- 2022 ನೇ ಸಾಲಿನ ಕೊಡಗಿನಗೌರಮ್ಮ ಪ್ರಶಸ್ತಿ - July 23, 2022
- ‘ಮುದುಡಿದ ತಾವರೆ ಅರಳಿತ್ತು’- 2021ರ ಕೊಡಗಿನಗೌರಮ್ಮ ಕಥಾಸ್ಪರ್ಧೆ – ತೃತೀಯ - September 18, 2021
- ಕಾಪಿ ಕುಡುದ ಜರ್ನಲಿಸ್ಟ್ – 2021ನೇ ಸಾಲಿನ ಕೊಡಗಿನಗೌರಮ್ಮ ಕಥಾಸ್ಪರ್ಧೆ – ದ್ವಿತೀಯ - September 1, 2021
“ಬೆಳೂಲಿಲ್ಲಿ ಹಲಸಿನಕಾಯಿ ಕಡುದಾಕಿದಾಂಗೆ”-(ಹವ್ಯಕ ನುಡಿಗಟ್ಟು-90)
ನೆರೆಕರೆ, ನೆಂಟ್ರಿಷ್ಟರೂಳಿ ಭೇಟಿಯಪ್ಪಗ, ಸುಖ-ದುಕ್ಕ ಕೇಳುವದು ಇಪ್ಪದೇ. ಹೀಂಗೊಂದು ಜೆಂಬಾರಕ್ಕೆ ಆನು ಹೋದ ಸಂದರ್ಭಲ್ಲಿ ; “ಅಪ್ಪೊ ಭಾವಯ್ಯಾ ಮನ್ನೆ ಆರೋ ಕುಳವಾರು ಬಂದು ಕೂಸಿನ ನೋಡಿಕ್ಕಿ ಹೋಯಿದವಾಡ, ಎಂತಾತದು?” ಕೇಳಿದᵒ ಒಬ್ಬᵒ .
“ಅದೆಂತರ ಅಪ್ಪದು! ಬೆಳೂಲಿಲ್ಲಿ ಹಲಸಿನಕಾಯಿ ಕಡುದಾಕಿದಾಂಗೆ ಮಾಡಿದ್ದ ಸಂಧಾನ ಹಾಕಿದವᵒ!”
ಈ ಬೆಳೂಲಿಲ್ಲಿ ಹಲಸಿನಕಾಯಿ ಕಡುದಾಕಿದಾಂಗೆ ಹೇಳಿರೆ ಎಂತ ಅರ್ಥ!?, ಅಪ್ಪನತ್ರೆ ಕೇಳಿದೆ. ಅದಕ್ಕೆ ಅವು ಹೇಳಿದೊವು
“ನೋಡು,ಮೋಳೇ ಬೆಳೂಲ ರಾಶಿಲಿ ಹಲಸಿನ ಕಾಯಿ ಕಡುದು ಕಡಿಮಾಡಿ ಹಾಕಿ ನೋಡು! ಅದು ನಿನ ಉಪಕಾರಕ್ಕೆ ಸಿಕ್ಕ. ಹಲಸಿನಕಾಯಿ ಮೇಣಕ್ಕೆ ಬೆಳೂಲು ಅಂಟಿ ನಿಂದು ನಿನ ಅದರ ಎಳಕ್ಕಲೆ ಕಷ್ಟ!, ಆವಲೂ ಎಡಿಯ!!.
“ಮಾಡಿದ ಕೆಲಸ ಸರೀ ಸುಸೂತ್ರ ಆಗದ್ದಕ್ಕಿದ ಈ ಮಾತು ಹೇಳುವದು”, ಹೇಳಿದವು ಎನ್ನಪ್ಪᵒ. ಈ ಮಾತಿನ ನಿಂಗಳ ಹೆರಿಯವೂ ಹೇಳುವದು ಕೇಳಿಪ್ಪಿ, ಎಂತ ಹೇಳ್ತಿ?.
ಲಾಯ್ಕ ಗಾದೆ ,ಸಮರ್ಥ ವಿವರ.ಚಿಕ್ಕಮ್ಮ ಇದೆಲ್ಲ ಪುಸ್ತಕ ಮಾಡಿ
ನಿನ್ನ ಸಲಹೆ ಒಳ್ಳೆದು ಗೋಪಾಲ . ಮಾಡೆಕ್ಕುಳಿ ಆಲೋಚನೆ ಇದ್ದು……,ಆದರೆ ….!
ಆಗಿರ. ಅವರ ಪಟ ಹಾಕಿದ್ದವನ್ನೆ
ಚೆನ್ನೈ ಭಾವ ಹೇದರೆ ಅರ್ತಿಕಜೆ ಶ್ರೀ ಕೃಷ್ಣ ಭಾವನೊ ಎಂತ?
ಅಪ್ಪಚ್ಚಿ ಹಾಂಗೇ ಆನುದೆ. ಒಪ್ಪ
ಗಾದೆ ಒಳ್ಳೆ ದಿದ್ದು. ಆನು ಈ ಗಾದೆಯ ಮದಲು ಕೇಳಿ ದ್ದಿಲ್ಲೆ.
ವಿಜಯತ್ತಿಗೆ,
ಆನು ಈ ನುಡಿಗಟ್ಟು ಕೇಳಿತ್ತಿದ್ದೆ. ಆದರೆ ಸರಿಯಾಗಿಅರ್ಥ ಆದ್ದು ನೀನು ವಿವರಿಸಿದ ಮತ್ತೆಯೇ
ಧನ್ಯವಾದಂಗೊ
ಶರ್ಮಭಾವ, ಎನಗೆ ಹೀಂಗಿದ್ದೆಲ್ಲ ಎನ್ನ ಅಪ್ಪನತ್ರಂದ ಬಂದ ಬಳುವಳಿ. ನಿನ ಗೊಂತಿದ್ದಾಂಗೆ; ಅವು ಮಾತು ಮಾತಿಂಗೆ ಗಾದೆ -ನುಡಿಗಟ್ಟು ಹೇಳಿ ಸಮಜಾತಿಶಿಕೆ ಕೊಡುಗಿದ.