Oppanna.com

ಬೈಲಿಲಿ ಒಂದಿನ ತಿರಿಗಿದ್ದು ..

ಬರದೋರು :   ಚೆನ್ನೈ ಬಾವ°    on   18/05/2012    28 ಒಪ್ಪಂಗೊ

ಚೆನ್ನೈ ಬಾವ°

ಮೊನ್ನೆ ಆದಿತ್ಯವಾರ. ಶನಿವಾರ ಸಮಕ್ಕೆ ಮಳೆ ಸೊಯ್ಪಿದ ಕಾರಣ ಬೆಶಿಲ ಗಾವೂ ಇಲ್ಲೆ. ಇನ್ನು ಮಳೆ ಬತ್ತರೂ ಹೊತ್ತೋಪಗ ಗುಡುಗಿದ ಮತ್ತೆಯೇ . ಆದಿತ್ಯವಾರ ಆದ ಕಾರಣ ನವಗೆ ರಜೆ ಪುರುಸೊತ್ತುದೇ. ಅಂತೇ ಮನೇಲಿ ಕೂದೊಂಡು ಎಂತ ಮಾಡುತ್ಸು. ಎಷ್ಟು ಟಿವಿಯನ್ನೇ ನೋಡುತ್ಸು. ಒಂದು ಚಾನ್ನಲ್ಲಿಲಿ ಬಂದ ಹಾಂಗಿರ್ತ್ಸೆ ಇನ್ನೊಂದು ಚಾನೆಲಿಲಿ ಬತ್ತದುದೆ. ಬೊಡುತ್ತಪ್ಪ. ಎಲ್ಯಾರು ತಿರುಗಿಯೊಂಡು ಹೋಪ° ಹೇಳಿರೆ ಎಲ್ಲಿಗಪ್ಪ ಹೋವುಸ್ಸು.  ಒಬ್ಬನೇ ಹಾಂಗೆ ಹೋಪಲೆ ಉದಾಸನ ಆವ್ತುದೇ. ಪೆಂಗಣ್ಣ ಇಕ್ಕೋ ..ಯಾವ್ಯೂರಿಲ್ಲಿದ್ದನೋ ಇಂದು. ಏವ ವರದಿಯೋ, ಯಾವ ರೈಲೋ. ಗುಣಾಜೆ ಮಾಣಿ ಯಡ್ಡಿ ರೆಡ್ಡಿ ಹೇಳಿ ತೆರಕ್ಕಿಲ್ಲಿ ಇಪ್ಪದು ಒಂದು ನಮೂನೆ ಆದರೆ ಪೆಂಗಣ್ಣನದ್ದು ಇನ್ನೊಂದು ನಮೂನೆ. ಸರಿ, ನೋಡ್ವೋ ಹೇಳಿ ಉದಿಯಪ್ಪಗ ಎದ್ದ ಹಾಂಗೆ ಪೆಂಗಣ್ಣ ಫೋನಿಂಗಾದರೂ ಸಿಕ್ಕುತ್ತನೋ ಹೇಳಿ ಟ್ರಿನ್ ಟ್ರಿನ್ ಮಾಡಿತ್ತು.

‘ಹರೇ ರಾಮ’ ಹೇಳಿ ಆಚಿಗಂದ ಕೇಳಿತ್ತು, ‘ಹರೇ ರಾಮ’ ಹೇಳಿ ಈಚಿಗಂದಲೂ ಹೇಳಿತ್ತು. ರಾಮ ರಾಮ ಸಿಕ್ಕಿದನ್ನೇ ಹೇಳಿ ಮನಸ್ಸಿಲ್ಲಿಯೇ ಹೇಳಿಗೊಂಡತ್ತು.

‘ಓಯಿ.., ಇಂದು ಪುರುಸೊತ್ತಿದ್ದೋ ನಿನಗೆ ಭಾವ°’ ಹೇಳಿ ಭಟ್ಟಮಾವನತ್ರೆ ದಿನ ನಿಘಂಟು ಮಾಡುವಾಂಗೆ ವಿಚಾರ್ಸಿಯೊಂಡತ್ತು. ಹಾ° ಎಂತಕೆ ಹೇದು ಕೇಟ°. ಅದಪ್ಪು.., ಎಂತಕೆ ಹೇಳಿ ಗೊಂತಾಗದ್ದೆ ನಾನು ಪ್ರೀ ಉಂಟು ಹೇಳುತ್ತೆಂತಕೆ ಅಪ್ಪೋ. ಅಂತೇ ಕೂದುಗೊಂಡಿದ್ದ, ಒರಗಿಯೊಂಡಿದ್ದ ಹೇಳಿ ಆರಾರಿನ್ನು ಬರವಲಾಗನ್ನೇ. ಅಲ್ಲದ್ದೇ ನೆಗೆಮಾಣಿಗೆ ಪೆಂಗಣ್ಣನ ಮೇಗೆ ಒಂದು ಕಣ್ಣು ಇದ್ದು ಕಣ್ಣ ಕೊಡಿಯಂಗೆ ಆಂಜುತ್ತನಿಲ್ಲೇದು. ಅಪ್ಪು… ಅಂತೇ ಸಾರಡಿ ತೋಡಿಲಿ ಕಟ್ಟದ ನೀರೂ ಇಲ್ಲದ್ದಿಪ್ಪಗ ಅಂತೇ ದಾಸನ ಹೂಗು ಕೊಯ್ವಲೆ ಬಾ ಹೇಳುಗು ಅವ°.  ‘ಇಂದು ಎನಗೆ ಎಡೆ ಇದ್ದು, ನಿನಗೂ ಎಡೆ ಇದ್ದರೆ ಒಪ್ಪಣ್ಣ ಬೈಲಿನವಕ್ಕೆ ಕಲಿಶಿ ಕೊಟ್ಟಾಂಗೆ ನಿನ್ನ ಬೈಕಿನ ಕಾಲೆಡಿಲಿ ಮಡಿಕ್ಕೊಂಡು ಬೈಲಿಂಗೆ ಒಂದು ಸುತ್ತು ಹಾಕಿ ಬಪ್ಪನೋ’ ಕೇಟೆ. ‘ಹಾ° ಸಮ, ರೆಡಿ’ ಹೇಳಿದ ಪೆಂಗಣ್ಣ. ಹಾ.. ಬಚಾವ್ ದೊಡ್ಡ ಒಂದು ಕೆಲಸ ಆತು ಇಲ್ಯಂಗೆ ಹೇದು ಮಾತ್ನಾಡಿದ ಪ್ರಕಾರ ಏಳು ಗಂಟೆಗೆ ಅಬ್ಬೆ ತೆಳ್ಳವು ರೆಡಿ ಹೇಳ್ವಾಗ ನಾವೂ ಮಿಂದು ರೆಡಿ ಆಗಿತ್ತು. ಸೂತಕ ಇದ್ದ ಕಾರಣ ಅರ್ಘ್ಯಜೆಪ ಕೆಲಸ ಇತ್ತಿಲ್ಲೆ ಅದಾ ಅಂದು.

