Oppanna.com

‘ಅಡಿಗೆ ಸತ್ಯಣ್ಣ’ ಜೋಕುಗೊ – ಭಾಗ 21

ಬರದೋರು :   ಚೆನ್ನೈ ಬಾವ°    on   01/08/2013    6 ಒಪ್ಪಂಗೊ

ಚೆನ್ನೈ ಬಾವ°

1.
ಕೆಲವು ಅನುಪ್ಪತ್ಯಂಗೊಕ್ಕೆ ಬಟ್ಟಮಾವಂಗೆ ಉದಿಯಪ್ಪಗ ಎತ್ತಿಗೊಂಡ್ರೆ ಸಾಕಾವ್ತು ಆದರೆ ಅಡಿಗೆ ಸತ್ಯಣ್ಣಂಗೆ ಹಲವು ಅನುಪ್ಪತ್ಯಂಗೊಕ್ಕೆ ಮುನ್ನಾಣ ದಿನವೇ ಹೋಯೇಕ್ಕಾವ್ತು..
ಮುನ್ನಾಣ ದಿನವೇ ಹೋದ ಸತ್ಯಣ್ಣ ಮನೆಯಕ್ಕನತ್ರೆ ಕೇಟ.. ಇರುಳಿಂಗೆ ಏನಾರು ಮಾಡಿಯಾಯ್ದೋ? 1070105_337852496346404_1008803229_n
ನೀ ಬತ್ತೆ ಹೇದ ಕಾರಣ ಮಧ್ಯಾಹ್ನಪ್ಪಗಳೇ ಅಟ್ಟುಂಬಳ ಸಗಣ ಬಳಿಗಿ ಮಡಿಗಿ ಆಯ್ದು ಸತ್ಯಣ್ಣ! – ಹೇತು ಮನೆಯೆಜಮಾಂತಿಯಕ್ಕ.
ಹಲಸಿನಾಯಿ ಕಾಲ ಆದಕಾರಣ ಹೇಳ್ಳೆ ಎಂತಿದ್ದು, ಕೇಳ್ಳೆ ಎಂತಿದ್ದು!,  ಮುನ್ನಾಣ ದಿನಕ್ಕೆ ಮನೆಯೋರು, ಅಡಿಗೆಯೋರು, ದೂರಂದ ಬಂದ ಮನೆಮಕ್ಕೊ ಪುಳ್ಯಕ್ಕೊ ಮಾತ್ರ ಇಪ್ಪಲ್ಲಿ!
“ಎರಡು ಕಾಯಿ ಒಡದು, ಕೆರೆ., ಕಡವಲೂ ಸಾಕು” – ಹೇದ ರಂಗಣ್ಣಂಗೆ ಸತ್ಯಣ್ಣ.
ಸೊಳೆ ತಾಳು, ಸೊಳೆ ಕೊದಿಲು, ಬೇಳೆ+ಸೊಳೆ ಕಲಸು, ಸೊಳೆ ಮೇಲಾರ, ಪೆರಟಿ ಪಾಚ, ಬೇಳೆ ಹೋಳಿಗೆ, ಕುಜ್ವೆ ಉಪ್ಪಿನಕಾಯಿ, ಸೊಳೆ ಹೊರುದ್ದದು… ಗಂಟೆ ಎಂಟಾಯೇಕಾರೆ ರೆಡಿ ಆತು., ಒಂಬತ್ತಾಯೇಕಾರೆ ಊಟವೂ ಆತು.
ಇಷ್ಟು ಹೊಡದಿಕ್ಕಿ “ಇನ್ನೆಂಸರ ಮಾವ?”- ಕೇಳಿದ° ರಂಗಣ್ಣ°.
