Oppanna.com

ಗುಡು ಗುಡು…ಗುಡು ಗುಡೂ ಹೇಳ್ತು…

ಬರದೋರು :   ಸುಭಗ    on   29/01/2011    40 ಒಪ್ಪಂಗೊ

ಸುಭಗ

ನಮ್ಮ ಜನಪದ ಸಾಹಿತ್ಯ ಹೇಳಿರೆ ಒಂದು ದೊಡ್ಡ ಸಾಗರ.
ಆ ಸಾಗರದ ಅಡಿಲಿ ಕತೆಗೊ, ಪದ್ಯಂಗೊ,ಗಾದೆಗೊ,ಒಗಟುಗೊ, ಕುಶಾಲುಗೊ ಹೀಂಗಿರ್ತ ಮುತ್ತು ರತ್ನಂಗೊ ಧಾರಾಳ ಇದ್ದು. ‘ಇದ್ದು’ ಹೇಳಿರೆ ಮುಗಾತೊ?
ಅದೆಲ್ಲ ನವಗೆ ಬೇಕು ಹೇಳಿ ಆದರೆ ಅದರ ಆಳಕ್ಕೆ ಮುಂಗಿ ಅಡೀಲಿ ಕೈಹಾಕಿ ಪರಡೆಕ್ಕು. ಧಾರಾಳ ಹೆರ್ಕಿ ತಪ್ಪಲಕ್ಕು.

ತಯಿಂದವು. ತುಂಬ ಜೆನ ಜನಪದ ವಿದ್ವಾಂಸರುಗೊ ಈ ಸಾಹಿತ್ಯಂಗಳ ಹೆರ್ಕಿ ತಂದು ವ್ಯವಸ್ಥಿತ ರೂಪಲ್ಲಿ ಸಂಗ್ರಹ ಮಾಡಿ ನವಗೆಲ್ಲ ಸಿಕ್ಕುವಾಂಗೆ ಮಾಡಿದ್ದವು.
ಗ್ರಂಥ-ಸೀಡಿ-ಕೇಸೆಟ್ಟುಗಳಲ್ಲಿ ಅದರ ತುಂಬುಸಿ ಮಡುಗಿದ್ದವು. ಕೆಲವು ನೆಟ್ಟಿಲ್ಲಿಯೂ ಇಕ್ಕು. ಆದರೆ ಹೀಂಗೆ ಹೆರ್ಕಿ ಸಂಗ್ರಹ ಮಾಡ್ಲೆ ಬಾಕಿ ಆದ ಕತೆಗಳೋ ಪದ್ಯಂಗಳೋ ಇನ್ನೂ ಎಷ್ಟೋ ಇಕ್ಕು.
ಆನು ಈಗ ಈ ವಿಷಯ ಎಂತಗೆ ಹೇಳಿದೆ ಹೇಳಿರೆ- ಎನಗೆ ಎನ್ನ ಹಿರೀರು ಹೇಳಿದ ಒಂದು ಸಣ್ಣ ಕತೆ ಪಕ್ಕನೆ ನೆಂಪಾತು.
ಅದು ಏವದಾರು ಪುಸ್ತಕಲ್ಯೋ ಮಣ್ಣೊ ದಾಖಲಾಯಿದೊ ಹೇಳ್ತ ಸಂಗತಿ ಎನಗೆ ಗೊಂತಿಲ್ಲೆ. ಅಥವಾ ಅದು ನಿಂಗೊಗೆ ಆರಿಂಗಾರು ಗೊಂತಿಪ್ಪ ಕತೆ ಆಗಿಪ್ಪಲೂ ಸಾಕು.
ಆದರೂ ಅದರ ಇಲ್ಲಿ ಒಂದಾರಿ ಹೇಳಿತ್ತೂಳಿ ಆದರೆ ಗೊಂತಿಪ್ಪವಕ್ಕೂ ಇನ್ನೊಂದಾರಿ ನೆಂಪು ಮಾಡಿದಾಂಗೆ ಅಕ್ಕನ್ನೆ ಹೇಳ್ತ ಉದ್ದೇಶ.

ಕತೆ ಹೇಳಿರೆ ಕತೆ.
ಹಾಂಗಾದ ಕಾರಣ- ಏವಗ? ಎಲ್ಲಿ? ಆರು? ಹೀಂಗಿರ್ತ ಪೆರಟ್ಟು ಪ್ರಶ್ನೆಗಳೆಲ್ಲ ಕೇಳ್ಳಾಗ. “ಒಂದಾನೊಂದು ಕಾಲಲ್ಲಿ ಒಂದಾನೊಂದು ಊರಿಲ್ಲಿ ಒಬ್ಬ” ಹೇಳಿ. ಅಷ್ಟೆ.

