Oppanna.com

ಗ್ರಹ – ಉಪಗ್ರಹ – 1

ಬರದೋರು :   ಪಟಿಕಲ್ಲಪ್ಪಚ್ಚಿ    on   18/10/2012    24 ಒಪ್ಪಂಗೊ

ಪಟಿಕಲ್ಲಪ್ಪಚ್ಚಿ

ಬೈಲಿಂಗೆ ಪಟಿಕ್ಕಲ್ಲಪ್ಪಚ್ಚಿ ಹೇಳಿ ಪರಿಚಯ ಆವ್ತ ಇವರ ಹೆಸರು ಪಟಿಕಲ್ಲು ಶಂಕರ ಭಟ್. ಮುಡಿಪು ಕುರ್ನಾಡಿನ ಕೊಡಕಲ್ಲು ಇವರ ಮನೆ. ಕೊಡೆಯಾಲಲ್ಲಿ ಡಿಗ್ರಿ ಮಾಡಿ ಅಂದ್ರಾಣ ಮೈಸೂರು ವಿಶ್ವವಿದ್ಯಾಲಯದ ಮಂಗಳ ಗಂಗೋತ್ರಿ  ಕೊಣಾಜೆ ಕಾಲೇಜಿಲಿ 1976ರಲ್ಲಿ ಲೆಕ್ಕಲ್ಲಿ ಎಂ ಎಸ್ಸಿ ಮಾಡಿ ಮೊದಲ ರೇಂಕು ಪಡದವು. ನಂತ್ರ  ಇನ್ಫ಼ಾರ್ಮೇಶನ್ ಟೆಕ್ನೋಲೆಜಿಲಿ ಕೂಡ ಎಂಎಸ್ಸಿ ಮಾಡಿದ್ದವು. ಕಲಿಯುವಿಕೆ ನಂತ್ರ ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ)ಗೆ ಸೇರಿ 1978ರಿಂದ 1995ರವರೆಗೆ ವಿವಿಧ ಹುದ್ದೆಗಳ ಅಲಂಕರಿಸಿದವು. ಐಆರ್‍ಎಸ್ 1ಸಿ(IRS-1C) ಉಪಗ್ರಹ ನಿರ್ಮಾಣದ ಪ್ರೊಜೆಕ್ಟ್ ಮ್ಯಾನೇಜರ್ (ಡಾಟಾ ಪ್ರೊಸೆಸಿಂಗ್) ಆಗಿತ್ತವು. ಇಸ್ರೋದ “ಇಸ್ರೋ ಸೋಪ್ಟ್ ವೇರ್ ಇಂಜಿನಿಯರಿಂಗ್ ಗೈಡ್‍ಲೈನ್” ಪುಸ್ತಕದ ಸಹಕತೃ ಕೂಡಾ.

1996ರಲ್ಲಿ ಅಮೇರಿಕಕ್ಕೆ ಹೋಗಿ ಅಲ್ಲಿ ಹಿರಿಯ ಸೋಪ್ಟ್ ವೇರ್ ಇಂಜಿನಿಯರ್ ಆಗಿ 2000ದವರೆಗೆ ಕೆಲಸ ಮಾಡಿದವು. 2001ರಲ್ಲಿ ಭಾರತಕ್ಕೆ ಬಂದ ನಮ್ಮ ಗುರುಗಳ ಅಶಯಲ್ಲಿ ಆರಂಭ ಆದ ಶ್ರೀ ಭಾರತೀ ಕಾಲೇಜಿನ ಪ್ರಿನ್ಸಿಪಾಲ್ ಆಗಿ 2006ರವರೆಗೆ ಒಳ್ಳೆಯ ರೀತಿಲಿ ಮುನ್ನಡೆಸಿದ್ದವು. ಪ್ರಸ್ತುತ ಬೆಂಗಳೂರಿನ ಒಂದು ಪ್ರತಿಷ್ಟಿತ ಕಂಪೆನಿಗೆ ಸೋಪ್ಟ್ ವೇರ್ ಕನ್ಸಲ್ಟೆಂಟ್ ಆಗಿ ವಾರಕ್ಕೆ ಮೂರು ದಿನ ಕೆಲಸ ಮಾಡಿರೆ ಉಳುದ ದಿನ ಊರಿನ ಕೃಷಿ ಭೂಮಿಲಿ ಕೃಷಿ ಮಾಡ್ತ, ಅಪ್ಪ ಅಮ್ಮ ಹೆಂಡತಿಯೊಟ್ಟಿಂಗೆ ಜೀವನ ಮಾಡ್ತಾ ಇದ್ದವು. ಶರಾವತಿ, ಗಂಗಾ ಹೇಳ್ವ ಇಬ್ರು ಮಕ್ಕಳ ಒಳ್ಳೆ ಮನೆಗೆ ಮದುವೆ ಮಾಡಿಕೊಟ್ಟು ಅಜ್ಜನೂ ಆಯಿದವು. ತತ್ವಶಾಸ್ತ್ರ, ಬ್ರಹ್ಮಜ್ಞಾನ, ಸಂಗೀತಲ್ಲಿ ಆಸಕ್ತಿ ಇಪ್ಪ ಇವು ಅಗತ್ಯ ಬಿದ್ದರೆ ಚೆಂಡೆ – ಮದ್ದಳೆ ಕೂಡಾ ಬಾರ್ಸುಗು.

