ಚೋಲು - ಡಬ್ಬಲ್ ಚೋಲು

ಬೈಲಿನ ಶುದ್ದಿಗೊ:

ಬೈಲಿನ ನೆರೆಕರೆ:

ಗುರಿಕ್ಕಾರ°ಒಪ್ಪಣ್ಣಡೈಮಂಡು ಭಾವಶ್ಯಾಮಣ್ಣತೆಕ್ಕುಂಜ ಕುಮಾರ ಮಾವ°ಅಕ್ಷರ°ಸುವರ್ಣಿನೀ ಕೊಣಲೆದೊಡ್ಡಮಾವ°ದೀಪಿಕಾಮಂಗ್ಳೂರ ಮಾಣಿವಸಂತರಾಜ್ ಹಳೆಮನೆವಿದ್ವಾನಣ್ಣಬಟ್ಟಮಾವ°ಪುತ್ತೂರಿನ ಪುಟ್ಟಕ್ಕಅಡ್ಕತ್ತಿಮಾರುಮಾವ°ಗಣೇಶ ಮಾವ°ದೇವಸ್ಯ ಮಾಣಿಪುತ್ತೂರುಬಾವಶಾಂತತ್ತೆಕೊಳಚ್ಚಿಪ್ಪು ಬಾವಸಂಪಾದಕ° (editor)ಪೆರ್ಲದಣ್ಣನೀರ್ಕಜೆ ಮಹೇಶಒಪ್ಪಕ್ಕಮುಳಿಯ ಭಾವಬೊಳುಂಬು ಮಾವ°ಮಾಷ್ಟ್ರುಮಾವ°ಯೇನಂಕೂಡ್ಳು ಅಣ್ಣಬಲ್ನಾಡುಮಾಣಿಶರ್ಮಪ್ಪಚ್ಚಿಸುಭಗಗೋಪಾಲಣ್ಣಅನುಶ್ರೀ ಬಂಡಾಡಿಪೆಂಗಣ್ಣ°ನೆಗೆಗಾರ°ಅಕ್ಷರದಣ್ಣಶ್ರೀಅಕ್ಕ°ಡಾಮಹೇಶಣ್ಣಅನು ಉಡುಪುಮೂಲೆಕೇಜಿಮಾವ°ದೊಡ್ಡಭಾವಕೆದೂರು ಡಾಕ್ಟ್ರುಬಾವ°ಪವನಜಮಾವಅಜ್ಜಕಾನ ಭಾವಹಳೆಮನೆ ಅಣ್ಣವೇಣಿಯಕ್ಕ°ಚೆನ್ನೈ ಭಾವ°ಕಳಾಯಿ ಗೀತತ್ತೆಬಂಡಾಡಿ ಅಜ್ಜಿಚುಬ್ಬಣ್ಣಎರುಂಬು ಅಪ್ಪಚ್ಚಿವೇಣೂರಣ್ಣಶುದ್ದಿಕ್ಕಾರ°ಚೂರಿಬೈಲು ದೀಪಕ್ಕಪುಟ್ಟಬಾವ°ಜಯಶ್ರೀ ನೀರಮೂಲೆಶೇಡಿಗುಮ್ಮೆ ಪುಳ್ಳಿಚೆನ್ನಬೆಟ್ಟಣ್ಣಸರ್ಪಮಲೆ ಮಾವ°ಕಾವಿನಮೂಲೆ ಮಾಣಿಡಾಗುಟ್ರಕ್ಕ°


ಎಂಗಳ ಕಾಶೀ ಯಾತ್ರೆ

August 24, 2011 ರ 10:30 amಗೆ ನಮ್ಮ ಮರುವಳ ನಾರಾಯಣ ಭಟ್ಟ ಬರದ್ದು, ಇದುವರೆಗೆ 13 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

2009 ನೆ ಇಸವಿಯ ಅಗೋಸ್ತು ತಿಂಗಳು…

ಎನಗೆ ಮತ್ತೆ ಎನ್ನ ಹೆಂಡತಿ ವೀಣಂಗೆ ‘ಎನ್ನ ಅಬ್ಬೆ ಅಪ್ಪನ ಒಂದರಿ ಕಾಶಿಗೆ ಕರಕ್ಕೊಂಡು ಹೋದರೆ ಎಂತ’ ಹೇಳುವ ಆಲೋಚನೆ ಬಂತು.
ಎನ್ನ ಅಪ್ಪಂಗೆ ಅಂಬಗ 80 ವರ್ಷ ಮತ್ತೆ ಅಬ್ಬಗೆ 75 ವರ್ಷ. `ಬತ್ತೀರಾ?’ ಹೇಳಿ ಕೇಳಿಯಪ್ಪಗ ತುಂಬಾ ಖುಷಿಲಿ ಒಪ್ಪಗೊಂಡವು.

