
ತರವಾಡು ಮನೆ ಜಾಲಿ೦ದ ಒಂದು ನೋಟ
ಮೂಡುದಿಕ್ಕಿಲಿ ಸೂರ್ಯ ಮೂಡೊಗ
ಕಾಡ ಮರಗಳ ಎಡೆಲಿ ಹಾರುವ
ಜೋಡು ಹಕ್ಕಿಗೊ ಆಡಿ ಹೊಸ ಸ೦ಗೀತ ಹಾಡುವಗ
ತೋಡ ನೀರದ ಹರುದು ಜುಳುಜುಳು
ಓಡುತಿಪ್ಪಗಳೇ ಹೊಳೆಗೆ ತರ
ವಾಡು ಮನೆಯೊಳ ನೋಡು ಬಗೆಬಗೆ ಕೆಲಸಕಾರ್ಯ೦ಗೋ
ಹಾ೦ಗೆ… ಉದಿಯಪ್ಪಗ ತರವಾಡು ಮನೆಲಿ ನೆಡೆತ್ತ ಕಾರ್ಯ೦ಗಳ ನೋಡುಲೆ ಶುರು ಮಾಡಿತ್ತು ನಾವು,ಅಲ್ಲದೋ? ಮು೦ದೆ ನೋಡುವ°, ಬನ್ನಿ.
~~
ಅಜ್ಜ ಜೆಗುಲಿಲಿ ಎಲೆಗೆ ಸುಣ್ಣವ
ರಜ್ಜರಜ್ಜವೆ ಉದ್ದಿಯಪ್ಪಗ
ಅಜ್ಜಿ ಕೇಳಿದವಿ೦ದು ತಾಳಿ೦ಗೇವ ತರಕಾರಿ
ಗೊಜ್ಜಿ ಬೋಳಿನಕೊದಿಲ ಜತೆಯಲಿ
ಗುಜ್ಜೆ ತಾಳಿನ ಸವಿಯುವಾಸೆಲಿ
ಅಜ್ಜಕಾನದ ಭಾವ° ತೋಟಕೆ ಇಳುದವದ ಹಾರಿ
~
ಆಸರಾವುತ್ತೆನಗೆ ಹೇಳುತ
ಕಾಸಿ ನೀರಿನ ಸಣ್ಣ ಚೆ೦ಬಿಲಿ
ಬೋಸಭಾವನು ಕುಡುದು ಹೆರಟನೊ ಕುರುವೆ ಹಿಡುಕೊ೦ಡೂ
ಕಾಸೆಯಾಗದ ಗುಜ್ಜೆ ಕಾ೦ಬಗ
ಆಸೆಗಣ್ಣಿಲಿ ನೋಡಿ ತೋಟಲಿ
ಮೀಸೆಯಡಿ ನೆಗೆಮಾಡಿ ಹಳೆಮನೆಯಣ್ಣ ಬ೦ದವದಾ
~
ಮೆಟ್ಟುಕತ್ತಿಯ ತೆಗದು ಅಕ್ಕನು
ನೆಟ್ಟಿಕಾಯಿಯ ಕೊರವ ರಭಸವ
ಚಿಟ್ಟೆಕರೆಲಿಯೆ ನೋಡುಗದ ಪೊಸವಣಿಕೆ ಚುಬ್ಬಣ್ಣ
ಚುಟ್ಟಿಕಿಟ್ಟಿದ ಕಾವಲಿಗೆ ರಜ
ಹಿಟ್ಟು ಎರೆವಗ ತೆಳ್ಳವಿನ ಹೊಸ
ಸಟ್ಟುಗಿನ ಹಿಡುದೋಡಿ ಬಕ್ಕದ ನಮ್ಮ ನೆಗೆಗಾರ°
~
ಉದಯಕಾಲದಲೆದ್ದ ಭೂಪನು
ಹದದಿ ಹಲ್ಲನು ತಿಕ್ಕಿ ಹೇಳಿದ°
ಉದಯರಾಗವ ಅಟ್ಟು ಉ೦ಬೊಳ ನಲ್ಲೆಯೊಟ್ಟಿ೦ಗೆ
ಬದನೆಯನು ಕೊಯ್ದಾಗಿ ಪಡಿಗೆಲಿ
ಕುದನೆ ಜೊ೦ಕುಳಿ ತು೦ಬುಸಿಯೆ ಪಟ
ಮುದದಿ ತೆಗೆಯೆಕ್ಕೆ೦ದ ಯೇನ೦ಕೂಡ್ಲು ಅಣ್ಣನದೋ
~
ಗೆಡ್ಡ ತೆಗವಲೆ ಕೊಟ್ಟಗೆಲಿ ಹಳೆ
ಬಡ್ಡು ಬಾಳಿನ ಮಸದು ಮೋರೆಯ
ಒಡ್ಡಿ ಕನ್ನಟಿಯೆದುರು ನಿ೦ದವು ಚೆನ್ನಬೆಟ್ಟಣ್ಣ
ಅಡ್ಡ ತಡಮೆಯ ತೆಗದು ದಾ೦ಟಿದ
ದೊಡ್ಡಭಾವನು ಬಡಿಗೆ ಹಿಡಿಯುತ
ಗುಡ್ಡೆ ಹತ್ತಿಯೆ ಹೋಕು ಗಾಡಿಲಿ ವಾಯುವೇಗಲ್ಲಿ
~
(ಇನ್ನೂ ಇಕ್ಕೋ ?)
