Oppanna.com

ನಾಸಿಕಲ್ಲಿ ಸಂತ ವಾಣಿ ನೆಂಪಾತು !

ಬರದೋರು :   ತೆಕ್ಕುಂಜ ಕುಮಾರ ಮಾವ°    on   26/03/2011    17 ಒಪ್ಪಂಗೊ

ತೆಕ್ಕುಂಜ ಕುಮಾರ ಮಾವ°

ಎಂಗೊ ನಾಸಿಕಕ್ಕೆ ಹೋದ್ದದು ೨೦೦೫ನೇ ಇಸವಿಲಿ.ಅದರಿ೦ದ ಮದಲು ಸುಮಾರು ೨೦ ವರ್ಷ ಬೊಂಬಾಯಿಲಿ ಇತ್ತಿದ್ದೆಯ°. ಎನಗೆ ಅಲ್ಲಿಯೇ ತಕ್ಕಮಟ್ಟಿಂಗೆ ಒಂದು ಒಳ್ಳೆ ಕೆಲಸ ಇತ್ತಿದ್ದು. ಆದರೆ ಮನೆಯವಕ್ಕೆ ಸಮಾಧಾನ ಇತ್ತಿಲ್ಲೆ ಯೆಂತಕೆ ಕೇಳಿದರೆ ಊರಿಂಗೆ ಹೋಗಿ ಬಪ್ಪಲೆ ತುಂಬ ದೂರ ಆಯ್ಕ್ಕೊಂಡಿತ್ತಿದ್ದು. ಎನಗುದೇ ಹಲವು ವರ್ಷ ಒಂದೇ ದಿಕ್ಕೆ ಕೆಲಸ ಮಾಡಿ ಬೆಳವಣಿಗೆ ಆದ್ದದು ಸಾಲ ಹೇಳಿ ಕಂಡುಗೊಂಡಿತ್ತು.ಬೆಳವಣಿಗೆಗೆ ಬದಲಾವಣೆ ಅನಿವಾರ್ಯ (Change is Inevitble for growth) ಹೇಳ್ತ   ಹಾಂಗೆ ಆನು ಕೆಲಸ ಬದಲುಸುವ ಯೊಚನೆ ಮಾಡಿಗೊಂಡಿತ್ತಿದ್ದೆ. ಅಷ್ಟಪ್ಪಗ ನಾಸಿಕಲ್ಲಿ ಒಂದು ಕಂಪೆನಿಲಿ ಒಳ್ಳೆ ಅವಕಾಶವೂ ಬಂತು.ಊರಿಂಗೆ ಹೋಗಿ ಬಪ್ಪ ವಿಷಯಲ್ಲಿ ಹೆಂಡತ್ತಿ ಮಕ್ಕಳ ಸಮಸ್ಯೆ ಪರಿಹಾರ ಆಗದ್ದರೂ ಎನ್ನ ಔದ್ಯೋಗಿಕ ಬೆಳವಣಿಗೆಗೆ ಇದೊಂದು ಉತ್ತಮ ಅವಕಾಶ ಹೇಳಿಗೊಂಡು ಗ್ರೇಶಿ ನಾಸಿಕಕ್ಕೆ ಹೋಪ ತೀರ್ಮಾನ ತೆಕ್ಕೊಂಡೆ.

