Oppanna.com

ಯಾನದ ದಾರಿ ಸರಿಯಕ್ಕೊ?

ಬರದೋರು :   ಮುಳಿಯ ಭಾವ    on   18/01/2012    14 ಒಪ್ಪಂಗೊ

ಶ್ರೀ ಅಖಿಲ ಹವ್ಯಕ ಮಹಾಸಭಾ (ರಿ),ಬೆ೦ಗಳೂರು ,ಇವು ಇತ್ತೀಚೆಗೆ ನೆಡೆಶಿದ ಹವಿಗವನ ಸ್ಪರ್ಧೆಲಿ ದ್ವಿತೀಯ ಬಹುಮಾನ ಪಡದ ಈ ಕವಿತೆಯ, ಎನಗೆ ಬರವಣಿಗೆಗೆ ಸದಾ ಸ್ಪೂರ್ತಿ ಕೊಟ್ಟು ಪ್ರೋತ್ಸಾಹಿಸುವ ಬೈಲಿ೦ಗೆ,ಬೈಲಿನ ಎಲ್ಲಾ  ನೆ೦ಟ್ರಿ೦ಗೆ ಅರ್ಪಿಸುತ್ತೆ.

(ಕಗ್ಗ ಕ೦ಠಪಾಠಲ್ಲಿ  ಬಹುಮಾನ ಪಡದ ದೀಪಿಕಾ ಮತ್ತೆ ಚರ್ಚಾಸ್ಪರ್ಧೆಲಿ ಬಹುಮಾನ ಪಡದ ಚೈತು,ಇವರ ಒಟ್ಟಿ೦ಗೆ ವೇದಿಕೆಗೆ ಹತ್ತುವ ಅವಕಾಶ  ಎನಗೂ ಸಿಕ್ಕಿತ್ತು ಹೇಳುವ ಸ೦ತೋಷವನ್ನೂ ಹ೦ಚುತ್ತೆ.)

**********************************************************

ಭವ್ಯ ದೀಪಕರಾಗಿ ಬಾಳಿದ
ಹವ್ಯಕರ ನಡೆನುಡಿಲಿ ಪೇಟೆಯ
ನವ್ಯತೆಯ ಕಸ್ತಲೆಯು ಮುಸ್ಕೊದು ಕ೦ಡಿರಾ ನಿ೦ಗೊ?|
ದಿವ್ಯ ತೇಜದ ಆಸರೆಲಿ ಈ
ಅವ್ಯವಸ್ಥೆಯು ಮಸ್ಕಿ ನಾವ್ ಭವಿ
ತವ್ಯ ಉಜ್ವಲವಾಗಿ ಹೊಳೆವಾ ಗಳಿಗೆಗಳ ಕಾ೦ಗೊ ?||

ಥಳುಕು ಬಳುಕಿನ ನೆಡುಕೆ ಬಾಯಿಯ
ಹುಳುಕು ಹಲ್ಲುಗೊ ಕಾ೦ಬ ಹಾ೦ಗೆಯೆ
ಕೊಳಕು ಕಾಣದ್ದಿಕ್ಕೊ ಮನಸಿನ ದೀಪ ನ೦ದ್ಸಿದರೆ|
ಅಳುಕು ಇಲ್ಲದ್ದಿ೦ದು ಕೆಸರಿಲಿ
ಜಳಕ ಮಾಡೊಗ ಬಿಟ್ಟು ನಾಚಿಕೆ
ಹೊಳಗೆ ಹಾರಲಿ ಹೇಳಿ ಜಾನ್ಸಿರು ಮನಸು ಕೇಳುತ್ತೊ?||

ಹಿಪ್ಪಿಗಳ ತಲೆಕುಚ್ಚಿ ಕೂಸುಗೊ
ಕುಪ್ಪಿ ಬಗ್ಗುಸಿ ಕುಡಿವ ಮಾಣ್ಯ೦
ಗಪ್ಪಿ ಕೂಯಿದವಿ೦ದು ಪಾಪದ ಕೂಪದೊಳು ಮು೦ಗಿ|
ಚೆಪ್ಪುಡಿಯತನ ತು೦ಬಿ ಹರುದರೆ
ಒಪ್ಪುಗೋ ಕಾಣದ್ದ ದೇವರು
ಬೆಪ್ಪುತಕ್ಕಡಿಯಾಗಿ ಬದುಕುವ ಇ೦ತ ಸ೦ಸ್ಕೃತಿಯ||