ಹಾಂಗೆ, ಒಂದಾನೊಂದು ಕಾಲಲ್ಲಿ ಒಂದಾನೊಂದು ಊರಿಲ್ಲಿ ಎಲ್ಲೆಲ್ಲಿಂದಲೋ ಅವರವರ ಕಾರ್ಯಕ್ಕೆ ಹೋದ ಮೂರು ಜೆನ ದಾರಿಹೋಕಂಗೊ ಒಂದು ಛತ್ರಕ್ಕೆ ಬಂದು ಸೇರಿದವಡ.
ಅಂಬಗಾಣ ಪರಿಸ್ಥಿತಿ ನವಗೆ ಕೇಳಿ ಗೊಂತಿದ್ದನ್ನೆ? ಎಷ್ಟೇ ದೂರದ ಪ್ರಯಾಣ ಆದರೂ ನೆಡದೋ ಎತ್ತಿನ ಗಾಡಿಲಿಯೋ ಮಣ್ಣೊ ಹೋಯೆಕ್ಕಷ್ಟೆ.
ಕಸ್ತಲಾದರೆ ನಿಂಬಲೆ ಲೋಡ್ಜುಗಳೋ ರೆಸೋರ್ಟುಗಳೋ ಇಲ್ಲೆ. ಊರಿನ ಆರಾರು ದೊಡ್ಡಕುಳಂಗೊ* ಕಟ್ಟುಸಿದ ಧರ್ಮಛತ್ರವೇ ಆಯೆಕ್ಕಷ್ಟೆ.

ಬೇಶ ತಿಂಗಳು. ಪತ್ತನಾಜೆ* ಹತ್ರಾಣ ದಿನ. ಬೆಶಿಲ ಗಾವು, ಧೂಳು-ಧಗೆಲಿ ನೆಡದು ಮೂರ್ಸ್ಸಂದಿ ಅಪ್ಪಗ ಛತ್ರಕ್ಕೆ ಎತ್ತಿದವು.
ಅವರವರ ಮಾರಾಪುಗಳ ಕರೇಲಿ ಮಡುಗಿಕ್ಕಿ ಬಾವಿಂದ ನೀರೆಳದು ಚೊಕ್ಕಕೆ ಮೈ ಕೈ ತೊಳಕ್ಕೊಂಡವು. ಸೌ…ಖ್ಯ ಆತು! ಬಚ್ಚಲು ಅರೆವಾಶಿ ತಗ್ಗಿತ್ತು!
ಇನ್ನು ಪ್ರಯಾಣ ಮುಂದರ್ಶುದು ಹೇಂಗೂ ನಾಳೆ ಉದಿಯಾದ ಮತ್ತೇ. ಅಷ್ಟನ್ನಾರ ನಮ್ಮ ಹಾಂಗೇ: ನಮ್ಮೊಟ್ಟಿಂಗೇ ನಿಂಬವರ ಪರಿಚಯ ಮಾಡಿಯೋಳದ್ರೆ ಅಕ್ಕೋ?
ಮೂರು ಜೆನವೂ ಪರಸ್ಪರ ಪರಿಚಯ ಮಾಡಿಯೊಂಡವು. ಮಳೆ-ಬೆಳೆ; ಆಳು-ಕಾಳು ಲೋಕ ವಿಚಾರಂಗಳ ಬಗ್ಗೆ ಹನಿಯೋತ್ತ* ಮಾತಾಡಿಯೊಂಡವು.