ಹೀಂಗೆ ಕೆಲಸ ಬದಲುಸುವ ಮದಲು ಅದರ ಹಿಂದಿಪ್ಪ ತಯಾರಿಗಳ ಬಗ್ಗೆ, ಮತ್ತಾಣ ವ್ಯವಸ್ತೆಗಳ ಬಗ್ಗೆ ಎನಗೆ ಸ್ಪಷ್ಟ ಆಲೊಚನೆ ಇತ್ತಿದ್ದು. ಮಕ್ಕಳ (ಆವಾಗ ಎನಗೆ ಶಾಲೆಗೆ ಹೋಪ ಒಬ್ಬ ಮಗ° , ಎರಡ್ನೆಯವಂಗೆ ಒಂದು ವರ್ಷ)ಶಾಲೆ ಬದಸುಲುದು ಎಲ್ಲ ದೊಡ್ಡ ಸಮಸ್ಯೆ. ಅದೂ ಬೇರೆ ಆನು ಹೋವುತ್ತಾ ಇಪ್ಪದು ಜುಲಾಯಿಲಿ. ಎಲ್ಲಾ ಶಾಲೆಗಳಲ್ಲಿ ಸೇರ್ಪಡೆ ಮುಗಿದಿರಿತ್ತು.ಪುಣ್ಯಕ್ಕೆ, ಹೊಸ ಕಂಪನಿಲಿ ಇದಕ್ಕೆ ಬೇಕಾದ ಸಹಕಾರ ಕೊಟ್ಟಿದವು. ಆದರೂ ಆನು ಮಾಡೆಕ್ಕಾದ ಕೆಲಸಂಗ ಸುಮಾರು ಇತ್ತಿದ್ದು, ಶಾಲೆಲಿ ಅಡ್ಮಿಶನ್ ಟೆಸ್ಟು,ಇಂಟರ್ವ್ಯೂ ಅಲ್ಲದ್ದೆ ಹೊಸ ಮನೆ ನೋಡುದು ಹೇಳಿಗೊಂಡು. . ಆನು ಇಲ್ಲಿ ಹೊಸ ಕಂಪನಿಗೆ ಬಂದು ಸೇರಿದ್ದು ಗುರುವಾರ.  ಮದಾಲು ಶಾಲೆಗ ಯಾವ್ಯಾವುದು ಇದ್ದು  ಎಂಬುದರ ಲಿಸ್ಟು ಮಾಡಿ, ಒಂದೊಂದೇ  ವಿಚಾರ್ಸಿಗೊಂಡು ಬಂದೆ. ಒಂದು ಶಾಲೆಲಿ “ಸೋಮವಾರ ಮಗನ ಕರ್ಕೊಂಡು ಬನ್ನಿ” ಹೇಳಿ ತಿಳಿಸಿದವು.ಬಾಕಿ ದಿಕ್ಕೆ ಬಂದದು “ಬ೦ದದು ಲೇಟಾಯಿತು ನೀವು “ಹೇಳಿ ಜಾರಿದವು. ಮಕ್ಕಳ ಕರಕ್ಕೊಂಡು ಹೆಂಡತ್ತಿ ನಾಸಿಕಕ್ಕೆ ಬಂತು.ಮಗನ ಟೆಸ್ಟು ಇಂಟರ್ವ್ಯೂ ಆಗಿ ಎಂಗಳ  ಇಂಟರ್ವ್ಯೂ ಕೂಡಾ ಮಾಡಿದವು. ಇದಾಗಿ ಮೂರು ದಿನಲ್ಲಿ ಎನ್ನ ದೆನುಗೇಳಿದವು, ಪ್ರಾ೦ಶುಪಾಲರ ಬಂದು ಕಾಣೆಕ್ಕು ಹೇಳಿಗೊಂಡು.

“ನಿನ್ನ ಮಗಂಗೆ ಅಡ್ಮಿಶನ್ನು ಕೊಡ್ಲಕ್ಕು, ಆದರೆ ನಾಡ್ತು ಸೋಮವಾರ ೨೬ಕ್ಕೆ ಅವನ ಸೇರ್ಸೆಕ್ಕು ”

ಎನಗೆ ಇದು ಎಡಿಯದ್ದ ಕೆಲಸ ಹೇಳಿ ಕಂಡತ್ತು. “ಹೆಂಡತ್ತಿ ಮಕ್ಕ ದೂರಲ್ಲಿ ಬೊಂಬಾಯಿಲಿಪ್ಪದು. ಇಲ್ಲಿ ಮನೆ ಎಲ್ಲೀಳಿಯೂ ನೋಡಿ ಆಯಿದಿಲ್ಲೆ ಅಲ್ಲದ್ದೆ ಮೂರೇ ದಿನ ಇಪ್ಪದು”

” ಅದೆಲ್ಲ ನೀನು ನೊಡೆಕ್ಕು. ಸೋಮವಾರ ಯುನಿಟ್ ಟೆಸ್ಟು ಇದ್ದು, ಅದರ ಖ೦ಡಿತವಾಗಿ ತೆಕ್ಕೊಳೆಕ್ಕು”

“ಮಾಣಿ ಬಂದು ಸೇರಿದ ಬೆನ್ನಿಂಗೇ  ಪರೀಕ್ಷೆ ಬರವದು ಹೇಂಗೆ..” ಆನು ಮೆಲ್ಲಂಗೆ ರಾಗ ತೆಗೆದೆ.

