Oppanna.com

“ಕೆಲವರ ಮನಸ್ಸು, ಕಬ್ಬಿಣದ ಗೊಣಸು”-[ಹವ್ಯಕ ನುಡಿಗಟ್ಟು-17]

ಬರದೋರು :   ವಿಜಯತ್ತೆ    on   15/10/2014    1 ಒಪ್ಪಂಗೊ

–ಕೆಲವರ ಮನಸ್ಸು ಕಬ್ಬಿಣದ ಗೊಣಸು—{ಹವ್ಯಕ ನುಡಿಗಟ್ಟು—17}

ಅವನ ಮನಸ್ಸು ಹೇಳಿರೆ ಕಬ್ಬಿಣದ ಗೊಣಸೇ ಸರಿ.’ ಕಡ್ಪ ಮನಸ್ಸಿನವರ ಹಾಂಗೆ ಹೇಳುಸ್ಸು ಕೇಳಿದ್ದೆ ವಜ್ರಾದಪಿ ಕಠೋರಾಣಿ| ಕುಸುಮಾದಪಿ ಮೃದೂಲಾನಿ ಚ | ಹೇಳಿ ಸಂಸ್ಕೃತಲ್ಲಿ ಒಂದು  ನುಡಿಇದ್ದು. ಅಪ್ಪು  ಮನಸ್ಸು ವಜ್ರಕ್ಕಿಂತ  ಗಟ್ಟಿಯೂ ಹೂಗಿಂದ  ಮೃದುವೂ  ಅಪ್ಪಲೆ ಸಾದ್ಯ!. ಆದರೆ  ಪರಿಸ್ಥಿತಿ  ಸತ್ಪರಿಣಾಮಲ್ಲಿ ಆಯೆಕ್ಕು ವಿಪತ್ಪರಿಣಾಮಲ್ಲಿ ಅಪ್ಪಲಾಗಯಿದ!. ಕೆಲವು ಜೆನಕ್ಕೆ ಅಪ್ಪದೇ ಸರೀ ವಿರೋಧ.

ಮನೆಲಿ  ಮಕ್ಕೊ ಲೂಟಿಮಾಡೀರೆ, ಅಬ್ಬೆ-ಅಪ್ಪಂಗೆ, ಅಜ್ಜಿ-ಅಜ್ಜಂಗೆ ಕೋಪ ಬತ್ತಿದ! ಕೋಪಲ್ಲಿ ಉರಿಧರ್ಸಿ ಬೈಗು,ಅದು ರಜ ಹೊತ್ತಿಂಗೇ ಉಳ್ಳೊ!. ಮದಲಿಂಗೆ ಆನು ಸಣ್ಣಾದಿಪ್ಪಗ  ಅಜ್ಜನ ಮನೆಂದ  ಶಾಲಗೆ ಹೋದ್ದಿದ. ಎನ್ನ ಬಾವಂದ್ರು, ಎಂಗೊಲ್ಲ ಸೇರಿ ಏನಾರು  ಪಿಕಲಾಟಿಕೆ  ಮಾಡೀರೆ, ಎನ್ನ ಪುಟ್ಟುಮಾವ..,  “ನೋಡಿ ಮಕ್ಕಳೇ ಅಜ್ಜನ  ತೊಡಿ ಒಟ್ಟೆ [ಹಲ್ಲುಮುಟ್ಟೆ ಕಚ್ಚಿ] ಆದ್ದು ಕಾಣ್ತು” ಹೇಳುಗು,ಅಷ್ಟೊತ್ತಿಂಗೆ ಗಮನಿಸೀರೆ. ಅಜ್ಜ ಕೋಲು ತೆಕ್ಕಂಡು ಬಪ್ಪದು ಕಾಂಗು, ಎಂಗೊ ಕೂಡ್ಳೆ ಅಲ್ಲಿಂದ ಪರಾರಿ!. ಆ  ಕೋಪದ ಮನಸ್ಸು ಮತ್ತೆ  ರಜ ಕಳಿವಗ ಹೂಗಾಗಿ ಬಿಡುಗು.

ಇನ್ನು ಕೆಲವು ಜೆನರ  ಕೋಪ ಇನ್ನೊಬ್ಬರ ಹಾಳು ಮಾಡ್ಳೆ ಬೇಕಾಗಿ ಹುಟ್ಟಿದ ವಿಚಾರಕ್ಕೆ. ಅದು ಮತ್ಸರೀ ಬುದ್ಧಿ. ಇದರಿಂದಾದ ಹಾನಿ, ಕಷ್ಟ-ನಷ್ಟ, ಅಪಮಾನ ಇಂತಿಷ್ಟೇ ಹೇಳಿ ಇರ!. ಆರೋ ಹೇಳಿಕೊಟ್ಟ ಪಿತೂರಿಗೆ ಮಾಲಿದ ಬುದ್ಧಿ; ಹಿತ್ತಾಳೆ ಕೆಮಿ, ಹೀಂಗಿದ್ದ ಕುಟಿಲ,ಕುತಂತ್ರ ಮಾಂತ್ರ.., ಅದರ ತೀವ್ರತೆ ಘೋರ!. ವಾಸ್ತವಲ್ಲಿ  ನಮ್ಮ ಗುರುಪೀಠಕ್ಕೆ ಮಾಡಿದ ಸಹಿಸಲಸದಳ ಅನ್ಯಾಯ!!. ಆರು ಹೇಳಿಕೊಟ್ಟರೂ ನಿಜವಾದ ಗುರುಭಕ್ತರಿಂಗೆ ಇದು ಹುಟ್ಟುಗೋ?.ಇದಕ್ಕೆ ಮಾಂತ್ರ  ’ವಜ್ರಾದಪಿ’ ಹೋಲ್ಸೀರೂ ಸಾಲಲೇ ಸಾಲ!. ಕನಸು-ಮನಸ್ಸಿಲ್ಲಿಯೂ ಗ್ರಹಿಕಗೂ  ಬಾರದ್ದ ಕಲ್ಪನಗೂ ಮೀರಿದ ಕಠೋರ!!!.ಇದರಿಂದಪ್ಪ  ಹಾನಿ  ಹವ್ಯಕ ಸಮಾಜಕ್ಕೇ ಹೊರತು ಶ್ರೀಗುರುಗೊಕ್ಕಲ್ಲ!. ಈಗೀಗ  ಎಂತದೇ ಬರವಲೆ ಹೆರಟರೂ ಅದೇ ಯೋಚನೆ, ಅದೇ ಬೊಟ್ಟಿಂಗೆ ಬತ್ತು. ಅಂತೂ ಸತ್ಯ,ನ್ಯಾಯ ಒಳಿಶಿ  ಕಾಪಾಡೆಕ್ಕು ಹೇಳಿ  ನಮ್ಮೆಲ್ಲರ ಮನಸ್ಸಿನ  ಹೂಗಾಗಿ ಶ್ರೀರಾಮ ದೇವರಿಂಗೆ ಸಮರ್ಪಣೆ ಮಾಡುವೊಂ. ಎಂತ ಹೇಳ್ತಿ?

~~~***~~~

One thought on ““ಕೆಲವರ ಮನಸ್ಸು, ಕಬ್ಬಿಣದ ಗೊಣಸು”-[ಹವ್ಯಕ ನುಡಿಗಟ್ಟು-17]

  1. ಒಳ್ಳೆ ಬರಹ ,ಸತ್ಪರಿಣಾಮಲ್ಲಿ ಕಬ್ಬಿಣದ ಗೊಣಸು ಮಾಡೀರೆ ಅಕ್ಕು ಅಲ್ಲೋ

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×