ಮುಂದಂದ ಪೆಂಗಣ್ಣನೂ ಹಿಂದಂದ ಅನೂ ಬೈಕಿನ ಕಾಲೇಡೇಲಿ ಮಡಿಕ್ಕೊಂಡು ಕೂದಪ್ಪಗ ಬೈಕಿನ  ಡುರ್ರ್ ನೆ ಹೆರಡಿಸಿದ ಪೆಂಗಣ್ಣ. ಬೈಕು ಓಡುಸುತ್ತವಂಗೆ ದಾರಿಲಿ ಅಂತೇ ವರಕ್ಕು ತೂಗುತ್ಸು ಬೇಡ ಹೇದು, ಅದು ಇದೂ ಹೇಳಿ ಲೋಕಾಭಿರಾಮ ಲೊಟ್ಟೆ ಪಟ್ಟಾಂಗ ಮಾತ್ನಾಡಿಸಿಯೊಂಡು ಹೋವ್ತಾ ಇತ್ತು. ಅಷ್ಟಪ್ಪಗ ನೀರ್ಚಾಲು ಎತ್ತಿತ್ತು.

ನೀರ್ಚಾಲು ಹೇಳಿಯಪ್ಪಗ ಪೆರ್ವದಣ್ಣನ ನೆಂಪಾತು. ‘ಓಯಿ.. ಪೆರ್ವದಣ್ಣ ದುಬಾಯಿಂದ ಬೈಂದನಡ, ಒಂದರಿ ಮೋರೆ ನೋಡಿ ಮಾತಾಡಿಸಿಗೊಂಡು ಹೋಪೋ°’ ಹೇಳಿ ಗ್ರೇಶಿತ್ತು. ಮನೆಜಾಲಿಂಗೆ ಎತ್ತಿಯಪ್ಪಗ ಪೆರ್ವದಜ್ಜಿ ಹೇಳಿದವು “ಅವ°, ಗಣೇಶ°, ನಿನ್ನೇ ಹೋಗಿಯಾತು ವಾಪಾಸು” ಹೇದು. ಛೆ! ಹೇಳಿಕ್ಕಿ ಅಲ್ಲಿಂದಲೇ ತಿರುಗಿತ್ತು. ಸೀದಾ ಎತ್ತಿತ್ತು ದೊಡ್ಡಭಾವನಲ್ಲಿಗೆ. ದೊಡ್ಡಮಾವ ತಲಗೆ ಮುಂಡಾಸು ಕಟ್ಟಿಗೊಂಡು ಕೈಲಿ ಕತ್ತಿ ಹಿಡ್ಕೊಂಡು ಜಾಲಕರೇಲಿ ಆಚ ಹೊಡೆಂಗೆ ಹೋಪದು ಕಂಡತ್ತು. ಎಂಗಳ ಬೈಕು ಶಬ್ದ ಮಾವನ ಕೆಮಿಗೆ ಬಿದ್ದಿದಿಲ್ಲೆ, ನಾವಲ್ಲೆ ಹೋದ್ದೂ ಗೊಂತಾಯ್ದಿಲ್ಲೆ. ದೊಡ್ದಭಾವನ ಬೈಕೂ ಕಂಡತ್ತಿಲ್ಲೆ ಕಾರೂ ಕಂಡತ್ತಿಲ್ಲೆ. ದೊಡ್ಡಕ್ಕ° ಜಗುಲಿಂದ ಎಕ್ಕಳ್ಸಿ ನೋಡ್ತದು ನವಗೆ ಕಂಡತ್ತು. ಈಗಷ್ಟೇ ಮುಜುಂಗರಗೆ ಹೋದ್ದು ಹೇದವು. ಸರಿ ಇನ್ನಿಲ್ಲಿ ಬೈಕ್ ನಿಲ್ಲಿಸಿ ಕಾರ್ಯ ಇಲ್ಲೆ ಹೇಳಿ ಅಲ್ಲಿಂದ ಗುಡ್ಡೆ ಹತ್ತಿತ್ತು. ಇನ್ನೆಲ್ಲಿಗೆ ಮುಜುಂಗರೆ ಶಾಲೇಲಿ ಎಂತದೋ ಇದ್ದು ಪವನಜ ಮಾವನ ಕಾರ್ಯಕ್ರಮವೂ ಇದ್ದು ಹೇಳ್ವದು ಕೇಳಿದ್ದು ಮೊನ್ನೆಯೇ. ಅಂಬಗ ನಮ್ಮ ಗುರಿಕ್ಕಾರ್ರು ಎಲ್ಲ ಅಲ್ಲಿಗೆ ಎತ್ತಿಕ್ಕೊ? ಉಮ್ಮ, ಹೇದು ಎಂಗಳಷ್ಟಕ್ಕೇ ಹೇಳಿಗೊಂಡೆಯೋ°.  ಎಂತಾರು ನವಗೆ ಅಲ್ಲಿಗೆ ಬಿಡಿ ಆ ಬಯಲಿಂಗೆ ಇಳುದು ಗುಣ ಇಲ್ಲೆ ಹೇಳಿ ಕಂಡತ್ತು. ಎಡೆಪ್ಪಾಡಿ ಭಾವನೂ ಅಲ್ಲಿ ಸುಧರಿಕೆಲಿ ಇಕ್ಕಷ್ಟೇ.

ಸೀದಾ ಶೇಡಿಗುಮ್ಮೆ ಗೋಪಾಲಣ್ಣನಲ್ಲಿಗೆ ಹೋತು. ರಜೆ ಅಲ್ಲದೋ, ಅವು ಮನೇಲಿ ಇಕ್ಕು, ಹಲವು ಕತೆ, ವಿಷಯ, ಲೆಕ್ಕ, ಒಗಟು ಅವರತ್ರಂದ ಕೇಳಿ ತಿಳ್ಕೊಂಬೊ ಹೇಳಿ ಅಲ್ಲಿಗೆ ಇಳುದ್ದದು ಮಾರಾಯ್ರೆ…ಅವ್ವೋ… ಕುಚ್ಚಿ ತೆಗುಶಲೆ ಕುಂಬಳಗೆ ಹೋಯ್ದವಡ!. ಎಲಾ.., ಇದಾಗ ಪಂಚಾತಿಗೆ ಹೇಳಿ ಅಲ್ಲಿಂದ ಚಾಂಬಿತ್ತು. ಹಳೆಮನೆ ಅಣ್ಣನಲ್ಲಿಗೆ ಹೋಪೋ°.. ಹೇಳಿ ಗ್ರೇಶಿದ್ದು ಮಾತ್ರ. ಗೊಂತಿಪ್ಪದೇ.. ಎಲ್ಲಿ ಫಟ ತೆಗವಲೆ ಹೋಯ್ದವೋ, ಎಲ್ಲಿ ವಿಡಿಯೋ ಹಿಡಿವಲೆ ಹೋಯ್ದವೋ. ಅಣ್ಣನೂ.. ತಮ್ಮನೂ… ಉಹುಮ್ಮ್ಮ್ಮ್ಮ್.  ಆತೇ ಇಲ್ಲೆ ಈ ಜಂಬ್ರ ತೆರಕ್ಕು ಮುಗಿಯದ್ದೆ. ಆತು ಜಂಬ್ರಲ್ಲಿ ಕಂಡಲ್ಲಿ ಏನು ಹೇಳಿ ಮಾತಾಡಿಸಿರೂ ಆಚಿಗೆ ನೋಡಿಯೊಂಡು ಈಚಿಗೆ ನವಗೆ ಒಳ್ಳೆದು ಹೇಳಿ ನೆಗೆ ಮಾಡುತ್ಸು ಮಾತ್ರ ಸಿಕ್ಕುಗಟ್ಟೆ. ಮತ್ತೆ ಅವರತ್ರೆ ಮಾತಾಡೆಕಾರೆ ಅವು ಪೆಟ್ಟಿಗೆ ತುಂಬುಸುತ್ತ ಹೊತ್ತು ಆಯೇಕು. ಬೇಡ ಹೇಳಿ ದಾರಿ ಬದಲಿಸಿತ್ತು.