ಸತ್ಯಣ್ಣ° ಹೇದ° – “ಇನ್ನೆಂಸರ… ಎರಡು ಹಸೆ ತೆಕ್ಕೋ… ಓ ಅಲ್ಲಿಗೆ ಹೋಪೋ°.., ನೀನು ಪದ ಹೇಳು , ಆನು ಅರ್ಥ ಹೇಳ್ತೆ. ಒರಕ್ಕು ಹೇಂಗೂ ಬಾರನ್ನೇ” 😀
~~
2.
ರಮ್ಯಂಗೆ ಕೋಳೇಜು ತೆರಕ್ಕು. ವಾರದ ರಜೆಲಿಯೂ ಓದಿ ಬರವಲೆ ಇಪ್ಪದು ಮುಗಿತ್ತಿಲ್ಲೆ. ಇದರೆಡಕ್ಕಿಲಿ ಟಿವಿ, ಮೊಬೈಲು, ಕಂಪ್ಯೂಟ್ರು ಕೆಲಸಂಗಳೂ ಆಯೇಕು..
ಸೋಮವಾರ ಕ್ಲಾಸು ಪರೀಕ್ಷೆ ಹೇದು ಒರಕ್ಕು ತೂಗಿ, ಬಿದ್ದು ಬಿದ್ದು ಓದಲೆ ಸುರುಮಾಡಿದ್ದು ಮೊನ್ನೆ ಮಂಗಳವಾರಂದಲೇ..
ಆದಿತ್ಯವಾರ ರಜೆ ಆದಕಾರಣ ಉದಿಯಪ್ಪಂದಲೇ ಮೊಬೈಲು ಅಂಬಗ ಅಂಬಗ ಗುರ್ರು ಗುರ್ರು ಹೇಳ್ತದು ಕೇಳ್ತು ಸತ್ಯಣ್ಣಂಗೆ.. ರಮ್ಯ ಎಂತದೋ ಕುಟು ಕುಟು ಒತ್ತಿ ಕರೆಲಿ ಮಡುಗುತ್ತೂ ಕಾಣುತ್ತು..
ಮಧ್ಯಾಹ್ನಪ್ಪಂಗ ಅದು ಕಿಣಿಕಿಣಿ ಅಪ್ಪಲೆ ಸುರುವಾತು ಮೇಗಂದ ಮೇಗಂದ..
ಅಡಿಗೆ ಸತ್ಯಣ್ಣಂಗೂ ಅನುಪ್ಪತ್ಯ ಇಲ್ಲದ್ದ ಕಾರಣ ರಜೆ ಇದಾ.. ಮನೇಲಿ ಇತ್ತಿಂದ. ಅಂದಾಜಿ ಆತು ಸತ್ಯಣ್ಣಂಗೆ..
ಸತ್ಯಣ್ಣ ಮಗಳತ್ರೆ ಹೇದಾ – ಮಗಳೋ!.. ಇನ್ನೊಂದರಿ ಫೋನು ಬಂದರೆ “ಚಂದಾದಾದರು ವ್ಯಾಪ್ತಿ ಪ್ರದೇಶದಿಂದ ಹೊರಗೆ ಇದ್ದಾರೆ” ಹೇದು ಮೆಸೇಜು ಕಳ್ಸು. ಮತ್ತೆ ಮಾಡ ಅವ°. 😀
~~
3.
ಅಂದು ಮೊಬೈಲು ಅಡಿಗೆ ಸತ್ಯಣ್ಣನ ಕೈಲಿ ಇದ್ದತ್ತು..
ಸತ್ಯಣ್ಣಂಗೆ ಆಟಿ ರಜೆ ಆದ ಕಾರಣ ಮನೆಲಿ ಇತ್ತಿದ್ದ..
