Oppanna.com

“ಅತ್ತಾಳ ಅಟ್ಟುಣ್ಣದ್ದಲ್ಲಿ ತಣ್ಣನೆ ಎಲ್ಲಿಂದ?”-{ಹವ್ಯಕ ನುಡಿಗಟ್ಟು-40}

ಬರದೋರು :   ವಿಜಯತ್ತೆ    on   02/11/2015    3 ಒಪ್ಪಂಗೊ

“ಅತ್ತಾಳ ಅಟ್ಟುಣ್ಣದ್ದಲ್ಲಿ ತಣ್ಣನೆ ಎಲ್ಲಿಂದ?”-{ಹವ್ಯಕ ನುಡಿಗಟ್ಟು-40}

ಒಂದಿನ ಅಡಿಗೆ ಕೇಚಣ್ಣನಲ್ಲಿಗೆ ಅವನ  ಚಙಾಯಿ ಚುಬ್ಬಣ್ಣ ಉದಿ-ಉದಿಯಪ್ಪಗ ಬಂದು “ಕೇಚಣ್ಣಾ, ಒಂದಿನ್ನೂರು ರೂಪಾಯಿ ಕಡಗಟ್ಟು ಬೇಕಾತನ್ನೆ! ಬೇಂಕಿನ ಲೋನಿಂಗೆ ಬಡ್ಡಿ ಕಟ್ಳೆ. ಇಂದು ಕಟ್ಟದ್ರೆ ಮತ್ತೆ ಜಪ್ತಿಗೆ ಬಕ್ಕು. ನೀನೇ ತಾಂಗೆಕ್ಕು.ಒಂದು ವಾರಲ್ಲಿ ರಜ ಅಡಕ್ಕೆ ಸೊಲುದು ಮಾರಿ ಕೊಡುವೆ. ಇದು ನಿನ್ನ ಕೈ ಅಲ್ಲ ಕಾಲು ಹೇದು ತಿಳ್ಕೊ”. ಹೇದು ಕೇಚಣ್ಣನ ಬಲದ ಕೈಯ ತನ್ನೆರಡು ಕೈಲಿ ಭದ್ರವಾಗಿ ಹಿಡ್ಕೊಂಡು  ಕೇಟಂ. “ಎನ್ನತ್ರೆ ಇಲ್ಲೆಪನೇ” ಕೇಚಣ್ಣ ಹೇದಪ್ಪಗ “ಅಷ್ಟಿಕ್ಕು ನಿನ್ನತ್ರೆ. ಮೊನ್ನೆ ಖಂಡಿಗದ ಮದುವೆ ಅಡಿಗೆ ಸಿಕ್ಕಿತ್ತಲ್ಲೊ ನಿನಗೆ!. ಇಲ್ಲೆ ಹೇಳೆಡ”.

“ಅಯ್ಯೋ ಮಾರಾಯ ಅತ್ತಾಳ ಅಟ್ಟುಣ್ಣದ್ದವನಲ್ಲಿ ತಣ್ಣನೆ ಎಲ್ಲಿಂದ ಹೇಳು?! ಅಡಿಗ್ಗೆ ಸಿಕ್ಕಿದ ಪೈಸವ ಹಾಂಗೆ ಅಂಗ್ಡಿ ಅದ್ದುಲ್ಲಂಗೆ ಕೊಟ್ಟೆ. ಅದರ ಸಾಲ ಇನ್ನೂ ತೀರಿದ್ದಿಲ್ಲೆ  ಮಿನಿಯ.” ಕೇಚಣ್ಣ ಉವಾಚ.

ನಮ್ಮ ಕೇಚಣ್ಣ ಹೇಳ್ತು ಸರಿ. ಅವ ಸ್ವಭಾವಲ್ಲಿ ಮಾಂತ್ರ ಪಾಪ ಅಲ್ಲ, ಸ್ಥಿತಿ-ಗತಿಲಿಯೂ ಅಷ್ಟೆ. ಅಡಿಗ್ಗೆ ಹೋಗಿ,ಅಬ್ಬೆ-ಅಪ್ಪನ, ಹೆಂಡತ್ತಿಯ ನಾಲ್ಕು ಮಕ್ಕಳ ಸಾಂಕುತ್ತ  ಪ್ರಾಮಾಣಿಕ ಜೆನ. ಈಗಾಣ ಕಾಲಲ್ಲಿ ಅಡಿಗೆ ಮಾಡ್ತವಕ್ಕೆ ತೊಂದರೆ ಇಲ್ಲೆ ಹೇಳುವೊಂ.ಇದು ಕೆಲವು ವರ್ಷ ಹಿಂದಾಣ ಕತೆ. ಕೇಚಣ್ಣನಲ್ಲಿ ಹೆಚ್ಚಿಗೆಯೂ ಮಜ್ಜಾನಕ್ಕೆ ಒಂದೊತ್ತ ಹೆಜ್ಜೆ ಮಡಗೀರಾತು ಇರುಳಿಂಗೆ ಒಳುದ್ದಿದ್ದರೆ ಮಕ್ಕೊಗೆ ಬಳುಸೀರಾತು. ಕೇಚಣ್ಣ ಹೇಳಿದ ಮಾತು ಅವನ ಮನೆ ಆಚರಣೆಗೂ ಆತು. ಅವನ ಆರ್ಥಿಕ ಸ್ಥಿತಿಗೂ ಆತು.ಮುನ್ನಾಣ ದಿನ ಅಡಿಗೆ ಮಾಡದ್ದಲ್ಲಿ ತಣ್ಣನೆ ಇಕ್ಕೊ?.ತೊಟ್ಟು ಮುರುದು ಮೇಣ ನಕ್ಕುತ್ತವರತ್ರೆ ಕಡಗಟ್ಟಿಂಗೆ ಪೈಸ ಕೇಳೀರಕ್ಕೊ?.

3 thoughts on ““ಅತ್ತಾಳ ಅಟ್ಟುಣ್ಣದ್ದಲ್ಲಿ ತಣ್ಣನೆ ಎಲ್ಲಿಂದ?”-{ಹವ್ಯಕ ನುಡಿಗಟ್ಟು-40}

  1. ಶ್ಯಾಮಣ್ಣ ಹೇಳಿದ್ದು ಸರಿ . ಒಂದರ ಬರವಾಗ ಮತ್ತೊಂದು ಹೊಳೆತ್ತಿದ. ಅದು ನೆಂಪಪ್ಪಗಳೇ ಜಾನ್ಸಿದ್ದೆ. ಬೊಳುಂಬು ಗೋಪಾಲಂಗುದೆ ಧನ್ಯವಾದಂಗೊ

  2. ಈ ನುಡಿಗಟ್ಟು ಕೇಳಿದ್ದಿಲ್ಲೆ ಆನು. ಒಳ್ಳೆ ಅರ್ಥವತ್ತಾಗಿದ್ದು ವಿಜಯಕ್ಕ.

  3. (ತೊಟ್ಟು ಮುರುದು ಮೇಣ ನಕ್ಕುತ್ತವರತ್ರೆ ಕಡಗಟ್ಟಿಂಗೆ ಪೈಸ ಕೇಳೀರಕ್ಕೊ?) ಇದುದೆ ಒಂದು ನುಡಿಕಟ್ಟು ಅಲ್ಲದೋ?

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×