ಸಣ್ಣಸಂಕೊಲೆ(shortlink):
ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ
ಓ, ಬಳುಸೊದು ನಿಧಾನ ಆಗಿ ಕೈ ಒಣಗಿತ್ತೋ ಹೇ೦ಗೆ? ನಿಧಾನವಾಗಿ ಊಟ ಮಾಡಿ ಹೇದು ಕೇಳಿಗೊ೦ಡಿತ್ತಿದ್ದೆ ಇದಾ.ಮು೦ದುವರಿಯಲಿ ಸಹಭೋಜನ,ಅಲ್ಲದೋ?
ತೊ೦ಡೆಕಾಯಿಯ ತಾಳು ರುಚಿ ಅಲ
ಸ೦ಡೆ ಹಾಕಿದ ಅವಿಲು ಬೆ೦ದಿಯ
ದೊ೦ಡೆಯೊಳ ಇಳುಶುವಗ ಸ೦ತೋಷವದು ಖ೦ಡಿತವೇ
ಗು೦ಡು ಸೌಟಿಲಿ ಎರದ ಸಾರಿನ
ಕ೦ಡು ಹೊಟ್ಟೆಯ ಹಶುವು ಹೆಚ್ಚೊಗ
ಹಿ೦ಡಿನಾ ತರ ಬ೦ದವದ ಜೆನ ಮರುವಿಚಾರಣೆಗೆ
ಒ೦ದು ಕೈಯಲಿ ಲೋಟೆ ಹಿಡುದಿ
ನ್ನೊ೦ದು ಕೈಯಲಿ ನೀರ ಚೆ೦ಬಿನ
ಚೆ೦ದದಲಿ ಹಿಡುಕೊ೦ಡು ಬ೦ದವು ಆಚಕರೆ ಭಾವ°
ಹಿ೦ದೆ ಅಶನವ ಹಿಡುದು ಬೀಸಕೆ
ಬ೦ದವರ ಕಳುಸಿಕ್ಕಿ ಬಲು ಆ
ನ೦ದದಿ೦ದಲೆ ನಿ೦ದು ಮಾತಾಡಿದವು ಹ೦ತಿಲಿಯೆ
ಗುಳ್ಳ ಕೊದಿಲಿನ ಈಶ್ವರಜ್ಜನ
ಪುಳ್ಳಿ ಬಳುಸುಲೆ ಹೆರಟ ಗೌಜಿಯ
ಹಿಳ್ಳೆಯೂ ನೋಡಿತ್ತು ಪಿಳಿಪಿಳಿ ಕಣ್ಣುಗಳ ಬಿಟ್ಟು
ಸುಳ್ಳು ಹೇಳುತ್ತಿಲ್ಲೆ ಸೌತೆಯ
ಸಳ್ಳಿ ಬಳುಸುಲೆ ಮರದು ಹೋಯಿದು
ತಳ್ಳಿ ಬಿಡುವನೊ ಕೊದಿಲ ಹಿ೦ದೆಯೆ ಸಾರವಿಲ್ಲೆನ್ನೆ
ಊಟದಕ್ಷಿಣೆ ಕೊಡುತ ಬಪ್ಪಗ
ಗೀಟು ಅ೦ಗಿಯ ಬೋಸ ಭಾವನು
ನೋಟು ಸಿಕ್ಕುಗೊ ಹೇಳಿ ನೋಡಿದ° ಓರೆಕಣ್ಣಿಲಿಯೆ
ಲೂಟಿ ಕೆಲಸದ ನಿಪುಣನೀ ವೈ
ವಾಟು ಮಾಡುವ ನೆಗೆಯಮಾಣಿಯು
ಲಾಟು ಬಿಟ್ಟನು ಮಾವ° ಬಕ್ಕಡ ಮರುವಿಚಾರಣೆಗೆ
ಎಸರು ಭಾಗವ ಬೇರೆ ಮಾಡುತ
ರಸಭರಿತ ಕೊದಿಲನ್ನೆ ಕೇಳೊಗ
ಉಸುಲು ಬಿಟ್ಟವು ಉ೦ಬ ಜೆನ ಎಡಿಯಪ್ಪ ಭಾರಿ ಸೆಕೆ
ಅಸಲು ಅಚ್ಚಿನ ಬೆಲ್ಲ ಹಾಕಿದ
ಹಸರ ಸೀವದ ಬ೦ತು ಹ೦ತಿಗೆ
ಪಸರಿಸಿತು ಸವಿ ಸುರಿವ ಶಬ್ದವು ಚೆಪ್ಪರದ ತು೦ಬಾ
ಹ್ಮ್, ಈಗಾಣ ಮಕ್ಕೊಗೆ ಚಮಚಲ್ಲಿಯೇ ಸೀವು ಬಳುಸೆಕ್ಕಕ್ಕೋ ಏನೋ,ಛೆ.ಇದಾ,ಒ೦ದು ದಿನ ಸೀವು ರಜಾ ಹೆಚ್ಚು ತಿ೦ದರೆ ಎ೦ತ್ಸೂ ಆಗ.
