Oppanna.com

ಕೇಚಣ್ಣನ ಬದರೀಯಾತ್ರೆ

ಬರದೋರು :   ಬಾಲಣ್ಣ (ಬಾಲಮಧುರಕಾನನ)    on   30/06/2013    5 ಒಪ್ಪಂಗೊ

ಬಾಲಣ್ಣ (ಬಾಲಮಧುರಕಾನನ)
Latest posts by ಬಾಲಣ್ಣ (ಬಾಲಮಧುರಕಾನನ) (see all)

ಕೇಚಣ್ಣನ  ಬದರೀಯಾತ್ರೆ

 

ಉತ್ತರಾಖಂಡದ
ಬದರೀ ಕೇದಾರಕ್ಕೆ
ಹೋಗಿತ್ತಿದ್ದೆ ಆನು ಕಳುದ ವಾರ |
ಗಂಗೋತ್ರಿ ಯಮುನೋತ್ರಿ
ರುದ್ರ ಪ್ರಯಾಗ ವ
ನೋಡೆಕ್ಕು ಹೇಳಿತ್ತು, ಎಂತ ಗ್ರಾಚಾರ ! |೧|

ಎಂತಾತೊ ಫಕ್ಕನೆ
ಕವಿದತ್ತು ಮಳೆಮೋಡ
ಸೊಯಿಪ್ಪಿತ್ತು ರಪರಪನೆ ಅಬ್ಬಬ್ಬ! ಶಿವನೆ |
ಕರಿಮುಗಿಲೊ!ಉರಿಕಡಲೊ !
ನೀರೊ!ನೀರೇ ನೀರು
ಹನಿಕಡಿಯ ಹೊಯಿದತ್ತು , ಒಂದೇಸಮನೆ |೨|

ಬೆಟ್ಟ ಗುಡ್ದೆಲಿ ಎಲ್ಲು
ಗಂಗೆ ಯಮುನೆಯರೆಲ್ಲ
ತುಂಬುನದಿ ಸಕಲವನು ನುಂಗಿ ಹಾಕಿ |
ಎಷ್ಟೋ ಗುಡ್ಡೆಗೊ ಜೆರುದು
ಪಾತಾಳ ಕಂಡತ್ತು
ಬದರೀ ನಾಥನ ಗುಡಿಯು ಮಾಂತ್ರ ಬಾಕಿ |೩|

ಅಂಗಡಿ ಮುಂಗಟ್ಟು
ಆತೆಲ್ಲ ಸಮತಟ್ಟು
ಗುಡ್ಡೆ ಕರೆಯ ಮಾರ್ಗ ಜೆರುದು ಹೋತು।
ಎಷ್ಟೊ ಮಾನವ ಜೀವ
ಹುಚ್ಚು ಹೊಳೆ ನೀರಿಲ್ಲಿ
ಕೊಚ್ಚಿ ಹೋತು ದೇವ ಪಾದ ಸೇರಿತ್ತು |೪|

ಅಂತು ಗೊಂತಿಲ್ಲದ್ದ
ಊರಲ್ಲೆಲ್ಲೋ ನಾವು
ಸಿಕ್ಕಿ ಬಿದ್ದತ್ತನ್ನೇ ಹೇಳಿ ಕಂಡತ್ತು।
ನಿಂಬಲೂ ಕೂಪಲೂ
ಎಡಿಯದ್ದ ಹಾಂಗಾತು
ಬದುಕ್ಕಿ ಒಳಿವ ಆಶೆ ಕಡುದೇ ಹೋತು |೫|

ಅದ! ಅಲ್ಲಿ ಬಾನಲ್ಲಿ
ಬಂತು’ ಲೋಹದ ಹಕ್ಕಿ’
ನಮ್ಮ’ ಸೈನ್ಯದ ಮಕ್ಕೊ’ಇದ್ದವದರಲ್ಲಿ |
ಇನ್ನೆಂತ ಹೆದರಿಕೆ ?
ಬದುಕಿದೆಯೊ ಬಡಜೀವ
ಹತ್ತುಸಿದವೆನ್ನನ್ನು ನೆಗ್ಗಿ ಅದರಲ್ಲಿ |೬|

