Oppanna.com

ಗರುಡ ಪುರಾಣ – ಅಧ್ಯಾಯ 02 – ಭಾಗ 01

ಬರದೋರು :   ಚೆನ್ನೈ ಬಾವ°    on   01/08/2013    2 ಒಪ್ಪಂಗೊ

ಚೆನ್ನೈ ಬಾವ°

ಗರುಡ ಪುರಾಣಃ                                                                                    ಗರುಡ ಪುರಾಣ
ದ್ವಿತೀಯೋsಧ್ಯಾಯಃ                                                                             ಅಧ್ಯಾಯ 2
(ಯಮಮಾರ್ಗನಿರೂಪಣಂ )                                                                 ಯಮಮಾರ್ಗ ನಿರೂಪಣೆ
 
ಗರುಡ ಉವಾಚ
ಕೀದೃಶೋ ಯಮಲೋಕಸ್ಯ ಪಂಥಾ ಭವತಿ ದುಃಖದಃ ।road-to-hell1
ತತ್ರ ಯಾಂತಿ ಯಥಾ ಪಾಪಸ್ತನ್ಮೇ ಕಥಯ ಕೇಶವ ॥೦೧॥
ಗರುಡ° ಹೇಳಿದ°- ಏ ಕೇಶವ!, ಯಮಲೋಕದ ಮಾರ್ಗ ಯಾವ ರೀತಿಲಿ ದುಃಖಪ್ರದವಾಗಿದ್ದು, ಪಾಪಿಗೊ ಯಾವ ರೀತಿಲಿ ಅಲ್ಲಿಗೆ ಹೋವುತ್ತವು ಹೇಳ್ವದರ ಎನಗೆ ವಿವರಿಸಿ ಹೇಳು.
ಶ್ರೀ ಭಗವಾನ್ ಉವಾಚ
ಯಮಮಾರ್ಗಂ ಮಹದ್ದುಃಖಪ್ರದಂ ತೇ ಕಥಯಾಮ್ಯಹಮ್ ।
ಮಮ ಭಕ್ತೋsಪಿ ತಚ್ಛೃತ್ವಾ ತ್ವಂ ಭವಿಷ್ಯತಿ ಕಂಪಿತಃ ॥೦೨॥
ಭಗವಂತ ಹೇಳಿದ° – ಮಹಾದುಃಖಪ್ರದವಾದ ಯಮಮಾರ್ಗವ ನಿನಗೆ ವಿವರಿಸಿ ಹೇಳ್ತೆ. ನೀನು ಎನ್ನ ಭಕ್ತನಾಗಿದ್ದರೂ ಕೂಡ ಅದರ ಕೇಳಿಯಪ್ಪಗ ನೀನು ನಡುಕವುಳ್ಳವನಪ್ಪೆ.
ವೃಕ್ಷಚ್ಛಾಯಾ ನ ತತ್ರಾಸ್ತಿ ಯತ್ರ ವಿಶ್ರಮತೇ ನರಃ ।
ಯಸ್ಮಿನ್ಮಾರ್ಗೇನ ಚಾನ್ನಾದ್ಯಂ ಯೇನ ಪ್ರಾಣಾನ್ಸಮುದ್ಧರೇತ್ ॥೦೩॥
ಮನುಷ್ಯ° ವಿಶ್ರಮಿಸಿಗೊಂಬಲೆ ಅಲ್ಲಿ ಮರದ ನೆರಳು ಇಲ್ಲೆ , ಪ್ರಾಣರಕ್ಷಣೆಗೆ ಬೇಕಾದ ಅನ್ನಾದಿಗಳೂ (ಆಹಾರಾದಿಗಳೂ) ಇಲ್ಲೆ.
ನ ಜಲಂ ದೃಶ್ಯತೇ ಕ್ವಾಪಿ ತೃಷಿತೋsತೀವ ಯಃ ಪಿಬೇತ್ ।
ತಪಂತೇ ದ್ವಾದಶಾದಿತ್ಯಾಃ ಪ್ರಲಯಾಂತೇ ಯಥಾ ಖಗ ॥೦೪॥
ಏ ಪಕ್ಷಿಯೇ, ಅತ್ಯಂತ ಆಸರುಂಟಾಗಿ ಕುಡಿವಲೆ ಬೇಕಾರೆ ಎಲ್ಲಿಯೂ ನೀರು ಕಾಂಬಲೆ ಸಿಕ್ಕುತ್ತಿಲ್ಲೆ. ದ್ವಾದಶಾದಿತ್ಯರು ಪ್ರಳಯಾಂತ್ಯಲ್ಲಿ ಹೊತ್ತಿಗೊಂಡಿಪಾಂಗೆ ಪ್ರಜ್ವಲಿಸಿಗೊಂಡಿರುತ್ತವು.
