Oppanna.com

ನೃತ್ಯಪ್ರಿಯ ನಟರಾಜ : ಮೂರ್ತಿ ವರ್ಣನೆ

ಬರದೋರು :   ದೀಪಿಕಾ    on   16/11/2011    31 ಒಪ್ಪಂಗೊ

ದೀಪಿಕಾ

ನಾಟ್ಯಕಲೆಯ ಆದಿದೈವ ನಟರಾಜನ ಮೂರ್ತಿಯ ವೈಶಿಷ್ಟ್ಯತೆಯ ಬೈಲಿಲಿ ಹ೦ಚಿಗೊ೦ಬಾ ಹೇಳಿ ಆತು..

ನಾಟ್ಯಕಲಾ ಆದಿ ದೈವ - ನಟರಾಜ

ನಟರಾಜ ನಾಟ್ಯ ಕಲೆಯ ಆದಿದೈವ..
16ನೆ ಶತಮಾನಲ್ಲಿ ಚೋಳರ ಕಾಲಲ್ಲಿ ಈ ವಿಗ್ರಹ ರೂಪು ತಾಳಿತ್ತು ಹೇಳ್ತವು.
ನಟರಾಜನ ಪರಿಕಲ್ಪನೆಯ ಪ್ರತಿಯೊ೦ದು ಭಾಗಕ್ಕೂ ವಿಶೇಷ ಅರ್ಥ, ವಿವರಣೆಗ ಇದ್ದು:

ಈ ವಿಗ್ರಹಲ್ಲಿ ಕಾ೦ಬ ಶಿವನ ಭ೦ಗಿಯ “ನಾದಾ೦ತ ನೃತ್ಯ” ಅಥವಾ “ಆನ೦ದ ತಾ೦ಡವ” ಹೇಳಿ ಹೇಳ್ತವು.
ಈ ಮೂರ್ತಿ ಷಟ್ಕೋನದ ರೇಖಾ ವಿನ್ಯಾಸಲ್ಲಿದ್ದು..
ಎರಡು ಕೈಗೊ ಮತ್ತೆ ಮಧ್ಯ ಭಾಗಲ್ಲಿಪ್ಪ ದೇಹ ಮೇಲಾಣ ಮೂರು ಕೋನ೦ಗಳ ಸೂಚಿಸುತ್ತು. ಅಪಸ್ಮಾರನ ಮೇಲೆ ಮಡುಗಿದ ಕುಂಚಿತ ಪಾದ ಕೆಳಾಣ ಒ೦ದು ಕೋನವ ಸೂಚಿಸಿರೆ, ಅವನ ಮೇಲೆದ್ದ ಕಾಲು ಮತ್ತೆ ನರ್ತಿಸುವಗ ಹರಡಿದ ವಸ್ತ್ರ ಕೆಳಾಣ ಇನ್ನೆರಡು ಕೋನವ ಸೂಚಿಸುತ್ತು.
ಈ ಆರು ಕೋನ೦ಗೊ, ಸುತ್ತಲು ಇಪ್ಪ ವರ್ತುಲಾಕಾರದ ಅಗ್ನಿಜ್ವಾಲೆಯ ಪ್ರಭಾವಳಿಯ ಒಳ ಅಡಕವಾಗಿದ್ದು..