ಇರುಳಾತು. ಹೊಟ್ಟೆಯೂ ನೆಂಪು ಮಾಡಿತ್ತು. ಕಟ್ಟಿಂಡು ಬಂದ ಬುತ್ತಿ ಹತ್ತರೇ ಇಪ್ಪಗ ಬೇರೆ ಆಲೋಚನೆ ಮಾಡೆಕ್ಕಾದ ಅಗತ್ಯ ಇಲ್ಲೆನ್ನೆ?! ಅವ್ವವು ತಂದ ಬುತ್ತಿ ಕಟ್ಟಂಗಳ ಬಿಡುಸಿ ಉಂಡವು.
ಇವನ ಕುಣಿಯ ಅವಂಗೆ: ಅವನ ಪಂಚೊಳ್ಳಿ ಆಚವಂಗೆ- ಹೀಂಗೆ ಅತ್ತು ಇತ್ತು ಹಂಚಿಂಡು ಎಲೆಯೂ ತಿಂದವು..
ಆ ಉಲ್ಲಾಸಲ್ಲಿ ಮತ್ತೊಂದಷ್ಟು ಹೊತ್ತು ಪಟ್ಟಾಂಗ ಹೊಡದವು.. ಹನಿಯೋತ್ತು ಕಳುದಪ್ಪಗ “ಇನ್ನು ಮನುಗುವನೊ?” ಕೇಳಿದ ಒಬ್ಬ. “ಸರಿ” ಹೇಳಿ ಆತು.
ಮೂರು ಜೆನವುದೆ ಹತ್ತರತ್ತರೆ ಸಾರೀಟ* ಮನುಗಿದವು. ಮನುಗಿದು ಮಾಂತ್ರ- ಆರಿಂಗು ಒರಕ್ಕು ಬಯಿಂದಿಲ್ಲೆ.
ಈ ಸೆಖೆಗೆ ಅಷ್ಟು ಪಕ್ಕ ಒರಕ್ಕು ಬಕ್ಕೊ? ಎಲ್ಲರು ಅವರವರಷ್ಟಕೆ ಸ್ವಂತ ವಿಚಾರಂಗಳ, ಸಮಸ್ಯೆಗಳ ನೆಂಪು ಮಾಡಿಂಡು ಮನುಗಿಂಡು ಇದ್ದವು. ಕರ್ಗಾಣ ಕಸ್ತಲೆ..
ಆಕಾಶಲ್ಲಿ ಮೋಡವೂ ತುಂಬಿದ್ದೊ ಸಂಶಯ.. ದೂರಲ್ಲಿ ಸಣ್ಣಕೆ ಗುಡುಗುದೂ ಕೇಳ್ತು..ಅಪ್ಪೊ ಅಲ್ಲದೊ ಹೇಳಿ ಮಿಂಚುದೂ ಕಾಣ್ತು..

ಅಷ್ಟಪ್ಪಗ ಈ ಕರೇಲಿ ಮನುಗಿದವಂಗೆ ಪಾಪ, ಹೊಟ್ಟೆಲಿ ಎಂತದೋ ರಜ ಸಂಕಟ ಸುರುವಾತು.
ಮದ್ಯಾನ್ನ ಎಲ್ಯಾರು ಜೆಂಬ್ರ ಊಟ ಉಂಡದು ಹೆಚ್ಚು ಕಮ್ಮಿ ಆತೊ ಏನೊ- ಹೊಟ್ಟೆ ಉಬ್ಬರ್ಸಿದಾಂಗೆ ಅಪ್ಪಲೆ ಸುರುವಾತು.
ಅವ ಮೆಲ್ಲಂಗೆ ಹೊಟ್ಟೆ ಉದ್ದಿಗೊಂಡು ಅವನಷ್ಟಕ್ಕೇ ಹೇಳುವಾಂಗೆ ಸಣ್ಣ ಸ್ವರಲ್ಲಿ “ಗುಡು ಗುಡು.. ಗುಡು ಗುಡೂ ಹೇಳ್ತಪ್ಪ..” ಹೇಳಿದ.
ಅವನ ಹತ್ತರೆ ಮನುಗಿಂಡಿದ್ದವಂಗೆ ಇದು ಕೇಳಿತ್ತು. ಅವನುದೆ ಸಣ್ಣಕೆ ಹೇಳಿದ- “ಹೇಳುದು ಮಾಂತ್ರ, ಬತ್ತಿಲ್ಲೆನ್ನೆ…?!!
ವಿಷಯ ಎಂತರ ಹೇಳಿರೆ, ಅವನ ಕೆರೆಲಿ ನೀರು ಪೂರ ಆರಿ ತೋಟಕ್ಕೆ ಒಳ್ಳೆತ ಕಾಚಲು ಬಡುದ್ದು. ಮಳೆ ಏವಗ ಬತ್ತು ಹೇಳಿ ಕಾಯ್ತಾ ಇದ್ದ. ದಿನಾಗಿಲು ಮುಗಿಲು ಹಾಕುತ್ತು: ಗುಡುಗು ’ಗುಡು ಗುಡು’ ಹೇಳ್ತು. ಮಳೆ ಮಾಂತ್ರ ಬತ್ತಿಲ್ಲೆ!!
ಅದನ್ನೆ ಚಿಂತೆ ಮಾಡಿಂಡು ಮನುಗಿಂಡಿದ್ದವಂಗೆ ಸುರೂವಾಣವ ಹೇಳಿದ್ದು ಅದೇ ವಿಷಯ ಜಾನ್ಸಿ ಹೀಂಗೆ ಉದ್ಗಾರ ತೆಗದ್ದು!

