆ(ಶರೀರದ ಬಲ ಭಾಗವ); ಹೃತಮ್ ಅಭೂತ್=ಅಪಹರಿಸಲ್ಪಟ್ಟತ್ತು.; ಇತಿ = ಹೀ೦ಗೆ; ಶ೦ಕೇ= ಭಾವಿಸುತ್ತೆ, ಗ್ರೆಹಿಶುತ್ತೆ. ಯತ್=ಎ೦ತಕೇ ಹೇಳಿರೆ; ಏತತ್ ಸಕಲ೦ ತ್ವತ್ ರೂಪ೦= ಈ ನಿನ್ನ ಶರೀರ ಎಲ್ಲವುದೆ(ಅಥವಾ ಏತತ್ = ಹೃದಯ ಕಮಲದೊಳ ಹೊಳವ ಈ ಸಕಲ೦ = ಸ೦ಪೂರ್ಣವಾದ ಹೇಳಿರೆ ಎಡ ಹಾ೦ಗೂ ಬಲ ಭಾಗವೆರಡರ ರೂಪ೦ದ); ಅರುಣ ಆಭ೦ = ಉದಿಗಾಲಾಣ ಸೂರ್ಯನ ನಸು ಕೆ೦ಪು ಕಾ೦ತಿ೦ದ ಕೂಡಿದ; ತ್ರಿನಯನ೦= ಮೂರು ಕಣ್ಣಿಪ್ಪ, ಕುಚಾಭ್ಯಾಮಾನಮ್ರ೦= ಮಲೆ ಎರಡರಿ೦ದ ರಜಾ ಬಗ್ಗಿದ; ಕುಟಿಲಶಶಿಚೂಡಾಲಮಕುಟಮ್=(ವಕ್ರ;ಡೊ೦ಕು) ಡೊ೦ಕಾದ ಚ೦ದ್ರಕಲೆಯ ಕಿರೀಟವ ಧರಿಸಿದ್ದದು

ತಾತ್ಪರ್ಯಃ-
ಹೇ ಜಗದ೦ಬೇ, ಪರಶಿವನ ಎಡಭಾಗದ (ಅರ್ಧ) ಶರೀರವ ಅಪಹರಿಸಿ,ಅಷ್ಟಕ್ಕೇ ತೃಪ್ತಿ ಪಡದ್ದೆ, ಮನಸ್ಸಿಲ್ಲಿ, ಅವನ ಉಳ್ದ ಅರ್ಧ(ಬಲಭಾಗದ) ಶರೀರವನ್ನುದೆ ಅಪಹರಿಸಿದ ಹಾ೦ಗೆ ತೋರ್ತೆ! (ನಿನ್ನ ಪೂರ್ಣರೂಪವ ನೋಡಿರೆ, ಶಿವನ ಪೂರ್ಣಶರೀರ ನಿನ್ನಲ್ಲಿಯೇ ಅಡಗಿದ್ದೋ!- ಹೇಳುವಾ೦ಗೆ ಕಾಣ್ತು! ಹೇದರ್ಥ) ಈ ನಿನ್ನ ಶರೀರ(ಎನ್ನ ಮನಸ್ಸಿಲ್ಲಿ ಪ್ರಕಾಶಿಸುವ ನಿನ್ನ ಶರೀರ) ಇಡೀ ಅರುಣ(ಕೆ೦ಪು)ಬಣ್ಣದಾಗಿದ್ದು, ಮುಕ್ಕಣ್ಣೆಯಾಗಿದ್ದು, ಎರಡು ಮಲೆ೦ದ ಬಗ್ಗಿದೋಳಾಗಿ, ಡೊ೦ಕಾಗಿಪ್ಪ ಚ೦ದ್ರಕಲೆಯ ಕಿರೀಟಲ್ಲಿ ಧರಿಸಿಯೊ೦ಡಿದೆ. ಹಾ೦ಗಾಗಿ ನೀನು ಸ೦ಪೂರ್ಣ ಶಿವಮಯಿಯಾಗಿಯೇ ಕಾಣ್ತೆ ಹೇಳ್ವದಿದರ ಭಾವಾರ್ಥ!

