Oppanna.com

ಬಲಿಪ್ಪಜ್ಜಂಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯ ಗರಿ…

ಬರದೋರು :   ವೇಣೂರಣ್ಣ    on   31/10/2010    9 ಒಪ್ಪಂಗೊ

ವೇಣೂರಣ್ಣ

ಬಲಿಪ್ಪಜ್ಜ ಹೇಳಿದ ಕೂಡ್ಲೇ ಯಕ್ಷಗಾನ ಅಭಿರುಚಿ ಇಪ್ಪ ಅಭಿಮಾನಿಗೊಕ್ಕೆಲ್ಲ ಪಕ್ಕ ನೆಮ್ಪಪ್ಪದು ” ಶರಣು ತಿರುವಗ್ರ ಶಾಲಿ ವಾಹಿನಿ.. “ ಹೇಳ್ತ ಸ್ತುತಿ ಪದ್ಯ .
ಯಕ್ಷಕಲಾ ತಪಸ್ವಿ ಬಲಿಪ ನಾರಾಯಣ ಭಾಗವತಜ್ಜ೦ಗೆ ರಾಜ್ಯದ ಪ್ರತಿಷ್ಟಿತ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ ಆಯಿದು.
ಈ ವರ್ಶ ನವೆಂಬರ್ ಒಂದನೇ ತಾರೀಖಿಂಗೆ ಕಸ್ತಳಪ್ಪಗ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರಲ್ಲಿ ಮಾಡ್ತಾ ಪ್ರಶತಿ ಪ್ರದಾನ ಸಮಾರಂಭಲ್ಲಿ  ರಾಜ್ಯೋತ್ಸವ ಪ್ರಶಸ್ತಿ  ಕೊಡುತ್ತ ಇಪ್ಪದು ಸಂತೋಷದ ವಿಚಾರ.

ಯಕ್ಷಗಾನ ಭಾಗವತಿಕೆಲಿ ತನ್ನದೇ ಆದ ಶೈಲಿಲಿ ಛಾಪು ಹಾಕಿದ ಬಲಿಪಜ್ಜಂಗೆ ಸುಮಾರು ನೂರಕ್ಕೂ ಮಿಕ್ಕಿ ಪ್ರಸಂಗಂಗೋ ಬಾಯಿಪಾಟ  ಬತ್ತು.
ಎಪ್ಪತ್ತಕ್ಕೂ ಹೆಚ್ಚು ಪ್ರಸಂಗಗಳ ಬರದ ಬಲಿಪಜ್ಜ ಐದು ದಿನದ ಶ್ರೀದೇವಿ ಮಹಾತ್ಮೆ ಯಕ್ಷಗಾನ ಪ್ರಸಂಗ ಬರದು  ಯಕ್ಷಗಾನ ಪ್ರಸಂಗ ಸಾಹಿತ್ಯ ಕ್ಷೇತ್ರಲ್ಲೇ  ಹೊಸ ಮೈಲಿಕಲ್ಲು ಹಾಕಿದ್ದು ಅವರ ಜೀವಮಾನದ ಸಾಧನೆ.
ಈ ಪುಸ್ತಕವ ನಮ್ಮ ಬೈಲಿನ ಕೆಲವು ಮಿತ್ರರು ಸೇರಿ ಪ್ರಕಟಿಸುವ ಸೌಭಾಗ್ಯ ಸಿಕ್ಕಿದ್ದು ನಮ್ಮೆಲ್ಲರ ಸೌಭಾಗ್ಯ.

ಯಕ್ಷಗಾನದ ಪೂರ್ವರಂಗಂದ ಹಿಡುದು ಯಾವುದೇ ಪ್ರಸಂಗದ ಬಗ್ಗೆ ಖಚಿತವಾದ ಮಾಹಿತಿ, ಪ್ರಸಂಗ ನಡೆ, ರಾಗ ,ತಾಳ, ಲಯ ಜ್ಞಾನ  ಸಂಪೂರ್ಣವಾಗಿ ಇಪ್ಪ ಏಕೈಕ ಭಾಗವತ ಬಲಿಪ ತೆಂಕುತಿಟ್ಟಿನ ಹೆಮ್ಮೆ.
ಸುಮಾರು ಆರು ದಶಕ ಕಾಲ ಯಕ್ಷಗಾನಲ್ಲಿ ಸಕ್ರಿಯವಾಗಿಪ್ಪ ಬಲಿಪಜ್ಜ ಈಗಲೂ ಮನಸ್ಸು ಮದುಗಿ ನಾಲ್ಕು ಏರು ಪದ ಬಿಟ್ಟರೆ ಬೇರಾವ ಭಾಗವತನ ಪದವೂ ಕಾಣದ್ದಷ್ಟು ಪರಿಣಾಮ ಬೀರುವ ಸಾಮಥ್ಯ ಇಪ್ಪ ಶ್ರೇಷ್ಠ ಕಲಾವಿದ.

