Oppanna.com

ಇದು ಸ್ಪರ್ಧಗೆ ಅಲ್ಲ

ಬರದೋರು :   ಶೇಡಿಗುಮ್ಮೆ ಪುಳ್ಳಿ    on   03/04/2012    18 ಒಪ್ಪಂಗೊ

ಬೇಸಗೆಯ ಬಿಸಿಲಿಂಗೆ
ಆಸೆಕೆಯ ತಣುಶೂಲೆ
ಆಸೆಲಿಯೆ ಹೋಪಾದು ತೋಡಿಂಗೆಯೇ
ಮೀಸಾಲೆ ಬಾರದ್ದ
ಆಸುಭಗ ಭಾವನುದೆ
ದಾಸನದ ಗೊಂಪೀನ ತಲಗೆ ಹಾಕೀ

ಮಳೆಬಂದ ನೀರಿಲ್ಲಿ
ಹೊಳೆಯಾಗಿ ಹರಿವಗಳು
ಹಳೆಯಾ ನೆನಪುಗಳಾ ಒಟ್ಟಿಂಗೆಯೇ
ಹಳೆಯ ನೆನಪುಗೊ ಇಲ್ಲಿ
ಮಳೆಯ ಕಾಲದ ಮೊದಲು
ಹೊಳೆ ಕರೆಲಿ ಲಾಗಾ ಹೊಡೆತ್ತ ಹಾಂಗೇ

ದೊಡ್ಡ ಮಾಣಿಯ ಭಾವ
ದೊಡ್ಡ ಬಿಸಿಲಿನ ನಡುವೆ
ಅಡ್ದ ಬಿದ್ದದು ಅಲ್ಲಿ ಪಳ್ಳಲ್ಲಿಯೇ
ಅಡ್ದಬಿದ್ದದು ಅಲ್ಲಿ
ಗುಡ್ಡೆ ಮೇಲಿನ ನೀರು
ಅಡ್ಡಕ್ಕೆ ಹರಿವ ಆ ಜಾಗೇಲಿಯೇ

ಶರದ ಮತ್ತಾಣದ್ದು ಸರಿ ಆಯಿದೋ ನೋಡಿಕ್ಕಿ

18 thoughts on “ಇದು ಸ್ಪರ್ಧಗೆ ಅಲ್ಲ

  1. ಲಾಯ್ಕ ಆಯಿದು

  2. ಪುಳ್ಳಿಯ ಪದ್ಯ ಫಸ್ಟು ಕ್ಲಾಸು ಆಯಿದು. ಪ್ರಾಸ, ಮಾತ್ರೆ ಎಲ್ಲವು ಸರಿ ಇದ್ದು. ವಿಷು ಸ್ಪರ್ಧೆಗೆ ವಿಶೇಷವಾಗಿ ಬೇರೆ ಕಳುಸಿದ್ದೇ ಆನೆ ?

    1. ಯೋಪ, ನಾವು ಸ್ಪರ್ಧಗೆ ಎಲ್ಲ ಇಲ್ಲೆಪ್ಪಾ….

  3. ಶೀರ್ಷಿಕೆಯೂ, ಪದ್ಯವೂ ಲಾಯಕ ಆಯಿದು ಹೇಳಿ ಒಂದೊಪ್ಪ !!

    ಶೇಪಿನ ಬಗ್ಗೆ ಹೆಚ್ಚು ಜ್ಹಾನ ಇಲ್ಲದ್ದರೂ ಸಂಶಯ ಕಂಡದರ ಚರ್ಚಿಸುದರ ಇಷ್ಟ ಪಡುತ್ತಿ ಹೇಳಿ ಭಾವಿಸಿಗೊಂಡು…
    “ದಾಸನದ| ಗೊಂಪಿನ ತ|ಲಗೇ ಹಾ|ಕೀ” ಮತ್ತು “ಹೊಳೆ ತೋಡಿ|ಲಿ ಲಾಗ ಹೊ|ಡದಾ ಹಾಂ|ಗೇ” ಎರಡು ಸಾಲುಗಳಲ್ಲಿ “ಲಗಂ” ವಿನ್ಯಾಸ ಬಂದ ಹಾಂಗೆ ಕಾಣುತ್ತು…