ಎರಡ್ನೆಯವ ಹೇಳಿದ್ದು ಮೂರನೆಯವಂಗೆ ಕೇಳಿತ್ತು. ಅವ- “ಏ… ಅದು ಬಾರ. ಬಪ್ಪೋಳು ಆಗಿದ್ದರೆ ಮಾಣಿಯನ್ನೂ ಕರಕ್ಕೊಂಡು ಹೋವ್ತಿತ್ತು..” ಹೇಳಿ ಹೇಳಿದ!
ಅವನ ಕತೆ ಎಂತರ ಗೊಂತಿದ್ದೊ? ಎಂತದೋ ವಿಷಯಕ್ಕೆ ಲಡಾಯಿ ಆಗಿ ಅವನ ಹೆಂಡತಿ ಕೋಪುಸಿಂಡು ಅದರ ಅಪ್ಪನ ಮನೆಗೆ ಹೋಯಿದು. ಹೋಗಿ ದಿನ ಸುಮಾರಾತು.
ಕೋಪ ಕಮ್ಮಿ ಆಗಿ ಮನೆಗೆ ವಾಪಾಸು ಬಕ್ಕೊ ಏನೊ ಹೇಳ್ತ ಸಣ್ಣ ಆಶೆ ಇವಂಗೆ. ಅದೇ ವಿಷಯ ಇವನ ತಲೆಲಿ ಸುತ್ತುತ್ತಾ ಇದ್ದು!
ಆದರೆ ಅದು ಸಣ್ಣ ಮಾಣಿಯನ್ನು ಕೂಡ ಬಿಟ್ಟಿಕ್ಕಿ ಹೋದಕಾರಣ ಅದು ಪುನ; ಬಕ್ಕು ಹೇಳ್ತ ಪೂರ ಧೈರ್ಯವೂ ಇಲ್ಲೆ!!

****

ಹೀಂಗೆಲ್ಲ ಕತೆ..
ಗೊಂತಾತಿಲ್ಯೊ..?
ಅವರವರ ಭಾವಕ್ಕೆ ತಕ್ಕಾಂಗೆ’ ಹೇಳ್ತಿಲ್ಯೊ, ಅದಕ್ಕೆ ಇದೇ ದೃಷ್ಟಾಂತ ಅಕ್ಕು, ಅಲ್ಲದೊ?

****

ಅಷ್ಟಪ್ಪಗ ಅದ.., ಎನ್ನ ಹೆಂಡತಿಯೂ ಒಂದಾರಿ ಕೋಪುಸಿಂಡು ಅಪ್ಪನ ಮನೆಗೆ ಹೆರಟ ಸಂಗತಿ ನೆಂಪಾತು!
ಅದರ ಇನ್ನೊಂದಾರಿ ಹೇಳ್ತೆ- ಈಗ ಕತೆ ಹೇಳಿಂಡು ಕೂದರೆ ನಮ್ಮ ಕತೆ ಕೈಲಾಸ ಅಕ್ಕು!
ತ್ರೀಪೇಸು* ಆಗಳೆ ಬಯಿಂದಡ. ಹೋಗಿ ಸುಚ್ಚು ಹಾಯಿಕ್ಕಿ ಬತ್ತೆ. ಕಾಂಬೊ ಇನ್ನೊಂದಾರಿ…moncler 코트 판매

ಸೂ:

  • ದೊಡ್ಡ ಕುಳ = ಶ್ರೀಮಂತರು
  • ಪತ್ತನಾಜೆ = ಮೇಷ ತಿಂಗಳ ಹತ್ತನೇ ದಿನ
  • ಹನಿಯೋತ್ತ = ಹನಿಯ + ಹೊತ್ತು – ರಜ್ಜ ಹೊತ್ತು
  • ಸಾರೀಟ = ಉದ್ದಕೆ
  • ತ್ರೀಪೇಸು = Three Phase – ಮೂರು ವಯರಿಲಿಯೂ ಕರೆಂಟು ಬಪ್ಪಗ ಹಳ್ಳಿಗಳಲ್ಲಿ ಪಂಪು ಸುಚ್ಚುಹಾಕುದು.

