Oppanna.com

“ಕಡುದ ಕೈಗೆ ಉಪ್ಪು ಹಾಕದ್ದ ಜಾತಿ”

ಬರದೋರು :   ವಿಜಯತ್ತೆ    on   29/11/2015    3 ಒಪ್ಪಂಗೊ

“ಕಡುದ ಕೈಗೆ ಉಪ್ಪುಹಾಕದ್ದ ಜಾತಿ”-{ಹವ್ಯಕ ನುಡಿಗಟ್ಟು-43}

ಕಡುದ ಕೈಗೆ ಉಪ್ಪು ಹಾಕೀರೆ ಹೇಂಗಕ್ಕು!?.ಗಾಯ ಆದಲಿಂಗೆ ಉಪ್ಪು ಹಾಕದ್ರೇ ಒಳ್ಳೆದು, ಹೇಳುವಿ ನಿಂಗೊ. ಅಲ್ಲೇ ಇಪ್ಪದಿದ ವಿಷಯ!. ನೆರೆ-ಕರೆ, ನೆಂಟ್ರಿಷ್ಟ್ರು, ಬಂಧು-ಬಳಗ, ಹೇಳಿ ನಮ್ಮ,  ಹಾಕು-ಚೋಕಿಂಗೆ, ಆಪತ್ತಿಂಗೆ, ಒದಗುತ್ತೊವು ಬೇಕೂಳಿ  ಮದಲಾಣ ಹೆರಿಯೊವು ಹೇಳುಗಿದ.   ಅದಕ್ಕಾಗಿ ಎಲ್ಲೋರತ್ರೂ  ಒಳ್ಳೆದಲ್ಲಿರೆಕೂಳಿ ಹೇಳ್ತ ಬುದ್ಧಿ ಮಾತು. ಅದು ಮೆಚ್ಚೆಕ್ಕಾದ ವಿಷಯವೂ  ಅಪ್ಪು.  ಹಾಂಗಾರೆ    ನಮ್ಮಲ್ಲಿ ಒಳ್ಳೆವೂ ಇಕ್ಕು. ಕೆಟ್ಟವೂ ಇಕ್ಕು. ಎಲ್ಲೋರ ಗುಣ-ನಡತೆ ಒಳ್ಳೆದಿಕ್ಕು ಹೇಳ್ಲೆ  ಬತ್ತಿಲ್ಲೆಯಿದ.ಕೈಲಿಪ್ಪ ಐದು ಬೆರಳೂ ಒಂದೇರೀತಿ ಇಲ್ಲೆನ್ನೆ! ಹೇಳುಗು ಸಹಿಷ್ಣುಗೊ. ಒಬ್ಬ ಪೈಸಲ್ಲಿ  ಸೋತ, ಇನ್ನೊಬ್ಬ ಆರೋಗ್ಯಲ್ಲಿ ಸೋತ ಹೇಳಿಯಾದರೆ; ಎಡಿಗಾದ ಹಾಂಗೆ  ತಾಂಗುತ್ತೊವೂ ಇಕ್ಕು. ಆ ಹೊಡೆಂಗೇ  ಕಣ್ಣೆತ್ತಿ  ನೋಡದ್ದೊವೂ ಇಕ್ಕು!. ಈ ಎರಡ್ನೇ ಜಾತಿ  ಮನುಷ್ಯರಯಿದ  ’ಕಡುದ ಕೈಗೆ ಉಪ್ಪು ಹಾಕದ್ದ ಜಾತಿ’ ಹೇಳುದು. ಅದೆಂತಕೆ  ಈ ಮಾತು ಕೇಳಿರೆ….’  ಗಾಯ     ಆದಲ್ಲಿ ಅವಂಗೆ ಒಳ್ಳೆತ ಉರಿಯಲೀಳಿ ಮನಸ್ಸಿಲ್ಲಿದ್ದರೂ ಒಂಧೊಡಿ  ಉಪ್ಪಿಂಗೆ  ಚಿಕ್ಕಾಸಾರೂ ಹಾಕೆಕ್ಕನ್ನೆ!. ಉಪದ್ರವನ್ನಾರೂ ಕೊಡುವೊಂ  ಹೇಳೀರೆ ನಯಾಪೈಸೆ ಆದರೂ ಒಂದಾರಿ  ಬಿಚ್ಚೆಕ್ಕನ್ನೇಳಿ  ಮನಸ್ಸಿನೊಳ ಇದ್ದವರ  ಹೀಂಗೆ  ಹೇಳ್ತವು.

3 thoughts on ““ಕಡುದ ಕೈಗೆ ಉಪ್ಪು ಹಾಕದ್ದ ಜಾತಿ”

  1. ಧನ್ಯವಾದ ಚೆನ್ನೈ ಭಾವಂಗೆ . ನಿನಗೆ ಆದರೂ ಇದರ ಓದಿ ಒಂದು ಅನಿಸಿಕೆ ಹಾಕುವೊಂ ಹೇಳಿ ಕಂಡದು ಸಂತೋಷಾತು.

  2. ನುಡಿಗಟ್ಟುಗೊ ಒಂದರಿ ಚಿಂತನೆಗೆ ಒಡ್ಡುಸುತ್ತು. ಆ ಚಿಂತನೆ ಮನಸ್ಸಿಲ್ಲಿ ಏವತ್ತೂ ಜಾಗೃತವಾಗಿರಳಿ ಎಲ್ಲೋರಿಂಗೂ ಹೇಳ್ಸು ನಾವಿಲ್ಲಿಂದ

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×