“ಅದೆಲ್ಲ ತೊಂದರೆ ಇಲ್ಲೆ. ಯೆಡಿಗಾದಷ್ಟು ಬರೆಯಲಿ. ಅಲ್ಲದ್ದರೆ ಅಡ್ಮಿಶನ್ನು ಕ್ಯಾನ್ಸೆಲ್ ಮಡೆಕ್ಕಾವುತ್ತು” ಹೇಳಿ ಹೆಡ್ಡುಮಾಷ್ಟ್ರು ಬೊಬ್ಬೆ ಹಾಕಿದವು.

ಈ ತಾರೀಕು ಎನ್ನ ಜನ್ಮಲ್ಲಿ ಮರೆಯ ! ಜುಲಾಯಿ ೨೬ಕ್ಕೆ ನಾಸಿಕಲ್ಲಿ ಮಗನ ಶಾಲೆಗೆ ಸೇರ್ಸುಲೆ ೨೨ಕ್ಕೆ ಎನಗೆ ತಿಳಿಸಿದರೆ ಎಂತ ಮಾಡ್ಲೆಡಿಗು.  ಆತು ಹೇಳಿಕ್ಕಿ ಆನು ಹೆರಟೆ.   ” ಇಲ್ಲಿ ಮನೆ ನಿಘ೦ಟು ಮಾಡಿ ಬೊಂಬಾಯಿಲಿ ಈಗಾಣ ಶಾಲೆಂದ ಶಾಲೆ ಬದಲ್ಸುಲೆ ಕಾಕದ(ಟಿ.ಸಿ.) ತೆಕ್ಕೊಂಡು ಸಾಮಾನು ಗೆ೦ಟುಮುಟ್ಟೆ ಮಾಡಿಸಿ ಸಾಗಿಸಿಗೊಂಡು ಮೂರು ದಿನಲ್ಲಿ ಎಡಿಗಾಗ. ಮಗಂದು ಒಂದು ವರುಷ ಹೋದರೆ ಹೋಗಲಿ, ಬಪ್ಪ ವರ್ಷಂದ ಶಾಲೆಗೆ ಸೇರ್ಸುವ ಆಗದಾ..?” ಹೇಳಿ ಹೆಂಡತ್ತಿಯತ್ರೆ ಹೇಳಿದೆ.

“ಛೇ..ಒಂದು ವರ್ಷ ಹಾಳಾವುತ್ತನ್ನೆ”

‘ಅಂಬಗ ಸದ್ಯ ಒಂದು ಹೋಟೇಲಿಲಿ ಇಪ್ಪ..ನಿಧಾನಕ್ಕೆ ಮನೆ ನೊಡಿಯಾದ ಮೇಲೆ ಹೋದರಾತು”

“ಬೇಡ , ನಾಳೆ ಆನು ಇಲ್ಯಾಣ ಶಾಲೆಂದ ಟಿಸಿ ತೆಕ್ಕೊತ್ತೆ. ನಿಂಗಳೂ ಮನ್ನೆ ಆದಿತ್ಯವಾರ ಕೆಲವು ಮನೆ ನೋಡಿ ಬಯಿಂದೆ ಹೇಳಿದ್ದಿ, ಇನ್ನು ಬೇರೆ ನೋಡುದು ಬೇಡ. ಅದರಲ್ಲಿ ಒಂದರ ಇಂದೇ ನಿಘಂಟು  ಮಾಡಿಕ್ಕಿ. ಸರಿಯಾಗದ್ದರೆ ಮತ್ತೆ ಬದಲುಸುಲೆ ಆವುತ್ತನ್ನೆ. ಮಗಂಗೆ ಒಂದು ವರ್ಷ ಹಾಳಪ್ಪದರಂದ ಅಕ್ಕನ್ನೆ.   ನಾಳೆ ಹೆರಟು ಬನ್ನಿ, ಆದಷ್ಟು ಸಾಮಾನು ತೆಕ್ಕೊ೦ಡು ಹೋಪ°… ಎಡಿಗಕ್ಕು” ಹೇಳಿತ್ತು ಯೆಜಮಾನ್ತಿ.

ಸರಿ ಹೇಳಿ ಕಂಡತ್ತು.  ಎಂತೆಲ್ಲ ಕೆಲಸಂಗ ಇದ್ದೋ ಎಲ್ಲ ಪಟ್ಟಿ ಮಾಡಿದೆ.ಆಫೀಸಿಲಿ ವಿಷಯ ಎಲ್ಲ ಹೇಳಿ ನಾಲ್ಕು ದಿನಾಣ ರಜೆ ತೆಕ್ಕೊಂಡು ಬಂದೆ. ಇರುಳು ಮನೆಯ ಬಗ್ಗೆ ಮು೦ಗಡಪೈಸೆ ಕೊಟ್ಟು ನಾಡ್ತು ಶನಿವಾರ ಬೇಕು ಹೇಳಿ ಎನ್ನ ತೊಂದರೆಯ ವಿವರಿಸಿದೆ ಅದು ಒಪ್ಪಿತ್ತು.