ಹೇಳುಲೆ ಬಿಟ್ಟು ಹೋತು, ಎನ್ನ ಅಪ್ಪ ಸುಮಾರು 50 ವರ್ಷ ಮೊದಲು – ಹಬ್ಬದ ಪಾಡ್ಯದ ದಿನ (ಎನ್ನ ಅಬ್ಬೆ ಯಾವಾಗಲುದೆ ಹೇಳುವದು ಹಾಂಗೆ) – ಮರುವಳಂದ ಕೆದೂರಿಂಗೆ ಬಂದು ಅಲ್ಲಿಯಾಣ ದೇವಸ್ಥಾನಲ್ಲಿ ಅರ್ಚಕರಾಗಿ ಕೆಲಸ ಮಾಡಿಗೊಂಡು ಇತ್ತಿದ್ದವು.
ಅಬ್ಬೆ ಪೈವಳಿಕೆಯ ಅಂಬಿಕಾನದ್ದು. ಬಹಳ ಬಂಙಲ್ಲಿ ಎಂಗೊ 6 ಜೆನ ಮಕ್ಕಳ ದೊಡ್ಡ ಮಾಡಿದ್ದವು.
ಆನು ಈಗ ಕೊಡೆಯಾಲಲ್ಲಿ ಎಲೋಶಿಯಸ್ ಕೋಲೇಜಿಲಿ ಭೌತಶಾಸ್ತ್ರ ವಿಭಾಗಲ್ಲಿ ಎಸೋಸಿಯೇಟ್ ಪ್ರೊಫೆಸರ್, ಎನ್ನ ಹೆಂಡತಿ ವಿನ್ಯಾಸ ಪ್ರಕಾಶನ ಸಂಸ್ಥೆಯ ಮಾಲಕೆ.
ಎಂಗೊ ಈ ಹಂತಕ್ಕೆ ಬಪ್ಪಲೆ ಅಬ್ಬೆ, ಅಪ್ಪನ ಆಶೀರ್ವಾದವೇ ಕಾರಣ.
ಹಾಂಗೆ, ಅವರ ಕಾಶಿಗೆ ಕರಕ್ಕೊಂಡು ಹೋಪದು ಎಂಗೊಗೆ ಒಂದು ಪುಣ್ಯ ಹೇಳಿ ಜಾನ್ಸಿದೆಯ.

ಹಾಂಗೆ ಹೋಪದು ಹೇಳಿ ತೀರ್ಮಾನ ಮಾಡಿದ ಮೇಲೆ ಅಬ್ಬೆ, ಅಪ್ಪ, ಎಂಗೊ ಇಬ್ರು, ಎಂಗಳ ಇಬ್ರು ಮಕ್ಕೊ ಸೇರಿ ಹೋಪದು ಹೇಳಿ ತೀರ್ಮಾನ ಮಾಡಿ ಟಿಕೇಟು ಬುಕ್ ಮಾಡಿದ ಮೇಲೆ ಮತ್ತೊಂದು ಆಲೋಚನೆ ಬಂತು.
ನಾವಲ್ಲದ್ದೆ, ಬೇರೆ ಆರಾದರುದೆ ಹೋಪವು ಇದ್ದರೆ ಅವರನ್ನೂ ಒಟ್ಟಿಂಗೆ ಕರಕ್ಕೊಂಡು ಹೋದರೆ ಎಂತಾ ಹೇಳಿ.
ನಮ್ಮ ಗುರುಗೊ ನಮ್ಮವರ ಎಲ್ಲರನ್ನುದೆ ಒಟ್ಟು ಮಾಡುವ ಸುಮಾರು ಕಾರ್ಯಕ್ರಮ ಮಾಡಿದ ಕಾರಣ ಕೆಲವೊಂದು ಜೆನಂಗಳ ಹತ್ತರೆ ಹೇಳಿದೆಯ.

