Oppanna.com

ಕಾರಂತರ ಒಟ್ಟಿಂಗೆ ಪತ್ರ ವ್ಯವಹಾರ

ಬರದೋರು :   ಗೋಪಾಲಣ್ಣ    on   19/05/2012    13 ಒಪ್ಪಂಗೊ

ಗೋಪಾಲಣ್ಣ

ಶಿವರಾಮ ಕಾರಂತರು ದೊಡ್ದ ಬರಹಗಾರ-ಎಲ್ಲರಿಂಗೂ ಗೊಂತಿದ್ದು.

ಅವು ಅವಕ್ಕೆ ಬಂದ ಎಲ್ಲಾ ಕಾಗದಕ್ಕೂ ಉತ್ತರ ಕೊಡುತ್ತಾ ಇತ್ತಿದ್ದವಡ.
ಆನು ಬರೆದ ಸುರುವಾಣ ಪುಸ್ತಕ ರಾಜರತ್ನ ನಿಷಧಾಧಿಪ ನಾಟಕ ೧೯೮೧ ರಲ್ಲಿ ಪ್ರಕಟ ಆದರೂ ಅದರ ೧೯೮೬ ರಲ್ಲಿ ಕಾರಂತರಿಂಗೆ ಕಳಿಸಿದೆ.
ಅವರ ಶ್ರೀಮತಿ ಅದೇ ಸಮಯಲ್ಲಿ ತೀರಿ ಹೋದ ಕಾರಣ ಅವಕ್ಕೆ ಎನ್ನ ನಾಟಕವ ಓದಲೆ ಆಯಿದಿಲ್ಲೆ ಹೇಳಿ ಕಾಣುತ್ತು.
ಆದರೆ ಇಪ್ಪತ್ತು ದಿನ ಕಳುದ ಮೇಲೆ “ನಾಟಕ ಓದಿದೆ, ಅದು ರಂಗಪ್ರದರ್ಶನದ ದೃಷ್ಟಿಂದ ಅಷ್ಟೊಂದು ಸಮರ್ಪಕ ಆಯಿದಿಲ್ಲೆ” ಹೇಳಿ ಅಭಿಪ್ರಾಯ ಬರೆದವು.

ಆದರೂ “ಆನು ನಳನ ಕತೆಯ ಮೂಲಲ್ಲಿ ಓದಿದ್ದಿಲ್ಲೆ, ಕತೆ ಹೇಂಗಿಪ್ಪದು ಹೇಳಿ ತಿಳ್ಕೊಂಬಲೆ ಪ್ರಯೋಜನ ಆತು” ಹೇಳಿಯೂ ಬರದ್ದವು.
ಅಷ್ಟು ದೊಡ್ಡ ಮನುಷ್ಯ ಆನು ಮೂಲಲ್ಲಿ ಅದರ ಓದಿದ್ದಿಲ್ಲೆ ಹೇಳಿ ಹೇಳಿಕೊಂಬಲೆ ಸಂಕೋಚ ಪಟ್ಟಿದವಿಲ್ಲೆ-ಎನಗೆ ಆಶ್ಚರ್ಯ ಆತು.
ಮತ್ತೆ ಅವಕ್ಕೆ ಪಾರ್ತಿಸುಬ್ಬ ಕುಂಬಳೆಯವ ಅಲ್ಲ ಹೇಳಿ ನಿಂಗಳ ಅಭಿಪ್ರಾಯ ಈಗಳೂ ಇದ್ದೊ ಹೇಳಿ ಕೇಳಿದೆ-ಅದಕ್ಕೆ ಅವು ಪಾರ್ತಿಸುಬ್ಬ ಕುಂಬಳೆಯಲ್ಲಿ ಇದ್ದಿರಬಹುದು-ಆದರೆ ಅವನ ಪ್ರಸಂಗಗಳಲ್ಲಿ ಅವನ ಹೆಸರಿಲ್ಲ ಹೇಳಿ ಬರದವು.
ಮತ್ತೆ  ಅವು ಹೇಳಿದವು-ಪಾರ್ತಿಸುಬ್ಬನ ಬಗ್ಗೆ ಹಲವು ಅನೃತಂಗಳ ಆನು ಕೇಳಿದ್ದೆ ಹೇಳಿ. ಮತ್ತೆ ಆ ವಿಷಯ ಒಕ್ಕಲೆ ಎನಗೆ ಹೆದರಿಕೆ ಆತು. ಪ್ರಾಯದವಕ್ಕೆ ಸುಮ್ಮನೆ ಉಪದ್ರ ಕೊಡುತ್ತಿಲ್ಲೆ ಹೇಳಿ ಆ ವಿಷಯ ಬಿಟ್ಟೆ.

