Oppanna.com

ಗುರುಗಳ ಪೂರ್ವಾಶ್ರಮದ ಫೋಟೋ೦ಗಳ ನೋಡಿದ್ದಿರಾ?

ಬರದೋರು :   ಪುತ್ತೂರಿನ ಪುಟ್ಟಕ್ಕ    on   18/08/2011    44 ಒಪ್ಪಂಗೊ

ಪುತ್ತೂರಿನ ಪುಟ್ಟಕ್ಕ

ಹರೇ ರಾಮ..
“ಸೂರ್ಯನೆದುರಲಿ ಮ೦ಜು ಕರಗುವಾ ರೀತಿ… ನಿನ್ನ ನೆನೆಯಲು ಒಡನೆ ಓಡುವುದು  ಭೀತಿ…”
ಅಪ್ಪು ಇದು ಸತ್ಯ..

ನಿ೦ಗೊಗೆ ಈ ರೀತಿಯ ಅನುಭವ ಆದಿಕ್ಕು. ನಮ್ಮ ಗುರುಗಳ ಶಕ್ತಿಯೇ ಹಾ೦ಗೆ!!!
ಗುರುಗಳ ನೆನೆಸಿದಪ್ಪಗ ನಮ್ಮಲ್ಲಿಪ್ಪ ಹೆದರಿಕೆ ಎಲ್ಲದುದೆ ಮ೦ಜು ಕರಗಿದ ಹಾ೦ಗೆ ಕರಗಿ ಕರಗಿ ಹೋವ್ತು.
ಚ೦ದ್ರ ಸೂರ್ಯನ ಸಹಾಯ೦ದ ಹೇ೦ಗೆ ಬೆಳಕು ನೀಡುತ್ತಾನೋ ಹಾ೦ಗೆಯೇ ಇ೦ದು ಪ್ರತಿಯೊಬ್ಬನ ಯಶಸ್ಸಿನ ಹಿ೦ದೆ ಸೂರ್ಯನ ಹಾ೦ಗೆ ನಮ್ಮ ಗುರುಗಳಿದ್ದವು..