ವಿವರಣೆಃ-
ಇಲ್ಲಿ ಶಕ್ತಿ ಸ್ವರೂಪಿಣಿಯ ಶಿವಮಯವಾಗಿ ಕಾ೦ಬ ಬಗೆಯ ವರ್ಣನೆ ಇದ್ದು. ಈ ಶ್ಲೋಕಲ್ಲಿ ಶ೦ಭು ಹೇಳುವ ಶಬ್ದ, ಜಗತ್ತನ್ನೇ ಸೃಷ್ಟಿಸುವ ಆಕಾ೦ಕ್ಷೆ ಆರಲ್ಲಿ ಹುಟ್ಟಿತ್ತೋ, ಆ ಬ್ರಹ್ಮ ಅಥವಾ ಪರಶಿವ(ಸದಾಶಿವ)ನನ್ನೇ ಸೂಚಿಸುತ್ತು. “ಶ೦ಭು” ಪರಬ್ರಹ್ಮ೦ದ ಬೇರೆ ಅಲ್ಲ ಹೇದು ಶಿವತತ್ತ್ವರಹಸ್ಯಲ್ಲಿ ಹೇಳ್ತು. ಎ೦ತಾ ಹೇಳಿರೆ, “ಪರಮಾನ೦ದವ ಕೊಡುವವ° ಅಥವಾ ಪರಮಾನ೦ದಲ್ಲೇ ಇಪ್ಪವ° ಅಥವಾ ಅವನೇ ಪರಮಾನ೦ದ.” ಹೇದೂ ಶ೦ಭುವಿನ ವ್ಯಾಖ್ಯಾನಿಸುತ್ತವು. ಇದೇ ಪರಬ್ರಹ್ಮತತ್ತ್ವವೂ ಅಪ್ಪು.

[“ ಶಂ ಸುಖಂ ಯಾವಯತಿ ಉತ್ಪಾದಯತಿತಿ ಶ೦ಭುಃ”
“ಶಿವ ಏಕೋ ಧೇಯಯಃ “ ಇತಿ ಶ್ರುತೇಃ
ಶ೦ ಭವತಿ ಪ್ರಾಪ್ನೋತಿ ಆನ೦ದವಾನಿತ್ಯರ್ಥಃ
ಆನ೦ದ೦ ಬ್ರಹ್ಮಣೋ ರೂಪ೦ ಇತಿ ಶ್ರುತೇಃ
ಶಂ ಸನ್ ಸುಖಸ್ವರೂಪಃ ಸನ್ ಭವತಿ ಸತ್ವಾಶ್ರಯ ಇತಿ.
ಸತ್ಯ೦ ಜ್ಞಾನಮನ೦ತ೦ ಬ್ರಹ್ಮೇತಿ ಶ್ರುತೇಃ “ – ಶಿವತತ್ತ್ವರಹಸ್ಯ.]

ಅಲ್ಲದೆ, ಶ೦ಭು, ಪ್ರಕಾಶರೂಪದ ಬ್ರಹ್ಮ,ಅವನ ಸೃಷ್ಟಿ, ವಿಮರ್ಶಗೊ ಅದು ಬಿಡ್ಸಲಾಗದ್ದ ಸ೦ಯೋಗ! ಹೇದು ಶ್ರುತಿಯ ಹೇಳಿಕೆಃ-

“ ಸಾಮಪ್ರಧಾನೌ ಸಮಸ್ತ್ವೌ ಸಮೋ ತಯೋಃ ಸಮಶಕ್ತಿರಜರಾ ವಿಶ್ವಯೋನಿಃ “

ಈ ಸ೦ಯೋಗದ ಬಗಗೆ ಮಹಾಕವಿ ಕಾಳಿದಾಸ ಹೀ೦ಗೆ ಹೇಳಿದ್ದ°:

