Oppanna.com

ಪರ್ಯಾಯದ ಸೌಕರ್ಯ

ಬರದೋರು :   ಶೇಡಿಗುಮ್ಮೆ ಪುಳ್ಳಿ    on   24/01/2012    17 ಒಪ್ಪಂಗೊ

ಉಡುಪಿಯ ಕೃಷ್ಣನ ಪೂಜಗೆ ಮಠಂಗಳ
ಗೌಜಿಲಿ ಒಂದೂ ಪರ್ಯಾಯ
ಅಲ್ಲಿ ಹೋದವಕ್ಕೆ ಊಟ ತಿಂಡಿಗಿದ್ದು
ಭಾರೀಲಾಯಕದ ಸೌಕರ್ಯ ||ಪ||

ಕೋಟಿ ಕೋಟಿ ಜೆನ ಟೀವಿಲಿ ನೋಡುಲೆ
ವೀಡಿಯೋ ಮಾಡುತ್ತ ಜೆನ ಇದ್ದು
ಉರಿ ಉರಿ ಬೆಶಿಲಿಲಿ, ನಡುಗುತ್ತ ಚಳೀಲಿ
ಎಲ್ಲೆಲ್ಲಿ ನೋಡೀರೂ ಜೆನಂಗಳೆ ||ಉಡು||

ಮದ್ಯಾಹ್ನ ಇರುಳಿಂಗೆ, ಹೋದ ಎಲ್ಲೋರಿಂಗೆ
ಬಗೆ ಬಗೆ ಬೆಂದಿಗೋ ಊಟಕ್ಕೆ
ಬೇಳೆ ಹೋಳಿಗೆಯು, ಕಡ್ಲೆ ಪಾಯಸವೂ
ಎಣ್ಣೆಲಿ ಹೊರುದಾ ಬಾಳೆಕಾಯಿ ||ಉಡು||

ಉಡುಪಿಯ ಗುಳ್ಳನ ಹಸಿ ಹಸಿ ಬೆಂಡೆಯ
ಒಟ್ಟಿಂಗೆ ಹಾಕಿದಾ ಸಾಂಬಾರು
ಪಲ್ಯ ಸಾಲದ್ದರೆ, ಅವಿಲು ಬೆಂದಿಯುದೇ
ಹಾಗಲ ಕಾಯಿಯಾ ಮೆಣಸ್ಕಾಯಿ ||ಉಡು||

ಭಾವನ ಚೂರಿಲಿ ಸಣ್ಣಕೆ ಕೊಚ್ಚಿದ
ಮುಳ್ಳು ಸೌತೆಯ ಪಚ್ಚಡಿ
ಮರದಿನ ಊಟಕ್ಕೆ ಕಾಯಾಲು ಹಾಕಿದ
ಸಾಗು ಸೇಮಗೆಯಾ ಪರಮಾನ್ನಾ ||ಉಡು||

ಯಾವಗಾರು ಒಂದುಸರ್ತಿ ಪುರುಸೊತ್ತು ಇಪ್ಪಗ
ಹೋಗಿ ನೋಡೆಕ್ಕು ಗೌಜೀಯಾ
ದಿನ ವಾರ ತಿಂಗಳು ವರ್ಷ ಎರಡು ಕಳಿವಗ
ವಾಪಾಸು ಬತ್ತೀ ಪರ್ಯಾಯಾ ||ಉಡು||

17 thoughts on “ಪರ್ಯಾಯದ ಸೌಕರ್ಯ

  1. ಲಾಯಕಾತು ಪರ್ಯಾಯದ ಪದ್ಯ. ಒಂದು ಊಟ ತಪ್ಪಿತ್ತಾನೆ.

  2. (ಉಡುಪಿಯ ಗುಳ್ಳನ ಹಸಿ ಹಸಿ ಬೆಂಡೆಯ)
    ಅದೆಂತಕೆ ಹಸಿ ಹಸಿ ಬೆಂಡೆ? ಸರಿ ಬೈಂದಿಲ್ಲೆಯಾ?

    1. ಧನ್ಯವಾದಂಗೊ ಶ್ಯಾಮಣ್ಣಂಗೆ,
      ಅದೆಂತಕೆ ಹಸಿ ಹಸಿ ಬೆಂಡೆ? ಸರಿ ಬೈಂದಿಲ್ಲೆಯಾ? – ಅಣ್ಣೋ ಅದೆಲ್ಲಾ ಅಂಡರ್ ಸ್ಟೇಂಡಿಂಗು……ಅಬೆರ್ಪಿಲಿ ಹಾಂಗೆಲ್ಲಾ ಆವುತ್ತು ಕೆಲಾವು ಸರ್ತಿ…

  3. ಮಟ್ಟಿ(ಉಡುಪಿ)ಗುಳ್ಳ ಸಾಂಬಾರು ಭಾರಿ ರುಚಿ..!!!

    1. ಧನ್ಯವಾದಂಗೊ ಟೀಕೆ ಮಾವಂಗೆ….

  4. ರಾಶಿ ಚೊಲೊ ಇದ್ದದ್ದೆ ಹೌದು .. ನಂಗೂ ತಪ್ಪಿ ಹೋತಲಾ ಹೇಳಿ ಬೇಜಾರು..>

    1. ಧನ್ಯವಾದಂಗೊ ,
      ಬೇಜಾರು ಆಯೆಕ್ಕೂಳಿ ಇಲ್ಲೆ
      ದಿನ ವಾರ ತಿಂಗಳು ವರ್ಷ ಎರಡು ಕಳಿವಗ
      ವಾಪಾಸು ಬತ್ತೀ ಪರ್ಯಾಯಾ……….