ಹಾಂಗೆ ಆನು ಮರದಿನ , ಶುಕ್ರವಾರ ಮಧ್ಯಾಹ್ನ ಬೊಂಬಾಯಿ ತಲಪಿ ಯೋಜನೆ ಮಾಡಿದ ಪ್ರಕಾರ ಒಂದೊಂದೇ ಕೆಲಸ ಮಾಡ್ಲೆ ಹೆರಟೆ. ಇರುಳು ಇಡೀ ಸಾಮಾನೆಲ್ಲ ಕಟ್ಟಿ ಮಡುಗಿ ಆತು. ಮಳೆಗಾಲ ಶುರುವಾದ ಲಕ್ಷಣ ಇತ್ತಿದ್ದು. ಹಾಂಗಾಗಿ  ಶನಿವಾರ ಉದಿಯಪ್ಪಗ ಬೇಗ ಹೆರಡುವ ಯೊಚನೆ ಮಾಡಿದೆಯ. ಹತ್ತು ಗಂಟೆಗೆ ಎಲ್ಲ ಸಾಮನು ಲೋರಿಗೆ ತುಂಬಿಸಿ ಹೆರಡುವಗ ಮುಗಿಲು ಕಪ್ಪು ಕಟ್ಟಿತ್ತಿದ್ದು. ಮಳೆ ಶುರುವಪ್ಪಗ ಎಂಗ ಹೆರಟು ಹೈವೇ ತಲಪಿ ಆಯಿದು. ಸಾಮಾನು ಚೆಂಡಿ ಅಪ್ಪ ಹೆದರಿಕೆ ಇತ್ತಿಲ್ಲೆ.  ಹೊತ್ತೋಪಗ ನಾಕು ಘಂಟೆಗೆಲ್ಲ ನಾಸಿಕ್ ತಲಪಿದೆಯ°  ಎಂತ ತೊಂದರೆ ಇಲ್ಲದ್ದೆ. ನಾಸಿಕಲ್ಲಿ ಬೊಂಬಾಯಿಲಿ ಬಪ್ಪಾಂಗೆ ಮಳೆ ಇಲ್ಲೆ. ಆದಿತ್ಯವಾರ ಹೇಂಗೂ ರಜೆ, ಹೊಸ ಮನೆಲಿ ಎಲ್ಲ ಸಜ್ಜಿ ಮಾಡ್ಲೆ ಅನುಕೂಲ ಆತು.

ಮರದಿನ, ಜುಲಾಯಿ ೨೬, ಹೆಡ್ಡುಮಾಷ್ಟ್ರು ಎನಗೆ ಕೊಟ್ಟ ಗಡುವು !

ಶಾಲೆಗೆ  ಹೋಗಿ ಹೆಡ್ಡುಮಾಷ್ಟ್ರ ಮುಂದೆ ಮಗನ ನಿಲ್ಲಿಸಿದೆ.  ದೊಡ್ಡ ಸಂತೃಪ್ತ ನೆಗೆ ಅವರ ಮೋರೆಲಿ. ಇಷ್ಟು ಬಂಗ ಬರಿಸಿದ್ದಕ್ಕೆ ನೆಗೆ ಮಾಡುದೋ ಹೇಳಿ ಎನಗೆ ಜೋರು ಪಿಸುರು ಬಂತು. ಸುಮ್ಮನೆ ಎಂತಾರು ಪೆದ೦ಬು ಮಾತಾಡಿರೆ ನವಗೇ ತೊ೦ದರೆ ಹೇಳಿ ತಳೀಯದ್ದೆ ಹೆರ ಬಂದು ಶಾಲೆಯ ಪೈಸೆ ಕಟ್ಟುದರ ಎಲ್ಲ ಕಟ್ಟಿಕ್ಕಿ ಮನೆಗೆ ಹೋಗಿ ದೊಡ್ಡ ಒರಕ್ಕು ಒರಗಿದೆ. ಮರದಿನ ಆಫೀಸಿಂಗೆ ಆನು ಹೋಪಾಗ ಎಲ್ಲೋರು ಎನ್ನ ವಿಚಿತ್ರಲ್ಲಿ ನೋಡಿದವು. ಎನಗೆ ಏವದೂ ಅರ್ಥ ಆಯಿದಿಲ್ಲೆ.