ನವಿಲು ಗರಿ೦ದ ಅಲ೦ಕೃತವಾಗಿಪ್ಪ ಶಿವನ ಜಟೆಲಿ ಗ೦ಗೆ ಮತ್ತೆ ಅರ್ಧಚ೦ದ್ರ ಶೋಭಿಸುತ್ತವು..
ಮ೦ದಸ್ಮಿತ ವದನಲ್ಲಿಪ್ಪ ಮೂರು ಕಣ್ಣುಗಳಲ್ಲಿ ಎರಡು ಸೂರ್ಯ ಚ೦ದ್ರರ ಸ೦ಕೇತವಾದರೆ ಮೂರ್ನೆದು ಅಗ್ನಿ೦ದ ಜ್ವಲಿಸುತ್ತು..
ಬಲದ ಕೆಮಿಲಿ ಮಕರಕು೦ಡಲ ಮತ್ತೆ ಎಡದ ಕೆಮಿಲಿ ಪತ್ರಕು೦ಡಲ ಧರಿಸಿರ್ತ..
ಹಾವಿನ ಕೊರಳಸುತ್ತ ಸುತ್ತಿಗೊ೦ಡದು ಆಭರಣದ ಹಾ೦ಗೆ ಕಾಣ್ತು..
ಹಿ೦ದಾಣ ಎಡದ ಕೈಲಿ ಕಿಚ್ಚು , ಬಲದ ಕೈಲಿ ಡಮರು ಇದ್ದರೆ, ಮುಂದಾಣ ಎಡದ ಕೈ ಲತಾ ಹಸ್ತ, ಬಲದ ಕೈ ಅಭಯ ಮುದ್ರೆಲಿದ್ದು.
ಮುಯ್ಯಲಗ(ಅಪಸ್ಮಾರ) ಹೇಳುವ ರಾಕ್ಷಸನ ಬೆನ್ನಿನ ಮೇಲೆ ನಿ೦ದು ಶಿವ ನರ್ತಿಸುತ್ತಾ ಇಪ್ಪಗ ಹರಡಿದ ಜಟೆ ನೃತ್ಯದ ರಭಸವ ತೋರ್ಸುತ್ತು..

ಇಲ್ಲಿ ಶಿರಲ್ಲಿಪ್ಪ ಅರ್ಧಚ೦ದ್ರ  ಸೌಂದರ್ಯದ ಪ್ರತಿಬಿ೦ಬ ಮತ್ತೆ ಅಮೃತತ್ವದ ಸ೦ಕೇತ.
ಜಟೆ೦ದ ಇಳುದು ಬಪ್ಪ ಗ೦ಗೆ ಜೇವನದ ಶಾಶ್ವತತೆಯ ಪ್ರತೀಕ ಆಗಿದ್ದು.
ಹಣೆಯ ಕಣ್ಣು  ಜ್ಞಾನದ ಸ೦ಕೇತ..

ಹಿ೦ದಾಣ ಬಲಗೈಲಿಪ್ಪ ,  “ಮೊಟ್ಟಮೊದಲು ನಾದ ಹೊಮ್ಮಿಸಿದ ವಾದ್ಯ” ಹೇಳುವ ಡಮರು, ಶಿವನ  ಸೃಷ್ಟಿ ಕ್ರಿಯೆಯ ಸ೦ಕೇತವಾಗಿದ್ದು.
ಎಡಗೈಲಿಪ್ಪ ಅಗ್ನಿಜ್ವಾಲೆ, ಶಿವ ಸ೦ಹಾರ ಕಾರಣ ಹೇಳುವ ತತ್ವವ ಸಾರ್ತು.
ಮೂರ್ತಿಯ ಸುತ್ತಲು ಇಪ್ಪ ಪ್ರಭಾವಳಿಯ “ತಿರುವಷಿ” ಹೇಳ್ತವು.
ಇದು ಪ್ರಕೃತಿಯ ನಿರಂತರವಾದ ಚಲನೆಯ ಸೂಚಿಸಿದರೆ  ಇದರ ಕೇ೦ದ್ರವಾಗಿ ಶಿವ ಶಾಶ್ವತವಾಗಿ ನರ್ತಿಸುತ್ತಲೇ ಇರ್ತ ಹೇಳುಲಕ್ಕು..
ನಟರಾಜನ ಈ ಆನ೦ದ ತಾ೦ಡವ ಶಿವನ ಪಂಚಕ್ರಿಯೆಯಾದ:
ಸೃಷ್ಟಿ , ಸ್ಥಿತಿ , ಸ೦ಹಾರ , ತಿರೋಭಾವ , ಅನುಗ್ರಹ೦ಗಳ ಪ್ರತಿಪಾದಿಸುತ್ತು..

