ಓ ಮನ್ನೆ,ಬೈಲಿಲಿ ಕೂದೊ೦ಡು ಮದುವೆ ಕಥೆ ಹೇಳೊಗ ಊಟದ ಗೌಜಿಯನ್ನೇ ಮರದ್ದೆ೦ತಗೆ ಭಾವ? ಹೇಳಿ ಚೆನ್ನೈಭಾವ° ಪರ೦ಚಿದವು.
ಸರಿ ಹೇಳಿ, ಅದನ್ನೂ ಬೈಲಿ೦ಗೆ ಹೇಳುವ ಧೈರ್ಯ ಮಾಡಿದೆ ಇದಾ.
—————————–
ಮದುವೆ ಮ೦ಟಪ ಹತ್ತಿ ನೆ೦ಟರು
ಮುದದಿ ಒಸಗೆಯ ಕೊಟ್ಟು ಕೂಡಲೆ
ಎದುರು ಒಡ್ಡಿದ ಎಲೆಯ ತಟ್ಟೆಯ ಮುಟ್ಟಿ ಇಳುದವದಾ
ಅದುರು ಕೈಲಿಯೆ ನೀರಿನಾ ಮಡು
ಗಿದವು ಸಭೆಗೆ ಹೊಡಾಡಿಯಪ್ಪಗ
ಹದದಿ ನೀರಿನ ತಳುದು ಉಡುಗುಲೆ ಭಾವ° ಹೆರಟಿದವು
~

ಭೋಜನಕಾಲೇ...
ಹಸೆಯ ಉದ್ದಕೆ ಬಿಡುಸುವದರೊಳ
ಪಿಸಿಪಿಸಿಯ ಮಾತುಗಳ ಗೌಜಿಲಿ
ಹಸುರು ಬಾಳೆಯ ಎಲೆಯ ಹ೦ತಿಗೆ ಹಾಕಿ ಭಾವಯ್ಯ°
ಹಸಿಯ ನೀರಿನ ಚೆ೦ಬು ತು೦ಬುಸಿ
ನಸುನೆಗೆಯ ಮೋರೆಯನು ತೋರುಸಿ
ಉಸುಲು ಕಟ್ಟುವ ಹಾ೦ಗೆ ಬೀಸಕೆ ನೆಡದ° ಚೆಪ್ಪರಕೆ
~
ನಾಕು ಜೆನ ಹೊಡಿ ಜವ್ವನಿಗರದ
ಹೋಕು ತಾಳಿನ ಹಿಡುದು ರೈಸುತ
ಊಕಿಲಿಯೆ ಬಳುಸಿದರೆ ಗೌಜಿಲಿ ಇರ ವಿಚಾರಣೆಗೆ
ಕೂಕಿಲಿಲೆ ಹೇಳಿದವು ಮಾವನು
ಹಾಕಿ ಉಪ್ಪಿನಕಾಯಿ ಎ೦ತದು
ಬಾಕಿ ಒಳುಶೆಡಿ ಅಡಿಗೆಕೊಟ್ಟಗೆಯೊಳವೆ ಮರೆಯೆಡಿರೊ°
~
ಎರಡು ಗಟ್ಟಿಯ ಜೆನವೆ ಬೇಕಿದ
ಸರುತ ಹಿಡಿವಲೆ ಹೆಡಗೆಲಶನವ
ಪರಡಿದರೆ ತಡವಕ್ಕು ಹ೦ತಿಯ ಕೊಡಿಗೆ ಎತ್ತುಸಲೆ
ಹಿರಿಯರೆಲ್ಲರ ಕೈಯ ಮುಟ್ಟುಸಿ
ಎರದು ನೀರಿನ ಗೋವು ತಟ್ಟೆಗೆ
ಎರಗಿ ಹೇಳಿದವೀಶ್ವರಾರ್ಪಣ ಮನೆಯ ಯೆಜಮಾನ
~
ಹೊಡಿಯ ಉಪ್ಪಿನ ಬಳುಸಿ ಗತ್ತಿಲಿ
ಗುಡುಗುಡುನೆ ನೆಡದೊಬ್ಬ ಮಾಣಿಯ
ಸಡಗರಲಿ ನೋಡಿದವು ಉ೦ಬಲೆ ಕೂದ ನೆ೦ಟ್ರೆಲ್ಲಾ
ಹೊಡಿಹೊಡಿಯು ಚರಪರನೆ ಹಪ್ಪಳ
ಹಿಡಿವ ಸಾರಿನ ಕೈಲು ಬೇಗನೆ
ನೆಡವ° ಹ೦ತಿಯ ನೆಡುಕೆ ಬಳುಸುಲೆ ಹೇಳಿದವು ಭಾವ°
~
ಸಾವಕಾಶವಾಗಿ ಇರುವಾರ ಹಾಕ್ಸಿಯೊ೦ಡು ಊಟ ಮಾಡಿ!
ಸಾರು ವಿಚಾರಣೆ ಆವುತ್ತಷ್ಟೇ..ಇನ್ನೂ ಬಗೆ ಸುಮಾರಿದ್ದು,ಆತೋ…?