ಹಾರಿಂಡು ಬಪ್ಪಾಗ
ಎಂತಾತೊ?ಹೇಂಗಾತೊ?
ದಡುಬುಡುನೆ ಬಿದ್ದಾಂಗೆ ಶಬ್ದ ಕೇಳಿತ್ತು |
ಎಲ್ಲಿ ಬದರಿನಾಥ !
ಮಂಚಂದ ಬಿದ್ದದು
ಕಣ್ಬಿಟ್ಟು ನೋಡಿದೆ  ಎಚ್ಚರಾತು!  |೭|

(ಭೀಕರವಾದ ದುರಂತ ಮನಸ್ಸಿಡಿ ತುಂಬಿ0ಡಿತ್ತು . ನಮ್ಮ ಸೈನ್ಯದ ಜವ್ವನಿಗರ ಸಾಹಸ ,ಧೈರ್ಯಕ್ಕೆ ಕೈ ಮುಗುದು ಈ ಶುದ್ದಿ ಹೇಳಿದ್ದೆ.)

 ~~~~***~~~

5 thoughts on “ಕೇಚಣ್ಣನ ಬದರೀಯಾತ್ರೆ

  1. ಯಾವ ಆಡಂಬರವೂ ಇಲ್ಲದ್ದೆ ಇಷ್ಟೂ ಸರಳವಾದ ಪದಪ್ರಯೋಗಲ್ಲಿ , ಆದರೆ ಪ್ರೌಢವಾದ ಕವನಂಗಳ ನಿಂಗೊ ಹೇಂಗೆ ಬರೆತ್ತಿ ಬಾಲಣ್ಣ ! ಆಹಾ! ಮನಸ್ಸಿಂಗಾದ ಕೊಶಿಯ ವಿವರುಸುಲೆ ಅರಡಿತ್ತಿಲ್ಲೆ- ನಿಂಗಳ ಸಾಮರ್ಥ್ಯಕ್ಕೆ ಅಡ್ಡಬಿದ್ದೆ .

  2. ಲಾಯ್ಕಾಯಿದು.ಅಭಿನಂದನೆಗೊ

  3. ಸರಳ ಪದಪ್ರಯೋಗದ ಮೂಲಕ ಈ ಬಾಲಣ್ಣ ಅದೇಂಗೆ ಇಷ್ಟು ಲಾಯಕಕ್ಕೆ ಪದ್ಯ ಬರತ್ತ ಇದ್ದವು ಹೇದು ಎರಡು ಮೂರು ಸರ್ತಿ ಪದ್ಯವ ನೋಡಿಗೊಂಡೇ ಬಾಕಿ ಆನು ಈ ಸರ್ತಿ. ಉಹುಮ್ಮ್ಮ್ಮ್… , ಕೆಲವೇ ಜೆನರಿಂಗೆ ಒಲಿವದು ಹೀಂಗಿರ್ಸೆಲ್ಲ ಖಂಡಿತ.

    ಬಾಲಣ್ಣನ ಪ್ರತಿಪದ್ಯಂಗಳೂ ವಿಶೇಷ ಗಮನ ಸೆಳಕ್ಕೊಂಡಿದ್ದು ಹೇದು ಹೇಳಿತ್ತು – ‘ಚೆನ್ನೈವಾಣಿ’

  4. ಈ ಕನಸು ಕನಸಾಗಿಯೇ ಒಳಿಯೆಕ್ಕಾತು, ಅಲ್ಲದೋ ಬಾಲಣ್ಣ.
    ಲಾಯಿಕ್ಕಾಯಿದು, ಅಭಿನಂದನೆಗೊ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×