ನೀನು ಹೇಂಗೆ ಎತ್ತಿದೆ  ಮಾರಾಯ.. ಬೊಂಬಾಯಿ ಮಳೆ ಬಂದು ಪೂರ ಮುಂಗಿದ್ದಡ. ‘

“ಅದರಲ್ಲಿ ಎಂತ ವಿಶೇಷ ಇಲ್ಲೆ. ಪ್ರತಿ ವರ್ಷ ಒಂದರಿಯಾದುರೂ ಆವುತ್ತು. ಜೋರು ಮಳೆ ಬಪ್ಪಗ ಒಟ್ಟಿಂಗೆ “ಭರತ”(High Tide) ಇದ್ದರೆ ಬೆಳ್ಳ ಬಪ್ಪದು ಮಾಮೂಲೇ. ”

ಈ ಸರ್ತಿಯಾಣ ಮಳೆ ೧೦೦ ವರ್ಷಲ್ಲಿ ಇತ್ತಿಲ್ಲೆಡ. ರೈಲು, ರೋಡು ಎಲ್ಲ ಕಡುದ್ದು. ಫೋನು ಸಂಪರ್ಕವೂ ಇಲ್ಲೆ.

ಆನು ಕೂಡ್ಲೆ ಎನ್ನ ನೆರೆಕರೆಲಿಪ್ಪವಕ್ಕೆ ಫೋನು ಮಾಡ್ಲೆ ನೋಡಿದೆ. ಸಿಕ್ಕಿದ್ದಿಲ್ಲೆ. ಮತ್ತೆ ಹತ್ತು ದಿನ ಕಳುದು ಸಂಪರ್ಕ ಎಡಿಗಾತು. ಆನು ಇದ್ದ ಜಾಗೆಲಿ ಮಳೆ ನೀರು ಸುರುವಾಣ ಮಾಳಿಗೆ ವರೆಗೆ ಬಂದಿತ್ತದ. ನೀರು ಇಳಿಯೆಕ್ಕಾರೆ ಎರಡು ದಿನ ಆಯಿದಡ. ಎರಡು ದಿನವರೆಗೆ ಕುಡಿವಲೆ ನೀರು ಹಾಲು ಎಂತ ಇತ್ತಿಲ್ಲೆಡ. ಹತ್ತು ದಿನ ಹೋಪಲೆ ಬಪ್ಪಲೆ ರೈಲಾಗಲಿ ಬಸ್ಸಾಗಲಿ ಇತ್ತಿಲೆ. ಒಂದು ದ್ವೀಪಲ್ಲಿ ಸಿಕ್ಕಿಗೊಂಡ ನಮುನೆಲಿ ಇತ್ತಿದ್ದವಡ. ಹತ್ತು ದಿನ ಮನೆಲಿ ಇದ್ದದರ ತಿನ್ನೆಕ್ಕು. ಹೆರ ಎ೦ತದೂ ಸಿಕ್ಕಿಗೊಂಡಿತ್ತಿಲ್ಲೆ. ವಿಷಯ ಎಲ್ಲಾ ಕೇಳುವಗ ಮೈ ಜುಂ ಆತು. ಆನು ಉದಾಸೀನ ಮಾಡಿ ಹಂಡತ್ತಿ ಮಕ್ಕಳ ಅಲ್ಲೇ ಬಿಟ್ಟು ಆನೊಬ್ಬನೇ ನಾಸಿಕಲ್ಲಿ ಇತ್ತಿದ್ದರೆ ಹೇಂಗಾವುತಿತ್ತು ಅವರ ಪರಿಸ್ಥಿತಿ ! ಗ್ರೇಶಿದರೆ ಈಗಳೂ ಬೆಚ್ಛಿ ಬೀಳುವಾಂಗೆ ಆವುತ್ತು.

ಅಪ್ಪು ಜುಲೈ ೨೬, ಎಂಗೊ ಜನ್ಮಲ್ಲಿ ಮರವಲಿಲ್ಲೆ… ಎಂಗಳ ಅರ್ಜೆಂಟಿಲಿ ನಾಸಿಕಕ್ಕೆ ಎಳೆದ ಆ ಹೆಡ್ಡುಮಾಷ್ಟರನ್ನುದೇ…ಆವಾಗಳೆ ಕಬೀರ ದಾಸರ ಈ ವಾಣಿ ನೆಂಪಾದ್ದದು !

