Oppanna.com

ಕಂಡದ್ದೆಲ್ಲ ಬೇಕು ಕುಂಡಿ ಬಟ್ಟಂಗೆ..

ಬರದೋರು :   ಚೆನ್ನೈ ಬಾವ°    on   19/06/2012    11 ಒಪ್ಪಂಗೊ

ಚೆನ್ನೈ ಬಾವ°

ಇಂದು ಆದಿತ್ಯವಾರ. ರಜೆ ಅಲ್ಲದೋ ನಿಂಗೊಗೆ – ಹೇಳಿತ್ತು ಉಷಕ್ಕ.
ಅಪ್ಪು. ಎಂತಾಯೇಕು ಅದಕ್ಕೆ – ಯಾವತ್ರಾಣ ಹಾಂಗೆ ಕೇಟ° ಕೇಚಣ್ಣ.
ಎಂತಿಲ್ಲೆ..,  ಹೊತ್ತೋಪಗ ಎಲ್ಲ್ಯಾರು ಹೆರ ಹೋಗ್ಯಂಡು ಬಪ್ಪನೋ –  ಉಷಕ್ಕನ ವಾರವಾರದ ರಾಗ.
ಉಷಕ್ಕ ಹೇಳುವದು, ಕೇಚಣ್ಣ ಕೇಳುವದು ಇದು ವಾರ ವಾರ ಇಪ್ಪದೇ. ಆದರೆ ವಾರವಾರವೂ ಕೇಚಣ್ಣಂಗೆ ಅವನ ಎಂತಾರು ಕೆಲ್ಸ ಇದ್ದೇ ಇರ್ತು. ಹೆಂಡತಿಯ ಕರ್ಕ್ಕೊಂಡು ತಿರುಗಲೆ ಹೋಪಲ ಒಂದು ಆದಿತ್ಯವಾರವೂ ಪುರುಸೊತ್ತಪ್ಪಲಿಲ್ಲೆ. ಸರಿ., ಇಂದು ಬೇರೆ ಎಲ್ಲವನ್ನೂ ರದ್ದು ಪಡಿಸಿ ಹೆಂಡತಿಯೊಟ್ಟಿಂಗೆ ಪೇಟಗೆ ತಿರುಗಲೆ ಹೋಪದು ಹೇಳಿ ಗಟ್ಟಿ ಮನಸ್ಸಿಲ್ಲಿ ನಿಘಂಟು ಮಾಡಿ ಆತು.
ಇದಾ ಹೊತ್ತೋಪಗ ಐದು ಗಂಟಗೆ ಹೆರಟಾಯೆಕು. ತಡವು ಮಾಡಿರೆ ಆತಿಲ್ಲೆ. ಬೇಗ ಬಂದಿಕ್ಕಿ ಮತ್ತೆ ಎನ ಕೆಲಸ ಇದ್ದು. ಕಂಡೀಶನ್ ಆತು. ಉಷಕ್ಕಂಗೆ ಗೊಂತಿಲ್ಲ್ಯೋ ಈ ಕೇಚಣ್ಣಂಗೆ ಎಂತರ ಕೆಲಸ ಇಪ್ಪದು. ಅಪೀಸು ಬಿಟ್ಟಿಕ್ಕಿ ಮನಗೆ ಬಂದ್ರೆ ಮತ್ತೆ ಕಂಪ್ಯೂಟರೇ ಪ್ರಪಂಚ. ಎಂತರ ಕುಟ್ಟಿಗೊಂಡು ಇರ್ತವೋ ಅದರಲ್ಲಿ ಹಾಂಗೊಂದು. ಹ್ಮ್ಮ್..

