ತೆಕ್ಕೊಂಬವ ಇಲ್ಲದ್ರೆ ಕೊಡುವವಂಗೆ ಎಂತ ಕೆಲಸ..?!
March 12, 2010 ರ 9:00 amಗೆ ನಮ್ಮ ಮಾಷ್ಟ್ರುಮಾವ° ಬರದ್ದು, ಇದುವರೆಗೆ 2 ಒಪ್ಪಂಗೊ.ಬೇಡಿಕೆ ಇಲ್ಲದ್ರೆ ಯಾವ ವಸ್ತು ತಯಾರು ಮಾಡಿರೂ ಉಪಯೋಗ ಇಲ್ಲೆ.
ಸಂಗೀತ ಕೇಳುವವಿದ್ದರೇ ಸಂಗೀತಗಾರಂಗೆ ಬೆಲೆ.
ಭಾಷಣ ಕೇಳುವವಿದ್ದರೆ ಭಾಷಣಕಾರಂಗೆ ಬೆಲೆ. ಎಂತಾ ಮಾತುಗಾರ ಆದರೂ ಕೇಳುವವೇ ಇಲ್ಲದ್ರೆ ಎಂತ ಮಾಡುಗು.
ಹೀಂಗೊಂದು ಸುಭಾಷಿತ ಹೇಳ್ತು:
ಕಿಂ ಕುರ್ವಂತಿ ವಕ್ತಾರಃ ಯದಿ ಶ್ರೋತಾನ ವಿದ್ಯತೇ
ನಗ್ನಃ ಕ್ಷಪಣಕೇ ದೇಶೇ ರಜಕಃ ಕಿಂ ಕರಿಷ್ಯತಿ? |
ಕೇಳ್ತವೇ ಉಲ್ಲದ್ರೆ ಭಾಷಣಕಾರ ಎಂತ ಮಾಡುಗು? ದಿಗಂಬರ ಸನ್ಯಾಸಿಗಳೇ ಇಪ್ಪಲ್ಲಿ ಮಡ್ಯೋಳಂಗೆ ಎಂತ ಕೆಲಸ?
ಬೆಲೆ ಕೊಡ್ತವಿದ್ದಲ್ಲಿ ಮಾತ್ರ ಬೆಲೆ ಸಿಕ್ಕುಗಷ್ಟೆ.
ಗ್ರಾಹಕರೇ ಇಲ್ಲದ್ರೆ ಯಾವ ಕೈಗಾರಿಎಯೂ ನಿಲ್ಲ. ಇದೇ ಸಿದ್ಧಾಂತಲ್ಲಿ ಮಹಾತ್ಮಾಗಾಂಧಿ ವಿದೇಶೀ ವಸ್ತುಗಳ ತೆಕ್ಕೊಂಬದೇ ಬೇಡ ಹೇಳಿ ಸ್ವದೇಶೀ ಚಳುವಳಿ ಮೂಲಕ ಬ್ರಿಟಿಷರ ವ್ಯಾಪಾರ ತಗ್ಗುಸಿ ಅವರ ಆರ್ಥಿಕ ಪ್ರಾಬಲ್ಯ ಕಮ್ಮಿ ಮಾಡಿ ಭಾರತದ ಸ್ವಾತಂತ್ರ್ಯಕ್ಕೆ ಅಡಿಪಾಯ ಹಾಕಿದ್ದು.
ಉಪ್ಪಿನ ಸತ್ಯಾಗ್ರಹವೂ ಇದೇ ಸಿದ್ಧಾಂತಲ್ಲಿ. `ನಿಂಗಳ ಉಪ್ಪು ಎಂಗೊಗೆ ಬೇಡ’ – ಈ ಹೋರಾಟಲ್ಲಿ ಅವರ ಉಪ್ಪು ಬಪ್ಪದೇ ನಿಂದತ್ತು.
ಖಾದಿ ಆಂದೋಲನಂದಾಗಿ ಅವರ ಮಿಲ್ಲಿನ ಒಸ್ತ್ರದ ಬೇಡಿಕೆಯೂ ಕಮ್ಮಿ ಆತು. ಬ್ರಿಟಿಷ್ ಸರಕಾರ ಬಗ್ಗಿತ್ತು.
ತೆಕ್ಕೊಂಬವ ಇಲ್ಲದ್ರೆ ಕೊಡುವವಂಗೆ ಎಂತ ಕೆಲಸ..?!
( March 14th, 2010 @ 4:16 PM )
ಕೊಳ್ಳು ಬಾಕ ಸಂಸ್ಕೃತಿಯ ಈ ಕಾಲಲ್ಲಿ, ಬೇಡದ್ದರ ಬೇಕಾದಷ್ಟು ಮನೆ ತುಂಬುಸಲೆ ಅಡ್ವರ್ಟೈಸ್ ಬತ್ತಾ ಇದ್ದು. ಬೇಕಾದ್ದು ಯಾವುದು ಹೇಳಿ ತಿಳುಸಲೆ ಎಂತದೂ ಇಲ್ಲೆ.
[ಉತ್ತರುಸಿ]
( June 13th, 2010 @ 3:41 PM )
Wellwritten. The same is a big subject in MBA ! Demand -supply chain ! But for eveythign ., customer is the ultimate. Well written please.
[ಉತ್ತರುಸಿ]