ಇನ್ನಾಣದ್ದು ಬತ್ತು,ಮದಲೇ ಹೇದ ಹಾ೦ಗೆ ಸಾವಕಾಶ,ನಿಧಾನಕ್ಕೆ…
ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ ಮುಳಿಯ ಭಾವ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.
ಇದರ ಓದಿ ಅಪ್ಪ ಸಂತೋಶವೇ ಬೇರೆ.. ” ಈಶ್ವರ ಅಜ್ಜನ ಪುಳ್ಳಿ ಬಳುಸುಲೆ ಹೆರಟ ಗೌಜಿಯ ಹಿಳ್ಳೆಯೂ ನೋಡಿತ್ತು” ಅದ್ಭುತ……. ಒಂದು ದೊಡ್ಡ ಒಪ್ಪ … ಬಾರೀ ಪಸ್ಟ್ಟಾಯಿದು..
[ಉತ್ತರುಸಿ]
ಹೊತ್ತುವೇಳೆ: 13 June,2011ರ 10:26 AM ಗೆ. (ಒಪ್ಪಸಂಕೊಲೆ)
ಧನ್ಯವಾದ ಮಾವಾ. ಕೊಶೀ ಆತದಾ,ನಿ೦ಗಳ ಪ್ರೋತ್ಸಾಹ೦ದ.
[ಉತ್ತರುಸಿ]
ಲಾಯಿಕಾಯಿದು. “.ಪಸರಿಸಿತು ಸವಿ ಸುರಿವ ಶಬ್ದವು ಚೆಪ್ಪರದ ತು೦ಬಾ” …..ತು೦ಬಾ ಇಸ್ತಾಆತೆನಗೆ.
[ಉತ್ತರುಸಿ]
ಹೊತ್ತುವೇಳೆ: 13 June,2011ರ 10:26 AM ಗೆ. (ಒಪ್ಪಸಂಕೊಲೆ)
ವಿನಯಕ್ಕ, ಹಸರ ಸೀವು ಎನಗೂ ಇಷ್ಟ..
[ಉತ್ತರುಸಿ]
ಹೊತ್ತುವೇಳೆ: 13 June,2011ರ 11:36 AM ಗೆ. (ಒಪ್ಪಸಂಕೊಲೆ)
ಎನಗೆ ಹಸರು ಪಾಯಸ ಇಷ್ಟ ಇಲ್ಲೆ .
ಆದರೆ ಆ ಸಾಲು ತು೦ಬಾ ಇಷ್ಟ ಆತು ಹೇಳಿ….
[ಉತ್ತರುಸಿ]
ವಾಹ್ ವಾಹ್!!! ಭಾರೀ ಲಾಯಿಕಾಯಿದು. ಒ೦ದೊ೦ದು ಸೂಕ್ಷ್ಮ ವಿಷಯ೦ಗಳನ್ನೂ ಬಹಳ ಆಳವಾಗಿ ಗಮನಿಸಿ ಅಳವಡಿಸಿದ್ದು ಸೂಪರ್ ಆಯಿದು. ಒಪ್ಪ೦ಗೊ.
[ಉತ್ತರುಸಿ]
ಮದುವೆ ಊಟ ಭರ್ಜರಿ ಆತದ. ಅಲಸಂಡೆ ಅವಿಲು, ತೊಂಡೆ ತಾಳು ಉಣ್ತಾ ಇದ್ದ ಹಾಂಗೆ, ಹಿ೦ಡಿನಾ ತರ ಬ೦ದವದ ಜೆನ ಮರುವಿಚಾರಣೆಗೆ. ನಿಜ ಭಾವಯ್ಯ. ಅಂಬಗ ಉಣುತ್ತವಂಗೆ ಮಾತಾಡ್ಳೆ ಪುರುಸೊತ್ತಿಲ್ಲೆ. ಏವದು ಬೇಕು, ಏವದು ಬೇಡ ಹೇಳ್ತಷ್ಟು ಪುರುಸೊತ್ತಿರುತ್ತಿಲ್ಲೆ. ನೀರು ಕೇಳಲೆ ಹೆರಟ ಆಚಕರೆ ಭಾವ ಅಶನಕ್ಕೆ ದಾರಿ ಬಿಟ್ಟದರಲ್ಲಿಯೂ ನೈಜತೆ ಇದ್ದು. ಸಳ್ಳಿ ಬಡುಸಲೆ ಮರದು ಹೋಗಿ ಎಡೆಲಿ ಕಳುಸಿದ್ದದು, ಬೋಚ ಬಾವ ನೋಟಿಂಗೆ ನೋಕ ಹಾಕಿದ್ದು ಎಲ್ಲವುದೆ ಚೆಂದದ ಕಲ್ಪನೆಗೊ. ಮುಳಿಯ ಭಾವಾ, ಶಬ್ದ ಪಸರಿಸಿದ ಹಸರಿನ ಸೀವಿನ ಮುಂದಾಣ ಐಟಮಿಂಗೆ ಕಾಯ್ತಾ ಇದ್ದೆ. ಏವತ್ರಾಣ ಹಾಂಗೆ ಭಾಮಿನಿ ಅದ್ಭುತ, ಸೂಪರ್.