ಕೇಚಣ್ಣಂಗೆ ಹೆರಡ್ಳೆ ಎಂತಾಯೇಕು. ಕಾಲಿಂಗೂ ಕೈಗೂ ಸುರ್ಕೊಂಡು ಆಗಳೇ ರೆಡಿ. ಆತೋ, ಆತೋ, ಹೆಮ್ಮಕ್ಕಳ ಒಟ್ಟಿಂಗೆ ಹೆರಡುಸ್ಸು ಹೇಳಿರೆ ರಾಮಾ.. ಎಷ್ಟು ಹೊತ್ತು ..ಎಷ್ಟು ಹೊತ್ತು. ಉಷಕ್ಕಂಗೆ ಇದು ಬೇಜಾರ ಏನೂ ಇಲ್ಲೆ. ಏವತ್ತೂ ಕೇಳಿ ಕೇಳಿ ಅಭ್ಯಾಸ ಆಯ್ದು. ಅದು ಕೇಳದ್ರೆ ಈ ಜನ ಮನೇಲಿ ಇದ್ದನೋ ಇಲ್ಲ್ಯೋ ಹೇಳುವದೇ ಅನುಮಾನ ಹೇಳ್ವಷ್ಟು ಅಭ್ಯಾಸ ಆಯ್ದು.

ಇಲ್ಲೇ ಕೂಡಿ ಅಲ್ಲೇ ಕೂಡಿ ಹೇಳಿ ಅತ್ತಿತ್ತೆ ನೋಡಿಗೊಂಡು ಶಾಪಿಂಗ್ ಸೆಂಟರ್ ಒಳ ಹೊಕ್ಕಿತ್ತು. ನಾಕೈದು ಬಗೆ ಉಷಕ್ಕಂಗೆ ಬೇಕಾದ್ದರ ತೆಗದೂ ಆತು. ಅಷ್ಟಪ್ಪಗ ಆಚ ಅಂಗಡಿಲಿ ಕರಪತ್ರ ಅಂಟಿಸಿಯೊಂಡೂ ಕರಪತ್ರ ಹಂಚಿಯೊಂಡೂ ಕಂಡತ್ತು. ಎಂತರ ನೋಡಿಕ್ಕಿವೋ ಹೇಳಿ ಹತ್ರೆ ಹೋತು. ಕರಪತ್ರ ಒಂದು ಇವರ ಕೈಗೂ ಸಿಕ್ಕಿತ್ತು.