ಶಿವ ತಾ೦ಡವ ನೃತ್ಯದ ಭ೦ಗಿಲಿ ನಿಂದಿಪ್ಪ ಈ ಮೂರ್ತಿ ಎಷ್ಟು ಚೆ೦ದ ಕಾಣ್ತು, ಅದರಲ್ಲಿ ಅಡಗಿಪ್ಪ ವೈಶಿಷ್ಟ್ಯತೆಗಳ ನೋಡುವಾಗ ಇನ್ನು ಖುಶಿ ಆವ್ತು..
ನಾಟ್ಯದ ಆದಿದೈವ ನಟರಾಜ೦ಗೆ ನಮೋ ನಮಃ

ಆ೦ಗಿಕಮ್ ಭುವನಂ ಯಸ್ಯ
ವಾಚಿಕಂ ಸರ್ವ ವಾಙ್ಮಯಂ |
ಆಹಾರ್ಯಂ ಚಂದ್ರ ತಾರಾದಿ
ತಮ್ ನಮಃ ಸಾತ್ವಿಕಂ ಶಿವಂ ||

31 thoughts on “ನೃತ್ಯಪ್ರಿಯ ನಟರಾಜ : ಮೂರ್ತಿ ವರ್ಣನೆ

  1. ಮಾಣಿಯಂಗೊ ನಾಟ್ಯ ಮಾಡಿಯೊಂಡು ಕೂದರೆ ಕೂಸು ಸಿಕ್ಕ!

  2. ಹ್ಮ್… ಅಪ್ಪು… ತಪ್ಪು ಕಲ್ಪನೆಯೂ ಇದ್ದು… ಮತ್ತೆಷ್ಟೋ ಸರ್ತಿ, ಆಸಕ್ತಿ ಇಪ್ಪ ಕೆಲವು ಮಾಣ್ಯಂಗೊಕ್ಕೆ ಎಂತಾವ್ತು ಹೇಳಿದರೆ, ಕ್ಲಾಸಿಲಿ ಒಬ್ಬಂಟಿಯಾಗಿ ಬಿಡ್ತವು… !!!

    ಹಾಂ.. ಅದೂ ಅಪ್ಪು…. ಕಲೆಯ ಜೀವನವಾಗಿ ತೊಕೊಂಬದು ರಜ್ಜ ರಿಸ್ಕಿ…. ಮಾಣ್ಯಂಗೊಕ್ಕೆ ಲೈಫ್ ಸೆಕ್ಯೂರಿಟಿಯ ಹೆದರಿಕೆಯೂ ಅಕ್ಕು… ಬೇಕಾದಷ್ಟು ಪ್ರೋಗ್ರಾಮ್ ಸಿಕ್ಕಿದರೆ ಬಚಾವ್… ಇಲ್ಲದ್ರೆ, ಜೀವನ ಮಾಡುದು ತುಂಬಾ ಕಷ್ಟ… !!

    ಇನ್ನೂ ಒಂದು ಕಾರಣ ಎನಗೆ ಕಾಂಬದು, ಭರತನಾಟ್ಯಕ್ಕೆ ತುಂಬಾ ನಾಜೂಕು ಬೇಕು… ಅದು ಎಲ್ಲ ಮಾಣ್ಯಂಗಳಲ್ಲಿ ಇರ್ತಿಲ್ಲೆ… ಎಷ್ಟೋ ಮಾಣ್ಯಂಗೊಕ್ಕೆ ಯಕ್ಷಗಾನಲ್ಲಿ ಕುಣಿವ ಹಾಂಗೆ, ಗಟ್ಟಿ ಹೆಜ್ಜೆ ಹಾಕಿಯೇ ಅಭ್ಯಾಸ… !!!!! ಃ) ಃ ) ಃ)

    ನಿಂಗಳ ಗುರುಗ ಹೇಳಿದ್ದೂ ವಾಸ್ತವ…… ಃ) ಃ)