ಭೋಜನಕಾಲೇ...-ಭಾಮಿನಿಲಿ, 5.0 out of 5 based on 3 ratings
[ ಕೂಕಿಲಿಲೆ ಹೇಳಿದವು ಮಾವನು ಹಾಕಿ ಉಪ್ಪಿನಕಾಯಿ ಎ೦ತದು ಬಾಕಿ ಒಳುಶೆಡಿ ಅಡಿಗೆಕೊಟ್ಟಗೆಯೊಳವೆ ಮರೆಯೆಡಿರೊ°] – ಇಷ್ಟರಲ್ಲೇ ನಿವೃತ್ತಿಯೋ ಹೇಳಿ ಆತು ಒಂದರಿ.
[ಸಾವಕಾಶವಾಗಿ ಇರುವಾರ ಹಾಕ್ಸಿಯೊ೦ಡು ಊಟ ಮಾಡಿ,ಸಾರು ವಿಚಾರಣೆ ಆವುತ್ತಷ್ಟೇ..ಇನ್ನೂ ಬಗೆ ಸುಮಾರಿದ್ದು,ಆತೋ.] – ಈಗ ಸಮಾಧಾನ ಆತಿದ.
ಅಪ್ಪೋ ಭಾವ , ಬಳುಸಲೆ ನಿಂದ ಹುಡಿ ಜೆವ್ವನಿಗರ ಹೆಸರಿಸಿಕ್ಕಿ ಅಕೇರಿಗೆ. ಕೆರಿಸಿ ಅಶನ ಬಳುಸಿದವಕ್ಕೇ ಭಾವ. ಬಾಳೆಲೆ ತೆಗೆತ್ತೂ ಅವ್ವೇಡ ಅಪ್ಪೋ?
[ಉತ್ತರುಸಿ]
ಹೊತ್ತುವೇಳೆ: 23 May,2011ರ 2:30 PM ಗೆ. (ಒಪ್ಪಸಂಕೊಲೆ)
ಹೆಡಗೆ,ಕೆರೆಶಿ,ಬಟ್ಟಿ ಎಲ್ಲಾ ಅವಕ್ಕೇ ಹೇಳಿ ಅಲ್ಲದೋ ಸ೦ಪ್ರದಾಯ?
[ಉತ್ತರುಸಿ]
ಹೊತ್ತುವೇಳೆ: 24 May,2011ರ 6:27 PM ಗೆ. (ಒಪ್ಪಸಂಕೊಲೆ)
ಬಾವಾ ಚೆನ್ನೈ ಬಾವಂಗೆ ತುಪ್ಪವನ್ನೇ ಕೊಡಿ! ಅರ್ದ ಲೋಟ ಕೊಟ್ಟರೆ ಕೊಡಿ ಮುಟ್ಟುಸುಗು!!!
[ಉತ್ತರುಸಿ]
ಹೊತ್ತುವೇಳೆ: 24 May,2011ರ 8:41 PM ಗೆ. (ಒಪ್ಪಸಂಕೊಲೆ)
ಅಪ್ಪಪ್ಪು. ಸಕ್ಕಣ ನೆಗ್ಗಿ ಉದ್ದಕ್ಕೆ ಬೀಸ ಹೋಯೆಕದಾ. ಎಲ್ಲಾ ಬಳ್ಸುವದರಲ್ಲಿ ಇದ್ದದಾ. ನಿಂಗೊ ಎನ್ನೋಟ್ಟಿನ್ಗೆ ನಾಕು ದಿಕ್ಕೆ ಸುಧಾರಿಕೆ ಮಾಡ್ತ ಕಾರಣ ಅಂದಾಜಿ ಆತದಾ.
[ಉತ್ತರುಸಿ]
ಬಹು ದಿನದ ನಿರೀಕ್ಷೆಯ ನಂತರದ ಭಾಮಿನಿ.
ಊಟಕ್ಕೆ ಕೂದು ಆತು. ತಾಳು , ಸಾರು ಹಪ್ಪಳ ಎತ್ತಿತ್ತು. ಊಟ ಸುರುಮಾಡ್ತಾ ಇದ್ದೆಯೊ°.
ಇನ್ನು ಎಂತೆಲ್ಲಾ ಬತ್ತು ಹೇಳಿ ಕಾದೊಂಡು ಇದ್ದೆಯೊ°
[ಉತ್ತರುಸಿ]
ಹೊತ್ತುವೇಳೆ: 23 May,2011ರ 2:30 PM ಗೆ. (ಒಪ್ಪಸಂಕೊಲೆ)
ಅಪ್ಪಚ್ಚಿ,ಕೊದಿಲು ಮೇಲಾರ ಬಕ್ಕೀಗ.
[ಉತ್ತರುಸಿ]
ಪಾಚ ಯೇವಾಗ ಬಕ್ಕು ಹೇಳಿ ಕಾವದು. ಸುಭಗಣ್ಣ ಚೂರ್ಣಿಕೆ ಹೇಳುಲೆ ತಯಾರು ಮಾಡ್ತಾ ಇದ್ದವು. ಉಂಡು ಏಳೆಕ್ಕಾರೆ ಒಂದಾದರೂ ಹೇಳುಗು. …
[ಉತ್ತರುಸಿ]
ಹೊತ್ತುವೇಳೆ: 23 May,2011ರ 2:28 PM ಗೆ. (ಒಪ್ಪಸಂಕೊಲೆ)
ಸುಭಗಣ್ಣ ಇರ್ತಲೆದೇ ಹೇಳುಗೋ?