‘ಚಪಾತಿಕಲ್ಲು’ ಅಲ್ಲ, ಚಪಾತಿ ಮಾಡುವ ಮೆಶಿನು. ಉಂಡೆ ಅದರಲ್ಲಿ ಮಡುಗಿ ಒತ್ತಿರೆ ಆತು. ಲಟ್ಟುಸುತ್ತ ಕೆಲಸ ಇಲ್ಲೆ , ಅರ್ಚುತ್ತ ಕೆಲಸ ಇಲ್ಲೆ. ಬಹುಪಯೋಗಿ. ಚಪಾತಿ ಮಾಡ್ಳೂ ಆವ್ತು, ಪೂರಿ ಮಾಡ್ಳೂ ಆವ್ತು. ಎಂತಕೆ ಹಲಸಿನಕಾಯಿ ಅಪ್ಪಗ ಹಪ್ಪಳ ಮಾಡ್ಳೂ ಉಪಯೋಗ ಮಾಡ್ಳಕ್ಕು ಹೇಳಿ ವರ್ಣಿಸಿತ್ತು – ಅಂಗಡಿ ಜೆನ. ಉಷಕ್ಕ ನಾಲ್ಕೈಂದು ಸತ್ತಿ ಮುಟ್ಟಿ ಮುಟ್ಟಿ ನೋಡಿತ್ತು. ಓಯಿ., ಇದರ ತೆಗವನೋ..? ಸುಲಬ ಇದ್ದು. ದಿನಾ ತೆಳ್ಳವು ಮಾಡ್ತದಕ್ಕೆ ಒಂದೊಂದರಿ ಚಪಾತಿ ಪೂರಿ ಹೇಳಿ ಮಾಡ್ಳಕ್ಕನ್ನೆ ಸುಲಬಲ್ಲಿ ಇದು ಇದ್ದರೆ. ಈ ಬೇಸಗೆಲಿ ಸೆಕಗೆ ಅಡಿಗೆ ಕೋಣೆಲಿ ಬೆಗರು ಹರ್ಶಿಗೊಂಡು ಲಟ್ಟುಸ್ಯೋಂಡು ಕೂಬಲೂ ಎಡಿತ್ತಿಲ್ಲೆ.  ಹಾ°.. ಅಪ್ಪು ಕಂಡತ್ತು ಕೇಚಣ್ಣಂಗೆ. ಸರಿ., ಚಪಾತಿ ಪೂರಿ ಮಾಡಿಕೊಡ್ತರೆ ಏಕೆ ಆಗದ್ದೆ., ಇರ್ಲಿ ಹೇಳಿ ತೀರ್ಮಾನ ಆತು. ಎಷ್ಟು ರೇಟು ಕೇಳಿರೆ – ‘ಮೂರುಸಾವಿರದ ಆರ್ನೂರು’  ಭಟ್ರೆ, ನಿಮಿಗೆ ಬೇಕಾದರೆ ನೂರು ರೂಪಾಯಿ ಡಿಸ್ಕೌಂಟು ಮಾಡಿ ಮೂರುಸಾವಿರದ ಐನ್ನೂರಕ್ಕೆ ಮಾಡಿ ಕೊಡುವ ಹೇಳಿತ್ತು ಅಂಗಡಿ ಜೆನ. ಹೋ.. ಎನ್ನ ನೋಡಿ ನೂರು ರೂಪಾಯಿ ಕಮ್ಮಿ ಮಾಡಿತ್ತನ್ನೆ , ಇರ್ಲಿ ಅಂಬಗ ಹೇಳಿ ಪೇಕು ಮಾಡಿ ಬಿಲ್ಲು ಹಾಕ್ಸಿ ಆತು. ಅಷ್ಟು ಪೈಸೆ ನಗದು ಕೈಲಿ ಹಿಡ್ಕೊಂಡಿರ್ತೋ ಎಂತ ಸಾಮಾನ್ಯ ಆರಾರು ಯೇವತ್ತೂ ! , ಅಂದರೂ, ಇದ್ದನ್ನೆ ಉದ್ದುತ್ತ ಕಾರ್ಡು. ಅದರಂದಲ್ಲೆ ಪೈಸೆ ಕಟ್ಟಿ ಆತು, ಮನಗೆ ಹೊತ್ತೊಂಡು ಬಂದು ಆತು. ಇದು ನಡದ್ದದು ನಿನ್ನೆ ಮನ್ನೆ ಅಲ್ಲ, ಮೂರುವರ್ಷ ಮದಲೆ. ಈ ವರೇಗೆ ಅದರಲ್ಲಿ ಚಪಾತಿ ಮಾಡಿದ್ದದು ಒಂದು ಸರ್ತಿ. ಮತ್ತೆ ಅದರ ಅದೇ ಪೆಟ್ಟಿಗೆಲಿ ಪೇಕು ಮಾಡಿ ಮೇಗೆ ಅಟ್ಟಲ್ಲಿ ಮಡಿಗಿದ್ದು.
“`

ಆಚ ವರ್ಷ ಹೀಂಗೆ ಒಂದರಿ ಪೇಟಗೆ ಹೋದಿಪ್ಪಗ, ಒಂದಿಕ್ಕೆ ಡಿಸ್ಕೌಂಟು ಸೇಲ್ ಹೇಳಿ ಕಂಡತ್ತು . ಐದು ಸಾವಿರಕ್ಕೆ ಎರಡು ಪಟ್ಟೆ ಸೀರೆ. ಹೋ..ಪಟ್ಟೆ ಸೀರೆ. ಅಲ್ಪ ಪೈಸೆ ಕೊಟ್ಟು ತೆಗವದಕ್ಕಿಂತ ಎಲ್ಯಾರು ಮದುವೆ, ಉಪ್ನಾನ, ಪೂಜೆಗೊಕ್ಕೆ ಹೋಪಲೆ ಹೀಂಗಿರ್ತ್ಸು ಇದ್ದರೆ ಸಾಕು, ಒಳ್ಳೆದು ಹೇಳಿ ತೆಗದತ್ತು, ಮನಗೆ ತಂತು. ಮನೆ ಕೆಲಸ  ಇತ್ಯಾದಿಯಿಂದಾಗಿ ಅದರೊಂದರಿ ಬಿಡುಸಿ ನೋಡ್ಳೂ ಪುರುಸೊತ್ತಾಯ್ದಿಲ್ಲೆ ಉಷಕ್ಕಂಗೆ ಇಂದಿನವರೇಂಗೆ.
““