ತಸ್ಮಿನ್ ಗಚ್ಛತಿ ಪಾಪಾತ್ಮಾ ಶೀತವಾತೇನ ಪೀಡಿತಃ ।
ಕಂಟಕೈರ್ವಿಧ್ಯತೇ ಕ್ವಾಪಿ ಕ್ವಚಿತ್ಸರ್ಪೈರ್ಮಹಾವಿಷ್ಯೆಃ ॥೫॥
ಅಲ್ಲಲ್ಲಿ ಶೀತಲ ವಾಯುವಿಂದ ಪೀಡಿತನಾಗಿ, ಕೆಲವು ದಿಕ್ಕೆ ಮುಳ್ಳುಗಳೂ ಕಂತಿಗೊಂಡು, ವಿಷಸರ್ಪಂಗಳೂ ಕಚ್ಚಿಗೊಂಡು ಆ ಮಾರ್ಗಲ್ಲಿ ಪಾಪಿಯಾದವ° ನಡೆತ್ತ°.
ಸಿಂಹೈರ್ವಾಘ್ರೈಃ ಶ್ವಭಿರ್ಗೋರೈರ್ಭಕ್ಷ್ಯತೇ ಕ್ವಾsಪಿ ಪಾಪಕೃತ್ ।
ವೃಶ್ಚಿಕೈರ್ದಶ್ಯತೇ ಕ್ವಾಪಿ ಕ್ವಚಿದ್ದಹ್ಯತಿ ವಹ್ನಿನಾ ॥೦೬॥
ಪಾಪಮಾಡಿದವನ ಕೆಲವುದಿಕ್ಕೆ ಘೋರವಾದ ಸಿಂಹ, ಹುಲಿ, ನಾಯಿಗೊ ತಿನ್ನುತ್ತವು. ಅಲ್ಲಲ್ಲಿ ಚೇಳುಗೊ ಕಚ್ಚುತ್ತವು. ಕೆಲವು ದಿಕ್ಕೆ ಕಿಚ್ಚಿಂದ ಸುಡುತ್ತು.
ತತಃ ಕ್ವಚಿನ್ಮಹಾಘೋರಮಸಿಪತ್ರವನಂ ಮಹತ್ ।
ಯೋಜನಾನಾಂ ಸಹಸ್ರೇ ದ್ವೇ ವಿಸ್ತಾರಾಯಾಮತಃ ಸ್ಮೃತಮ್ ॥೦೭॥
ಮತ್ತೆ ಒಂದಿಕ್ಕೆ ಮಹಾಘೋರವಾದ, ಎನ್ನಂದಾಜಿ ವಿಶಾಲ ಎರಡು ಸಾವಿರ ಯೋಜನ ವಿಸ್ತಾರದ ಅಸಿಪತ್ರ (ಕತ್ತಿಯಾಂಗೆ ಹರಿತವಾದ ಎಲೆಗಳಿಪ್ಪ) ವನ ಇದ್ದು.
ಕಾಕೋಲೂಕವಟಗೃಧ್ರ ಸರಹಾದಂಸಂಕುಲಮ್ ।
ಸದಾವಾಗ್ನಿ ಚ ತತ್ಪತ್ರೈಶ್ಛಿನ್ನಭಿನ್ನಃ ಪ್ರಜಾಯತೇ ॥೦೮॥
ಕಾಕೆ ಗೂಬೆ ಗಿಡುಗ ಹದ್ದು ಜೇನಹುಳು ನುಸಿ ಕಾಡ್ಗಿಚ್ಚು ಮತ್ತೆ ಅದರ ಕತ್ತಿ ಹಾಂಗಿಪ್ಪ ಎಲೆ ಇವುಗಳಿಂದ ಛಿನ್ನಭಿನ್ನನಾವುತ್ತ°.