[ಉತ್ತರುಸಿ]
ಹಾನ್! ಬಲ್ನಾಡುಮಾಣಿ ಪುನಪ್ರವೇಶ ಆದಪ್ಪದ್ದೆ ರಘುಮಾವನ ಭಾಮಿನಿಯೂ ಬಂತಿದಾ!
ರಘುಮಾವ! ಮಧ್ಯಲ್ಲಿ ಮದ್ವೆ ಗೌಜಿ ಎಲ್ಲ ಸರೀ ಓದಲಾಯಿದಿಲ್ಲೆ ಎನಗೆ, ಕ್ಷಮೆ ಇರಳಿ.. ಊಟಕ್ಕಪ್ಪಾಗ ಬಪ್ಪದು ಈಗಾಣ ಬಿಸಿ ಹುಡುಗರ ಕ್ರಮ ಇದಾ.. ಈ ಪದ್ಯ ಸಂಗ್ರಹಯೋಗ್ಯ… ಕೆಲವು ವರ್ಶ ಹೋದರೆ ಇದೆಲ್ಲ ಎಲ್ಲಿ ನಾಪತ್ತೆ ಆವುತ್ತೋ ಹೇಳುವ ಸಂಶಯ ಬತ್ತು.. ಅನುಕೂಲಶಾಸ್ತ್ರಲ್ಲಿ ಬೈಪಣೆ ಊಟವೇ ಸುಲಾಭ ಹೇಳಿ ಲೆಕ್ಕ ಅಲ್ಲದಾ.. ಏನೇ ಆದರೂ ಹಂತಿಲಿ ಕೂದು ಉಂಬ ಗಮ್ಮತ್ತು ಬೇರೆ, ಬೈಪಣೆಲಿ ಆ ಸುಖ ಇಲ್ಲೆ.. ಆದರೆ ಕೆಲವೊಂದರಿ ಬೈಪಣೆ ಅನಿವಾರ್ಯ ಕೂಡ.. ಬ್ರಾಹ್ಮಣ ಭೋಜನ ಕ್ರಮ ಅಳಿಯದ್ದ ಹಾಂಗೆ ನೋಡುದು ನಮ್ಮ ಕೈಲೇ ಇದ್ದು ಅಲ್ಲದಾ!!
[ಉತ್ತರುಸಿ]
ಹೊತ್ತುವೇಳೆ: 23 May,2011ರ 2:27 PM ಗೆ. (ಒಪ್ಪಸಂಕೊಲೆ)
ಹೊ,ಮಾಣಿ.ನೀನೆಲ್ಲಿ ಹುಗ್ಗಿ ಕೂದೆ ಎಷ್ಟು ದಿನ? ಬೈಪ್ಪಣೆ ನವಗಾಗ ಹೇಳ್ತದು ಸರಿ.
[ಉತ್ತರುಸಿ]
ಹೊತ್ತುವೇಳೆ: 24 May,2011ರ 6:25 PM ಗೆ. (ಒಪ್ಪಸಂಕೊಲೆ)
ಯೇ ಮಾಣಿ ಮೊನ್ನೆ ನಮ್ಮ ಕಾವಿನಮೂಲೆ ಮಾಣಿ ಮದುವೆಲಿ ಬೈಪ್ಪಣೆಲಿ ಉಂಡು ಹಾಂಗೆ ನಾಪತ್ತೆ ಅಯಿದೆಡಾ!!
[ಉತ್ತರುಸಿ]
ಹೊತ್ತುವೇಳೆ: 24 May,2011ರ 6:31 PM ಗೆ. (ಒಪ್ಪಸಂಕೊಲೆ)
ಅಪ್ಪು ಮಾರಾಯ, ಆ ದಿನ ಸಿಕ್ಕಾಪಟ್ಟೆ ಅಂಬೆರ್ಪಿಲಿತ್ತಿದ್ದೆ.. ಒಂದನೇ ಹಂತಿ ಕೂದಾಗಿ ಅರ್ದಲ್ಲಿದ್ದತ್ತು… ಎರಡ್ನೇ ಹಂತಿಗೆ ಕೂಪಷ್ಟು ಪುರುಸೊತ್ತಿತ್ತಿಲ್ಲೆ, ಹಾಂಗಾಗಿ ಬೈಪಣೆಗೇ ನಮಸ್ಕಾರ ಹಾಕಿದ್ದು..
