ಸಣ್ಣಸಂಕೊಲೆ(shortlink):
ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ
ಖುಷಿ ಅಪ್ಪ ಒಂದು ಶುದ್ದಿ ಇದ್ದು.
ನಮ್ಮ ಸಂಸ್ಕೃತ ಭಾಷೆಯ ದ್ವಿತೀಯ ರಾಜಭಾಷೆ (second official language) ಹೇಳಿ ಉತ್ತರಾಖಂಡದ ಸರಕಾರ ಘೋಷಣೆ ಮಾಡಿದ್ದಡ.
ಇದು ನವಗೆಲ್ಲ ಒಂದು ಸಂತೋಷದ ವಿಚಾರ ಅಲ್ಲದ? ಹಾಂಗಾರೆ ನಮ್ಮ ಸಂತೋಷವ ಆ ರಾಜ್ಯದ ಮುಖ್ಯಮಂತ್ರಿಗೆ ನಾವು ತಿಳುಶುವº, ಆಗದೋ?
ಒಂದು ಕಾಗದ ಬರದರೆ ಮುಖ್ಯಮಂತ್ರಿಗುದೆ ಅನುಸುಗು, ಒಳ್ಳೆ ಕೆಲಸ ಮಾಡಿರೆ ಗುರುತುಸುವವು ಇದ್ದವು, ಅಭಿನಂದನೆ ಮಾಡುವವು ಇದ್ದವು ಹೇಳಿ.
विद्युत्-पत्रम् : cm-uk@nic.in, nishankramesh@gmail.com
ಪತ್ರವ ನಿಂಗಳ ಆಫೀಸಿನ ಎಡ್ರೆಸಿಂದ ಕಳುಸಿರೆ ಒಳ್ಳೇದು.
ಅಥವಾ, ನಿಂಗಳ ಸ್ಥಾನ ಯಾವುದು ಹೇಳಿ ಬರೆಯಿ.
ಎಲ್ಲ ರೀತಿಯ ಜೆನಂಗೊಕ್ಕುದೆ ಕೊಶಿ ಆಯಿದು ಹೇಳಿ ಗೊಂತಾಗಲಿ.
ಉತ್ತರಾಖಂಡ ಒಂದು ಆದರ್ಶ ರಾಜ್ಯ ಆಗಿ ಅಭಿವೃದ್ಧಿ ಹೊಂದಲಿ ಹೇಳಿ ನಾವು ಆಶಿಸುವº.
ಕಾಗದ ಕಳುಸಲೆ ಮರೆಡಿ !
ಹಾಂಗೆ ಸಂಸ್ಕೃತಲ್ಲಿ :
ಒಂದರಿ ನೋಡಿಕ್ಕಿ ಆತ?
ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ ಡಾಮಹೇಶಣ್ಣ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.
ಖಂಡಿತ ಮಹೇಶಣ್ಣ
ನಿಂಗ ಹೇಳ್ತದು ಸರಿ.. ಉತ್ತರಖಂಡದವು ಮಾಡಿದ ಕೆಲ್ಸವ ನಾವೆಲ್ಲ ಮೆಚ್ಚೆಕ್ಕಾದ್ದೆ.
ಆದ್ರೆ ನಮ್ಮ ರಾಜ್ಯಲ್ಲಿ ಸಂಸ್ಕೃತ ವಿಶ್ವ ವಿದ್ಯಾಲಯ ಮಾಡ್ತೆ ಹೇಳಿರೆ ಎಲ್ಲಾ ವಿರೋಧ ಮಾಡ್ತವು ಎಂತಾ ವಿಪರ್ಯಾಸ ಅಲ್ಲದೊ….
[ಉತ್ತರುಸಿ]
ಹೊತ್ತುವೇಳೆ: 26 February,2010ರ 11:48 AM ಗೆ. (ಒಪ್ಪಸಂಕೊಲೆ)
ಅಪ್ಪು, ಬೌಧ್ಧಿಕ ಉಗ್ರವಾದಿಗೋ/ಭಯೋತ್ಪಾದಕರು (Intellectual terrorists) ಇದ್ದವನ್ನೇ?
ಅವು ಎಷ್ಟು ಎಡಿಗಾವುತ್ತೋ ಅಷ್ಟು ದೊಡ್ಡಕೆ ಕಿರುಚುತ್ತವು. ಬೇರೆಯವರ ಸ್ವರ ಕೇಳದ್ದ ಹಾಂಗೆ ಮಾಡ್ಲೆ
[ಉತ್ತರುಸಿ]