Oppanna.com

“ಗುರುನೆಲೆ ಗಟ್ಟಿ ಹಿಡ್ಕೊಳೆಕ್ಕು”-(ಹವ್ಯಕ ನುಡಿಗಟ್ಟು—9)

ಬರದೋರು :   ವಿಜಯತ್ತೆ    on   22/07/2014    11 ಒಪ್ಪಂಗೊ

“ಗುರುನೆಲೆ ಗಟ್ಟಿ ಹಿಡ್ಕೊಳೆಕ್ಕು” –(ಹವ್ಯಕ ನುಡಿಗಟ್ಟು—9)

ಸಾದಾರಣ ಹತ್ತು-ನಲುವತ್ತು ವರ್ಷ ಹಿಂದೆ ಊರಿಲ್ಲಿ ಒಂದೆರಡು ಮನೆವಕ್ಕೆ; ಕುಲಪುರೋಹಿತರತ್ರೆ ಏವದೋ ಕಾರಣಕ್ಕೆ ಹೋಕುರಕ್ಕಿಲ್ಲದ್ದೆ ಆತು. ಭಟ್ರ ಬೇರೆ ಬದಲಿಸಿದೊವು. “ಛೇ! ಎಂತಾದರೂ ಮನೆತನದ ಪುರೋಹಿತಕ್ಕೆ, ಬೇರೆಯವರ ಮಾಡ್ಳಾವುತಿತಿಲ್ಲೆ” ಶುದ್ದಿ ಗೊಂತಪ್ಪದ್ದೆ ಕೆಲಾವು ಜೆನೆ ಹೆರಿಯೋರು ಹೇಳಿಯೊಂಡವು. ಹಾಂಗೇ ಕೆಲಾವು ವರ್ಷ ಕಳಾತು.

ನಮ್ಮ ಈಗಾಣ ಪರಮಪೂಜ್ಯ ಶ್ರೀಸಂಸ್ಥಾನ ಪೀಠಕ್ಕೆ ಬಂದಪ್ಪಗ ಮಹಾಮಂಡಲ, ವಲಯ,ಸಮಿತಿಗೊ ಹೇಳಿ ರಚನೆ ಆತಿದ. ಶ್ರೀಸಂಸ್ಥಾನ ಊರಿಂಗೆ ಸವಾರಿ ಬಂದಿಪ್ಪಾಗ ವಲಯ, ಗುರಿಕ್ಕಾರಕ್ಕಳ ಸೇರ್ಸಿ ಮೀಟಿಂಗೂ ಮಾಡ್ತವನ್ನೆ!.ಹಾಂಗಿದ್ದ ಸಮೆಲಿ ಎಂತದೋ ಶುದ್ದಿ ವಿಮರ್ಶೆಮಾಡುವಗಳೋ ಈ ಭಟ್ರ ಬದಲಿಸಿದ ವಿಷಯ ಶ್ರೀಗುರುಗೊಕ್ಕೆ ಗೊಂತಾತು!. ಗೊಂತಪ್ಪದ್ದೆ “ಎಂತ..ಹೋಕುರಕ್ಕಿಲ್ಲದ್ದೆ, ಪುರೋಹಿತರ ಬದಲ್ಸಿದ್ದೊ!?. ಈ ಹೋಕುರಕ್ಕಿಲ್ಲೆ ಹೇಳ್ತ ಪ್ರಶ್ನೆಯೇ ಬಪ್ಪಲೆಡಿಯ. ಕುಲ ಪುರೋಹಿತರ ಅಂತೂ ನಮ್ಮ ಕೊಶಿವಾಶಿ ಬದಲುಸಲೇ ಆಗ. ಭಟ್ರ ಪೀಳಿಗೆಲಿಪ್ಪವೆಲ್ಲ ದೂರಲ್ಲಿ ಉದ್ಯೋಗಲ್ಲಿದ್ದವು,ಮುಂದೆ ಪುರೋಹಿತ ವೃತ್ತಿಗೆ ಜೆನ ಇಲ್ಲೇಳಿ ಆದರೆ; ಭಟ್ರ ಒಪ್ಪಿಗೆ ಮೊದಲೇ ಪಡಕ್ಕೊಂಡಿದ್ದು ಅವು ಸೂಚಿಸಿದವರ ಮಾಡಿಗೊಂಬದಕ್ಕೆ ಅಡ್ಡಿ ಇಲ್ಲೆ “. ಹೇಳ್ತ ಆದೇಶವನ್ನೂ ಕೊಟ್ಟಿಕ್ಕಿ; ’ಗುರು’ಹೇಳ್ವದರ,ಅರ್ಥವ್ಯಾಪ್ತಿ ವಿಶಾಲ. ಅಬ್ಬೆ,ಅಪ್ಪ, ಪುರೋಹಿತ,ವಿದ್ಯೆಕಲಿಶುವವ,ದೊಡ್ಡಣ್ಣ,ಸೋದರಮಾವ,ಗೆಂಡನ ಅಥವಾ ಹೆಂಡತಿಯ ಅಪ್ಪ, ನವಗೆ ರಕ್ಷಣೆ ಕೊಡುವವ ಹೀಂಗೇ ಈ ಶಬ್ಧದ ಉಪಯೋಗ ಕೆಲಾವು ವಿಷಯಲ್ಲಿದ್ದು.ಇಷ್ಟು ಜೆನವೂ ನಮ್ಮ ಗುರುನೆಲೆಂದ ನೋಡ್ತವು .ಕುಲಪುರೋಹಿತರು ಹೇಳಿರೆ, ಪೀಠಾಧಿಪತಿ ಸ್ಥಾನಕ್ಕೆ ಸಮ.ಆ ಒಂದು ನೆಲೆ ಸಡಿಲ ಅಪ್ಪಲಾಗ ಗಟ್ಟಿ ಇರೆಕು.” ಹೇಳ್ತ ಉಪದೇಶವನ್ನೂ ಕೊಟ್ಟವು. ಮತ್ತೆ… ಕ್ರಮೇಣ ಆ ಕೂಟಕ್ಕೆ ಅತ್ತಿತ್ತೆ ರಾಜಿ ಆಗಿ ಹೋಕುರಕ್ಕಾತು  ಹೇಳುವೊಂ.

