Oppanna.com

ಗುಲು ಗುಗ್ಗುಲು ಗುಗ್ಗುಲು

ಬರದೋರು :   ಚೆನ್ನೈ ಬಾವ°    on   20/08/2012    11 ಒಪ್ಪಂಗೊ

ಚೆನ್ನೈ ಬಾವ°

ಬೋಜರಾಯನಲ್ಲಿ ಕಾಳಿದಾಸ° ಫೇಮಸ್, ನಮ್ಮ ಬೈಲಿಲಿ ಬೋಸಬಾವ° ಫೇಮಸ್.  ಇಬ್ರೂ ನಮ್ಮ ಬೈಲಿಂಗೆ ಹತ್ರವೆ.

ಬೋಸಬಾವನೂ ಬೈಲಿಲಿ ಕಾಣದ್ದೆ ಕೆಲವು ಸಮಯ ಆತು, ಕಾಳಿದಾಸನೂ ಬೈಲಿಂಗೆ ಬಾರದ್ದೆ ಹಲವು ಸಮಯ ಆತು.

ಅವ° ಮದಲೊಂದರಿ ನಮ್ಮ ಬೈಲಿಂಗೆ ಬಂದಿಕ್ಕಿ ಹೋದ್ದು ನೆಂಪಿದ್ದೋ… – ಇಲ್ಲಿದ್ದು

ಅದ್ಭುತ ಸಾಮರ್ಥಿಗೆ ಇಪ್ಪ ಕವಿ, ಕಾಳಿದಾಸ ಹೇಳಿ ಎಲ್ಲೋರಿಂಗೂ ಗೊಂತಿಪ್ಪದು. ಅವ° ಆಸುಕವಿತೆಗೂ ಫೇಮಸ್,  ಬೋಸುಕವಿತೆಗೂ ಫೇಮಸ್. ಎಲ್ಲದರಲ್ಲಿಯೂ ಒಂದೊಂದು ಚಮತ್ಕಾರಂಗಳ ತೋರ್ಸುತ್ತ° ಅಪ್ಪೋ!

ನಿನ್ನೋ ಓ ಅಲ್ಲಿಗೆ ಹೋಗಿತ್ತೆ ಒಂದು ಜೆಂಬಾರಕ್ಕೆ. ಅಲ್ಲಿ ಇತ್ತಿದ್ದ° ಕಾಳಿದಾಸ°. ಎಂತ ಮಾರಾಯಾ ಹೇಂಗಿದ್ದೆ ಹೇಳಿ ಬೈಲ ಪರವಾಗಿಯೂ ವಿಚಾರ್ಸಿಗೊಂಡೆ. ಮದಾಲಾಣಾಂಗೆ ಇಲ್ಲೆ ಭಾವ°… ಕಾಳಿದಾಸಂಗೂ ಪ್ರಾಯ ಆತು. ತಲೆ ಹಣ್ಣಾದ್ದು, ಗೆಡ್ಡ ಬೆಳಿಯಾದ್ದು ಕಂಡತ್ತು. ‘ಏನೆಡಿತ್ತಿಲ್ಲೆ’ ಹೇದು ಹೇಳಿಗೊಂಡ°, ಅಪರೂಪ ಜೆಂಬ್ರಕ್ಕೆ ಹೋವ್ಸಡ.

ಹೀಂಗೆ ಮಾತಾಡುವಾಗ ಹಳತ್ತೊಂದರ ನೆಂಪು ಮಾಡಿಗೊಂಡ°.

ಏವತ್ರಾಣಾಂಗೆ ಬೋಜರಾಜಂಗೆ ಒಂದಿನ ಪಿಕ್ರು ಎಳಗಿತ್ತಡ. ಸರಿ.., ಕವಿಗೊಕ್ಕೆ ಒಂದು ಸವಾಲು ಬಿಟ್ಟನುದೆಡಾ- ಅಕೇರಿಸಾಲು “ಗುಳುಗುಳು ಗುಗ್ಗುಳು” ಬತ್ತಾಂಗೆ ಪದ್ಯ ಹೇಳಿ ಹೇದು.

