ಸಣ್ಣಸಂಕೊಲೆ(shortlink):
ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ
ಆಗಸದ ಚಂದ್ರಂಗೆ ಮತ್ತೆ ಅಮವಾಸ್ಯೆ
ಆರೋಗ್ಯ ಮಂತ್ರಿಗೆ ಮುಗಿಯದ ಸಮಸ್ಯೆ
ಸೀಟು ಹಗರಣ ಮಾಡಿ ಆತೀಗ ಗ್ರಹಣ
ನೋಟು ನೋಡಿರೆ ಇನ್ನು ಅಕ್ಕು ಮತಿಭ್ರಮಣ
ಇಟಲಿಯಮ್ಮನ ಶಿಷ್ಯ ಈ ರಾಜ್ಯಪಾಲ
ಆಟಲಪಕ್ಷದ ರಾಜ್ಯಲಿವನದ್ದೆ ಕೋಲ
ಕುಟಿಲತೆಲಿ ಎದುರಿಲ್ಲೆ ಇವನೆ ಜಗಮೊಂಡು
ಜಟಿಲಬದುಕುಲೆ ಪಾಪ ದನಕಂಜಿ ಹಿಂಡು
ಕಟ್ಟಾಳು ಸೇರಿದರೆ ಆಟ ಕಾಮನುವೆಲ್ತು
ಮುಟ್ಟಾಳೆ ಇಲ್ಲದ್ರೆ ಹಾಳಕ್ಕು ಹೆಲ್ತು
ಮಾಡಿನಡಿಯಿಂದ ಬೀಳುಗು ಫಾಲ್ಸುರೂಫು
ನೋಡಿನೆಡೆಯೆಕ್ಕು ಬೀಳದ ಹಾಂಗೆ ಪಾಪು
ಮಂತ್ರಿಪದವಿಯೊ ಇದು ಸಂಗೀತಕುರ್ಚಿ
ಕಂತ್ರಿ ನಾಯಕರಿಂಗೆ ಹೆಚ್ಚಾತು ಪೆರ್ಚಿ
ತಂತ್ರಿ ಕುತ್ತಿದ° ತಲೆಗೆ ತೆಗದೊಂದು ಭರ್ಚಿ
ಸೀಂತ್ರಿ ತೋರಿದ ಭಿನ್ನ ಮತರಿಂಗೆ ಮಿರ್ಚಿ
ಓದು ಗೊಂತಿಲ್ಲೆ ಗ್ರಂಥಾಲಯದ ಮಂತ್ರಿ
ಮೇದು ಗೊಂತಿಕ್ಕು ಶುರು ಅಕ್ಕಿನ್ನು ಸೀಂತ್ರಿ
ಒರಳೆಗೋದುಲೆ ಗೊಂತೊ?ತಿಂತು ಪುಸ್ತಕವ
ಮರುಳೆ ಯೋಚನೆ ಬಿಟ್ಟು ಕೆರೆಯೊ° ಮಸ್ತಕವ
ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ ಮುಳಿಯ ಭಾವ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.
ಏ ರಘು ಭಾವ ನೀನು ಇಷ್ಟು ಚೆ೦ದಕೆ ಬರದು ಒಪ್ಪ ಕೊಡದ್ರೆ ಅದೊ೦ದು ಕೊರತ್ತೆಯೇಅಲ್ಲದೊ?ಆದರೆ ಭಾವ ಸರ್ವಜ್ನ ಹೇಳುವವ೦ ಕೆಲವಾರು ತ್ರಿಪದಿಗೊ ಬರದಿದ್ದಿದ್ದ೦.ಅದರಲ್ಲಿ ಒ೦ದು …….ಬೋರ್ಕಲ್ಲ ಮೇಲೆ ನಿರ್ಗರೆಯಲಾಕಲ್ಲು ನಿರ್ಕುಡಿಯಲಹುದೆ ಸರ್ವಜ್ನ ಹೇಳಿ.ನಾವು ನಮ್ಮ ಮನೋವೇದನಗೆ ಬೇಕಾಗಿ ಹಿ೦ಗೆ ಬರದೋ ಕೆಳಿಯೊ ಮಾಡುವೊ೦ ಪ್ರಯೋಜನ ಸರ್ವಜ್ನನ ತ್ರಿಪದಿಲಿ ಹೇಳಿದ್ದದೆ.ಅ೦ತೂ ಉತ್ತಮವಾಗಿ ಬರದ್ದೆ ಹೇಳ್ತದರಲ್ಲಿ ಎರಡು ಮಾತಿಲ್ಲೆ.ನಿನಗೊ೦ದು ವಿಶೇಷ ಒಪ್ಪ.ಒಪ್ಪ೦ಗಳೊಟ್ಟಿ೦ಗೆ.
[ಉತ್ತರುಸಿ]
ಹೊತ್ತುವೇಳೆ: 29 September,2010ರ 10:11 AM ಗೆ. (ಒಪ್ಪಸಂಕೊಲೆ)
ಮಾವಾ,ಬೋರ್ಕಲ್ಲು ನೀರ್ಕುಡಿಯ,ರಜ ಕೆಸರಾದರೂ ಇಳುದರೆ ಸಾಕು.