[ಉತ್ತರುಸಿ]
ಹೊತ್ತುವೇಳೆ: 11 June,2011ರ 11:34 PM ಗೆ. (ಒಪ್ಪಸಂಕೊಲೆ)
ಏ ಬೊಳುಂಬು ಮಾವಾ.. ಪದಬಂಧಕ್ಕೆ ಒಂದು ಉತ್ತರ ಇಲ್ಲಿ ಸಿಕ್ಕಿತ್ತು..!!
[ಉತ್ತರುಸಿ]
ಹೊತ್ತುವೇಳೆ: 13 June,2011ರ 3:49 PM ಗೆ. (ಒಪ್ಪಸಂಕೊಲೆ)
ಅದಕ್ಕೆ ಬೇಕಾಗಿಯೇ ಅದು ಬತ್ತ ಹಾಂಗೆ ಒಪ್ಪ ಕೊಟ್ಟದು ಭಾವಯ್ಯಾ..!
[ಉತ್ತರುಸಿ]
ಹೊತ್ತುವೇಳೆ: 13 June,2011ರ 10:28 AM ಗೆ. (ಒಪ್ಪಸಂಕೊಲೆ)
ಊರಿನ ಜೆ೦ಬ್ರ೦ಗಳ ನೆನಪ್ಪೇ ಹಾ೦ಗಿರ್ತದಲ್ಲದೋ ಮಾವ?
[ಉತ್ತರುಸಿ]
ಹಸರು ಪಾಚ ಬಂತು..ಇನ್ನು ಚೂರ್ಣಿಕೆ ಶುರು ಮಾಡುಲಕ್ಕು, ಅರು..ಆರು… ಸುಭಗಣ್ಣ ಎಲ್ಲಿ ಕಾಣುತ್ತಿಲ್ಲೆ.. ಚೆನ್ನೈ ಭಾವ ಎತ್ತಿ ಕೊಟ್ಟರೆ ಶುರು ಮಾಡುದು ಹೇಳಿ ಇದ್ದವು ಎಲ್ಲೋರು..ಭೋಜನ ಕಾಲೇ ನಮಃ ಪಾರ್ವತೀ ಪತಯೇ….
[ಉತ್ತರುಸಿ]
ಹೊತ್ತುವೇಳೆ: 11 June,2011ರ 11:53 PM ಗೆ. (ಒಪ್ಪಸಂಕೊಲೆ)
ಹ್ಹರ ಹ್ಹರಾ… ಮಹದೇ…..ವ!
ಕುಮಾರಣ್ಣಾ, ಚೂರ್ಣಿಕೆ ಹೇಳ್ಳೆ ಇದೇ ಭಾಮಿನಿಯ ಬಾಯಿಪಾಠ ಕಲಿತ್ತಾ ಇತ್ತಿದ್ದೆ. ಇದಾ, ಪಾಯಸ ಆ ಕೊಡೀಂಗೆ ಎತ್ತುವದುದೆ ಹೋಳಿಗೆ ಬಕ್ಕು. ಅಷ್ಟಪ್ಪಗ ಸುರು ಮಾಡುದೆ!
ಹೋಳಿಗೆ ಕೆರುಶಿ ಮರ್ಯಾದಿ ಅನ್ನ ಬಳುಸಿದವಕ್ಕೇ.( ತಪ್ಪಿತ್ತೂಳಿ ಆದರೆ ಮತ್ತೆ ಅವು ಎಂಜಲು ಬಾಳೆ ತೆಗವಲೆ ಒಪ್ಪವು.) ‘ಪಕ್ಕವಾದ್ಯದವು’ (ತುಪ್ಪ- ಕಾಯಾಲು) ರೆಡೀ ಇದ್ದವನ್ನೆ?!
ಸೌತೆ ಸಳ್ಳಿಯ ಬಳುಸಲೆ ಮರದಾಂಗೆ ಆ ಬೆಳಿಪಾಚವನ್ನೂ ಮರದಿಕ್ಕೆಡಿ ಮಿನಿಯ..
[ಉತ್ತರುಸಿ]
ಹೊತ್ತುವೇಳೆ: 12 June,2011ರ 5:03 PM ಗೆ. (ಒಪ್ಪಸಂಕೊಲೆ)
ಸುೞಲ್ಲ, ಈ ಭಾಮಿನಿಗೊ ಚೂರ್ಣಿಕೆಗೆ ಹೇಳಿ ಬರದ ಹಾಂಗೆ ಇದ್ದು.