ಆಚಮನ ಮಾಡದ್ದೆ ಪೂಜೆಯ
ಆಚರಣೆ ಮರದಾತು ಬುದ್ಧಿಗೆ
ಗೋಚರವು ಇಲ್ಲದ್ದೆ ಬಿಟ್ಟೆಯ° ಸ೦ಪ್ರದಾಯಗಳ|
ಸೂಚನೆಯ ಕೊಡಿ ನಿ೦ಗೊ ಹಿರಿಯರು
ನಾಚಿಕೆಯ ವಿಷಯವಿದು ಸರ್ವರು
ಯೋಚನೆಯ ಮಾಡದ್ದರಿನ್ನಿದು ಒಡದ ಹಾಲಕ್ಕು

ಮಾನವ೦ತಿಕೆ ಬಿಟ್ಟು ಕಾಡಿನ
ಆನೆಗಳ ತರ ಅಲೆಯುವಗ ಅನು
ಮಾನವಾವುತ್ತಿ೦ದು ತಡವಲೆ ಅ೦ಕುಶವು ಎಲ್ಲಿ?|
ಜ್ಞಾನಿಯಾಸರೆ ಸಿಕ್ಕಿ ಬಾಳಿನ
ಬಾನಿನುದ್ದಗಲಕ್ಕೆ ಕಸ್ತಲೆ
ದಾನವತ್ವವು ನಶಿಸಿ ಯಾನದ ದಾರಿ ಸರಿಯಕ್ಕೊ?||

ಮುಜುಡುತನ ಬಿಟ್ಟೆದ್ದು ಬದಲಿ೦
ಗುಜುರುವಿನ ತರ ಸಾಗಿ ಜೀವನ
ಮಜಲು ತು೦ಬಲಿ ಸಾರ ಸತ್ವದ ಶುದ್ಧ ಸುಧೆ ಹರುದು|
ವಿಜಯ ಸಿಕ್ಕಲಿ ಶುದ್ಧ ಮನಸಿ೦
ಗಜನ ರಾಣಿಯ ಕೃಪೆ ಇರಳಿ ಸಿರಿ
ಗಜಮುಖನ ರಕ್ಷಣೆಯು ಹವ್ಯಕರಿ೦ಗೆ ಇರಳಿ ಸದಾ||

**********************************************************

ಮುಳಿಯ ಭಾವ

14 thoughts on “ಯಾನದ ದಾರಿ ಸರಿಯಕ್ಕೊ?

  1. ರಘು ಭಾವ,
    ಯಾವತ್ರಾಣ ಹಾಂಗೆ ಚೆಂದದ, ಮನಸ್ಸಿಂಗೆ ತಟ್ಟುವ ಭಾಮಿನಿ!
    ಅಭಿನಂದನೆಗೋ ‘ಪ್ರತಿಬಿಂಬ’ ಸ್ಪರ್ಧೆಲಿ ಬಹುಮಾನ ಪಡದ್ದಕ್ಕೆ!

    ಹವ್ಯಕರ ಬಗ್ಗೆ, ಹಿಂದೆ ಇದ್ದ ವೈಭವದ ಬಗ್ಗೆ, ಈಗಾಣ ನಮ್ಮಸಮಾಜದ ಗತಿಯ ಬಗ್ಗೆ, ಮುಂದಾಣ ಆಶಯವನ್ನೂ ಕೂಡಾ ವ್ಯಕ್ತ ಪಡಿಸಿ ಬರದ್ದದು ತುಂಬಾ ಲಾಯ್ಕಾಯಿದು. ಇಷ್ಟು ಚೆಂದದ ನಿಂಗಳ ಕವನಕ್ಕೆ ಬೈಲಿನ ಲೆಕ್ಕಲ್ಲಿಯೂ ಕೂಡಾ ತುಂಬಾ ತುಂಬಾ ತುಂಬಾ ಒಪ್ಪಂಗೋ….

    ಭಾವ, ಮನಸ್ಸಿನ ಭಾವನೆಯ ಒಂದು ತಾಳ, ಮಾತ್ರೆಯ ಗತಿಲಿ ಬಂಧಿಸಿ ಬರವ ಕಲೆ ನಿಂಗಳಲ್ಲಿ ಇದ್ದು. ಎಂತ ಒಂದು ವಿಷಯ ಸಿಕ್ಕಿ ಅಪ್ಪಗ ನಿಂಗಳ ಅಂಬೇರ್ಪಿನ ಎಡಕ್ಕಿಲಿಯೂ ಕೂಡಾ ಜೀವ ಕೊಡುವ ನಿಂಗಳ ಈ ಪ್ರತಿಭೆಗೆ ಗುರುದೇವರ ಅನುಗ್ರಹ ಸದಾ ಇರಲಿ..

  2. ತು೦ಬಾ ಲಾಯಿಕಾಯಿದು…….. { ಆಚಮನ ಮಾಡದ್ದೆ ಪೂಜೆಯ ……………. ……… ಯೋಚನೆಯ ಮಾಡದ್ದರಿನ್ನಿದು ಒಡದ ಹಾಲಕ್ಕು} ತು೦ಬಾ ಇಷ್ಟ ಆತು..