ಹೇಳಿದ ಹಾಂಗೆ ಆನು ಬತ್ತೆ, ಆನು ಬತ್ತೆ ಹೇಳಿ ಕೆಲಾವು ಜೆನ ಹೇಳಿದವು.
ಎಲ್ಲರ ಸೇರಿಸಿ ನೋಡಿದರೆ ೩೫ ಜನ ಆದವು. ಅದರಲ್ಲಿ ನಿಟ್ಟೆ ಡೆಂಟಲ್ ಕಾಲೇಜಿನ ಪ್ರಿನ್ಸಿಪಾಲ್ ಬಳ್ಳಮಜಲು ಡಾ. ರಾಜೇಂದ್ರ ಪ್ರಸಾದ್ ಅವರ ಕುಟುಂಬ , ಅಂಬಗಾಣ ಮಂಗಳೂರು ಸೀಮಾ ಗುರಿಕ್ಕಾರ ಕೆ. ಪಿ. ಭಟ್ಟ ಕುಟುಂಬ, ಪಳ್ಳ ಪದ್ಮನಾಭ ಭಟ್ರ ಕುಟುಂಬ, ಮರಕ್ಕಿಣಿಯ ಡಾ. ರವಿ ಅವರ ಕುಟುಂಬ, ಸುಬ್ರಹ್ಮಣ್ಯ ಶಾಸ್ತ್ರಿಗಳ ಕುಟುಂಬ, ಬೈಲುಕುರಿಯ ಗೋಪಾಲಣ್ಣ ಮೊದಲಾದವು ಇತ್ತಿದ್ದವು.
ತುಂಬಾ ಜೆನ ಇಪ್ಪ ಕಾರಣ ವ್ಯವಸ್ಥೆಗೊ ಚೂರು ಬೇರೆ ಆಯೆಕ್ಕಾವುತ್ತು ಹೇಳಿ ನಿರ್ಮಲ ಟ್ರಾವೆಲ್ಸ್ ಅವರ ಹತ್ತರೆ ಮಾತಾನಾಡಿದೆಯ.
ಹೇಂಗಾದರುದೆ ಕಾಶಿಗೆ ವರೆಗೆ ಹೋಪ ಕಾರಣ ಅಲ್ಲಿಂದ ಗಯಾಕ್ಕೆ ಹೋಗಿ ಬಪ್ಪದು ಒಳ್ಳೆಯದು ಹೇಳಿ ಅಭಿಪ್ರಾಯ ಬಂತು.
ಬೈಲುಕುರಿಯ ಗೋಪಾಲಣ್ಣ, ತಾನು ಹೇಂಗಾದರುದೆ ಗಯಾಕ್ಕೆ ಹೋಗಿಯೇ ಬಪ್ಪದು ಹೇಳಿ ಹೇಳಿದ.

ಕಾಶಿಗೆ ಹೋವುತ್ತು ಹೇಳಿ ಯೋಚನೆ ಮಾಡಿದರೆ, ಪಿತೃಗೊ ಗಯಾಲ್ಲಿ ಬಂದು ಕಾದು ಕೂರುತ್ತವು ಹೇಳುವ ನಂಬಿಕೆ. ಹಾಂಗಾಗಿ ಗಯಾಕ್ಕುದೆ ಹೋಗಿಯೇ ಬಪ್ಪದು ಹೇಳಿ ತೀರ್ಮಾನ ಆತು.
ಹೇಂಗಾದರುದೆ ಹೋಪ ದಾರಿಲಿ ಪ್ರಯಾಗ ಸಿಕ್ಕುತ್ತ್ತು. ಅಲ್ಲಿ ತ್ರಿವೇಣಿ ಸಂಗಮ ಇದ್ದು. ಅಲ್ಲಿ ಮಿಂದಿಕ್ಕಿ ಹೋದರೆ ಒಳ್ಳೆದಲ್ಲದೋ ಹೇಳಿ ಕಂಡತ್ತು. ಹಾಂಗೆ ಪ್ರಯಾಗ, ಕಾಶಿ, ಗಯಾ ಟೂರ್ ಹೇಳಿ ಆತು.
ಖರ್ಚು ಕಡಮ್ಮೆ ಅಪ್ಪಲೆ ಬೇಕಾಗಿ, ಅಲಹಬಾದ್ ವರೆಗೆ ರೈಲಿಲಿ ಪ್ರಯಾಣ, ಅಲ್ಲಿ ರೈಲು ಇಳಿದ ಕೂಡಲೇ ನಿರ್ಮಲದವರ ಬಸ್ಸು, ಅವು ಇಲ್ಲಿಂದಲೇ ಅಡುಗೆಯವರ ಕರಕ್ಕೊಂಡು ಬಂದು ಇಲ್ಲಿಯಾಣ ಕ್ರಮದ ಊಟ ತಿಂಡಿಯ ವ್ಯವಸ್ಥೆ ಮಾಡಿತ್ತವು.