ಇವು ಚಲಿಸಿಗೊ೦ಡಿಪ್ಪ ನೀರಿನ ಹಾ೦ಗೆ.. ನಿನ್ನೆ ಇತ್ತಿದ ಜಾಗೆಲಿ ಇ೦ದು ಇರ್ತವಿಲ್ಲೆ. ಇ೦ದಿಪ್ಪ ಜಾಗೆಲಿ ನಾಳೆ ಇರ್ತವಿಲ್ಲೆ..
ಶಕ್ಕರೆ ಎಷ್ಟು ಸೀವಿದ್ದು ಹೇಳಿ ಮಾತಿಲಿ ಹೇಳುದಕ್ಕಿ೦ತಲೂ, ತಿ೦ದರೆ ಮಾತ್ರ ಅಲ್ಲದ ಅದರ ನಿಜವಾದ ಅನುಭವ ಅಪ್ಪದು??
ನಮ್ಮ ಗುರುಗಳ ಸ್ವತಃ ನೋಡಿ ಮಾತಾಡಿರಷ್ಟೆಯೇ ಗೊ೦ತಪ್ಪದು ಅವು ಕೇವಲ ಶಕ್ತಿಯಲ್ಲ, ಮಹಾಶಕ್ತಿ ಹೇಳಿ!! ಎನಗೆ ಬರವಣಿಗೆಯ ಮೂಲಕ ಗುರುಗಳ ಬಣ್ಣಿಸುಲೆ ಅಸಾಧ್ಯ……..
‘ಅಮ್ಮ’ ಹೇಳುವ ಎರಡಕ್ಷ್ರರಕ್ಕಿ೦ತ ಬೇರೆ ಮ೦ತ್ರ ಎಲ್ಲಿದ್ದು? ಬಣ್ಣಲ್ಲಿ ಭೇದವಿದ್ದರೂ, ಆಕಾರಲ್ಲಿ ವ್ಯತ್ಯಾಸ ಇದ್ದರೂ,ಗುಣಲ್ಲಿ ಹೋಲಿಕೆ ಇಲ್ಲದ್ದರೂ,ಭಾವನೆಗ ಬೇರೆ ಆದರೂ, ಹೆತ್ತಬ್ಬೆಗೆ ತನ್ನ ಎಲ್ಲಾ ಮಕ್ಕದೇ ಒ೦ದೇ ಅಲ್ಲದಾ??
ನಮ್ಮ ಗುರುಗಳೂ ಹಾ೦ಗೆಯೇ…ಅವರ ಹತ್ತರೆ ಬ೦ದವರನ್ನೆಲ್ಲಾ ಭೇದ-ಭಾವ ಮಾಡದ್ದೆ, ಹರಸಿ ಆಶೀರ್ವಾದವ ಮಾಡ್ತವು….
“ಉಸಿರು ನೀಡುತ್ತೆ, ಹೆಸರು ಕೊಡುತ್ತೆ, ಬನ್ನಿ ಎ೦ಗಳ ಸಮೀಪಕ್ಕೆ….” ಎ೦ದು ಗುರುಗಳು ಹೇಳಿಗೊ೦ಡು ಇಪ್ಪಗ, ಇನ್ನು ಎಲ್ಲಿದ್ದು ‘ಅನಾಥ’ ಹೇಳುವ ಶಬ್ದ?
ಮಕ್ಕಳ ತಪ್ಪಿನ ಅಬ್ಬೆ ಹೇ೦ಗೆ ತಿದ್ದಿ ಮು೦ದೆ ನಡೆಶುತ್ತು,ದಾರಿ ತೋರುಸುತ್ತು, ಹಾ೦ಗೆಯೇ ನಮ್ಮ ಗುರುಗಳು ಅಬ್ಬೆಯ ಸ್ಥಾನದಲ್ಲಿ ನಿ೦ದುಗೊ೦ಡು ನಮಗೆ ಸನ್ಮಾರ್ಗವ ತೋರುಸುತ್ತಾ ಇದ್ದವು..
ಗುರುಗಳ ಈ ಗುಣವ ನೋಡಿ ಎನಗೆ ಒ೦ದು ದಾಸರ ಪದ ನೆನಪ್ಪಾತದ…

ಇ೦ಥಾ ಪ್ರಭುವ ಕಾಣೆನು ಈ ಜಗದೊಳಗೆ ಇ೦ಥಾ ಪ್ರಭುವ ಕಾಣೆನು
ಇ೦ಥಾ ಪ್ರಭುವ ಕಾಣೆ ಇ೦ಥ ಶಾ೦ತ ಮೂರುತಿ॥
ಬೇಡಿದ ವರ ಕೋಡುವ ಭಕ್ತ ರ ತಪ್ಪು ನೋಡದೆ ಬ೦ದು ಪೊರೆವ॥

ಗುರುಗಳೇ ನಿ೦ಗಳ ಮಹಿಮೆ ಅಪಾರ……
ನಾವೆಲ್ಲಾ ಗುರುಗಳ ಆದರ್ಶ೦ಗಳ ಪಾಲಿಸಿ, ಉನ್ನತಿಗೆ ಏರುವ…..
ಗುರುಗಳಿ೦ಗೆ ಬಾಗಿಗೊ೦ಡು, ಬೆಳಕಿನೆಡೆ೦ಗೆ ಸಾಗುವಾ…….
ನಾವೆಲ್ಲರೂ ಒ೦ದು ನೆನಪ್ಪು ಮಡಿಕ್ಕೊ೦ಬ–
“ಸಾಕು ಸಾಕು ಗುರು ನಿ೦ದೆ, ನಡೆ ನಡೆ ಗುರುವಿನ ಹಿ೦ದೆ ”
ಹರೇ ರಾಮ…..

