ನಮ್ಮ ನೆ೦ಟರ ಮದುವೆ ಶುದ್ದಿಯ
ಸುಮ್ಮನಿರದಿ೦ದಿಲ್ಲಿ ಹೇಳೊಗ
ಒಮ್ಮನಸ್ಸಿಲಿ ಕೂದು ಬೈಲಿನವೆಲ್ಲ ಕೇಳುವಿರಾ
ಹೆಮ್ಮೆಯಲ್ಲದೊ ನಮ್ಮದೀ ಕ್ರಮ
ಗಮ್ಮತಿನ ಅನುಪತ್ಯ ಸಕಲರ
ಸಮ್ಮತಿಯು ಇದ್ದರದೊ ಹೇಳುವೆ ಆನು ವಿನಯಲ್ಲಿ
.
ವರುಷ ಇಪ್ಪತ್ತಾರು ಮಾಣಿಗೆ
ತರುಸಿ ಜಾತಕ ಯೋಗ್ಯ ಕೂಸಿನ
ಹರುಷದಲಿ ಮಾಡೆಕ್ಕು ಮದುವೆಯ ದಿನವ ನಿಜಮಾಡಿ
ಕರವಲೆಡ್ತರೆ ಸಾಕು ಕೂಸಿ೦
ಗೆರಡು ಬಗೆ ಗೊ೦ತಿರಲಿ ಅಡಿಗೆಲಿ
ಎರವಲೆಡ್ತರೆ ಸಾಕು ಉದ್ದಿನದೋಸೆ ಹೊತ್ತಿ೦ಗೆ
.
ಮಾಣಿ ಗಟ್ಟಿಗ° ಸಕಲ ವಿದ್ಯೆಲಿ
ಜಾಣ ಲೆಕ್ಕಾಚಾರ ಬರವಲೆ
ಗೋಣಿ ಕಾಯಿಯ ಹೊರುಗು ನೇರ್ಪಕೆ ಪೋಕುಮುಟ್ಟಿ೦ಗೆ
ತೂಣದಷ್ಟೇ ತ್ರಾಣಿ ಹುಡುಕಿರು
ಕಾಣ ಕೊರತೆಯು ತಡವು ಮಾಡದೆ
ಚಾಣೆ ತಲೆಯಪ್ಪದರ ಮದಲೇ ಮದುವೆ ಕಳುಶೆಕ್ಕು
.
ಅಕ್ಕ° ಕಳುಸಿದವೊ೦ದು ಜಾತಕ
ಪಕ್ಕನೆಯೆ ತೋರುಸಿರೆ ಕೂಡಲೆ
ಲೆಕ್ಕ ಹಾಕಿದ ಜೋಯಿಸರು ಬೆಳಿನೆಗೆಲಿ ಹೇಳಿದವು
ಅಕ್ಕು ಕೂಡುತ್ತೀ ಜತೆಯು ಸರಿ
ಬಕ್ಕು ಜೀವನ ನೊಗವ ಕಟ್ಟುಲೆ
ಒಕ್ಕಿ ನೋಡಿರೆ ಸಾಕು ಸಣ್ಣಕೆ ಮನೆಯ ಹಿನ್ನೆಲೆಯ
.
ಜಾತಕವು ಕೂಡುತ್ತು ಕೂಸಿದು
ಜಾತಿಲಿಯೆ ಸಿಕ್ಕಿದ್ದು ಪುಣ್ಯವೆ
ಕೀತಳೆಯ ಹಾ೦ಗಿಪ್ಪ ಚೆ೦ದದ ತೋಟ ಬೀಗರದು
ಆತು ಬದ್ಧದ ಕಾರ್ಯ ಹೇಳಿಕೆ
ಹೋತು ಬ೦ಧುಗಳಿ೦ಗೆ ಕೂಡಲೆ
ಸೂತಕದ ಹೆದರಿಕೆಯು ತಪ್ಪುಗು ನಾ೦ದಿ ಮಾಡಿದರೆ
.