[ಉತ್ತರುಸಿ]
ಹೊತ್ತುವೇಳೆ: 13 June,2011ರ 10:30 AM ಗೆ. (ಒಪ್ಪಸಂಕೊಲೆ)
ಸ್ವರ ಎಲ್ಲಿಗೆ ವರೆಗೆ ಕೇಳುತ್ತು ಹೇಳಿ ನೋಡೆಕ್ಕು.ಮಾದೇವ ಹೇಳುಲೆ ಜೆನ ತಯಾರಿದ್ದವು. ನೋಡುವ,ಇನ್ನು ಎ೦ತೆಲ್ಲಾ ಇದ್ದು ಊಟಕ್ಕೇ ಹೇಳಿ,ಅಲ್ಲದೋ ಸುಭಗಣ್ಣಾ.
[ಉತ್ತರುಸಿ]
ರಘು ಭಾವಯ್ಯ , ಕಳದ ಎರಡು ಕಂತಿಂದ ಈ ಇದು ರೈಸಿದ್ದು ಹೇಳಿರೆ ನಿಂಗೊಗೆ ಬೇಜಾರಾಗನ್ನೇ. ಇದರ ಓದಿಯಪ್ಪಗ ಆ ಶೂನ್ಯವೂ ಮರದತ್ತು.
[ಗು೦ಡು ಸೌಟಿಲಿ ಎರದ ಸಾರಿನ
ಹಿ೦ಡಿನಾ ತರ ಬ೦ದವದ ಜೆನ ಮರುವಿಚಾರಣೆಗೆ
ಹಿಳ್ಳೆಯೂ ನೋಡಿತ್ತು ಪಿಳಿಪಿಳಿ ಕಣ್ಣುಗಳ ಬಿಟ್ಟು
ತಳ್ಳಿ ಬಿಡುವನೊ ಕೊದಿಲ ಹಿ೦ದೆಯೆ ] ಈ ಸಾಲುಗೋ ನೈಜ ಚಿತ್ರಣದ ಹಾಂಗೆ ಮೂಡಿ ಬಯಿಂದು. ಒಗ್ಗರಣೆ ಹಾಕಿದ ಮಜ್ಜಿಗೆ ನೀರು ಬಯಿಂದಿಲ್ಲೆ ಓ ಅವನ ಭೋಜನ ಕಾಲೆಯೂ ಕೇಳಿದ್ದಿಲ್ಲೆ. ಹಾಂಗಾದ ಕಾರಣ ಊಟ ಮುಗುದ್ದಿಲ್ಲೆ ಹೇಳಿ ಅಂದಾಜಿ ಆತು. ಬರ್ಲಿ ಭಾವ ಬರ್ಲಿ .
ಒಪ್ಪ.
[ಉತ್ತರುಸಿ]
ಸೂಪೆರ್ ಆಯ್ದು ಅಪ್ಪಚ್ಚಿ..ಊಟ ಒಂಚೂರು ಬೇಗ ಮುಗುತ್ತು .. ಇನ್ನೂ ಮುಂದುವರೆಸುಲೆ ಆವುತ್ತಿತ್ತು ..
[ಉತ್ತರುಸಿ]
ಹೊತ್ತುವೇಳೆ: 10 June,2011ರ 12:32 AM ಗೆ. (ಒಪ್ಪಸಂಕೊಲೆ)
ಮತ್ತಾರು ನಿಂಗಳ ಬಫೆಲಿ ನಿಂದು ಉಂಬಲೆ ಹೇಳಿದ್ದು. ಎಂಗಳೊಟ್ಟಿಂಗೆ ಹಂತಿಲ್ಲಿ ಕೂರೆಕ್ಕಾತು. ಈಗ ಹಸರು ಪಾಚ ಬಂತಷ್ಟೇ ಇಲ್ಲಿ ನೋಡಿ. ಇನ್ನೊಂದು ಪಾಚ ೩ ಬಗೆ ಸ್ವೀಟ್ ಚಿಪ್ಸ್ ಸಕ್ಕರೆ ಬೆರಟಿ ಬೋಂಡ ಬಜ್ಜಿ ವಿಚಾರಣೆ ಮೇಲಾರ ಮೊಸರು ಮಜ್ಜಿಗೆ ಕಣಿಲೆ ಉಪ್ಪಿನಕ್ಕಾಯಿ ಬಪ್ಪಲೆ ಇದ್ದು. ದೊಡ್ಡ ಭಾವ ಆಗಳೇ ಹೇಳಿದ್ದವು ಐಸ್ಕ್ರೀಮ್ ಅಖೇರಿಗೆ ಆರತ್ರೂ ಹೇಳಿಕ್ಕೇಡಿ ಹೇದು. ಇನ್ನೀಗ ಚೂರ್ಣಿಕೆ ಸುರುವಾವ್ತಿದಾ. ತೆಕ್ಕುಂಜ ಕುಮಾರಣ್ಣ ಪುಸ್ತಕ ತೆಕ್ಕೊಂಡೇ ಬಯಿಂದವು ನೋಡಿ.