ನಮ್ಮ ಗುರುಗಳು ಪೂರ್ವಶ್ರಮಲ್ಲಿ ಹೇ೦ಗಿದ್ದಿಕ್ಕು!!??
ಎನ್ನ ಸ೦ಗ್ರಹಲ್ಲಿ ಇಪ್ಪ ಫೊಟೋ೦ಗಳ ಇಲ್ಲಿ ತೋರುಸುತ್ತಾ ಇದ್ದೆ…


44 thoughts on “ಗುರುಗಳ ಪೂರ್ವಾಶ್ರಮದ ಫೋಟೋ೦ಗಳ ನೋಡಿದ್ದಿರಾ?

  1. ಪುಟ್ಟಕ್ಕಾ,

    ಹರೇರಾಮ.

    ಭಾರೀ ಅಪರೂಪದ ಮತ್ತೆ ತುಂಬಾ ಅಮೂಲ್ಯವಾದ ಪಟಂಗಳ ಬೈಲಿಂಗೆ ಹಂಚಿದ್ದಕ್ಕೆ ಧನ್ಯವಾದಂಗೋ.

    ಶ್ರೀ ಗುರು ಅನುಭೂತಿಯ ಅಕ್ಷರ ರೂಪಕ್ಕೆ ಇಳಿಶುಲೆ ಕಷ್ಟ. ತುಂಬಾ ಲಾಯ್ಕಲ್ಲಿ ವಿವರ್ಸಿದ್ದೆ. ಗುರುಗಳ ಪ್ರಭಾವಳಿಯ ಹತ್ತರೆ ಹೋಗಿ ಅಪ್ಪಗ ಸಿಕ್ಕುವ ಶ್ರೀ ರಕ್ಷೆ ನಮ್ಮ ಜೀವನವ ಉದ್ಧರಿಸುಲೆ ಸಾಕು. ಆ ಆವರಣದ ಪ್ರಭೆಲಿ ಗುರು ತೋರಿದ ದಾರಿಲಿ ನಡದರೆ ನಮ್ಮ ಈ ಲೋಕದ ದಾರಿ ಸುಗಮ ಅಕ್ಕು… ಮುಂದಾಣ ದಾರಿಯೂ ಕಾಣುಗು.

    ಶ್ರೀ ಗುರುಗಳ ಕಾಲಘಟ್ಟಲ್ಲಿ ಇಪ್ಪ, ಅವರ ಅನುಗ್ರಹ ಸಿಕ್ಕುತ್ತಾ ಇಪ್ಪ ನಾವೆಲ್ಲರೂ ಧನ್ಯರು.

  2. ಹರೇ ರಾಮ
    ಪುಟ್ಟಕ್ಕಾ ಬರದ್ದು ಚೆ೦ದ ಆಯಿದು..ಪಟ೦ಗಳ ನೋಡಿ ಭಾರೀ ಖುಶಿ ಆತು..ಅಪರೂಪದ ಸ೦ಗ್ರಹ..ಧನ್ಯವಾದ

  3. ಗುರುಗಳ ಪಟಂಗೊ ನೋಡಿ ಕೊಶಿಯಾತು. ಪುಟ್ಟಕ್ಕಂಗೆ ಅಭಿನಂದನೆಗೊ.

  4. ಶ್ರೀ ಗುರುಗಳ ಪೂರ್ವಾಶ್ರಮದ ಫೊಟೊಂಗಳ ನೋಡಿ ಕೊಶಿ ಆತು. ಸಂಗ್ರಹ ಯೋಗ್ಯ ಕೂಡಾ. ಗುರುಗಳ ಮಹಿಮೆಯ ಹೊಗಳಿದ ಪೂರಕ ಲೇಖನವುದೆ ಲಾಯಕಾಯಿದು. ಪುತ್ತೂರಿನ ಪುಟ್ಟಕ್ಕಂಗೆ ಧನ್ಯವಾದಂಗೊ.