ಇವರತ್ರೆ ಬೈಲಿಂಗೆ ಬಂದು ಬಾಹ್ಯಾಕಾಶ ವಿಜ್ಞಾನ, ವಿಜ್ಞಾನ ವಿಷಯಂಗಳ ಬಗ್ಗೆ ಮಾಹಿತಿ ಕೊಡೆಕ್ಕು ಹೇಳಿ ಕೇಳಿಯೊಂಡಪ್ಪಗ ಕೊಶಿಲಿ ಒಪ್ಪಿ ಬೈಲಿಂಗೆ ಬತ್ತಾ ಇದ್ದವು. ಯೇವತ್ತಿನಾಂಗೆ ಇವಕ್ಕೂ ನಿಂಗಳ ಪ್ರೋತ್ಸಾಹ ಇರಳಿ°

~
ಗುರಿಕ್ಕಾರ°

~~

ಮಾರ್ನೆಮಿ ರಜೆಲಿ ಬಂದ ಪುಳ್ಳಿ ಪ್ರಣವ ನಿನ್ನೆ ಇರುಳು ಎನ್ನೊಟ್ಟಿಂಗೇ ಮನುಗಿತ್ತಿದ್ದ. ಕಥೆ ಕೇಳಿಯೊಂಡು ಒರಗುದು ಅವಂಗೆ ಇಷ್ಟ. ಹಾಂಗೇ ಭಗೀರಥನ ಕಥೆ ಹೇಳಿ ಒರಗಿಸಿತ್ತಿದ್ದೆ. ಎದ್ದ ಕೂಡ್ಲೇ ಕೇಳಿದ – ಅಜ್ಜ, ನಿಂಗೊ ಉಪಗ್ರಹ ಕೇಂದ್ರಲ್ಲ್ಲಿ ಕೆಲಸ ಮಾಡಿದ್ದಿ ಹೇಳಿ ಅಮ್ಮ ಹೇಳಿಯೊಂಡಿತ್ತು. ಈ ಗ್ರಹ, ಉಪಗ್ರಹ ಹೇಳಿದರೆ ಎಂತ? ಈ ಬಗ್ಗೆ ಎನಗೂ ಅವಂಗೂ ನಡೆದ ಮಾತುಕತೆಗೊ-

ಅಜ್ಜ: ಗ್ರಹ ಹೇಳಿದರೆ ಸೂರ್ಯಂಗೆ ಸುತ್ತು ಬಪ್ಪ ಭೂಮಿ, ಮತ್ತು ಭೂಮಿಯ ಹಾಂಗೇ ಇಪ್ಪ ಶುಕ್ರ, ಮಂಗಳ ಎಲ್ಲ. ಅವರ ಇಂದು ಇರುಳು ನಿನಗೆ ತೋರಿಸುತ್ತೆ.

ಪ್ರ: ಮತ್ತೆ ಚಂದ್ರ?