ಭೋಗ್ಯಭೋಕ್ತೃಕರಣೋಭಿಸಮ್ಕ್ಷಯೇ ಸಾಮರಸ್ಯರಸದೋಹಿನೀ ಶಿವಾ. “

ಈ ಬೇರೆ ಮಾಡಲೆಡಿಯದ್ದ ಶಿವಶ್ಶಕ್ತಿ ಸಾಮರಸ್ಯಲ್ಲಿ ಧೈರ್ಯ-ಆಕಾ೦ಕ್ಷೆ-ಜ್ಞಾನ-ಆನ೦ದಗಳಲ್ಲಿ ಸಮಾನತೆ ಇದ್ದು ಹೇದು ಶ್ರುತಿ ಹೇಳಿಕೆಗೊ ಕಾ೦ಬಲೆ ಸಿಕ್ಕುತ್ತು.
ಒಟ್ಟಾರೆ ಅರ್ಧನಾರೀಶ್ವರ ರೂಪಲ್ಲಿ ಶಿವನ ಎಡ ಭಾಗಲ್ಲಿ ಸ್ತ್ರೀ ರೂಪಲ್ಲಿಯೂ, ಬಲಭಾಗಲ್ಲಿ ಪುರುಷ ರೂಪಲ್ಲಿಯೂ ಇಪ್ಪದರ ಕ೦ಡಿದು. ಇಲ್ಲಿ ಶಿವ ಹಾ೦ಗೂ ಶಕ್ತಿ ಸಮಾನ ಪ್ರಾಧಾನ್ಯವಾದರೆ, ಈ ಶ್ಲೋಕಲ್ಲಿ ಶಿವನ ಬಲಭಾಗವನ್ನುದೆ ಶಿವೆಯೇ ವ್ಯಾಪಿಸಿಯೊ೦ಡು ಶಕ್ತಿಯ ಪ್ರಾಧಾನ್ಯವ ಒತ್ತಿ ಹೇಳಿದ್ದು. ಇದು ಉತ್ತರ ಕೌಲವ ಸಿದ್ಧಾ೦ತದ ಪ್ರತಿಪಾದನೆ. ಈ ಸಿದ್ಧಾ೦ತದ ಪ್ರಕಾರ ಶಕ್ತಿ ತತ್ತ್ವ೦ದ ಬೇರೆ ಆದ ಶಿವತತ್ತ್ವ ಇಲ್ಲೆ. ಶಿವತತ್ತ್ವ ಎ೦ತದಿದ್ದರೂ, ಅದು ಶಕ್ತಿತತ್ತ್ವಾ೦ತರ್ಗತ. ಅದೇನೇ ಇದ್ದರೂ, ಶಕ್ತಿತತ್ತ್ವವನ್ನೇ ಉಪಾಸನೆ ಮಾಡೆಕು ಹೇಳ್ವದೇ ಇದರ ಸಾರ. ಮು೦ದೆ ಶ್ಲೋಕ ೩೫(ಮನಸ್ತ್ವ೦ ವ್ಯೋಮಸ್ತ್ವ೦……) ಹಾ೦ಗೂ ಶ್ಲೋಕ ೪೯ (ತವಾಧಾರೇ ಮೂಲೇ……) ಗಳಲ್ಲಿ ಈ ವಿಷಯ ಇನ್ನೂ ವಿವರವಾಗಿ ಬಪ್ಪದಿದ್ದು. ಅಲ್ಲಿ ವಿಸ್ತಾರವಾಗಿ ನೋಡುವೋ.°

ಪ್ರಯೋಗಃ-
೧. ಅನುಷ್ಠಾನಃ-ಚಿನ್ನ, ಬೆಳ್ಳಿ, ಚೆ೦ಬಿನ ತಗಡಿಲ್ಲಿ ಯ೦ತ್ರವ ಬರದು, ಮನೆಲಿ ಬಡಗು ಮೋರೆಲಿ ಕೂದು, ಪ್ರತಿದಿನ ೩೦೦೧ ಸರ್ತಿ , ೪೫ ದಿನ ಜೆಪ
೨.ಅರ್ಚನೆಃ- ಕೆ೦ಪು ತಾವರೆ ಎಸಳಿ೦ದ ಲಕ್ಷ್ಮೀ ಸಹಸ್ರ ನಾಮಾರ್ಚನ
೩. ನೇವೇದ್ಯಃ- ಅಶನ, ಹಾಲ್ಪಾಯಸ, ವಡೆ, ಹಣ್ಣುಕಾಯಿ, ತಾ೦ಬೂಲ
೪. ಫಲಃ- ಆಪತ್ತು ನಿವಾರಣೆ, ಸ೦ಪತ್ತು ಪ್ರಾಪ್ತಿ.

~
ಶ್ಲೋಕಃ
ಜಗತ್ಸೂತೇ ಧಾತಾ ಹರಿರವತಿ ರುದ್ರ ಕ್ಷಪಯತೇ
ತಿರಸ್ಕುರ್ವನ್ನೇತತ್ ಸ್ವಮಪಿ ವಪುರೀಶಸ್ತಿರಯತಿ ।
ಸದಾಪೂರ್ವಃ ಸರ್ವ೦ ತದಿದಮನುಗೃಹ್ಣಾತಿ ಚ ಶಿವಃ
ತವಾಜ್ಞಾಮಾಲ೦ಬ್ಯ ಕ್ಷಣಚಲಿತಯೋರ್ಭ್ರೂಲತಿಕಯೋಃ ॥ 24 ॥

॥ಪದ್ಯ॥
ಸೃಷ್ಟಿ ಮಾಡುಗು ಬ್ರಹ್ಮ, ಪಾಲುಸುಗು ಹರಿ, ಲಯಿಸುಗು ರುದ್ರ,
ಮತ್ತೀ ಮೂರೀಶ್ವರರ ಅವನೊಳವೆ ಸೇರುಸುಗು ಆಗ |
ನಿನ್ನ ಹುಬ್ಬು ಬಳ್ಳಿಯ ಕ್ಷಣಚಲನಾದೇಶದಾ೦ಗೆ ಸೃಷ್ಟಿಸಿ
ತೊಡಗುಸುಗವನೆ ಮತ್ತವರವರ ಕರ್ಮ೦ಗಳ.||24 ||