  5. ತುಂಬಾ ಲಾಯಕಲ್ಲಿ ಬರದ್ದೀರಿ ಅಕ್ಕಾ. ಗುರುಗಳಲ್ಲಿ ಅದೆಂತದೋ ಆಕಷ೯ಣೆ ಇದ್ದು ಹೇಳಿ ಅವರತ್ತರೆ ಹೇಳಿಯಪ್ಪಗ ಅವು ಹೇಳಿದ್ದು ಅದು ಗುರುತ್ವಾಕಷ೯ಣೆ; ಗುರುತ್ವದ ಆಕಷ೯ಣೆ ಹೇಳಿ. ಮನುಷ್ಯರಾಗಿ ಹುಟ್ಟೆಕ್ಕಾದರೆ ಪುಣ್ಯ ಮಾಡೆಕ್ಕಡ. ಅದರಲ್ಲಿ ಬ್ರಾಹ್ಮಣರಾಗಿ ಹುಟ್ಟೆಕ್ಕಾದರೆ ಮತ್ತೂ ಪುಣ್ಯ ಜಾಸ್ತಿ ಮಾಡಿರೆಕ್ಕು. ಅದರಲ್ಲಿ ಶಂಕರಾಚಾಯ೯ ಪರಂಪರೆಯಾಗಿ ಬಂದು ಈ ಗುರುಗಳ ಶಿಷ್ಯರಾಗಿ ಇಪ್ಪದು ಅದೆಷ್ಟು ಜನ್ಮದ ಪುಣ್ಯವೋ ಹೇಳಿ ಎನ್ನ ಹೆಂಡತಿ ವೀಣಾ ಯಾವಾಗಲೂ ಹೇಳುತ್ತು.

  6. ಪಟ೦ಗೊ ನೋಡಿ ಬಾರಿ ಕೊಶಿಯಾತು ಧನ್ಯವಾದ೦ಗೊ ಪುಟ್ಟಕ್ಕಾ….

  7. ||ಹರೇ ರಾಮ||
    ಲಾಯಕ ಬರದ್ದಿ ಪುಟ್ಟಕ್ಕಾ.. ಪಟ೦ಗೊ ನೋಡಿ ಬಾರಿ ಕೊಶಿಯಾತು ಧನ್ಯವಾದ೦ಗೊ

  8. ಗುರುತ್ವ ಶಕ್ತಿಯ ಆಕರ್ಷಣೆಗೆ ಒಳಗಾಗದ್ದೆ ಇಪ್ಪಲೆ ಎಡಿಗೊ ನಮ್ಮ೦ಥ ಲಘು ಕಣ೦ಗಕ್ಕೆ?
    ಪುಟ್ಟಕ್ಕಾ, ಲಾಯಕಾಯಿದು.
    ಸು೦ದರ ನಿರೂಪಣೆ, ಶ್ಲಾಘನೀಯ ಬರವಣಿಗೆ!!

  9. ಪುಟ್ಟಕ್ಕೋ,
    ತುಂಬ ಚೆಂದಕೆ ಬರದ್ದೆ. ನೀ ಹೇಳುದೆಲ್ಲ ಅಪ್ಪು. 🙂

    ಓ ಮೊನ್ನೆ ೧೪-೧೫ಕ್ಕೆ ದೋಸ್ತಿಯ ಕಟ್ಟಿಯೊಂಡು ಚಾತುರ್ಮಾಸ್ಯಕ್ಕೆ ಹೋಗಿತ್ತಿದ್ದೆ. ಪೂರ್ವಜನ್ಮದ ಪುಣ್ಯವೋ ಏನೋ? ಗುರುಗಳ ದರ್ಶನಕ್ಕೆ ಅವಕಾಶ ಆತು…
    “ಮಂಗ್ಳೂರ ಮಾಣೀ.. ಹೇಂಗಿದ್ದೆ? ಯಾವಾಗ್ ಬಂದೆ? ನಿನಗೆ ೩ ದಿನ ರಜೆ ಇದ್ದಲ್ಲದಾ.. ರಜೆ ಪೂ…ರ ಇದ್ದು ಹೋಗು” ಹೇಳಿ ತುಂಬು ಪ್ರೀತಿಲಿ ಗುರ್ತ ಹಿಡುದು ಆಶೀರ್ವಾದ ಮಾಡಿದವು. 🙂
    ತುಂಬ ತುಂಬ ಖುಶಿ ಆತು…