( ಮದುವೆ ಗೌಜಿ ಬೇಗ ಇಕ್ಕು ಹಾ೦ಗಾರೆ)
ಮದುವೆ ನಿಜ ಆತು -ಭಾಮಿನಿಲಿ, 5.0 out of 5 based on 1 rating
ಅಪ್ಪಪ್ಪು, ಮದುವೆ ಗೌಜಿಯುದೆ ಭಾಮಿನಿಲೇ ಬಕ್ಕು ಹೇಳಿ ಕಾದುಗೊ೦ಡಿರ್ಥೆಯೋ ರಘು ಭಾವಾ..
ಯಾವತ್ತಿನ ಹಾ೦ಗೆ ಒಳ್ಳೇದಾಯಿದು.. ಪ್ರತಿ ಸಾಲುದೆ ತನ್ನ ಹಿ೦ದೆ ಆಳವಾದ ಅರ್ಥ ಮಡಿಕ್ಕೊ೦ಡಿದು.. ಅಭಿನ೦ದನೆಗೊ ಮತ್ತು ಧನ್ಯವಾದ೦ಗೊ..
[ಉತ್ತರುಸಿ]
ಭರ್ಜರಿ ಆತಿದು ಮುಳಿಯ ಭಾವ. ನಿಂಗಳ ಮಾಣಿಗೆ ತೆಳ್ಳವು ಅವ್ತಿಲ್ಲೇ ಹೇಳಿ ಗೊಂತಾತು. ದಿನಾ ಉದ್ದಿನ ದೋಸೆ ಮಾಡಿ ತಿಂಬಷ್ಟು ಗಟ್ಟಿ ಕುಳವಾರು. ಹುಮ್ಮ್ಮ್. ಹೇಳಿದಾಂಗೆ….. ಗೋಣಿ ಕಾಯಿಯ ಹೊರುತ್ತದಲ್ಲದೋ – ಬೋಸ ಭಾವನೂ ಇದ್ದನಡ ರೆಡಿ ಇದಕ್ಕೆ.
ಭಾವ ., ಬದ್ದಲ್ಲಿ ನೆಂಪಿರಲಿ. – ಮುಹೂರ್ತ ದಕ್ಷಿಣೆ ೩ ಕೈ ಮಾಡುತ್ಸು ಬೇಡ. ಸಭೆ ಸರ್ವತ್ರ ಮಾಡಿಕ್ಕುವೋ ಆಗದೋ.
ಉಮ್ಮಾ ಇತ್ತೀಚಗೆ ಒಬ್ಬ ಜೋಇಸ ತರ್ಕ ಮಾಡಿ ಮುಹೂರ್ತ ದಕ್ಷಿಣೆ ಮುಹುರ್ತಿಕಂಗೆ ಮಾತ್ರ. ೩ ಕೈ ಕೊಡ್ಲಾಗ ಹೇಳಿಯೂ , ತೆರೆಸೀರೆ ಹಿಡಿಡು ಗೋತ್ರ ಖಂಡನೆ ಮಾಡ್ಲಾಗ ಹೇಳಿಯೂ ಗೆಂಟು ಹಿಡುದು ಮನೆಯವರ , ಎರಡೂ ಕಡೆ ಭಟ್ರ ಬಗ್ಗಿಸಿ ಹಾಂಗೇ ಮಾಡ್ಸಿದ್ದ.
ಅಂಬಗ ನಮ್ಮ ಸೀಮೆಲಿ ಇಷ್ಟನ್ನಾರ ನಡಕ್ಕೊಂಡು ಬಂದದು, ಬಪ್ಪದು , ಕ್ರಮ , ಪೌರೋಹಿತ್ಯವನ್ನೂ ಖಂಡಿಸಿದಾಂಗೆ ಆತಿಲ್ಯೋ. ಇಲ್ಲಿ ಬೈಲಿನೋರ ಅಭಿಪ್ರಾಯ ಮಂಡಿಸಿ ಸಮರ್ಥಿಸಿರೆ ನಮ್ಮ ಈ ಒಪ್ಪಣ್ಣ.ಕಾಂ ವೇದಿಕೆ ಸಾರ್ಥಕ ಅಕ್ಕು ಭಾವಿಸುತ್ತೆ.