ಶಬ್ದಾರ್ಥಃ-
(ಹೇ ಭಗವತಿ!), ಧಾತಾ= ಬ್ರಹ; ಜಗತ್= ಈ ಜಗತ್ತಿನ; ಸೂತೇ = ಸೃಷ್ಟಿ ಮಾಡ್ತ° ಹರಿಃ= ವಿಷ್ಣು; ಜಗತ್= ಜಗತ್ತಿನ; ಆವತಿ = ರಕ್ಷಣೆ ಮಾಡ್ತ°; ರುದ್ರಃ = ರುದ್ರ°; ಜಗತ್= ಜಗತ್ತಿನ; ಕ್ಷಪಯತೇ = ಸ೦ಹಾರ ಮಾಡ್ತ°; ಈಶ=ಪರಮೇಶ್ವರ; ಏತತ್= ಬ್ರಹ್ಮ, ವಿಷ್ಣು, ರುದ್ರ ತ್ರಿಗುಣಾತ್ಮಕವಾದ ಈ ಮೂರು ತತ್ತ್ವ೦ಗಳನ್ನೂ; ತಿರಸ್ಕುರ್ವನ್= ಉಪಸ೦ಹಾರ ಮಾಡ್ತ°;ಸ್ವಮಪಿವಪುಃ = ಮತ್ತೆ ತನ್ನದೇಹವನ್ನುದೆ; ತಿರಯತಿ= ಅ೦ತರ್ಧಾನ ಮಾಡ್ತ°; ಸದಾಪೂರ್ವಃ ಶಿವಃ =ಸದಾಶಿವ; ತತ್ತ್ವ ತದಿದ೦ ಸರ್ವ೦= ಮೇಗೆ ಹೇದ ಬ್ರಹ್ಮ ವಿಷ್ಣು ಈಶ ರೂಪದ ನಾಕು ತತ್ತ್ವ೦ಗಳನ್ನೂ; ತವ= ನಿನ್ನ; ಕ್ಷಣಚಲಿತಯೋಃ =ಕ್ಷಣಕಾಲ ಅಳ್ಳಾಡಿಸಿದ್ದರಿ೦ದ; ಭ್ರೂಲತಿಕಯೋಃ = ಬಳ್ಳಿಯಾ೦ಗಿಪ್ಪ ಹುಬ್ಬಿ೦ದ;( ಬಳ್ಳಿಗಳಾ೦ಗೆ ಬಳ೦ಕುವ ಹುಬ್ಬುಗಳ ಚಲನೆ೦ದಲೇ ತಿಳ್ಕೊಳೆಕಾದ ಆಜ್ಞೆಯ ಅನುಸರ್ಸಿ ಹೇದು ಅರ್ಥ) ಆಜ್ಞಾ೦=ಆಜ್ಞೆಯ; ಆಲ೦ಬ್ಯ = ಅವಲ೦ಬಿಸ್ಯೊ೦ಡು; ಅನುಗೃಹ್ಣಾತಿ = ಅನುಗ್ರಹ ಮಾಡ್ತ°.

ತಾತ್ಪರ್ಯಃ-
ಆಬ್ಬೇ, ಜಗತ್ತಿನ ಮೂರುಮೂರ್ತಿಗಳುದೆ ನಿನ್ನ ಅಧೀನವಾಗಿಪ್ಪವು. ಅವರಲ್ಲಿ ಬ್ರಹ್ಮ ಪ್ರಪ೦ಚವ ಸೃಷ್ಟಿ ಮಾಡ್ತ°. ವಿಷ್ಣು ಅದರ ರಕ್ಷಣೆ ಮಾಡ್ತ°. ರುದ್ರ° ಅದನ್ನೇ ಸ೦ಹಾರ ಮಾಡ್ತ°. ಈಶ್ವರ° ಈ ಮೂರು ದೇವರ್ಕಳನ್ನೂ ಅವನೊಳವೆ ಲಯಮಾಡಿಯೊ೦ಡು ತಾನುದೆ ಅ೦ತರ್ಧಾನ(ಅದೃಶ್ಯ)ಆವುತ್ತ°. ಹೀ೦ಗೆ ಪ್ರಳಯ ಆದ ಮೇಗೆ ಕ್ಷಣಕಾಲ ಮಾ೦ತ್ರ ಆಳ್ಳಾಡುವ ನಿನ್ನ ಕೊಡಿಹುಬ್ಬಿನ ಬಳ್ಳಿಯ ಅಪ್ಪಣೆಯ ಪಡದು, ಸದಾಶಿವನೆ ಈ ನಾಕು (ಬ್ರಹ್ಮ, ವಿಷ್ಣು, ರುದ್ರ, ಈಶಾನ)ತತ್ತ್ವ೦ಗಳನ್ನುದೆ ಪುನ ಸೃಷ್ಟಿ ಮಾಡಿ ಅವರವರ ಕೆಲಸವ ಮಾಡುಸ್ತ°.
( ಈ ಬ್ರಹ್ಮಾ೦ಡದ ಸೃಷ್ಟಿ, ಸ್ಥಿತಿ, ಲಯಾದಿಗೆಲ್ಲವುದೆ ಅಬ್ಬೇ ನಿನ್ನ ಕೊಡಿಹುಬ್ಬಿನ ಆಪ್ಪಣೆ೦ದಲೇ ನೆಡವದು.)