ಮೊಬೈಲಿಂಗೆ ಒಂದು ಮೆಸೇಜು ಬಂತು – “ಅಭಿನಂದನೆಗಳು, ನಿಮ್ಮ ಮೊಬೈಲು ನಂಬ್ರ ಅದೃಷ್ಟ ವಿಜೇತರಲ್ಲಿ ಆಯ್ಕೆ ಆಗಿದೆ. ಒಂದು ಲಕ್ಷದ ಚಿನ್ನಾಭರಣವನ್ನು ನೀವು ಗೆದ್ದಿರುವಿರಿ. ನಿಮ್ಮ ಬಹುಮಾನವನ್ನು ಪಡೆಯಲು ನಿಮ್ಮ ಹೆಸರು, ವಿಳಾಸ, ಬ್ಯಾಂಕ್ ಖಾತೆ ವಿವರವನ್ನು ಸಂದೇಶವನ್ನು ಕಳಿಸಿರಿ”
ಅಡಿಗೆ ಸತ್ಯಣ್ಣಂಗೆ ಹೀಂಗೆರ್ಸೆಲ್ಲ ಪೇಪರು ಹೆಡ್ಡಿಂಗು ಓದಿ ಗೊಂತಿದ್ದು. ಕೂಡ್ಳೆ ರಿಪ್ಲೈ ಕಳ್ಸಿದ – “ತಳಿಯದ್ದೆ ಕೂರು, ಎನಗೊಂತಿದ್ದು ನಿಂಗಳ ಕೆಣಿ, ಆನಿಲ್ಲೆ ನಿಂಗಳ ಕೊಂಡಾಟಕ್ಕೆ” 😀
~~
4.
ಅಡಿಗೆ ಸತ್ಯಣ್ಣ UKಗೆ ಹೋಪಗ ಹತ್ರಾಣ ಸೀಟಿಲ್ಲಿ ಇದ್ದದು ತನ್ನ ಗುರ್ತದ ಹಳೇ ಗಿರಾಕಿಯೇ
ಹಳೇ ಗಿರಾಕಿ ಹೇದರೆ.. ಉದಿಯಪ್ಪಗ ಹೋಟ್ಳಿಂಗೆ ಬಕ್ಕು, ಹೊತ್ತೋಪಗ ಕಪ್ಪು ಬೋರ್ಡಿನಂಗಡಿಗೆ ಹೋಕು..
ಆದರೆ…,  ಒಂದು ಕಾಲಗಟ್ಟಲ್ಲಿ ಅದರ ಮನೆಲಿ ತಕರಾರು ಆಗಿ , “ಇನ್ನು ಮುಂದೆ ಆನು ಈ ಭೂಮಿಲಿ ಕುಡಿತ್ತೇ ಇಲ್ಲೆ”  ಹೇದು ಭಾಷೆ ಕೊಟ್ಟಿದು. ಮತ್ತೆ.. ಸತ್ಯಣ್ಣಂಗೆ ಗೊಂತಿದ್ದಾಂಗೆ.. ಕುಡಿತ್ತದು ಬಿಟ್ಟಿದು.
ವಿಮಾನ ಹೆರಟಪ್ಪಗ ಬೆಳಿಕಾಲಿನ ಕೂಚಕ್ಕಂಗೆ ಉರುಟು ಗ್ಲಾಸಿಲಿ ತಟ್ಟೆಲಿ ಮಡಿಗಿ ತೆಕ್ಕಂಡು ಬಪ್ಪದರ ಕಂಡಪ್ಪಗ ಬಾಯಿ ಚೆಪ್ಪೆ ಚೆಪ್ಪೆ ಅಪ್ಪಲು ಸುರುವಾತು ಆ ಮನುಷ್ಯಂಗೆ..
ಮೆಲ್ಲಂಗೆ ಕೈ ಒಡ್ಡುದರ ಕಂಡ ಸತ್ಯಣ್ಣ ಕೇಟ.. ಏ ನೀನು ಅಂದು ಹೆಂಡತಿಗೆ ಭಾಷೆ ಕೊಟ್ಟದು??!