[ಉತ್ತರುಸಿ]
ಪಷ್ಟಾಯಿದು ಮಾವ…
[ಉತ್ತರುಸಿ]
ಮದುವೆಯೂ ಗಡದ್ದಿಲಿ ಆಯೆಕ್ಕಿದಾ. ಅತ್ತಾಳಕ್ಕೆ ನೆರೆಕರೆಯವಕ್ಕೆ ಹೇಳಿಕೆ ಹೋಗಲಿ.(ಬೆಂದಿ ಕೊರವಲೆ ಪೀಶಕತ್ತಿ ತೆಕ್ಕೊಂಡು ಬರೆಕ್ಕು, ನೆಂಪಿಲಿ) ಆನು ಬತ್ತೆ. ಕಳ ಮಡಿಕಿ ಎರದಡಾಟ ಇಸ್ಪೀಟು ಆಡಿದರಕ್ಕು. ಚೆನ್ನೈ ಭಾವ ಹೇಳಿದಾಂಗೆ ಮುಹೂರ್ತ ದಕ್ಷಿಣೆ ವಿಷಯಲ್ಲಿ ಭೇದ ಮಾಡುಲಾಗ. ಮತ್ತೆ ಊಟ ಎಲ್ಲೋರಿಂಗೂ ಹಂತಿಲಿ ಹಾಕೆಕ್ಕು, ಬೈಪ್ಪಣೆಲಿ ಬೇಡ.(ಅಲ್ಲದ್ದರೆ ಭೂಪಣ್ಣ ಬಾರ). ಕೂಸು ಜಾಲ್ಸೂರು ಹೊಡೆಯಾಣದೊ..ಅಂಬಗ ತೊಂದರೆ ಇಲ್ಲೆ ಅವರ ಗುರಿಕ್ಕಾರ್ರು ನಮ್ಮವೇ..
[ಉತ್ತರುಸಿ]
ಚೊಕ್ಕವಾಯಿದು ಭಾವ ಭಾಮಿನಿ
ಯಕ್ಕು ಸಂತಸ ಬೈಲಿನ ಜನಕೆ
ಸಿಕ್ಕುಗದ ಸವಿ ಪಾಚದೌತಣ ಹೋಳಿಗೆಯ ಸಹಿತ
ಬಕ್ಕು ಕಾಗದ ಬದ್ಧವಾದರೆ
ಅಕ್ಕಿಕಾಳಿನ ಹಾಕೆ ಹೋಯೆಕು
ಸಕ್ಕರೆಯ ಜೀವನವ ಹಾರೈಸುತಲಿ ದಂಪತಿಗೆ
ಜಾತಕವ ಕೊಟ್ಟಕ್ಕ ಸಿಕ್ಕಿರೆ
ಈ ತೆರದ ಜಾತಕಗಳಿದ್ದರೆ
ಕಾತರಿಸುತಿರುತಿರ್ಪ ಬಂಧುಗಳಿಂಗೆ ತಿಳುಶಿಕಲಿ
ವೇತನವು ಇಲ್ಲದ್ರು ಮಾಸಿಕ
ಚೇತನವು ಇಕ್ಕಪ್ಪ ಅವು ಝಷ-
- ಕೇತನನ ಅರಗಿಣಿಯ ಸಾಂಕುಗು ಕೊರತೆಯಿಲ್ಲದ್ದೆ
[ಉತ್ತರುಸಿ]
ಹೊತ್ತುವೇಳೆ: 13 April,2011ರ 1:57 PM ಗೆ. (ಒಪ್ಪಸಂಕೊಲೆ)
ಆಹಾಹಾ.. ಕು೦ಟಿಕಾನ ಭಾವಯ್ಯಾ.. ರೈಸಿದ್ದು.. ಹೀ೦ಗಿಪ್ಪದರ ಓದುವಗ ಎ೦ಥಾ ಸ೦ತೋಷ ಗೊ೦ತಿದ್ದಾ.. ಧನ್ಯವಾದ೦ಗೊ..ನಿ೦ಗೊಗೂ, ಒಪ್ಪಣ್ಣನ ಬೈಲಿ೦ಗೂ..