ಕಡೆಂಗೆ ಪತ್ರವ್ಯವಹಾರ ಮಾಡಿದ್ದು ೧೯೯೫ ರಲ್ಲಿ.
ಕೋ.ಲ.ಕಾರಂತರು ಶಿವರಾಮ ಕಾರಂತರ ಅಣ್ಣ. ಆ ವರ್ಷ ಅವು ತೀರಿಹೋದವು.
ಅವಕ್ಕೆ ಕೆಮಿಬೇನೆಗೆ ಮದ್ದು ಗೊಂತಿತ್ತು-ಅವು ಒಂದು ಕಡೆ ಆ ವಿಷಯ ಬರೆದ್ದದು ಆನು ಓದಿದ್ದೆ – ಆಗ ಸುಮಾರು ಮೂವತ್ತರ ಪ್ರಾಯದ ಎನಗೆ ನೆಂಪಿಲ್ಲೆ, ಆದರೆ ಎನ್ನ ದುರ್ಬುದ್ಧಿ ನೋಡಿ!
ಆನು ಶಿವರಾಮ ಕಾರಂತರ ಹತ್ತರೆ ಈ ವಿಷಯ ಕಾಗದ ಬರೆದು ಕೇಳಿದೆ. ಅದಕ್ಕೆ ಅವು ಬರೆದವು- ಅವು ಮರಬಾಳೆ ಎಲೆಯ ಬಾಡಿಸಿ ರಸ ತೆಗೆದು ಕೆಮಿಗೆ ಹಾಕುತ್ತಿದ್ದವು ಹೇಳಿ. ಮರಬಾಳೆ ಹೇಳಿದರೆ ಒಂದು ಆರ್ಕಿಡ್ ಹೇಳಿ ಬರೆದವು.

ಮತ್ತೆ ಬರೆದೆ-ಅದು ಯಾವ ಗಿಡ ಹೇಳಿ ಎನಗೆ ಗೊಂತಾಯಿದಿಲ್ಲೆ ಹೇಳಿ.
ಅದಕ್ಕೆ ಅವು ಬರೆದ ಕವರು ಒಡೆದು ನೋಡಿರೆ ಎನಗೆ ಸಂತೋಷ, ಗೌರವ ಎಲ್ಲಾ ಒಟ್ಟಿಂಗೆ ಬಂತು.
ಅವು ಮರಬಾಳೆ ಮರಲ್ಲಿ ಹೇಂಗೆ ಇರುತ್ತು ಹೇಳಿ ವಿವರಿಸಿದ್ದವು. ಅದರ ಸೊಪ್ಪಿನ ಕೆಂಡಲ್ಲಿ ಬಾಡಿಸಿ ಹಿಂಡಿರೆ ಎಸರು ಬತ್ತು ಹೇಳಿ ಬರದ್ದವು. ಒಂದು ಸಣ್ಣ ಕಾರ್ಡಿಲಿ ಮರಲ್ಲಿ ಇಪ್ಪ ಬಂದಳಿಕೆ ಜಾತಿಯ ಮರಬಾಳೆಯ ಚಿತ್ರ ಮಾಡಿದ್ದವು. ಅಲ್ಲದೆ ಮತ್ತೊಂದು ಪಚ್ಚೆ ಬಣ್ಣದ ಕಾರ್ಡಿನ ಎಲೆಯ ಆಕಾರಲ್ಲಿ ಕತ್ತರಿಸಿ ಮಡುಗಿ – ಇದು ಮರಬಾಳೆ ಎಲೆಯ ಮಾದರಿ ಹೇಳಿ ಬರೆದ್ದವು!