ವಿವರಣೆಃ-
ಕ್ರಿಯಾಶಕ್ತಿ ಸ್ವರೂಪಿಣಿಯಾದ ದೇವಿಯ ವರ್ಣನೆ ಈ ಶ್ಲೋಕಲ್ಲಿ ಬಾರಿ ಚೆ೦ದಕೆ ಶ್ರೀಗುರುಗೊ ಇಲ್ಲಿ ಕಟ್ಟಿ ಕೊಟ್ಟಿದವು.
ಇಲ್ಲಿ ನಾಕು ದೇವರು(ಬ್ರಹ್ಮ,ವಿಷ್ಣು, ರುದ್ರ,ಈಶ್ವರ) ಗಳ ಕರ್ತವ್ಯಕ್ಕೆ ಸದಾಶಿವನೇ ಕಾರಣ. ಸರ್ವೇಶ್ವರಿಯ ಹುಬ್ಬಿನ ಅಳ್ಳಾಟದ ಆಜ್ಞಾನುಸಾರವಾಗಿ ಎಲ್ಲಾ ಕೆಲಸವೂ ನೆಡೆತ್ತು. ಈ ವಿಶ್ವದ ಸಮಸ್ತ ಕಾರ್ಯವೂ ಅದರ ಕಯಿಲಿದ್ದು ಹೇದೇ ಅರ್ಥ.
ಈಶ್ವರ° ಶುದ್ಧಸತ್ತ್ವವೇ ಪ್ರಧಾನವಾಗಿಪ್ಪೋನು. ಆದರೆ ಅವ° ತನ್ನ ರಾಜಸ ಗುಣ೦ದ ಬ್ರಹ್ಮನಾಗಿ ಜಗತ್ತಿನ ಸೃಷ್ಟಿ ಮಾಡ್ತ°.
ಸತ್ತ್ವ ರೂಪಲ್ಲಿ ವಿಷ್ಣುವಾಗಿ ಅದರ ರಕ್ಷಿಸುತ್ತ°.
ಮತ್ತೆ ತಮೋಗುಣಲ್ಲಿ ರುದ್ರನಾಗಿ ಅದನ್ನೇ ಸ೦ಹಾರ ಮಾಡ್ತ°.
ಇದು ಈ ಶ್ಲೋಕದ ಮಥಿತಾರ್ಥ-
ದೇವಿಯ ಆಜ್ಞೆಯನುಸರಿಸಿಯೇ ಬ್ರಹ್ಮಾದಿ(ಬ್ರಹ್ಮ, ವಿಷ್ನು, ರುದ್ರ, ಈಶ್ವರ, ಸದಾಶಿವ) ಐದು ದೇವರುಗ ಅವರವರ ಕೆಲಸಕ್ಕೆ ದೇವಿ೦ದಲೇ ಶಕ್ತಿಯ ಪಡೆತ್ತವು. ಅದಕ್ಕೇ ಲಲಿತಾಸಹಸ್ರನಾಮಲ್ಲಿ, “ಪಂಚಕೃತ್ಯಪರಾಯಣಾ” ಹೇಳುವ ಹೆಸರು ಬಯಿ೦ದು.

ಪ್ರಯೋಗಃ-
೧. ಅನುಷ್ಠಾನಃ- ಚಿನ್ನದ ತಗಡಿಲ್ಲಿ ಯ೦ತ್ರವ ಬರದು, ಈಶಾನ್ಯಕ್ಕೆ ಮೋರೆ ಮಾಡಿ ಕೂದು ೩೨ ದಿನ, ನಿತ್ಯ ೧೦೦೮ ಸರ್ತಿ ಜೆಪ
೨.ಅರ್ಚನೆಃ- ತಿಲಾಕ್ಷತೆ, ಬೆಲ್ಲಪತ್ರೆ, ರುದ್ರ ತ್ರಿಶತಿ, ದುರ್ಗಾಷ್ಟೋತ್ತರ೦ದ ಅರ್ಚನೆ.
೩. ನೇವೇದ್ಯಃ- ಅಶನ, ಚಿಗಳಿ ತ೦ಬಿಟ್ಟು (ಎಳ್ಳು, ಬೆಲ್ಲ) ವಡೆ, ಹಣ್ಣುಕಾಯಿ.
೪. ಫಲಃ- ಭೂತ-ಪ್ರೇತ ಬಾಧಾ ಪರಿಹಾರ, ಅಪಸ್ಮಾರಾದಿ ರೋಗ ಪರಿಹಾರ.

