ಸಣ್ಣಸಂಕೊಲೆ(shortlink):
ವೈಶಾಖ ಕಳುತ್ತು, ಮಳೆಯ ಅಟ್ಟಣೆ ಆತು.
ಬೈಲಿಲಿ ಹೊಸ ಸ೦ಚಲನ ಶುರು ಆಗದ್ದೆ ಇಕ್ಕೊ?
ರಚನೆ: ಮುಳಿಯ ಭಾವ
ಗಾಯನ: ಹೊಸಬೆಟ್ಟು ಶ್ರೀಶಣ್ಣ
ಹೋರಿ ದನಕ೦ಜಿಗಳ ಬೆನ್ನಿಲಿ
ಹಾರಿ ಕೂರುವ ಹಕ್ಕಿಗಳ ಬಾ
ಯಾರಿ ದೊ೦ಡೆಲಿ ಸೊರವೆ ಹೆರಡದ್ದಿಪ್ಪ ಸಮಯಲ್ಲಿ|
ಆರು ತಿ೦ಗಳ ಬೆಶಿಲ ಬೇಗೆಗೆ
ಆರಿ ಹೋಯಿದು ತೋಟಕೆರೆ ಕಾ
ವೇರಿ ಅಡಕೆಯ ಕೊಬೆಗೊ ಕೆ೦ಪಾತನ್ನೆ ಭಾವಯ್ಯ||
ಬೊಡುದು ಆಕಾಶವನೆ ನೋಡಿರೆ
ಪಡುಹೊಡೆಲಿ ಕರಿಮುಗಿಲು ಎದ್ದಿದು
ಗುಡುಗು ಸೆಡಿಲಿನ ಆಟ ರ೦ಗಸ್ಥಳಕೆ ಹೆರಟತ್ತು|
ನೆಡವ ನೆಲ ತ೦ಪಾಗಿ ತೆ೦ಗಿನ
ಮಡಲು ಗಾಳಿಗೆ ಬೀಸಿ ಮನಸಿನ
ಜಡತೆ ದೂರಕೆ ಹೋಪ ಲಕ್ಷಣವಿದ್ದು ಭಾವಯ್ಯ||
ಜಾಲಿಲಡಕೆಯು ಒಣಗಿ ಕೈಲಿಯೆ
ಚೋಲಿ ಸೊಲಿವಾ೦ಗಾತು ಹೆಡಗೆಯ
ಮೇಲೆ ಕೈಪುಳುಯೆಳದು ಪತ್ತಾಯಕ್ಕೆ ತು೦ಬುಸುವ°|
ಕಾಲು ಹಾಕೊಗ ಜಾರಿಬಿದ್ದರೆ
ಸೋಲುಗಿದ ಜಾಗ್ರತೆಗೆ ಈ ಮಳೆ
ಗಾಲ ಸೋಗೆಲಿ ನೆಲವ ಮುಚ್ಚೆಕ್ಕಷ್ಟೆ ಭಾವಯ್ಯ||
ಮೂಡ ಉಗ್ರಾಣಲ್ಲಿ ಮೂಲೆಯ
ಓಡು ಒಡದಿತ್ತನ್ನೆ ಬಾ ಸರಿ
ಮಾಡಿ ಬಿಟ್ಟರೆ ನೀರು ಸೋರುವ ತಲೆಬೆಶಿಯೆ ಇಲ್ಲೆ|
ತೋಡಕಣಿ ಕೆರಸಿದರೆ ಮಳೆ ನೀ
ರೋಡಿ ಹೊಳೆ ಸೇರುಗದ ಎತ್ತಿನ
ಗಾಡಿ ಹೋಪಗ ಹುಗಿಯ ಮಾರ್ಗವು ಕೇಳು ಭಾವಯ್ಯ||
ಗೆದ್ದೆ ಹೂಡುವವಕ್ಕೆ ಚಾ ಮಡು
ಗದ್ದರಿನ್ನವು ಬಕ್ಕೊ? ಊಟ
ಕ್ಕಿದ್ದವಾಳುಗೊ ಎ೦ಟು ಜೆನ ಸೊಳೆಬೆ೦ದಿ ಸಾಕಕ್ಕೊ?|
ಬಿದ್ದ ತೆ೦ಗಿನಕಾಯಿಗಳ ಹೆ
ರ್ಕಿದ್ದು ಜಡಿಮಳೆ ಬಪ್ಪ ಮದಲೇ
ಮದ್ದು ಬಿಡುಲಾರಿದ್ದವೋ ನೋಡೆಕ್ಕು ಭಾವಯ್ಯ||
~*~*~
( ಮಳೆಗಾಲಲ್ಲಿ ಕೆಲಸ ಇನ್ನೂ ಸುಮಾರು ಇದ್ದು ಭಾವ,ಹೇಳ್ತೆ ಬೇಗಲ್ಲಿ..)