ತರವಾಡು ಮನೆಲಿ ಉದಿಯಪ್ಪಗ ಮತ್ತೆ೦ತಾತು?-ಭಾಮಿನಿಲಿ, 4.6 out of 5 based on 5 ratings
ವ್ವ ವ್ವಾ ! !
ಭಾರೀ ಲಾಯಕಕ್ಕೆ ಭಾಮಿನಿಯ ಒಲಿಶಿಕೊನ್ದವರಲಿ ನಿಂಗಳನ್ನೂ ಸೇರುಸೆಕು ! !
ಹವ್ಯಕಭಾಶೆಲಿ, ಏನಾದರೂ ನೀಳಕಾವ್ಯವೋ ಮಣ್ಣೋ ಬರದ್ದದು ಇದ್ದೋ ? (ಮಣ್ಣು.. ರಜರಜ ಆಗಿ ಬೇಡ.. ಒಂದು ಹತ್ತಿಪ್ಪತ್ತು ಎಕ್ರೆ .. !)
ಇನ್ನೂ ಒಳ್ೞೆದು , ಇದನ್ನೇ ಮುಂದರುಸಿ, ನಮ್ಮ ಹಳೆ ಮನೆಯೋ, ಕುಟುಂಬವೂ ಒಂದರ ಒಂದರುವತ್ತು ಎಪ್ಪತ್ತು ವರ್ಶದ ಕಥೇ ಮಾಡ್ಲೆ ಎಡಿಗೊ ?…
ಬರವದು ಬಿಟ್ಟರೆ ಮತ್ತೆ ಸುರುಮಾಡ್ಲೆ ತುಂಬ ಕಶ್ಠ ಆವುತ್ತು, ಈಗಳೇ ಇದರ ಮುಂದುವರಿಸಿ, ಕನಿಷ್ಠ ಒಂದು ದಬ್ಬಲ್ ಚೋಲ್ ಮಾಡಿ ಮತ್ತೆ ಮತ್ತೆ ಓದಿ ಸಂತೋಷಪಡುವ ಉಶಿ ಕೊಡಿ !
[ಉತ್ತರುಸಿ]
ಹೊತ್ತುವೇಳೆ: 17 March,2011ರ 10:34 AM ಗೆ. (ಒಪ್ಪಸಂಕೊಲೆ)
ಒಪ್ಪ ನೋಡಿ ಕೊಶಿ ಆತು ಅಣ್ಣ. ನೀಳ ಕಾವ್ಯದ ಸವಿ ಸುರಿಯೆಕ್ಕಾರೆ ಬಾಳಿಲ ಪರಮೇಶ್ವರ ಭಟ್ಟರ “ಧರ್ಮವಿಜಯ” ಓದಿ.ಮಹಾಭಾರತದ ಕತೆ ನಮ್ಮ ಭಾಷೆಲಿ ಚೆ೦ದಕೆ ಬರದ್ದವು.
{ಬರವದು ಬಿಟ್ಟರೆ ಮತ್ತೆ ಸುರುಮಾಡ್ಲೆ ತುಂಬ ಕಶ್ಠ ಆವುತ್ತು} ಆನು ಈಗ ಬರವಲೆ ಶುರು ಮಾಡಿದ್ದು ಬಾಲಣ್ಣ !! ಇನ್ನು ಬಿಡುಲಿಲ್ಲೆ,ಜೀವದೊಟ್ಟಿ೦ಗೆ ಇದೂ ಅ೦ಟಿತ್ತು,ಒಪ್ಪಣ್ಣನ ಬೈಲಿ೦ಗೆ ಬ೦ದು..
[ಉತ್ತರುಸಿ]
ತರವಾಡು ಮನೆಯ ನೈಜ ಚಿತ್ರಣ ಬತ್ತಾ ಇಪ್ಪದು ನೋಡುವಾಗ ಭಾರೀ ಕೊಶೀ ಆವುತ್ತು. ಅಜ್ಜಿ ಎಲಗೆ ಸುಣ್ಣ ಉದ್ದಿಗೊಂಡು ತಾಳಿಂಗೆ ಎಂತರ ಹೇಳಿ ಲೆಕ್ಕ ಹಾಕುದು, ಗುಜ್ಜೆ ತಪ್ಪಲೆ ಭಾವ ತೋಟಕ್ಕೆ ಹೋಪದು, ಕಾಸೆ ಆಗದ್ದ ಎಳತ್ತು ಕುಜುವೆ ನೋಡಿ ಹಳೆಮನೆ ಅಣ್ಣಂಗೆ ಕೊಶಿ ಆಗಿ ಮೀಸೆ ಅಡಿಲಿ ನೆಗೆ ಬಪ್ಪದು, ನಗೆಗಾರ ಸಟ್ಟುಗ ಹಿಡ್ಕೊಂಡು ತೆಳ್ಲವು ತಿಂಬಲೆ ಬಪ್ಪದು, ಒಂದಕ್ಕಿಂತ ಒಂದು ಸೂಪರ್
ಈ ಭಾಮಿನಿಯ ಆಧಾರಲ್ಲಿ ಒಂದು ರೂಪಕ ಮಾಡಿರೆ ತುಂಬಾ natural ಆಗಿ ಬಕ್ಕು.