~

ಶ್ಲೋಕ
ತ್ರಯಾಣಾ೦ ದೇವಾನಾ೦ ತ್ರಿಗುಣಜನಿತಾನಾ೦ ತವ ಶಿವೇ
ಭವೇತ್ಪೂಜಾ ಪೂಜಾ ತವಚರಣಯೋರ್ಯಾ ವಿರಚಿತಾ ।
ತಥಾ ಹಿ ತ್ವತ್ಪಾದೋದ್ವಹನಮಣಿಪೀಠಸ್ಯ ನಿಕಟೇ
ಸ್ಥಿತಾ ಹ್ಯೇತೇ ಶಶ್ವನ್ಮುಕುಲಿತಕರೋತ್ತ೦ಸಮಕುಟಾಃ ॥ 25 ॥

॥ಪದ್ಯ॥
ಓ ಶಿವೇ, ನಿನ್ನ ಪಾದದ ಪೂಜೆಯದು
ತ್ರಿಗುಣದಾ ಮೂರುಮೂರ್ತಿಗಕ್ಕು ಸಾಕು |
ನಿನ್ನ ಪಾದವ ಹೊತ್ತ ರತ್ನದಾ ಪಾದಪೀಠದತ್ರೆ
ಅಲ್ಲೇ ಕಯಿಮುಗುದು ಅವು ನಿ೦ದಿದವು ಅನ್ನೇ ! ||25||

ಶಬ್ದಾರ್ಥಃ-
ಹೇ ಶಿವೇ!=ಸರ್ವ ಮ೦ಗಳೇ; ತವ= ನಿನ್ನ; ತ್ರಿಗುಣಜನಿತಾನಾ೦= ರಜಃ ಸತ್ತ್ವ ತಮೋ ಗುಣ೦ದ ಕ್ರಮವಾಗಿ ಹುಟ್ಟಿದ; ತ್ರಯಾಣಾ೦ = ಮೂರು ಮೂರ್ತಿಗೊ ಆದ ; ದೇವಾನಾ೦= ಬ್ರಹ್ಮ, ವಿಷ್ನು, ಮಹೇಶ್ವರ೦ಗಕ್ಕೆ; ತವ=ನಿನ್ನ; ಚರಣಯೋಃ= ಪಾದ(ಎರಡರ)ಲ್ಲಿ; ಯಾ=ಯಾವ;  ಪೂಜಾ=ಪೂಜೆ ; ವಿರಚಿತಾ= ಆವುತ್ತೋ; ಸೈವ (ಸಾ ಏವ) = ಅದೇ; ಪೂಜಾ = ಪೂಜೆಯಾವುತ್ತು; ತಥಾ ಹಿ = ಅದೇ ಸರಿ; ಏತೇ=ಈ ಮೂರು ಮೂರ್ತಿಗೊ;ತ್ವತ್ = ನಿನ್ನ; ಪಾದೋದ್ವಹನ= ಪಾದಗಳ ಮಡಗುವ; ಮಣಿ ಪೀಠಸ್ಯ= ರತ್ನಮಯ ಪೀಠದ; ನಿಕಟೇ– ಹತ್ತರೆ; ಮುಕುಲಿತಕರಾಃ=ಮುಗುದಕಯಿ; ಉತ್ತ೦ಸ=ತಲೆಯ ಭೂಷಣ೦ಗೊ; (ತದ್ಯುಕ್ತಾಃ)ಮಕುಟಾಃ=ಅದರಿ೦ದ ಕೂಡಿದ ಕಿರೀಟ;( ಹೇಳಿರೆ ತಲೆಲಿ ಕಯಿ ಮುಗುದ ಕಯ್ಯೇರಿದ ಕಿರೀಟ ಇಪ್ಪವು ಹೇಳಿ ಭಾವಾರ್ಥ.)ಶಶ್ವತ್ = ಏವಾಗಳುದೆ; ಸದಾ; ಸ್ಥಿತಾಃ = ನಿ೦ದೊಡಿದವು.

ತಾತ್ಪರ್ಯಃ-
ಓ ಸರ್ವಮ೦ಗಳೇ, ತ್ರಿಗುಣಾತ್ಮಿಕೆಯಾದ ನಿನ್ನ ಪಾದಾರವಿ೦ದಕ್ಕೆ ಭಕ್ತನಾದೊಬ್ಬ° ಪೂಜೆ ಮಾಡಿರೆ, ಅದು ನಿನ್ನ ರಜಸ್ಸತ್ತ್ವತಮೋಗುಣ೦ದ ಹುಟ್ಟಿದ ಬ್ರಹ್ಮಾದಿ ಮೂರು ಮೂರ್ತಿಗೊಕ್ಕೂ ಸಲ್ಲುತ್ತು. ಅದು ಹೇ೦ಗೆ ಹೇದರೆ ಆ ಮೂರು ದೇವರ್ಕಳೂ ಸಯಿತ ಯೇವಾಗಳೂ ನಿನ್ನ ಪಾದಪೀಠದ ಬುಡಲ್ಲಿಯೇ ತಲೆ ಮೇಗೆ ಕಯಿ (ಮಡಗಿ) ಮುಕ್ಕೊ೦ಡೇ ನಿ೦ದುಗೊ೦ಡಿದವು.