ಕಳುದ ವರ್ಷ ಒಂದಿನ ಬಾಗಿಲ ಬೆಲ್ ಬಡುದತ್ತು. ಮಧ್ಯಾಹ್ನ ಊಟದ ಸಮಯ. ಆರಪ್ಪ ಹೇಳಿ ಬಾಗಿಲು ತೆಗದು ನೋಡಿರೆ ಎಂತದೋ ಒಂದು ನಳ್ಳಿ ಪೈಪಿಂಗೆ ಸಿಕ್ಕುಸುತ್ತದಡ. ಅದರ ಕಿಚನ್ ಪೈಪಿಲ್ಲಿ ಸಿಕ್ಕಿಸಿರೆ ಶುದ್ಧನೀರು ಬತ್ತದಡ. ಕಮ್ಮಿ ಬೆಲೆಯೂ. ಬರೇ ನೂರೈವತ್ತು ರೂಪಾಯಿ. ಇರ್ಲಿ ಅಂಬಗ ಹೇಳಿ ತೆಕ್ಕೊಂಡ ಕೇಚಣ್ಣ. ನೋಡಿರೆ.., ಆ ತೆಗದು ಮಡುಗಿದ್ದು ಇಂದುದೇ ಇದ್ದು ಅವರ ಡೈನಿಂಗ್ ಟೇಬಲ್ ಮೇಗೆ ಒಂದರಿ ಸಾನ ಬಿಡುಸಿ ನೋಡದ್ದೆ.

ಹೀಂಗೆ ಲೆಕ್ಕ ಹಾಕಿ ನೋಡಿರೆ, ಅತ್ತಿತ್ತೆ ಹೋಗಿ ಬಪ್ಪಗ, ಮನೆ ಬಾಗಿಲಿಂಗೆ ಬಂದದರ, ಸಂತೆಲಿ ತೆಕ್ಕೊಂಡ ಎಷ್ಟು ಸಾಮಾನುಗೊ ಇದ್ದೋ ಎಂತ್ಸೋ ಅವರ ಮನೇಲಿ ಪುಸ್ತಕಂದ ಹಿಡುದು ವಸ್ತ್ರಂಗೊ ಸಹಿತ ಚಪಾತಿ ಕಲ್ಲಿನ ವರೇಂಗೆ.

ಅಂಗಡಿಲಿ ಕಾಂಬಗ ಚಂದ ಕಾಣುತ್ತು. ಮನೇಲಿ ಮಾಡ್ಳೆ ಸಮ ಆವ್ತಿಲ್ಲೆ. ಅಂಬಗ ಹಾಂಗಿರ್ತ್ಸರ ಮನೆ ತಂದು ಮಡುಗಿ ಡೆಡ್ ಇನ್ವೆಷ್ಟುಮೆಂಟು ಮಾಡುತ್ಸದು ಎಷ್ಟು ಔಚಿತ್ಯವೋ. ಪೈಸೆ ಆರದ್ದೇ ಆಗಿರಲ್ಲಿ ದಂಡ ದಂಡವೇ ಅಲ್ಲದೋ.

‘ಚೆನ್ನೈವಾಣಿ’ – ಕಂಡದ್ದೆಲ್ಲ ಬೇಕು ಕುಂಡಿಬಟ್ಟಂಗೆ.. ಹೇಳಿ ಮಾಡಿರೆ, ಪೈಸೆ ಅಂತೇ ಹಾಳು ಮಾಡ್ಳಕ್ಕಷ್ಟೆ.

11 thoughts on “ಕಂಡದ್ದೆಲ್ಲ ಬೇಕು ಕುಂಡಿ ಬಟ್ಟಂಗೆ..

  1. ಆನುದೆ ಒನ್ದು ಚಪಾತಿ ಮೆಶೀನು ತೆಗದರೂ.. ನೊದ್ಸೀಗ.. ಸುರುಟಿ ಅಟ್ಟ್ಟಲ್ಲಿ ಮಡಗಲಾದರು ಅಕ್ಕನ್ನೆ

  2. ಅಹಾ ಚೊಲೋ ನೀತಿಕಥೆ ಭಾವಯ್ಯಾ. ಈ ಗಾದೆಯ ಬರೆದು ಅ೦ಗಡಿಯ ಎದುರು ತೂಗಾಕಿದ್ರೂ ಕು೦ಡಿಬಟ್ಟನ೦ಥವಕ್ಕೆ ಕಾಣ್ತಿಲ್ಲೆ ಎ೦ತಾ ಮಾಡುದು???