ಅಪ್ಪು.., ಗುರುನೆಲೆಯ ಏವದೇ ಕಾರಣಕ್ಕೂ ನಾವು ಸಡಿಲ ಅಪ್ಪಲೆ ಬಿಡ್ಳಾಗ. ಗುರುಹೆರಿಯೊವು ಹೇಳ್ತ ಹೇಳಿಕೆಮಾತು ಒಳ್ಳೆ ಅರ್ಥಗರ್ಭಿತ ಅಂತರಾಳದ ಮಾತು!. ನಿತ್ಯ-ನೈಮಿತ್ತಿಕಲ್ಲಿ ಸದಾ ಉಪಯೋಗುಸುವ ಮಾತು

.ಎಂತ ಹೇಳ್ತಿ?

~~~***~~~~

11 thoughts on ““ಗುರುನೆಲೆ ಗಟ್ಟಿ ಹಿಡ್ಕೊಳೆಕ್ಕು”-(ಹವ್ಯಕ ನುಡಿಗಟ್ಟು—9)

  1. ಹರೇರಾಮ, ಅಪರೂಪಲ್ಲಿ ಉಡುಪುಮೂಲೆ ಅಪ್ಪಚ್ಚಿ ಸಿಕ್ಕಿ ಪ್ರೋತ್ಸಾಹದ ಮಾತಾಡಿದ್ದು ಸಂತೋಷಾತು .

  2. ವಿಜಯಕ್ಕ,ಹರೇ ರಾಮ,“ ಗುರೋರಧಿಕ೦ ನಾಸ್ತಿ.” ಹೇಳುವ ಸೂಕ್ತಿ ಸ೦ಸ್ಕೃತಲ್ಲಿಯುದೇ ಇದ್ದನ್ನೇ. ಅಷ್ಟು ಮಾ೦ತ್ರವೇ ಅಲ್ಲ ` ಗುರುರ್ದೇವೋ ಭವ ”,ಗುರುಃ ಸಾಕ್ಷಾತ್ ಪರ೦ ಬ್ರಹ್ಮ ತಸ್ಮೈ ಶ್ರೀ ಗುರವೇ ನಮಃ” ಹೇಳ್ವದು ನಮ್ಮ ಸ೦ಸ್ಕೃತಿ.ಹಿ೦ದಿಯ ಸ೦ತ ಕವಿಯೊಬ್ಬನ ಹತ್ರೆ ಆರೋ ಒಬ್ಬ ಕೇಳಿದನಡ.“ ದೇವರನ್ನೂ, ಗುರುವನ್ನೂ ನಿನ್ನ ಎದುರು ನಿಲ್ಲಿಸಿರೆ, ನೀನು ಆರಿ೦ಗೆ ಮಾದಲು ಹೊಡಾಡುತ್ತೇ? .”ಹೇದು.ಅಷ್ಟಪ್ಪಗ ತೆಗದ ಬಾಯಿಗೆ ಅವ° “ಗುರುವಿ೦ಗೆ” ಹೇದು ಉತ್ತರ್ಸಿಕ್ಕಿ. ಏ೦ತಕೆ ಹೇದರೆ ದೇವರ ಜ್ಞಾನವನ್ನು ಕೊಟ್ಟವ ಗುರುವಲ್ಲದೋ? ಹೇದನಡಾ.ಎಷ್ಟು ಸತ್ಯವಾದ ಮಾತಿದು.ಹಾ೦ಗಾಗಿಯೇ ನಮ್ಮ ಎಲ್ಲ ಧಾರ್ಮಿಕ- ಸಾ೦ಸ್ಕೃತಿಕ ಕಾರ್ಯಲ್ಲಿ ಮದಾಲು ಗುರುಹಿರಿಯರ ಕಾಲುಹಿಡಿವ ಪದ್ಧತಿ ರೂಢಿಲಿಪ್ಪದು.