[ಉತ್ತರುಸಿ]
ಹೊತ್ತುವೇಳೆ: 13 June,2011ರ 10:31 AM ಗೆ. (ಒಪ್ಪಸಂಕೊಲೆ)
ಓಯಿ,ಕಿರಣಣ್ಣಾ, ಇಷ್ಟು ಬೇಗ ಎದ್ದರೆ ಹೇ೦ಗೇ? ಊಟ ಮುಗುದ್ದಿಲ್ಲೆ,ಕೂರಿ ರಜಾ..
[ಉತ್ತರುಸಿ]
{ಹಸರ ಸೀವದ ಬ೦ತು ಹ೦ತಿಗೆ
ಪಸರಿಸಿತು ಸವಿ ಸುರಿವ ಶಬ್ದವು ಚೆಪ್ಪರದ ತು೦ಬಾ} – ಇದು ಭಾರಿ ಲಾಯಿಕ್ಕಯಿದು.
ಎನಗೆ ಒಂದು ಸಂಶಯ. ‘ ನಾವೆಂತಕೆ ಪಾಯಸ ತಿಂಬಗ ಶಬ್ದ ಬರುಸುದು’ – ಚೆನ್ನೈ ಭಾವ ಇನ್ನೊಂದರಿ ಹೇಳುಗಾ…?
[ಉತ್ತರುಸಿ]
ಹೊತ್ತುವೇಳೆ: 10 June,2011ರ 9:09 PM ಗೆ. (ಒಪ್ಪಸಂಕೊಲೆ)
ಕೆಲವು ಜೆನ ಕಾಪಿ, ಚಾಯವುದೇ ಸುರಿತ್ತವು..
[ಉತ್ತರುಸಿ]
ಭಾಮಿನಿ ಭಾರೀ ರೈಸಿದ್ದು. ಮದಲಾಣ ಕಂತುಗಳ ಕೂಡ ಓದಿದ್ದೆ. ಆದರೆ ಒಪ್ಪ ಕೊಡ್ಲೆ ಹೆರಟಿದಿಲ್ಲೆ. ಮದುವೆ ಊಟದ ಬಗ್ಗೆ ತಮಿಳು ಭಾಷೆಯ ಒಂದು ಪದ್ಯ ಇದ್ದು. ಕೇಳಲೆ ಇಷ್ಟ ಇದ್ದರೆ ಇದರ ಕೇಳಿಕ್ಕಿ…..
http://carnatic-mp3.blogspot.com/2011/01/bhojanam-seyya-bombay-sisters.html
[ಉತ್ತರುಸಿ]
ಹೊತ್ತುವೇಳೆ: 10 June,2011ರ 9:20 AM ಗೆ. (ಒಪ್ಪಸಂಕೊಲೆ)
ಹಳೆಮನೆ ಅಣ್ಣಾ, ತಮಿಳು ಪದ್ಯ ಭಾರಿ ಲಾಯ್ಕ ಇದ್ದು.ಆ ಲಿ೦ಕ್ ಕೊಟ್ಟದಕ್ಕೆ ಧನ್ಯವಾದ. ಸ೦ಗೀತದ ಅಪೂರ್ವ ಸ೦ಗ್ರಹ ಇದ್ದು.
[ಉತ್ತರುಸಿ]
ಹೊತ್ತುವೇಳೆ: 10 June,2011ರ 9:08 PM ಗೆ. (ಒಪ್ಪಸಂಕೊಲೆ)
ತಮಿಳು ಪದ್ಯ ಲಾಯ್ಕ ಇದ್ದು. ಲಿ೦ಕ್ ಕೊಟ್ಟದಕ್ಕೆ ಧನ್ಯವಾದ.
[ಉತ್ತರುಸಿ]
ಅಳಿಯೋ,ಲಾಯಕಾಯಿದು,ಊಟ ಅಷ್ಟು ಲಾಯ್ಕಿತ್ತೋ ಇಲ್ಯೋ ಗೊಂತಿಲ್ಲೆ.ಪದ್ಯ ಅದೂ ಭಾಮಿನಿಲಿ,ಮುಳಿಯ ತಿಮ್ಮಪ್ಪಯ್ಯ ನಿಂಗಳ ಅಜ್ಜನೋ ಹೇಂಗೆ?
[ಉತ್ತರುಸಿ]
ಹೊತ್ತುವೇಳೆ: 10 June,2011ರ 9:18 AM ಗೆ. (ಒಪ್ಪಸಂಕೊಲೆ)
ಪ್ರೋತ್ಸಾಹಕ್ಕೆ ಧನ್ಯವಾದ ಮಾವಾ.ಮುಳಿಯ ತಿಮ್ಮಪ್ಪಯ್ಯರು ಎನ್ನ ದೊಡ್ಡಜ್ಜ° (ಅಜ್ಜನ ಅಣ್ಣ).