  3. ಬಹುಮಾನ ಬಂದದಕ್ಕೆ ಅಭಿನಂದನೆಗೊ. ದೀಪಿಕಾ ಮತ್ತೆ ಚೈತು ಇವಕ್ಕೂ ಅಭಿನಂದನೆಗೊ.
    ಒಳ್ಳೆ ಆಶಯಲ್ಲಿ ಅಂತ್ಯ ಕಂಡ ಭಾಮಿನಿ.

  4. ಮುಳಿಯ ಭಾವಂಗೆ ಅಭಿನಂದನೆಗೊ…
    ತುಂಬ ಚೆಂದಕೆ ಈಗಾಣ ಪರಿಸ್ಥಿತಿಗೆ ವಿವರಣೆ ಕೊಟ್ಟಿದೆ, ಒಳ್ಳೆದಾಯಿದು.

  5. ಮುಳಿಯ ಭಾವನ ಭಾಮಿನಿಗೆ ದ್ವಿತೀಯ ಅಲ್ಲ, ಪ್ರಥಮ ಬಹುಮಾನವೇ ಬರೆಕಾತು. ಒಳ್ಳೆ ಅರ್ಥ ಗಾಂಭೀರ್ಯ ಇಪ್ಪಂತ ಪದ್ಯ. ಹವ್ಯಕರಲ್ಲಿ ಇಪ್ಪ ಕೆಲವರ ದುರವಸ್ಥೆಯ ಚೆಂದಕೆ ವಿವರುಸಿ ತನ್ನ ಕಳಕಳಿಯ ತೋರುಸಿದ್ದ° ರಘು ಬಾವ°. ನಮ್ಮ ಸಂಸ್ಕೃತಿ, ಸಂಪ್ರದಾಯಂಗಳ ಒಳುಸುವ ಜವಾಬ್ದಾರಿ ಹಿರಿಯರಲ್ಲಿ ಮಾಂತ್ರ ಅಲ್ಲ ಕಿರಿಯರಲ್ಲಿಯುದೆ ಇದ್ದು ಹೇಳ್ತದು ಅಪ್ಪಟ ಸತ್ಯ. ಭಾವಯ್ಯಂಗೆ, ಬಹುಮಾನ ಬಂದ ಸುದ್ದಿ ಕೇಳಿ ತುಂಬಾ ಕೊಶಿ ಆತು. ಅಭಿನಂದನೆಗೊ. ಬೈಲಿನ ಮಕ್ಕೊ ದೀಪಿಕಾ, ಚೈತು ಅವಕ್ಕುದೆ ಅಭಿನಂದನೆಗೊ. ಭಾವಯ್ಯ, ಪ್ರಥಮ ಬಹುಮಾನ ಪಡದ ಪದ್ಯ ನವಗೆಂತಾರೂ ಕಾಂಬಲೆ ಸಿಕ್ಕುಗೊ ? ಸುಮ್ಮನೆ ಒಂದು ಕುತೂಹಲ ಅಷ್ಟೆ.

  6. ನಿಂಗೊಗೆ ಬಹುಮಾನ ಸಿಕ್ಕಿದ್ದಕ್ಕೆ ಪ್ರೀತಿಯ ಶುಭಾಶಯಂಗೊ..
    ಪದ್ಯ ತುಂಬಾ ಔಚಿತ್ಯಪೂರ್ಣವಾಗಿದ್ದು..ಪೆರುವದ ಭಾವ ಸರಿಯಾಗಿಯೇ ಹೇಳಿದ್ದ..{ಇ೦ತಹ ರಚನೆಗಳ ಓದುವಗ ಮಾತು ಸಿಕ್ಕುತ್ತಿಲ್ಲೆ, ಅನುಭವಿಸಲೆ ಆವ್ತಷ್ಟೆ. ಕವನ೦ಗೊ ಹೀ೦ಗೆ ಬೇಕು.. ಒ೦ದು ಹತ್ತು ಸರ್ತಿ ಆದರೂ ಓದೆಕು. ಎ೦ತಹ ಶಕ್ತವಾದ ಆಶಯ ವಿನಿಮಯ}
    ಅದ್ಭುತ..

  7. ಒಳ್ಳೆ ಲಾಯಕ ಆಯ್ದು ಭಾವ. ಅಭಿನಂದನೆಗೊ. ಬೈಲಿನವರೊಟ್ಟಿಂಗೇ ವೇದಿಕೆ ಏರಿದ್ದು ಇನ್ನೂ ಹೆಮ್ಮೆ ಆತು. ಇನ್ನಷ್ಟು ಕೀರ್ತಿಗಳಿಸಿ ಹೇಳಿ ಶುಭಾಶಯ.