ಪ್ರೋತ್ಸಾಹಕ್ಕೆ ಧನ್ಯವಾದ.
[ಉತ್ತರುಸಿ]
ರಘುಮಾವ.. ಇಂದ್ರಾಣ ರಾಜಕೀಯದ ಚಿತ್ರಣ ಲಾಯ್ಕಲ್ಲಿ ಬಯಿಂದು.. ಇದರ ಅನುವಾದ ಮಾಡಿ ಮಂತ್ರಿಗೊಕ್ಕೆ ಓದಲೆ ಕೊಟ್ರೆ ಒಂದು ರಜಾ ಉದ್ಧಾರ ಆವ್ತವಾ ಏನಾ,,,
[ಉತ್ತರುಸಿ]
ರಘು ಭಾವಯ್ಯ,
ಬರದ್ದು ಭಾರೀ ಲಾಯಿಕ್ ಆಯಿದು.
ಎನಗೆ ಕೊಶೀ ಅದ್ದು ಈ ಸಾಲು:
“ಒರಳೆಗೋದುಲೆ ಗೊಂತೊ?ತಿಂತು ಪುಸ್ತಕವ
ಮರುಳೆ ಯೋಚನೆ ಬಿಟ್ಟು ಕೆರೆಯೊ° ಮಸ್ತಕವ”
ಎಂತ ಗೊಂತಿಲ್ಲದ್ದರೂ ಚಿಂತಿಲ್ಲೆ. ತಿಂಬಲೆ (ನುಂಗಲೆ) ಸರೀ ಗೊಂತಿದ್ದರೆ ಮಂತ್ರಿ ಅಂತೂ ಗ್ಯಾರಂಟಿ.
[ಉತ್ತರುಸಿ]
nice one…
[ಉತ್ತರುಸಿ]
ಭಾರಿ ಲಾಯಕ ಆಯಿದು ರಘು anno !! ಇಷ್ಟೆಲ್ಲಾ ಬರದ್ದದರ ಓದಿಯಾದರೂ ನಮ್ಮ ರಾಜಕೀಯದವು ಸರಿಯಾಗಲಿ ಹೇಳಿ ಕಾಣ್ತು!!!!!!!!!!!
[ಉತ್ತರುಸಿ]
ಹೊತ್ತುವೇಳೆ: 29 September,2010ರ 9:57 AM ಗೆ. (ಒಪ್ಪಸಂಕೊಲೆ)
ರಾಜಾರಾಮ, ಮಂಗಳೂರು ನಿನಗೆ ಇನ್ನೂ ನೆಂಪು ಇದ್ದೊ ? ಎನ್ನ ಗೊಂತಾತಾಯ್ಕು ಅಲ್ಲದೊ ? ನಿನ್ನ ಒಪ್ಪಂಗಳ ನೋಡುವಗ, ನಿನಗೂ ಒಳ್ಳೆ ಲೇಖನ ಬರವ ಕೆಪಾಟಿಟಿ (!) ಇದ್ದು ಹೇಳಿ ಕಾಣ್ತು. ಬರೆ ಮಾರಾಯ.
[ಉತ್ತರುಸಿ]
ಹವ್ಯಕ ಪ್ರಾಸ ಬ್ರಹ್ಮ !
ಲಾಯ್ಕ ಆಯ್ದು
[ಉತ್ತರುಸಿ]
ಹೊತ್ತುವೇಳೆ: 29 September,2010ರ 10:06 AM ಗೆ. (ಒಪ್ಪಸಂಕೊಲೆ)
ಹೊಸ ಡಿಗ್ರಿ ಸಿಕ್ಕಿದ ಕೊಶಿ,ಅದೂ ಚೆನ್ನಬೆಟ್ಟಣ್ಣ೦ದ .
ಆಟದ ಮರುಳಂಗೆ ಬ್ರಹ್ಮಪದವಿ…
[ಉತ್ತರುಸಿ]
ಆದಿ ಪ್ರಾಸ, ಅಂತ್ಯ ಪ್ರಾಸ, ಮಾತ್ರಗೊ, ಅಂತರಾಳದ ಅರ್ಥ, ವ್ಯಂಗ್ಯ, ತಮಾಷೆ ಎಲ್ಲ ಸೇರಿದ ಮುಳಿಯದಳಿಯನ ಕವನಂಗೊ ಭಾರೀ ಲಾಯಕಾಯಿದು. ರಾಜಕೀಯ ಪುಡಾರಿಗಳ ಎದುರು ಎಷ್ಟು ಒಳ್ಳೆಯ ಕವನ ಓದಿರೂ, ಅವರ ವ್ಯಂಗ್ಯ ಚಿತ್ರ ಬಿಡಿಸಿ ಅವರ ಮುಸುಡಿಂಗೆ ಹಿಡುದರೂ, ಗೋಣಂಗಳ ಎದುರು ಡೋಲು ಬಡುದ ಹಾಂಗಕ್ಕಷ್ಟೆ.
