ಸಣ್ಣಸಂಕೊಲೆ(shortlink):
ಮದಲಿಂಗೆ, ಒಂದಾನೊಂದು ಊರಿಲ್ಲಿ ಶ್ರೀ ಪರ್ವತಾ ಶಿಖರ ಪ್ರದೇಶ ಸಮೀಪ ಚಿತ್ರಪುರ ಹೇಳಿ ಒಂದು ಊರು ಇತ್ತಡಾ. ಆ ಶಿಖರಲ್ಲಿ ಘಂಟಾಕರ್ಣ ಹೇಳುವ ರಾಕ್ಷಸ ಇದ್ದು ಹೇಳಿ ಜನ ಪ್ರತೀತಿ. ಹೀಂಗಿಪ್ಪಗ ಒಂದಿನ ಕೆಲವು ಕಾಡು ಕಳ್ಳಂಗೊ ಊರಿಂಗೆ ನುಗ್ಗಿ ಆ ಊರಿನ ದೇವಸ್ಥಾನದ ಒಂದು ದೊಡ್ಡ ಘಂಟೆಯ ಕದ್ದೊಂಡು ಹೋದವಡ ಆ ಗುಡ್ಡೆ ಹೊಡೇಂಗೆ.
ಅಲ್ಲಿ ರಜಾ ಬೇಟೆಯಾಡಿ ಆಯಾಸ ಅಪ್ಪಗ, ಒಂದಿಕ್ಕೆ ಕೂದು ಆಯಾಸ ಪರಿಹರಿಸಿ, ಮತ್ತೆ ಎದ್ದಿಕ್ಕಿ ಅವರ ತಾಣದತ್ತ ಹೋದವಡ. (ಇದು ಆರಿಂಗೆ ಕಂಡದು ಇತ್ಯಾದಿ ಲಾಜಿಕ್ ಎನ್ನತ್ರ ಕೇಳ್ಳಾಗ).
ಹೋಪ ಗಡಿಬಿಡಿಲಿ, ಆ ಘಂಟೆಯ ಅಲ್ಲೇ ಮರದಿಕ್ಕಿ ಹೋದವಡಾ!. ಆ ಘಂಟೆ ಅಲ್ಲಿಪ್ಪ ಕೆಲವು ದೊಡ್ಡ ಮಂಗಂಗಳ ಕಣ್ಣಿಂಗೆ ಬಿದ್ದತ್ತು. 
ಇದು ಎಂತರಪ್ಪಾ ಹೇಳಿ ಕೈಲಿ ನೆಗ್ಗಿ ನೋಡಿದವು , ಅತ್ತಿತ್ತೆ ಆಡಿಸಿದವು . ಮಣಿ ಹೆಟ್ಟಿ ಘಂಟೆ ಶಬ್ದ ಆತು. ಕೊಶೀ ಆತು ಮಂಗಂಗೊಕ್ಕೆ. ಎತ್ತಿಯೊಂಡು ಓಡಿದವಡ ಕುಶಾಲು ಮಾಡ್ಳೆ ಆತು ಹೇಳಿ.
ಈ ಘಂಟೆ ಹಿಡ್ಕೊಂಡು ಈ ಮಂಗಂಗೋ ಅಂಬಗಂಬಗ ಆಟ ಆಡಿಯೊಂಡು ಕುಶಾಲು ಮಾಡಿಯೊಂಡು ಆ ಘಂಟೆಯ ಮೋಜು ಮಾಡಿಯೊಂಡಿತ್ತವಡಾ.
ಈ ಘಂಟೆಯ ಶಬ್ದ ಕೇಳಿ ಆ ಊರ ಜನಂಗೊ ಹೆದರಿದವಡ. ಜನವಾಸ ಇಲ್ಲದ ಆ ಕಾಡಿಲ್ಲಿ ಒಬ್ಬ ರಾಕ್ಷಸ ಇದ್ದತ್ತು. ಅದು ಮನುಷ್ಯರನ್ನೂ ಸಿಕ್ಕಿರೆ ಹಿಡುದು ತಿಂತು.
ಅದಕ್ಕೆ ಉಲ್ಲಾಸ ಅಪ್ಪಲೆ ಮಣಿ ಆಡುಸುತ್ತು ಇತ್ಯಾದಿ ಕತೆ ಜೋರು ಹಬ್ಬಿತ್ತು. ಮನುಷ್ಯರು ಆ ಕಾಡಿಂಗೆ ಹೋಪಲೆ ಹೆದರಿದವು.