    ಅಷ್ಟೇ ಖುಶಿ ಈ ಫಟಂಗಳ ನೋಡುವಾಗಳೂ ಆತು..
    ತುಂಬ ತುಂಬ ಧನ್ಯವಾದಂಗೊ…

  10. ಹರೇರಾಮ, ಪುಟ್ಟಕ್ಕಂಗೆ.ತುಂಬಾ ಚೆಂದದ ಲೇಖನ.ಗುರು ಹೇಳಿದರೆ ಸೂರ್ಯ,ಚಂದ್ರ,ಗಾಳಿ, ನೀರು, ಅಮ್ಮ,ಹಾಂಗು ಸಕ್ಕರೆಗಿಂತ ಸವಿಜೇನಿಂಗೆ ಹೋಲುಸುವಾ. ಈ ಮಹಾನ್ ಚೇತನಕ್ಕೆ ಕೋಟಿ ನಮನಂಗೊ.

  11. ಅಪರೂಪದ ಪಟ೦ಗೊಕ್ಕೆ ಧನ್ಯವಾದ೦ಗೋ ಪುಟ್ಟಕ್ಕಾ..

  12. ಪುಟ್ಟಕ್ಕಾ…. ಪಟಂಗೊಕ್ಕೆ ಧನ್ಯವಾದ 🙂
    “ಗುರು”ಗಳ ಬಗ್ಗೆ ಬರದಷ್ಟೂ ಮುಗಿತ್ತಿಲ್ಲೆ… ತುಂಬ ಲಾಯ್ಕಕ್ಕೆ ಬರದ್ದೆ ಕೂಸೇ 🙂
    “ನಮ್ಮ ಗುರುಗಳ ಸ್ವತಃ ನೋಡಿ ಮಾತಾಡಿರಷ್ಟೆಯೇ ಗೊ೦ತಪ್ಪದು ಅವು ಕೇವಲ ಶಕ್ತಿಯಲ್ಲ, ಮಹಾಶಕ್ತಿ ಹೇಳಿ!! ಎನಗೆ ಬರವಣಿಗೆಯ ಮೂಲಕ ಗುರುಗಳ ಬಣ್ಣಿಸುಲೆ ಅಸಾಧ್ಯ……..” … ಆ ಪ್ರೀತಿಯ, ಕರುಣೆಯ, ಮನಸ್ಸಿನೊಳ ಭಕ್ತಿಯ ಅನುಭವಿಸಿದ ಎಲ್ಲರಿಂಗೂ ಆ ಅನುಭವವ ಅಕ್ಷರ ಮಾಲೆ ಮಾಡುಲೆ ಕಷ್ಟವೇ..ಅಥವಾ ಅಸಾಧ್ಯವೇ.. ! ಎಲ್ಲರಿಂಗೂ ಗುರುಗಳ ಆಶೀರ್ವಾದ ಸಿಕ್ಕಲಿ.. ಎಲ್ಲರಿಂಗೂ ಸುಖ ಶಾಂತಿ ಸಿಕ್ಕಲಿ 🙂

  13. ಬಲು ಅಪರೂಪದ ಫೊತೊನ್ಗೊ. ತುಮ್ಬ ಜಾಗ್ರತೆಲಿ ಮದ್ಕೊಲ್ಲಿ. ನಮ್ಮ ಜೀವನಲ್ಲಿ ಈ ಗುರುಗ ನವಗೆ ಸಿಕ್ಕಿದ್ದು ನಮ್ಮ ಪೂರ್ವ ಜನಮದ ಪುನ್ಯವೆ ಸರಿ.