ಬಲಿಪಜ್ಜನ ಪದ್ಯ ಇಪ್ಪ ಹಲವಾರು ಸಿ.ಡಿ . ತಟ್ಟೆಗೋ ಅಂಗಡಿಲಿ ಸಿಕ್ಕುತ್ತು .
ಇಂಥ ಅತ್ಯಂತ  ಮುಗ್ಧ , ಸಜ್ಜನ , ನಿಗರ್ವಿ  ಪರಿಪೂರ್ಣ ಕಲಾವಿದನ ಕಲಾ ಸಾಧನೆಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ  ಕೊಡುತ್ತ ಇಪ್ಪದು ರಾಜ್ಯೋತ್ಸವ ಪ್ರಶಸ್ತಿಯ ಗೌರವ ಇನ್ನಷ್ಟು ಹೆಚ್ಚಿತ್ತು.

ಇದರಿಂದ ಸ್ಫೂರ್ತಿ ಪಡದು ಬಲಿಪಜ್ಜ ಇನ್ನು ಹಲವು ವರ್ಷ ನಮ್ಮೆಲ್ಲರ ರಂಜಿಸಲಿ ಹೇಳಿ ಹೃನ್ಮನ ಪೂರ್ವಕ ನಮ್ಮೆಲ್ಲರ ಹಾರೈಕೆ.

ಬಲ್ಲಿಪ್ಪಜ್ಜನ ಕೆಲವು ಕ್ಷಣಂಗೊ:

9 thoughts on “ಬಲಿಪ್ಪಜ್ಜಂಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯ ಗರಿ…

    1. ಅದಪ್ಪು… ಬಲಿಪ್ಪಜ್ಜ ಈ ಪ್ರಶಸ್ತಿಂದ ಎಷ್ಟೋ ಮೇಲೆ ಇದ್ದವು. ಬಲಿಪ್ಪಜ್ಜಂಗೆ ಕೊಟ್ಟದರಿಂದ ಈ ಪ್ರಶಸ್ತಿಗೇ ಬೆಲೆ ಬಂದದು…

  1. Balipabhagavatharinge ishtu varsha prashasthi kodaddadu ondu aashcharyada vishaya.avakke devaru aayurarogyava kodali.

  2. ಬಲಿಪ್ಪಜ್ಜ೦ಗೆ ತಡವಾಗಿಯಾದರೂ ರಾಜ್ಯೋತ್ಸವ ಪ್ರಶಸ್ತಿ ಕೊಟ್ಟವನ್ನೇ,ಸುದ್ದಿ ಕೇಳಿ ಕೊಶಿ ಆತು.ಒಟ್ಟಿ೦ಗೆ ಕೊಡಕ್ಕಲ್ಲು ಗೋಪಾಲಕೃಷ್ಣ ಮಾವಂಗೂ,ಕಜೆ ದಾಗುಟ್ರಿ೦ಗೂ ಪ್ರಶಸ್ತಿ ಸಿಕ್ಕಿದ್ದು ಸಂತೋಷದ ಸುದ್ದಿ.

  3. ಬಲಿಪಜ್ಜಂಗೆ ನಿಜವಾಗಿ ಸಮ್ಮಾನ ಶ್ಲಾಘನೀಯ.ಗುರುತಿಸಿದ ಮಹಾನೀಯರುಗಕ್ಕೆ ಧನ್ಯವಾದ.ಸಮ್ಮಾನ ಸ್ವೀಕಾರ ಮಾಡಿದ ಬಲಿಪಜ್ಜಂಗೂ ಧನ್ಯವಾದ.

  4. ಭಲಿರೆ !!!! ಬಲಿಪ್ಪಜ್ಜನ ಶ್ರೀ ಪರಮಾತ್ಮನು ಅಯುರಾರೊಘ್ಯ ಸೌಭಾಗ್ಯವ ಕೊಟ್ಟು ಕಾಪಾಡಲಿ

  5. ಪೆರಡಾಲದವರ ಯಕ್ಷಗಾನ ಸೀಡಿ ಮಾಡ್ತ ಸಮಯಲ್ಲಿ ಕೊಡೆಯಾಲಲ್ಲಿ ಇವರ ಹತ್ರಂದ ಮಾತಾಡ್ಸುವ ಅವಕಾಶ ಸಿಕ್ಕಿದ್ದು. ಸರಳ ವ್ಯಕ್ತಿತ್ವ. ಇವಕ್ಕೆ ರಾಜ್ಯೋತ್ಸವ ಪ್ರಶಸ್ತಿ ಸಿಕ್ಕಿದ್ದು ಕೇಳಿ ಭಾರೀ ಸಂತೋಷ ಆತು.

  6. ಬಲಿಪ್ಪಜ್ಜ೦ಗೆ ಪ್ರಶಸ್ತಿ ಸಿಕ್ಕಿದ ಲೆಕ್ಕಲ್ಲಿ ನಮೋ ನಮಹ.ಅದ್ಬುತ ಪ್ರತಿಭಗೆ ಎ೦ದೋ ಸಲ್ಲೆಕಾದ ಪ್ರಶಸ್ತಿ ಈಗಲಾದರೂ ಬ೦ತಾನೆ.ಒಪ್ಪ್೦ಗಳೊಟ್ಟಿ೦ಗೆ

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×