Oppanna.com

“ಅರಸಿಂಗೆ ಸಿಕ್ಕ ಅರೆಹಸಿ”-{ಹವ್ಯಕ ನುಡಿಗಟ್ಟು–61}

ಬರದೋರು :   ವಿಜಯತ್ತೆ    on   25/07/2016    14 ಒಪ್ಪಂಗೊ

  “ಅರಸಿಂಗೆ ಸಿಕ್ಕ ಅರೆಹಸಿ”-{ಹವ್ಯಕ ನುಡಿಗಟ್ಟು-61}

ಆನು ಸಣ್ಣದಿಪ್ಪಗಣ ಒಂದು ಸಂದರ್ಭ.ಅಪ್ಪನೂ ಎಂಗೊ ಮಕ್ಕಳೂ ಉಂಬಲೆ ಕೂಯಿದಿಯೊᵒ.ತೊಂಡೆಕಾಯಿ ತಾಳು ಮಾಡಿದ್ದರ ಮದಾಲು ಬಡುಸಿತ್ತು ಅಬ್ಬೆ. ಮತ್ತೆ ಅಶನ,ತುಪ್ಪ ಹೀಂಗೆಲ್ಲ ಬಟ್ಳಿಂಗೆ ಬಿದ್ದಪ್ಪಗ; ಅಪ್ಪᵒ   ಕೈನ್ನೀರು  ತೆಗದಿಕ್ಕಿ ಉಂಬಲೆ ಸುರುಮಾಡಿಕ್ಕಿ ಎನ್ನತ್ರೆ “ನೋಡು ಮೋಳೆ,  ಅರಸಿಂಗೆ ಸಿಕ್ಕದ್ದದು ನವಗೆ ಸಿಕ್ಕಿತ್ತಿದ!”. ಹೇಳಿದೊವು.ಆನು ಅಪ್ಪನ ಮೋರೆಯನ್ನೇ ಪ್ರಶ್ನಾರ್ಥಕ ಭಾವನೆಂದ ನೋಡಿದೆ!!. ಅಬ್ಬೆ ತಾಳಿನ ಬಾಗವ ಸೌಟಿಲ್ಲಿ ತೆಗದು ಕೈಲಿ ಅಮರ್ಸಿ ನೋಡಿಕ್ಕಿ; “ಆಗ ಇಳುಗುವಗ ಬೆಂದಹಾಂಗೆ ಕಂಡತ್ತಪ್ಪ!”. ಹೇಳಿತ್ತು. “ಆಗ ಬೆಂದಾಂಗೆ ಕಂಡದು ಈಗ ಅರೆಬೆಂದಾಂಗೆ ಆದ್ದೇಂಗೋ”. ಹೇಳೆಂಡು ಬೇರೆ ಎಸರು ಬೆಂದಿ ಮೇಲಾರ ಹಾಕೆಂಡು ಉಂಡಿಕ್ಕಿ ಎದ್ದೊವು.ಅಪ್ಪᵒ  ಹೆರ ಹೋಗಿಯಪ್ಪಗ ಆನು ಅಬ್ಬೆ ಹತ್ರೆ “ಎಂತಕೆ ಅಪ್ಪᵒ  ಅರಸಿಂಗೆ ಸಿಕ್ಕದ್ದದು ನವಗೆ ಸಿಕ್ಕಿತ್ತು. ಹೇಳಿದ್ದದು?”

“ನೀನು ನಿನ್ನ ಅಪ್ಪನತ್ರೇ ಕೇಳು ಹೋಗು” ಹೇಳಿತ್ತು ಅಬ್ಬೆ.ಅಬ್ಬಗೆ ಗೊಂತಿದ್ದೂ ಎನ್ನ ಸಾಗಹಾಕಲೆ ಹೇಳುದೂಳಿ ಎನಗೊಂತಾಯಿದು.ಆದರೂ ಎನಗೆ ಹಾಂಗಿಪ್ಪದರ ತಿಳಿವಲೆ ಕುತೂಹಲ!.

ಅಪ್ಪᵒ  ಹೆರ ಹೋಗಿ ಚಾವಡಿಲಿ ಮನುಗಿದ್ದವಷ್ಟೆ. ಕೇಳಿದೆ.