40 thoughts on “ಗುಡು ಗುಡು…ಗುಡು ಗುಡೂ ಹೇಳ್ತು…

  1. ಸುಭಗಣ್ಣೋ ಹೇಮಾರ್ಸಿ ಮಡಗಿದ್ದದೇನೋ ಇದ್ದು ಆದರೆ ಅದು ಸುಮಾರು ಪೊದಿಕ್ಕೆಯೊಳ ಆಗಿ ಬೇಗ ಹೆರ ತೆಗವಲೆ ಎಡಿತ್ತಿಲ್ಲೇನೇ.ನೋಡುವೊ೦ ಮೆಲಾ೦ಗೆ ನಿ೦ಗಳದ್ದೆಲ್ಲ ನೋಡಿಯ್ಒ೦ಡು ಪ್ರಯತ್ನ ಪಡುವೊನ್.ಒಪ್ಪ೦ಗಳೊಟ್ಟಿ೦ಗೆ

  2. ಕಥೆ ಬಾರಿ ಲಾಯಿಕ ಇದ್ದನ್ನೇ …ಸುಭಗಣ್ಣ. ನಿಂಗ ಬೈಲಿಂಗೆ ಬಂದ ಸುದ್ದಿ ಗೊಂತಯಿದು ಎನಗೆ…

    1. ಏ ಶಾಂತಕ್ಕಾ…! ನಿಂಗೊ ಇಲ್ಲಿಯೂ ಇದ್ದಿರೊ?!! ಕೊಶೀ ಆತು. ಬೈಲಿಂಗೆ ಅಂಬಗಂಬಗ ಬತ್ತಾ ಇರೆಕು ಆತಾ..?

  3. ಸುಭಗ ಭಾವ°, ಬರದ್ದದು ತುಂಬಾ ಚೆಂದ ಆಯಿದು.
    ಕತೆ ಲಾಯ್ಕ ವಿವರಣೆಲಿ ಬಯಿಂದು.
    ಬೇರೆ ಬೇರೆ ಊರಿನವ್ವು ಒಟ್ಟು ಸೇರಿದರೂ ಕೆಲಸ ಎಲ್ಲೋರದ್ದು ಒಂದೇ.. ಹಾಂಗಾಗಿ ಅವರವರ ಕಷ್ಟಸುಕ ಮಾತಾಡ್ಲೆ ಆತಾಯಿಕ್ಕು ಅಲ್ಲದಾ?
    ಮನಸ್ಸಿಲಿ ಕೊರವ ವಿಷಯಂಗ ಹೇಂಗೆ ಮಾತಿಲಿ, ಗೊಂತಿಲ್ಲದ್ದೆ ಹೆರ ಬತ್ತು ಹೇಳಿ ಲಾಯ್ಕಲ್ಲಿ ಹೇಳಿದ್ದಿ ಕತೆಲಿ..

    ಮೆಸ್ಕಾಂ ನವರ ಕೃಪೆಂದ ಆವಾಗಾವಾಗ ಕರೆಂಟು ತೆಗೆತ್ತ ಕಾರಣವೂ, ಯಾವಾಗ ಕೊಡ್ತವು ಹೇಳಿ ಗೊಂತಿಲ್ಲದ್ದ ಕಾರಣವೂ ಸುಭಗ ಭಾವನ ಶುದ್ದಿಗೋ ಹೆಚ್ಚು ಬಕ್ಕೋ? 🙂
    ತ್ರೀಪೇಸು ಬಪ್ಪಲೆ ಕಾವ ಹೊತ್ತಿಂಗೆ ಒಂದು ಶುದ್ದಿ ಬರದು ಅಕ್ಕು ಅಲ್ಲದಾ ಭಾವ°?

    1. ಶ್ರೀ ಅಕ್ಕನ ಚೆಂದದ ಒಪ್ಪಕ್ಕೆ ಮನಃಪೂರ್ವಕ ಧನ್ಯವಾದ ಹೇಳ್ತೆ. ಮಾತಾಡ್ಸಲೆ ರಜ ತಡವಾತು. ಬೇಜಾರು ಮಾಡಿಕ್ಕೆಡಿ ಮಿನಿಯ..

    1. ದೊಡ್ಡಭಾವೋ, ಒಪ್ಪಕ್ಕೆ ಧನ್ಯವಾದಂಗೊ..

  4. ವಿಶಯ ಒಂದೇ ಆದರೂ ಅವರವರ ಭಾವಕ್ಕೆ ಹೇಂಗೆ ಹೊಂದಿಕೆ ಆವ್ತ ಹಾಂಗೆ ಆಲೋಚನೆ ಮಾಡ್ತ ಹೇಳಿ, ಕತೆಲಿ ಲಾಯಿಕಲಿ ಬರದ್ದಿ. ಹಳೆ ಹವ್ಯಕ ಶಭ್ದಂಗಳ ಪರಿಚಯಿಸಿದ್ದು ಕೊಶೀ ಆತು. ಧನ್ಯವಾದಂಗೊ

    1. ಶರ್ಮಪ್ಪಚ್ಚೀ.. ನಿಂಗಳ ಪ್ರೋತ್ಸಾಹ, ಬೆಂಬಲ ಸದಾ ಬೇಡ್ತೆ. ಒಪ್ಪ ಕೊಟ್ಟದು ತುಂಬ ಕೊಶಿ ಆತು. ಪ್ರತಿಒಪ್ಪ ಕೊಡ್ಲೆ ತಡ ಆತು; ಕ್ಷಮೆ ಇರಲಿ.