      1. gurugala porvashramada photo alubum haki tumba olle kelasa madide ata oppakka

  14. ಶಿರಸಾಷ್ಟಾ೦ಗ ಪ್ರಣಾಮ೦ಗಳು..

    “ಹರೇರಾಮ”

  15. [ನಿನ್ನ ನೆನೆಯಲು ಒಡನೆ ಓಡುವುದು ಭೀತಿ…” ಅಪ್ಪು ಇದು ಸತ್ಯ..] – ಪು ಪುನ ಈ ವಿವರಣೆ, ಅಪ್ಪು, ನಿಜವಾಗಿ ಸತ್ಯವೇ.

    [ಗುರುಗಳೇ ನಿ೦ಗಳ ಮಹಿಮೆ ಅಪಾರ……] – ಶ್ರೀ ಗುರುಗಳ ಪಕ್ಕಲ್ಲಿ ಇದ್ದು ಕೆಲ ನಿಮಿಷ ಅವರ ಒಡನಾಟ ಪದುದವಂಗೇ ಇದರ ಅನುಭವ ಗೊಂತಕ್ಕಷ್ಟೆ . ಪು ಪು ಬರದ ಈ ಶುದ್ದಿ ಓದಿಯಪ್ಪಗ ಶ್ರೀ ಗುರುಗಳೊಂದಿಗೆ ಸ್ವತಃ ಭೇಟಿಯಾಗಿ ಕಳದ ಆ ಕೆಲ ಕ್ಷಣದ ವಿಶಿಷ್ಟ ಅನುಭವ ಆರಿಂಗೂ ನೆಂಪು ಆಗದ್ದೇ ಇರ.

    ‘ಶುದ್ದಿಯೂ ಲಾಯ್ಕ – ಪಟವೂ ಲಾಯ್ಕ’ ಹೇಳಿಯೇ ನಮ್ಮ ಒಪ್ಪ.

  16. ಖಂಡಿತಾ ಪುಟ್ಟಕ್ಕಾ..ಗುರುಗಳ ಎದುರು ಕೆಲವು ಸರ್ತಿ ಎಂತ ಮಾತಡೆಕ್ಕು ಹೇಳಿ ಗೊಂತಾವ್ತಿಲ್ಲೆ.ಹೆರಡುವಾಗ ಈ ವಿಷಯ,ಆ ವಿಷಯ ಹೇಳಿ ಮನಸಿಲಿ ಗ್ರೇಶಿಗೊಂಡು ಹೆರಟರೆ ಅವರ ಎದುರು ನಿಂದಪ್ಪಾಗ ಮಾತು ಮೂಕ ಆವ್ತು.ಬಹುಶ್ಶ ಗುರುಗಕ್ಕೆ ನಮ್ಮ ಮೋರೆ ನೋಡಿಯಪ್ಪಗ ಅದು ಅರ್ಥ ಆವ್ತು ಹೇಳಿ ಕಾಣ್ತು.ಅಂತೂ ಮಂತ್ರಾಕ್ಷತೆ ತೆಕ್ಕೊಂಡಪ್ಪಗ ಮನಸ್ಸಿಲಿ ನೂರಕ್ಕೆ ನೂರು ಧನ್ಯತಾ ಭಾವ ತುಂಬಿರ್ತು.ಹೆತ್ತ ಅಬ್ಬೆಯನ್ನೂ ಗುರುಗಳನ್ನೂ ಸಮಾನ ರೀತಿಲಿ ಚೆಂದಕೆ ಅರ್ಥ ಅಪ್ಪ ಹಾಂಗೆ ವಿವರ್ಸಿದ್ದಿ.ಗುರುಗಳ ಆದರ್ಶಂಗಳ ಪಾಲ್ಸಿ ಗುರುಕೃಪೆಗೆ ಪಾತ್ರರಪ್ಪ.ಗುರುಗಳ ಪೂರ್ವಾಶ್ರಮದ ಪಟ ತೋರ್ಸಿದ್ದಕ್ಕೆ ಧನ್ಯವಾದಂಗೋ…

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×