[ಉದಯರಾಗವ ಅಟ್ಟು ಉ೦ಬೊಳ ನಲ್ಲೆಯೊಟ್ಟಿ೦ಗೆ] ಭೂಪ ಬರವ ಪದ್ಯಕ್ಕೂ ಇಲ್ಲಿ ಅವನ ವಿವರಿಸಿದ್ದಕ್ಕೂ ತುಂಬಾ ತಾಳೆ ಆಯಿದು.
(ಇನ್ನೂ ಇಕ್ಕೋ ?)- ಖಂಡಿತಾ ಇರೆಕ್ಕು. ತುಂಬಾ ನಿರೀಕ್ಶೆ ಇದ್ದು.
[ಉತ್ತರುಸಿ]
ಹೊತ್ತುವೇಳೆ: 17 March,2011ರ 10:36 AM ಗೆ. (ಒಪ್ಪಸಂಕೊಲೆ)
ಅಪ್ಪಚ್ಚಿ, ರೂಪಕದ್ದು ಒಳ್ಳೆ ಕಲ್ಪನೆ,ಮಾಡುಲಕ್ಕು. ನಿ೦ಗಳ ಪ್ರೋತ್ಸಾಹವೇ ಮು೦ದೆ ಎನ್ನ ಬರೆಶುಗು ಅಪ್ಪಚ್ಚಿ.ಧನ್ಯವಾದ.
[ಉತ್ತರುಸಿ]
ಈ ಸರ್ತಿಯಾಣದ್ದು ಪಷ್ತಾಯಿದು..(ಮದಲಾಣದೆಲ್ಲ ಹಾಳು ಹೇಳ್ತದಲ್ಲ…!)
ಎಲ್ಲೋರಿಂಗೂ ಅವರವರ ಅಜ್ಜನ ಮನೆ ನೆಂಪು ಬಪ್ಪಾಂಗೆ ಅದಿಕ್ಕು.
[ಉತ್ತರುಸಿ]
ಹೊತ್ತುವೇಳೆ: 16 March,2011ರ 8:02 PM ಗೆ. (ಒಪ್ಪಸಂಕೊಲೆ)
ಎನಗೆ ತೊಂಡಜ್ಜನ ಮನೆ ನೆಂಪು ಬತ್ತನ್ನೇ ಕುಮಾರಣ್ಣ
[ಉತ್ತರುಸಿ]
ರಘು..,
ಭಾರಿ ಲಾಯಿಕ ಬರೆತ್ತಾ ಇದ್ದೆ….
[ಉತ್ತರುಸಿ]
ಹೊತ್ತುವೇಳೆ: 16 March,2011ರ 6:06 PM ಗೆ. (ಒಪ್ಪಸಂಕೊಲೆ)
ಶಶಿ,
ಅಪ್ಪುದೇ..ಮನೆಗೆ ಹೋಗಿ ಉಪ್ಪು ಮೆಣಸು ಸುರುದು ಕಿಚ್ಚಿಂಗೆ ಹಾಕೆಕ್ಕಕ್ಕು.
[ಉತ್ತರುಸಿ]
ಹೊತ್ತುವೇಳೆ: 17 March,2011ರ 11:28 AM ಗೆ. (ಒಪ್ಪಸಂಕೊಲೆ)
ಎ೦ತ ಮಾವ,ಕಣ್ಣು ಮುಟ್ಟುಗು ಹೇಳಿಯೋ?ಇಲ್ಲೆಪ್ಪಾ…
[ಉತ್ತರುಸಿ]
ಹೊತ್ತುವೇಳೆ: 17 March,2011ರ 11:27 AM ಗೆ. (ಒಪ್ಪಸಂಕೊಲೆ)
ಶಶಿ ಅತ್ತೆ,ಎಲ್ಲ ನಿ೦ಗಳ ಆಶೀರ್ವಾದ..
[ಉತ್ತರುಸಿ]
ಮುಳಿಯ ಭಾವನ ಶಬ್ದಗಳ ಸರ-
-ಪಳಿಗಳಿಂದರಳಿದ ಸುಕವಿತೆಯ
ಇಳೆಯ ಹವ್ಯಕರೆಲ್ಲ ಮೆಚ್ಚುಗು ಒಳ್ಳೆದಾಯಿದಿದು
ತಾಳು ಮಾಡಲೆ ಗುಜ್ಜೆ ತಪ್ಪದು,
ಬೋಳುಕೊದಿಲಿಗೆ ನೆಟ್ಟಿ ಕೊರವದು,
ಹಳೆಯ ಬಾಳಿನ ಮಸದ ಶುದ್ದಿಗೊ ಬಹಳ ಚೆಂದಾಯ್ದು
ಹಸೆಯ ಮಡುಸೊದರಿಂದ ಎದ್ದಿಕಿ
ಹಸೆಯ ಬಿಡುಸೊದರೊರೆಗೆ ಮನುಗಲೆ
ಬೆಸಸಿ ಶುದ್ದಿಯ ನಿಂಗೊ ಆ ತರವಾಡುಮನೆಲಪ್ಪ
ಹೊಸಹೊಸತು ಶುದ್ದಿಗಳ ಭಾಮಿನಿ-
-ಲೆಸೆವ ಭಾವಯ್ಯಂಗೆ ನಿರತವು
ಬಿಸಜಪುತ್ರನ ಭಾಮಿನಿಯ ಕೃಪೆ ಏವಗಳು ಇರಳಿ
[ಉತ್ತರುಸಿ]
ಹೊತ್ತುವೇಳೆ: 17 March,2011ರ 10:21 AM ಗೆ. (ಒಪ್ಪಸಂಕೊಲೆ)
ಏ ಭಾವ,
ಸುರುವಾಣ ಬಾಲಿ೦ಗೆ ಬಡುದ ಸಿಕ್ಸರು ರೈಸಿದ್ದು.ಬಾಲು ಹುಡುಕ್ಕುಲೆ ಹೋದ ಬೋಚ ಭಾವ ಅಲ್ಲಿಯೇ ಬಾಕಿ ಆಯಿದನೋ ಹೇಳಿ ಸ೦ಶಯ.