ಹಾಂಗೆ ಅಲಹಾಬಾದಿಂದ ಪ್ರಯಾಗ, ಕಾಶಿ, ಗಯಾಕ್ಕೆ ಹೋಗಿ ವಾಪಾಸು ವಾರಣಾಸಿ ರೈಲಿಂಗೆ ಬಿಡುವಲ್ಲಿ ವರೆಗೆ ಪ್ರಯಾಣ, ವಸತಿ ಮತ್ತೆ ಊಟ, ತಿಂಡಿಯ ವ್ಯವಸ್ಥೆ ನಿರ್ಮಲದವರದ್ದು ಹೇಳಿ ತೀರ್ಮಾನ ಮಾಡಿ ಅದಕ್ಕೆ ಸರಿಯಾಗಿ ರೈಲಿಂಗೆ ಬುಕ್ಕು ಮಾಡಿದೆಯ.
ಬುಕ್ಕು ಮಾಡಿದ ಮೇಲುದೇ ಮತ್ತೆ ಕೆಲವೊಂದು ಜೆನಂಗೊಕ್ಕೆ ಗೊಂತಾಗಿ ಅವುದೆ ಸೇರಿಗೊಂಡವು.
6 ಜೆನಗಳಿಂದ ಪ್ರಾರಂಭವಾದ ತಂಡ ಕೊನೆಗೆ ೩೫ ಜೆನರ ತಂಡ ಆತು.

ಡಿಸೆಂಬರ್ ೨೫ರಂದು ಉದಿಯಪ್ಪಗ ನಂತೂರಿಲಿ ಇಪ್ಪ ಶ್ರೀಧರ ಸನ್ನಿದಿಲಿ ಪ್ರಾರ್ಥನೆ ಮಾಡಿ ಮಂಗಳೂರು ಹವ್ಯಕರ ಕಾಶೀ ಯಾತ್ರೆ ಹೊರಟತ್ತು.
ಆ ಯಾತ್ರೆ ಎಷ್ತು ಕೊಶಿ ಆಗಿತ್ತು ಹೇಳಿ ಗೊಂತಾಯೆಕ್ಕಾರೆ ಎನ್ನ ಅಬ್ಬೆಯ ಹತ್ತರೆ ಮಾತನಾಡೆಕ್ಕು.
ಚೂರು ಪುರುಸೊತ್ತು ಮಾಡಿಗೊಂಡು ಕೆದೂರಿಂಗೆ ಬಂದರೆ ಸಂಪೂರ್ಣ ವಿವರಣೆ ಅಬ್ಬೆಯ ಬಾಯಿಂದಲೇ ಕೇಳುಲೆ ಅಕ್ಕು.
ಆನು ಹೇಳೆಕ್ಕಾದರೆ ಚೂರು ಸಮಯ ಬೇಕು.

ಎಂಗಳ ಕಾಶೀ ಯಾತ್ರೆ, 5.0 out of 5 based on 1 rating
ಶುದ್ದಿಶಬ್ದಂಗೊ (tags): , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ ಮರುವಳ ನಾರಾಯಣ ಭಟ್ಟ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 13 ಒಪ್ಪಂಗೊ

  1. ಚೆನ್ನೈ ಭಾವ
    ಚೆನ್ನೈ ಭಾವ°
    VA:F [1.9.3_1094]
    Rating: 0 (from 0 votes)

    ಬಹು ಸಂತೋಷ ಮಾವ. ಒಳ್ಳೇ ಶುದ್ದಿ. ಒಳ್ಳೇ ಕಾರ್ಯ. ಶ್ರೀ ಗುರುದೇವತಾ ಅನುಗ್ರಹ ಸದಾ ಇರಲಿ. ನಿಂಗಳ ಸರಳ ಮತ್ತು ನೇರ ಮಾತು ಬಹು ಒಪ್ಪ.