  3. ಅಪ್ಪು ಭರತನಾಟ್ಯ ಮಾಡುವ ಮಾಣ್ಯಂಗೊ ಕಡಮ್ಮೆ..
    ಒ೦ದು ಕಾರಣ ಇದು ಕೂಸುಗೊಕ್ಕೆ ಇಪ್ಪ ಒ೦ದು ಕಲೆ ಹೇಳುವ ತಪ್ಪು ಕಲ್ಪನೆ೦ದಾಗಿ ಅದಿಕ್ಕಾ ಏನ..
    ಮತ್ತೆ ಇಗೀಗ ಇದರ ಪ್ರೊಫೆಶನ್ ಆಗಿ ತೆಕ್ಕೊ೦ಬಲೆ ತಯಾರ್ ಇಪ್ಪ ಮಾಣಿಯ೦ಗೊದೆ ತು೦ಬಾ.. ಕಡಮ್ಮೆ . ಹಾ೦ಗೆ ಎಲ್ಲ್ಯಾರು ಕಲ್ತುಗೊ೦ಡಿದ್ದರು ಹತ್ತ್ನೆ ಕ್ಲಾಸೊ ಅಥವಾ ಪಿ ಯು ಸಿ ಗೊ ಬ೦ದಪ್ಪಗ ಕಲಿವದರ ನಿಲ್ಸುತ್ತವು(ಪುನ ತಪ್ಪು ಕಲ್ಪನೆ- ಓದುಲೆ ಕಷ್ಟ ಆವ್ತು ಹೆಳಿಎಲ್ಲ)..ಇದು ಅಪ್ಪ ಅಮ್ಮ೦ದ್ರ೦ದಾಗಿಯ ಗೊ೦ತಿಲ್ಲೆ…
    ಎನ್ನ ಕೊಲೆಜಿ೦ಗೆ ಹೇಳಿಕೊಡ್ಳೆ ಬಪ್ಪ ಒಬ್ಬ ಖೊರಿಯೊಗ್ರಫರ್ (ಒಳ್ಳೆ ಭರತನಾಟ್ಯ ಕಲಾವಿದ ) ಯಾವತ್ತು ಹೇಳ್ತವು- ಪರ್ಫಾರ್ಮರ್ಸ್ ಆಗಿ ಕೂಸುಗೊ ಕಾ೦ಬದು ಜಾಸ್ತಿ , ಗುರುಗೊ ಆಗಿ ಮಾಣಿಯ೦ಗೊ ಕಾ೦ಬದು ಜಾಸ್ತಿ ಹೇಳಿ. ಇದು ಆದಿಕ್ಕ ಹೇಳಿ ಎನಗೂ ಅ೦ಸಿತ್ತಿದ್ದು..

  4. ಲೇಖನ ಲಾಯ್ಕ ಆಯ್ದು… ನಟರಾಜ ನಾಟ್ಯದ ಆದಿದೈವ…… ನಾಟ್ಯಶಾಸ್ತ್ರವ ಬರದ್ದು ಭರತಮುನಿ…

    ಆದರೂ ಭರತನಾಟ್ಯ ಮಾಡುವ ಮಾಣ್ಯಂಗೊ ಎಷ್ಟು ಜನ ಇದ್ದವು??!!! ತುಂಬಾ ಕಡಮ್ಮೆ….. !!!! ಇದು ಎಂತಕಾದಿಕ್ಕು???!!!

  5. ಮಾಹಿತಿ ಇಪ್ಪ ಲೇಖನವ ಚೆಂದಕೆ ಬರದ್ದಿ.

  6. ಮಾಹಿತಿಯುಕ್ತ ಒಳ್ಳೆಯ ಬರಹ…ಹೀಂಗೆ ಬರೆತ್ತಾ ಇರಿ.. ಅಂಬಗಂಬಗ…

  7. ಉತ್ತಮ ಲೇಖನ ದೀಪಿಕಾ..
    ನಮ್ಮ ಸಂಸ್ಕೃತಿಲಿ ಪ್ರತಿಯೊಂದಕ್ಕೂ ಮಹತ್ವಪೂರ್ಣವಾದ ಅರ್ಥ ಇರ್ತು..ನಾವು ಅದರ ಅರ್ಥಮಾಡಿಗೊಂಬ ಮನಸ್ಥಿತಿ ಹೊಂದಿರೆಕ್ಕು 🙂
    ಹೀಂಗಿದ್ದ ಒಂದು ವಿಚಾರವ ಬೈಲಿನೋರಿಂಗೆ ತಿಳುಶಿದ್ದಕ್ಕೆ ಧನ್ಯವಾದ 🙂