ಇದು ತೊಂಬತ್ಮೂರು ವರ್ಷದ ಕಾರಂತರು ಯಾವ ಗುರ್ತ ಪರಿಚಯ ಇಲ್ಲದ್ದ ಎನಗೆ ಬರೆದ ಕಾಗದ,ಕೊಟ್ಟ ವಿವರ! [ಆನು ಅವರ ಮುಖತಃ ಕಂಡಿದಿಲ್ಲೆ]. ಅನು ಕೂಡಲೇ ಅವಕ್ಕೆ ಧನ್ಯವಾದ ಬರದೆ.
ಅವರಷ್ಟು ಜೀವನೋತ್ಸಾಹ ಅವರ ಅರ್ಧ ಪ್ರಾಯದ ವರೆಗೂ ನಮ್ಮಲ್ಲಿ ಇದ್ದರೆ ಭಾಗ್ಯ.
ಅವು ನಾಸ್ತಿಕರು ಆದಿಕ್ಕು, ಆದರೆ ಸತ್ಯವಂತರು, ಕಿರಿಯರ ಮೇಲೆ ಪ್ರೀತಿ ಇಪ್ಪವು ಹೇಳಿ ಗೊಂತಾವುತ್ತು.
ಎನ್ನ ಬರವಣಿಗೆಯ ಹವ್ಯಾಸಲ್ಲಿ ಅವರ ಒಟ್ಟಿಂಗೆ ಮಾಡಿದ ಪತ್ರವ್ಯವಹಾರವ ಆನು ಅತಿ ಮುಖ್ಯ ಹೇಳಿ ಪರಿಗಣಿಸುತ್ತೆ.

ಅದರ ನೆನಪು ಮಾಡಿರೆ ಎನಗೆ ಈಗಲೂ ರೋಮಾಂಚನ ಆವುತ್ತು.

13 thoughts on “ಕಾರಂತರ ಒಟ್ಟಿಂಗೆ ಪತ್ರ ವ್ಯವಹಾರ

  1. ನಿಂಗಳ ಅನುಭವ ಓದಿ ಸಂತೋಷ ಆತು.