  3. ಶರ್ಮಪ್ಪಚ್ಚಿ ಹೇಳಿದ ಹಾ೦ಗೆ ಇ೦ದ್ರಾಣ ಮಾಲ್ ಯುಗಲ್ಲಿ ‘ಕೊಳ್ಳುಬಾಕತನ’ ಹೆಚ್ಚಾವುತ್ತಾ ಇದ್ದು.ಬೇಕೋ ಬೇಡದೋ ಹೇಳ್ತ ವಿವೇಚನೆ ಇಲ್ಲದ್ದೆ ಪೈಸೆ ಖರ್ಚು ಮಾಡುವ ಅಭ್ಯಾಸ ಹೆಚ್ಚಾವುತ್ತಾ ಇದ್ದು.ಇನ್ನು ಮಕ್ಕಳ ಕತೆ ಹೇಳುತ್ಸೇ ಬೇಡ.ಅವಕ್ಕೆ ಅಲ್ಲಿ ಕ೦ಡದೆಲ್ಲಾ ಬೇಕಾವುತ್ತು.ತರಕಾರಿ ಗಾಡಿಲಿ ಚರ್ಚೆ ಮಾಡುವ ನಾವು ಮಾಲ್ ಗಳಲ್ಲಿ ಬಾಯಿ ಮುಚ್ಚಿ ಬರದ ಕ್ರಯ ಸರಿ ನೋಡದ್ದೆಯೂ ಖರೀದಿ ಮಾಡುವದು ವಿಪರ್ಯಾಸ.
    ಒ೦ದು ವಿಷಯ ನೆ೦ಪಾತು.ಮಾಲ್ ಗಳಲ್ಲಿ ಗ್ರಾಹಕರ ಆಕರ್ಷಣೆ ಮಾಡ್ತ ಜಾಗೆಗೆ ಉತ್ಪಾದಕರು ಹೆಚ್ಚು ಡಿಸ್ಕೌ೦ಟು ಕೊಡೆಕ್ಕಾವುತ್ತು.ಉದಾಹರಣೆಗೆ ನಮ್ಮ ಕಣ್ಣಿನ ನೇರದ ಸೆಲ್ೞುಗಳಲ್ಲಿ ಕಾ೦ಬ ವಸ್ತುಗೊಕ್ಕೆ ಬೇಡಿಕೆ ಜಾಸ್ತಿ ಇದ್ದ ಹಾ೦ಗೆಯೇ ,ಮಾಲ್ ನ ಧನಿಗೆ ಹೆಚ್ಚು ಲಾಭಾ೦ಶ ಸಿಕ್ಕುತ್ತು ! ಏನೆಲ್ಲಾ ಕೆಣಿ ,ದೇವರೇ.
    ಚೆನ್ನೈಭಾವನ ಶುದ್ದಿ ಕು೦ಡಿಬಟ್ಟನ ಗಾದೆಗೆ ತಕ್ಕ ಇದ್ದು.

  4. “ಅಗತ್ಯ ಇದ್ದರೆ ಮಾತ್ರ ತೆಕ್ಕೊಂಬದು. ಕಮ್ಮಿ ಪೈಸೆಗೆ ಸಿಕ್ಕುತ್ತು ಹೇಳಿ ರಾಶಿ ಹಾಕ್ಲಾಗ” ಹೇಳಿ ಅಪ್ಪ° ಹೇಳಿಯೋಂಡಿರ್ತವು 🙂

  5. ಎಲ್ಲ ಓದಿಕ್ಕಿ ಕುಂಡಿಭಟ್ಟ ಉಷಕ್ಕನೋ, ಕೇಚಣ್ಣನೋ ಹೇಳಿ ಕನ್ಫ್ಯೂಸ್ ಆತೆನಗೆ.