ಸರಿ, ಅಡ್ಕತ್ತಿಮಾರು ಮಾವನ ಕಾಂಬೋ ಹೇಳಿ ಅಲ್ಲಿಗೆ ಎತ್ತಿತ್ತು. ಹೇಂಗೂ ಕಳುದ ವರ್ಷದ ಒಂದು ಕೇನ್ ತೆಂಗಿನೆಣ್ಣೆಯೂ, ಎರಡು ಕಟ್ಟು ಹಲಸಿನಕಾಯಿ ಹಪ್ಪಳ ಕಳುದ ವರ್ಷವೇ ಬಂದರೆ ಕೊಡುವೇ ಹೇಳಿದ್ದು ಬಾಕಿ ಇದ್ದತ್ತಿದಾ. ಈಗ ಹೋದರೆ ಹಲಸಿನ ಕಾಯಿ ದೋಸೆಯೂ ಸಿಕ್ಕುಗು. ಉದಿಯಪ್ಪಾಣದ್ದು ಗಟ್ಟಿ ಮಾಡಿಕೊಂಬಲಕ್ಕು ಹೇಳಿ ಅಲ್ಲಿಗೆ ಹೋದರೆ… ಅವು ಜೀಪ್ ತೆಕ್ಕೊಂಡು ಕೊಪ್ಪರ ತುಂಬ್ಸ್ಯೊಂಡು ಅಂಬಗಷ್ಟೇ ಹೋದ್ದಡ. ಅದ್ರ ಇನ್ನು ಆಡಿಸಿ, ಎಣ್ಣೆ ಡಬ್ಬಿಲಿ ತುಂಬಸಿ  ಅವು ಎಷ್ಟೋತ್ತಿನ್ಗೆ ಬತ್ಸೋ…

ಅಲ್ಲಿಂದ ಹೆರಟತ್ತು. ಇದೆಂತ್ಸು ಇದ್ದು ಪೆಂಗಣ್ಣ ಯೇವುದರ ಮೋರೆ ನೋಡಿಕ್ಕಿ ಹೆರಟದಪ್ಪಾ ಗ್ರೇಶಿಯೊಂಡೆ ಮನಸ್ಸಿನೊಳಾದಿಕ್ಕೆ. ಬಾಯಿಬಿಟ್ಟು ಹೇಳಿರೆ ಅವ° ಇನ್ನು ಎಂತ ಗ್ರೇಶುತ್ತನೋ… ಅಲ್ಲಾ.. ಮದಾಲು ಇಳಿ ಕೆಳಗೆ ಹೇಳ್ತನೋ. ತಳಿಯದ್ದೆ ಕೂದತ್ತು.

ಕೊಡೆಯಾಲಕ್ಕೆ ಎತ್ತಿತ್ತು. ಇನ್ನೆಂತ ಮಾಡೇಕು. ನಮ್ಮವು ಇದ್ದವನ್ನೇ ಹೇಳಿ ಗ್ರೇಶಿಯೊಂಡು ನಮ್ಮ ಅಜ್ಜಕಾನ ಭಾವನ ಕಾಂಬದು ಹೇಳಿ ಗ್ರೇಶಿರೆ, ಆ ಮನುಷ್ಯ ಮುಜುಂಗರಗೆ ಹೋಪಲಿದ್ದು ಹೇಳಿ ನಿನ್ನೆಯೇ ಹೇಯ್ದನಡ. ಛೆ! ತಾಜುಮಹಲೂ ತಪ್ಪಿತ್ತನ್ನೇ ಅಂದರೂ ಶೇಡಿಗುಮ್ಮೆ ಪುಳ್ಳಿ ಇದ್ದನೋ ಕೇಳಿರೆ ಅವನೂ ಲೆಕ್ಚರ್ ಅಕ್ಕನೂ ಕಾರ್ಲಿ ಉದಿಯಪ್ಪಗಳೇ ಹೆರಟಿಕ್ಕಿ ಹೋಯ್ದವಡ. ಎಲ್ಲಿ ಗಾಳಿಪಟ ಹಾರ್ಸಲಿದ್ದೋ! ಆದಿತ್ಯವಾರ ಅಲ್ಲದೋ.. ಕುಂಟಾಂಗಿಲ ಭಾವ ಗುಡಿ ತೆಗೆಕ್ಕಾರೆ ಮಧ್ಯಾಹ್ನ ಅಕ್ಕು. ಅಕ್ಷರದಣ್ಣ ಆದಿತ್ಯವಾರ ರಜೆ ಹೇಳಿ ಶನಿವಾರ ಇರುಳೇ ಹೆರಟಿಕ್ಕಿ ಹೋಯ್ದವಡ. ಎಲ್ಲಿಗೆ? ಉಮ್ಮಪ್ಪ. ನವಗೆಂತದಕೆ ಅದೆಲ್ಲ ಚೋದ್ಯ. ಮಂಗ್ಳೂರ ಮಾಣಿ… ಎಲ್ಲಿ ರುದ್ರ ಹೇಳ್ಳೆ ಹೋಯ್ದನೋ. ಬೊಳುಂಬು ಗೋಪಾಲ ಮಾವ, ಪಟದ ಶ್ಯಾಮಣ್ಣ, ಮರುವಳ ಮಾವ, ನೀರಮೂಲೆ ಅಕ್ಕ, ಭಾಗ್ಯ ಅಕ್ಕನತ್ರೆ ಶುದ್ದಿ ಮಾತಾಡ್ಳೆ ಕೂದರೆ ಮಧ್ಯಾಹ್ನ ಮುಟ್ಟ ಅಲ್ಲೇ ಆಗಿ ಹೋಕು. ಬಿಟ್ಟತ್ತು ಮಂಗಳೂರ ವಹಿವಾಟು ಆಗ ಹೇಳಿ. ಹೊಸಬೆಟ್ಟಿನವು ಡೆಲ್ಲಿಗೆ ಎತ್ತಿದ್ದವಡ ಹೇಳಿ ಮೊನ್ನೆಯೇ ಚಾವಡಿಲಿ ಪ್ರಚಾರ ಇದ್ದತ್ತು. ಇನ್ನು ಆ ಹೊಡೆ ಹೋಗಿ ಗುಣ ಇಲ್ಲೆ ಹೇಳಿ ತೀರ್ಮಾನಿಸಿತ್ತು.
ಗಾಡಿ ಪುತ್ತೂರ ಮಾರ್ಗ ಹಿಡುದತ್ತು. ಮುಳಿಯ ಭಾವ, ತೆಕ್ಕುಂಜ ಮಾವ, ಡೈಮಂಡು ಭಾವ, ಕೆಪ್ಪಣ್ಣ, ಚೆನ್ನಬೆಟ್ಟಣ್ಣ, ಚುಬ್ಬಣ್ಣ, ದೀಪಿಕಕ್ಕ, ಸುವರ್ಣಿನಿ ಅಕ್ಕ ಇವೆಲ್ಲಾ ಈಗ ಮೊನ್ನೆ ಮೊನ್ನೆಷ್ಟೇ ಎರಡೆರಡು ಸರ್ತಿ ಊರಿಂಗೆ ಬಂದಿಕ್ಕಿ ಹೋದ್ದಿದಾ. ಹಾಂಗಾಗಿ ಪ್ರತಿ ವಾರಾಂತ್ಯಲ್ಲಿ ಊರ್ಲಿ ಇಪ್ಪಲೆ ಅವ್ವೆಂತ ಸೀಸನ್ ಟಿಕೇಟು ಮಡಿಕ್ಕೊಂಡಿದವೋ!!.