“ಅದುವೋ.., ನೀನು ಇಂದ್ರಾಣ ತಾಳು ಉಂಡಿದಿಲ್ಲಿಯೊ?.

“ಉಂಡಿದೆ.”

“ಅದು ಸರೀ ಬೇಯಿಂದಿಲ್ಲೆನ್ನೆ!, ಹಾಂಗಿಪ್ಪದೆಲ್ಲ ಅರಸುಗೊಕ್ಕೆ ಸಿಕ್ಕಯಿದ. ಅರಸುಗೊಕ್ಕೆಲ್ಲ ಏನಿದ್ದರೂ ಒಳ್ಳೆದಾಯಿದೋ ತಿಂಬಲೆ ಯೋಗ್ಯವೋ ಹೇಳಿ ಪರಾಮರ್ಶೆ ಮಾಡಿ ನೋಡದ್ದೆ ಕೊಟ್ಟತ್ತ್ಕಂಡ್ರೆ ಅವ್ರಲ್ಲಿಂದ ಬಡುದ್ದೋಡುಸುಗು. ಈಗ ಗೊಂತಾತೊ ?”  ಆನು ಗೊಂತಾತು ಹೇಳಿಯಪ್ಪಗ “ಆತು ಒಂದು ಕ್ಷಣ ಮನುಗುತ್ತೆ” ಹೇದವು. ಹೀಂಗಿಪ್ಪ ಕೆಲಾವು ವಿಷಯಂಗೊ ಪರೋಕ್ಷವಾಗಿ ನಾಟುತ್ತಾಂಗೆ ಹೇಳುದು ನಿಂಗೊ ಕೇಳಿಪ್ಪಿ.

——–೦——-

14 thoughts on ““ಅರಸಿಂಗೆ ಸಿಕ್ಕ ಅರೆಹಸಿ”-{ಹವ್ಯಕ ನುಡಿಗಟ್ಟು–61}

  1. ಅಪ್ಪು ಗೋಪಾಲ ಸರಿಯಾಗಿ ಹೇಳಿದೆ. ನುಡಿಗಟ್ಟಿಲ್ಲಿ ಒಳಾರ್ಥ , ದ್ವಾಂದ್ವಾರ್ಥ ವಿಶ್ಲೇಷಣಾರ್ಥ ಹೇಳಿಯೆಲ್ಲ ಇದ್ದಿದ .

  2. ಒಳ್ಳೆ ನುಡಿಗಟ್ಟು. ಇದ್ದದರ ಇದ್ದ ಹಾಂಗೆ ನೇರವಾಗಿ ಹೇಳುವುದರ ಬದಲು ಹೀಂಗೆ ಸುತ್ತು ಬಳಸಿ ಹೇಳಿಯಪ್ಪಗ ಅರ್ಥ ಆಯೆಕಾದವಂಗೆ ಆವ್ತು. ಮುಸುಂಟಿಂಗೆ ಬಡುದ ಹಾಂಗುದೆ ಅಪ್ಪಲಿಲ್ಲೆ ಅಲ್ಲದೊ ವಿಜಯಕ್ಕ.

  3. ಹರೇರಾಮ ಗೋಪಾಲ . ನಮ್ಮ ಗೋಪಾಲ ಯಾವಾಗಲೂ ಬಪ್ಪವ ಏಕೆ ಬಯಿಂದಯಿಲ್ಲೆ ಹೇಳಿ ಗ್ರೇಶಿತ್ತಿದ್ದೆ.

    1. ಎಂತದೋ ರಜ ಪುರುಸೊತ್ತಿಲ್ಲದ್ದ ಹಾಂಗೆ ಆವುತ್ತು ಒಂದೊಂದು ದಿನ.ಚಿಕ್ಕಮ್ಮ ಬರೆದ ಎಲ್ಲವನ್ನೂ ಓದುತ್ತೆ. ಬರೆವಲೆ ಕೆಲವೊಮ್ಮೆ ತಡ ಆವ್ತು.