    1. ಈಗ ಸರಿಆತೋ ನೋಡಿಕ್ಕಿ

          1. ಜಯಶ್ರೀ ಅಕ್ಕ, ಬೈಲಿಲ್ಲಿ ಕಲ್ತ ಶರ ಪ್ರಯೋಗವ ಸ್ಪರ್ಧೆಗುದೆ ಉಪಯೋಗಿಸಲಕ್ಕದ. ಒಳ್ಳೆ ಅವಕಾಶವ
            ಒಪ್ಪಣ್ಣ ಕಲ್ಪಿಸಿ ಕೊಟ್ಟಿದ. ಅಲ್ಲ ಈಗಾಗಲೇ ಕಳುಸಿ ಕೊಟ್ಟು ಆಯಿದೊ ?

          2. ‘ಯುದ್ದಕಾಲೆ ಶಸ್ತ್ರಾಭ್ಯಾಸ:’ ಮಾಡಿ ಶರ ಪ್ರಯೋಗ ಮಾಡಿರೆ ಸರಿ ಆಗ ಹೇಳಿ ಅನ್ನಿಸಿತ್ತು…

          3. ಎರಡನೆ ಪದ್ಯದ ನಾಕನೆ ಪಾದಲ್ಲಿ {ನೆನಪುಗೊ ಇಲ್ಲಿ}
            ಮೂರನೆ ಪದ್ಯದ ಮೂರನೆ ಮತ್ತೆ ನಾಕನೆ ಪಾದಲ್ಲಿ { ಬಿದ್ದದು ಅಲ್ಲಿ} +ಅಕೇರೈಯಾಣ { ಹರಿವ ಆ}
            ಇಲ್ಲಿ ವ್ಯಂಜನದ ನಂತ್ರ ಸ್ವರಾಕ್ಷರ ಬಂದು ‘ವಿಸಂಧಿ ದೋಷ’ ಆಯಿದು. ಎನಗೆ ಹೇಳಿಕೊಟ್ಟ ಗುರುಗಳ ಪ್ರಕಾರ ಇದು ಅಪ್ಪಲಾಗಡ್ಡ.

          4. ಇದರ ಬಗ್ಗೆಯೇ ತಿಳುಕ್ಕೊಲ್ಲೆಕ್ಕು ಹೇಳಿ ಇದ್ದತ್ತು… ಸಾಲಿನ ಮಧ್ಯಲ್ಲಿ ಮಾಂತ್ರ ವಿಸಂಧಿ ದೋಷ ಬಪ್ಪಲಾಗದ್ದದೋ ಅಥವಾ ಒಂದೇ ಪದ್ಯದ ಸಾಲುಗಳ ನಡುವೆಯೂ ಬಪ್ಪಲಾಗದೋ?

            ಉದಾಹರಣೆಗೆ {ಬೇಸಗೆಯ ಬಿಸಿಲಿಂಗೆ} {ಆಸೆಕೆಯ ತಣುಶೂಲೆ} ಹೀಂಗಿದ್ದಲ್ಲಿ ಬಪ್ಪಲಕ್ಕೋ?

            {ರಸವು- ನಾದ,ಸ್ವಾದ,ಅಂದವು} ಹೀಂಗಿದ್ದಲ್ಲಿ ‘,’ ಬತ್ತ ಕಾರಣ ವಿಸಂಧಿ ದೋಷ ಆವುತ್ತಿಲ್ಲೇ ಹೇಳಿ ಕಾಣುತ್ತು… ಅಲ್ಲದ?