ಗಂಟೆ ಹತ್ತುವರೆ. ಸರ್ಪಮಲೆ ಮಾವನ ಮನಗೆ ಎತ್ತಿತ್ತು. ದೊಡ್ಡಗ್ಲಾಸಿಲ್ಲಿ ಚಾಯವೂ, ಉಂಡ್ಳಕಾಳು ದಕ್ಕಿತ್ತು. ಮಾವನೂ ಪುರುಸೋತ್ತಿಲ್ಲಿ ಕೂದೊಂಡಿತ್ತಿದ್ದವು. ನಮ್ಮ ಆಗಮನ ಕೊಶಿ ಆತು. ಆದರೆ ಮಾವನ ಮೇಜು ಕಾಲಿ ಇಪ್ಪದು ನೋಡಿ ಎಂತಪ್ಪ ಹೇಳಿ ಆತು. ಕೇಳಿರೆ. ಪುಸ್ತಕ ಎಲ್ಲ ಈಗ ಒಳ ಕವಾಟಿಲಿ ಮಡಿಗಿದ್ದವಡ ಲೈಬ್ರರಿಲಿ ಮಡುಗುತ್ತ ಹಾಂಗೆ. ಹೆರ ತಂದು ಮಡುಗಿರೆ ಬಂದವು ಒಂದಾರಿ ಓದಿ ಕೊಡುತ್ತೆ ಹೇಳಿಕ್ಕಿ ಹೋದರೆ ಮತ್ತೆ ಅವರನ್ನೇ ಹುಡುಕೆಕ್ಕಾವ್ತಡ. ಅದಪ್ಪು. ನಮ್ಮ ಬೈಲಿಂದ ಒಬ್ಬ ಓ ಅಂದು ಹಾಂಗೆ ಮಾಡಿದ್ದು ನಾವಿನ್ನೂ ಮರದ್ದಿಲ್ಲೆ ಇದಾ.   ಸರಿ, ಸರ್ಪಮಲೆ ಮಾವನಲ್ಲಿ ಮಾತಾಡಿ ಆತು. ಅವಕ್ಕೂ ನವಗೂ ಸಂತೋಷ ಆತು.

ಇನ್ನೆಲ್ಲಿಗೆ ? ಎಲ್ಲಿಗೆ ಉಮ್ಮ? ಚೂರಿಬೈಲು ದೀಪಕ್ಕ, ಡಾಗುಟ್ರಕ್ಕ, ವೇಣಿ ಅಕ್ಕಾ, ಕಳಾಯಿ ಅತ್ತೆ.. ಒಬ್ಬೊಬ್ಬನನ್ನೇ ನೆಂಪು ಆತು. ಹೋಪಲೆ ದಾರಿ ಗೊಂತಿಲ್ಲೆ. ಒಬ್ಬೊಬ್ಬನನ್ನೇ ನೆಂಪು ಆವ್ತು. ಹೋದರೆ ಏನಾರು ತಿಂಬಲೆ ಮಾಡಿ ತಂದು ಮಡುಗುತ್ತವು. ನಮ್ಮ ಹಡಗಿಲ್ಲಿ ಜಾಗೆಯೂ ಇಲ್ಲೆ ಅಷ್ಟಕ್ಕೆ ತಕ್ಕಿತ. ಅಷ್ಟಪ್ಪಗ ನೆಂಪಾತು ಕೆದೂರು ಡಾಕುಟರ್ ಭಾವನ ಕಾಂಬಲೆ ಮರದತ್ತು ಬಪ್ಪ ದಾರಿಲಿ ಇಂದು ಹೇದು. ಛೆ! ಇನ್ನೆಂತ ಮಾಡುತ್ಸು… ಪೆಂಗಣ್ಣನತ್ರೆ ಈಗ ಹೇಳಿರೆ ಬೈಯದ್ದೇ ಉಳಿಗ. ತಳಿಯದ್ದೆ ಬಿಟ್ಟತ್ತು. ಮಾಷ್ಟ್ರುಮಾವನ ಈಗ ಮನ್ನೆಷ್ಟೇ ಕಂಡದು ಕಾನಾವಣ್ಣನ ಉಪ್ನಾನಲ್ಲಿ. ಇನ್ನೀಗ ವಾಪಾಸು ಹೋಗಿ ಅವರ ಹೊಗೆಸೊಪ್ಪಿನಂಡೆಯ ಕಾಲಿ ಮಾಡುತ್ಸು ಬೇಡ ಕಂಡತ್ತು. ಹೋದರೆ ಶಾಂತತ್ತೆ ಕೈಂದ ಹೋಮ್ ಮೇಡ್ ‘ಸಂಜೀರ’ ತಟ್ಟೆ ಕಾಪಿ ಗ್ಲಾಸಿನೊಟ್ಟಿಂಗೆ ಸಿಕ್ಕುತಿತ್ತು. ಅಂದರೂ ಇನ್ನೂ ಬಾಕಿದ್ದವರ ಕವರ್ ಮಾಡೆಕ್ಕನ್ನೆ.   ವಿದ್ಯಾಕ್ಕನನ್ನೂ ಮನ್ನೆ ಕಾನಾವಿಲ್ಲಿ ಮಾತ್ನಾಡಿಸಿ ಆಯ್ದು. ವೇಣೂರಣ್ಣ ಎಲ್ಲಿ ಮೊಕ್ಕಾಂ ಹೇಳಿ ಗೊಂತಿಲ್ಲೆ. ಕೊಳಚಿಪ್ಪು ಭಾವ ಓದುವದರ್ಲ್ಲೆ ಬೆಚ್ಚ. ಬೆಟ್ಟುಕಜೆ ಅನಂತಣ್ಣ ಯಾವುದಾರು ಜಂಬ್ರಲ್ಲಿ ಕಾಣದ್ದೇ ಇರ್ತವಿಲ್ಲೆ. ಪೆರ್ಲದಣ್ಣನ, ಎರುಂಬು ಅಪ್ಪಚಿಯ, ಆಚಕರೆ ಭಾವನ, ನೀರ್ಕಜೆ ಅಣ್ಣನ ನಂಬ್ರ ಇಲ್ಲೆ.  ಪುಟ್ಟಮಜಲ ಪುಟ್ಟ ಭಾವ, ಬಲ್ನಾಡು ಭಾವ, ವಿಷ್ಣುನಂದನ, ಹರೀಶ್ ಕೇವಳ ಊರ್ಲಿ ಇಲ್ಲೆ. ಸಂಕಹಿತ್ಲ ಸುಮನಕ್ಕನೂ ಅಷ್ಟೇ. ಮಾಡಾವು ಗಣೇಶ ಮಾವಂಗೆ ಇಂದು ಎಲ್ಲಿದ್ದೋ ಸ್ವಾಹಾ ಹೇಳ್ಳೆ. ಈಗಷ್ಟೇ ಮದುವೆ ಕಳುದ ಕಾರಣ ಒತ್ತರೆ ಮಾಡ್ತ ಲೆಕ್ಕಲ್ಲಿ ಬಂಡಾಡಿ ಅಜ್ಜಿಗೂ ಪುರುಸೊತ್ತಾಯ್ದಿಲ್ಲೆ, ಮದುವೆ ಸಮ್ಮಾನ ಲೆಕ್ಕಲ್ಲಿ ಬಂಡಾಡಿ ಪುಳ್ಳಿಗೂ ಪುರುಸೊತ್ತಿಲ್ಲೆ. ಅಂತೂ ಇಂತೂ ಮಧ್ಯಾಹ್ನ ಎತ್ತಿತ್ತು ನಾವು ಕಾನಾವು ಡಾಕುಟ್ರು ಭಾವನಲ್ಲಿಗೆ. ಅಲ್ಲಿಗೆ ಹೋದಮತ್ತೆ ಮನಗೆ ಹೋಗದ್ರೆ ‘ಹಸಿ ಹಸಿ ಬೈಗು ಶ್ರೀ ಅಕ್ಕಾ’ ಹೇಳಿದ° ಪೆಂಗಣ್ಣ. ಬೈಲಿನವು ಆರಾರು ಪುತ್ತೂರ ಹೊಡೆಂಗೆ ಹೋದರೆ ಮಾತಾಡ್ಸದ್ದೆ ಹೋದರೆ ಅವ್ವಲ್ಲಿಂದ ಹೆರಡೆಕ್ಕಾರೆ ಮದಲೇ ಅಕ್ಕಂಗೆ ರಿಜಿಸ್ಟ್ರಿ ಆವ್ತು – ‘ಇಂತವರು ಬಂದಿದ್ದಾರೆ ಸುದ್ದಿ ಇಲ್ಲದ್ದೆ ಹೋಗಿದ್ದಾರೆ’ ಹೇಳಿ. ಅಂದರೂ ಅಕ್ಕಂಗೆ ಹತ್ರಾಣ ಕೆಲವು ಜೆನ ಶುದ್ದಿಲ್ಲದೆ ಸದ್ದಿಲ್ಲದೆ ಆ ಹೊಡೆಲಿ ಅಕ್ಕಂಗೆ ಗೊಂತಾಗದ್ದಾಂಗೆ ಬಂದಿಕ್ಕಿ ಹೋದರೂ ಮತ್ತೆ ಅರ್ಚನೆಗೆ ರೆಡಿ ಇರೆಕ್ಕಾವ್ತು.  ಸರಿ., ಮಧ್ಯಾಹ್ನ ಗುಜ್ಜೆ ಮೇಲಾರವೂ ಆತು, ಕಾಟು ಮಾವಿನಮೆಡಿ ಉಪ್ಪಿನಾಯಿಲಿ ಗಟ್ಟಿ ಊಟವೂ ಆತು.