  5. ಪರ್ಯಾಯದ ಸೌಕರ್ಯದ ಬಗ್ಗೆ ಪದ್ಯ ಲಾಯಿಕ ಆಯಿದು.
    ಉಡುಪಿಲಿ, ಬ್ರಾಹ್ಮರಿಂಗೆ ಊಟಕ್ಕೆ ಪ್ರಾಮುಖ್ಯತೆ ಹೆಚ್ಚು. ಎಲ್ಲಾ ಜೆಂಬಾರಂಗಳಲ್ಲಿಯೂ ಸುಮಾರು ಐಟಮ್ ಮಾಡ್ತವು.
    ಈ ಸರ್ತಿಯಾಣದ್ದು ಅಷ್ಟ ಮಠದ ಒಗ್ಗಟ್ಟಿಂಗೆ ಸವಾಲ್ ಆದ್ದು ಬೇಜಾರಿನ ಸಂಗತಿ.
    ಕಾನ (ಕುಂಬಳೆ ಸೀಮೆ) ಶಂಕರನಾರಾಯಣ ಮಠಲ್ಲಿಯೂ ಆಢಳಿತ ಪರ್ಯಾಯ ಪದ್ಧತಿಲಿಯೇ ಅಪ್ಪದು

    1. ಅಪ್ಪಚ್ಚೀ ಧನ್ಯವಾದಂಗೊ ,
      ಈ ಸರ್ತಿಯಾಣದ್ದು ಅಷ್ಟ ಮಠದ ಒಗ್ಗಟ್ಟಿಂಗೆ ಸವಾಲ್ ಆದ್ದು ಬೇಜಾರಿನ ಸಂಗತಿ. – ಅಪ್ಪಪ್ಪು
      ಕಾನ (ಕುಂಬಳೆ ಸೀಮೆ) ಶಂಕರನಾರಾಯಣ ಮಠಲ್ಲಿಯೂ ಆಢಳಿತ ಪರ್ಯಾಯ ಪದ್ಧತಿಲಿಯೇ ಅಪ್ಪದು- ಅಪ್ಪಪ್ಪು ಆದರೆ ಅಲ್ಲಿ ವರುಷಕ್ಕೊಂದಾರಿ ಅಲ್ಲದೋ, ಅದು ದೀಪಾವಳಿಂದ ದೀಪಾವಳಿಗೆ ಅಲ್ಲದೊ,

  6. ಕಣಿಪುರ ಮುಗಿಶಿ ಉಡುಪಿಗೆ ಎತ್ತಿದವಿದಾ ಈ ಭಾವಯ್ಯ! ಓಯಿ., ಲಾಯಕ ಆಯ್ದು ಇದು. 3 -3 ಸರ್ತಿ ಓದಿ ನೋಡಿದೆ ಎಂತಾರು ಬಿಂಗಿ ಬರವಲೆ ಸಿಕ್ಕುತ್ತೋದು. ಇಲ್ಲೆ ಆತ.

    [ಯಾವಗಾರು ಒಂದುಸರ್ತಿ ಪುರುಸೊತ್ತು ಇಪ್ಪಗ ಹೋಗಿ ನೋಡೆಕ್ಕು ಗೌಜೀಯಾ] ಅಪ್ಪು. ಅಪ್ಪು ಹೇಳಿತ್ತು – ‘ಚೆನ್ನೈವಾಣಿ’

    1. ಧನ್ಯವಾದಂಗೊ ,
      ಭಾವಾ ನಾವು ವಾಪಾಸು ಕೊಡೆಯಾಲಕ್ಕೆತ್ತಿದ್ದು , ರಾಮಕಥೆಗೆ ಎರಡು ದಿನ ಮೊದಲೇ……

  7. ಈ ಸರ್ತಿಯ ಪರ್ಯಾಯ ತಪ್ಪಿತ್ತನ್ನೇ.. (ಭಯಂಕರ ಶುದ್ದಿ ಆದ್ದು..)
    🙁
    ಈಗ ಹೀಂಗೆಲ್ಲ menu list ಕೊಟ್ಟು ಆಶೆಬರುಸುದೇ.. ?? ಹೀಂಗೆ ಮಾಡ್ಲಾಗ ಆತಾ..

    1. ಧನ್ಯವಾದಂಗೊ ,
      ನಾವು ಇತ್ತದರ ಹೇಳಿತ್ತು ಆಶೆಆದರೆ ಎಂತ ಮಾಡುದು….ಚೆ , ಅದಾ ಮಾಣಿ, ಮಾಣಿಮಠಲ್ಲಿ ಕಾರ್ಯಕ್ರಮ ಇದ್ದದಾ……

  8. ಇದು ಲಾಯ್ಕಾಯಿದು ಶೇಡಿಗುಮ್ಮೆ ಭಾವಾ.. ಒಪ್ಪ೦ಗೊ..

    1. ಪೆರುವದ ಭಾವಯ್ಯಂಗೆ ಧನ್ಯವಾದಂಗೊ ,

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×