ಕ್ವಚಿತ್ಪತತ್ಯಂಧಕೂಪೇ ವಿಕಟಾತ್ಪರ್ವತಾತ್ಕ್ವಚಿತ್ ।
ಗಚ್ಛತೇ ಕ್ಷುರಧಾರಾಸು ಸಂಕೂನಾಮುಪರಿ ಕ್ವಚಿತ್ ॥೦೯॥
ಒಂದಿಕ್ಕೆ ಕತ್ತಲೆಯಾದ ಬಾವಿಗಳಲ್ಲಿ, ಇನ್ನೊಂದಿಕ್ಕೆ ಕಡೆಕರಾಳ ಪರ್ವತಂಗಳಿಂದ ಬೀಳುತ್ತ°. ಮತ್ತೊಂದಿಕ್ಕೆ ಹರಿತವಾದ ಕತ್ತಿಯ ಅಲಗು ಮತ್ತೆ ಭರ್ಜಿಗಳ ಮೇಲೆ ನಡೆತ್ತ°.
ಸ್ಖಲತ್ಯಂಧೇ ತಮಸ್ಯುಗ್ರೇ ಜಲೇ ನಿಪತತಿ ಕ್ವಚಿತ್ ।
ಕ್ವಚಿತ್ಪಂಕೇ ಜಲೌಕಾಢ್ಯೇ ಕ್ವಚಿತ್ಸಂತಪ್ತ ಕರ್ದಮೇ ॥೧೦॥
ಒಂದಿಕ್ಕೆ ಭಯಂಕರವಾದ ಕಗ್ಗತ್ತಲೆಲಿ ಮುಗ್ಗರಿಸಿ ನೀರಿಲ್ಲಿ ಬೀಳುತ್ತ°, ಇನ್ನೊಂದಿಕ್ಕೆ ಜಿಗಣೆಗಳಿಂದ ಕೂಡಿಪ್ಪ ಕೆಸರಿಲ್ಲಿಯೂ ಮತ್ತೊಂದಿಕ್ಕೆ ಸುಡುತ್ತಿಪ್ಪ ಕೆಸರಿಲ್ಲಿಯೂ ಬೀಳುತ್ತ°.
ಸಂತಪ್ತ ವಾಲುಕಾಕೀರ್ಣೇ ಧ್ಮಾತತಾಮ್ರಮಯೇ ಕ್ವಚಿತ್ ।
ಕ್ವಚಿದಂಗಾರರಾಶೌ ಚ ಮಹಾಧೂಮಾಕುಲೇ ಕ್ವಚಿತ್ ॥೧೧॥
ಒಂದಿಕ್ಕೆ ಸುಡುತ್ತ ಹೊಯಿಗೆ ತುಂಬಿ, ಕಾದ ತಾಮ್ರಮಯವಾದ ಜಾಗ ಇದ್ದು. ಇನ್ನೊಂದಿಕ್ಕೆ ಕೆಂಡದ ರಾಶಿ ಇದ್ದು, ಮತ್ತೊಂದು ದಿಕ್ಕೆ ಕಪ್ಪು ಹೊಗೆ ತುಂಬಿಗೊಂಡಿದ್ದು.