  5. ಕಥೆ ಲಾಯಕ್ಕ ಬರದ್ದಿ. ಚಂದಕ್ಕೆ ಓದಿಸಿಗೊಂಡು ಹೋತು.

    ಇನ್ನಸ್ಟು ಬರಲಿ. ದಾರಿ ನೋಡ್ತಾ ಇರ್ತೆಯೋ

    – ಚೆನ್ನೈ ಭಾವ.

    1. ನಮ್ಮ ಖಾಸಾ ದೋಸ್ತಿ ಚೆನ್ನೈ ಭಾವನ ಒಪ್ಪ ಕಂಡು ಭಾರೀ ಕೊಶಿ ಆತಯ್ಯ..! ಬೈಲಿಲ್ಲಿ ಎಡೆ ಎಡೆ ಕಂಡುಮುಟ್ಟಿಂಡು ಇಪ್ಪೊ ಆಗದೊ?

      1. ಕ೦ಡುಮುಟ್ಟಿರೆ ಕುಳಪ್ಪಮಿಲ್ಲೆ, ಆದರೆ ಕ೦ಡುಕಟ್ಟಿಕ್ಕೆಡಿ ಸುಭಗ ಭಾವಾ… (ಶುದ್ದಿ ಕತೆ ಎಲ್ಲಾ ಬರವದರಲ್ಲಿ..) 😉

        1. ಹ್ಹ ಹ್ಹ ಹ್ಹಾ…!
          ಅಂಬಗ ಪೋಕು ಮುಟ್ಟಿರೊ..??! 😉

  6. ಸುಭಗನ ಕುಶಾಲಿನ ಕಥೆ ಲಾಯಕಾಯಿದು. ಶೈಲಿಯೂ ಲಾಯಕಿದ್ದು. ಅವರವರ ಭಾವಕ್ಕೆ ತಕ್ಕ ಹಾಂಗೆ ಆಲೋಚನೆ ಮಾಡಿದವರ ಕಥೆ ಹಳೆ ಹವ್ಯಕ ಶಬ್ದಂಗಳ ಪ್ರಯೋಗಲ್ಲಿ ಚೆಂದ ಬಯಿಂದು. ಇನ್ನೂ ಇಂತ ತುಂಬಾ ಕತೆಗೊ ಬೈಲಿಂಗೆ ಬರಳಿ.

    1. ಬೊಳುಂಬು ಮಾವನ ಬೆಂಬಲಕ್ಕೆ ಹೃತ್ಪೂರ್ವಕ ಧನ್ಯವಾದಂಗೊ. ಬರವ ಪ್ರಯತ್ನ ಮಾಡ್ತೆ, ಪ್ರೋತ್ಸಾಹ ಸದಾ ಇರಲಿ.

    1. ಗೋಪಾಲ ಭಾವಾ, ನಿಂಗೊಗೆ ಸಂತೋಷ ಆದರೆ ನವಗೂ ಸಂತೋಷವೇ..

  7. ರಮೇಶಣ್ಣಾ.. ನಿ೦ಗಳ ಕ೦ಪ್ಯೂಟರಿನ ಸ್ಕ್ರೀನಿನ ಮೇಗಾಣ ಹೊಡೆಲಿ, ಬಲದ ಮೂಲೆಲಿ Type in English(F12) ಹೇಳಿ ಇದ್ದು, ಕ೦ಡತ್ತೋ? ಅದರಲ್ಲಿ ನಿ೦ಗಳ ಮೌಸಿನ ಮೊನೆಯ ತೆಕ್ಕೊ೦ಡು ಹೋಗಿ ಆ ಬಾಣದ ಗುರ್ತಲ್ಲಿ ಮಡುಗಿ ಒತ್ತಿ, ಅಷ್ಟಪ್ಪಗ ಸುಮಾರು ಭಾಷ್ತೆ ಬತ್ತಲ್ದಾ? ಅದರ್ಲಿ Kannadaವ ಸೆಲೆಕ್ಟ್ ಮಾಡಿ. ಅಷ್ಟಪ್ಪಗ ನಿ೦ಗೊಗೆ ಸುಲಾಭಲ್ಲಿ ಕನ್ನಡಲ್ಲಿ ಬರವಕೆ ಆವ್ತು!!

