Oppanna.com

ತೆಂಕಲಾಗಿಂದ ಹೇಳಿಕೆ ಬಂತು

ಬರದೋರು :   ಸುಭಗ    on   05/11/2012    5 ಒಪ್ಪಂಗೊ

ಸುಭಗ

ಕಾರ್ಯಕ್ರಮ ಮನ್ನೆಯೇ ಸುರುವಾಯಿದು.

ಹೇಳಿಕೆ ಕಾಕತ ಕೈಗೆ ಸಿಕ್ಕುವಗ ಮಾಂತ್ರ ರಜಾ ತಡವಾತು.

ಆದರೂ ಈ ಕಾರ್ಯಕ್ರಮ ಇನ್ನೂ ಒಂದುವಾರ-ಬಪ್ಪ ಆಯಿತ್ಯವಾರದ ಒರೇಗೆ- ಇಪ್ಪಕಾರಣ ಬೈಲಿಂಗೆ ಹೇಳಿಕೆಯ ಈಗ ಹೇಳಿರೂ ಸಾಲದ್ದೆ ಇಲ್ಲೆ ಹೇಳಿ ತೋರಿತ್ತು.

* * * *

ತೆಂಕಲಾಗಿ ಕಣ್ಣಾನೂರಿಂದ ಸುಮಾರು ಎಂಟತ್ತು ಮೈಲಿ ಮೂಡಕ್ಕೆ ‘ಕಣ್ಣಾಡಿಪರಂಬ’ ಹೇಳ್ತ ಜಾಗೆ.

ಅಲ್ಲಿ ಶ್ರೀ ಧರ್ಮಶಾಸ್ತಾ  ಕ್ಷೇತ್ರಂ ಹೇಳ್ತ ಒಂದು ಶಿವ ದೇವಸ್ಠಾನ. ಅತ್ಯಂತ ಅಪರೂಪದ, ಮಹತ್ವದ ‘ಅತಿರುದ್ರ ಮಹಾಯಜ್ಞ’ ಕಾರ್ಯಕ್ರಮ ಮನ್ನೆ 31ಕ್ಕೆ ಅಲ್ಲಿ ಸುರುವಾಯಿದು. ನಾಳ್ದು 11 ರ ವರೆಗೆ ಇರ್ತು. ವಿವರಂಗಳ ನಿಂಗೊಗೆ ಇಲ್ಲಿ ನೇಲುಸಿದ ಹೇಳಿಕೆ ಕಾಕತಲ್ಲಿ ಕಾಂಬಲಕ್ಕು.

ಅಷ್ಟು ದೂರ ಅಪ್ಪ ಈ ಕಾರ್ಯಕ್ರಮ ನವಗೆ ಬೈಲಿನೋರಿಂಗೆ ‘ಹತ್ರಾಣದ್ದು’ ಹೇಳಿ ತೋರ್ಲೆ ಎರಡು ಕಾರಣ ಇದ್ದು.
( (ದೂರ ಹೇಳಿರೆ ಅಂಥಾ ದೂರ ಏನೂ ಅಲ್ಲ; ಕಾಸ್ರೋಡಿಂದ ನೂರು ಮೈಲಿ ಒಳ ನಿಂಗು. ಅಷ್ಟೇ ಉಳ್ಳೊ))

ಒಂದು- 7ನೇ ತಾರೀಕಿಂಗೆ ಅಲ್ಲಿ ಅಪ್ಪ ‘ ಗೋ ಸಮ್ಮೇಳನ’ ಕ್ಕೆ ನಮ್ಮ ಗುರುಗೊ ದಿವ್ಯ ಸಾನ್ನಿಧ್ಯ ಕೊಡ್ತವು!

ಎರಡು- ನಮ್ಮ ಗುರುಗಳ ಸಾನ್ನಿಧ್ಯ ಅಲ್ಲಿ ಸಿಕ್ಕುವಾಂಗೆ ಅಪ್ಪಲೆ ಏರ್ಪಾಡು ಮಾಡಿದವು ಬೈಲಿನ ‘ದೊಡ್ಡಜ್ಜ°’..!!

ಅಲ್ಯಾಣ ಕಮಿಟಿಯವರತ್ರೆ ಅಲ್ಲಿಗೆ ಗುರುಗಳ ಬರುಸುವ ಜೆಬಾದಾರಿಕೆಯ ತೆಕ್ಕೊಂಡು; ಅದಕ್ಕನುಸರಿಸಿ ಗಿರಿನಗರಲ್ಲಿ ಬೈಲಿನ ಭೇಟಿ ಸಂದರ್ಭಲ್ಲಿ  ಮಠದವರತ್ರೆ, ಪರಿವಾರದವರತ್ರೆ ಬೇಕುಬೇಕಾದಾಂಗೆ ಮಾತಾಡಿ ಏರ್ಪಾಡು ಮಾಡಿ “ಇದಾ ಅಳಿಯೋ, ನವಂಬ್ರ 7ಕ್ಕೆ ನವಗೆ ಕಣ್ಣಾಡಿಪ್ಪರಂಬಿಂಗೆ ಹೋಪಲಿದ್ದು; ನೆಂಪಿರಳಿ” ಹೇಳಿತ್ತಿದ್ದವು ಅಂಬಗಳೇ!
ಯಾಗಲ್ಲಿ ಭಾಗವಹಿಸೆಕ್ಕು, ಗುರುಗಳ ಸೇವೆ ಮಾಡೆಕ್ಕು ಹೇಳಿ ಎಲ್ಲ ಅವರ ಮನಸ್ಸಿನಾಳದ ಆಶೆ ಇದ್ದರೂ ದೊಡ್ಡಜ್ಜನ ಆಶೆ ಕನಸಾಗಿಯೇ ಒಳುದತ್ತು. 🙁