ನಮ್ಮ ಮನೆಲಿ ಯಾವದೇ ಪೂಜೆಗೆ ಕೂಬ್ಬಾಗ ಗುರು ಹೆರಿಯರ ಅಭಿವ೦ದನೆಯ ಮದಾಲೇ ಮಾಡ್ಸತ್ತವನ್ನೆ ಪುರೋಹಿತ ಭಟ್ಟಕ್ಕೊ.`ಪೂಜಗೆ ಸುರು ಮಾಡೆಕಾರೆ ಪ್ರಥಮತಃ “ಓ೦ ಹ್ರೀ೦ ಪರಮಾತ್ಮಾSದ್ಯಶೇಷ ಗುರು ಪಾರ೦ಪರ್ಯ ಕ್ರಮೇಣ ಗುರುಪಾದಾ೦ಬುಜೌ ಯವತ್ತಾವತ್ತೌ ಪ್ರಣೌಮಿ.” ಹೇದು ಗುರು ಪರ೦ಪರಗೆ ಶಿರಸಾ ನಮಸ್ಕಾರ ಹಾಕುವದು.ಹೀ೦ಗೆ ಈ ಎಲ್ಲ ಆಚಾರ ವಿಚಾರ೦ಗಳ ಸೂಕ್ಷ್ಮಲ್ಲಿ ಗಮನಿಸಿರೆ ನಿ೦ಗಳ ಈ ಮಾತು ಅಕ್ಷರಶಃ ಸತ್ಯ.ನಿ೦ಗಳ ಈ ಸತ್ಸ೦ಗಕ್ಕೆ ಹೃತ್ಪೂರ್ವ ಧನ್ಯವಾದ೦ಗೊ.ನಮಸ್ತೇ.

  3. ಹರೇರಾಮ, ’ಗುರುನೆಲೆ ಇಲ್ಲ್ಯಾಂಗ್ಲಿ ಒರುನೆಲೆ ಇಲ್ಲ’ ಅಪ್ಪ ಹೇಳ್ವದು ಆನೂ ಕೇಳಿದ್ದೆ

  4. ಅಕ್ಕು ದೊಡ್ಡತ್ತೆ, ಗುರುನೆಲೆ ಗಟ್ಟಿ ಹಿಡುಕ್ಕೊಳ್ತೆ.

  5. ಗುರು ನೆಲೆ ಇಲ್ಲಾಂಗ್ ಒರು ನೆಲೆ ಇಲ್ಲ- ಮಲಯಾಳದ ಗಾದೆ

  6. ಮಾಲಕ್ಕ ಹೇಳುವ ಮಾತು ಸರಿ. ಇದು ಎಷ್ಟೋ ಸರ್ತಿ ಪೀಠಂದ ಬಂದ ಮಾತುದೇ. ನರಸಿಂಹಣ್ಣ , ‘ಗುರುವಿನ ಗುಲಾಮನಾಗುವತನಕ’ ಶಾಲೇಲಿ ಕಲ್ತ ವಚನ ನೆಂಪಾತಲ್ಲೊ? ಧನ್ಯವಾದ .

  7. ‘ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ’.

  8. ಅಪ್ಪು ಗೋಪಾಲ ಶಂಕರಾಚಾರ್ಯ ಪೀಠಂದ ಮತ್ತಾಣ ಅವಕಾಶ ನಮ್ಮ ಆಚಾರ್ಯರೆ ಹೇಳುಗು ಹೆರಿಯೊವು.

  9. ಆಚಾರ್ಯ ಸ್ಥಾನ [ಗುರು] ದೊಡ್ಡದು ಹೇಳಿ ಅಪ್ಪ ಹೇಳಿದ್ದು ನೆನಪಾತು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×