    1. ಇದೋ ಈ ಪುಟಲ್ಲಿ ಒಂದು ಮೂಲೆಲಿ type in ಹೇಳಿ ಕಾಣುತ್ತೋ.ಅದರಲ್ಲಿ ನಮಗೆ ಬೇಕಾದ
      ಬಾಶೆ ಆಯ್ಕೆ ಮಾಡಿದರೆ ಆತು………

  8. ಮಾವಾ,ಹಳೆ ಹವ್ಯಕ ಶಬ್ದ ಉಪಯೋಗಿಸಿ ಶುದ್ಧಿ ಬರದ್ದು ಫಷ್ಟಾಯಿದು..ಇನ್ನುದೇ ಹೀಂಗೆ ಬರೆತಾ ಇರಿ..ಧನ್ಯವಾದಂಗೋ!!!

    1. ಹರೇ ರಾಮ.
      ಒಪ್ಪ ಕೊಟ್ಟದು ಕೊಶಿ ಆತು ಗಣೇಶ ಮಾವಾ..

  9. ಚೌಕ್ಕಾರು ಅಜ್ಜ°ನುದೇ ಒರುಂಬುಡಿ(ಪರ್ತಜೆ) ಅಜ್ಜ°ನುದೇ ಎರಡು ದಿನ ಕತಗೆಕತೆ-ಕತಗೆಕತೆ ಹೇಳುಗಡ. ಹಾಂಗೆ ಎನ್ನಪ್ಪ°, ದೊಡ್ಡಪ್ಪ° ಹೇಳುತ್ತವು.
    ಕತೆ ಲಾಯಕಾಯಿದು,

    1. ಅಪ್ಪೊ..??!!!

      ಹಾಂಗಾರೆ ಅಲ್ಲಿ ಹೀಂಗಿರ್ತ ಸಾವಿರ ಸಾವಿರ ಕತೆಗೊ ಇಕ್ಕನ್ನೆ?!

      ನಿಂಗಳೂ ನೋಡಿ ಮಾವ, ಸಿಕ್ಕಿರೆ ಹೆರ್ಕಿ ತನ್ನಿ. ಬೈಲಿಂಗೆ ಹಂಚುವೊ.
      ಲಾಯ್ಕಿಸಿದ್ದಕ್ಕೆ ಧನ್ಯವಾದಂಗೊ

  10. ‘ಕುಣಿಯ’ ಹೇಳಿರೆ ಎಂತರ ಹೇಳಿ ಹೇಳಿದ್ದಿಲ್ಲಿ. ಗೊಂತಿಲ್ಲದವಕ್ಕೆ – ಹಾಂಗೆ ಹೇಳಿರೆ ಕುಣಿಯ ಊರಿಲಿ ಸಿಕ್ಕುವ ಹೊಗೆಸೊಪ್ಪು.
    ಕತೆ ಫಸ್ಟ್ ಕ್ಲಾಸು ಸುಭಗಣ್ಣ.

    1. ಅದಪ್ಪೀಗ.
      ಈಗ ನಿಂಗಳೇ ಹೇಳಿದ್ದು ಒಳ್ಳೆದಾತು. (ಅದಕ್ಕೆ ರೇಟ್ ಕಂಡಾಪಟ್ಟೆ ಏರಿದ್ದಡ ಭಾವಾ.. ಈಗ ಎಲ್ಲರೂ ‘ಬೆಜವಾಡ’ಲ್ಲೇ ಸುದರ್ಸುತ್ತವು)
      ಒಪ್ಪ ಕೊಟ್ಟದು ಸಂತೋಷ ಆತು

    1. ನಿಂಗಳ ಒಪ್ಪವೂ ಎನಗೆ ಕೊಶಿ ಕೊಟ್ಟತ್ತು. ಧನ್ಯವಾದ ಪ್ರದೀಪ್..