[ಉತ್ತರುಸಿ]
ಹೊತ್ತುವೇಳೆ: 29 September,2010ರ 10:16 AM ಗೆ. (ಒಪ್ಪಸಂಕೊಲೆ)
ಮಾವ,ಭಾರಿ ಸೂಕ್ಷ್ಮಲ್ಲಿ ನೋಡೊದು ಗೊಂತಾತು.ಎರಡೂ ಪ್ರಾಸ ಹೊಂದುಸೊದು ರಜ ಪ್ರಯಾಸವೇ!! ನಿಂಗಳ ಒಪ್ಪ ನೋಡಿ ಬರವಲೆ ಉತ್ಸಾಹ ಬತ್ತಾ ಇದ್ದು.
[ಉತ್ತರುಸಿ]
ರಘು ಅಣ್ಣಂದು ಚಿಂತನೆಗೆ ಚೈತನ್ಯ ನೀಡುವಂಥಾ, ಆಹ್ಲಾದಕಾರಿ ಲೇಖನಂಗೋ, ಪದ್ಯಂಗೋ
ಈ `ಚಿಂತನ-ಚೈತನ್ಯ’ ಹೀಂಗೇ ವರ್ಧಿಸಲಿ!!
[ಉತ್ತರುಸಿ]
ಅ೦ತೂ ರಘು ಭಾವ ಪ್ರತಿಕ್ರಿಯಗೊ ಒಳ್ಳೆದಾಗಿ ಬಯಿ೦ದು.ನೀನೇ ಹೇಳಿದ ಹಾ೦ಗೆ ರಜ ಕೆಸರಾದರು ಇಳಿಯಲಿ ಹೇಳಿ ಪ್ರಾರ್ಥನೆ ಮಾಡುವೊ೦.ಗೋಪಾಲ ಮಾವ೦ಹೇಳಿದ ಹಾ೦ಗೆ ಗೋಣನ ಮು೦ದೆ ಕಿ೦ದರಿ ಬಾರ್ಸಿದ ಹಾ೦ಗಪ್ಪಲಾಗದ.ಹೆ೦ಗಿದ್ದರೂ ನಾವು ಆಶಾವಾದಿಗೊ ಅಪ್ಪೊ೦ ಆಗದೊ.ಆದರ್ಶ ಹೇಳಿದ ಹಾ೦ಗೆ ಆರಾದರು ಈಕವನವ ಅನುವಾದ ಮಾಡಿ ಈ ರಾಜಕೀಯದವರ ಮುಸುಡಿ೦ಗೆ ಹಿಡುದರೆ ಅಕ್ಕೋ ಏನೊ.ಇರಳಿ ಒಪ್ಪ೦ಗಳೊಟ್ಟಿ೦ಗೆ ಮುಗುಶುತ್ತೆ.
[ಉತ್ತರುಸಿ]
ಮುಳಿಯಭಾವಾ…
ಐದರಲ್ಲಿ ಐದುದೇ ಲಾಯಿಕಾಯಿದು.
ಪ್ರಸ್ತುತ ಸಮಸ್ಯೆಗೆ ಕೈಕನ್ನಾಟಿ ಹಿಡುದ ಹಾಂಗಾಯಿದಡ, ಪೆರ್ಲದಣ್ಣ ಹೇಳಿಗೊಂಡಿತ್ತಿದ್ದ..
ಇನ್ನುದೇ ಹೀಂಗಿರ್ತದು ಬರಳಿ…
[ಉತ್ತರುಸಿ]
ಮುಳಿಯ ಭಾವನ ಭೂತಕನ್ನಡಿಯ ಸತ್ಯ ದರ್ಶನ !
ಆತು ಬೈಲಿಲಿ ನಮ್ಮ (ಕ)ಮಂತ್ರಿಗಳ ಸತ್ಯ ನರ್ತನ!!
ಮಂತ್ರಿಗೋ ಕುತಂತ್ರ ಮಾಡುದರ ಕಂಡು ಮಾಧ್ಯಮಲ್ಲಿ.
ತೋರ್ಸಿತ್ತು ಹಾಸ್ಯಲ್ಲಿ ರಘುಭಾವನ ಭೂತಕನ್ನಡಿ ನಮ್ಮ ಬೈಲಿಲಿ….
ಮುಳಿಯ ಭಾವ.., ಲಾಯ್ಕಾಯಿದು… ನಿಂಗಳ ಭೂತಕನ್ನಡಿಗೆ ಈ ಮಂತ್ರಿಗಳ ಕೆಲಸಂದಾಗಿ ಪುರುಸೊತ್ತೇ ಇರ ಅಪ್ಪೋ? ಪಾಪ!!!
ಇನ್ನುದೇ ಬರಲಿ ಭೂತಕನ್ನಡಿಯ ಸತ್ಯಂಗ…
[ಉತ್ತರುಸಿ]