{ಬಿಸಜಪುತ್ರನ ಭಾಮಿನಿಯ ಕೃಪೆ ಏವಗಳು ಇರಳಿ} ನಿ೦ಗಳ ಹಾರೈಕೆಯ ಓದಿ ಧನ್ಯ ಆದೆ.ನಮ್ಮ ಭಾಷೆಲಿ ಎಷ್ಟು ಚೆ೦ದಕೆ ಬರವಲೆಡಿಗು ಹೇಳಿ ಸೂಕ್ಷ್ಮಲ್ಲಿ ತೋರ್ಸಿದ್ದಿ. ಬೇಗ ಬೈಲಿ೦ಗೆ ಬ೦ದು ಶುದ್ದಿ ಬರವಲೆ ಶುರು ಮಾಡಿ ಆಗದೋ?
ಕು೦ಟಿಕಾನದ ಭಾವ ಸವಿ ಕರ
ದ೦ಟು ಕೊಟ್ಟವು ಬೈಲಿಲಿಯೆ ಜಯ
ಘ೦ಟೆ ಬಾರಿಸಿತೆನ್ನ ಮನಸಿಲಿ ಒಪ್ಪವನು ನೋಡಿ
ಎ೦ಟನೆಯ ಸುಕುಮಾರ ಬ೦ಟರ
ನೆ೦ಟ ಕೃಷ್ಣನು ಅಜಯನಾಗಿಯೆ
ಉ೦ಟು ಮಾಡಿದ ಭಕುತಿಸುಧೆಯೆನಗೀಗ ನೆ೦ಪಾತು.
[ಉತ್ತರುಸಿ]
ಹೊತ್ತುವೇಳೆ: 17 March,2011ರ 11:07 AM ಗೆ. (ಒಪ್ಪಸಂಕೊಲೆ)
ಬೈಲಿಲ್ಲಿ ಭಾಮಿನಿಯ ದ್ವಂದ್ವ ಕೊಶಿ ಆವ್ತಾ ಇದ್ದು.
ಕುಂಟಿಕಾನ ಭಾವ ಬೈಲಿಲ್ಲಿ ಬಂದು ಶುದ್ದಿ ಹೇಳಲೇ ಬೇಕು ಹೇಳುವದು ಎನ್ನ ಕೋರಿಕೆ.
[ಉತ್ತರುಸಿ]
ಹೊತ್ತುವೇಳೆ: 17 March,2011ರ 11:22 AM ಗೆ. (ಒಪ್ಪಸಂಕೊಲೆ)
ಖಂಡಿತ ಅಪ್ಪಚ್ಚಿ.. ನಿಂಗಳ ಆಶೀರ್ವಾದ..
ಆದರೆ ‘ಸ್ಟಾರ್ಟಿoಗು ಟ್ರಬುಲು’.. ವಿಲ್ಯರ್ಸು ಪಂಪಿನ್ಗೆ ಪೆಟ್ರೋಲು ಹಾಕಿ ಸ್ಟಾರ್ಟು ಮಾಡಿದಾಂಗೆ ಎಂತಾರು ಕೆಣಿ ಇದ್ದೋ ಹೇಳಿ ಬೋಚ ಭಾವನತ್ರೇ ಕೇಳೆಕಷ್ಟೇ..:)
[ಉತ್ತರುಸಿ]
ಹೊತ್ತುವೇಳೆ: 17 March,2011ರ 1:37 PM ಗೆ. (ಒಪ್ಪಸಂಕೊಲೆ)
Hey idu Ajaya krishana allada?
Hengidde marya…
Ivana bidedi… Iva yengala collegeli kavana, kathe barvadalli prize thekkondittha. Bhayankara prathibhavantha…
[ಉತ್ತರುಸಿ]
ಹೊತ್ತುವೇಳೆ: 17 March,2011ರ 2:12 PM ಗೆ. (ಒಪ್ಪಸಂಕೊಲೆ)
ಅದಾ,ಈಗ ಸಾಕ್ಷಿ ಸಮೇತ ಸಿಕ್ಕಿಬಿದ್ದ ಹಾ೦ಗಾತು ಕು೦ಟಿಕಾನ ಭಾವ.ಎನ್ನ ಒಪ್ಪವೂ ಈಗ ಸರಿ ಅರ್ಥ ಅಪ್ಪ ಹಾ೦ಗಾತು,ಅಲ್ಲದೋ?
ಇನ್ನು ವಿಲ್ಯರ್ಸು,ಪೆಟ್ರೋಲು ಹೇಳಿ ರೈಲು ಬಿಟ್ಟರೆ ಬೋಚ ಭಾವನ ಒ೦ದರಿ ಕಳುಸೊದೇ, ಕೇಟತ್ತೋ?