ಕಲ್ ಕರೇ ಸೊ ಆಜ್ ಕರ್ ಆಜ್ ಕರೇ ಸೊ ಅಬ್

ಫಲ್ ಮೆ ಪ್ರಳಯ್ ಹೋಯೇಗಿ ಬಾಹುರಿ ಕರೇಗಿ ಕಬ್ ॥

( ನಾಳೆ ಮಾಡ್ತದರ ಇಂದು ಮಾಡು, ಇಂದು ಮಾಡ್ತದರ ಈಗ, ಬಾಕಿ ಮಡಗಿದರೆ ಮಾಡ್ತದು ಏವಾಗ ….ಮತ್ತಂಗೆ ಕೈ ಮೀರಿ ಹೋಕ್ಕು..?)

17 thoughts on “ನಾಸಿಕಲ್ಲಿ ಸಂತ ವಾಣಿ ನೆಂಪಾತು !

  1. ಅದ್ಭುತ ಅನುಭವ… “ಆದದ್ದೆಲ್ಲ ಒಳಿತೆ ಆಗಿದೆ” .. ಕೆಲವು ಸರ್ತಿ ತಕ್ಷಣ ಅನುಭವಕ್ಕೆ ಬತ್ತು…. ಇನ್ನು ಕೆಲವು ಇನ್ಯಾವಾಗಲೋ ಅನುಭವಕ್ಕೆ ಬತ್ತು…. ಕೆಲವು ಒಳಿತಾದ್ದದು ನಮಗೆ ಜನ್ಮ ಪೂರ್ತಿ ಅರ್ಥವೇ ಆವುತ್ತಿಲೆ….ಅಂತೂ ವೇದಾಂತ ಎಲ್ಲ ಸುಮ್ಮನೆ ಅಲ್ಲ… ನಮ್ಮ ನಿಜ ಜೀವನವೇ…. ಆದರೆ ನಮಗೆ ಅರ್ಥ ಅಪ್ಪದಲ್ಲಿ ಇಪ್ಪದು ಹೇಳುದಕ್ಕೆ ಉತ್ತಮ ಉದಾಹರಣೆ……

  2. ಅ೦ಬಗ ನಿ೦ಗಳೂ ಇ೦ಟರ್ವ್ಯು ಪಾಸ್ ಆದಿ ಅನ್ನೆ!
    ಮಗ ೩ನೇ ಕ್ಲಾಸಿ೦ಗೆ ಟೆಶ್ಟು ಬರವಲಿತ್ತೊ! ಅಬ್ಬಾ ಆ ಹೆಡ್ಡುಮಾಶ್ಟ್ರನೆ….
    ಎನಗೆ ೨೫೦ ರುಪಾಯಿ ಕೊಟ್ಟದ್ದ್ದಕ್ಕೆ ಸೀಟು ಕೊಟ್ಟಿದೊವು ಮಾರಾಯರೆ! ಬೆಳ್ಳದೆ ಬಯಿ೦ದಿಲ್ಲೆ!
    ದೇವರ ದಯೆ 🙂

    1. ಓ ಅರ್ಗೆ೦ಟು ಮಾಣಿ ನಿನಗೆ ೨೫೦ ರೂಪಾಯಿಗೆ ಏವುದರ ಸೀಟು ಸಿಕ್ಕಿತ್ತು ಮಾರಾಯಾ….! ಬೆಂದಕಾಳೂರಿಂದ ಮಂಗಳೂರಿಂಗೆ ಬಸ್ಸಿನ ಸೀಟಾದಿಕ್ಕು ನಿನಗೆ ಸಿಕ್ಕಿದ್ದು……. ಗಡಿಬಿಡಿಲಿ

  3. ದೇವರೇ ಆ ಹೆಡ್ಮಾಷ್ಟ್ರ ರೂಪಲ್ಲಿ ಬ೦ದದಾಗಿಕ್ಕು ಕುಮಾರ ಮಾವ.ಜೀವನಲ್ಲಿ ಮರವಲೆ ಸಾಧ್ಯ ಇಲ್ಲದ್ದ ಅನುಭವವೇ ಸರಿ.

  4. ಕೆಲವು ಸರ್ತಿ ಹಾಂಗೆ ಕಾಣ್ತು. ಆದರೆ, ಉಡಸೀನ ಬಿಟ್ಟು ಕೆಲಸ ಮಾಡಿದರೆ ದೇವರು ಕೈ ಬಿಡ ಹೇಳುವ ನಂಬಿಕೆ.