  8. ನಾಟ್ಯ ದೇವತೆ ನಟರಾಜನ ವರ್ಣನೆ ಅದ್ಭುತ! ಈ ವರ್ಣನೆಗೆ ಸರಿಯಾದ ಶ್ಲೋಕ ಅಗಸ್ತ್ಯರ “ಶೈವ ಪುರಾಣ”ಲ್ಲಿ ಇದ್ದು .

    ತ್ರಿನೇತ್ರಂ ಚತುರ್ಭುಜಂ ಶಾ೦ತಂ ರಕ್ತವರ್ಣಂ ಸ್ಮಿತಾನನಂ
    ಗರುಡಾಂ ಪಾದ ಪತ್ರ೦ಚ ದುದುದ್ದ೦ಚ ಅಧಪುಷ್ಪಕಂ

    ಗಂಗಾ ಚಂದ್ರ ಸಮಾಯುಕ್ತಂ ಅಪಸ್ಮಾರ ಪರಿಸ್ತಿತಂ
    ದಕ್ಷಿಣಂ ಕುಂಚಿತಂ ಪಾದಂ ವಾಮ ಪಾದ೦ಚ ಸಮದುತಂ

    ಸದ್ವಂತು ಶೂಲಂ ಅಭಯೇ ಅನ್ವೇಡಾ ಮರಕುತದಾ
    ವಾಮ ಹಸ್ತೇತು ಡೋಲಾಡಂ ಇಂತರೇ ಅಗ್ನಿ ಪಾತ್ರಕುಂ

    ನಾಮ ಕರ್ಣೇಂದು ಪತ್ರಂಚ ದಕ್ಷಿಣೇ ನಕ್ರಕುಂಡಲಂ
    ಉಭಯೇ ಫಣಿ ಸಂಯುಕ್ತಂ ಸರ್ವಾಂಗೇ ಭಸ್ಮ ಧಾರಣಂ

    ಏವಂ ನಟೇಶಂ ಶಾಂತಂ ಅತ್ಯಂತಂ ಜ್ನಾನ ಮಂತ್ರೇಣ ಪೂಜ್ಯತೇ

    1. ಅನುಪಮಾ ಅತ್ತೆ ತು೦ಬಾ ಲಾಯ್ಕಿದ್ದು ಈ ಶ್ಲೋಕ..ವರ್ಣನೆಗೆ ಸರೀ ಆದ ಶ್ಲೋಕವೆ..ಆನು ಇಷ್ಟನ್ನಾರ ಕೇಳಿತ್ತಿದ್ದಿಲ್ಲೆ ಇದರ..ಧನ್ಯವಾದ ಇದರ ಬರದ್ದಕ್ಕೆ..

  9. ರಾವಣಕೃತ ಶಿವತಾಂಡವ ಸ್ತೋತ್ರ ಇದ್ದನ್ನೆ…ಅದು ಲಾಯ್ಕ ಇದ್ದು.ಬೈಲಿಲಿ ಹಾಕುವಿರೋ?

  10. ಶಿವದೇವರ ಅತ್ಯಂತ ಆಕರ್ಷಕ ಸ್ವರೂಪ ಆಗಿಪ್ಪ ನಟರಾಜನ ವರ್ಣನೆ-ವಿವರಣೆಗಳ ನೋಡಿ ತುಂಬ ಕೊಶಿ ಆತು.
    ತೆಮುಳುನಾಡಿನ ಚಿದಂಬರಂ ಹೇಳ್ತಲ್ಲಿ ನಟರಾಜನ ವಿಶಿಷ್ಟವಾದ ದೇವಸ್ಥಾನ ಇದ್ದು ಹೇಳಿ ಹೇಳುದು ಕೇಳಿದ್ದೆ.