  11. ಅಣ್ಣೋ.. ನಿಂಗಳತ್ರೂ ಹೀಂಗಿರ್ತರ ಷ್ಟೋಕು ಅಲ್ಪ ಇದ್ದು ಹೇಳಿ ಎನಗೆ ಅಂದಾಜಿ ಆಯಿದು. ಹೇಮಾರ್ಸ್ಸಿ ಮಡುಗಿದ್ದಿಲ್ಲಿರೊ, ಬರಲಿ ಅದರಿಂದ ಒಂದೊಂದೇ ಹೆರ!
    ಒಪ್ಪಕ್ಕೆ ಪ್ರತಿ ಒಪ್ಪ

  12. ಇದ ಇದೇ ಇದ ಬೇಕಾದ್ದು ಬೈಲಿನೋರಿ೦ಗೆ ಮನಸ್ಸಿ೦ಗೆ ತಟ್ಟುವ ಹಾ೦ಗಿಪ್ಪ ಕತಗೊ.ರಘು ಭಾವ೦ ಹೇಳಿದ ಹಾ೦ಗೆ ಬೇಗ ಸ್ವಿಚ್ಹು ಹಾಕಿ ಬನ್ನಿ ಕಾದೊ೦ಡಿರ್ತಿಯೊ೦.ಒಪ್ಪ೦ಗಳೊಟ್ಟಿ೦ಗೆ

  13. ಅದಾ..ಸುಭಗ ಭಾವ ಸೊಬಗಿಲಿ ಶುರು ಮಾಡಿದವದಾ…ಅವರವರ ಬುತ್ತಿಯ ಹ೦ಚದ್ದೆ ತಿ೦ದ ಕಾರಣ ಹೀ೦ಗಾದ್ದದೊ?ಅವರವರ ಭಾವಕ್ಕೆ..ಹೇಳುವ ಮಾತು ನಿಜ.ಮಳೆ ಬ೦ದರೆ ಕೃಷಿ ಮಾಡುವವ೦ಗೆ ಕೊಷಿ ಆದರೆ ಮಗಳ ಮದುವೆ ಮಾಡುಲೆ ಹೆರಟವ೦ಗೆ ತಲೆಬೆಷಿ ಆದ ಹಾ೦ಗಲ್ಲದೊ?
    ಬೇಗ ಸುಚ್ಚು ಹಾಕೆ ಇರುವಾರ ಬನ್ನಿ ಭಾವ.ಸಾಗರದ ಬುಡ೦ದ ಹೀ೦ಗೆ ಹೆರ್ಕಿ ಮಡಗಿದ್ದದು ಇಕ್ಕನ್ನೇ.ಕೇಳುವ ಆಸೆ ಆಯಿದಿದಾ.

    1. ನಿಂಗಳ ಪ್ರೋತ್ಸಾಹದಾಯಕ ಒಪ್ಪಂಗೊಕ್ಕೆ ಧನ್ಯವಾದಂಗೊ ಭಾವಾ..
      ಹೀಂಗಿಪ್ಪದರ ಬೈಲಿಂಗೆ ಹಂಚಲೆ ಎನಗೂ ಸಂತೋಷವೇ. ಸಿಕ್ಕಿರೆ ಹಿಡ್ಕಂಡು ಇರುವಾರ ಬತ್ತೆ 😉

  14. ಹಾಹಹಹಹ್ಹಾ… ಒಳ್ಳೇ ಕಥೆ ಸುಭಗಣ್ಣ.. ಧನ್ಯವಾದ೦ಗೊ

    1. ಒಪ್ಪ ಕೊಟ್ಟದಕ್ಕೆ ಧನ್ಯವಾದ ಗಣೇಶಣ್ಣ..

  15. ಕಥೆ ಲಾಯ್ಕಿದ್ದು.
    {ಪತ್ತನಾಜೆ = ಮೇಷ ತಿಂಗಳ ಹತ್ತನೇ ದಿನ} ತಪ್ಪಿದ್ದೋ ಹೇಳಿ. ಪತ್ತನಾಜೆ = ವೃಷಭ ತಿಂಗಳ ಹತ್ತನೇ ದಿನ ಅಲ್ಲದೋ? ಉಮ್ಮಪ್ಪ, ನಮಗರಡಿಯ.

    1. ಪ್ರಶಾಂತಣ್ಣೋ, ಒಪ್ಪ ಕೊಟ್ಟದಕ್ಕೆ ಧನ್ಯವಾದ.
      ನಿಂಗೊ ಹೇಳಿದ್ದು ಸರಿ. ಪತ್ತನಾಜೆ ವೃಷಭ (ಬೇಶ) ತಿಂಗಳಿನ ಹತ್ತನೆಯ ದಿನವೇ. ಕತೆಲಿ ಹಾಂಗೇ ಬರದ್ದೆ ನೋಡಿ. ಕೆಳ ವಿವರಣೆ ಕೊಟ್ಟದರಲ್ಲಿ ರಜ ಮಿಷ್ಟೀಕು ಆತು. ಗಮನಿಸಿದ್ದು ಒಳ್ಳೆದಾತು

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×