ಗಾಯನ: ಶ್ರೀಶ ಹೊಸಬೆಟ್ಟು
Malegala Varnane (Bhamini): Shreesha Hosabettu
ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ ಮುಳಿಯ ಭಾವ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.
ವಾಹ್ ವಾಹ್… ಮುಳಿಯಭಾವನ ಭಾಮಿನಿ ಷಟ್ಪದಿ – ಶ್ರೀಶಣ್ಣನ ಜಂಟಿ ಒಳ್ಳೆ ಚೇರ್ಚೆ ಆಯ್ದು. ಸೊಗಸಾಗಿ ಮೂಡಿಬೈಂದು. ಅಭಿನಂದನೆಗೊ ಇಬ್ರಿಂಗು.
(ಮಳೆಗಾಲಲ್ಲಿ ಕೆಲಸ ಇನ್ನೂ ಸುಮಾರು ಇದ್ದು ಭಾವ,ಹೇಳ್ತೆ ಬೇಗಲ್ಲಿ..) – ಇದು ಕೊಶಿ ಆತು ಹೇಳಿ – ‘ಚೆನ್ನೈವಾಣಿ’
[ಉತ್ತರುಸಿ]
ಮಳೆಕಾಲಕ್ಕಿಪ್ಪ ತಯಾರಿ ಭಾಮಿನಿಲಿ ಚೆಂದಕೆ ಬಯಿಂದು. ಮುಳಿಯ ಭಾವನ ಸಾಹಿತ್ಯವ ಸೊಗಸಾಗಿ ಎನ್ನಷ್ಟಕ್ಕೇ ಮನಸ್ಸಿಲ್ಲೇ ಓದಿದೆ. ಶ್ರೀಶಣ್ಣನ ಸ್ವರಲ್ಲಿ ಮನಗೆ ಹೋಗಿ ಕೇಳೆಕಷ್ಡ್ಟೆ. ಖಂಡಿತಾ ಚೆಂದಕೆ ಬಂದಿಕ್ಕು.
ಪಡು ಹೊಡೆಲಿ ಕರಿಮುಗಿಲು ಎದ್ದದು ಕಾಂಬಗ ಗಡಿಬಿಡಿಲಿ ನೆಲ್ಲಿಕ್ಕೋರಿ, ಮಣೆ ಹಿಡುದು ಜಾಲಿಲ್ಲಿಪ್ಪ ಅಡಕ್ಕೆಯ ಬಾಚಿದ್ದು ನೆಂಪಾತು. ಏವತ್ರಾಣ ಹಾಂಗೆ ಒನ್ನಾಂ ಗ್ರೇಡು. ಧನ್ಯವಾದಂಗೊ. ಶ್ರೀಶಣ್ಣನ ಸಂಗೀತವ ಮನಗೆ ಹೋಗಿ ದೊಡ್ಡಕೆ ಕೇಳೆಕು . . . ಅಂಬಗಳೇ ಅದರ ರುಚಿ, ಎಂತ ಹೇಳ್ತಿ ?
