Oppanna.com

ಭೋಜನ ಸ್ವೀಕಾರ ಮಂತ್ರ

ಬರದೋರು :   ಗಣೇಶ ಮಾವ°    on   16/01/2010    9 ಒಪ್ಪಂಗೊ

ಗಣೇಶ ಮಾವ°

ಸಣ್ಣ ಇಪ್ಪಗ ಜೆಪದ ಮಂತ್ರಂದ ಕಲಿವಲೆ ಸುರುಮಾಡ್ತವು.
ಅಂಬಗ ಗೋಪಿ ಮೆತ್ತಿಗೊಂಡು ಜೆಪ ಮಾಡ್ತದು ತುಂಬ ಕುಶಿಯ ಸಂಗತಿ.
ದೊಡ್ಡ ಆದ ಮತ್ತೆ ಕೈನ್ನೀರು ತೆಗವ ಮಂತ್ರಂದ ಕಲಿವಲೆ ಸುರು ಮಾಡುದಡ – ಎಂತಕೆ ಹೇಳಿರೆ, ದೊಡ್ಡವಕ್ಕೆ ಉಂಬದೇ ಕುಶಿಯ ಸಂಗತಿ ಅಡ!
ಇದು ಕೈನ್ನೀರು ತೆಗವಗ ಹೇಳ್ತದು, 
ಭೋಜನ ಸ್ವೀಕಾರ ಮಂತ್ರ
:
1. ಪ್ರೋಕ್ಷಣೆ:
ಬಾಳೆಲೆಬುಡಲ್ಲಿ (ಬಾಳೆಬುಡಲ್ಲಿ ಅಲ್ಲ!) ಕೂದಂಡು ಸುರೂವಿಂಗೆ ಕೈಲಿ ನೀರು ತೆಕ್ಕೊಂಡು ಅಶನಕ್ಕೆ ಗಾಯತ್ರಿ ಮಂತ್ರಲ್ಲಿ ಪ್ರೋಕ್ಷಣೆ ಮಾಡುದು:
ಓಂ ಭೂರ್ಭುವಸ್ಸುವಃ |
ತತ್ಸವಿತುರ್ವರೇಣ್ಯಂ ಭರ್ಗೋದೇವಸ್ಯ ಧೀಮಹಿ ||
ಧಿಯೋ ಯೋನ:ಪ್ರಚೋದಯಾತ್ ||

2. ಪರಿಷಿಂಚನೆ:
ಈ ಮಂತ್ರ ಹೇಳಿಗೊಂಡು ಪ್ರದಕ್ಷಿಣಾಕಾರವಾಗಿ ಬಾಳೆಎಲೆಯ ದಕ್ಷಿಣ ಭಾಗಂದ ಪ್ರಾರಂಭ ಮಾಡಿ ವೃತ್ತಾಕಾರಲ್ಲಿ ಪುನಃ ದಕ್ಷಿಣಕ್ಕೆ ನೀರು ಸುತ್ತುಗಟ್ಟುವದು.
ಇದುವೇ ಪರಿಷಿಂಚನೆ
ಸತ್ಯಂ ತ್ವರ್ತೇ ನ  ಪರಿಷಿಂಚಾಮಿ || (ಹಗಲಿಂಗೆ)
ಋತಂ ತ್ವಾ ಸತ್ಯೇನ
ಪರಿಷಿಂಚಾಮಿ ||(ಇರುಳಿಂಗೆ)

SA Swiss Replica Watches
3. ಹವಿಸ್ಸು ಸಮರ್ಪಣೆ:
ಬಾಳೆ ಎಲೆಯ ದಕ್ಷಿಣ ಭಾಗಲ್ಲಿ ಪೂರ್ವಂದ ಪ್ರಾರಂಭ ಮಾಡಿ ಪಡು ಹೊಡೆಂಗೆ ಯಮಾದಿ ದೇವತೆಗಕ್ಕೆ ಹವಿಸ್ಸು ಸಮರ್ಪಣೆ.
ಒಂದೊಂದೇ ಅಶನವ ಮಡುಗಿ ಒಂದೊಂದು ಬಿಂದು ನೀರು ಬಿಡುವದು.
ಓಂ ಚಿತ್ರಾಯ ಸ್ವಾಹಾ |
ಓಂ ಚಿತ್ರಗುಪ್ತಾಯ ಸ್ವಾಹಾ |
ಓಂ ಯಮಾಯ ಸ್ವಾಹಾ |
ಓಂ ಯಮ ಧರ್ಮಾಯ ಸ್ವಾಹಾ |