ನಮ್ಮ ಬೈಲಿಲಿ ಇತ್ತೀಚೆಗೆ ಸುರುವಾದ ಸಮಸ್ಯಾಪೂರಣ ಸ್ವಾರಸ್ಯದ ಹಾಂಗೆ ಅವ್ವವ್ವು ಬರವಲೆ ಸುರುಮಾಡಿದವು. ಕೆಲವು ಎನ್ನಾಂಗೆ ಕೆಕೆಪೆಕೆಯೂ ಇದ್ದತ್ತು ಬಿಡಿ. ಎಂತಾರು.. ನಮ್ಮ ಬೈಲಿಲಿ ಮುಳಿಯಭಾವ ಅಕೇರಿಗೆ ಬಂದು ರೈಸುತ್ತ ಹಾಂಗೆ, ಈ ಜೆನವೂ ಅಕೇರಿಗೆ ಸಭಗೆ ಬಂದ.

ಚೋದ್ಯ ಹೇಳುವಾಗ ಈ ಜೆನ ಇರ ಸಭೆಲಿ. ಮತ್ತೆ ಬಂದಪ್ಪಗ ಮತ್ತೆ ಮುದದಿಂದ ಹೇಳಿ ಎಂತ ಕತೆ ಹೇದು ಸುರುವಿಂದ ಹೇಳೆಕು. ಇವಂಗೆ. ನಮ್ಮಲ್ಲಿ ಕೆಲವು ಜೆನ ಕೇಳುಗು ಇವ° ಎಂತ ನಿತ್ಯ ಹೊಸ ಮದಿಮ್ಮಾಯನೋ.. ಪ್ರತಿಸರ್ತಿಯೂ ಸಮ್ಮಾನ ಮಾಡ್ಳೆ!!

ಇರ್ಲಿ ಬಿಡಿ ..

ಕಾಳಿದಾಸ, ಆಸುಕವಿ ಹೇಳಿದ ಪದ್ಯ ಏವುದಡಾ ಗೊಂತಿದ್ದೋ…
ಜಂಬೂ ಫಲಾನಿ ಪಕ್ವಾನಿ ಪತಂತಿ ವಿಮಲೇ ಜಲೇ ।
ಕಪಿಕಂಪಿತಶಾಖಾಭ್ಯಃ ಗುಲುಗುಗ್ಗುಲುಗುಗ್ಗುಲು ॥

ಎಲ್ಲೋರು ಕೈತಟ್ಟಿದವಡ. ಹೆಗಲಿಂಗೆ ಶಾಲು ಸಂಮಾನವೂ ಆತು. (ಈ ಸರ್ತಿ ಉಂಗುರ, ಚೈನು ಸಿಕ್ಕಿದ್ದಿಲ್ಲೆಡ ಆತಾ!)

ಆತಿದು…ಇದೀಗ ನಾವಿಲ್ಲಿ ಇಷ್ಟು ಹೇಳಿಕ್ಕಿ ತಳಿಯದ್ದೆ ಕೂದರೆ ಡಾ.ಮಹೇಶಣ್ಣ ಕೇಳದ್ದೇ ಬಿಡುಗೊ ‘ಅಸ್ಯ ಅರ್ಥಃ ಕಃ?’ ಹೇಳಿ.

ಹಾಂಗಾಗಿ ನಿನ್ನೆ ಕಂಡ ಕಾಳಿದಾಸನತ್ರಯೇ ಕೇಳಿಗೊಂಡೆ –

ಯದಾ ಕಪಿಕಂಪಿತ ಶಾಖಾಭ್ಯಃ ಪಕ್ವಾನಿ ಜಂಬೂ ಫಲಾನಿ ವಿಮಲೇ ಜಲೇ ಫತಂತಿ, ತದಾ ಗುಲುಗುಲುಗುಗ್ಗುಲು ಗುಗ್ಗುಲು ಇತಿ ಶಬ್ದಂ ಭವತಿ. ಇತಿ.

[ಕೊಳದ ಬುಡದಲ್ಲಿದ್ದ ಜಂಬೂಮರದ ಗೆಲ್ಲಿನ, ಮಂಗಂಗೊ ಆಡಿಸಿಯಪ್ಪಗ ಅದರಲ್ಲಿತ್ತಿದ್ದ ಪಕ್ವವಾದ ಫಲಂಗೊ ನೀರಿಂಗೆ ಬಿದ್ದು ‘ಗುಳುಗುಳುಗುಗ್ಗುಳು ಗುಗ್ಗುಳು’ ಹೇಳಿ ಶಬ್ದ ಆತು.]