  6. ಮನೆಲಿ ಅಟ್ಟ ಇಪ್ಪದೇ ಹೀಂಗಿಪ್ಪ ಸಾಮಾನುಗಳ ಹಾಕಲೆ. ಕಂಪೆನಿಗೊ ಜೆನಂಗಳ ಮರುಳು ಮಾಡಿ ಹೀಂಗಿಪ್ಪ ಒಂದೊಂದು ಸಾಮಾನುಗಳ ಅವರ ತಲಗೆ ಕಟ್ಟುಗತ್ತೆ. ಪೈಸೆಯ ಬೆಲೆ ಗೊಂತಿಲ್ಲದ್ದವು ಸುಲಾಬಲ್ಲಿ ಇದಕ್ಕೆ ಬಲಿ ಬೀಳುಗು. ಬಾವಯ್ಯ ಕಂಡದರ ಕಂಡ ಹಾಂಗೇ ಹೇಳಿದ್ದ. ಶರ್ಮಪ್ಪಚ್ಚಿಯ ಉಪಾಯವುದೆ ಸರಿಯಾಗಿಯೇ ಇದ್ದು.

  7. “ಕಂಡದ್ದೆಲ್ಲ ಬೇಕು ಕುಂಡಿ ಭಟ್ಟಂಗೆ” ಹೇಳಿ ಹಿಂದಾಣವೇ ಗಾದೆ ಮಾತು ಮಾಡಿದ್ದವು.
    ಇದು ಎಲ್ಲಾ ಕಾಲಕ್ಕೂ ಅನ್ವಯ ಆವುತ್ತು ಹೇಳುವದು ಸತ್ಯ.
    ಈಗಾಣ ದೊಡ್ಡ ದೊಡ್ಡ ಮೋಲ್ ಗೊಕ್ಕೆ ಹೋದರೆ ನವಗೆ ಅಗತ್ಯ ಇದ್ದೋ ಇಲ್ಲೆಯೋ , ಅಲ್ಲಿ ಕಂಡದರ ತೆಗತ್ತ ಚಟ.
    ಇದಕ್ಕೆ ಸರಿಯಾಗಿ advertisement ಗೊ. ಗ್ರಾಹಕರ ಮರುಳು ಮಾಡುತ್ತ ಎಲ್ಲಾ ಕೆಣಿ ಅವಕ್ಕೆ ಗೊಂತಿರ್ತು.
    ಇದರ ನಿಯಂತ್ರಿಸಲೆ ಒಂದು ಉಪಾಯ ಹೇಳಿರೆ, ಎಂತರ ತೆಗವಲೆ ಹೋಪದು ಹೇಳಿ ಮೊದಲೇ ಮನೆಲಿ ನಿಘಂಟು ಮಾಡುವದು, ಮತ್ತೆ ಅದಕ್ಕೆ ಒಂದು ಬಜೆಟ್ ಲೆಕ್ಕ ಹಾಕುವದು. ಅದಕ್ಕೆ ತಕ್ಕಷ್ಟೇ ಪೈಸ ತೆಕ್ಕೊಂಡು ಹೋಪದು. ಉದ್ದುತ್ತ ಕಾರ್ಡ್ ತೆಕ್ಕೊಂಡು ಹೋದರೆ ಕೆಣುದತ್ತು. ಮನೆಯವರ ಸಹಕಾರ ಇದ್ದರೆ ಮಾತ್ರ ಈ ಪ್ಲಾನ್ ಎಡಿಗಷ್ಟೆ.

  8. ಅಗತ್ಯ ಇಪ್ಪದರ ಮಾತ್ರ ತೆಗೆಕ್ಕಾದ್ದು -ಸರಿ.

  9. ಚೆನ್ನೈ ಭಾವ ಹೇಳಿದ್ದಕ್ಕೆ ಎನ್ನ ಸಲಹೆ,ಹಾಂಗೆ ತೆಕ್ಕೊಂಬದರಿಂದ ಪರೋಕ್ಶವಗಿ ಅಂತಹ ಮೋಸ ಮಾಡುವೊಕ್ಕೆ ಪ್ರೋತ್ಸಾಹ ಕೊಟ್ಟ ಹಾಂಗೆ ಆಉತ್ತಿಲ್ಲೆಯೋ? ಆನುದೆ ಅವರ ಉಪದ್ರ ತಡೆಯದ್ದೆ ತೆಗೆವದಿದ್ದು. ಇರುಳು ಕಂಡ ಬಾವಿಗೆ ಹಗಲೇ ಬೀಳುವದು ಹೇಳಿ ಕಾಣುತ್ತು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×