ಹೆರಟತ್ತಲ್ಲಿಂದ ಕಾಪಿಗಪ್ಪಗ ಇನ್ನೊಂದು ದಿಕ್ಕಂಗೆ ಎತ್ತೆಕು ಹೇಳಿ. ಇನ್ನು ಎತ್ತಂದಾಗಿ. ಜಾಲ್ಸೂರ ಹೊಡೆಂಗೆ ತಿರ್ಗುಸುವನೋ ಯೋಚನೆ ಆತು ಸುಬಗಣ್ಣ ಜಾಣನ ರಜೆಲಿ ಕರಕ್ಕೊಂಡು ಯಾವೂರಿಲ್ಲಿದ್ದನೋ ಉಮ್ಮ. ಪುತ್ತೂರ ಪೇಟಗೆ ಎತ್ತಿತ್ತು. ಪುಟ್ಟಕ್ಕನನ್ನೂ ನೆಂಪಾತು – ಚರುಮುರಿಯೂ ನೆಂಪಾತು. ಮುಂದೆ ಬಪ್ಪಗ ಬಲತ್ತಿಂಗೆ ತಿರುಗಿರೆ ಉಪ್ಪಿನಂಗಡಿ. ಆ ಹೊಡೆಲಿ ಗುರ್ತದ ಆರೂ ಇಲ್ಲೆ ಹಾಂಗಾಗಿ ಗಾಡಿ ಹೆರಟತ್ತು ವಿಟ್ಲಕ್ಕೆ. ಕೇಜಿ ಮಾವ° ಉಂಡಿಕ್ಕಿ ಒರಗಿಯೊಂಡಿಕ್ಕು. ಉಪದ್ರ ಮಾಡುತ್ಸು ಬೇಡ ಹೇದ ಪೆಂಗಣ್ಣ. ವಿಟ್ಲಂದ ತಿರುಗಿ ಅಡ್ಯನಡ್ಕ, ಅಡ್ಕಸ್ಥಳ, ಪೆರ್ಲ ಮಾರ್ಗಲ್ಲೆ. ಎಂತಕೆ ? ಕಾಪಿಗಪ್ಪಗ ಎತ್ತೆಕು ಏನಂಕೋಡ್ಳಣ್ಣನಲ್ಲಿಗೆ, ಹೊತ್ತೋಪಗ ಎತ್ತೆಕು ಉಡುಪುಮೂಲಗೆ. ಇರುಳು ಆಟ ಇದ್ದಡ ಎಡನೀರಿಲ್ಲಿ. ಅನುಪಮಕ್ಕನ ಮಾಣಿಯ ವೇಷ ನೋಡೇಕು ಹೇಳಿ ಪೆಂಗಣ್ಣನ ಬಲುದಿನದ ಆಸೆಯೂ. ನವಗೂ ಒಪ್ಪಿಗೆ.

ಕುಕ್ಕಿಲ ಅತ್ತೆ, ವಿನಯಕ್ಕ ಹೇಳಿ ಹೆಸರು ನೆಂಪಾತು.  ಸರಿ.. ಇನ್ನಾರಾರು ಬಿಟ್ಟು ಹೋಯ್ದೋ ಹೇಳಿ ನೋಡಿಕ್ಕುತೇಳಿ ಮೊಬೈಲಿಲಿ ಹೆಸರು ನಂಬ್ರ ಮಣ್ಣ ಇದ್ದರೆ ಆತನ್ನೇ ಹೇಳಿ ಮೊಬೈಲ್ ತೆಗದು ನೋಡಿರೆ ಬೆಟ್ರಿ ಚಾರ್ಚು ಕಾಲಿ!!. ಇಂದ್ರಾಣದ್ದು ಆತಿಲ್ಲಿಗೆ ಹೇಳಿ ಪೆಂಗಣ್ಣನ ಹೆಗಲ ಗಟ್ಟಿ ಹಿಡ್ಕೊಂಡು ಕೂದತ್ತು ನಾವೂ. ಅಂದರೂ ನಮ್ಮ ಬೋಸಬಾವ ಎಲ್ಲಿ ಇರುತ್ಸು ಹೇದು ಇನ್ನೂ ಗೊಂತಾಯ್ದಿಲ್ಲೇದಾ ಹೇಳಿ ಒಂದು ಬೇಜಾರು ಇದ್ದು. ಮಧ್ಯಾಹ್ನ ಒಂದರಿ ಮೊಬೈಲ್ ಒತ್ತಿ ನೋಡಿತ್ತಿದ್ದು. ಅಷ್ಟಪ್ಪಗ ಯಾವುದೋ ಒಂದು ಕೂಸು ತೆಗದು ಹೇಳಿತ್ತು – ‘…..ಮತ್ತೆ ಕರೆ ಮಾಡಿ’. ಬೋದಾಳ, ಅದ್ವೈತಕೀಟ, ಗೆಂಟನೂ ಅಷ್ಟೇ… ಈಗ ಇಲ್ಲಿದ್ದೆ ಹೇಳುಗು, ರಜಾ ಹೊತ್ತಪ್ಪಗ ಆನು ಆಗಳೇ ಹೆರಟಾತು ಭಾವಾ ಹೇಳುಗು ನಾವಲ್ಲಿಗೆ ಎತ್ತಿಯಪ್ಪಗ. ಎಂತದೋ ಕೆಪ್ಪಣ್ಣಂಗೆ ದುರದೃಷ್ಟ ಒಂದೊಂದರಿ ಬಡಿತ್ತಾಂಗೆ ಅದ್ರಾಣ ಲೆಕ್ಕದ್ದು ನವಗೆ ಹಿಡುದತ್ತಾಯ್ಕು ಹೇದು ಗ್ರೇಶಿದಾಯ್ಕು ಪೆಂಗಣ್ಣ.

