ಬರದೋರು :   ಬಾಲಣ್ಣ (ಬಾಲಮಧುರಕಾನನ)    on   28/08/2014    8 ಒಪ್ಪಂಗೊ

ಬಾಲಣ್ಣ (ಬಾಲಮಧುರಕಾನನ)
Latest posts by ಬಾಲಣ್ಣ (ಬಾಲಮಧುರಕಾನನ) (see all)
ಗೆಣಪ್ಪನ     ಕಥೆ  ಮಧೂರು ಮಹಾಗಣಪತಿ

ಶ್ರೀ ಮಧೂರ ಗೆಣಪ್ಪಂಗೆಅಡ್ಡಬಿದ್ದು
ಬರವ ಕಥೆ ಇದು ಭಾರಿ ಸ್ವಾರಸ್ಯ ಇದ್ದು
ಅವನದ್ದೆ ಕಥೆ ಹೇಳ್ಲೆ ಹೆರಟೆ  ಇಂದು
ಕೇಳೆಕ್ಕು ನಿಂಗೊ ಕೆಮಿಕೊಟ್ಟು  ನಿಂದು   /೧/

ಒಂದಾರಿ ಚೌತಿ ದಿನ  ಪ್ರತಿ ಸರ್ತಿ  ಹಾಂಗೇ
ಗಣಪಯ್ಯ  ಹೆರಟಾಡ  ಮನೆಂದ   ಮನಗೆ
ಅಲ್ಲಿ  ಮಾಡುವ   ಪೂಜೆ   ಸ್ವೀಕಾರ ಮಾಡಿ
ಮುಂದಾಣ  ಮನೆ ಹೊಡೆಂಗೆ  ಬಿಟ್ಟಾಡ ಗಾಡಿ  /೨/

 ಚೌತಿ  ದಿನ ಪ್ರತಿ ಮನೆಲು ಭಾರಿ ಗಮ್ಮತ್ತು 
ಪೂಜೆಯೋ ಹೋಮವೋ  ಎಲ್ಲ  ಮಾಡುತ್ತು
ಹೋಮದಾ  ಹೊಗೆ ಎಲ್ಲ ಮನೆಲು ಏಳುತ್ತು
ಭಟ್ರ  ಮಂತ್ರವೊ   ಅದ  ದೂರಂಗೆ   ಕೇಳುತ್ತು  /೩/

 ಗೆಣಪಯ್ಯ ಮನೆಮನೆಗೆ ಹೊಕ್ಕು  ಹೆರಟ
ಸಣ್ಣ ಅಲ್ಲದೋ ಮಾಣಿ ಹೊಟ್ಟೆ ಹದ ಮರದ 
ನೈವೇದ್ಯ ಮಾಡಿದವು ಪಚ್ಚಪ್ಪಪಾಯಸ
ತಿಂದ ಇವ ಎಲ್ಲದರತುಂಬ ಆಯಾಸ   /೪/

 ಸುಟ್ಟವಿನ  ತಿಂದ  ಅದ ಹೊಟ್ಟೆ ತುಂಬಾ  
ಮತ್ತದಾ  ಪಚ್ಚಪ್ಪ ಅದರ   ಬಿಡ್ಲೆಡಿಗಾ
ಪಂಚ   ಕಜ್ಜಾಯವೋ ಅವಂಗೆ   ಬೇಕದುವೂ
ಪಾಯಸವ  ಸುರುದುಂಡ ಉಸಿಲು ಬಿಡ್ಲೆಡಿಯ   /೫/

ಎಲ್ಲ  ದಿಕ್ಕಿಲು  ಹೀಂಗೆ  ರೆಜ್ಜ  ರೆಜ   ತಿಂದುಂಡ
ಗೆಣಪತಿಯ  ಸಮತೂಕ   ತಪ್ಪಿತ್ತಡ
ನೆಡವಲೂ  ಎಡಿಯಡ  ಕೂಪಲೂ  ಎಡಿಯಡ
ಒಂದೆಸಮ  ಸೇಂಕು ಬಿಡಲೇ   ಸುರುಮಾಡಿದಡ /೬/