ಚಂದ್ರಂಗೆ ಉಪಗ್ರಹ ಹೇಳ್ತವು. ಸೂರ್ಯಂಗೆ ಸುತ್ತು ಬಪ್ಪವಕ್ಕೆ ಗ್ರಹ ಹೇಳಿಯೂ, ಯಾವುದೇ ಗ್ರಹಕ್ಕೆ ಸುತ್ತು ಬಪ್ಪವಕ್ಕೆ ಉಪಗ್ರಹ ಹೇಳಿಯೂ ಹೆಸರು. ಮನುಷ್ಯರು ಮಾಡಿ ಹಾರಿಸಿ ಬಿಟ್ಟ – ಭೂಮಿಗೆ ಸುತ್ತು ಬತ್ತಾ – ಇಪ್ಪ ಯಂತ್ರಂಗೊಕ್ಕೆ ಕೃತಕ ಉಪಗ್ರಹ ಹೇಳಿಯೂ ಹೇಳ್ತವು.

ಪ್ರ: ಎಲ್ಲ ಒಂದೊಂದೇ ವಿವರ್ಸಿ ಅಜ್ಜ. ಈಗ ನಾವು ಎಷ್ಟೇ ಎತ್ತರಕ್ಕೆ ಕಲ್ಲು ಇಡುಕ್ಕಿದರೂ ಕೆಳ ಬೀಳ್ತು. ಅದು ಹೇಂಗೆ ಉಪಗ್ರಹ ವಾಪಸ್ ಬೀಳದ್ದೆ, ಭೂಮಿಗೆ ಸುತ್ತು ಬಪ್ಪದು?

ತನ್ನ ಸುತ್ತ ಇಪ್ಪ ಎಲ್ಲವನ್ನೂ ಭೂಮಿ ಕೆಳಂಗೆ ಎಳೆತ್ತ ಕಾರಣವೇ, ತೆಂಗಿನ ಕಾಯಿ ಕೆಳ ಬೀಳುದು. ಭೂಮಿಯ ಆ ಶಕ್ತಿಗೆ ಗುರುತ್ವಾಕರ್ಷಣ ಶಕ್ತಿ ಹೇಳ್ತವು. ನಾವು ಮೇಲಂಗೆ ಇಡುಕ್ಕುವಗ ತುಂಬಾ ಶಕ್ತಿ – ಹೇಳಿರೆ – ಭೂಮಿಯ ಎಳೆತವನ್ನೂ ಮೀರುವಷ್ಟು ಶಕ್ತಿ ಹಾಕಿ ಹೈ-ಸ್ಪೀಡಿಲಿ ಇಡುಕ್ಕಿದರೆ ಆ ಕಲ್ಲೂ ಕೂಡ ಕೆಳ ಬೀಳದ್ದೆ, ಅಲ್ಲೇ ಸುತ್ತುಗು ಅಥವಾ ಭೂಮಿಂದ ದೂರ, ದೂರ ಹೋಯಿಕ್ಕೊಂಡೇ ಇಕ್ಕು – ಅದರ ಸ್ಪೀಡಿನ ಹೊಂದಿಯೊಂಡು.

ಪ್ರ: ಆ ಸ್ಪೀಡಿನ ಲೆಕ್ಕಕ್ಕೆ ನಿಂಗಳ ಗಣಿತ ಬೇಕಾವ್ತಾಯಿಕ್ಕಲ್ಲದ. ನಿಂಗೊ ಗಣಿತಲ್ಲಿ ಭಾರೀ ಉಶಾರಿ ಹೇಳ್ತವು. ಎನಗೂ ಗಣಿತ ಹೇಳಿದರೆ ಬಾರೀ ಖುಶಿ. ಹೆಚ್ಚಾಗಿ 100 ಕ್ಕೆ 100 ಸಿಕ್ಕುತ್ತು ಎನಗೆ ಪರೀಕ್ಷೆಗಳಲ್ಲಿ. ಅದು ಬಿಡಿ, ಈಗ ವಿಷಯಕ್ಕೆ ಬಪ್ಪ, ಅಷ್ಟು ಶಕ್ತಿ ಹಾಕಿ ಉಪಗ್ರಹವ ಹಾರಿಸೊದು ಹೇಂಗೆ? ಅದರ ಹೇಳಿ.