ಝ್ಹಷಕೇತನ ಹೇಳಿರೆ ಎ೦ತರ ಹೇಳಿ ಗೊ೦ತಾಯಿದಿಲ್ಲೆ…
[ಉತ್ತರುಸಿ]
ಹೊತ್ತುವೇಳೆ: 13 April,2011ರ 1:59 PM ಗೆ. (ಒಪ್ಪಸಂಕೊಲೆ)
ಧನ್ಯವಾದಂಗೊ ಗಣೇಶಣ್ಣ…
‘ಝಷಕೇತನ’ ಹೇಳಿರೆ ಮನ್ಮಥ..:)
[ಉತ್ತರುಸಿ]
ಹೊತ್ತುವೇಳೆ: 13 April,2011ರ 2:03 PM ಗೆ. (ಒಪ್ಪಸಂಕೊಲೆ)
ಓಹ್ಹ್…
ನಿ೦ಗೊ ಇಷ್ಟರವರೇ೦ಗುದೆ ಜಾಸ್ತಿ ಬರದು ಕ೦ಡಿದಿಲ್ಲೆನ್ನೆ!!! ನಿ೦ಗಳ ಒಳ ಇಪ್ಪ ಪ್ರತಿಭೆಯ ಹೀ೦ಗೆ ಬೂದಿ ಮುಚ್ಚಿದ ಕೆ೦ಡ / ಎಲೆ ಮರೆಯ ಕಾಯಿ ಮಾಡಿ ಮಡುಗೆಡಿ, ಪ್ಲೀಸ್..
[ಉತ್ತರುಸಿ]
ಹೊತ್ತುವೇಳೆ: 13 April,2011ರ 2:59 PM ಗೆ. (ಒಪ್ಪಸಂಕೊಲೆ)
‘ಝಷಕೇತನ’ ಹೇಳಿರೆ ಮನ್ಮಥ..:)- ಒಂದು ಹೊಸ ಶಬ್ದ ಪರಿಚಯ ಮಾಡಿ ಕೊಟ್ಟದಕ್ಕೆ ಧನ್ಯವಾದಂಗೊ. ಭಾಮಿನಿಯೂ ಲಾಯಿಕ ಆಯಿದು.
ಹೆಚ್ಚಿನ ನಿರೀಕ್ಷೆಲಿ ಇದ್ದೆಯೊ
[ಉತ್ತರುಸಿ]
ಹೊತ್ತುವೇಳೆ: 13 April,2011ರ 3:06 PM ಗೆ. (ಒಪ್ಪಸಂಕೊಲೆ)
ಝಷ ಹೇಳಿರೆ ಮೀನು ಹೇಳಿ ಅರ್ಥ ಗೊ೦ತಾತು ಈಗ.ಕು೦ಟಿಕಾನ ಭಾವನ ಉನ್ನತ ಪದಕೋಶಕ್ಕೆ ಒರಳೆ ಬಕ್ಕು ಬರೆಯದ್ದೆ ತಳೀಯದ್ದೆ ಹೀ೦ಗೆ ಕೂದರೆ..
[ಉತ್ತರುಸಿ]
ಹೊತ್ತುವೇಳೆ: 13 April,2011ರ 2:34 PM ಗೆ. (ಒಪ್ಪಸಂಕೊಲೆ)
ಗೋತ್ರ ಹೇಳೈ ಭಾವ ಮ೦ಗಲ
ಸೂತ್ರ ಬಿಗಿವಲೆ ಬೇಗ ಊರಿನ
ಯಾತ್ರೆ ಮಾಡಿಯೆ ಒಳ್ಳೆ ಜಾತಕ ಹುಡುಕಿ ಕಳುಸುತ್ತೆ
ಸ್ತೋತ್ರ ಭಜನಾಸಕ್ತೆ ಕೋಮಲ
ಗಾತ್ರೆಯನ್ನೇ ಮದುವೆಯಾದರು
ಪಾತ್ರ ತೊಳವಭ್ಯಾಸ ಬಿಡೆಡದೊ° ಮರದರದು ಕಷ್ಟಾ !!