[ಉತ್ತರುಸಿ]
ಹೊತ್ತುವೇಳೆ: 17 March,2011ರ 2:20 PM ಗೆ. (ಒಪ್ಪಸಂಕೊಲೆ)
ಇಷ್ಟು ಲಾಯಕ ಬರೆತ್ತ ಕುಂಟಿಕಾನ ಭಾವ ಬೈಲಿಂಗೆ ಬರಲೇಬೇಕು… ಎಂಗೊ ಎಲ್ಲ ಒಪ್ಪ ಕೊಡಲೇ ಬೇಕು…
[ಉತ್ತರುಸಿ]
ತರವಾಡಿಲ್ಲಿ ಕೊಕ್ಕೋ ಕೃಷಿ ಇಲ್ಲೆ ಕಾಣುತ್ತು.
ಮೆಟ್ಟುಕತ್ತಿಲಿ ಕೊರವ ರಭಸಕೆ ಕೈಗೆ ತಾಗಿದ್ದಿಲ್ಲೆ ಕಂಡತ್ತೋ. ಒಳ್ಳೆ ಎಕ್ಷ್ಪರ್ಟೋ!
ಎಂತದೇ ಆಗಲಿ ಮುಳಿಯ ಭಾವನ ಭಾಮಿನಿ ಭೇಷ್ ಭೇಷ್. ರಸಮಯವಾಗಿ ಮೂಡಿ ಬಯಿಂದು ಹೇಳಿಗೊಂಡು ಒಂದು ಒಪ್ಪ.
ಕುಂಟಿಕ್ಕಾನ ಭಾವನೂ ಸ್ವರ ಸೇರ್ಸಿ ಜುಗಲುಬಂದಿ ಆತೀಗ.
ಭೂಪ ಭಾವಯ್ಯ ಮನೆ ಬಿಟ್ಟು ಹೆರಡುತ್ತನೇ ಇಲ್ಯೋದು ಅಂಬಗ.!
ತರವಾಡಿನ ಜಾಲು ನೋಡಿ. – ಭೂತ ಕೊಣಿಯಲೂ ಸಾಕಪ್ಪೋ.
[ಉತ್ತರುಸಿ]
ಹೊತ್ತುವೇಳೆ: 17 March,2011ರ 12:42 PM ಗೆ. (ಒಪ್ಪಸಂಕೊಲೆ)
ಚೆನ್ನೈಭಾವ,
ಅಡಕ್ಕೆ ಕೊಯಿವವ್ವು ಬಾರದ್ದೆ ಜಾಲು ಖಾಲಿ ಇದ್ದು,ಬಟ್ಯ ಬ೦ದರೆ ಎರಡೇ ದಿನಲ್ಲಿ ಜಾಲು ತು೦ಬುಗು,ಅಲ್ಲದೋ?
[ಉತ್ತರುಸಿ]
ರಘು ಅಣ್ಣ, ಈ ಭಾಮಿನಿ ತುಂಬ ಚೆಂದಕೆ ಮೂಡಿ ಬೈಂದು. ಎಡೆ ಎಡೆಲಿ ಬೈಲಿನ ಜನಂಗಳ ಹೆಸರು ಸೇರ್ಸಿದ್ದು ರೈಸಿದ್ದು!!
[ಉತ್ತರುಸಿ]
ಹೊತ್ತುವೇಳೆ: 17 March,2011ರ 12:40 PM ಗೆ. (ಒಪ್ಪಸಂಕೊಲೆ)
ಹೋ, ಧನ್ಯವಾದ ಕೇಶವ.
ತರವಾಡು ಮನೆಲಿ ಬೈಲಿನ ಎಲ್ಲ ಬ೦ಧುಗ ಒಟ್ಟಿ೦ಗೆ ಸೇರಿದ್ದದು ಎನಗೂ ಕೊಶಿ ಕೊಟ್ಟಿದು.
[ಉತ್ತರುಸಿ]
ಒಪ್ಪ ಆಯಿದು….
[ಉತ್ತರುಸಿ]
ನಿಜಕ್ಕೂ ಪುರಸ್ಕಾರ ಯೋಗ್ಯ ಭಾಮಿನಿಗಳಿಗೆ
ಅಭಿನಂದನಾರ್ಹ ಮುಳಿಯದ ರಘುವಿನ ಕವಿತ್ವಕೆ
ಅಳಿವಿರದ ಕಾವ್ಯ ರಚನೆಯ ಬೀಜಾಂಕುರಕ್ಕೆ ತುಂಬು ಹೃದಯದ ಪ್ರೋತ್ಸಾಹ
[ಉತ್ತರುಸಿ]
ಹೊತ್ತುವೇಳೆ: 17 March,2011ರ 12:43 PM ಗೆ. (ಒಪ್ಪಸಂಕೊಲೆ)
ಪಕಳಕು೦ಜ ಮಾವ,ಪ್ರೋತ್ಸಾಹಕ್ಕೆ ಧನ್ಯವಾದ.
[ಉತ್ತರುಸಿ]
ರಘು ಅಣ್ಣ, ಎರಡು ಮಾತಿಲ್ಲೆ.. ಭಾರಿ ಲಾಯಕ್ಕೆ ಆಯಿದು ಬರದ್ದು…
ಇನ್ನೂ ಇಕ್ಕೋ ಹೇಳಿ ಕಾದು ಕೂಯಿದ್ಯೊ..