ಬೈಲಿನ ತೆಂಕ್ಲಾಗಿಯಾಣ ಈ ಕಾರ್ಯಕ್ರಮಕ್ಕೆ ಅನುಕೂಲ ಅಪ್ಪೋರು ಆ ದಿನಕ್ಕಾದರೂ ಒಂದಾರಿ ಅಲ್ಲಿಗೆ ಹೋಗಿ ಬಪ್ಪೊ°, ಆಗದೋ?

* * * *

ಮಲಯಾಳಲ್ಲಿ ಇಪ್ಪ ಆ ಇನ್ನೊಂದು ಕಾಕತ – ಶ್ರೀಗುರುಗಳ ವಯನಾಡು ಭೇಟಿ ಕಾರ್ಯಕ್ರಮದ ಹೇಳಿಕೆ. ವಯನಾಡು ಜಿಲ್ಲೆಯ ‘ಪನಮರ’ ಹೇಳ್ತಲ್ಲಿ ಮೊಕ್ಕಾಂ ಇದ್ದು ಅಲ್ಯಾಣ ಸಮಾಜಬಂಧುಗಳ ಅನುಗ್ರಹಿಸುತ್ತವು ಗುರುಗೊ.  ‘ದೊಡ್ಡಜ್ಜ’ನ ತಮ್ಮ ರತ್ನಾಕರ ಭಟ್ಟರೇ ಈ ಕಾರ್ಯಕ್ರಮದ ಸಂಯೋಜಕರು!

ಅವರೊಟ್ಟಿಂಗೆ ಕೆಲವು ಜೆವ್ವನಿಗರು ಅಲ್ಯಾಣ ಜಿಲ್ಲಾ ಕಲೆಕ್ಟ್ರ° ಆಗಿಪ್ಪ ನಮ್ಮ ಎಡನ್ನೀರು ಗೋಪಾಲಣ್ಣನನ್ನೂ ಸೇರುಸಿಯೊಂಡು ಈ ಕಾರ್ಯಕ್ರಮದ ಏರ್ಪಾಡು ಮಾಡಿದ್ದವು.

5 thoughts on “ತೆಂಕಲಾಗಿಂದ ಹೇಳಿಕೆ ಬಂತು

  1. ಯಾಗದ ವಿಷಯ ಎನಗೆ ೩-೪ ದಿನ ಮದಲೇ ಗೊ೦ತಾಯಿದು ಸುಭಗ ಬಾವಾ.. ಇಲ್ಲಿ೦ದಲೇ ಹೊಡಾಡ್ಯೊ೦ಬದು ಅಷ್ಟೆ..

  2. ಅಲ್ಲಿ ಹವ್ಯಕ ಬ್ರಾಹ್ಮಣ ಮಹಾಸಭ! ಓದಿ ಆಶ್ಚರ್ಯ ಆತು.ತೆಂಕಲಾಗಿ ಹೋದವರು ಮಲೆಯಾಳಿಗಳೇ ಆಗಿ,ಹವ್ಯಕ ಕ್ರಮಂಗಳ ಮರೆತ್ತವು ಹೇಳಿ ಆನು ಗ್ರೇಶಿದ್ದು.
    ಸಂತೋಷ.ನಾವು ಹೊಸನಗರಕ್ಕೆ,ಕೊಲ್ಲೂರಿಂಗೆ ಹೋವುತ್ತ ಹಾಂಗೆ ಕಣ್ಣೂರು ಭಾಗಕ್ಕೆ ಹೋವುತ್ತಿಲ್ಲೆ.ನವಗೆ ಭಾಷಾವ್ಯತ್ಯಾಸ,ಸಂವಹನದ ಕೊರತೆ ಎಲ್ಲಾ ಕಾರಣ.ನಮ್ಮ ನೆಂಟ್ರು ಆ ಹೊಡೆ ಇಲ್ಲದ್ದರೆ ಹೋಪ ಅವಕಾಶವೂ ಕಮ್ಮಿ.
    ಯಾಗ ಚಂದವಾಗಿ ನಡೆಯಲಿ.

  3. ತೆಂಕ್ಲಾಗಿಯಾಣ ‘ನಮ್ಮ’ ಕಾರ್ಯಕ್ರಮ – ದೊಡ್ಡಜ್ಜ ನಿಘಂಟು ಮಾಡಿದ ಕಾರ್ಯಕ್ರಮಕ್ಕೆ ಅವರ ದೊಡ್ಡಳಿಯನೇ ಹೇಳಿಕೆ ಕಳ್ಸಿದ್ದು ವಿಶೇಷ ಆತು.

  4. ಹರೇ ರಾಮ ಸುಭಗ ಬಾವ. ಬೈಲಿಂಗೆ ಅಲ್ಯಾಣ ಸಂಬಂಧವ ಪರಿಚಯಿಸಿದ್ದು ಒಳ್ಳೇದಾತು. ಹರೇ ರಾಮ

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×