[ಉತ್ತರುಸಿ]
ಹೊತ್ತುವೇಳೆ: 13 April,2011ರ 3:48 PM ಗೆ. (ಒಪ್ಪಸಂಕೊಲೆ)
ಯೇ ಭಾವ, ಎನಗಲ್ಲ ಕೇಳಿದ್ದು ಜಾತಕ.. ಎಂಗಳ ಪೈಕಿಯವಕ್ಕೆ..;)..
ಗೋತ್ರ ಅವರದು ತಿಳುದು ಹೇಳುವೆ
ಮಾತ್ರ ಒಳ್ಳೆಯ ಕೂಟದವು ಅವು
ಶಾಸ್ತ್ರ ನಿಪುಣನು ಸಕಲ ಗೌರವಪಾತ್ರ ಸುಚರಿತ್ರ
ಪಾತ್ರಗಳ ತೊಳಗು, ಚಿತ್ರಾನ್ನವ
ಖಾತ್ರಿಯಾಗಿಯೆ ಮಾಡೆ ಸರಸಿಜ-
- ನೇತ್ರೆ ಛಾತ್ರವೃತ್ತಿ ಮಾಡೆಕು ಪಾಕನಿಪುಣನಡಿ..:)
[ಉತ್ತರುಸಿ]
ಹೊತ್ತುವೇಳೆ: 13 April,2011ರ 5:11 PM ಗೆ. (ಒಪ್ಪಸಂಕೊಲೆ)
ಓ,ಹಾ೦ಗೋ ವಿಷಯ ಭಾವ? ಈಗಾಣ ವೆವಸ್ಥೆ ಹೇ೦ಗೆ ಹೇಳಿರೆ,
ಬೇಕು ಕುಟ್ಟುವ ಕೆಲಸ ಬೆಳಿಯರ
ಚಾಕರಿಯ ಮಾಡುತ್ತ ಹೊಟ್ಟೇ
ಬಾಕನಾಗಿರದಿದ್ದರೆಲ್ಲರು ಕೊಡುಗು ಜಾತಕವಾ
ಪಾಕಶಾಸ್ತ್ರವ ಕಲ್ತುಗೊ೦ಡವ°
ನಾಕು ಬಗೆಯಡಿಗೆಯನು ಮಾಡಿಯೆ
ಲೋಕದೆಲ್ಲೆಡೆ ಬದುಕುಗಲ್ಲದೊ ಡಾ ಮಹೇಶಣ್ಣಾ ?
[ಉತ್ತರುಸಿ]
ಹೊತ್ತುವೇಳೆ: 13 April,2011ರ 7:32 PM ಗೆ. (ಒಪ್ಪಸಂಕೊಲೆ)
ಇದಾ! ನಾವು ಭಾಮಿನಿ೦ದ ಎರಡು ಹೆಜ್ಜೆ ಹಿ೦ದೆ–
ಪಾಕವಾ ತಿಳಕೊ೦ಡು
ಬೇಕಷ್ಟು ಮಾಡ್ಯೊ೦ಡು
ಸಾಕಷ್ಟು(ಷ್ಟೆ) ತಿ೦ದರದು ಎಷ್ಟು ಚೆ೦ದ !
ರೊಕ್ಕವಾ ಕಳೆಯದ್ದೆ
ತೂಕವೂ ಇಳಿಯದ್ದೆ (ಏರ್ಸದ್ದೆ)
ಚೊಕ್ಕದಾ ಜೀವನ ಕುಸುಮ ಸುಗ೦ಧ !!