[ಉತ್ತರುಸಿ]
ಹೊತ್ತುವೇಳೆ: 17 March,2011ರ 12:43 PM ಗೆ. (ಒಪ್ಪಸಂಕೊಲೆ)
ಚುಬ್ಬಣ್ಣ,
ಬರದ್ದೋ ಅಲ್ಲ ಅಕ್ಕ ನೆಟ್ಟಿಕಾಯಿ ಕೊರದ್ದೋ?
[ಉತ್ತರುಸಿ]
ತು೦ಬಾ ತ೦ಬಾ ಲಾಯಿಕಾಯಿದು ಃ-)
[ಉತ್ತರುಸಿ]
ಯೆಬ್ಬಾ ನಿಂಗಳೇ????
ಭಯಂಕರ ಲಾಯಿಕ ಆಯಿದಿದು…
[ಉತ್ತರುಸಿ]
ಹೊತ್ತುವೇಳೆ: 17 March,2011ರ 2:13 PM ಗೆ. (ಒಪ್ಪಸಂಕೊಲೆ)
ಭಯ೦ಕರ ಹೇಳಿ ಅಪ್ಪಗ ಒ೦ದರಿ ಹೆದರಿದೆ ಮಾಣೀ..
[ಉತ್ತರುಸಿ]
ಹೊತ್ತುವೇಳೆ: 17 March,2011ರ 2:15 PM ಗೆ. (ಒಪ್ಪಸಂಕೊಲೆ)
ಹೇ ಇಲ್ಲೆ ಇಲ್ಲೆ.. ಅದು ಮಂಗ್ಳೂರಿನ ಪ್ರಭಾವ… ಇಲ್ಲಿ ಲಾಯಕ ಆದರೆ ಅದರ ಭಯಂಕರ ಹೇಳ್ತವು…
[ಉತ್ತರುಸಿ]
ಹೊತ್ತುವೇಳೆ: 17 March,2011ರ 2:30 PM ಗೆ. (ಒಪ್ಪಸಂಕೊಲೆ)
ಇದು ಸರಿ ಭಾವ!
[ಉತ್ತರುಸಿ]
Aaha.. Adbhutha bhava…
Hemme avutthu Havyaka bhasheli ishtu chendake padya baraddadu odi…
Super aaydu… Hange ondari mane nenpathu
[ಉತ್ತರುಸಿ]
ತರವಾಡು ಮನೆಯ ಕಾರ್ಯಕ್ರಮಂಗಳ ವಿವರಣೆ ಕೇಳುವಾಗ ಅದರ ಕಲ್ಪನೆ ಮಾಡಿ ಕೊಶೀ ಆವ್ತಾ ಇದ್ದು. ಮುಳಿಯದ ಭಾವಯ್ಯ ಆ ಕಲ್ಪನೆಯ ಚೆಂದಕೆ ಭಾಮಿನಿಗೆ ಇಳುಸಿ ನಮ್ಮ ಬೈಲಿನ ಅವಿಭಕ್ತ ಕುಟುಂಬದ ಹಾಂಗೆ ತೋರುಸಿದ್ದದು ಇನ್ನೂ ಚೆಂದ ಆಯಿದು. ಎರಡನೆಯ ಕಂತುದೆ, ಮದಲಾಣ ಕಂತಿನ ಹಾಂಗೆ ಮೆರದ್ದು. ಬೈಲಿನವೆಲ್ಲ ಮೆಚ್ಚಿ ಒಪ್ಪ ಕೊಟ್ಟದರ ಓದಲೇ ಮತ್ತೂ ಕೊಶಿ. ಆನು ರಜಾ ತಡವಾಗಿ ಓದಿದ ಕಾರಣ. ಆನು ಹೇಳೆಕ್ಕಾದ್ದರ ಎಲ್ಲೋರು ಹೇಳಿ ಆಯಿದು. ಈ ಸರ್ತಿಯಾಣ ಪಟಲ್ಲಿ ಕಾಣ್ತ ತರವಾಡು ಮನೆ ಮಾದರಿ ಮನೆಯಾಗಿ ಇದ್ದು, ಮುಳಿಯದ ಭಾಮಿನಿಗೆ ಪೂರಕವಾಗಿದ್ದು. ಕುಂಟಿಕಾನ ಭಾವನುದೆ ಭಾಮಿನಿಲೇ ಒಪ್ಪ ಒಪ್ಪ ಕೊಟ್ಟಿದ. ಜೆಂಬಾರದ ದಿನ ಹಂತಿಲಿ ಉಂಬಗ ದ್ವಂದ್ವಗಾರಿಕೆ ರೈಸಿದ ಹಾಂಗೆ ರೈಸಿತ್ತಿದ. ಕುಂಟಿಕಾನ/ ಮುಳಿಯ ಭಾವಯ್ಯರ ಭಾಮಿನಿಯ ಜೋಡಿ ಮೆರೆಯಲಿ. ಭಾಮಿನಿಲಿ ನಮ್ಮ ಮೈ ಮನ ಮರೆಸಲಿ.
[ಉತ್ತರುಸಿ]
ರಘುವಣ್ಣಾ ಭಯ೦ಕರ ಆಯ್ದು
ನಿ೦ಗಳ ಭಾಮಿನಿ! (ಹೀ೦ಗೆ ಹೇಳುಲಕ್ಕೊ:)).