(ನಾಲ್ಕು ಅವುಳು ಅಶನ ಮಡಗುದು)
ಚಿತ್ರಾಯ ನಮ: ತೃಪ್ತಿರಸ್ತು |
ಚಿತ್ರಗುಪ್ತಾಯ ನಮ: ತೃಪ್ತಿರಸ್ತು |
ಯಮಾಯ ನಮ: ತೃಪ್ತಿರಸ್ತು |
ಯಮಧರ್ಮಾಯ ನಮ: ತೃಪ್ತಿರಸ್ತು ||

(ನಾಲ್ಕು ಹುಂಡು ನೀರು ಬಿಡುದು)
(ವಸಿಷ್ಠ ಗೋತ್ರದವು  ಈ ರೀತಿ ಹವಿಸ್ಸು ಸಮರ್ಪಣೆ ಮಾಡ್ಲೆ ಇಲ್ಲೆ. ಅವು ನಿತ್ಯ ಅಗ್ನಿಹೋತ್ರಿಗ!
ಅವು ಅಗ್ನಿಯ ಆರಾಧನೆ ಮಾಡುವಗ ಹವಿಸ್ಸು ಸಮರ್ಪಣೆ ಮಾಡುವದು ಹೇಳಿ ಶಾಸ್ತ್ರ ವಚನ)
4. ಪ್ರಾರ್ಥನೆ:
ಎಡದ ಕೈ ಪವಿತ್ರ ಬೆರಳಿಲಿ ಬಾಳೆಎಲೆ ಮುಟ್ಟಿಗೊಂಡು, ಬಲ ಕೈಲಿ ನೀರು ಹಿಡ್ಕೊಂಡು ಈ ಮಂತ್ರ ಪ್ರಾರ್ಥನೆ ಮಾಡೇಕು:
ಅಂತಶ್ಚರಸಿ ಭೂತೇಷು ಗುಹಾಯಾಂ ವಿಶ್ವತೋಮುಖಃ |
ತ್ವಂ ಯಜ್ನಸ್ತ್ವಂ ವಷಟ್ಕಾರಸ್ತ್ವಂ ವಿಷ್ಣುಃ ಪುರುಷಃ ಪರಃ ||