[ಉತ್ತರುಸಿ]
ರಘು, ಭಾಮಿನಿಲಿ ಮದುವೆ ತಯಾರಿ ಅಪ್ಪಗ, ಕುಂಟಿಕಾನ ಭಾವನ ಮತ್ತೆ ನಿನ್ನ ಜುಗಲ್ ಬಂದಿ ನೋಡುವಾಗ, ಎನಗೂ ಒಂದು ಬರವಲೆ ಎಡಿತ್ತೋ ನೋಡಿದ್ದೆ.
ಬಂದ ಮದುವೆಯ ಹೇಳಿಕೆಂಗಳ
ಒಂದು ಮಾಡಿಯು ಹೋಗದಿದ್ದರೆ
ಮುಂದೆ ಜೆ೦ಬರ ಎದ್ದರೆ೦ಗಳ ಮನಗೆ ಬಾರವಿದಾ.
ಇಂದೆ ಇಸ್ತ್ರಿಯ ಹಾಕಿ ಹೆರಟವ
ಮಂದಹಾಸದ ಮೋರೆ ತೋರುಸಿ
ಚೆಂದವಾಗಿಯು ಕಾಂಬಲಾಗಿಯೆ ನಮ್ಮ ಶಿರಿಶಣ್ಣಾ
[ಉತ್ತರುಸಿ]
ಮುಳಿಯ ಭಾವನ ಭಾಮಿನಿ ಒಟ್ಟಿಂಗೆ, ಕುಂಟಿಕಾನ ಭಾವ, ಶರ್ಮಪ್ಪಚ್ಚಿಯ ಭಾಮಿನಿಯ ಧಾರೆ ಹರುದ್ದದು ಕಂಡು ಕೊಶೀ ಆತಿದ. ಮದುವೆ ಅನುಪತ್ಯದ ಗೌಜಿಯ ಚೆಂದಕೆ ಸುರುಮಾಡಿದ್ದ ಭಾವಯ್ಯ. ಮುಳಿಯ ಭಾವಯ್ಯ, ಕನಿಷ್ಟ ಐದು ಕಂತಿಲ್ಲಿ ವಿವರವಾಗಿ ಬರೆಕು ಈ ವಿಷಯ. ಪ್ರಥಮ ಅಧ್ಯಾಯ ಚೆಂದಕೆ ಬಯಿಂದು. ಬೇಗ ಮುಗುಶಿಕ್ಕೆಡಾ ಮಿನಿಯಾ.
ಚಾಣೆ ತಲೆಯಪ್ಪದರ ಮದಲೇ ಮದುವೆ ಕಳುಶೆಕ್ಕು. ಅಪ್ಪಪ್ಪಾ. ಪ್ರಾಯ ಅಪ್ಪ ಮದಲೇ ಒಂದು ಚೆಂದಕೆ ಮದುವೆ ಆದರೆ ಸಾಕು ಮಾಣ್ಯಂಗವಕ್ಕೆ. ಕರವಲೆ, ದೋಸೆ ಎರವಲೆ ಪ್ರಾಸ ಲಾಯಕು ಬಯಿಂದು.
ಕೃಷಿಯನ್ನೇ ನಂಬಿದ, ಮಾಣ್ಯಂಗವಕ್ಕೆ ಹೀಂಗೇ ಚೆಂದಕೆ ಮದುವೆ ನೆಡೆಯಲಿ. ಬದ್ದದ ಕಾರ್ಯಕ್ರಮದ ಪದ್ಯಕ್ಕೆ ಕಾದೊಂಡಿದ್ದೆ.
[ಉತ್ತರುಸಿ]
ಹೊತ್ತುವೇಳೆ: 13 April,2011ರ 6:59 PM ಗೆ. (ಒಪ್ಪಸಂಕೊಲೆ)
{ಬದ್ದದ ಕಾರ್ಯಕ್ರಮದ ಪದ್ಯಕ್ಕೆ ಕಾದೊಂಡಿದ್ದೆ.} ಬದ್ಧ ಕಳಾತನ್ನೆ ಬಾವ !