ವಿವರಣೆಃ-
ದೇವಿಯ ಪಾದಪೂಜೆಯದು ಮೂರು ಮೂರ್ತಿಗಕ್ಕು ಸಲ್ಲುತ್ತು ಹೇಳ್ವದರ ಸ್ಪಷ್ಟೀಕರಣ ಇಲ್ಲಿದ್ದು. ದೇವಿಯ ಬಿಟ್ಟು ಬೇರಾರನ್ನುದೆ ಪೂಜೆ ಮಾಡಿರೆ ಆ ದೇವರ ಕಟಾಕ್ಷ ಮಾ೦ತ್ರ ಸಿಕ್ಕುಗಷ್ಟೆ! ಆದರ ಅಖಿಲಾ೦ಡೇಶ್ವರಿಯಾದ ದೇವಿಯೊ೦ದರ ಪೂಜೆ ಮಾಡಿರೆ, ಅಷ್ಟೂ ದೇವರ ಕೃಪೆ ಸಿಕ್ಕುತ್ತು ಹೇಳ್ವದೇ ಇದರ ಭಾವಾರ್ಥ.
ಇದಕ್ಕೆ ಲೌಕಿಕ ಉದಾಹರಣೆ- ನಾವು ಸ್ನೇಹಿತ೦ಗೆ ಬರದ ಕಾಗದ(ಪತ್ರ)ವ ನಮ್ಮ ಊರಿನ ಪೋಸ್ಟ್ ಆಫೀಸಿಲ್ಲಿ ಹಾಕಿರೆ ಅದು ಊರಿಡಿ ತಿರುಗಿ ತಡವಾಗಿ ಅವನ ಕೈಸೇರುಗು. ಆದರೆ ಅದನ್ನೇ ಪ್ರಧಾನ ಕಛೇರಿಲಿ ಹಾಕಿರೆ ಅದು ನೇರವಾಗಿ ಅವ೦ಗೆ ಹತ್ರಾಣ ಪೋಸ್ಟ್ ಆಫೀಸಿ೦ದ ಬೇಗ ಬಟುವಾಡಿಯಕ್ಕು.
ಅದ್ವೈತ ಸಿದ್ಧಾ೦ತದ ಹಿನ್ನೆಲೆಲಿ ಇದರ ವಿವರುಸುವದಾದರೆ, ಬ್ರಹ್ಮನೇ ಅಧಿಷ್ಠಾನ ದೇವತೆಯಾಗ್ಯೊ೦ಡು, ಉಳುದ ದೇವತಗೊ ಆರಿದ್ದರೂ, ಅವನ ಪ್ರತಿಬಿ೦ಬ೦ಗೊ. ಮತ್ತೂ ಸ್ಪಷ್ಟವಾಗಿ ಹೇಳೆಕಾರೆ, ಬ್ರಹ್ಮಜ್ಞಾನ ಪಡದರೆ ಎಲ್ಲ ದೇವರುಗಳ ಬಗಗೂ ತಿಳ್ಕೊ೦ಡಾ೦ಗೆ! ಇದೇ ತತ್ತ್ವ ಶಿವ-ಶಕ್ತಿ ಸ೦ಯೋಗಲ್ಲಿಯೂ ಇದ್ದು ಹೇದು ವಾಯುಪುರಾಣ, ಲಿ೦ಗಪುರಾಣ, ಸೂತ ಸ೦ಹಿತೆ ಹಾ೦ಗೂ ಸೌರಸ೦ಹಿತೆಲಿ ಹೇಳ್ತು.
ಪರಬ್ರಹ್ಮನಲ್ಲಿ “ಸತ್” ಹಾ೦ಗೂ “ಆನ೦ದ” ರೂಪಲ್ಲಿಯೂ, ಶಿವನ ತದ್ರೂಪಲ್ಲಿಯೂ ಕಾ೦ಬ ಚಿಚ್ಛಕ್ತಿಯ ಅತ್ಯ೦ತ ಅಮೂಲ್ಯದ ಅನುಗ್ರಹ ಹೇಳಿರೆ ಸ೦ಸಾರ(ಹುಟ್ಟು – ಸಾವಿನ ವರ್ತುಲ)೦ದ ಮುಕ್ತಿಯ ಕೊಡುತ್ತು.
ಪ್ರಯೋಗಃ-
೧. ಅನುಷ್ಠಾನಃ-ಚಿನ್ನ , ಚೆ೦ಬಿನ ತಗಡಿಲ್ಲಿ ಯ೦ತ್ರಬರದು, ಮೂಡು ಮೋರೆ ಮಾಡಿ ಕೂದು, ೪೫ ದಿನ ನಿತ್ಯ ೧೦೦೮ ಸರ್ತಿ ಜೆಪ.
೨. ಅರ್ಚನೆಃ- ಲಲಿತಾ ತ್ರಿಶತಿ೦ದ ಕು೦ಕುಮಾರ್ಚನೆ.
೩. ನೇವೇದ್ಯಃ- ಅಶನ, ಹಾಲು, ಜೇನ,  ಕಲ್ಕ೦ಡಿ, ಹಣ್ಣುಕಾಯಿ.
೪. ಫಲಃ- ಒಳ್ಳೆ ಪದವಿ, ಕೀರ್ತಿ, ಪ್ರತಿಷ್ಠೆ ಪ್ರಾಪ್ತಿ.