[ಉತ್ತರುಸಿ]
ವಾಹ್. ಜೆಂಬರಂಗಳ ಎಡೆಲಿ ಮುಳಿಯ ಭಾವಯ್ಯನ ಭಾಮಿನಿಯ ಮತ್ತಾಣ ಕಂತು ಬಂದದು ಲಾಯಕಾತು. ಪೇಟೆಯ ಕ್ಯಾಟರಿಂಗ್ ಹೇಳ್ತದರ ಎಡೆಲಿ, ಈ ಅನುಪತ್ಯದ ಊಟ ನಿಜವಾಗಿ ಚೆಂದ. ಅಲ್ಯಾಣ ಪ್ರೀತಿ, ಕೊಶಿ ಬೇರೆಲ್ಲಿಯೂ ಸಿಕ್ಕ. ಅಶನ ಬಡುಸಲೆ ಗಟ್ಟಿ ಜೆನವೇ ಬೇಕಪ್ಪ. ಅವಕ್ಕೇ ಹೋಳಿಗೆ ಹಿಡಿಯಲುದೆ ಪ್ರಾಶಸ್ತ್ಯ ಸಿಕ್ಕುವದು. ಹಪ್ಪಳ ಪರ ಪರನೆ ಹೊಡಿ ಆದ್ದದು ಲಾಯಕಾಯಿದು. ಹಂತಿಲಿ ಹಪ್ಪಳದ ಶಬ್ದ, ಪಾಯಸ ಸುರಿತ್ತ ಶಬ್ದ ಕೇಳ್ತ ಕಲ್ಪನೆಯೇ ಚೆಂದ. ಈ ರುಚಿ ಬಫೆಲಿ ಕಂಡಿತಾ ಸಿಕ್ಕ. ಅಂಬಗ ಸಾರಿಂಗೆ ಮತ್ತೆ ಬೆಶಿ ನೀರಿಂಗೆ ಆರ ಹಾಕಿದವೊ ? ಪಾಯಸ , ಹೋಳಿಗೆಗೆ ಕಾಯ್ತಾ ಇದ್ದೆ ಭಾವಯ್ಯ. ದೊಡ್ಡ ಅಳಿಯನ ಉಪನಯನ ಇಂದು. ಹೋಪಲಾಯಿದಿಲ್ಲೆ. ಮುಳಿಯದ ಮದುವೆ ಊಟ ಸಿಕ್ಕಿದ್ದು ಕೊಶಿ ಆತು.
[ಉತ್ತರುಸಿ]
ಹೊತ್ತುವೇಳೆ: 23 May,2011ರ 2:26 PM ಗೆ. (ಒಪ್ಪಸಂಕೊಲೆ)
ಅಪ್ಪು ಮಾವ,ಹ೦ತಿಲಿ ಹಪ್ಪಳ ಹೊಡಿ ಅಪ್ಪದು ನಿ೦ದು ನೋಡುಲೇ/ಕೇಳುಲೇ ಒ೦ದು ಚೆ೦ದ.
ದೊಡ್ಡಭಾವನ ಮನೆ ಉಪ್ನಾಯನ ಎರಡ್ನೆ ಹ೦ತಿಗೆತ್ತಿಕ್ಕೊ?
[ಉತ್ತರುಸಿ]
ಭಾಮಿನಿ ಭಾರೀ ಒಳ್ಳೆದಾಯಿದು…ಊಟ ಸಾವದಾನಲ್ಲಿ ನಡೆಯಲಿ ಅಂಬೆರ್ಪ್ಪು ಬೇಡ..
[ಉತ್ತರುಸಿ]
ಹೊತ್ತುವೇಳೆ: 23 May,2011ರ 2:31 PM ಗೆ. (ಒಪ್ಪಸಂಕೊಲೆ)
ಸರಿ ಮಾವ.ಸಾವಕಾಶ ಸಾವಧಾನಲ್ಲಿ ನೆಡೆಯಲಿಹೇಳಿಗೊ೦ಬ°.
[ಉತ್ತರುಸಿ]
ಲಾಯ್ಕಾದು ಬರದ್ದು. ಮಜ್ಜಿಗೆ ಅಶನದ ಒರೆಗೆ ಓದುವ ನಿರೀಕ್ಷೆಲಿ ಇದ್ದೆ.
[ಉತ್ತರುಸಿ]
ಹೊತ್ತುವೇಳೆ: 23 May,2011ರ 2:23 PM ಗೆ. (ಒಪ್ಪಸಂಕೊಲೆ)
ದೀಪಿಕಾ,
ಮಜ್ಜಿಗೆ ಅಶನದ ವರೇಗೆ ಎಲ್ಲಾ ಹಾಕ್ಸಿಗೊ೦ಡು ಸಾವಕಾಶ ಊಟ ಮಾಡೆಕ್ಕು ಹೇಳ್ತಾ ಇದ್ದವು,ಮನೆ ಯಜಮಾನ್ರು.
[ಉತ್ತರುಸಿ]
ಹೊತ್ತುವೇಳೆ: 23 May,2011ರ 7:46 PM ಗೆ. (ಒಪ್ಪಸಂಕೊಲೆ)
ಆನು ನಿ೦ಗಳ ಭಾಮಿನಿಲಿ ಮಜ್ಜಿಗೆ ಅಶನದ ವರೆಗೆ ಬರದ್ದರ ಓದುವ ನಿರೆಕ್ಷೆಲಿ ಇಪ್ಪದು.