  2. ಗೋಪಾಲಣ್ಣ ನಮಸ್ತೇ.ಕಾರ೦ತರ ಪತ್ರ ಓದಿಯಪ್ಪಗ ಎನಗೆ ಈ ಘಟನೆ ನೆ೦ಪಾವುತ್ತು.
    ಕಾರ೦ತಜ್ಜನ ಒ೦ದೆರಡು ಸರ್ತಿ ಹತ್ತರ೦ದ ಕ೦ಡು ಮಾತನಾಡುವ ಭಾಗ್ಯ ಎನ್ನ ಪಾಲಿ೦ಗೆ ಸಿಕ್ಕಿದ್ದು ಹೇದು ಹೇಳ್ಲೆ ಆನು ಹೆಮ್ಮೆ ಪಡುತ್ತೆ.ಅವರ ಹತ್ತರ೦ದ ಕ೦ಡು ಮಾತಾಡೆಕು ಹೇದು ಆನು ಎನ್ನ ಆತ್ಮೀಯ ಹೆರಿಯ ಸಾಹಿತಿ ” ಸೇವಾ ನಮಿರಾಜ ಮಲ್ಲ”ರ ಹತ್ತರೆ ಹೇಳಿಗೊ೦ಡಿತ್ತೆ.ಇದು ಆನು ಹೊನ್ನಾವರದ ಕಾಲೇಜಿಲ್ಲಿ ಪದವಿ ವಿದ್ಯಾಭ್ಯಾಸಲ್ಲಿಪ್ಪಾಗ.೧೯೭೦ರ ಎಪ್ರಿಲ್ – ಮೇ ತಿ೦ಗಳ ಮಧ್ಯಲ್ಲಿ ಆನು ಊರಿ೦ಗೆ ಬ೦ದ ಸಮಯ ಸೇವಾ ನಮಿರಾಜ ಮಲ್ಲರು ಪುತ್ತೂರಿ೦ಗೆ ವರ್ಗಾವಣೆಯಾಗಿ ಬ೦ದಿತ್ತವು.ಅವು ಮುನ್ಸಿಫ್ ಕೋರ್ಟಿಲ್ಲಿ ನ್ಯಾಯಾಧೀಶರಾಗಿತ್ತಿದ್ದವು.ಪುತ್ತೂರಿ೦ಗೆ ಅದೆ೦ತಕೋ ಹೋದವ ಈ ವಿಷಯ ತಿಳುದು ಅವರಲ್ಲಿಗೆ ಹೋದೆ.ಅವರೊಟ್ಟಿ೦ಗೆ ಸಾಕಷ್ಟು ಮಾತುಕತೆ ಆತು.ಅದೇ ಸಮಯ ಮಲ್ಲರು-” ಕಾರ೦ತರು ಇ೦ದು ಇಲ್ಲಿಯೇ ಅವರ ನಿವಾಸಲ್ಲಿದ್ದಾರೆ ನೀವು ಅವರನ್ನು ಭೇಟಿಯಾಗುವ ಹ೦ಬಲ ಇಟ್ಟುಕೊ೦ಡಿದ್ದೀರಲ್ಲಾ.ಹೋಗಿ ಭೇಟಿ ಮಾಡಿ”ಹೇದು ಸೂಚಿಸಿದವು.ಹಲವು ಕಾಲದ ಹ೦ಬಲ ಹೀ೦ಗೆ ಕಯಿಗೂಡುತ್ತು ಹೇಳುವ ನಿರೀಕ್ಷೆ ಇತ್ತಿಲ್ಲೆ.ಸ೦ತೋಷ ಏನೋ ಆತು.ಆದರೆ…..!ಕಾರ೦ತರ ಮತನಾಡ್ಸುವ ಧೈರ್ಯ ಎಲ್ಲಿ೦ದ ಬರೆಕು? ಮೊ೦ಡು ಧೈರ್ಯ ಮಾಡಿಗೊ೦ಡು ಅವರ ಮನಗೆ ಹೋದೆ.ಅಲ್ಲಿ ಮನೆಯ ಬಾಗಿಲಿನ ಕಾಲಿ೦ಗ್ ಬೆಲ್ ಒತ್ತಿದೆ.(ಮನಸ್ಸಿನೊಳದಿಕ್ಕೆ ಅಳುಕಿತ್ತು!);ಬಾಗಿಲು ತೆರೆದತ್ತು.ನೋಡಿರೆ ಒ೦ದು ಬೇಳಿ ಹೆಮ್ಮಕ್ಕೊ! ಅದು ಎನ್ನ ನಖ ಶಿಖಾ೦ತ ನೋಡಿ ” ಡು ಯು ವಾ೦ಟ್ ಕಾರ೦ತ್ ? ಹಿ ಇಸ್ ಇ೦ದ ಅಪ್ ಸ್ಟೇರ್.”