ಅದಕ್ಕೆ ಉಪಯೋಗ ಅಪ್ಪ ವಾಹನಕ್ಕೆ ರೋಕೆಟ್ ಹೇಳ್ತವು. ನಮ್ಮ ದೇಶಲ್ಲಿ ಕೇರಳದ ತಿರುವನಂತಪುರಲ್ಲಿಯೂ, ಇನ್ನೊಂದು ದಿಕ್ಕೆ ತಮಿಳು ನಾಡಿನ ಮಹೇಂದ್ರಗಿರಿ ಹೇಳುವಲ್ಲಿಯೂ ಅದರ ತಯಾರಿಸುತ್ತವು. ನಾವು ದೀಪಾವಳಿ ಹಬ್ಬಕ್ಕೆ ರೋಕೆಟ್ ಹಾರಿಸುತ್ತಲ್ಲದಾ? ಇದೂ ಹಾಂಗೇ ತುಂಬ ದೊಡ್ಡ್…ಡ ರೋಕೆಟ್. ಅದರ ಹಾರಿಸೊದು ಮಾತ್ರ ಬೇರೆ ಜಾಗೆಲಿ.

ಪ್ರ: ಅದೆಂತಕೆ ಬೇರೆ ಜಾಗೆಲಿ? ಇಲ್ಲಿಂದ, ಕೊಡಕ್ಕಲ್ಲಿಂದ – ನಮ್ಮ ಮನೆಂದ – ಹಾರಿಸುಲಕ್ಕ? ದೊಡ್ಡ ಹೇಳಿದರೆ ಎಷ್ಟು ದೊಡ್ಡ? ಆ ರೋಕೆಟ್ಟಿನ ಒಳ ಎಂತ ಮದ್ದು ತುಂಬುಸುತ್ತವು?

ಈ ನಾಲ್ಕೂ ಪ್ರಶ್ನೆಗೊಕ್ಕೆ ಉತ್ತರ ಹೇಳ್ತೆ. ನೀನೀಗ ಜಾಣ ಅಲ್ಲದಾ? ಮದಾಲು ಹಲ್ಲು ತಿಕ್ಕಿ, ಮೋರೆ ತೊಳದಿಕ್ಕಿ, ಟಾಯ್ಲೆಟ್ಟಿಂಗೆ ಹೋಗಿ ಬಾ.

ಪ್ರ: ಆತಜ್ಜಾ. ಮತ್ತೆ ಹೇಳೆಕ್ಕು ನಿಂಗೊ. ತಪ್ಪಿಸುಲಾಗ.

ಅವ ಬರೆಕ್ಕಾರೆ, ಒಂದು ಕಪ್ಪು ಕಾಫಿ ಕುಡಿವ ಹೇಳಿ ಅಡಿಗೆ ಮನೆಗೆ ಓಡಿದೆ. ಮತ್ತೆ ಕಾಂಬ.

24 thoughts on “ಗ್ರಹ – ಉಪಗ್ರಹ – 1

  1. ಪಟಿಕಲ್ಲಪ್ಪಚ್ಚಿಗೆ ಬೈಲಿ೦ಗೆ ಸ್ವಾಗತ. ಬರಹದ ಶೈಲಿ ಚೊಲೋ ಆಯ್ದು.
    ನಿ೦ಗಳ ಬಗ್ಗೆ ತಿಳಿದದ್ದೂ ಬಹಳ ಖುಷೀ ಆಯ್ದು. ಹಾ೦ಗೇ ಐನ್ ಸ್ಟೀನ್ ಹೇಳಿದ ಒ೦ದು ಮಾತು ನೆನಪಾತು “ಧರ್ಮವಿಲ್ಲದ ವಿಜ್ನಾನ ಹೆಳವನ೦ತೆ, ವಿಜ್ನಾನವಿಲ್ಲದ ಧರ್ಮ ಕುರುಡನ೦ತೆ”. ನಿಮ್ಮಿ೦ದ ಎರಡೂ ಬಗೆಯ ಜ್ನಾನ ಪಡೆವ ಕಾತುರದಲ್ಲಿ – ಮಾನೀರ್ ಮಾಣಿ” 🙂

    1. ನಿಂಗಳ ಮೆಚ್ಚುಗೆಯ ಮಾತುಗೊಕ್ಕೆ ಧನ್ಯವಾದಂಗ. ಮತ್ತೆ ಕಾಂಬ.