ಅ೦ತೆ ಮಜ್ಜಿಗೆ ಉ೦ಬಲೆ ಅಲ್ಲಾ
[ಉತ್ತರುಸಿ]
ಹೊತ್ತುವೇಳೆ: 23 May,2011ರ 8:45 PM ಗೆ. (ಒಪ್ಪಸಂಕೊಲೆ)
ಆ ಶಿವಳ್ಳಿಯಕ್ಕಳಲ್ಲಿ ಹಸ್ತೋದಕ ಕೊಟ್ಟ ಮತ್ತೆ ಮನೆ ಯಜಮಾನ ಬೀಸಾಳೆ ಹಿಡ್ಕೊಂಡು ಹಂತಿಲಿ ಬೀಸಿಗೊಂಡು ಉಪಚಾರ ಕೇಳುತ್ತಾಂಗೆ ‘ವಿಶೇಷ ಜಾಲ ಮಾಂತ್ರಿ, ಸಾವಕಾಶ ಮಾಂಪೋಡು’ ಹೇಳ್ತಾಂಗೆ ನಮ್ಮದರಲ್ಲಿ ಹೇಂಗೆ? . ಇನ್ನಾಣದ್ದಲ್ಲಿ ಇಕ್ಕಪ್ಪೋ.
[ಉತ್ತರುಸಿ]
ಹೊತ್ತುವೇಳೆ: 29 May,2011ರ 9:51 AM ಗೆ. (ಒಪ್ಪಸಂಕೊಲೆ)
ಶಿವಳ್ಳ್ಯಕ್ಕಳ ಉಪಚಾರದ ಬಗ್ಗೆ ಒಂದು ಜೋಕು ಇದ್ದು. ಈಕ್ಳು ಬತ್ತ್ನವೇ ಹೆಚ್ಚ್… ಬತ್ನ ಬೆತ್ತ್ ಉನ್ಪುನ ಭಾರಿ ಮಲ್ಲೆ. ಇದರ ಅರ್ಥ. ನಿಂಗೊ ಬಂದದೆ ದೊಡ್ಡದು. ಬಂದ ಮೇಲೆ ಉಂಬದು ಇನ್ನೂ ದೊಡ್ಡದು. ಅದು ಹೇಳುವ ಕ್ರಮಲ್ಲಿ ಅಪಾರ್ಥ ಅವ್ತು. ನಿಜ ಅರ್ಥಲ್ಲಿ ಬಂದವರ ಉಪಚರಿಸುದು.
[ಉತ್ತರುಸಿ]
ಆಹಾಹಾ.. ಮುಳಿಯದ ಭಾವನ ಭಾಮಿನಿಗೆ ಮುಳಿಯದ ಭಾವನ ಭಾಮಿನಿಯೇ ಸಾಟಿ!!
ಪಷ್ಟು ಕ್ಲಾಸಾಯಿದು ಭಾವಾ.. ಎನಗೆ ಊರಿನ ಅನುಪ್ಪತ್ಯ ಕಣ್ಣಿ೦ಗೆ ಕಟ್ಟಿದ ಹಾ೦ಗೆ ಆವ್ತಾ ಇದ್ದು. ಸಾರಿನ ಪರಿಮ್ಮಳ ಮೂಗಿ೦ಗೆ ಹೊಡೆತ್ತಾ ಇದ್ದು, ಬಾಯಿಲಿ ನೀರು ಬತ್ತಾ ಇದ್ದು. ಸಾಲದ್ದಕ್ಕೆ ಇಲ್ಲಿ ಈಗ ಘ೦ಟೆ ಹನ್ನೆರಡೂ ಮುಕ್ಕಾಲು!!
ಹಲವು ದಿನಗಳಿ೦ದ ಪ್ರತೀಕ್ಷೆಲಿ ಇತ್ತಿದ್ದೆ, ಸಾರ್ಥಕ ಆತು, ಒಪ್ಪ೦ಗೊ.
@ ಹಸೆಯ ಉದ್ದಕೆ ಬಿಡುಸುವದರೊಳ
ಪಿಸಿಪಿಸಿಯ ಮಾತುಗಳ ಗೌಜಿಲಿ
ಹಸುರು ಬಾಲೆಯ ಎಲೆಯ ಹ೦ತಿಗೆ ಹಾಕಿ ಭಾವಯ್ಯ°
ಭಾವಾ.. “ಹಸುರು ಬಾಳೆಯ ಎಲೆಯ” ಹೇಳಿ ಬರವಲೆ ಉದ್ದೇಶಿಸಿದ್ದದೋ?
[ಉತ್ತರುಸಿ]
ಹೊತ್ತುವೇಳೆ: 23 May,2011ರ 2:21 PM ಗೆ. (ಒಪ್ಪಸಂಕೊಲೆ)
ಹೊ,ಅಪ್ಪನ್ನೆ.ನಿ೦ಗೆ ಗ್ರೇಶಿದ್ದು ಸರಿ ಇದ್ದು.ತಿದ್ದಿದೆ ಗಣೇಶ ಭಾವ.
[ಉತ್ತರುಸಿ]
ರಘು ಭಾವೋ ,


ಇದಾ ಒ೦ದ ನಾಲ್ಕು ಹೋಳಿಗೆ, ಅದಕ್ಕೆ ಕಾಯಿ ಹಾಲು ಹಾಕಿ ಹೊಡದು..!!