ಚೆನ್ನೈ ವಾಣಿ : ಬೈಲಿಲಿ ಕಾಣೆಕ್ಕಾದವು ಕಾಣದ್ದೇ ಇದ್ದರೂ ಬೈಲು ನೆಂಪು ಮಾಡಿಕೊಂಡೇ ಇರ್ತು.

28 thoughts on “ಬೈಲಿಲಿ ಒಂದಿನ ತಿರಿಗಿದ್ದು ..

  1. ಚೆನ್ನೈ ಭಾವಂಗೆ ಯಾವ ಮುಹೂರ್ತಲ್ಲಿ ಪುರುಸೊತ್ತು ಆದ್ದೋ? ಬೈಲಿನ ಆರಿಂಗೂ ಪುರುಸೊತ್ತು ಇಲ್ಲದ್ದಿಪ್ಪಗಳೇ ಚೆನ್ನೈ ಭಾವಂಗೆ ಪುರುಸೊತ್ತು ಆಯೆಕ್ಕಾತಾ? ಅಂತೂ ಬೈಲಿಲಿ ಚೆನ್ನೈ ಭಾವ ಅಂತೇ ತಿರುಗಿದ್ದಾದರೂ ಎಂಗೊಗೆ ಎಲ್ಲೋರನ್ನೂ ಕಂಡಷ್ಟು ಖುಶಿ ಆತು. ಇನ್ನೊಂದರಿ ಚೆನ್ನೈ ಭಾವಂಗೆ ಪುರುಸೊತ್ತು ಇಪ್ಪದು ಬೈಲಿನ ಎಲ್ಲೋರಿಂಗೂ ಮದಲೇ ಗೊಂತಾಯೆಕ್ಕು. ಕಾದುಗೊಂಡಿರ್ತೆಯೊ… – ಕುಕ್ಕಿಲ ಜಯತ್ತೆ

  2. ಚೆನ್ನೈಭಾವನ ತಿರ್ಗಾಟ ನೋಡಿ ನೆಗೆ ಬ೦ತು,ಹು…

  3. ಏ ಚೆನ್ನೈ ಭಾವ.. ನಿಂಗ ಹೇಳಿದ್ದು ಸರಿ.. ಕೆಲವು ಸರ್ತಿ ನಮ್ಮದು ಸೀಸನ್‌ ಟಿಕೇಟು.. 😉 ಮೊನ್ನೆ ನಾವು ಚೆನ್ನೈಗೆ ಹಾರಿತ್ತಿದ್ದು. ಕೆಲಸ ಮುಗುಶಿ ಇರುಳು ವಾಪಸ್‌. ಅಲ್ಲೇ ಇದ್ದಿದ್ದರೆ ಇರುಳಿಂಗೆ ಒಂದು ಮೇಲಾರ ಉಂಬಲಾವ್ತಿತೋ ಏನೋ..!?

  4. ಹೋಯ್ ಭಾವಾ,
    ನಾವು ಮೊನ್ನೆ ಆದಿತ್ಯವಾರ ಅಜ್ಜನ ಮನೆಲಿ ಇತ್ತು, ಛೇ ನಿಂಗೊ ಕೊಡೆಯಾಲಕ್ಕೆ ಬಂದಿಪ್ಪಗ ಕಾಂಬಲಾತಿಲ್ಲೆನ್ನೇ 🙁
    ಇರಳಿ. ಇನ್ನಾಣಾ ಸರ್ತಿ ಕಾಂಬೊ° 🙂

    ಗಣೇಶ ಮಾವ°ನ ಮದುವೆ ಅಲ್ಲದೋ? ಹಾಂಗಾಗಿ ಸಿಕ್ಕದ್ದದಾದಿಕ್ಕು 😉

  5. ನಿಂಗಳ ತಿರ್ಗಾಟ ಜೋರಿದ್ದನ್ನೆ ಭಾವ. ಪುಣ್ಯಕ್ಕೆ ಪೆಂಗಣ್ಣನ ಬೈಕು ಸಿಕ್ಕಿದ್ದು ಒಳ್ಳೆದಾತು. ಇನ್ನೊಂದರಿ ಬಪ್ಪಲಪ್ಪಗ ಶುದ್ದಿ ತಿಳಿಶಿ. ಸಿಕ್ಕುಲೆ ಯೆಡಿಯದ್ದರೆ ಮದಲೇ ಹೇಳುಲಕ್ಕಿದ.

    1. ಆದಿತ್ಯವಾರ ರಜೆ ದಿನ ಆತನ್ನೆ, ಎಲ್ಲ ಪುರುಸೋತ್ತಿಲ್ಲಿ ಮನೇಲಿ ಇಕ್ಕು ಹೇದು ಗ್ರೇಶಿದ್ದಪ್ಪ. ಎಲ್ಲೋರಿಂಗು ಫೋನ್ ಮಾಡಿಯಪ್ಪಗ ಹೊತ್ತುದೇ, ಪೈಸೆದೆ ಸುಮಾರಕ್ಕದ.!! . ಅಕ್ಕು ಇನ್ನಾಣದ್ದು ಇದ್ದವೋ ಹೇಳಿ ಮದಲೇ ನಿಘಂಟು ಮಾಡಿಕ್ಕಿಯೇ ಹೆರಡುತ್ಸು.

      1. { ಪುಣ್ಯಕ್ಕೆ ಪೆಂಗಣ್ಣನ ಬೈಕು ಸಿಕ್ಕಿದ್ದು }
        ಅಪ್ಪಡ, ಆ ಬೈಕ್ಕಿಂಗೆ ಪೆಟ್ರೋಲು ಕಮ್ಮಿ ಸಾಕಡ.
        ಎಂತಗೆ?
        ಗುಡ್ಡೆ ಹತ್ತುವಗ ಅರೆವಾಶಿ ದೂರ ಎಳೆತ್ತಿಲ್ಲೆ; ಮತ್ತೆ ಬಂದು ಬಿದ್ದರೆ ಅರೆವಾಶಿ ದೂರ ಷ್ಟಾರ್ಟು ಆವುತ್ತಿಲ್ಲೆ,
        ಹಾಂಗೆ, ಬಿಟ್ಟುಗೊಂಡು ಹೋಪದರಿಂದ ನೂಕಿಂಡು ಹೋಪದೇ ಸುಲಬ ಹೇದು ಒಂದು ಅಭಿಪ್ರಾಯ.

        ಹಾಂಗಾಗಿ, ಹತ್ತು ಪರ್ಲಾಂಗು ಹೋಪಲೆ ಒಂದು ಚಮ್ಚ ಪೆಟ್ರೋಲು ಸಾಕಾವುತ್ತಡ.
        ಈಚಭಾವ ಹೇಳಿದ್ದು ಎನಗೆ. 😉

        1. ಓ…ಹೋ….. ಈಚ ಭಾವನತ್ರೆಯೂ ಹಾಂಗಿಪ್ಪದೇ ಇಪ್ಪದೋ!