ಮನಗೆ  ಬಪ್ಪಾ   ದಾರಿ   ಗೆದ್ದೆ  ಹುಣಿಲಲ್ಲದೋ
ಸೇಡಿಮಣ್ಣಿನ  ದಾರಿ ಜಾರಿ  ಹೊಟ್ಟುತ್ತು
ಎಲಿಮೇಗೆ ಕೂದಂಡು  ಅತ್ತಿತ್ತೆ  ವಾಲಿಂಡು
ಹೆರಟದಾ  ಗೆಣಪತಿ  ಕತ್ತಲಾದತ್ತು   /೭/

ಹಕ್ಕಿ  ಗೂಡಿಂಗಾಗಿ  ಹೋದವದ  ಓಡೋಡಿ
ಕೆಂಬಾನ  ಹೊಳೆ  ಹೊಳೆವ  ಬಣ್ಣ  ಮುಗಿಲು
ಕಪ್ಪು  ಮರ   ಕರಿ ಕಲ್ಲು  ದಾರಿ  ಕಾಣುತ್ತಿಲ್ಲೆ
ಪಡು  ಹೊಡೆಲಿ ನೋಡು  ಹೊಳೆ ಹೊಳೆವ  ಕಡಲು  /೮/

ಕತ್ತಲಾತು  ಹೇಳಿ  ಎಲಿರಾಯ  ಓಡಿದ
ಗೆದ್ದೆ  ಹುಣಿ  ದಾರಿ ಅದ ಜಾರಿ  ಹೋತು
ಗೆದ್ದೆ  ಕಿರಿಂಚಿಲಿ ಬಿದ್ದು  ಕಾಲು ಕೈ ಹುಗುದತ್ತು
ಪಟ್ಟೆ ವಸ್ತ್ರವೋ  ಎಲ್ಲ ಕೊಳಕ್ಕಾಗಿ ಹೋತು  /೯/

ಇಸ್ಟೆಲ್ಲ  ಆದ್ದದರ  ನೋಡಿದವ  ಇತ್ತಿದ್ದ
ಚಂದಮಾಮ  ಹೇಳಿ ಅವನ  ಹೆಸರು
ಜಾರಿ ಬಿದ್ದದು ನೋಡಿ  ನೆಗೆ ತಡವಲೆಡಿಯದ್ದೆ
ಹಲ್ಲು  ಬಿಟ್ಟವ ನೋಡಿ ಮೈ ಕೈಯ ಕೆಸರು/೧೦/

ಜಾರಿ  ಬಿದ್ದಾ  ಬೇನೆ ಆರುದೇ ನೋಡದ್ರೆ
ತನ್ನಷ್ಟಕ್ಕೆ ಕಮ್ಮಿ ಆವುತ್ತ ಹಾಂಗೆ
ಎಲ್ಲರೆದುರೇ  ಬಿದ್ದು  ಕೈ  ಕಾಲು ಜೆರುದಿದ್ರೆ
ಕೆಸರೆಲ್ಲ   ಮೆತ್ತಿದರೆ  ಹೋಪದೇಂಗೆ  ?/೧೧/

ಚಂದ್ರ  ನೆಗೆ ಮಾಡಿದ್ದದರ ನೋಡಿ  ಸುಮ್ಮನೆ ಕೂಪ
ಜೆನ ನಮ್ಮ ಗೆಣಪ್ಪನೋ  ಹೇಳಿ  ನೋಡೊ
ಕೋಪ   ಧರ್ಸಿತ್ತಡ ಮೋರೆ  ಕೆಂಪಾತಡ
ಸೊಂಡಿಲಿನ   ಅತ್ತಿತ್ತೆ  ಬೀಸಿದಾಡ   /೧೨/