ಇದರ ಹೇಳಿಗೊಂಡೂ ಆ ನೀರಿನ ಕುಡಿಯೇಕು:
ಅಮೃತೋಪಸ್ತರಣಮಸಿ ಸ್ವಾಹಾ ||
5. ಅನ್ನಪ್ರಾಶನ:
ಇನ್ನು ಅನ್ನ ಪ್ರಾಶನ (ಅವುಳು ನುಂಗುದು).
ಒಂದೊಂದು ಮಂತ್ರಕ್ಕೂ ಒಂದೊಂದು ಕ್ರಮಲ್ಲಿ ಅಶನ ‘ಸ್ವಾಹಾ’ ಮಾಡುದು.
ಓಂ ಪ್ರಾಣಾಯ ಸ್ವಾಹಾ ||  ಪೂರ್ವ ದಿಕ್ಕಿಂದ ಒಂದು ಅಶನವ ಅಗುಷ್ಠ , ತೋರು, ಮಧ್ಯ, ಬೆರಳುಗಳ ಸೇರ್ಸಿ ಹೆರ್ಕಿ ಪ್ರಾಶನ ಮಾಡೆಕ್ಕು.
ಓಂ ಅಪಾನಾಯ ಸ್ವಾಹಾ ||  ದಕ್ಷಿಣ ದಿಕ್ಕಿಂದ ಅಂಗುಷ್ಠ, ಮಧ್ಯ, ಪವಿತ್ರ ಬೆರಳುಗಳ ಸೇರ್ಸಿ..
ಓಂ ವ್ಯಾನಾಯ ಸ್ವಾಹಾ ||  ಪಶ್ಚಿಮ ದಿಕ್ಕಿಂದ ಅಂಗುಷ್ಠ, ಪವಿತ್ರ, ಕಿರು ಬೆರಳುಗಳ ಸೇರ್ಸಿ..
ಓಂ ಉದಾನಾಯ ಸ್ವಾಹಾ ||  ಉತ್ತರ ದಿಕ್ಕಿಂದ ಅಂಗುಷ್ಠ, ಕಿರು, ತೋರು ಬೆರಳುಗಳ ಸೇರ್ಸಿ..
ಓಂ ಸಮಾನಾಯ ಸ್ವಾಹಾ || ಎಲ್ಲಾ ಬೆರಳು ಸೇರ್ಸಿ ಮಧ್ಯಂದ ಪ್ರಾಶನ ಮಾಡೆಕ್ಕು
ಓಂ ಬ್ರಹ್ಮಣೇ ಸ್ವಾಹಾ ||ಎಲ್ಲಾ ಬೆರಳು ಸೇರ್ಸಿ ಮಧ್ಯಂದ ಪ್ರಾಶನ ಮಾಡೆಕ್ಕು
ಋಷಿಮುನಿಗೊಕ್ಕೆ ಊಟ ಹೇಳಿ ಇದ್ದದು ಇದೇ ಆರು ತುತ್ತಗೊ ಮಾಂತ್ರ ಅಡ.
ನಾವು ಸಾಂಪ್ರದಾಯಿಕವಾಗಿ ಅವುಳು ತಿಂದು ಮತ್ತೆ ಉಂಬಲೆ ಸುರುಮಾಡುದು.
ಹಾಂಗೆ, ಇನ್ನು ಗಡದ್ದಿಂಗೆ ಉಂಬದು.
6. ಆಪೋಶನ :
ಊಟ ಆದಮೇಲೆ ಆಪೋಶನ.
ಬಲ ಕೈಗೆ ನೀರು ಹಾಕಿಯೊಂಡು ಈ ಮಂತ್ರ ಹೇಳಿಕ್ಕಿ ಕುಡಿವದು.
ಅಮೃತಾಪಿಧಾನಮಸಿ ಸ್ವಾಹಾ ||
ಇನ್ನು ಕೈ ತೊಳದು ಅಪ್ಪನ್ನಾರ ಆಹಾರ / ನೀರು ಸೇವನೆ ಮಾಡ್ಳಾಗ. ನೀರು ಕುಡಿತ್ತರೂ ಎದ್ದು ಕೈ ತೊಳದ ಮತ್ತೆಯೇ ಆತಷ್ಟೆ.

9 thoughts on “ಭೋಜನ ಸ್ವೀಕಾರ ಮಂತ್ರ

  1. ಪಾಠನ್ತರ,ದೇಶ ಕಾಲೌ ಸಂಕೀರ್ತ್ಯ…ಹೇಳುವ ಹಾಂಗೆ ಒಂದೊಂದು ಗ್ರಂಥ ಆಧಾರ ಪ್ರಕಾರ ಇರ್ತು ಭಾವ,ಆನು ಕಾಂಚೀ ಮಠದ ಪದ್ಧತಿಯ ಇಲ್ಲಿ ಹಾಕಿದ್ದು..ನಿಂಗಳ ಸಲಹೆಗೆ ಧನ್ಯವಾದ.