[ಉತ್ತರುಸಿ]
ಹೊತ್ತುವೇಳೆ: 10 June,2011ರ 8:48 PM ಗೆ. (ಒಪ್ಪಸಂಕೊಲೆ)
ವಂಶವಾಹಿನಿಲಿ ಬರೆಕದ.
[ಉತ್ತರುಸಿ]
ಹೊತ್ತುವೇಳೆ: 11 June,2011ರ 7:50 PM ಗೆ. (ಒಪ್ಪಸಂಕೊಲೆ)
ಅದಾ, ಕೇಜಿಮಾವ° ರಕ್ತಪರೀಕ್ಷೆ ಮಾಡಿಯೇ ಬಿಟ್ಟವಾತ!
ಮಾವ°, ಎನಗೆ ಆರದ್ದು ಬಂದದಾಯಿಕ್ಕಪ್ಪಾ?
ಯೇವಗ ಬರೆಕ್ಕು ಪರೀಕ್ಷಗೆ
[ಉತ್ತರುಸಿ]
ಹೊತ್ತುವೇಳೆ: 11 June,2011ರ 8:05 PM ಗೆ. (ಒಪ್ಪಸಂಕೊಲೆ)
ನಿನಗಿನ್ನೂ ಪ್ರಾಯ ಆದ ಹಾಂಗೆಕಾಣ್ತಿಲ್ಲೆನ್ನೆ,ಪಟ ನೋಡುವಾಗ.
[ಉತ್ತರುಸಿ]
ಹೊತ್ತುವೇಳೆ: 13 June,2011ರ 10:34 AM ಗೆ. (ಒಪ್ಪಸಂಕೊಲೆ)
ಮಾವಾ, ಒಪ್ಪಣ್ಣನ ಬೈಲೂ,ನಿ೦ಗಳ ಎಲ್ಲೋರ ಪ್ರೀತಿಯೂ ಎನ್ನ ಬರೆಶೊದು. ಅವರ ಕಣ್ಣಾರೆ ನೋಡುವ ಯೋಗ ಇಲ್ಲದ್ದರೂ ಅಜ್ಜನ ನೆನಪ್ಪಿಸಿದ್ದಕ್ಕೆ ಧನ್ಯ.
[ಉತ್ತರುಸಿ]
ಭಾರೀ ಲಾಯಿಕ ಆಯಿದು..
[ಉತ್ತರುಸಿ]
ವಾಹ್ ಭಾರೀ ಲಾಯ್ಕಾಯ್ದು ಮಾವ!!!
(ಲಾಟು ಬಿಟ್ಟನು ಮಾವ° ಬಕ್ಕಡ ಮರುವಿಚಾರಣೆಗೆ) ಇದರ ಓದಿ ಎನ್ನ ಅಜ್ಜನ ಮನೆಯ ಜೆ೦ಬ್ರ೦ಗಳಲ್ಲಿ ಎ೦ಗ ಹೀ೦ಗೆ ದಕ್ಷಿಣೆ ಒ೦ದು ವಿಚಾರಣೆ ಆಎಕಷ್ಟೆ ಹೇಳಿ ತಮಾಷೆ ಮಾಡಿಗೊ೦ಡಿತ್ತದು ನೆನಪ್ಪಾತು..
ಇನ್ನಾಣ ಭಾಗದ ನಿರೀಕ್ಷೆಲಿ ಇದ್ದೆ
[ಉತ್ತರುಸಿ]
ಹೊತ್ತುವೇಳೆ: 10 June,2011ರ 9:22 AM ಗೆ. (ಒಪ್ಪಸಂಕೊಲೆ)
ದೀಪಿಕಾ,
ಹ.ಹ್ಹಾ..ಎ೦ಗಳದ್ದೂ ಅದೇ ಕಥೆ..
[ಉತ್ತರುಸಿ]
ಹೊತ್ತುವೇಳೆ: 13 June,2011ರ 11:06 PM ಗೆ. (ಒಪ್ಪಸಂಕೊಲೆ)
ಅ೦ಬಗ ಆನು ಕಾದೊ೦ದು ಬ೦ತು…
ವಿಚಾರಣೆ ಬೈ೦ದೇ ಇಲ್ಲೆ..
ಲೊಟ್ಟೆ ಹೇಳುದು ರಘು ಭಾವ.
[ಉತ್ತರುಸಿ]
ಚೂರ್ಣಿಕೆ ಇನ್ನಾಣ ವಾರವೊ?