[ಉತ್ತರುಸಿ]
ಹೊತ್ತುವೇಳೆ: 4 July,2012ರ 12:24 PM ಗೆ. (ಒಪ್ಪಸಂಕೊಲೆ)
ಶ್ರೀಶಣ್ಣನ ಪದ ಹೇ೦ಗಾಯಿದು ಭಾವ?
[ಉತ್ತರುಸಿ]
ಹೊತ್ತುವೇಳೆ: 4 July,2012ರ 1:26 PM ಗೆ. (ಒಪ್ಪಸಂಕೊಲೆ)
ಓ, ಸೂಪರ್. ಅದರಲ್ಲಿ ಎರಡು ಮಾತಿಲ್ಲೆ. ಅದೇ ದಿನ ಕೇಳಿದ್ದೆ, ಪುನಃ ಒಪ್ಪ ಕೊಡ್ಳೆ ಬಾಕಿ ಆತು. ಅಂದು ಶ್ರೀಶಣ್ಣ ಹಾಡಿದ ಸೋಬಾನೆ ಇನ್ನುದೆ ಕೆಮಿಲಿ ತಿರುಗುತ್ತಾ ಇದ್ದು. ಇದರ ಗಮಕ ಶೈಲಿಲಿಯುದೆ ಪ್ರಯತ್ನ ಮಾಡ್ಳಕ್ಕು. ನಿಂಗಳಿಬ್ಬರ ಜೋಡಿ ಬೈಲಿನ ರಂಜಿಸುತ್ತಾ ಇರಳಿ.
[ಉತ್ತರುಸಿ]
ಮಳೆಗಾಲದ ನಿರೀಕ್ಷೆ, ಮುಗಿಲು ಕಂಡಪ್ಪಗ ಜಾಲಿಂದ ಅಡಕ್ಕೆ ಒಳ ಹಾಕುತ್ತ ಗೌಜಿ, ಮೂಲೆ ಓಡು ಸರಿ ಮಾಡುವ ಆತುರ, ಇದೆಲ್ಲವೂ ಒಂದು ಹವ್ಯಕ ಮನೆಯ ವಾತಾವರಣವ ಚೆಂದಕೆ ಪ್ರತಿಬಿಂಬಿಸಿದ್ದು.
[ಉತ್ತರುಸಿ]
ಹೊತ್ತುವೇಳೆ: 4 July,2012ರ 12:24 PM ಗೆ. (ಒಪ್ಪಸಂಕೊಲೆ)
ಧನ್ಯವಾದ ಅಪ್ಪಚ್ಚಿ.
[ಉತ್ತರುಸಿ]
ಐದು ಸರ್ತಿ ಕೇಳಿ ಆತು ಭಾವ. ರಚನೆಯೂ, ಗಾಯನವೂ ಭಾರೀ ಲಾಯಕ ಆಯ್ದು, ಮತ್ತೂ ಮತ್ತೂ ಅಸ್ವಾದಿಸುವ ಹಾಂಗೆ ಬಯಿಂದು ಹೇಳಿ ಇನ್ನೊಂದರಿ – ‘ಚೆನ್ನೈವಾಣಿ’
[ಉತ್ತರುಸಿ]
ಮುಳಿಯಭಾವನ ಚಿನ್ನದ ಕಾವ್ಯಕ್ಕೆ ಶ್ರೀಶಣ್ಣನ ಕಂಚಿನ ಕಂಠ ಹೊಸ ಮೆರುಗು ಕೊಟ್ಟತ್ತು.