  2. ಪಟಿಕ್ಕಲ್ಲು ಅಣ್ಣಂಗೆ, ಬೈಲಿಂಗೆ ಸ್ವಾಗತ
    ಸಂಭಾಷಣಾ ರೀತಿಲಿ ಪ್ರಸ್ತುತ ಪಡಿಸಿದ್ದು ಲಾಯಿಕ ಆಯಿದು. ಮುಂದಾಣದ್ದಕ್ಕೆ ಕಾಯ್ತಾ ಇದ್ದೆಯೊ°

  3. ಬೈಲಿಂಗೆ ಸ್ವಾಗತ..ಹೀಂಗೆ ಉಪಯುಕ್ತ ಮಾಹಿತಿಗ ಬರ್ತಾ ಇರಲಿ….

  4. ಬಾರಿ ಲಾಯಕಾಗಿ ಬಯಿ೦ದಪ್ಪಚ್ಚಿ ಅಜ್ಜ- ಪುಳ್ಳಿಯ ಸ೦ಭಾಷಣೆ. ಈ ನೆಪಲ್ಲಿ ಬೈಲಿ೦ಗೆ ಇಳಿಶಿದ ಪುಳ್ಳಿಗೂ ನಿ೦ಗಗು ಒಟ್ಟಿ೦ಗೆ ಧನ್ಯ ವಾದ ಹೇಳ್ತಾ ಇದ್ದೆ.ಮತ್ತೆ ಮು೦ದಾಣ ಕ೦ತಿನ ಕಾಯ್ತಾ ಇದ್ದಿಯೊ°.

  5. ಲೇಖನ ಮೆಚ್ಚಿದ ಎಲ್ಲೋರಿಂಗೂ ಕೃತಜ್ಞತೆಗ. ಎರಡನೇ ಭಾಗ ತಯಾರಾವ್ತಾ ಇದ್ದು.

  6. ಪಟಿಕ್ಕಲ್ಲು ಅಪ್ಪಚ್ಚಿಗೆ ಸ್ವಾಗತ.
    ಕುತೂಹಲ ಮೂಡುಸುವ ಬರಹ ಶೈಲಿ ಅಜ್ಜ-ಪುಳ್ಳಿಯ ಮು೦ದಾಣ ಮಾತುಕತೆ ಕೇಳುಲೆ ಕೆಮಿಗೊ೦ಡೆ ಮಾಡಿ ಕೂಪ ಹಾ೦ಗೆ ಮಾಡಿತ್ತು.
    ಒಯ್,ಕೊಡಕ್ಕಲ್ಲಿ೦ದ ರೋಕೆಟು ಬಿಟ್ಟರೆ ತೆಕ್ಕು೦ಜಲ್ಲಿ ಬಿದ್ದಿಕ್ಕುಗೋ ಹೇ೦ಗೆ !!

    1. ರಘು ಮುಳಿಯ – ನಿಂಗೊಗೆ ಧನ್ಯವಾದಂಗ. ಕೊಡಕ್ಕಲ್ಲಿಂದ ತೆಕ್ಕುಂಜಕ್ಕೆ ಬರೇ 2 Km ಕಾಕೆ-ದೂರ (crow-distance). ನಡದು ಹೋವ್ತರೆ ರಜ್ಜ ಹೆಚ್ಚಕ್ಕು. ಹಾಂಗಾಗಿ ಬೀಳುಗನ್ನೆ. ಎಂಗೊ (ಆನು, ಎನ್ನಣ್ಣ, ಅಕ್ಕಂದಿರು ಎಲ್ಲ) ಸಣ್ಣಾದಿಪ್ಪಗ ಪಟಾಕಿ ಶಬ್ದ ಎಲ್ಲಿಯಾಣದ್ದು – ಕೆಳಾಣಾ ಮನೆದಾ, ಗುರ್ಮೆ ಕೋಡಿದಾ (ಕೊಡಕ್ಕಲ್ಲು ಹಾಸ್ಯಗಾರರ ಮನೆ), ತೆಕ್ಕುಂಜದ್ದಾ ಹೇಳಿ ಪಂಥ ಹಾಕಿಗೊಂಡಿತ್ತಿದ್ದೆಯ. ಇರುಳು ಲಾಷ್ಟಿಂಗೆ ಆರ ಮನೆದು ಪಟಾಕಿ ಹೇಳಿ ಸ್ಪರ್ಧೆಲಿ ಉದಿ ವರೆಗೆ ಹೊಟ್ಟಿಸಿ ಮನೆಯೋರ ಹತ್ತರೆ ಬೈಶಿಗೊಂಡದೂ ಇದ್ದು. ಆ ಕಾಲವೇ ಒಂದು ಮಜಾ.