  4. ಒಳ್ಳೆದಾಯಿದು.ರಾಜರಿಂಗೆ ಸಿಕ್ಕದ್ದ ಖಾದ್ಯ ಎಷ್ಟೂ ನಮಗೆ ಸಿಕ್ಕುಗು. ಆರಿಂಗೂ ಗೊಂತಿಲ್ಲದ್ದ ಮರೆತುಹೋದ ಮಾತುಗೊ ಚಿಕ್ಕಮ್ಮಂದಾಗಿ ನಮಗೆ ಸಿಕ್ಕುಗು.ಅದೇ ವಿಶೇಷ !

  5. ಶರ್ಮಭಾವನ, ಮತ್ತೆಲ್ಲರ ಮೆಚ್ಚುಗೆಗೆ ಧನ್ಯವಾದಂಗೊ. ಆರೇ ಲೇಖಿಕೆ, ಲೇಖಕರಿಂಗೆ ಓದುವವರ, ತಿಳುದು ಪ್ರೋತ್ಸಾಹ ಕೊಡುವವು ಬೇಕು. ಅದುವೇ ಅವಕ್ಕೆ ಮುಂದೆ ಬರವಲೆ ಬಪ್ಪ ಉತ್ಸಾಹ.

  6. ಇದುವರೆಗೆ ಕೇಳದ್ದ ನುಡಿಗಟ್ಟು.
    ವಿಜಯತ್ತಿಗೆ ಸಂದರ್ಭ ಸಹಿತ ಅರ್ಥ ಅಪ್ಪ ಹಾಂಗೆ ಹೇಳ್ತ ಕಲೆ ಸಿದ್ದಿಸಿಗೊಂಡಿದು

  7. ಒಪ್ಪ ಕೊಟ್ಟ ಎಲ್ಲೋರಿಂಗೂ ಧನ್ಯವಾದಂಗೊ .ಪಟ್ಟಾಜೆ ಶಿವ ರಾಮಣ್ಣನ ಪ್ರಶ್ನಗೆ ಎನ ಗೊಂತಿದ್ದಾಂಗೆ ಹೇಳ್ತೇಯಿದ . “ಉಂಡವ ಹರಸೆಡ ಕಂಡು ಮೆಚ್ಚಿದವ ಹೊಗಳೆಡ” . ಮತ್ತೆ “ಹಶುವಿಲ್ಲದ್ದಜ್ಜ ಹನ್ನೆರಡು ಉಂಡೆ ತಿಂದ ಹೇಳಿರೆ; ಹಶುವಿಲ್ಲೇಳಿ ಬಾಯಿಲಿ ಹೇಳಿರೂ ತಿಂಬಲೆ ಆಗ್ರಹ ಇದ್ದೂಳಿ ಆವುತ್ತು. ಕೆಲವು ಜೆನ ಏವದೇ ವಸ್ತುವಿನ ಎನ ಬೇಡಾಳಿ ಬಾಯಿಲಿ ಹೇಳಿಕ್ಕಿ ರಜ ಕರೇಲಿ ಹೋಗಿ ಅಥವಾ ಕಣ್ಣ ಸನ್ನೆಲಿ ಇರಳಿ ಹೇಳ್ತವಿದ್ದವು. ಈ ಪ್ರಕರಣಕ್ಕೆ ಇದರ ಬಳಸುತ್ತೊವು.

  8. ಪ್ರಾಸಬದ್ಧವಾದ ಅರ್ಥಪೂರ್ಣ ನುಡಿಗಟ್ಟು.ಕಟ್ಟಿಕೊಟ್ಟ ವಿಜಯಕ್ಕಂಗೆ ಧನ್ಯವಾದ.

  9. ಉಂಡವ ಹರಸೆಡ – ಇದರ ಮತ್ತಾಣ ಲೈನ್ ಆರಿಂಗಾರು ಗೊಂತಿದ್ದ ?
    ಹಶು ಇಲ್ಲದ್ದ ಅಜ್ಜ ಹನ್ನೆರಡು ಉಂ ಡೆ ತಿಂದ – ಇದರ ಹಿನ್ನೆಲೆ ಆರಿಂಗಾರು ಗೊಂತಿದ್ದ?

  10. ನಿಂಗಳ ನುಡಿಗಟ್ಟು ಖಜಾನೆಂದಾಗಿ ಎಂಗಳ ತಿಳಿವಳಿಕೆಯ ಖಜಾನೆಯು ವಿಸ್ಟರ್ಸುತ್ತು ವಿಜಯಕ್ಕ…

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×