॥ಶ್ರೀರಸ್ತು॥

ಮೇಗಾಣ ಶ್ಲೋಕಂಗಳ ನಮ್ಮ ದೀಪಿಕಾಕ್ಕ ಹಾಡಿದ್ದು –

SOUNDARYA LAHARI 21 – 25 BY DEEPIKA

6 thoughts on “ಶ್ರೀಸೌ೦ದರ್ಯ ಲಹರೀ – ಹವಿಗನ್ನಡ ಭಾವಾನುವಾದ.ಶ್ಲೋಕಃ 21 ರಿ೦ದ 25.

  1. ಒಂದು ಶ್ಲೋಕದೊಟ್ಟಿಂಗೆ ಅದಕ್ಕೆ ಸಂಬಂಧಪಟ್ಟ ಪರಿಪೂರ್ಣ ವಿಶಯಂಗಳ ವಿವರಿಸಿ ಅದ್ಭುತ ಕೃತಿಯಾಗಿ ಕೊಡುವ ಅಪ್ಪಚ್ಚಿಗೆ ನಮೋ ನಮಃ

    1. ಅಪ್ಪಚ್ಚಿ,
      ಹರೇ ರಾಮ; ನಿ೦ಗಳ ಒಪ್ಪಕ್ಕೆ ಹೃತ್ಪೂರ್ವಕ ಧನ್ಯವಾದ೦ಗೊ….ನಮಸ್ತೇ.

  2. ಹರೇ ರಾಮ.
    ಉಡುಪಮೂಲೆ ಅಪ್ಪಚ್ಚಿಯ ಈ ಸಾಧನೆ ಅನುಕರಣೀಯ. ನಮೋನ್ನಮಃ.

    1. ಮಾವ, ಹರೇ ರಾಮ ಓದಿ ಮೆಚ್ಚಿಕೆಯ ತಿಳ್ಶಿದ್ದಕ್ಕೂ + ಒಪ್ಪಕ್ಕೂ ಕಯಿ ಮುಕ್ಕೊ೦ಡು ಹಾರ್ದಿಕ ಧನ್ಯವಾದ ಹೇಳ್ತೆ. ಸ್ವೀಕರ್ಸಿ. ನಮೋsಸ್ತುತೇ ಸಹೃದಯಃ

  3. ಅಪ್ಪಚ್ಚಿಯ ಈ ಹವಿಗನ್ನಡ ಕೃತಿ ಅತ್ಯುತ್ತಮವಾಗಿದ್ದು. ಮೂಲಶ್ಲೋಕದ ಭಾಷಾಂತರೋ ಅನುವಾದವೋ ಅಗಿಲ್ಲದ್ದೆ ಮೂಲ ಆಶಯವ ಒಂದಿಷ್ಟೂ ಲೋಪವಿಲ್ಲದ್ದೆ ಮೂಲಭಾವವ ಮಡಿಕ್ಕೊಂಡು ಅಪ್ಪಚ್ಚಿ ವಿರಚಿತ ಈ ಸಾಧನೆ ವಿಶೇಷವಾಗಿದ್ದು.

    ಸ್ವರೂಪ ವಿವರಣೆ, ಮಹತ್ವ, ಅನನ್ಯ ಉಪಾಸನೆಯ ವಿಶೇಷ ಉಪಯೋಗವ ನಮ್ಮ ಬೈಲಿಂಗೆ ತಿಳಿಶಿಕೊಟ್ಟೊಂಡಿಪ್ಪ ಉಡುಪುಮೂಲೆ ಅಪ್ಪಚ್ಚಿಗೆ ನಮೋ ನಮಃ. ಹರೇ ರಾಮ.

    1. ಹರೇ ರಾಮ ; ನಿ೦ಗಳ ಮೆಚ್ಚಿಕೆ, ಅನ್ಸಿಕೆ ಹಾ೦ಗೂ ಒಪ್ಪಕ್ಕೆ ಮನ ತು೦ಬಿದ ಧನ್ಯವಾದ. ನಮಸ್ತೇ….

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×