ಹೇದು ಮೇಲಾ೦ತಾಗಿ ಮಾಳಿಗ್ಗೆ ಕಯಿಮಾಡಿ ತೋರ್ಸಿತ್ತು.ಸರಿ; ಮಾಳಿಗೆ ಹತ್ತಿದೆ.ಮದಲಾಣ ರೂಮು ವಿಶಾಲವಾಗಿತ್ತು. ಇಡೀ ಕೋಣೆಲಿ ಪುಸ್ತಕಗಳ ರಾಶಿ ರಾಶಿ!ಬಾಗಿಲು ತೆಕ್ಕೊ೦ಡಿತ್ತು.ಸೀದಾ ಒಳ ಹೊಗುವಲೆ ಧೈರ್ಯ ಎಲ್ಲಿ೦ದ ಬರೆಕು ? ಮೆಲ್ಲ೦ಗೆ ಬಾಗಿಲ್ಲಿ೦ಗೆ ತಟ್ಟಿದೆ. ”ಯರೂs ಬನ್ನಿ ಒಳಗೆ.”ಗ೦ಭೀರವಾದ ಧ್ವನಿಯೊ೦ದು ಕೆಮಿಗೆ ಬಿದ್ದತ್ತು.ಸರಿ ಕಾಲು ಒಳ ಮಡಗಿತ್ತದ.ಧ್ವನಿ ಬ೦ದ ದಿಕ್ಕಿನ ಹುಡುಕ್ಕಿಗೊ೦ಡು ಹೊರಟೆ.ಅಲ್ಲಿ ಒ೦ದು ಮೂಲೆಲಿ ದೊಡ್ಡ ಪುಸ್ತಕ ರಾಶಿಯ ಹಿ೦ದೆ ಒ೦ದು ಉಸಿರಾಡುವ ವ್ಯಕ್ತಿಯ ಕ೦ಡತ್ತು. ಹತ್ತರೆ ಹೋದೆ.ನೋಡಿದೆ. ಅಪ್ಪಪ್ಪು;ಕಾರ೦ತರು!ಯಾವದೋ ಮಾಹಿತಿಗಾಗಿ ಹತ್ತಾರು ಪುಸ್ತಕವ ಬಿಡಿಸಿ ಮಡಗಿಯೊ೦ಡು, ಕಯಿಲಿ ಪೆನ್ನು,ಎದುರು ಮೇಜಿಲಿ ಕಾಗದ ಮಡಗಿಯೊ೦ಡು ಕೂದಿತ್ತವು.ಎನ್ನ ಕ೦ಡಪ್ಪಗ ತಟ್ಟನೆ ಎದ್ದು ಆತ್ಮೀಯತೆಲಿ ಮಾತನಾಡ್ಸಿದವು.ಮತ್ತೆ ಅಲ್ಲಿ ಮನೆ, ಯಕ್ಷಗಾನ ತರಬೇತಿ ಕೊಡುವ ಜಾಗೆ ಹೀ೦ಗೆ ಪ್ರತಿಯೊ೦ದು ವಿವರವನ್ನು ಎನ್ನ ಒಟ್ಟಿ೦ಗೆ ಕರಕ್ಕೊ೦ಡು ಹೋಗಿ ಮೂಲೆ ಮೂಲೆನ್ನುದೆ ಒ೦ದು ರಜವೂ ಬಿಡದ್ದೆ ಪರಿಚಯ ಮಾಡಿ ಕೊಟ್ಟವು.ಮತ್ತೆ ಒ೦ದು ಕಪ್ ಬೆಶಿ ಬೆಶಿ ಟೀ ತರ್ಸಿ ಕೊಟ್ಟು,ಬೀಳ್ಕೊಡುವ ಹಾ೦ಗೆ ”ಆಯ್ತಲ್ಲಾ!…”ಹೇಳಿದವು.ಅದರ ಅರ್ಥ!!! ಸಮಯವ ಒ೦ದು ರಜವೂ ಹಾಳು ಮಾಡದ್ದ ಉಪಯೋಗುಸುವ ಅವರ ಸಮಯ ಪ್ರಜ್ಞಗೆ ನಮೋನ್ನಮ ಹೇಳೆಕೆ!ಅ೦ದು ಹಾ೦ಗೆ ಅವರ ಮಹಾನ್ ವ್ಯಕ್ತಿತ್ವದ ಪರಿಚಯ ಎನಗಾತು.ಮತ್ತೆ ಉದ್ಯೋಗಕ್ಕೆ ಸೇರಿ ಬಾರ್ಕೂರಿಲ್ಲಿಪ್ಪಾಗ ಕೆಲವು ಸರ್ತಿ ಸಾಲಿಗ್ರಾಮಲ್ಲಿ ”ಸುಹಾಸ”ಲ್ಲಿ ಭೇಟಿ ಮಾಡಿದ್ದೆ.ಅ೦ಬಗ ಅವು ತೋರ್ಸಿದ ಪ್ರೀತಿ, ಆತ್ಮೀಯತೆಯ ಆನೆ೦ದೂ ಮರೆಯೆ.