ಆ ಮನುಷ್ಯ ಹೇತು – ಅದು ಭೂಮಿಲಿ ಕುಡಿತ್ತಿಲ್ಲೇಳಿ ಅಷ್ಟೇ. ನಾವೀಗ ಭೂಮಿಲಿ ಇಲ್ಲೆನ್ನೆ?!
ಸತ್ಯಣ್ಣಂಗೆ ಇದಕ್ಕಿನ್ನು ಎಂತ ಹೇಳಿಯೂ ಗುಣ ಇಲ್ಲೆ ಹೇದು ಕಂಡತ್ತು.., ತನ್ನಷ್ಟಕ್ಕೇ ಹೇಳಿಗೊಂಡ – “ಅನುಕೂಲ ಶಾಸ್ತ್ರ ಇದರ ನೋಡಿಯೇ ಸುರುವಾದ್ದಾಯ್ಕೋ?!” 😀
~~
5.
ಅಡಿಗೆ ಸತ್ಯಣ್ಣನ ಮನಸ್ಸಿಂಗೆ ಕೆಲವೊಂದು ಸಂಶಯಂಗೊ ಬಂದು ಕೂದುಗೊಂಡ್ರೆ ಅಷ್ಟು ಸುಲಭಕ್ಕೆಲ್ಲ ಪರಿಹಾರ ಆಗ..
ಸರಿಯಾಗಿ ಅರ್ತೋರು ಹೇಳಿರಷ್ಟೇ ಸತ್ಯಣ್ಣ ಒಪ್ಪುಗಷ್ಟೇ ಮತ್ತೆ..
UKಗೆ ಹೋಪಲೆ ವಿಮಾನಲ್ಲಿ ಕೂದ ಸತ್ಯಣ್ಣಂಗೆ ಎಡೆದಾರಿಲಿ ಉಚ್ಚು ಕಟ್ಟಿ ತಡೆಯ..
ಹತ್ರೆ ಕೂದೊಂಡಿದ್ದ ಪೊರ್ಬು ಹೇಳಿತ್ತು – ಹೋಗು ಮಾರಾಯ ಅಲ್ಲಿ ಅದಕ್ಕೆ ರೂಮು ಇದ್ದು.
ಸತ್ಯಣ್ಣ ಒಂದರಿ ಎಕ್ಕಳ್ಸಿ ಕನ್ನಟಿಲಿ ಹೆರ ನೋಡಿದ°.. ಹೇಳಿದಾ° – ಅಪ್ಪು ಮಾರಾಯಾ!..,  ನಾವು ಹೀಂಗೆ ಎತ್ತರಲ್ಲಿ ಹೋಪಗ ಇಲ್ಲಿಂದ ಉಚ್ಚೊಯಿದರೆ ಕೆಳ ಇಪ್ಪವರ ತಲಗೆ ಬೀಳದೋ?! 🙁
ಇದು ರೈಲಿನಾಂಗೆ ಅಲ್ಲ ಹೇದು ಸತ್ಯಣ್ಣಂಗೆ ಅರ್ಥಮಾಡ್ಸೆಕ್ಕಾರೆ ಅಲ್ಲಿದ್ದ ಕೂಸುಗೊಕ್ಕೂ ಸಾಕು ಸಾಕಾತು. 😀
~~
6.
ಶಾರದೆಯ ದೊಡ್ಡಣ್ಣನಲ್ಲಿ ಗ್ರಾಶಾಂತಿ ಹೋಮಡ (ಶಾರದೆಗೆ ಅಲ್ಲ, ಶಾರದೆಯ ದೊಡ್ಡಣ್ಣನ ಮನೆಯೋರಿಂಗೆ)
ಹತ್ರಾಣ ನೆಂಟ್ರಲ್ಲಿ ಅನುಪ್ಪತ್ಯ ಹೇಳಿಕೆ ಬಂದಮತ್ತೆ ಅಂದಿಂಗೆ ಎದ್ದಿಕ್ಕಿ ಹೆರಟಿಕ್ಕಿ ಹೋವ್ಸಲ್ಲ ಮರ್ಯಾದಿ – ಅಡಿಗೆ ಸತ್ಯಣ್ಣಂಗೆ ಗೊಂತಿದ್ದು.