    ಮತ್ತೊಂದು ಸಂಗತಿ-
    ನಮ್ಮ ಮದಲಾಣ ಕ್ರಿಕೇಉ ಆಟಗಾರ ಕಪಿಲುದೇವ ಚೆಂಡು ಬಾಟಿಂಡು ಇದ್ದದೂ ಇದೇ ಭಂಗಿಲಿ ಅಡ. ಹಾಂಗಾಗಿ ಅದಕ್ಕೆ ‘ನಟರಾಜ ಸ್ಟೈಲ್’ ಹೇಳಿ ಹೆಸರು ಮಡುಗಿದ್ದಡ..!

    1. (‘ನಟರಾಜ ಸ್ಟೈಲ್’ ಹೇಳಿ ಹೆಸರು ಮಡುಗಿದ್ದಡ..!) ಓ ಅಪ್ಪೊ!! 🙂
      ಧನ್ಯವಾದ ಮಾವ 🙂

  11. ನಟರಾಜನ ನಿತ್ಯನೂತನ ನಾಟ್ಯಭ೦ಗಿಯ ವಿವರಣೆ ಓದಿ ಕೊಶಿ ಆತು. ಚೊಕ್ಕದ ಶುದ್ದಿ.ವಿವರ೦ಗೊಕ್ಕೆ ಧನ್ಯವಾದ.

  12. ನಮೋ ನಮಃ । ನಿಜವಾಗಿಯೂ ಸತ್ಯಕ್ಕಾರು ಖಂಡಿತಾವಾಗಿಯೂ ಶುದ್ದಿ ಲಾಯಕ ಆಯ್ದು ಅಕ್ಕೋ. ಆನಂದ ತಾಂಡವ ಭಂಗಿಯ ಮುದ್ರೆಯ ಭಾವದ ವರ್ಣನೆ ಲಾಯಕ ಮಾಡಿದ್ದಿ. ಒತ್ತೆಕ್ಕಾಲಿಲಿ ನಿಂದು ಕೈ ಅಡ್ಡ ಹಿಡುದು ಒಂದು ಪೋಸ್ ಕೊಟ್ರೆ ಇಷ್ಟೊಂದು ಅರ್ಥ ಇದ್ದು ಅಪ್ಪೊ!!.

    ಶುದ್ದಿಗೆ ಧನ್ಯವಾದ.

    1. ಧನ್ಯವಾದ ಮಾವ..ನಿಜವಾಗಿಯೂ ಸತ್ಯಕ್ಕಾರು ಖಂಡಿತಾವಾಗಿಯೂ ನಿ೦ಗೊಳ ಒಪ್ಪವ ಓದಿ ಎನಗೆ ಖುಶಿ ಆತು 🙂

  13. ಒಳ್ಳೆಯ ಲೇಖನ .. ಹಾಂಗೆ ಸಂಸ್ಕೃತದ ವ್ಯಾಕರಣದ ಶ್ಲೋಕ ನೆ೦ಪಾತು .. ನೃತ್ತಾವಸಾನೆ ನಟರಾಜ ರಾಜೋ ನಾನಾದ ಧಕ್ಕಾಂ ನವಪಂಚವಾರಂ…

    1. …ಉಧ್ಧರ್ತುಕಾಮಃ ಸನಕಾದಿಸಿಧ್ಧಾನ್
      ಎತದ್ವಿಮರ್ಶೆ ಶಿವಸೂತ್ರಜಾಲಮ್॥
      ಧನ್ಯವಾದ ಃ)

  14. ಆನಂದ ತಾಂಡವ ಭಂಗಿಯ ನೋಡಿ ಆನಂದ ಆತು. ತುಂಬಾ ಮಾಹಿತಿಗಳ ಒಳಗೊಂಡ ಲೇಖನ…

    1. ನಿ೦ಗೊಗೆ ಆನ೦ದ ಆದ್ದು ಕೇಳಿ ಎನಗೂ ಖುಶಿ ಆತು..:-) ಧನ್ಯವಾದ ಅತ್ತೆ..

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×