ಗೆದ್ದೆ  ಕೆಸರಿನ  ಮಣ್ಣು  ಬಾಚಿ  ಇಡ್ಕಿದ  ಮೇಗೆ
ಚಂದ್ರನಾ  ಮೋರೆಗೆ  ಬಿದ್ದತ್ತಡ
ಗೆಣಪ  ಇಡ್ಕಿದ  ಕೆಸರು  ಸರಿಯಾಗಿ  ಮೆತ್ತಿತ್ತು
ಅದು  ಎಂದು  ಮಾಸದ್ದ   ಕಲೆ  ಆತಡ /೧೩/

 ~~~***~~~~

 ಫೋಟೋ : ಇಂಟರ್ನೆಟ್ ಕೃಪೆ

8 thoughts on “ಗೆಣಪ್ಪನ ಕಥೆ

  1. ಮಾವಾ.. ನಿ೦ಗಳ ಈಗಾಣ ರಚನಾಶೈಲಿಗೆ ಹೋಲುಸಿದರೆ ಹಾ೦ಗೆ ಹೇಳುಲಕ್ಕು.
    ಅದು ಬಿಟ್ರೆ ಪಾಕ ಹದಾ ಆಯಿದು..

  2. ಮುಳಿಯದಣ್ಣ, ಅಂದೊಂದು ದಿನ ಮನೆ ಅಟ್ಟಲ್ಲಿ ಕೂದೊಂಡು ಹಳೆ ಕಂತೆ ಬಿಚ್ಚಿಯಪ್ಪಾಗ ಈ ಪದ್ಯ ಸಿಕ್ಕಿತ್ತದಾ…ಸುಮಾರು ೧೯೮೦ರ ಆಸುಪಾಸು ಆಗಿಕ್ಕು. ಹಳೆ ಕಾಕತಲ್ಲಿ ಇತ್ತು . ‘ಪಾಕ’ ಎಳಮ್ಮೆ ಆತೋ?

  3. ಚೌತಿ ಹಬ್ಬದ ಗೌಜಿ ಕಳುದು ದಿನ ಕೆಲವಾತು
    ಪುರುಸೊತ್ತಿಲೀ ಪದ್ಯ ಓದುಲೆಡಿಗಾತು
    ಸೀವು ಮೋದಕ ಕಡುಬು ತಿ೦ದ ರುಚಿ ಮನಸಿ೦ಗೆ
    ಮಾವ ರೂಪಕ ಬರದ ಪಾಕ ಹೇ೦ಗೇ?

  4. ಗೆಣಪ್ಪ ಚಾಮಿಯ ಕಥೆ ಹವ್ಯಕ ಪದ್ಯ ರೂಪಲ್ಲಿ ಚೆಂದಕೆ ಬಯಿಂದು. ಚೌತಿ ದಿನ ಚಂದ್ರನ ನೋಡಿರೆ ಅಪವಾದ ಬತ್ತು ಹೇಳುವ ವಿಷಯವುದೆ ಇದ್ದು. ಈ ಸರ್ತಿ ಚೌತಿ ದಿನ ಮುಗಿಲು ಇದ್ದ ಕಾರಣ, ಆರಿಂಗು ಅಪವಾದ ಬಾರ ಅಲ್ಲದೊ ?

    1. ಚೌತಿ ದಿನ ಆರಾರು ನಿನ್ನ ನೋಡಿದವಕ್ಕೆ
      ಕಳ್ಳ ಹೇಳುವ ಅಪವಾದ ಬಕ್ಕು /
      ಹೀಂಗೆ ಶಾಪವ ಕೊಟ್ಟ ನಮ್ಮ ಗೆಣಪತಿ ಅವಂಗೆ ,
      ಕೈ ಮುಗಿದ ” ಗಣಪಯ್ಯ ನೀನೆ ದಿಕ್ಕು ” //

      ಮೊದಲು ಪೂಜೆಯ ಮಾಡಿ ಎನಗೆ ಕೈ ಮುಗುದವಕ್ಕೆ
      ಈ ಶಾಪ ಎಂದಿಂಗು ತಟ್ಟ ಹೇಳಿ
      ಕೈ ಹಿಡುದು ನೆಗ್ಗಿ ಕಳುಸಿದ ಅವನ ವಾಪಾಸು
      ಇಲ್ಲಿಗೀ ಕತೆ ಮುಗುದತ್ತು ಹೇಳಿ //

      (ಗೋಪಾಲಣ್ಣ ಹೇಳಿದ್ದು ಸರಿ .ಹಾಂಗೆ ಈ ಎರಡು ನುಡಿ ಸೇರಿಸ್ಯೊಂಡು ಓದೆಕ್ಕು ಹೇಳಿ ಕೇಳಿಯೊಳುತ್ತೆ )

  5. ಕಥೆಪದ್ಯ ಭಾರೀ ಪಷ್ಟಾಯ್ದು. ಹರೇ ರಾಮ. ಚೌತಿ ಶುಭಾಶಯಂಗೊ

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×