ನಮ್ಮ ಸುಭಗ ಭಾವ ಗಟ್ಟುಲಿ ಚೂರ್ಣಿಕೆ ಹೇಳಿದ ಮತ್ತೆ ಅದಾ..
ನಾವು ಹರ ಹರ ಹೇಳುಸ್ಸು..!!
[ಉತ್ತರುಸಿ]
ಹೊತ್ತುವೇಳೆ: 23 May,2011ರ 2:46 PM ಗೆ. (ಒಪ್ಪಸಂಕೊಲೆ)
ಹೋಳಿಗೆಗೂ ಬೋಸ೦ಗೂ ಪೂರ್ವಜನ್ಮದ ಸ೦ಬ೦ಧ ಇದ್ದು ಹೇಳಿ ಪೆ೦ಗಣ್ಣ ಹೇಳಿದ್ದು ಸರಿ ಅ೦ಬಗ.
[ಉತ್ತರುಸಿ]
ಹೊತ್ತುವೇಳೆ: 23 May,2011ರ 4:05 PM ಗೆ. (ಒಪ್ಪಸಂಕೊಲೆ)
ಸತ್ಯವಾದ ಮಾತು.. ಪೆಂಗಣ್ಣ ಹೇಳಿದ್ದು ಸರೀ ಇದ್ದು..
ನೆಗೆಮಾಣಿಗೂ ಹೋಳಿಗೆಗೂ ಕೂಡ ದೂರಲ್ಲಿ ಸಂಬಂಧ ಇದ್ದು ಹೇಳುತ್ಸು ಕೇಳಿದ್ದೆ..
[ಉತ್ತರುಸಿ]
ಹೊತ್ತುವೇಳೆ: 23 May,2011ರ 4:01 PM ಗೆ. (ಒಪ್ಪಸಂಕೊಲೆ)
ಊಟ ಎಲ್ಲೋ ಭೋಸ ಭಾವ ಅಲ್ಲಿ ಹಾಜಿರು!
ಹೋಳಿಗೆ ಶೋರ್ಟೇಜಡಾ!!!! ಹದಾಕೆ ತಿನ್ನೆಕ್ಕಡ!
[ಉತ್ತರುಸಿ]
ಹೊತ್ತುವೇಳೆ: 24 May,2011ರ 6:29 PM ಗೆ. (ಒಪ್ಪಸಂಕೊಲೆ)
ಬೋಚ ಬಾವ ಉಂಬಗ ಒಪ್ಪ ಕುಂಞಿ ಉಪದ್ರ ಮಾಡಿದ್ದಕ್ಕೆ ದೊಡ್ಡ ಕಣ್ಣು ಮಾಡಿನಡ ಅಪ್ಪೋ!!!
[ಉತ್ತರುಸಿ]
ಪಷ್ಟಾಯಿದು ಬಾವ…ಅಭಿಘಾರ , ಪಾಯಸ ಸುರುವಿಂಗೆ ಬಪ್ಪಲೆ ಮರದತ್ತೋ ಭಾವ..
[ಉತ್ತರುಸಿ]
ಹೊತ್ತುವೇಳೆ: 24 May,2011ರ 11:07 AM ಗೆ. (ಒಪ್ಪಸಂಕೊಲೆ)
ಉ೦ಡೆಮನೆ ಭಾವ,
ಅನುಶುದ್ಧಿ,ಎಲೆಕೊಡಿ ಪಾಚ ಬಪ್ಪಗ ಆನು ಕೈತೊಳವ ನೀರಿ೦ಗೆ ವೆವಸ್ತೆ ಮಾಡುವಲ್ಲಿ ಬಾಕಿ ಆದೆನೋ ಹೇದು..
[ಉತ್ತರುಸಿ]
ಹೊತ್ತುವೇಳೆ: 7 June,2011ರ 9:41 PM ಗೆ. (ಒಪ್ಪಸಂಕೊಲೆ)
ಹ್ಹ.ಹ್ಹ..ಹ್ಹ..
[ಉತ್ತರುಸಿ]
ಲಾಯಿಕಾಯಿದು …….ಸದ್ಯ ಜೆ೦ಬರಕ್ಕೆ ಹೋಗದ್ದರೂ ಮನೆಲಿಯೇ ಕೂದು ಜೆ೦ಬರದ ಊಟ ಉ೦ಡಹಾ೦ಗೆ ಆತು. {ಸಾರಿನ ವರೆಗೆ.
}
[ಉತ್ತರುಸಿ]
ಹೊತ್ತುವೇಳೆ: 24 May,2011ರ 11:09 AM ಗೆ. (ಒಪ್ಪಸಂಕೊಲೆ)
ವಿನಯಕ್ಕಾ,
ಬೈಲಿನವೆಲ್ಲ ಒ೦ದು ಜೆ೦ಬ್ರ೦ದ ಮತ್ತೊ೦ದು ಜೆ೦ಬ್ರಕ್ಕೆ ಅರಿಷ್ಟ ಕುಪ್ಪಿಯೊಟ್ಟಿ೦ಗೆ ಸಾಗುತ್ತಾ ಇದ್ದವು ಹೇಳಿ ಶುದ್ದಿ..