ಹಾಂಗಾಗಿ ಅಡಿಗೆ ಸತ್ಯಣ್ಣ ಒಂದು ವಾರಂದ ಮದಲೇ ಒಂದರಿ ಭಾವನಲ್ಲಿಗೆ ಹೋದ್ದು ಬಿಡುವಿದ್ದ ದಿನ ನೋಡ್ಯೊಂಡು..,  ಹೇಂಗೆಲ್ಲಾ ಏರ್ಪಾಡುಗೊ, ಏನಾರು ಸಕಾಯ ಆಯೇಕೋದು ಕೇಳ್ಳೆ..
ಬಾಕಿದ್ದ ವಿಷಯ ಎಲ್ಲ ಮಾತಾಡಿ ಆತು. ಭಾವಯ್ಯ ದಕ್ಷಿಣೆ ವಿಷಯ ತೆಗದ
ಬಟ್ಟಕ್ಕಳ ವಿಷಯ ಆದರೆ ಬಟ್ಟಮಾವನತ್ರೇ ಕೇಳೆಕು, ಅಡಿಗೆಯೋರ ವಿಷಯ ಅಡಿಗೆಯೋರತ್ರೇ ಕೇಳಿರೆ ಸಮ ಹೇದು ಬಾವಯ್ಯ ಕೇಳಿದ° ಸತ್ಯಣ್ಣನತ್ರೆ- “ಅಡಿಗೆಯೋರ ದಕ್ಷಿಣೆ ಹೇಂಗೆ ಭಾವ”?
ಸತ್ಯಣ್ಣ° ಹೇದ° – “ಇದಾ ಭಾವ, ಅಡಿಗೆಯೋರು ಹೇಳಿರೆ ಎಂತ ಕೆಲಸ ಇಲ್ಲದ್ದಕ್ಕೆ ಒಂದು ಕೆಲಸ ಹೇದವ್ವು ಬತ್ತದಲ್ಲ. ದೇವರ ನೈವೇದ್ಯಕ್ಕೆ, ಬಟ್ಟಕ್ಕಳ ಹಸ್ತೋದಕಕ್ಕೆ ರುಚಿಶುಚಿಯಾದ ಅಡಿಗೆ ಮಾಡಿಕೊಡ್ತ ಜವಾಬುದಾರಿ ಇಪ್ಪವು. ಅಡಿಗೆಯೋರ ದಕ್ಷಿಣೆ ಹೇದು ಹೋಪಲಪ್ಪಗ ಕೈಲಿ ಸುರುಟಿ ಹಿಡ್ಕೊಂಡು, ಮಡಿಸಿ ಕೈಲಿ ಹಿಡುಶುತ್ಸಲ್ಲ. ಕ್ರಮಪ್ರಕಾರ ಕೊಡೆಕು ಅಡಿಗೆಯೋರ ಮರ್ಯಾದಿ. ಸಭೆಲಿ ದಕ್ಷಿಣೆ ಕಾಲಲ್ಲಿ ಬಟ್ಟಕ್ಕೊಗೆ ದಕ್ಷಿಣೆ ಕೊಡುವಾಗಳೇ ಸಭಗೆ ದೆನಿಗೋಳಿ ಮಣೆಲಿ ಕೂರ್ಸಿ ವೇಷ್ಟಿಉತ್ತರೀಯ, ಎಲೆಅಡಕ್ಕೆ ತೆಂಙಿನಕಾಯಿ ಮಡಿಗಿಯೇ ಕೊಡೆಕು. ಎಷ್ಟು ಹೇದು ಕೇಳಿರೆ ಅವ್ವು ಹೇಳುಗು, ಅದಕ್ಕೆ ಒಂದ್ರುಪ್ಪಾಯಿ ಸೇರ್ಸಿ ಕೊಟ್ರಾತು. ಹೇಳದ್ರೆ ಓ..ಇಂತಿಷ್ಟು ಮಡಿಗಿ ಕೊಟ್ಟು ಕಾಲು ಹಿಡುದಿಕ್ಕು”.