    [ಉತ್ತರುಸಿ]

  2. Harish Kevala
    VA:F [1.9.3_1094]
    Rating: 0 (from 0 votes)

    Tumba santoshada suddi mava.. Ide tara ee varshade madugi oppannana bayalili suddi tilishire ondu rail poora namage bekappadalli samshaya ille…

    [ಉತ್ತರುಸಿ]

  3. ಮರುವಳ ನಾರಾಯಣ ಭಟ್ಫ್ಟ
    ಮರುವಳ ನಾರಾಯಣ ಭಟ್ಟ
    VA:F [1.9.3_1094]
    Rating: 0 (from 0 votes)

    ಕಾಶಿಗೆ ಹೋದ ಮೇಲೆ ಎಂಗೊ ಅದಕ್ಕಿಂತ ದೊಡ್ಡ ಗ್ರೂಪ್ ರಾಮೇಶ್ವರ, ನವಗ್ರಹ ದೇವಸ್ಥಾನ, ಶ್ರೀರಂಗ, ಪಳನಿ, ಚಿದಂಬರ ಮೊದಲಾದ ಅನೇಕ ದೇವಸ್ಥಾನಂಗೊಕ್ಕೆ ಹೋಯಿದೆಯ. ಬಪ್ಪ ವಷ೯ ಕೇದಾರನಾಥ, ಬದರೀನಾಥ, ಗಂಗೋತ್ರಿ ಮತ್ತೆ ಯಮುನೋತ್ರಿಗೆ ಎಂಗಳ/ನಮ್ಮ ಯಾತ್ರೆ. ನಿಂಗಳುದೆ ಬನ್ನಿ

    [ಉತ್ತರುಸಿ]

    Harish Kevala ಉತ್ತರ ಕೊಟ್ಟದು:

    VA:F [1.9.3_1094]
    Rating: 0 (from 0 votes)

    Yava timili mava, 2-3 tingalu modale tilishire planu maadl;e olledavtu…

    [ಉತ್ತರುಸಿ]

    shobhalakshmi ಉತ್ತರ ಕೊಟ್ಟದು:

    VA:F [1.9.3_1094]
    Rating: 0 (from 0 votes)

    ಕೇದಾರ ಬದರಿ ಪ್ರವಾಸ ಯಾವಾಗ ಮಡುಗುತ್ತಿ ಹೇಳಿ ಮೊದಲೇ ಎ೦ಗೊಗೆ ತಿಳಿಸುವಿರಾ?

    [ಉತ್ತರುಸಿ]

    ಮರುವಳ ನಾರಾಯಣ ಭಟ್ಫ್ಟ ಉತ್ತರ ಕೊಟ್ಟದು:
    ಮರುವಳ ನಾರಾಯಣ ಭಟ್ಟ

    VA:F [1.9.3_1094]
    Rating: 0 (from 0 votes)

    ಕೇದಾರನಾಥದ ಬಾಗಿಲು ತೆಗವದು ಅಕ್ಷಯ ತದಿಗೆಯ ದಿನ. ಶಂಕರಾಚಾಯ೯ರು ಸಮಾಧಿಯಾದ ಜಾಗ ಆದ ಕಾರಣ ನಮಗೆಲ್ಲ ಪರಮ ಪವಿತ್ರ ಅದು. ಅಕ್ಷಯ ತದಿಗೆ ದಿನ ಬಾಗಿಲು ತೆಗದರೆ ಮತ್ತೆ ಆರು ತಿಂಗಳು ಮಾತ್ರ ಪ್ಫ್ರವಾಸಿಗರಿಂಗೆ ಅವಕಾಶ ಹೇಳಿ ಎನ್ನ ತಿಳುವಳಿಕೆ. ಸುಮಾರು ೧೪ ಕಿಲೋಮೀಟರ್ ನಡಕ್ಕೊಂಡು ಹೋಯೆಕ್ಕು ಅಥವಾ ಹೊತ್ತುಗೊಂಡು ಹೋಪಲೆ ವ್ಯವಸ್ಥೆ ಇದ್ದಡ. ಕೇದಾರನಾಥಲ್ಲಿ ಚಳಿ ಜಾಸ್ತಿ ಇರುತ್ತಡ.