          5. ಚೆ೦ದದ ಪ್ರಯತ್ನ ಶೇಪು ಭಾವನದ್ದು. ಮಾತ್ರೆ ತು೦ಬುಸಲೆ ದೀರ್ಘಾಕ್ಷರ೦ಗಳ ಕಮ್ಮಿ ಮಾಡಲೆ ನೋಡುಲಕ್ಕು ( ಉದಾಃ” ಮೀಸಾಲೆ ಬಾರದ್ದ ‘ ಇದರ ಮೀಯಿಸಲೆ ಬಾರದ್ದ ಹೇಳಿ ಸರಿ ಮಾಡಲಕ್ಕು.)
            ಇನ್ನು ವಿಸಂಧಿ ದೋಷದ ವಿಷಯ ಆನೂ ಸದ್ಯ ತಿಳುಕ್ಕೊ೦ಡದು,ಒ೦ದನೆ ಮತ್ತೆ ನಾಕನೆ ಸಾಲಿನ ಶುರುವಾಣ ಅಕ್ಷರ ಬಿಟ್ಟರೆ ಬೇರೆಲ್ಲಾ ಜಾಗೆಲಿ ಸ್ವರಾಕ್ಷರ ಬಪ್ಪಲಾಗ.ಇದು ನಮ್ಮ ಭಾಷೆಲಿ ರಜಾ ಕಷ್ಟ ಅಕ್ಕು.ನಮ್ಮದು ಆಡು ಮಾತಿನ ಭಾಷೆಯಾದ ಕಾರಣ ಶಬ್ದಭ೦ಡಾರ ಕಮ್ಮಿಯೇ ಅಲ್ಲದೋ?

          6. ( ಉದಾಃ” ಮೀಸಾಲೆ ಬಾರದ್ದ ‘ ಇದರ ಮೀಯಿಸಲೆ ಬಾರದ್ದ ಹೇಳಿ ಸರಿ ಮಾಡಲಕ್ಕು.)
            ಭಾವಾ ಇಲ್ಲಿ “ಮೀಸಾಲೆ” ಹೇಳೀರೆ ಈಜಲೆ ಹೇಳ್ತ ಅರ್ಥಲ್ಲಿ ಬರದ್ದು ಆದರೆ ಮೀಯಿಸಲೆ ಹೇಳೀರೆ ಅರ್ಥ ….! ಗೊಂತಾತಿಲ್ಲೆನ್ನೇ , ಮತ್ತೆ ಟೀಕೆ ಮಾವ ಹೇಳಿದ ವಿಸಂಧಿ ದೋಷವ ಸರಿಪಡಿಸುವ ಪ್ರತ್ನಲ್ಲಿದ್ದೆ ನಿಂಗಳೂ ಒಂದು ವಿಷಯ ಹೇಳಿದ್ದಕ್ಕೆ ಧನ್ಯವಾದಂಗೊ, ಇದೂ ಮುಂದಂಗೆ ನಮ್ಮ ತಲೆಲಿಕ್ಕು…

  4. ಇದು ಚಂದವೂ ಆಯ್ದು , ಲಾಯ್ಕವೂ ಆಯ್ದು ಭಾವ. ಒಂದು ಅಭಿನಂದನೆ ಇರ್ಲಿ ನಿಂಗೊಗೆ ಹೇಳಿತ್ತು – ‘ಚೆನ್ನೈವಾಣಿ’

  5. ಹೋಯ್,
    ರಘು ಭಾವ ‘ಭಾಮಿನಿ’ಯ ಹಿಂದೆ ಬಿದ್ದದಕ್ಕೆ ಶೇಪು ಸರಿಯಾಗಿ ‘ಬಾಣ’ ಹೊಡದು ಈಗ ‘ಕುಸುಮ’ನ ಹಿಡ್ಕೊಂಡದಕ್ಕು.
    ಶ್ಯೆಲಾ ಇವನೇ….!

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×