ಕುರೆಮುಂಡಿಲ್ಲಿ ಅಡಿಗೆ ಕೊಟ್ಟಗೆಲಿ ಕಾಣುತ್ತರೂ ಅಡಿಗೆಯೊಕ್ಕೆ ಇಷ್ಟು ಮರ್ಯಾದಿ ಇದ್ದಲ್ಲದೋ!!  ಹೇದು ಸತ್ಯಣ್ಣನತ್ರಂದ ಇಷ್ಟು ಕೇಳ್ಸಿಯಪ್ಪಗ ಬಾವಯ್ಯಂಗೆ ತಲೆ ತಿರುಗಿತ್ತು.
ಅಪ್ಪು ಭಾವ, ಅಡಿಗೆಯೋರಿಂಗೆ ಮರ್ಯಾದಿ ಮಾಡೆಕೆ” ಹೇದು ಹತ್ರೆ ಇತ್ತಿದ್ದ ಚೆಂಬು ನೆಗ್ಗಿದವ° ಕಾಲಿ ಮಾಡಿಕ್ಕಿಯೇ ಕೆಳ ಮಡಿಗಿದ° ಬಾವಯ್ಯ.  😀
~~
7.
ಪಾರು ಅತ್ತೆ ಮನೆ ಜೆಂಬಾರ ಹೇದಾದರೆ ತೆಂಕ್ಲಾಣ ತಮ್ಮಂದ್ರು ಬಾರದ್ದೆ ಇರ್ತವಿಲ್ಲೆ
ತೆಂಕ್ಲಾಣ ತಮ್ಮಂದ್ರು ಬಂದರೆ ಸುದರಿಕೆ ಮಾಡದ್ದೆ ಅಂತೆ ಕೂರ್ತವಿಲ್ಲೆ
ಅಂದು ಅನುಪ್ಪತ್ಯಲ್ಲಿ ಆದ್ದು ಅದುವೇ..
ಒಂದನೆ ಹಂತಿ ಬಳ್ಸಿದ ತೆಂಕ್ಲಾಣ ತಮ್ಮಂದ್ರು ಎರಡ್ಣೇ ಹಂತಿಗೂ ಬಳುಸಲೆ ನಿಂದವು
ಅಡಿಗೆ ಸತ್ಯಣ್ಣ ಎರಡ್ಣೇ ಹಂತಿಲಿ ಸುರೂಕರೇಲಿ ನೀರಚೆಂಬು ಹತ್ರೆ ಮಡಿಕ್ಕೊಂಡು ಕೂಯ್ದ ಊಟಕ್ಕೆ..
ಎರಡ್ಣೇ ಹಂತಿಗೆ ಹಸ್ತೋದಕ ಹಾಕಲೆ ಇಲ್ಲದ್ದ ಕಾರಣ ಆಚವ ಸುರುಮಾಡಿದನೋ ಉಂಬಲೆ ಹೇದು ಕಾವಲೆ ಇಲ್ಲೆ
ತುಪ್ಪ ಬಳ್ಸಿಯಪ್ಪದೆ ಅಡಿಗೆ ಸತ್ಯಣ್ಣ ಆಪೋಶನ ತೆಕ್ಕೊಂಡು ಸುರುಮಾಡಿದ ಬಾಳೆ ಒಂದೊಂದೇ ಕರೆಂದ ಬಲಿಗಿ ಕೂಡಿ ಉಂಬಲೆ
ಸಾರು ಬಳಿಸಿದವನೇ ಒಂದು ಹಂತಿ ಕೊಡಿ ವರೇಂಗೆ ಬಳ್ಸಿಕ್ಕಿ ವಿಚಾರಣಗೆ ಸಾರು ಸಾರು ಹೇದು ಸರ್ತ ನೆಡವಲೆ ಹೆರಟ°
“ಮದಾಲು ಅಶನ ಬರಲಿ, ಹಿಂದಂದ ನಿಂಗೊ ಬನ್ನಿ ಬಾವ” – ಹೇದು ಸೂಚನೆ ಕೊಟ್ಟ ಅಡಿಗೆ ಸತ್ಯಣ್ಣ
ಅದು ಅಪ್ಪಾದ್ದೆ., ಅಶನದ ಹೆಡಗೆ ಹಿಡುದ ತೆಂಕ್ಲಾಣ ಬಾವಂದ್ರು ಓ ಅಷ್ಟು ದೂರಂದಲೇ ಚೋರು ಚೋರು ಹೇಳಿಗೊಂಡು ಬಂದವು..