[ಉತ್ತರುಸಿ]
ಹೊತ್ತುವೇಳೆ: 24 May,2011ರ 11:20 AM ಗೆ. (ಒಪ್ಪಸಂಕೊಲೆ)
ನಿನ್ನೆ ಒಬ್ಬ ಅರಿಷ್ಟ ಕುಪ್ಪಿ ಅಲ್ಲಿ ಮಡಿಗಿಕ್ಕಿಯೇ ಬಯಿಂದೆ ಹೇಳಿ ಹೇಳಿಕ್ಕಿ ಚೀಲಲ್ಲಿ ತುಂಬ್ಸಿಯೊಂಡೇ ಹೋಯಿದನಡ ಬೆಂಗಳೂರಿಂಗೆ ಡೋ….ಯಿ!. ಸುಭಗ ಹೋಗಿ ಅದರ ಇಲ್ಲಿ ಹುಡುಕಿದ್ದೇ ಬಂತು!!.
[ಉತ್ತರುಸಿ]
ಭಾಮಿನಿ ಲಾಯ್ಕಾಕಿದು ಭಾವಾ. ಅದಕ್ಕಿಂತ ಲಾಯ್ಕಾದ್ದದು ಕಡೆಂಗೆ ಉಪಚಾರ. ಇನ್ನೂ ಎರಡನೆಯ ಭಾಗ ಬಪ್ಪಲಿದ್ದೊ ಹೇಳಿಗೊಂಡು…
[ಉತ್ತರುಸಿ]
[ಉತ್ತರುಸಿ]
ಊಟದ ಪದ್ಯ ಲಾಯ್ಕ ಆಯಿದು.ವಿಸ್ತರಿಸಿ ಭೋಜನವ………………….
[ಉತ್ತರುಸಿ]
ಮುಳಿಯ ಭಾವ ಕೆಲವು ತಿ೦ಗಳಿ೦ದ ಸ೦ಸಾರ ತಾಪತ್ರ್ಯಲ್ಲಿಯೂ ಈ ಪಾಚ ಉ೦ಬ ಗೌಜಿಲಿಯು ಆಗಿ ಬಯಲಿ೦ಗೆ ಇಳುದ್ದಿಲ್ಲೆ.ಇಳುದಪ್ಪಗ ಮದಲು ಕ೦ಡದೇ ಭಾವನ ಭಾಮಿನಿ.ಜೆ೦ಬಾರ೦ಗೊ ಎಲ್ಲ ಒಟ್ಟು ಸೇರುಸಿ ಒ೦ದೇದಿಕ್ಕೆ ಮಾಡಿದ ಹಾ೦ಗೆ ಆತದ.ರೈಸಲಿ ಭವ ಭಾಮಿನಿ.
[ಉತ್ತರುಸಿ]
ನಿನ್ನೆ ಎ೦ಗಳ ತರವಾಡಿಲ್ಲಿ ಪಾಚ ಉ೦ಬಾಗ ಸುಭಗ ಭಾವನ ಕ೦ಡತ್ತು.ಬೋಸಭಾವನ ಕ೦ಡತ್ತಿಲ್ಲೆ.ಕ೦ಡರೆ ನಾಲ್ಕು ಹೋಳಿಗೆ ಸ್ಪೆಶಲಾಗಿ ಹಾಕಲಾವುತೀತು.ಎ೦ತ ಮಾಡುವದು ಯೋಗ ಇಲ್ಲೆ.
[ಉತ್ತರುಸಿ]
ಹೊತ್ತುವೇಳೆ: 24 May,2011ರ 11:46 AM ಗೆ. (ಒಪ್ಪಸಂಕೊಲೆ)
ಕೃಷ್ಣಮೋಹನ ಮಾವಾ,
ಎಡಕ್ಕಿಲಿ ಪುರುಸೊತ್ತು ಮಾಡ್ಯೊ೦ಡು ಬ೦ದಿರನ್ನೆ,ಸ೦ತೋಷ ಆತು.
ನಿನ್ನೆ ಸುಭಗ ಭಾವ° ಅರಿಷ್ಟ ಕುಪ್ಪಿ ಹುಡುಕ್ಕಿದ್ದು ಕ೦ಡಿರೋ?ಬೋಚ ಭಾವ೦ಗೆ ಕಟ್ಟು ಕಳುಸಿದ್ದವೋ ಏನೋ..
[ಉತ್ತರುಸಿ]
ಸುಮಾರು ದಿನಂದ ಕಾದೊಂಡಿತ್ತಿದ್ದೆ ಮಾವ ಷಟ್ಪದಿಗೊಕ್ಕೆ…
[ಉತ್ತರುಸಿ]
ಅರಿಷ್ಟ ಅರಿಷ್ಟ ಹೇಳುವದೇನೋ ಕೇಳಿತ್ತು ಅ೦ಬಗ ಬೋಸ ಭಾವನ ನೆ೦ಪಾಯಿದಿಲ್ಲೆ ಬಟ್ಯನ ನೆ೦ಪಾತು.ಇದು ಪಟ್ಟ ಬದಲಿದ್ದು ಗೊ೦ತಾಯಿದಿಲ್ಲೆ.