  7. ಪಟಿಕಲ್ಲಪ್ಪಚ್ಚಿ ನಿಂಗಳ ಬಗ್ಗೆ ತಿಳುದು ತುಂಬಾ ಖುಷಿ ಆವುತ್ತಾ ಇದ್ದು. ಎಷ್ಟು ತಿಳುದರೂ ಕುತೂಹಲ ಕೆರಳಿಸಿ ಹುಚ್ಚು ಹಿಡಿಸುವ ‘ಆಧುನಿಕ ವಿಜ್ಹಾನ’, ಸಂಪೂರ್ಣ ತೃಪ್ತಿ,ಆನಂದ ನೀಡಿ ಸಮಾಧಿ ಸ್ಥಿತಿಗೇರಿಸುವ ‘ಬ್ರಹ್ಮ ಜ್ಹಾನ’ ಇವೆರಡರಲ್ಲಿಯೂ ಪರಿಪೂರ್ಣತೆ ಸಾಧಿಸಿದ ನಿಂಗಳ ಕೈ ಹಿಡುದು ನಡವಲೆ ಎಂಗಳೂ ಪ್ರಣವನ ಹಾಂಗೆ ಕಾಯ್ತಾ ಇದ್ಡೆಯ.

    1. ಜಯಶ್ರೀ ನೀರಮೂಲೆ – ನಿಂಗಳ ಪ್ರೋತ್ಸಾಹಕ್ಕೆ ಧನ್ಯವಾದಂಗ. ನಿಂಗೊಗೆ ಈ ಕೆಳಗಿನ ಪುಸ್ತಕ interesting ಅಕ್ಕು ಹೇಳಿ ಭಾವಿಸುತ್ತೆ. ಪುಸ್ತಕ ರಜಾ mathematics oriented ಆಗಿದ್ದು. ‘ಕಾಲ’ ಏವಗ ಆರಂಭ ಆತು, ಏವಗ ಕೊನೆ ಆವ್ತು, ಒಂದು ವೇಳೆ ಕಾಲಕ್ಕೆ ಆದಿ, ಅಂತ್ಯ ಇದ್ದು ಹೇಳಿ ಆದರೆ, ಅದಕ್ಕೂ ಮದಲು ಎಂತ ಇತ್ತು? ಆ ಮೇಲೆ ಎಂತ ಆವ್ತು? ಆದಿ, ಅಂತ್ಯ ಇಲ್ಲೆ ಹೇಳಿ ಆದರೆ ಕಾಲದ ಪ್ರವಾಹವ ಕಲ್ಪಿಸಿಗೊಂಬಲೇ ಕಷ್ಟ ಆವ್ತು. ಇತ್ಯಾದಿ ವಿಷಯಂಗಳ ಭಾರೀ ಲಾಯಕಕ್ಕೆ ವಿವರಿಸಿದ್ದ ಅವ ಈ ಪುಸ್ತಕಲ್ಲಿ.
      http://www.nobeliefs.com/Hawking.htm

      The Theory of Everything:
      The Origin and Fate of the Universe
      by Stephen W. Hawking

      1. ಧನ್ಯವಾದ ಅಪ್ಪಚ್ಚಿ. Stephen W. Hawking ಕುಳಿತಲ್ಲಿಂದಲೇ ಬ್ರಹ್ಮಾಂಡ ಸಂಚಾರ ಮಾಡುತ್ತಾ ಇದ್ದ. ಅವ ಕಂಡು ಹಿಡುದ ವಿಷಯಂಗ ನಮ್ಮ ‘ಆದಿ ಮಾಯೆಂದಾಗಿ ಸೃಷ್ಟಿ’ ಆದ ಕಥೆಗೆ ತುಂಬಾ ಹತ್ತಿರ ಇದ್ದು ಹೇಳಿ ಎಲ್ಲ ದೂರದರ್ಶನಲ್ಲಿ ಒಂದರಿ ಶುದ್ದಿ ನೋಡಿತ್ತಿದ್ದೆ. ಅವನ ಪುಸ್ತಕ ಓದೆಕ್ಕು ಹೇಳಿ ಆಸೆ ಇದ್ದು.