    ಎಂಗೊ ಹೋಪದು 2012 ಇಸವಿ ಮೇ10 ನಂತರ ನಂತರ. ಮಂಗಳೂರಿಂದ ಹರಿದ್ವಾರಕ್ಕೆ ನೇರ ರೈಲು. ಅಲ್ಲಿಂದ ಮುಂದೆ ೨೦ ಜನರ ಮಿನಿ ಬಸ್ಸಿಲಿ ಪ್ರಯಾಣ. ಈ ಪ್ರಯಾಣದ ವ್ಯವಸ್ಥೆ, ಊಟ ತಿಂಡಿ, ವಸತಿಯ ವ್ಯವಸ್ಥೆ ನಿರ್ಮಲಾ ಅಥವಾ ವಿಕ್ರಂ ಟ್ರಾವೆಲ್ಸ್

    [ಉತ್ತರುಸಿ]

  4. ಮುರಲಿಕೃಷ್ಣ ಹಳೆಮನೆ
    ಹಳೆಮನೆ ಮುರಲಿ
    VA:F [1.9.3_1094]
    Rating: 0 (from 0 votes)

    ನಾರಾಯಣಣ್ಣಾ,
    ನಿಂಗೊ ಕಥೆ ಹೇಳುಲೆ ಹೆರಟದೇ ಬೈಲಿನೋರ ಭಾಗ್ಯ, ಆದರೆ ಅರ್ಧಕ್ಕೆ ನಿಲ್ಲುಸದ್ದೇ ಚೂರು ಸಮಯ ಒಟ್ತು ಸೇರುಸಿ ಸಂಕ್ಷಿಪ್ತವಾಗಿ ಆದರೂ ಕಾಶೀ ಯಾತ್ರೆಯ ಪೂರಾ ಹೇಳಿ.
    ಆನುದೇ ಎನ್ನ ಅಮ್ಮನುದೇ 2003 ಎಪ್ರಿಲಿಲ್ಲಿ ಮುಂಬೈ ದಾರಿಯಾಗಿ ಪ್ರಯಾಗ, ಕಾಶಿ ಡೆಲ್ಲಿಗೆ ಹೋಗಿ ಬಯಿಂದಿಯೊಂ. ಪ್ರಯಾಣ ಮಾಡಿದ್ದು ರೈಲಿಲ್ಲೇ. ಖರ್ಚಿಗೆ ತಕ್ಕ ಹಿಂದಿಯುದೇ, ಲಗ್ಗೇಜು ಹೊರುವ ಸಾಮರ್ಥ್ಯವುದೇ ಇದ್ದರೆ ಭಾರತದ ಉದ್ದ ಅಗಲಕ್ಕೆ ಹೋಪಲೆ ಸಮಸ್ಯೆ ಇಲ್ಲೆ. ನಿಂಗಳ ಕೇದಾರ, ಬದರೀನಾಥ ತೀರ್ಥ ಯಾತ್ರಗೆ ಹೃತ್ಪೂರ್ವಕ ಶುಭಾಶಯಂಗೊ.

    [ಉತ್ತರುಸಿ]

  5. ಮರುವಳ ನಾರಾಯಣ ಭಟ್ಫ್ಟ
    ಮರುವಳ ನಾರಾಯಣ ಭಟ್ಟ
    VA:F [1.9.3_1094]
    Rating: 0 (from 0 votes)

    ಅಕ್ಕು ಮುರಳಿಯಣ್ಣ. ಎನ್ನ ಅಬ್ಬೆ ಹೇಳಿದಷ್ಟು ಚೆಂದಕ್ಕೆ ಹೇಳುಲೆ ಅರಡಿಯ. ಆದರುದೆ ಹೇಳುತ್ತೆ.

    [ಉತ್ತರುಸಿ]

  6. ರಘು ಮುಳಿಯ
    ಮುಳಿಯ ಭಾವ
    VA:F [1.9.3_1094]
    Rating: 0 (from 0 votes)

    ಅಣ್ಣಾ,

    ಪುಣ್ಯ ಕ್ಷೇತ್ರ೦ಗೊಕ್ಕೆ ಮಾಡಿದ ಪ್ರಯಾಣದ ಶುದ್ದಿ ಓದಿ ಸ೦ತೋಷ ಆತು.ಎನ್ನ ಬಾಲ್ಯಸ್ನೇಹಿತ ಮರಕ್ಕಿಣಿ ರವಿಯೂ ಇತ್ತಿದ್ದನೋ ಹಾ೦ಗಾರೆ?