[ಉತ್ತರುಸಿ]
ಇದು ಒಂದೇ ಬೈಟಕಲ್ಲಿ ಬರದ್ದೇ ಆಗಿರವು! ಇಷ್ತು ನಿರ್ಗಳವಾಗಿದು…
ಲಾಯಿಕ್ಕಾಯ್ದು
[ಉತ್ತರುಸಿ]
ಹೊತ್ತುವೇಳೆ: 13 June,2011ರ 2:20 PM ಗೆ. (ಒಪ್ಪಸಂಕೊಲೆ)
ಅಡಕೋಳಿ ಭಾವಾ,
ನಿ೦ಗಳ ಊಹೆ ನಿಜ .ಒ೦ದೇ ಬೈಟಕಿಲಿ ಬರದ್ದದೇ. ಪ್ರೋತ್ಸಾಹಕ್ಕೆ ಧನ್ಯವಾದ.
[ಉತ್ತರುಸಿ]
ಸೂಪರ್..ನಿಂಗಳ ಎಲ್ಲಾ ಪದ್ಯಂಗಳಲ್ಲಿಪ್ಪ ನೈಜತೆ ಇಲ್ಲಿಯೂ ಬಯಿಂದು..ಗ್ರೇಶಿ ಗ್ರೇಶಿ ನೆಗೆ ಬತ್ತು ಕೊಶಿಲಿ..ವಾಹ್..
[ಉತ್ತರುಸಿ]
ಹೊತ್ತುವೇಳೆ: 13 June,2011ರ 10:59 AM ಗೆ. (ಒಪ್ಪಸಂಕೊಲೆ)
ಉ೦ಡೆಮನೆ ಭಾವಾ,ನೆಗೆ ಮಾಡಿರೆ ಸಾಲ,ಒಟ್ಟಿ೦ಗೆ ಪಾಚ ಸುರಿಯೆಕ್ಕಿದಾ.
[ಉತ್ತರುಸಿ]
ಹಸರು ಪಾಚ ಬಂತು. ಇನ್ನು ಭೋಜನ ಕಾಲೇ ಹಾಕಲೆ ಅಕ್ಕು.
ಪಾಚ ಚಪ್ಪರುಸುತ್ತ ಹಾಂಗೇ ಈ ಭಾಮಿನಿಯನ್ನೂ ಸುಮಾರು ಸರ್ತಿ ಓದಿ ಚಪ್ಪರಿಸಿದೆ.
ಲಾಯಿಕ ಆಯಿದು.
ನಮ್ಮಲ್ಲಿ “ಸೀವು ಸುರಿವದು” ಹೇಳಿಯೇ ವಾಡಿಕೆಲಿ ಇಪ್ಪದು ಅಲ್ಲದಾ.
ಭಾಮಿನಿಲಿ, ಕೊದಿಲು ಆಗಿ ಪಾಚ ಬಂತು. ಕೆಲವು ದಿಕ್ಕೆ ಮೇಲಾರ ಒಂದು ಸರ್ತಿ ಬಂದು ಮತ್ತೆ ಪಾಚ, ಭಕ್ಷ್ಯ ಇತ್ಯಾದಿ. ಮೇಲಾರದ ಮರು ವಿಚಾರಣೆ ಇದೆಲ್ಲಾ ಆಗಿಕ್ಕಿ
[ಉತ್ತರುಸಿ]
ಮುಳಿಯಭಾವಾ…
ಭಾಮಿನಿ ಭಲೇಭಲೇ ಇದ್ದು!
ಅನ್ನ ಅನ್ನ – ಹೇಳಿಗೊಂಡು ಬರಬರನೆ ಬಂದ ಜವ್ವನಿಗರಿಂಗೆ ಸಂತೋಷಲ್ಲಿ ದಾರಿಕೊಟ್ಟ ಆಚಕರೆ ಬಾವನ ಗ್ರೇಶಿರ ನೈಜತೆ ಎದ್ದು ಬತ್ತು ಭಾವ.
ಬೋಚಬಾವ ದಕ್ಷಿಣೆಕೊಟ್ಟೊಂಡು ಬಪ್ಪಗ ಪೈಸೆಪೆಟ್ಟಿಗೆ ಕಂಡ ವಿಶಯ ಕೇಳಿಅಪ್ಪಗ ನೆಗೆ ತಡೆಯ.
ದಕ್ಷಿಣೆ ವಿಚಾರಣೆಗೆ ಬಂತೋ ಅಂಬಗ?
ಪಾಯಿಸ ಎಷ್ಟು ಬಗೆ? ಬೇರೆಂತೆಲ್ಲ ಇದ್ದು? ಚೂರ್ಣಿಕೆ ಆರದ್ದೆಲ್ಲ ಇತ್ತು? ಮಾದೇವ ಆರೆಲ್ಲ ಎಳದ್ದವು?
ಮೊಸರು-ಮಜ್ಜಿಗೆಯೊಟ್ಟಿಂಗೆ ಹಾಲುದೇ ಇತ್ತೋ?
ಹೋಳಿಗೆ ತಿಂಬಲೆ ಪಂತ ಆಯಿದೋ?
ಬೈಲಿಲಿ ಎಲ್ಲೋರುದೇ ಕಾದೊಂಡಿದ್ದವು. ಬೇಗ ವಿಶಯ ತಿಳುಸಿ.