ಸತ್ಯಣ್ಣಂಗೆ ತಲೆಬೆಶಿ ಆತು. ಇದೆಲ್ಲಿಂದ ಈಗ ಚೋರು ಚೋರು ಆದ್ದು?!! ಮತ್ತೆ  ಹಿಂದೆ ತಿರುಗಿ ನೋಡಿರೆ.. ಅದು ತೆಂಕ್ಲಾಣ ಬಾವಂದ್ರ ಅಶನದ ಹೆಡಗೆ  😀
~~
8.
ರಮ್ಯಂಗೆ ಕೋಲೇಜು ಸುರ್ವಾಗಿ ಎರಡು ತಿಂಗಳು ಹತ್ರೆ ಹತ್ರೆ ಆತು..
ರಮ್ಯಂಗೆ ಪಳಪಳ ವಾಚು ಸಿಕ್ಕಿ ಎರಡು ತಿಂಗಳು ಹತ್ರೆ ಹತ್ರೆ ಆತು..
ರಮ್ಯಂಗೆ ಕಂಪ್ಯೂಟರು ತೆಗದು ಎರಡು ತಿಂಗಳು ಹತ್ರೆ ಹತ್ರೆ ಆತು..
ಅಡಿಗೆ ಸತ್ಯಣ್ಣನತ್ರೆ ಇರ್ಸು ಅದೇ ಹಳೇ ಪಲ್ಸರು, ಅದೇ ಹಳತ್ತು ಮಾರುತಿ800
ನೆಟ್ಟು ಗುರುಟ್ಯೊಂಡು ಅಪ್ಪನ ಹತ್ರೆ ಕೂದ ರಮ್ಯ ನೆಟ್ಟಿಲ್ಲಿಪ್ಪ ಹೊಸ ನಮೂನೆ ಮೊಬೈಲು ತೋರ್ಸಿ ಇದು ಲಾಯಕ ಇದ್ದು, ಬೇಗು ಹೀಂಗಿರ್ಸು ಲಾಯಕ ಇದ್ದು, ಜೀನ್ಸು ಪೇಂಟು, ತಲೆ ಬಾಚುತ್ತ ಹಣಿಗೆ ರೂ.500/ ಎಲ್ಲ ತೋರ್ಸಿ- “ನವಗೂ ಹೀಂಗಿರ್ಸು ತೆಗೆಕು ಅಪ್ಪಾ”  ಹೇಳಿತ್ತು ರಮ್ಯ.
ಅದರ ರೇಟು ಎಲ್ಲ ನೋಡಿಯಪ್ಪಗ ಅಡಿಗೆ ಸತ್ಯಣ್ಣ° ಹೇದ° – ಮಗಳೇ!, ಈ ಮಾರುತಿ ಕಾರು ಮಾತ್ರ ಎನ್ನದು, ಮಾರುತಿ ಕಂಪೆನಿ ಎನ್ನದಲ್ಲ., ಈ ಪಲ್ಸರು ಬೈಕು ಮಾತ್ರ ಎನ್ನದು, ಪಲ್ಸರು ಕಂಪೆನಿ ಎನ್ನದಲ್ಲ.