    [ಉತ್ತರುಸಿ]

    ಮರುವಳ ನಾರಾಯಣ ಭಟ್ಫ್ಟ ಉತ್ತರ ಕೊಟ್ಟದು:
    ಮರುವಳ ನಾರಾಯಣ ಭಟ್ಟ

    VA:F [1.9.3_1094]
    Rating: 0 (from 0 votes)

    ಮರಕ್ಕ್ಫಿಣಿ ರವಿ ಎಂಗಳ ಒಟ್ಟಿಂಗೆ ರಾಮೇಶ್ವರದ , ನವಗ್ರಹ ದೇವಸ್ಥಾನದ ಟೂರಿಂಗುದೆ ಬಯಿಂದವು. ಕೇದಾರನಾಥಕ್ಕುದೆ ಬತ್ತೆಯ ಹೇಳಿದ್ದವು. ಅವು ಮಾತ್ರ ಅಲ್ಲ ಅವರ ಅಮ್ಮ, ಅಪ್ಪ, ಹೆಂಡತಿ, ಮಕ್ಕೊ, ಅತ್ತೆಗಳು, ಅಕ್ಕ ಎಲ್ಲರುದೆ ಬಂದಿತ್ತವು. ಹೇಳಿದ ಹಾಂಗೆ ನಿಂಗೊಗೆ ಎಲ್ಲಿ ಆತು?

    [ಉತ್ತರುಸಿ]

    ರಘು ಮುಳಿಯ ಉತ್ತರ ಕೊಟ್ಟದು:
    ಮುಳಿಯ ಭಾವ

    VA:F [1.9.3_1094]
    Rating: 0 (from 0 votes)

    ಎ೦ಗೊ ರವಿಯ ನೆರೆಕರೆ,ಕೊ೦ಚಾಡಿಲಿ.ಆನು ಮಾ೦ತ್ರ ಬೆ೦ಗಳೂರಿಲಿ ವಾಸ.

    [ಉತ್ತರುಸಿ]

  7. ಬೊಳುಂಬು ಮಾವ
    ಬೊಳುಂಬು ಮಾವ°
    VA:F [1.9.3_1094]
    Rating: 0 (from 0 votes)

    ಕಾಶೀ ಯಾತ್ರೆಯ ಪೂರ್ವ ತಯಾರಿ ಬಗ್ಗೆ ವಿವರಣೆ ಲಾಯಕಾಯಿದು. ಕಾಶೀಯಾತ್ರೆ ಸುರು ಅಪ್ಪಲಪ್ಪಗ ಪಕ್ಕನೆ ಬಸ್ಸು ನಿಂದ ಹಾಂಗೆ ಆತದ. ನಾರಾಯಣಣ್ಣ, ಬರಳಿ ಬೈಲಿಂಗೆ ನಿಂಗಳ ಪ್ರಯಾಣದ ಅನುಭವದ ಕಥನವುದೆ. ಲಾಯಕು ಬರೆತ್ತಿ ನಿಂಗೊ.

    [ಉತ್ತರುಸಿ]

  8. ishwar hegde
    VA:F [1.9.3_1094]
    Rating: 0 (from 0 votes)

    nange nanna atthe mava jothege ebbarnu ella above sixty. kashi hagu uttara bharath yatrege kalsavu antha eddu.dayavittu swalpa guide madi.

    [ಉತ್ತರುಸಿ]

ಒಪ್ಪ ಕೊಡ್ಳೆ ಇಲ್ಲಿ ಬರೆಯಿ:

ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಸದ್ಯದ ಪಟಂಗೊ

ಮಳೆಗಾಲದ ಅಟ್ಟಣೆಲಿ ಅಟ್ಟ-ಕೊಟ್ಟಗೆ ತುಂಬಿತ್ತೋ?ಪರೀಕ್ಷಾ ಫಲಿತಾಂಶ: ಚಿಂತೆ ಬಿಡಿ, ಚಿಂತನೆ ಮಾಡಿ!ಶ್ರೀಮದ್ಭಗವದ್ಗೀತಾ – ತೃತೀಯೋsಧ್ಯಾಯಃ – ಕರ್ಮಯೋಗಃ – ಶ್ಲೋಕಂಗೊ – 31- 40

ಬೆಶಿ ಬೆಶಿ ಒಪ್ಪಂಗೊ..

Switch to our mobile site

Powered By Indic IME