  5. ಇಷ್ಟೆಲ್ಲಾ ತಲೆ ಹರಟೆ ಇಪ್ಪಗ ಎಂತ ಬೊಜ್ಜವೂ ಬೇಡ ಹೇಳಿ ಕಂಡಿದಿಲ್ಲೆ ನಿಂಗೊಗೆ ಅಪ್ಪೋ.

    ರೋಮಾಂಚಕ ಅನುಭವವೇ ಸರಿ. ಈಗಾದರೂ ಹೇಳಿಕ್ಕಿ – ‘ ಆದದ್ದೆಲ್ಲಾ ಒಳಿತೇ ಆಯ್ತು..’

  6. ಲೇಖನ ಲಾಯಿಕ ಆಯಿದು ಕುಮಾರಣ್ಣ… ಓದಿಯಪ್ಪಗ ಮೈ ಜುಂ ಆತು. ಒಳ್ಳೆಯವರ ದೇವರು ಯಾವತ್ತೂ ಕೈಬಿಡ ಹೇಳಿ ಹೇಳುವುದುಕ್ಕೆ ಒಂದು ಒಳ್ಳೆಯ ಉದಾಹರಣೆ…

    1. ಪ್ರದೀಪಣ್ಣ,

      ಧನ್ಯವಾದ…

  7. ಅಬ್ಬಾ…! ಲೇಖನ ಓದಿಯಪ್ಪಗ ಮೈ ಜುಂ ಆತು.

  8. ಕುಮಾರ ಭಾವನ ಅನುಭವ ಕೇಳಿ ಅಪ್ಪಗ ಆದದ್ದೆಲ್ಲಾ ಒಳಿತೇ ಆಯಿತು ಹೇಳ್ತ ಪದ್ಯವುದೆ ನೆಂಪಾವುತ್ತು. ಹೆಡ್ಮಾಶ್ಟ್ರು ಬೊಡುಸಿದ್ದದು ಒಳ್ಳೆದೇ ಆತನ್ನೆ. ದೇವರು ನಮ್ಮ ಕೈ ಏವತ್ತೂ ಬಿಡ್ತ ಇಲ್ಲೆ ಹೇಳ್ತಕ್ಕೆ ಉತ್ತಮ ಉದಾಹರಣೆ. ಹೇಳಿದ ಹಾಂಗೆ, ಏವ ಕ್ಲಾಸಿಂಗೆ ಮಗಂಗೆ ಎಡ್ಮಿಶನ್ ಆಯೆಕಿತ್ತು ?

    1. ಬೊಳುಂಬು ಮಾವ,

      ಮಗನ ಮೂರನೇ ಕ್ಲಾಸಿಂಗೆ ಸೇರ್ಸಿದ್ದದು..ಇಗ ಎಂಟನೆ ಕ್ಲಾಸಿಲಿ ಓದುತ್ತ..

  9. [ವಿಷಯ ಎಲ್ಲಾ ಕೇಳುವಗ ಮೈ ಜುಂ ಆತು.] ಓದಿ ಅಪ್ಪಗ ಎನಗೂ ಹಾಂಗೇ ಅನಿಸಿತ್ತು. ಅಂದ್ರಾಣ ಮಳೆಯ ಅನಾಹುತದ ಬಗ್ಗೆ ಸಾಕಷ್ಟು ಓದಿತ್ತಿದ್ದೆ, ಟೀವಿಲಿ ನೋಡಿತ್ತಿದ್ದೆ.
    ದೇವರೇ ಆ ಹೆಡ್ ಮಾಷ್ಟ್ರ ರೂಪಲ್ಲಿ ಬಂದು, ನಿಂಗಳ ಅಲ್ಲಿಗೆ ಬೇಗ ಬಪ್ಪ ಹಾಂಗೆ ಮಾಡಿದನೋ ತೋರ್ತು.
    ಇದಕ್ಕೇ ಹೇಳುವದೋ “ಆದದ್ದೆಲ್ಲಾ ಒಳಿತೇ ಆಯಿತು” ಹೇಳಿ.

    1. ಶರ್ಮಪ್ಪಚ್ಚಿ,

      ಹೆಡ್ ಮಾಷ್ಟ್ರತ್ತರೆ ಶುರುವಿಲಿ ಒೞೆ ಕೋಪ ಬಂದಿತ್ತಿದ್ದು. ಮತ್ತೆ ಎನ್ನ ಅಭಿಪ್ರಾಯ ಬದಲಾಯಿದು. ನಾಸಿಕ ಬಿಟ್ಟು ಬಪ್ಪಗ(ಬೆಂಗಳೂರಿಂಗೆ) ಮಕ್ಕಳ ಈ ಶಾಲೆಂದ ಬಿಡುಸೆಕ್ಕನ್ನೆ ಹೇಳಿ ಬೇಜಾರುದೇ ಆಯಿದು.