ರಮ್ಯ ಕಂಪ್ಯೂಟರ್ ಮುಚ್ಚಿ ಮಡಿಗೆ ಕೋಲೇಜು ಪುಸ್ತಕ ಬಿಡಿಸಿತ್ತು 😀
 ~~

 *** 😀 😀 😀 ***

6 thoughts on “‘ಅಡಿಗೆ ಸತ್ಯಣ್ಣ’ ಜೋಕುಗೊ – ಭಾಗ 21

  1. * ೧. ಹಲಸಿನ ಕಾಯಿ ಸಮಯಲ್ಲಿ ಎಲ್ಲಾ ಹಲಸುಮಯ ಅಪ್ಪದು ಲಾಯಕ ಆಯಿದು.ಸತ್ಯಣ್ನ ಅಡ್ಯನಡ್ಕದ ‘ ಹಲಸು ಮೇಳ’ಕ್ಕೆ ಹೋಯಿದನೋ ಹೇಂಗೆ ?
    ಎಲ್ಲಾ ‘ಎಪಿಸೋಡು’ ಗಳುದೇ ಲಾಯಕ ಆವುತ್ತಾ ಇದ್ದು.

  2. ಮೊಬೈಲಿಂಗೆ ವಿಜೇತರು ಹೇಳಿ ಬಂದದರ ಲೊಟ್ಟೆ ಹೇಳಿ ತಿಳ್ಕೊಂಬದು, ಹಲಸಿನಕಾಯಿ/ಹಣ್ಣು ಇದರದ್ದೇ ಅಡಿಗೆ ಉಂಡ ನಂತ್ರದ ನಿರ್ಧಾರ, ಅಡಿಗೆಯೋರಿಂಗೂ ಪುರೋಹಿತ ಭಟ್ಟಕ್ಕಳ ಹಾಂಗೆ ಮರ್ಯಾದೆ ಮಾಡೆಕ್ಕು ಹೇಳುವದು, ವಿಮಾನಲ್ಲಿ ಉಚ್ಚೊಯ್ಯೆಕ್ಕಾದಪ್ಪಗ ಬಂದ ಸಂಶಯಂಗೊ, ಕಾರು ಎನ್ನದು ಕಂಪೆನಿ ಎನ್ನದಲ್ಲ ಹೇಳುವದು ಎಲ್ಲವೂ ಒಂದಕ್ಕಿಂತ ಒಂದು ಲಾಯಿಕ ಆಯಿದು.
    ಮುಂದಾಣಕ್ಕೆ ಇನ್ನೊಂದು ವಾರ ಕಾದು ಕೂಬೊ° ಆಗದಾ

  3. ಎಲ್ಲವು ಲಾಯಿಕಾಯಿದು, ಅನುಕೂಲ ಶಾಸ್ತ್ರವೂ ವಿಮಾನದ ಟೋಯಿಲೆಟ್ಟುದೆ ಭಾರೀ ಲಾಯಿಕಾಯಿದು..

  4. (ಆದಿತ್ಯವಾರ ರಜೆ
    ಆದಕಾರಣ
    ಉದಿಯಪ್ಪಂದಲೇ ಮೊಬೈಲು ಅಂಬಗ
    ಅಂಬಗ
    ಗುರ್ರು ಗುರ್ರು ಹೇಳ್ತದು ಕೇಳ್ತು ಸತ್ಯಣ್ಣಂಗೆ..
    ರಮ್ಯ
    ಎಂತದೋ ಕುಟು ಕುಟು ಒತ್ತಿ
    ಕರೆಲಿ
    ಮಡುಗುತ್ತೂ ಕಾಣುತ್ತು)
    hehehe…
    super aayidu.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×