  8. ಶಂಕರ ಭಟ್ರಿಂಗೆ ಸ್ವಾಗತ..
    ಅಜ್ಜ -ಪುಳ್ಳಿಯ ಸಂಭಾಷಣೆ ಮುಂದುವರಿಯಲಿ.

  9. ನಿರೂಪಣೆ ಲಾಯಿಕಾಯಿದು..ತುಂಬಾ ಕುತೂಹಲ ಇಪ್ಪ ವಿಷಯ..ಎಂಗಳ ಮಕ್ಕೊಗೋ ವಿವರಣೆ ಕೊಡ್ಲೆ ಲಾಯಿಕಾತು..ಧನ್ಯವಾದಂಗೊ

  10. ನಮಸ್ತೆ ಸರ್.. ನಿಂಗಳ ಜ್ನಾನಸುಧೆ ಬೈಲಿಲಿ ನಿರಂತರವಾಗಿ ಹರಿಯಲಿ ಹೇಳಿ ಎನ್ನ ಹಾರೈಕೆ… 🙂

    1. ಧನ್ಯವಾದಂಗ ಲನಾ. ನಿಂಗಳ ಶುಭಾಶಯಂಗ ಇರಲಿ.

  11. ಶಂಕರ ಭಟ್ಟ್ರು ವಿಷಯವ ತಿಳಿಶುಲೆ ಆರಿಸಿಗೊಂಡ ನಿರೂಪಣಾ ಶೈಲಿ ಲಾಯಕಿದ್ದು. ನಾವೆಲ್ಲ ‘ಪ್ರಣವ’ರಾಗಿ ವಿಷಯವ ತಿಳ್ಕೊಂಬಲೆ ಪ್ರಯತ್ನಿಸುವ^
    ಸೀಯೆಚ್ಚೆಸ್ಸ್.

  12. ನಮೋನ್ನಮಃ. ಬೈಲಿಂಗೆ ಸುಸ್ವಾಗತಂ.
    ಪುಳ್ಳಿ ವಾಪಾಸು ಬರೆಕ್ಕಾರೆ ನಾವು ಇಲ್ಲಿ ಕರೆಲಿ ಕೂಯಿದು, ಇನ್ನಾಣ ಶುದ್ದಿ ಕೇಳುಲೆ. ಹೇಳಿ.

    1. ನಿಂಗೊಗೆ ಧನ್ಯವಾದಂಗ. ಈಗ ನಡೆತ್ತಾ ಇದ್ದು ಅವನೊಟ್ಟಿಂಗೆ ಸಂವಾದ. ಆದಷ್ಟು ಬೇಗ ಬರಹ ರೂಪಕ್ಕೆ ತಂದು ಕಳ್ಸಿ ಕೊಡ್ತೆ.

  13. ಪಟಿಕ್ಕಲ್ಲಪ್ಪಚ್ಚಿಯ ಬೈಲಿನೊಳ ಹಿಡುದು ಕೂರ್ಸಿದ್ದು ಲಾಯಕ ಆತು. ಬೈಲಿಂಗೆ ಸ್ವಾಗತ ಅಪ್ಪಚ್ಚಿ. ನಿಂಗಳತ್ರೆ ಸುಮಾರು ಬಗೆ ಕೇಳಿ ತಿಳಿವಲೆ ಇದ್ದು. ಮದಾಲು ಪುಳ್ಳಿ ಕೇಳಿದ್ದಕ್ಕೆ ಹೇಳಿಯಾಗಲಿ. ಎಂಗಳೂ ಕಾಯ್ತೆಯೋ°.

    1. ನಿಂಗಳ ಪ್ರೋತ್ಸಾಹ ನೋಡಿ ತುಂಬಾ ಸಂತೋಷ ಆತು. ಎನ್ನಂದ ಎಡಿಗಾದಷ್ಟೂ ಪ್ರಯತ್ನ ಮಾಡ್ತೆ.

    1. ನಿಂಗೊಗೆ ಧನ್ಯವಾದಂಗ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×