  2. ಗಣೇಶ ಮಾವ, ಉತ್ತಮ ಲೇಖನ. ಆದರೆ ಒಂದು ಸಂಶಯ….. ಪ್ರಾಶನ ಆರಂಭ ಪೂರ್ವಂದ ಅಲ್ಲದೋ? ಮುದ್ರಾರಾಕ್ಷಸನ ಹಾವಳಿಯೋ ಏನೋ? ಎನಗೆ ತೋರಿದ್ದರ ಕೆಳ ಬರದ್ದೆ.
    ಓಂ ಪ್ರಾಣಾಯ ಸ್ವಾಹಾ || ಪೂರ್ವ ದಿಕ್ಕಿಂದ ಅಶನವ ತೋರು ಬೆರಳು, ಮಧ್ಯಮ, ಅಂಗುಷ್ಠ ಬೆರಳುಗಳ ಸೇರ್ಸಿ ಹೆರ್ಕಿ ಪ್ರಾಶನ ಮಾಡೆಕ್ಕು.
    ಓಂ ಅಪಾನಾಯ ಸ್ವಾಹಾ || ದಕ್ಷಿಣ ದಿಕ್ಕಿಂದ ಅಶನವ ಮಧ್ಯಮ,ಪವಿತ್ರ,ಅಂಗುಷ್ಠ ಬೆರಳುಗಳ ಸೇರ್ಸಿ..
    ಓಂ ವ್ಯಾನಾಯ ಸ್ವಾಹಾ || ಪಶ್ಚಿಮ ದಿಕ್ಕಿಂದ ಕಿರುಬೆರಳು, ಪವಿತ್ರ ಬೆರಳು, ಅಂಗುಷ್ಠ ಬೆರಳು ಸೇರ್ಸಿ..
    ಓಂ ಉದಾನಾಯ ಸ್ವಾಹಾ || ಉತ್ತರ ದಿಕ್ಕಿಂದ ಕಿರು ಬೆರಳು, ತೋರು ಬೆರಳು, ಅಂಗುಷ್ಠ ಬೆರಳು ಸೇರ್ಸಿ..
    ಓಂ ಸಮಾನಾಯ ಸ್ವಾಹಾ || ಎಲ್ಲಾ ಬೆರಳು ಸೇರ್ಸಿ ಮಧ್ಯಂದ ಪ್ರಾಶನ ಮಾಡೆಕ್ಕು
    ಓಂ ಬ್ರಹ್ಮಣೇ ಸ್ವಾಹಾ || ಎಲ್ಲಾ ಬೆರಳು ಸೇರ್ಸಿ ಮಧ್ಯಂದ ಪ್ರಾಶನ ಮಾಡೆಕ್ಕು
    ಎನ್ನದು ತಪ್ಪಿದ್ದರೆ ಗೊಂತಿದ್ದನ್ನೆ…, ತಿದ್ದಿಕ್ಕಿ.

  3. E manthrangala Ottinge … Namma Bhagavadgeethe Manthra helidhare olledhu
    Brahmarpanam Brahma Havir
    Brahmagnau Brahmana Hutam
    Brahmaiva Tena Ghantavyam
    Brahmakarma Samadhinaha
    Aham Vaishvanaro Bhutva
    Praninaam Dehamaa Ashritaha
    Prana Pana Samayuktah
    Pachamyannam Chaturvidham
    For More details see:
    http://www.sathyasai.org/devotion/prayers/brahmar.html

  4. ಇಷ್ಟೆಲ್ಲಾ ಸಂಗತಿದೆ ಇದ್ದು – ಭೋಜನ ಸ್ವೀಕಾರಲ್ಲಿ ಹೇಳುವದು ಎನಗೊಂತಿತ್ತಿದ್ದಿಲ್ಲೆ! – ಇಷ್ಟು ವಿವರವಾಗಿ ತಿಳುದು ಒಂದುದೆ ತಪ್ಪಿಲ್ಲದ್ದ ಹಾಂಗೆ ಬರೆಕಾರೆ ಆ ಬರದ ಜನಕ್ಕೆ ಜ್ಞಾನದೆ ಸಹನೆದೆ ಸ್ಪೂರ್ತಿದೆ ಮೂಗಿಂದ ಮೇಲೆ ಇಪ್ಪಲೇ ಬೇಕು! – ಆರೇ ಇರಳಿ ಅವಕ್ಕೆ ಎನ್ನ ಎದೆ ಒಳಂದ ಧನ್ಯವಾದ!

  5. hello,ganesha maava,,ninga elligoo laaga haakle suru maadideera?laayika aayidu aatha,,kai neeru tegava vishaya,but enga koosuga kai neeru tegava haange illenne,, ha, helida haange ningoge idara ella baravale time eshtottinge sikkuttu?
    oppanna na bagge parichaya aayekkashte, nidhaanavaagi nodte oppanna.. olle lekhanakke ibru oppannandringe dhanyavadagalu…..

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×