[ಉತ್ತರುಸಿ]
ಹೊತ್ತುವೇಳೆ: 14 April,2011ರ 8:35 AM ಗೆ. (ಒಪ್ಪಸಂಕೊಲೆ)
ಬದ್ದದ ಹೇಳಿಕೆ ಕಾರ್ಯ ಆತಷ್ಟೆ ಹೇಳಿ ಆನು ಗ್ರೇಶಿದ್ದು. ಮತ್ತೆಲ್ಲ ಮುಳಿಯ ಭಾವನ ಕೈಲಿ ಇದ್ದು.
[ಉತ್ತರುಸಿ]
ಹೊತ್ತುವೇಳೆ: 14 April,2011ರ 6:33 PM ಗೆ. (ಒಪ್ಪಸಂಕೊಲೆ)
ಅಪ್ಪಪ್ಪು..
[ಉತ್ತರುಸಿ]
ಮುಳಿಯ ಭಾವನ ಭಾಮಿನಿ ಒಟ್ಟಿಂಗೆ, ಕುಂಟಿಕಾನ ಭಾವ-ಶರ್ಮಪ್ಪಚ್ಚಿಯ ಭಾಮಿನಿ ರೈಸಿದ್ದು..
[ಉತ್ತರುಸಿ]
ರಘು ಭಾವನ ಭಾಮಿನಿ ಹೇಳಿರೆ.. ಎರಡು ಮಾತಿಲ್ಲೆ..!!
ಎಲ್ಲಾ ಸರಿ ಭಾವ. ಮಾಣಿ ಆರು..
[ಉತ್ತರುಸಿ]
ಹೊತ್ತುವೇಳೆ: 13 April,2011ರ 8:18 PM ಗೆ. (ಒಪ್ಪಸಂಕೊಲೆ)
ಮಂಗಳೂರ ಮಾಣಿ ಆದಿಕ್ಕೋ ಚುಬ್ಬಣ್ಣ?!
[ಉತ್ತರುಸಿ]
ಹೊತ್ತುವೇಳೆ: 14 April,2011ರ 8:47 AM ಗೆ. (ಒಪ್ಪಸಂಕೊಲೆ)
ಗೆಂಟಂಗೆ ಕಟ್ಟಿದರೆ ಎಂತ..?
ಫಟ,ವೀಡ್ಯದವಕ್ಕೆ ಈಗಳೇ ಹೇಳಿ ಮಡಿಗಿ ಚುಬ್ಬಣ್ಣ.
[ಉತ್ತರುಸಿ]
ಮದುವೆ ಗಡುದ್ದಿಲಿ ಆಯೆಕ್ಕಿದ.ಈಗ ದೊಡ್ಡ ರಜೆಯಾದ ಕಾರಣ ೪ ದಿನ ಮೊದಲೇ ಬಪ್ಪಲಕ್ಕದೋ.ಹಾಂಗೆ ಮದುವೆಯ ದಿನ ತಿಳಿಸಿಕ್ಕಿ…….
[ಉತ್ತರುಸಿ]
engala oorili ondu majjige,mosaru aagadda koosu iddu,aaringaadaru aavuttare helikki.
[ಉತ್ತರುಸಿ]
ಹೊತ್ತುವೇಳೆ: 14 April,2011ರ 9:38 AM ಗೆ. (ಒಪ್ಪಸಂಕೊಲೆ)
ಎ೦ತರ ಆವುತ್ತರೆ ಹೇಳೆಕಾದ್ದದು? ಮಜ್ಜಿಗೆ, ಮೊಸರು? ಎನಗೆ ಅಕ್ಕು ಆತಾ..
[ಉತ್ತರುಸಿ]
ಹೊತ್ತುವೇಳೆ: 14 April,2011ರ 9:44 AM ಗೆ. (ಒಪ್ಪಸಂಕೊಲೆ)
ಆವುತ್ತರೆ ಎಂತಕೆ ಹೇಳೆಕು? ಅಕ್ಕಾದರೆ ಅಲ್ಲದೋ ಹೇಳೆಕ್ಕಾದ್ದು?!