  8. ಪೆರ್ವ ಭಾವಾ.
    ಉಜುರು ಹೇಳಿರೆ ನೀರಾವರಿ ಮಾಡುಲೆ ಮದಲಿ೦ಗೆ ಇದ್ದ ಕಣಿ. ” ಉಜುರುಕಣಿ ತರ ಸಾಗಿ ಜೀವನ “ಹೇಳಿ ಬರದಿದ್ದರೆ ಇನ್ನೂ ಸರಿ ಆವುತ್ತಿತ್ತೋ ಏನೋ?ಗೊ೦ತಿಪ್ಪವು ತಿಳುಶಿರೆ ತಿದ್ದುತ್ತೆ.

  9. ಹೃತ್ಪೂರ್ವಕ ಅಭಿನ೦ದನೆಗೊ ರಘು ಭಾವಾ… ಅಭಿನ೦ದಿಸಲೆ ಶಬ್ದ೦ಗೊ ಸಿಕ್ಕುತ್ತಿಲ್ಲೆ, ಇ೦ತಹ ರಚನೆಗಳ ಓದುವಗ ಮಾತು ಸಿಕ್ಕುತ್ತಿಲ್ಲೆ, ಅನುಭವಿಸಲೆ ಆವ್ತಷ್ಟೆ. ಕವನ೦ಗೊ ಹೀ೦ಗೆ ಬೇಕು.. ಒ೦ದು ಹತ್ತು ಸರ್ತಿ ಆದರೂ ಓದೆಕು. ಎ೦ತಹ ಶಕ್ತವಾದ ಆಶಯ ವಿನಿಮಯ!!!! ಸೂಪರ್!!!
    ಮುಜುಡುತನ ಬಿಟ್ಟೆದ್ದು ಬದಲಿ೦ಗುಜುರುವಿನ ತರ – “ಉಜುರು” ಹೇಳಿರೆ ಎ೦ತರ? ಎನಗೆ ಗೊ೦ತಾಯಿದಿಲ್ಲೆನ್ನೆ..
    ದೀಪಿಕ೦ಗುದೆ, ಚೈತುವಿ೦ಗುದೆ ಅಭಿನ೦ದನೆಗೊ

  10. (ಹಿಪ್ಪಿಗಳ ತಲೆಕುಚ್ಚಿ ಕೂಸುಗೊ
    ಕುಪ್ಪಿ ಬಗ್ಗುಸಿ ಕುಡಿವ ಮಾಣ್ಯ೦
    ಗಪ್ಪಿ ಕೂಯಿದವಿ೦ದು ಪಾಪದ ಕೂಪದೊಳು ಮು೦ಗಿ|
    ಚೆಪ್ಪುಡಿಯತನ ತು೦ಬಿ ಹರುದರೆ
    ಒಪ್ಪುಗೋ ಕಾಣದ್ದ ದೇವರು
    ಬೆಪ್ಪುತಕ್ಕಡಿಯಾಗಿ ಬದುಕುವ ಇ೦ತ ಸ೦ಸ್ಕೃತಿಯ||) ಇಂದ್ರಾಣ ಜೀವನ ಶೈಲಿಯ ವರ್ಣನೆ ಭಾರೀಲಾಯಿಕ ಆಯಿದು ಭಾವಾ,
    ಬಹುಮಾನ ಬಂದದಕ್ಕೆ ಒಪ್ಪಂಗೊ..

  11. ರಘುವಿಂಗೆ ಅಭಿನಂದನೆಗೊ.

  12. ಮುಳಿಯದ ಭಾವಂಗೆ ಅಭಿನಂದನೆಗೋ… ಆ ಗಜಮುಖನೆ ನಮ್ಮತನ ಒಳಿಯೆಕ್ಕು ಹೇಳಿ ಬಯಸುತ್ತಾ ಇಪ್ಪಗ ಯಾನದ ದಾರಿ ಸರಿಯಾಗಲೇಬೇಕು… ನಾವೆಲ್ಲ ನಮ್ಮ ಕೈಲಾದ ಪ್ರಯತ್ನ ಮಾಡುವ…

  13. ನಮ್ಮತನದ ಅಭಿಮಾನ,ಪರಂಪರೆಯೊಟ್ಟಿಂಗೆ ಸಾತತ್ಯ ಬಿಡುತ್ತಾ ಇಪ್ಪ ನಮ್ಮವರ ಕುರಿತು ಗಂಭೀರ ಪದ್ಯ.ಬಹುಮಾನ ಸಿಕ್ಕಿದ್ದಕ್ಕೆ ಅಭಿನಂದನೆ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×