[ಉತ್ತರುಸಿ]
ಹೊತ್ತುವೇಳೆ: 17 March,2011ರ 4:52 PM ಗೆ. (ಒಪ್ಪಸಂಕೊಲೆ)
ಧಾರಾಳ..ಆಗದ್ದೇಕೆ. ಅಣ್ಣ ಆರು ಗೆರೆಯ ಭಾಮಿನಿಲಿ ಬರವಗ ನೀನು ನಾಲ್ಕು ಗೆರೆಲಿಯಾದರು ಬರೆಯದ್ದರೆ ಹೆಂಗೆ..! ಆವಾಗ ಅತಿ ಭಯಂಕರ ಅಕ್ಕು.
[ಉತ್ತರುಸಿ]
ಹೊತ್ತುವೇಳೆ: 17 March,2011ರ 5:04 PM ಗೆ. (ಒಪ್ಪಸಂಕೊಲೆ)
ಅದಾ ಕುಮಾರ ಮಾವ ಗವ್ಜಿ ಮಾದ್ಳೆ ಶುರು ಮಾಡಿದೊವು!
ವಿವೇಕ ಮುಳಿಯ
[ಉತ್ತರುಸಿ]
ಲಾಯಿಕಾಯಿದು..ತಾಳಿಂಗೇವದು, ಬೆಂದಿಗೆಂತದು? ವಾಹ್ ..ಹಳೇ ನೆಂಪು ಬಂತು..ಭಾವಂಗೆ ಧನ್ಯವಾದಂಗೊ..
[ಉತ್ತರುಸಿ]
ಮುಳಿಯಭಾವಾ..
ಅದ್ಭುತ ರಚನೆ, ಮತ್ತೊಂದರಿ.
ಒಪ್ಪಣ್ಣಂಗೆ ತರವಾಡುಮನೆಯ ಶುದ್ದಿ ಹೇಳಿರೇ ಕೊಶಿ!
ಮುಳಿಯಭಾವನ ಭಾಮಿನಿ ಹೇಳಿರೆ ಮತ್ತೂ ಕೊಶಿ.
ಅದರ್ಲಿಯೂ ತರವಾಡುಮನೆ ಶುದ್ದಿ ಭಾಮಿನಿಲಿ ಹೇಳಿತ್ತುಕಂಡ್ರೆ ಇನ್ನೂ ಇನ್ನೂ ಕೊಶಿ..
ಇನ್ನೂ ಇದ್ದವನ್ನೆ ಸುಮಾರು ಜೆನ..
ಬೂತಕಟ್ಟುತ್ತ ಕೋಟಿ, ಮದ್ದುಬಿಡ್ತ ಬಾಬು, ರಂಗಮಾವನ ತಂಗೆ – ಮಾಲಚಿಕ್ಕಮ್ಮನ ಸಂಸಾರ, ರಂಗಮಾವನ ಸೋದರತ್ತಿಗೆ ಶಬತ್ತೆಯ ಸಂಸಾರ – ಇತ್ಯಾದಿ!!
ಇವೆಲ್ಲರದ್ದುದೇ ..
[ಉತ್ತರುಸಿ]
ಅದ್ಭುತ ಕವನ.
ಇನ್ನೂ ಬರೆಯಿರಿ.
[ಉತ್ತರುಸಿ]
ರಘು ಭಾವ°,
ತರವಾಡು ಮನೆಯ ಚಿತ್ರಣದ ಎರಡನೇ ಕಂತುದೇ ಲಾಯ್ಕ ಬಯಿಂದು ಸುರುವಾಣದ್ದರ ಹಾಂಗೆಯೇ!!
ಧನ್ಯವಾದ ರಘು ಭಾವ°.