ಕೆಲವು ಜೆನ ಜೀವ ಭಯಂದ ಆ ಊರು ಬಿಟ್ಟಿಕ್ಕಿ ಹೋಪಲೆ ಸುರುಮಾಡಿದವಡ. ಆ ಊರಿನ ರಾಜಂಗೆ ತಲೆ ಬೆಷಿ ಸುರುವಾತು.
ಈ ರಾಕ್ಷಸ ಭಯಂದ ಹೇಂಗೆ ಮುಕ್ತಿ ಅಪ್ಪೋದು ಹೇಳಿ. ತನ್ನ ಮಂತ್ರಿ ಹತ್ತರೆ ಚರ್ಚಿಸಿ ಒಂದು ಘೋಷಣೆ ಮಾಡಿತ್ತು. ಆರು ಆ ಘಂಟಾಕರ್ಣ ರಾಕ್ಷಸನ ನಾಶ ಮಾಡುತ್ತನೋ ಅವಕ್ಕೆ ಲಕ್ಷ ಸುವರ್ಣ ಕೊಡುತ್ತೆ ಹೇಳಿ.
ಜೀವ ಭಯಲ್ಲಿ ಆ ಕಾಡಿಂಗೆ ಹೋಪಲೆ ಆರಿಂಗೂ ಬೆಟ್ರಿ ಇಲ್ಲೆ. ಹೀಂಗೆ ಇಪ್ಪಗ ಒಂದು ಅಜ್ಜಿ ಆ ಕಾಡಿಂಗೆ ಗುಟ್ಟಿಲ್ಲಿ ಹೋತಡ.
ಕಾಡಿಲ್ಲಿ ಒಂದಿಕ್ಕೆ ತಳೀಯದ್ದೆ ನಿಂದೊಂಡು ಎಂತ ನಡೆತ್ತಾ ಇದ್ದು ಹೇಳಿ ನೋಡಿಯೊಂಡಿತ್ತು.
ರಜಾ ಹೊತ್ತಪ್ಪಗ ಆ ಮಂಗಂಗೊ ಆ ಘಂಟೆಯ ಹಿಡ್ಕೊಂಡು ಆಟ ಆಡಿಗೊಂಡು ಮಣಿ ಶಬ್ದ ಮಾಡ್ಳೆ ಸುರುಮಾಡಿದ್ದು ಕಂಡತ್ತು ಈ ಅಜ್ಜಿಗೆ.
ಹತ್ರೆ ಇಪ್ಪ ಮರಂದ ರಜಾ ಹಣ್ಣುಗಳ ಕೊಯ್ದು ಅಜ್ಜಿ ಉಪಾಯಲ್ಲಿ ಆ ಮಂಗಗಳ ನಾಜೂಕಾಗಿ ಮಂಕಡಿಸಿ ಹಣ್ಣುಗಳ ಮಂಗಂಗಳ ಕೈಗೆ ಕೊಟ್ಟು , ಅವರ ಕೈಂದ ಘಂಟೆಯ ವಸೂಲು ಮಾಡಿಗೊಂಡು ಊರಿಂಗೆ ಬಂದು ರಾಜನತ್ರೆ ಘಂಟೆಯ ಕೊಟ್ಟಿಕ್ಕಿ , ಘಂಟಾಕರ್ಣ ರಾಕ್ಷಸನ ಆನು ಕೊಂದು ಮಣಿ ತೆಕ್ಕೊಂಡು ಬಂದೆ ಇದಾ ಹೇಳಿ ಹೇಳಿತ್ತಡಾ.
ರಾಜಂಗೂ ಖುಶೀ ಆತು. ಅಜ್ಜಿ ಕೈಲಿ ಲಕ್ಷ ಸುವರ್ಣ ಇನಾಮು ಕೊಟ್ಟು ಸನ್ಮಾನ ಮಾಡಿ ಕಳ್ಸಿತ್ತು. ಅದರಿಂದ ಮತ್ತೆ ಆ ಕಾಡಿಂದ ಘಂಟೆ ಶಬ್ದ ಕೇಳಿದ್ದಿಲ್ಲೇಡಾ.
ಊರು ಬಿಟ್ಟು ಹೋದ ಜನಂಗಳೂ ವಾಪಾಸು ತಮ್ಮ ತಮ್ಮ ಮನಗೆ ಬಂದು ಸೇರಿಗೊಂಡವಡಾ.
ಹೇಂಗೇ ನಮ್ಮಜ್ಜಿ ಕತೆ?!
~*~*~*~
ಒಪ್ಪ : ಉಪಾಯಲ್ಲಿ ಕೆಲವು ಸಂದರ್ಭಂಗಳ ಪಾರು ಮಾಡ್ಳೆ ಆವುತ್ತು.