  3. ಹೋ.. ಕಾರಂತರ ಅನುಕರಣೀಯ ವ್ಯಕ್ತಿತ್ವವ ಪರಿಚಯ ಮಾಡಿದ್ದಿರಿ ಗೋಪಾಲಣ್ಣ.. ಕೊಶಿ ಆತು
    ಅದಕ್ಕೆ ಹೇಳು ತುಂಬಿದ ಕೊಡಪ್ಪಾನ ಅಳಂಚುತ್ತಿಲ್ಲೆ ಹೇಳಿ…

  4. ಗೋಪಾಲ,
    ಓದಿ ರೋಮಾಂಚನ ಆತು.
    ದೊಡ್ಡವರ ದೊಡ್ಡತನದ ಪರಿಚಯ ಆತು.

  5. ಅವಿಸ್ಮರಣೀಯ ಅನುಭವ ನಿಂಗಳದ್ದು ಗೋಪಾಲಣ್ಣ.
    ಬಾಲವನ ಓದಿಗೊಂಡಿತ್ತಿದ್ದೆ ಆನುದೇ. ಈ ಅಜ್ಜಂಗೆ ಎಂತ ಕೇಳಿರೂ ಗೊಂತಿದ್ದನ್ನೇ ಹೇಳಿ ಆಶ್ಚರ್ಯ ಆಯ್ಕೊಂಡಿತ್ತು ಎನಗೆ.
    ಶಾಲೆಲಿ ಮಾಷ್ಟ್ರಕ್ಕೋ ಎನ್ನ “ಉಲ್ಲಾಸ್ ಕಾರಂತ್” (ಕಾರಂತಜ್ಜನ ಮಗನ ಹೆಸರು ಉಲ್ಲಾಸ್) ಹೇಳುವಾಗ ಖುಷಿ ಆಯ್ಕೊಂಡಿತ್ತು.
    ಆ ಮುದಿಪ್ರಾಯಲ್ಲಿಯೂ ಅವರ ಗೆಜ್ಜೆ ಕಟ್ಟಿ ಕೊಣಿವ ಪಟ ನೋಡಿರೆ ನವಗೆ ಹುಮ್ಮಸ್ಸು ಬತ್ತು.

    1. ಡಾ.ಉಲ್ಲಾಸ ಕಾರಂತರಿಂಗೆ ಮನ್ನೆ ಜನವರಿಲಿ ಪದ್ಮಶ್ರೀ ಪ್ರಶಸ್ತಿ ಸಿಕ್ಕಿತ್ತಿದ್ದು.

  6. ಒಳ್ಳೆದು ಪವನಜ. ಆದಷ್ಟು ಬೇಗ ನಿನಗೆ ಪುರುಸೊತ್ತು ಸಿಗಲಿ ಹೇಳಿ ಆಶಿಸುತ್ತೆ.