[ಉತ್ತರುಸಿ]
ಶ್ರೀ ಮುಳಿಯ ಭಾವ ಅವರ ಊಟದ ವರ್ಣನೆ ನನ್ನಂತಹ ಅಭ್ಯಾಗತನಿಗೆ ಸಂಪೂರ್ಣ ಅರ್ಥ ಆಗದಿದ್ದರೂ ಸಹಾ ಸವಿಯಾದ ಅನುಭವವನ್ನೇ ಕೊಟ್ಟಿದೆ. ನನ್ನ ಮಾವನ ಮನೆಯ (ಹೊಸನಗರ) ಇಂತಹುದೇ ಸಮೃದ್ಧಿಯ ಭೋಜನಗಳು ನೆನೆಪಾದವು. ಈಗ ನಮ್ಮ ಕರಾವಳಿಯ ತುಳು ನಾಡವರ ಭೋಜನದ ಸಮೃದ್ಧಿಯ ಬಗ್ಗೆ ಪಾಡ್ದನದ ಒಂದು ತುಣುಕು ಕೇಳಿ.
“ಮುತ್ತು ವರ್ಣದ ಉನುಪು ಕಾಜಿ ವರ್ಣದ ಕಜಿಪು
ಪಚ್ಚೆ ವರ್ಣದ ಪಸಂಗರಿ
ನೀಲ ವರ್ಣದ ನೆಯಿ. ಅಲೆ ಕೂಟುದು ಅಇನೂದು ಬಗೆ
ಪುಳಿ ಕೂಟುದು ಮುನ್ನೂದು ಬಗೆ
ಎಣ್ಣೆಲ್ಲ ಕಾಯೋದೆ ಬಂನಲ್ಲ ಚಕ್ಕುಲಿ, ಪದೆನ್ಜಿದ ಪಾಯಸ
ಕಣಿಲೆ ಮಾಪಲಂದ್ ಉಪ್ಪಡ್.
ಅಂಗೈ ಮುರಕಲ್ಲ ನೆಯಿ ಮುಂಗೈ ಮುರಕಲ್ಲ ಕೊಜಪು
ಪೇರಡ ಉಂದರ್ ಅಲೆತ್ ಕೈ ದೆಕ್ಕಿಯೇರ್”
ಮುತ್ತಿನಂತೆ ಬಿಳಿಯಾದ ಅನ್ನ, ಗಾಜಿನ ಬಣ್ಣದ ಮೇಲೋಗರ, ಹಸಿರು ಬಣ್ಣದ ತಂಬುಳಿ, ನಸು ನೀಲ ಬಣ್ಣದ ತುಪ್ಪ. ಮಜ್ಜಿಗೆಯಲ್ಲಿ ಮುನ್ನೂರು ಬಗೆ, ಹುಳಿಯಲ್ಲಿ ಐನೂರು ಬಗೆ ಎಣ್ಣೆಯಲ್ಲಿ ಕರಿದ ಕಜ್ಜಾಯಗಳು, ಬಣ್ಣಬಣ್ಣದ ಚಕ್ಕುಲಿಗಳು, ಹೆಸರು ಬೆಲೆ ಪಾಯಸ, ಎಲೆ ಬಿದಿರು, ಕಾಮ್ಟೆ, ಮಾಪಲಂಡದ ಉಪ್ಪಿನಕಾಯಿ,. ಅಂಗೈ ಮುಳುಗುವಷ್ಟು ತುಪ್ಪ. ಮುಂಗೈ ಮುಳುಗುವಷ್ಟು ಮೊಸರು. ಹಾಲಿನಲ್ಲಿ ಊಟ ಮುಗಿಸಿದರು. ಮಜ್ಜಿಗೆಯಲ್ಲೇ ಕೈ ತೊಳೆದರು.
[ಉತ್ತರುಸಿ]
ಕೇಶವ ಕುಡ್ಲರಿ೦ಗೆ ನಮಸ್ಕಾರ.
ಒಪ್ಪಣ್ಣನ ಬೈಲಿ೦ಗೆ ಬ೦ದು ಪ್ರೀತಿಲಿ ಬರೆದ ಈ ಪಾಡ್ದನ ತುಳು ನಾಡವರ ಭೋಜನದ ವರ್ಣನೆ ವರ್ಣಮಯವಾಗಿಯೂ ಇದ್ದು.ಬಣ್ಣ೦ಗಳ ಹೋಲಿಕೆ,ನೂರಾರು ವೈವಿಧ್ಯಮಯ ತಿ೦ಡಿಗೊ ಅಲ್ಲದ್ದೆ “ಅಂಗೈ ಮುರಕಲ್ಲ ನೆಯಿ ಮುಂಗೈ ಮುರಕಲ್ಲ ಕೊಜಪು
ಪೇರಡ ಉಂದರ್ ಅಲೆತ್ ಕೈ ದೆಕ್ಕಿಯೇರ್” ಹೇಳುವ ಮಾತುಗೊ ಊಟ ಹೇ೦ಗಿಕ್ಕು ಹೇಳೊದರ ತಿಳಿಸಿಕೊಟ್ಟತ್ತು.
ಬೈಲಿ೦ಗೆ ಹೀ೦ಗೆಯೇ ಬತ್ತಾ ಇರಿ,ಕೇಶವಣ್ಣ.
[ಉತ್ತರುಸಿ]