ಓ.! ಹೇಳಿದಾಂಗೆ, ಈ ಕತೆ ಅಂತರ್ಜಾಲಂದ ಕದ್ದು ಇಲ್ಲಿ ಬರದದ್ದು ಆತೋ, ಸ್ವಂತ ಬರದದ್ದು ಅಲ್ಲ. ಹಾಂಗಾಗಿ ಎನಗೆ ಪ್ರೈಸು ಬೇಡ.
ನಿಂಗೊಗೆ ಕತೆ ಲಾಯಕ ಆಯ್ದು ಹೇಳಿ ತೋರಿರೆ ಲಾಯಕ ಆಯ್ದು ಹೇಳಿಕ್ಕಿ. ಇಲ್ಲದ್ರೆ ನಿನ್ನಜ್ಜಿ ಕತೆ ಹೇಳಿ ಬಿಟ್ಟಿಕ್ಕಿ. ಏ!?
ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ ಚೆನ್ನೈ ಭಾವ° -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.
ಅಜ್ಜಿಯ ‘ಬೆಟ್ರಿ’ ಸರೀ ಚಾರ್ಜ್ ಆಗಿತ್ತು ಹೇಳಿ ಆತು. ಲಾಯ್ಕ ಆಯಿದು ಭಾವ ಅಜ್ಜಿಯ ಈ ಕಥೆ.
[ಉತ್ತರುಸಿ]
ಹೊತ್ತುವೇಳೆ: 25 August,2011ರ 10:12 PM ಗೆ. (ಒಪ್ಪಸಂಕೊಲೆ)
ಅಲ್ಲ ಅಪ್ಪಚ್ಚಿ..
ಅ೦ಬಗ ಈ ಕಾಡಿ೦ಗೆ ಹೋಪಗ ಟೋರ್ಚು ಮಣ್ಣೊ ಬೇಕೊ.. ಏ??
[ಉತ್ತರುಸಿ]
ಹೊತ್ತುವೇಳೆ: 25 August,2011ರ 10:16 PM ಗೆ. (ಒಪ್ಪಸಂಕೊಲೆ)
ಟೋರ್ಚು ಹಿಡ್ಕೊಂಡು ಹೋದರೆ ಕಳ್ಳರಿಂಗೆ ದೂರಂದ ಗೊಂತಾಗಿ ಅಜ್ಜಿಗೆ ಬೆಡಿ ಮಡುಗಿರೋ?!
[ಉತ್ತರುಸಿ]
ಹೊತ್ತುವೇಳೆ: 25 August,2011ರ 10:33 PM ಗೆ. (ಒಪ್ಪಸಂಕೊಲೆ)
ಎಲ್ಲಾ ಸರಿ ಬಾವ..

ಮತ್ತೆ ಈ ಬೆಟ್ರಿ ಎಲ್ಲಿಗೆ ಸಿಕ್ಕುಸಲೆ??
ಟೋರ್ಚಿ೦ಗೆ ಅಲ್ಲದೊ?? ಏ?
[ಉತ್ತರುಸಿ]
ಘಂಟಾಕರ್ಣನ ಕಥೆ ಮೊದಲೇ ಕೇಳಿ ಗೊಂತಿದ್ದು. ಇಲ್ಲಿ ನೋಡಿ ಮತ್ತೊಂದಾರಿ ಕೊಶಿ ಆತು.
[ಉತ್ತರುಸಿ]
ಕಥೆ ಲಾಯ್ಕಾಯ್ದು
ಅಂತರ್ಜಾಲಲ್ಲಿ ಸಿಕ್ಕಿರೂ ಕೂಡ ಅದರ ನಮ್ಮ ಭಾಷೆಲಿ ಲಾಯ್ಕಲ್ಲಿ ಬರದ್ದಿ
ಕಥೆಯ ನೀತಿಯೂ ಲಾಯ್ಕಿದ್ದು
[ಉತ್ತರುಸಿ]
ಭಾವಯ್ಯ,
“ನಿನ್ನಜ್ಜಿ ಕತೆ ಹೇಳಿ ” ಬಿಟ್ಟಿಕ್ಕುಲೆ ಎಡಿಯ, ಕತೆ ಲಾಯಿಕ್ಕಿದ್ದು.
ಈ ಅಜ್ಜಿಗೆ “ಬೆಟ್ರಿ” ಎಲ್ಲಿಂದ ಸಿಕ್ಕಿತ್ತಪ್ಪ, ಈ ಬೆಟ್ರಿ ಮನೆದೇವರ ಮಂಕಾಡ್ಸುಲೆ ಉಪಯೋಗ ಅಕ್ಕೊ ಹೇಳಿ ಕೆಲವು ಜೆನ ಯೋಚನೆಲಿ ಇದ್ದವು.