[ಉತ್ತರುಸಿ]
ಹೊತ್ತುವೇಳೆ: 4 July,2012ರ 12:22 PM ಗೆ. (ಒಪ್ಪಸಂಕೊಲೆ)
ಮಹೇಶಾ,
ರನ್ನ ಕೂದಲ ಮುಳಿಯಭಾವನ
ಚಿನ್ನದಕ್ಷರ ಭಾಮಿನಿಗೆ ಶ್ರೀ
ಶಣ್ಣ ಕ೦ಚಿನ ಕ೦ಠ ಸೇರ್ಸಿರೆ ಹಾಲು ಜೇನಕ್ಕೊ?
[ಉತ್ತರುಸಿ]
ಪುನಃ ಪುನಃ ಕೇಳುವಾಂಗೆ ಲಾಯಿಕಿದ್ದು..ರಚನೆ, ಸೊರ ಎರಡುದೇ
[ಉತ್ತರುಸಿ]
ಚೆಂದ ಆಯಿದು ಬರದ್ದು ಭಾವ.
[ಉತ್ತರುಸಿ]
ಭಾರೀ ಲಾಯ್ಕ ಆಯ್ದು ಭಾವ……
ರಚನೆ–ಗಾಯನ ಎರಡೂ ಪಷ್ಟಾಯ್ದು……..
[ಉತ್ತರುಸಿ]
ಬರದ್ದು,ಹಾಡಿದ್ದು ಎರಡೂ ತು೦ಬಾ ಲಾಯ್ಕಾಯಿದು..
[ಉತ್ತರುಸಿ]
ಓದಿ ಆತಷ್ಟೇ..
ಭಾರೀ ಅಪ್ಪ ಆಯಿದು. ಇನ್ನು ಮನೆಗೆ ಹೋಗಿ ಕೇಳ್ತೆ..
[ಉತ್ತರುಸಿ]
ಹೊತ್ತುವೇಳೆ: 4 July,2012ರ 12:25 PM ಗೆ. (ಒಪ್ಪಸಂಕೊಲೆ)
ಕೇಳಿ ಆತೊ ಮಾಣಿ?
[ಉತ್ತರುಸಿ]
ಹೊತ್ತುವೇಳೆ: 4 July,2012ರ 1:40 PM ಗೆ. (ಒಪ್ಪಸಂಕೊಲೆ)
ಶ್ರೀಶಣ್ಣ ಸೂಪರ್…
ರಚನೆ – ಗಾಯನ.. ಎರಡೂ A1
[ಉತ್ತರುಸಿ]
ಪಷ್ಟಾಯ್ದು ಭಾವಯ್ಯ..ಕೊನೆಯ ಸಾಲುಗ ಓದುವಗ ಎನ್ನ ಅಮ್ಮ, ಆಳುಗ ಇಪ್ಪಗ ಸೊಳೆಬೆ೦ದಿ ಸಾಕಕ್ಕೊ ಹೇಳಿ ಹೇಳಿದ್ದು ನೆಂಪಾತು..
[ಉತ್ತರುಸಿ]
ಮುಳಿಯ ಬಾವನ ಭಾಮಿನಿಯ ಕೋ-
ಗಿಲೆಯೆ ಹಾಡಿದ ಹಾಂಗೆ ಆಯಿದು
ತಳಿಯದ್ದೆ ಕೇಳಿದೆವೆಲ್ಲ ಒಟ್ಟಿಂಗೆ ಕೂದು ಕೆಮಿಗೊಟ್ಟು
ಮಳೆ ಬಪ್ಪ ಹೊತ್ತಿಂಗೆ ಎಲ್ಲೊರು
ಸೊಳೆ ಬಿಡುಸಿ ಉಪ್ಪಿಲಿ ಹಾಕಿ ಮಡು
ಗಲೆ ತುಂಬ ಕೊಶಿ ಮಳೆಗಾಲದಟ್ಟಣೆ ಹಾಡ ಕೇಳಿಂಡು
(ತುಂಬಾ ತಡವಾತು ಒಪ್ಪ ಕೊಡಲೆ ಬೇಜಾರಿಲ್ಲೆನ್ನೆ?)
[ಉತ್ತರುಸಿ]