ನವಗೆ ಎಲ್ಲೋರಿಂಗೂ ಜೀವನಲ್ಲಿ ಒಂದು ತರವಾಡು ಮನೆ ಇದ್ದು, ಎಂಗೊಗೆ ಹುಟ್ಟಿ ಬೆಳದ ಮನೆದೇ ಇರ್ತು ಮೂಲ ಆಗಿ, ಕೊಟ್ಟ ಮನೆಗೆ ಹೊಗ್ಗಿದ ಮೇಲೆದೇ!! ಒಪ್ಪಣ್ಣನ ಬೈಲಿಂಗೆ ಬಂದ ಮೇಲೆ ಬೈಲಿನ ತರವಾಡು ಮನೆದೇ ನಮ್ಮ ತರವಾಡು ಮನೆ ಆದ್ದದು ಜೀವನದ ಒಂದು ಸುಯೋಗವೇ ಅಲ್ಲದಾ? ಈ ಕೂಡು ಕುಟುಂಬದ ಭಾಗವಾಗಿಪ್ಪಲೆ ತುಂಬಾ ಹೆಮ್ಮೆ ಅನುಸುತ್ತು. ಒಪ್ಪಣ್ಣನ ಬೈಲು, ಬೈಲಿನ ಎಲ್ಲ ಬಂಧುಗೊ ನಮ್ಮ ನಿತ್ಯ ಜೀವನದ ಭಾಗಂಗಳೇ ಅಲ್ಲದಾ? ನಿಂಗಳ ಭಾಮಿನಿ ಬಂದ ಮೇಲೆ ಆ ಬಾಂಧವ್ಯ ಇನ್ನುದೇ ಹೆಚ್ಚಾತು. ತುಂಬಾ ಚೆಂದಕ್ಕೆ ಬರದ್ದಿ ಭಾವ°. ನಮ್ಮ ಬೈಲಿನ, ತರವಾಡು ಮನೆಯ ಎಲ್ಲ ವ್ಯಕ್ತಿತ್ವಂಗಳೂ ಬೆಳಕಿಂಗೆ ಬರಲಿ…
ಇನ್ನಾಣ ಕಂತಿಂಗೆ ಕಾಯ್ತಾ ಇದ್ದೆ…
[ಉತ್ತರುಸಿ]
ರಘುಭಾವ ಆನು ಹೇಳೇಕಾದ್ದದರ ಎಲ್ಲ ಎಲ್ಲೋರೂ ಹೇಳಿ ಮುಗುಸಿದ್ದವಾನೆ.ಇರಳಿ ಲಾಯಕಾಯಿದು ಹೇಳಿ ನಿಲ್ಲುಸುತ್ತೆ.ಬೆ೦ಕಿಲ್ಲಿಪ್ಪವರ ಹಾ೦ಗೆ ಎನಗೂ ಇಯರ್ ಎ೦ಡಿನ ತೊ೦ದರೆ ಬೈಲಿ೦ಗೆ ಬಪ್ಪಲೇ ಪುರುಸೊತ್ತಿಲ್ಲೆ.ಮಗಳ ಮನಗೆ ಹೋಯೇಕಾದರೂ ಸುತ್ತಿ ಹೋಯೇಕು ಬೇರೆ ಹಲವು ಕಾರ್ಯಕ್ರಮ೦ಗೊ ಇನ್ನಿಗ ವಿರಾಟ ಪೂಜೆಯೂ ಬ೦ತದ.ಇರಲಿ ಇನ್ನಣ ಭಾಮಿನಿ ಬೇಗ ಬರಳಿ.ಒಪ್ಪ೦ಗಳೊಟ್ಟಿ೦ಗೆ
[ಉತ್ತರುಸಿ]
ಹೊತ್ತುವೇಳೆ: 18 March,2011ರ 11:32 PM ಗೆ. (ಒಪ್ಪಸಂಕೊಲೆ)
ಅಷ್ಟಪ್ಪಗ ಗೆಣಮೆಣಸು ಸಜ್ಜಿ ಮಾಡ್ಲೆ ಆತನ್ನೆ ಮೋಹನಣ್ಣ.
[ಉತ್ತರುಸಿ]
ಹೊತ್ತುವೇಳೆ: 19 March,2011ರ 9:07 PM ಗೆ. (ಒಪ್ಪಸಂಕೊಲೆ)
ಕೃಷ್ಣಮೋಹನ ಮಾವ,ಪುರುಸೊತ್ತು ಮಾಡಿ ಬ೦ದಿರನ್ನೆ.ಗೋಕರ್ಣಕ್ಕೆ ಹೆರಟಿರೋ?
[ಉತ್ತರುಸಿ]
ಭಾರೀ ಲಾಯ್ಕಾಯಿದು ರಘುಅಣ್ಣ.
[ಉತ್ತರುಸಿ]
ತರವಾಡು ಮನೆಯ ಭಾಮಿನಿ ಬಾರೀ ಪಸ್ಟ್ಟಾಯಿದು..ಬಿಡದ್ದೆ 3 ಸರ್ತ್ತಿ ಓದಿದೆ ಓದಿದಸ್ತ್ತು ರುಚಿ ಹೆಚ್ಹುತ್ತನ್ನೆ..ಇನ್ನಾಣದ್ದು ಯಾವಾಗ??ಒಪ್ಪಂಗಳೊಟ್ಟಿಂಗೆ…
[ಉತ್ತರುಸಿ]
ಹೊತ್ತುವೇಳೆ: 19 March,2011ರ 9:06 PM ಗೆ. (ಒಪ್ಪಸಂಕೊಲೆ)
ಅಡ್ಕತ್ತಿಮಾರು ಮಾವನ ಬೈಲಿಲಿ ಕಾಣದ್ದೆ ಸುಮಾರು ದಿನ ಆಗಿತ್ತು.ಗುಜ್ಜೆ ತಾಳಿನ ಹಾ೦ಗಾಯಿದು ಹೇಳಿ ಆತದಾ.
[ಉತ್ತರುಸಿ]
ಗೆಣಮೆಣಸು ಸಜ್ಜಿ ಮಾಡಿ ಎಲ್ಲ ಆಯಿದು.ಸೌತೆ ಸಾಲು ತೆಗದು ಬಿತ್ತು ಹಾಕಿರಕ್ಕೋ ಹೇಳಿ ಅ೦ದಾಜಿ.ಅದಕ್ಕೊ೦ದಷ್ಟು ಕೆಲಸ ಇದ್ದದ.ಚೆನ್ನಯಿ ಭಾವ ಎನ್ನ ಮಗನೂ ಚೆನ್ನಯಿಲಿಯೇ ಇಪ್ಪದು ವಿಪ್ರೊಲ್ಲಿ ಕೆಲಸ.ಒಪ್ಪ೦ಗಳೊಟ್ಟಿ೦ಗೆ.
[ಉತ್ತರುಸಿ]