  10. ಕುಮಾರಣ್ಣ, ನಿಂಗಳ ಅನುಭವವ ತುಂಬಾ ಲಾಯ್ಕಲ್ಲಿ ಹೇಳಿದ್ದಿ. ಇಲ್ಲಿ ನಿಂಗಳ ದೇವರ ಅನುಗ್ರಹ ಕಾದತ್ತೋ ಹೇಳಿದ ಹಾಂಗೆ ಆವುತ್ತು. ಒಂದನೆಯದಾಗಿ ಶಾಲೆಗೆ ಗಡು ಅದೇ ದಿನ ಕೊಟ್ಟದು. ಅಂಬಗ ಆ ಹೆಡ್ ಮಾಷ್ಟ್ರ ಹತ್ತರೆ ಕೋಪ ಬಂದಿದ್ದರೂ ನಿಂಗಳ ಕುಟುಂಬ ಬೊಂಬಯಿಂದ ಪಾರಾಗಿ ಬಪ್ಪಲೆ ಅದೇ ನಿಂಗೊಗೆ ಕಾರಣ ಆದ್ದದಲ್ಲದಾ? ಇನ್ನೊಂದು ಮಗನ ಅಮೂಲ್ಯವಾದ ಒಂದು ವರ್ಷ ಒಳುದತ್ತಿಲ್ಲೆಯಾ? ಮಕ್ಕಳ ಜೀವನದ ಒಂದು ವರ್ಷದ ಬೆಲೆ ಎಂತರ ಹೇಳಿ ನವಗೆ ಅಂದಾಜು ಇದ್ದನ್ನೆ!! ನಮ್ಮ ನಮ್ಮ ದೆಸೆಗೆ ಹೊಂದಿಗೊಂಡು ಎಲ್ಲವೂ ಅಪ್ಪದು. ನಿಂಗಳ ದೇವರು ಕೈ ಬಿಟ್ಟಿದವಿಲ್ಲೆ.

    ಕಬೀರರ ವಾಣಿ ನಾವು ಯಾವತ್ತಿಂಗೂ ನೆಂಪು ಮಡಿಕ್ಕೊಂಬಂಥದ್ದೇ!! ಆಯಾಯ ಕಾಲಕ್ಕೆ ಮಾಡೆಕ್ಕಾದ್ದರ ಮಾಡಿ ಅಪ್ಪಗ ದೇವರ ಸಹಾಯ ಒದಗಿ ಬತ್ತು ಹೇಳಿ ನಿಂಗಳ ಅನುಭವಲ್ಲಿ ಸ್ಪಷ್ಟ ಆತು ಕುಮಾರಣ್ಣ. ಅನುಭವವ ಹಂಚಿಗೊಂಡದಕ್ಕೆ ಧನ್ಯವಾದಂಗ.

    1. ದೇವರೇ ಕಾದ್ದದು ಶ್ರೀಅಕ್ಕ…

  11. ಕುಮಾರ ಮಾವ ನಿ೦ಗಳ ಈ ಅನುಭವ ಕೇಳುವಾಗ ಆ ಹೆಡ್ಡುಮಾಶ್ಟ್ರನ ಮರವಲೆಡಿಯ ಉಫ್ಫ್.
    ಕಬೀರದಾಸರ ಹೇಳಿಕೆ ಸತ್ಯ, ಎರಡು ಮಾತಿಲ್ಲೆ.
    -ಈ ಅನುಭವವ ಓದಿಯಪ್ಪಗ ಮಾ೦ತ್ರ ಒ೦ದರಿ ಇಲ್ಲಿ ಎ೦ಗೊಗೆ ಅಬ್ಬ ಈ ಮಾವನೂ, ಭಾವನೂ ಹೀ೦ಗೆಲ್ಲ ಕಿತಾಪತಿ ಮಾಡಿದ್ದೊವನ್ನೆ ಹೇಳಿ ತಲೆ ಮೇಗೆ ಕೈ ಮಡುಗಿದೆಯ! 🙂

    1. ಕಿತಾಪತಿ ಎಂತ ಇಲ್ಲೆನ್ನೆ ಅಳಿಯೊ….

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×