ಅಂಬೆರ್ಪಿಲ್ಲೆ, ಊಟ ನಿದಾನಕ್ಕೆ ಸಾಗಲಿ. ಬೇಗ ಮುಗುಶೇಕು ಹೇಳಿ ಏನಿಲ್ಲೆ.
ಅಂಬೆರ್ಪಿನವು ಬೇಡಿತಿಂಗು ಆಚೊಡೆಲಿ. ಅಲ್ಲದೋ?
[ಉತ್ತರುಸಿ]
ಹೊತ್ತುವೇಳೆ: 13 June,2011ರ 11:09 PM ಗೆ. (ಒಪ್ಪಸಂಕೊಲೆ)
ಇದ ಭಾವ..
ಚಿಲ್ಲರೆ ಅ೦ಗಿ ಕಿಸೆಲಿ ಮಡುಗಿರೆ, “ಎರಡನೇ ಹ೦ತಿಗೆ” ಬಗ್ಗೆ೦ಡು ಬಳುಸುವಾಗ ಅದು ಅತ್ತೆ ಕೊದಿಲಿ೦ಗೆ ಬೀಳುಗು..
ಅದಕ್ಕೆ ನೋಟು ಏನಾರು ಸಿಕ್ಕುಗೋ ಹೇಳಿ ಕಾದ್ಸೊ೦ದು ಬ೦ತು.. ಪೋ..!!
[ಉತ್ತರುಸಿ]
ಹೊತ್ತುವೇಳೆ: 14 June,2011ರ 8:39 AM ಗೆ. (ಒಪ್ಪಸಂಕೊಲೆ)
ಏ ಬೋಚೊ ನಿನ್ನ ನೋಟಿನ ನೋಟ ಪಸ್ಟ್ಟಾಯಿದು..ಇನ್ನೂ ಬೈಲಿಲಿ ದಕ್ಶಿಣೆ ಕೊಡುವಗ ನೋಟೆ ಕೊಡೆಕ್ಕು ಹೇಳಿ ಕಾನೂನೆ ಮಾಡಿರೆ ಎಂತಾ..?ಈಗ ಸಣ್ಣ ನೋಟೇ ಸಿಕ್ಕುತ್ತಿಲ್ಲೆನ್ನೆ…ಹಾಂಗಿಪ್ಪಗ 10 ರ ಮೇಲೆ ಅಲ್ಲದ್ದೆ ಕೆಳ ಇರ ಇದಾ..!!
[ಉತ್ತರುಸಿ]
ಹೊತ್ತುವೇಳೆ: 14 June,2011ರ 9:19 AM ಗೆ. (ಒಪ್ಪಸಂಕೊಲೆ)
ಎಬೇಲೆ, ಕುಂಬ್ಳೆಅಜ್ಜಿಯ ಪೋಷ್ಟಾಪೀಸಿಲಿ ಒಂದ್ರುಪಾಯಿನೋಟಿನ ಕಟ್ಟ ಬೇಕಾದಷ್ಟು ಸಿಕ್ಕುಗು.
ಶ್ರೀಅಕ್ಕನತ್ರೆ ಹೇಳೆಡಿ, ಕಾನಾವಣ್ಣನ ಉಪ್ನಾನಕ್ಕೆ ಅದನ್ನೇ ಕೊಡ್ಳೆ ಲೆಕ್ಕ ಹಾಕುಗು!
[ಉತ್ತರುಸಿ]
ಈ ಬೋಸಭಾವ° ಎಲ್ಲಿಗೆ ಹೋದರೂ ಬಿಡ್ತನಿಲ್ಲೆನ್ನೆ?
ಪದ್ಯ ಲಾಯ್ಕಾಯಿದು ಮುಳಿಯದ ಭಾವಾ.
[ಉತ್ತರುಸಿ]
ತೊಟದಜ್ಜನ ಭಾಗವತಿಗೆಯ
ಎರಡು ಸಾಲಿನ ಚೂರ್ನಿಕೆಯ ಕೇಳಿ
ಹ೦ತಿಲಿದ್ದ ನಮ್ಮೊರೆಲ್ಲ ಒಕ್ಕೊರಲಿನ ದನಿಲಿ
ಹೇಳಿದವು
ಹರಃ ಹರಃ.. ಮಹದೇವ….!!
[ಉತ್ತರುಸಿ]
ಹೊತ್ತುವೇಳೆ: 15 June,2011ರ 9:20 AM ಗೆ. (ಒಪ್ಪಸಂಕೊಲೆ)
ಮಾದೇ……………………………
..
..
..
..
ಯೇವಾ?
[ಉತ್ತರುಸಿ]
ಆಹ ಪಷ್ಟ್ಲಾಸು ಭಾಮಿನಿ. ಇನ್ನಾಣದ್ದು ‘ಹೋಳಿಗೆ’ಯಾಂಗೇ ಇಕ್ಕಲ್ಲದಾ?
[ಉತ್ತರುಸಿ]