[ಉತ್ತರುಸಿ]
ಕೇಳಿದ ಕತೆ ಆದ್ರೂ, ಮತ್ತೆ ಮತ್ತೆ ಕೇಳ್ಲೆ ಲಾಯಿಕ ಇದ್ದು. ನಿರೂಪಣೆ ಕೊಶೀ ಆತು ಹೇಳಿ ಒಂದೊಪ್ಪ
[ಉತ್ತರುಸಿ]
ಹೊತ್ತುವೇಳೆ: 25 August,2011ರ 10:17 PM ಗೆ. (ಒಪ್ಪಸಂಕೊಲೆ)
ಓ ಅಪ್ಪಚ್ಚಿ..



ಮತ್ತೆ ಮತ್ತೆ ಕೇಳಿ,
ಮತ್ತೆ ಮತ್ತೆ ಬೆಟ್ರಿ ಚಾರ್ಜಿ ಮಾಡಿಯೊ೦ಬಲಕ್ಕು ಹೇಳಿ ಯೋ..
ಇದಾ ಒ೦ದು ನಿಮಿಶ..
ನಮ್ಮ ಅಜ್ಜಕಾನ ಬಾವನ ಮೊಬೈಲಿನ ಬೆಟ್ರಿ ಚಾರ್ಜಿ ಮಾಡ್ಕುವೊ… ಆಗದೊ?
[ಉತ್ತರುಸಿ]
ಅಜ್ಜಿಯ ಬೆಟ್ರಿ ಚಾರ್ಜ್ ಮಾಡಿದ ಚಾರ್ಜರ್ ಎಲ್ಲಿ ಸಿಕ್ಕುತ್ತು ಗೊಂತಾದರೆ ಎನಗೆ ಹೇಳಿಕ್ಕಿ!
ಕಥೆ ಲಾಯಿಕಾಯಿದು..
[ಉತ್ತರುಸಿ]
ಕತೆ ಲಾಯಿಕಾಯಿದು.
ನಮ್ಮ ಭಾಷೆಲಿ ಓದುವಗ ಸಣ್ಣ ಇಪ್ಪಗ ಅಜ್ಜಂದ್ರು, ಅಜ್ಜಿಯಕ್ಕೊ, ಅಪ್ಪ ಹೇಳಿದ್ದರ ಕೇಳಿದ ಹಾಂಗೆ ಆತು.
ಲಾಯಿಕಾಯಿದು,
ಸುಮನ
[ಉತ್ತರುಸಿ]
ಹ್ಮ್… ತು೦ಬಾ ಸಣ್ಣಾಗಿಪ್ಪಗ ಕೇಳಿ ಪೂರ್ತಿಯಾಗಿ ಮರತ್ತು ಹೋದ ಕತೆ. ಪುನಃ ನೆ೦ಪು ಮಾಡಿಸಿದ್ದಕ್ಕೆ ಚೆನ್ನೈ ಭಾವ೦ಗೆ ಧನ್ಯವಾದ೦ಗೊ..
[ಉತ್ತರುಸಿ]
ಅಜ್ಜಿ ಕಥೆ ನಿಜವಾಗಲೂ ಲಾಯಕಿದ್ದು….
[ಉತ್ತರುಸಿ]
ಮದಲೇ ಗೊಂತಿದ್ದರುದೆ, ಚೆನ್ನೈ ಭಾವನ ಬಾಯಿಲಿ ಆ ಕತೆ ಕೇಳಿ ಕೊಶಿ ಆತದ. ಬೆಟ್ರಿ ಪ್ರಯೋಗ ಲಾಯಕಾಯಿದು. ಮಂಡೆ ಕರ್ಚು ಮಾಡಿದ ಅಜ್ಜಿಗೆ ಒಳ್ಳೆ ಇನಾಮು (ಲಕ್ಷ ಸುವರ್ಣ ಇನಾಮು) ಸಿಕ್ಕಿತ್ತು.
[ಉತ್ತರುಸಿ]
ಓದಿ ಇಷ್ಟ ಪಟ್ಟ ಎಲ್ಲೋರಿಂಗೂ ಧನ್ಯವಾದ.
[ಉತ್ತರುಸಿ]
ಸುಮಾರು ಸರ್ತಿ ಶಕ್ತಿಗಿಂತ ಯುಕ್ತಿಯೇ ಮೇಲು ಹೇಳ್ತದು ಅನುಭವಕ್ಕೆ ಬತ್ತು. ಕತೆ ‘ಹೇಳಿದ್ದು’ ಲಾಯಕಾಯಿದು.
[ಉತ್ತರುಸಿ]