  6. ಹ್ಹ ಹ್ಹ ಹ್ಹಾ. ಹ್ಹಾ …… ಚೆಂದ ಆಯ್ದು ಚೆನ್ನೈ ಭಾವ ಬೈಲು ಸುತ್ತಿದ್ದು.
    ಈಗಾಣ ಕಾಲಲ್ಲಿ ಒಂದು ವಾರ ಮೊದಲೇ ಹೇಳಿ ಹೋದರೂ ಸಿಕ್ಕದ್ದಿಪ್ಪಗ ಇನ್ನು ಹೀಂಗೆ ಸುತ್ತಿರೆ ಸಿಕ್ಕುದು ಹೆಂಗಪ್ಪಾ ?
    ಇನ್ನಾಣ ಸುತ್ತಾಟ ಯಾವಾಗ ?

    1. ಇನ್ನಣದ್ದು ನಿಂಗಳ ಊರಿಂಗೇ

  7. ಯೋ ದೇವರೇ ! ಮಾರ್ಚ್ ಲ್ಲಿ ೩ ವಾರ ಎಂಗೊ ಊರಿಲ್ಲಿಪ್ಪಗ ನಿಂಗೊ ಈ ಪ್ರಯಾಣ ಮಾಡಿದ್ದರೆ ಒಂದೋ ಸಂಕಹಿತ್ಲು ಲಿ ಅಲ್ಲದ್ರೆ ಪುತ್ತೂರ್ ಲಿ ಎನ್ನ ಅಪ್ಪನ ಮನೆಲಿ ಕಂಡಿಕ್ಕಲಾವ್ತಿತನ್ನೇ ಚೆನ್ನೈ ಭಾವಾ? ಇಡೀ ಶುಧ್ಧಿಯ ಖುಷಿಲಿ ಓದಿ ಎಲ್ಲೋರ ಹೆಸರು ಕಂಡು ಖುಶಿ ಆದರೂ ನಿಂಗೊಗೆ ಆರನ್ನೂ ಭೇಟಿ ಅಪ್ಪಲೆ ಅತಿಲ್ಲೆನ್ನೆ ಹೇಳಿ ಬೇಜಾರ ಆತು. (ಸಿಕ್ಕಿದ ಕೆಲವರಲ್ಲಿ ಊಟ-ಉಪಚಾರ ಆದ್ದು ಖುಶಿ ಆತಿದ). ಅಂಬಗ ಇನ್ನೊಂದರಿ ಕಾಂಬಾ ಭಾವ.
    ~ಸುಮನಕ್ಕ…

    1. ಅಕ್ಕು ಅಕ್ಕು. ನಿಂಗೊ ಇಷ್ಟು ಹೇಳಿದ್ದೇ ಪಾಚ ಉಂಡಷ್ಟು ಚೀಪೆ ಆತಿದಾ.

      1. ಸುಮನಕ್ಕ, ಇನ್ನಾಣ ಸರ್ತಿ ಅಮೋಘಣ್ಣನನ್ನೂ ಕರಕ್ಕೊಂಡು ಬನ್ನಿ ಬೈಲಿಂಗೆ.
        ಆತೋ? 😉

        ಚೆನ್ನೈಭಾವಂಗೆ ಗುರ್ತ ಮಾಡುಸುವೊ°.

  8. ಶ್ಶೋ… ರಾಮಾ… ನಿ೦ಗಳ ದಿಸೆಲಿ ಎಡಿಯಪ್ಪಾ ಎಡಿಯ ಚೆನ್ನೈ ಭಾವಾ.. ಒಟ್ಟಾರೆ ಮೇಗ೦ದ ಹೇಳಿ ಸುಖ ಇಲ್ಲೆ. ನಿ೦ಗೊ ಎಲ್ಲರುದೆ ಇಲ್ಲದ್ದ ಪುರುಸೊತ್ತು ಮಾಡಿ೦ಡು ಬೈಲಿ೦ಗೆ ಬಪ್ಪಗ ಓದಿನೋಡಿ ಒ೦ದು ಒಪ್ಪ ಕೊಡ್ಳುದೆ ಪುರುಸೊತ್ತು ಇಲ್ಲೆ ಹೇಳ್ಳೆ ನಾಚಿಕೆ ಅಪ್ಪ ಕಾರಣ ಹಾ೦ಗೆ ಹೇಳ್ತಿಲ್ಲೆ, ಅಲ್ಲದ್ರುದೆ ಬಾಯಿಲಿ ಅ೦ತೆ ಹೇಳುವದಕ್ಕಿ೦ತ ಕಾರ್ಯಲ್ಲಿ ಮಾಡಿ ತೋರೆಸುಕಾದ್ದಲ್ಲದೊ ಇಪ್ಪದು..
    ಏನೇ ಆಗಲಿ, ಅ೦ದು ಇರುಳಿನ ಮಟ್ಟಿ೦ಗಾದರುದೆ ನಿ೦ಗೊ ಒ೦ದು ಘಳಿಗ್ಗೆ ಮನೆಗೆ ಬ೦ದದುದೆ, ನಿ೦ಗಳ ಒ೦ದರಿ ಕ೦ಡು ಮಾತಾಡ್ಲೆ ಎಡಿಗಾದ್ದದುದೆ ಎನಗೆ ಭಾರೀ ಸ೦ತೋಷ ಆಯಿದು ಚೆನ್ನೈ ಭಾವಾ.. ಅದರ ಮರುದಿನ ಆನು ಇತ್ಲಾಗಿ ಬ೦ದದೇ..

    1. ಅದ, ಬೈಲ ಬೈಕು ಯಾತ್ರೆಲಿ ಪೆರ್ವದಣ್ಣನ ಕಾಂಬಲೆಡಿಯಾಗದ್ರೂ ಈಗ ಇಲ್ಲಿ ಕಂಡಪ್ಪಗ ಕೊಶಿ ಆತಿದಾ.

      1. ಇಷ್ಟೆಲ್ಲ ಪೆಟ್ರೋಲು ಎರದು ಊರು ಸುತ್ತಿರೂ, ಆರನ್ನೂ ಕಾಣದ್ದೆ ಇರೆಕ್ಕಾರೆ ಅದಕ್ಕೆಂತದೋ ದೋಷ ಇದ್ದು.
        “ನೆಗೆಮಾಣಿಯ ಕರಕ್ಕೊಂಡು ಹೋಗದ್ದೇ ದೋಷ” ಹೇಳುಗು ಜೋಯಿಷಪ್ಪಚ್ಚಿ.

        ಅಪ್ಪೋ ಅಲ್ಲದೋ ಕೇಳಿನೋಡಿ ಬೇಕಾರೆ. 😉

  9. ಛೆ!! ಮಾವಾ ನಿ೦ಗೊ ಎನಗೊ೦ದು ಶುದ್ದಿ ಹೇಳ್ತಿತ್ತರೆ…ಆನು ಆದಿತ್ಯವಾರ ಉದಿಯಪ್ಪಗ ಉಪ್ಪಿನ೦ಗಡಿಲಿ ಇತ್ತಿದ್ದೆ, ಮಧ್ಯಾನಕ್ಕಪ್ಪಗ ಬಾಯಾರಿಲಿ ಮನೆಗೆ ಎತ್ತಿತ್ತಿದ್ದೆ..ಅಡ್ಕತಿಮಾರಿ೦ದ ಸೀದ ಕಾಲೆಡಕ್ಕಿಲಿದ್ದ ಬೈಕಿನ ಬಾಯಾರು ಹೊಡೆ೦ಗೆ ತಿರುಗುಸಿ ತಲೆ೦ಗಳಕ್ಕೆ ಬಪ್ಪಲಾವುತಿತ್ತು.. 😉

    1. ಛೆಲ! ನಿಂಗೊ ಊರಿಲ್ಲಿ ಇತ್ತಿದ್ದೀರೋ! ನಿಂಗಳೂ ಸೀಸನ್ ಟಿಕೆಟು ಪಾರ್ಟಿಯೋ!!