[ಉತ್ತರುಸಿ]
ಅದ್ಭುತ ಕಾವ್ಯಸಂವಾದ!
[ಉತ್ತರುಸಿ]
ಒಪ್ಪ ಆಯಿದು ಮುಳಿಯ ಬಾವ…
[ಉತ್ತರುಸಿ]
ಕಾವ್ಯ ಸಂವಾದ ಬಾರೀ ಒಳ್ಳೆದಾಯಿದು…ಸುರೂವಿಂಗೆ ಇಸ್ತ್ತು ಗೌಜಿ ಆದರೆ ಮದುವೆ ಹೇಂಗಿಕ್ಕಾಪ್ಪಾ???ಬೈಲ ಮದುವೆ ಅಲ್ಲದಾ ರೈಸಲಿ….
[ಉತ್ತರುಸಿ]
ಭಾಮಿನಿ ಸಂಕಲನ ಬಿಡುಗಡೆ ಮದುವೆಗೋ ? ಸಟ್ಟುಮುಡಿಗೋ ?
[ಉತ್ತರುಸಿ]
ರಘು ಭಾವ! ನಿಂಗೋ ಯೇವ ಶುದ್ದಿ ಹೇಳ್ತಾರುದೇ ಎಂಗೊ ಎಲ್ಲೋರೂ ಒಮ್ಮನಸ್ಸಿಲಿಯೇ ಕೇಳ್ತೆಯಾ°. ಅದರಲ್ಲಿಯೂ ಭಾಮಿನಿಲಿ ಆದರೆ ಒಮ್ಮನಸ್ಸಿನ ಒಟ್ಟಿಂಗೆ ಒಕ್ಕೊರಳುದೇ!!!
ಭಾಮಿನಿಲಿ ನಮ್ಮ ಸಂಪ್ರದಾಯಲ್ಲಿ ನಡೆತ್ತ ಹಾಂಗೇ ಮದುವೆಗೆ ಪೀಠಿಕೆ ಹಾಕಿದ್ದದು ಲಾಯ್ಕಾಯಿದು. ಈಗ ಹೆಚ್ಚಿನದ್ದು ಅವ್ವವ್ವೇ ನಿಗಂಟು ಮಾಡಿಗೊಂಬ ಮದುವೆಗ ಅಪ್ಪ ಕಾರಣ ಅಕ್ಕಂದ್ರಿಂಗೂ ಕೆಲಸ ಕಮ್ಮಿ ಕೊಡ್ತವು ತಮ್ಮಂದ್ರು ಕೂಸು ಹುಡ್ಕುದರ ಅಲ್ಲದೋ ಭಾವ°?
ನಿಂಗಳ ಭಾಮಿನಿಲಿ ಜೊತೆ ಆದ ಜೋಡಿಗ ಹೇಂಗೆ ಮುಂದರುದು ಹೊಸ ಬಾಳಿಂಗೆ ಕಾಲು ಮಡುಗುತ್ತವು ಹೇಳಿ ನೋಡ್ಲೆ ಇನ್ನಾಣ ಕಂತುಗಳ ಕಾಯ್ತೆ.
ಆದಷ್ಟು ಬೇಗ ಬರಲಿ ರಘು ಭಾವ°!! ಜೆಂಬ್ರಂಗಳ ಚೊರಿ ಇದ್ದಿದಾ ಇನ್ನು!! ಮತ್ತೆ ಬೈಲಿನ ತಮ್ಮಂದ್ರ ಮದುವೆ ಮುಹೂರ್ತಂಗಳೂ ಇದ್ದು.. ಅದಕ್ಕೆ ತೊಂದರೆ ಅಪ್ಪ ಹಾಂಗೆ ಭಾಮಿನಿಲಿ ಅಪ್ಪ ಬೈಲ ಮದುವೆ ಬಾರದ್ದೆ!!!
[ಉತ್ತರುಸಿ]