  7. ಕಾರಂತರ ಆನು ಮುಖತಃ ಕಂಡು ಮಾತಾಡಿದ್ದೆ. ಇನ್ನೊಂದರಿ ಪುರುಸೊತ್ತು ಮಾಡಿಕೊಂಡು ಬೈಲಿಂಗೆ ಬಂದಾಗ ಬರೆತ್ತೆ

  8. ಗೋಪಾಲಣ್ಣ , ಕಾರಂತರ ಒಟ್ಟಿಂಗೆ ಇಷ್ಟೆಲ್ಲಾ ಪತ್ರ ವ್ಯವಹಾರ ಮಾಡಿದ ನಿಂಗೊ ಧನ್ಯರು. ಮದ್ದಿನ ಬಗ್ಗೆ ಅವರಲ್ಲಿ ವಿಚಾರುಸಿದ ನಿಂಗಳ ಧೈರ್ಯ ಮೆಚ್ಚೆಕಾದ್ದೆ. ಕಾರಂತರ ಸರಳತೆ, ಕಿರಿಯರಿಂಗೆ ಅವು ತೋರುಸಿದ ಪ್ರೀತಿ ನಿಜವಾಗಿ ಎಲ್ಲೋರಿಂಗು ಮಾದರಿ.

  9. {ಅವರಷ್ಟು ಜೀವನೋತ್ಸಾಹ ಅವರ ಅರ್ಧ ಪ್ರಾಯದ ವರೆಗೂ ನಮ್ಮಲ್ಲಿ ಇದ್ದರೆ ಭಾಗ್ಯ}
    ಸರಿಯಾದ ಮಾತು ಗೋಪಾಲಣ್ಣ.

  10. ಒಳ್ಳೇ ಲೇಖನಕ್ಕೆ ಒಪ್ಪ೦ಗೊ.
    ಆನು ಸಣ್ಣಾಗಿಪ್ಪಗ ತರ೦ಗಲ್ಲಿ ಬಾಲವನಲ್ಲಿ ಕಾರ೦ತಜ್ಜನ ಹತ್ರೆ ಪ್ರಶ್ನೆ ಕೇಳುತ್ತ ಒ೦ದು ಅ೦ಕಣ ಇದ್ದತ್ತು, ನಮ್ಮ ಯಾವ ಸ೦ಶಯವ ಕಾಗದ ಬರದು ಕೇಳಿದರುದೆ ಅವು ಈ ಅ೦ಕಣಲ್ಲಿ ಉತ್ತರಿಸಿ೦ಡಿತ್ತಿದ್ದವು.

  11. ಹೃದಯಂಗಮ ಶುದ್ದಿ ಓದಿ ಹೃದಯ ತುಂಬಿ ಬಂತು. ಆ ಮಹಾನ್ ವ್ಯಕ್ತಿತ್ವಕ್ಕೆ ನಮೋ ನಮಃ.

    ತೆಕ್ಕುಂಜ ಕುಮಾರ ಮಾವನ ಶುದ್ದಿ ಬೆನ್ನಿಂಗೆ ಗೋಪಾಲಣ್ಣನ ಸ್ವಯಂ ಅನುಭವ, ಅವರೊಡನೆ ಪತ್ರ ಸಂಬಂಧ ನಿಜಕ್ಕೂ ವಿಶೇಷವೇ ಆತು. ಬೈಲಿನವನೊಬ್ಬ° ಪತ್ರ ಮುಖೇನವಾದರೂ ಅವರತ್ರೆ ಕೆಣಕ್ಕಿಯೊಂಡಿತ್ತಿದ್ದವು, ಅದಕ್ಕೆ ಕಾರಂತರು ಸಾಹಿತ್ಯಲ್ಲಿ ದೊಡ್ಡ ಮನುಷ್ಯ ಆಗಿದ್ದರೂ ಪ್ರತಿಕ್ರಿಯೆ ನೀಡಿಗೊಂಡಿತ್ತಿದ್ದವು ಹೇಳ್ವದರ ಕೇಳುವಾಗ ತುಂಬು ಹೆಮ್ಮೆ ಆತು ಗೋಪಾಲಣ್ಣ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×