      1. ಅದಾ, ಅಂಬಗ ಚೆನ್ನೈಭಾವ ಎಂಗಳ ಮನೆ ಹತ್ತರಂಗೂ ಬಪ್ಪಲಾವುತಿತು.
        ಎಂತಕೆ?
        ಎನ್ನನ್ನೂ ಬೈಕ್ಕಿಲಿ ಕೂರ್ಸಿಂಡು ದೀಪಿಅಕ್ಕನ ಮನಗೆ ಹೋಪಲೆ! 😉

  10. ಚೆನ್ನೈ ಭಾವ ಬೈಲಿನ ಒಂದು ಹೊಡೆ, ಊರಿಡೀ ತಿರುಗಿದರೂ, ಇತ್ಲಾಗಿ ತಲೆ ಹಾಕಿ ಮನುಗಿದ್ದವಿಲ್ಲ. ಬಪ್ಪಗ ಎಂತಾರು ತರೇಕಾವ್ತು ಹೇಳಿ ಅಮರಿದ್ದು ಹೇಳಿ ಇಲ್ಲಿ ಕೆಪ್ಪಣ್ಣ ಹೇಳಿಗೊಂಡು ತಿರುಗಿಗೊಂಡಿತ್ತಿದ್ದ..!

    1. ಈಚ ಭಾವೋ.. ಈಚ ಭಾವ° ಇರುಳು ಉಂಡಿಕ್ಕಿ ಬೆಂಗಳೂರಿಲ್ಲಿ ಒರಗಿರೆ ಉದಿಯಪ್ಪಗ ಏಳುವದು ಚೆನ್ನೈಲಿಡ. ಮಧ್ಯಾಹ್ನ ಪೋಂಡಿಚ್ಚೇರಿಗೆ ಎತ್ತಿರೆ ಹೊತ್ತೋಪಗ ಚಿದಂಬರಂಲ್ಲಿ ಇಕ್ಕಡ ನಟರಾಜನ ಹತ್ರೆ ಆರು ಡಾನ್ಸ್ ಮಾಡ್ತವು ಹೇಳಿ ನೋಡ್ಳೆ. ಯಾವ ಧೈರ್ಯಲ್ಲಿ ಭಾವ ಮತ್ತೆ ಈಚಣ್ಣನ ಹಿಡಿವದು!. ತೊಂದರೆ ಇಲ್ಲೆ ಇನ್ನಾಣ ಸರ್ತಿ ತಲೆ ಕಂಡರೆ ಕಾಲು ಹಿಡುವೊ ಅಲ್ದಾ

      1. { ಸರ್ತಿ ತಲೆ ಕಂಡರೆ ಕಾಲು ಹಿಡುವೊ }
        ಎನ್ನ ಗೊಂತಿಲಿ ಕೆಲವು ಜೆನ ಇದ್ದವು, ಬೀಲ ಕಂಡ್ರೆ ತಲೆ ತಿಂತವು!!
        ಅಂತವರ ಹತ್ರೆ ಜಾಗ್ರತೆ, ಓಯಿ ಚೆನ್ನೈಭಾವ, ಈಚ ಭಾವ..
        😉

  11. ಹೋ ಚೆನ್ನೈ ಭಾವಂಗೂ ಪುರುಸೊತ್ತು ಆತೋ… ನಿಂಗಳ ಜತೆಗೆ ಆ ಪೆಂಗಣ್ಣ°.. ಇದು ಪಷ್ಟಾಯಿದು…
    ಬೈಲಿಲ್ಲಿ ತಿರುಗಿದ ಸುದ್ದಿ ಲಾಯ್ಕಾ ಆಯಿದು.. ಹೇಳಿದಾಂಗೆ ಎಷ್ಟು ಲೀಟರ್‌ ಪಟ್ರೋಲ್‌ ಮುಗುದತ್ತು…:)

    1. ಪೆಟ್ರೋಲು ಎಂತ ಬಾವ ಪೆಟ್ರೋಲು. ಬೈಕು ಪೆಂಗಣ್ಣನದ್ದಲ್ಲದೊ. ಅಕೇರಿಗೆ ಪೀಟೋಲು ಹಾಕಿ ನೋಡ್ಳಿ ಎಷ್ಟು ಬಾಕಿದ್ದಿನ್ನು ಹೇದು ಅಲ್ದಾ.

  12. ಚೆನ್ನೈ ಭಾವಂಗೆ ಪುರುಸೊತ್ತು ಇದ್ದ ದಿನ ಬೈಲಿನವಕ್ಕೆ ಆರಿಂಗೂ ಪುರುಸೊತ್ತು ಇಲ್ಲದ್ದು ಕೇಳಿ ಬೇಜಾರು ಆತು. ಆದರೆ ಎಂತ, ಬೈಲಿನವರ ಎಲ್ಲ ಒಂದರಿ ನೆಂಪು ಮಾಡ್ಯೊಂಡ ಹಾಂಗಾತನ್ನೆ. ಇಷ್ಟೆಲ್ಲಾ ಟೂರು ಹೊಡದಪ್ಪಗ ಚೆನ್ನೈ ಭಾವನ ಬೈಕಿಲ್ಲಿ ಪೆಟ್ರೋಲು ಕಾಲಿ ಆತೋ ಹೇಳಿ ಗ್ರೇಶಿದೆ, ನೋಡಿರೆ ಮೊಬೈಲಿಲ್ಲಿ ಚಾರ್ಜು ಖಾಲಿ ಆದ್ದದು. ಹಳೇ ಕೆಟ್ಟ ನೆಂಪಿಂದಾಗಿ ಸರ್ಪಮಲೆ ಮಾವ ಪುಸ್ತಕವ ಎಲ್ಲ ಕವಾಟಿನ ಒಳ ಬೀಗ ಹಾಕಿ ಮಡಗಿದ್ಸು ಲಾಯಕಾಯಿದು. ಅಂಬಗ ಆ ಪುಸ್ತಕ ಇನ್ನುದೆ ಹಿಂದೆ ಬಯಿಂದಿಲ್ಲೆಯೊ ಭಾವಯ್ಯ ?

    1. ಬೊಳುಂಬು ಮಾವನ ಮಾತಾಡ್ಸಲೆಡಿಗಾಗದ್ರೂ ಮಾವಂಗೆ ಶುದ್ದಿ ಗೊಂತಾಗಿ ಬೇಜಾರಾಯ್ದಿಲ್ಲೆ ಇದಾ . ಅದೇ ಕೊಶಿ.

  13. ಎಲ್ಲೆಲ್ಲಿ ಹೋದರೂ ಆರೂ ಸಿಕ್ಕಿದ್ದವಿಲ್ಲೆ…ಕಡೆಂಗೆ ಉಂಡ್ಲಕಾಳು ಸಿಕ್ಕಿತ್ತನ್ನೆ? ಸಂತೋಷ ಆತು.ಮೌಢ್ಯಲ್ಲಿ ಕೂಡಾ ಆರಿಂಗೂ ಪುರುಸೊತ್ತಿಲ್ಲೆ…ಮಾಡುದೆಂತರ ಭಾವ?

    1. ಅಂದರೂ ಎಲ್ಲೋರ ಒಂದರಿ ನೆಂಪು ಮಾಡಿ ಕೊಶಿ ಆತಿದಾ ಗೋಪಾಲಣ್ಣ. ಸಂದರ್ಭ ಸಿಕ್ಕುವಾಗ ನೇರ ಕಂಡುಮುಟ್ಟಿಗೊಂಬ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×