ಯಬ್ಬೋ…ಅವನೇ!! … ಅಪ್ಪೋ!!.

11 thoughts on “ಗುಲು ಗುಗ್ಗುಲು ಗುಗ್ಗುಲು

  1. ಜ೦ಬ್ಮೂ ನೇರಳೆ ಹಣ್ಣು ನೀರೀ೦ಗೆ ಬಿದ್ದರೆ ‘ಪುಳು ಪುಳು’ ಹೇಳಿ ಕೇಳ್ತನ್ನೆ!

    1. ಅಂಬಗ ಈಗ ಕೆಮಿ ಸರಿ ಇಲ್ಲದ್ದು ಆರಿಂಗಪ್ಪ !!

  2. ಹ್ಹೆ ಹ್ಹೆ ಹ್ಹೆ…. ಯೆನ್ನ ತಲೆಗೆ ಹಿಡಿದ ಗೆದ್ದಲು ಬಿಟ್ಟಿತದಾ..ತಲೆ ಪೂರ್ಣ ಈಗ ಗುಲುಗುಗ್ಗುಲುಗುಗ್ಗುಲು ಆವ್ತಾ ಇದ್ದು.. ಲಾಯ್ಕಾಯ್ದು ಭಾವಯ್ಯಾ. ಕಾಳಿದಾಸ೦ಗೆ ಮತ್ತೆ ನಿಮಗೆ ಯೆನ್ನ ಕಡೆಯಿ೦ದ ಒ೦ದು ಮೂಟೆ ಜ೦ಬುನೇರಳೆ.

  3. ಕಾಳಿದಾಸನ ಸಮಸ್ಯೆಗಳ ಪೂರಣದ ಹಾಂಗೆ ನಮ್ಮ ಬೈಲಿಲೂ ಬತ್ತು ಇದಾ.ಹಳೆ ಸಮಸ್ಯೆಗೊ ಹೀಂಗೆ ಬರುತ್ತಾ ಇರಲಿ.

  4. ವಿವರಣೆ ಲಾಯಿಕ ಆಯಿದು.
    ಹೀಂಗಿಪ್ಪ ಸಂಗ್ರಹಂಗೊ ಇದ್ದರೆ ಇನ್ನೂದೆ ಬರಲಿ

  5. ಭೋಜರಾಜನನ್ನೂ ಕಾಳಿದಾಸನನ್ನೂ ಕಂಡಿಕ್ಕಿ ಬಂದ ಚೆನ್ನೈಭಾವ ಧನ್ಯ. ಗುಗ್ಗುರು ಹಿಡುದ ಮನಸ್ಸಿಂಗೆ ಗುಲು ಗುಗ್ಗುಲು ಶ್ಲೋಕ ಕೊಶಿ ಕೊಟ್ಟತ್ತು.

  6. ಒಳ್ಳೆ ಸ್ವಾರಸ್ಯ ಇದ್ದು ಭಾವ. ಅ೦ದು ಕೊಡಪ್ಪಾನ ಬಿದ್ದ ಶಬ್ದ, ಇ೦ದು ಜ೦ಬುನೇರಳೆ ನೀರಿ೦ಗೆ !

  7. ಯೆಬೇ…ಇದೆಂತರ ಸಮಸ್ಯೆ , ಇದರಂದ ದೊಡ್ದ ದೊಡ್ಡ ಸಮಸ್ಯೆಗೊಕ್ಕೆ ಚೊಕ್ಕ ಪರಿಹಾರ ಎನ್ನತ್ರೆ ಇದ್ದು ಹೇದ ಬೋಸಭಾವ, ಓ ಮನ್ನೆ ಅಕ್ಕನಲ್ಲಿ ಸಮ್ಮಾನಕ್ಕೆ ಬಂದಿಪ್ಪಗ.
    ಅಲ್ಲ, ಆನು ಕಾಳಿದಾಸನ ಪರಿಹಾರ ಓದಿ ಮೂಗಿನ ಮೇಲೆ ಕೈ ಮಡಗಿದ್ದದೆ. ಚೆನ್ನೈಭಾವ ಬಿಡುಸಿ ಅರ್ಥ ವಿವರಣೆ ಕೊಡದ್ದರೆ ಇದು ಅರ್ಥವೇ ಆವುತಿತ್ತಿಲೆ…ಯಬ್ಬೋ..!!!

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×