ಕ್ವಚಿದಂಗಾರವೃಷ್ಟಿಶ್ಚ ಶಿಲಾವೃಷ್ಟಿಃ ಸವಜ್ರಕಾ ।
ರಕ್ತವೃಷ್ಟಿಃ ಶಸ್ತ್ರವೃಷ್ತಿಃ ಕ್ವಚಿದುಷ್ಣಾಂಬುವರ್ಷಣಮ್ ॥೧೨॥
ಅಲ್ಲಲ್ಲಿ ಕೆಂಡದ ಮಳೆಯೂ, ವಜ್ರಂದೊಡಗೂಡಿದ ಕಲ್ಲುಗಳ ಮಳೆಯೂ, ನೆತ್ತರಿನ ಮಳೆಯೂ, ಶಸ್ತ್ರಗಳ ಮಳೆಯೂ ಮತ್ತೆ ಕಾದ ನೀರಿನ ಮಳೆಯೂ ಸುರಿತ್ತು. (ಕ್ವಚಿತ್ = ಕೆಲವು ದಿಕ್ಕೆ . ಇಲ್ಲಿ ಅಲ್ಲಲ್ಲಿ ಹೇದು ಅವೆಲ್ಲವ ಒಟ್ಟಿಂಗೆ ಸೇರ್ಸಿ ಹೇಳಿದ್ದದು)
ಕ್ಷಾರಕರ್ದಮವೃಷ್ಟಿಶ್ಚ ಮಹಾನಿಮ್ನಾನಿ ಚ ಕ್ವಚಿತ್ ।
ವಪ್ರಪ್ರರೋಹಣಂ ಕ್ವಾಪಿ ಕಂದರೇಷು ಪ್ರವೇಶನಮ್ ॥೧೩॥
ಕೆಲವು ದಿಕ್ಕೆ ಕ್ಷಾರ ತುಂಬಿದ ಕೆಸರಿನ ಮಳೆ, ಒಂದಿಕ್ಕೆ ಅತೀ ಆಳವಾದ ಹೊಂಡ, ಇನ್ನೊಂದಿಕ್ಕೆ ಅತ್ಯಂತ ಎತ್ತರದ ಜಾಗಗೆ ಹತ್ತಿ ಗುಹೆಗಳನ್ನೂ ಪ್ರವೇಶಿಸೆಕ್ಕಾವ್ತು.
ಗಾಢಾಂಧಕಾರಸ್ತತ್ರಾಸ್ತಿ ದುಃಖಾರೋಹಶಿಲಾಃ ಕ್ವಚಿತ್ ।
ಪೂಯಶೋಣಿತಪೂರ್ಣಾಶ್ಚ ವಿಷ್ಠಾಪೂರ್ಣ ಹೃದಾ ಕ್ವಚಿತ್ ॥೧೪॥
ಅಲ್ಲಿ ಗಾಢಾಂಧಕಾರ ತುಂಬಿಗೊಂಡಿದ್ದು ಮತ್ತೆ ಬಹುಕಷ್ಟಪಟ್ಟು ದುಃಖಿಸ್ಯೊಂಡು ಹತ್ತೇಕ್ಕಾದ ಶಿಲೆಗೊ. ಅಲ್ಲಲ್ಲಿ ರೆಶಿಗೆ, ನೆತ್ತರು ಮತ್ತೆ ಮಲಂದ ತುಂಬಿದ ಹೊಂಡಂಗೊ ಇದ್ದು.
ಮಾರ್ಗಮಧ್ಯವಹತ್ಯುಗ್ರಾ ಘೋರಾ ವೈತರಣೀ ನದೀ ।
ಸಾ ದೃಷ್ಟಾ ದುಃಖದಾ ಕಿಂವಾ ಯಸ್ಯಾ ವಾರ್ತಾ ಭಯಾವಹಾ ॥೧೫॥
ಮಾರ್ಗಮಧ್ಯಲ್ಲಿ ಅತಿಘೋರವಾದ ವೈತರಣೀ ನದಿ ಹರಿತ್ತು. ಅದರ ವಿಷಯ ಕೇಳಿರೇ ಹೆದರಿಕೆಯಪ್ಪಗ ಇನ್ನು ನೋಡಿರೆ ದುಃಖವುಂಟಾಗದ್ದಿಕ್ಕೋ!.
ಶತಯೋಜನ ವಿಸ್ತೀರ್ಣ ಪೂಯಶೋಣಿತವಾಹಿನೀ ।
ಅಸ್ಥಿವೃಂದತಟಾ ದುರ್ಗಾ ಮಾಂಸಶೋಣಿತಕರ್ದಮಾ ॥೧೬॥
ನೂರುಯೋಜನ ವಿಸ್ತೀರ್ಣ ಇಪ್ಪ, ರೆಶಿಗೆ ನೆತ್ತರಿಂದ ತುಂಬಿಗೊಂಡು ಹರಿವ ಆ ನದಿಯ ದಡ ಅಸ್ಥಿರಾಶಿಂದಲೂ, ರಕ್ತ  ಮಾಂಸಂಗಳಿಂದಲೂ ಕೂಡಿ ದುರ್ಗಮವಾಗಿದ್ದು.
ಅಗಾಧಾ ದುಸ್ತರಾ ಪಾಪೈಃ ಕೇಶಶೈವಾಲದುರ್ಗಮಾ ।
ಮಹಾಗ್ರಾಹಸಮಾಕೀರ್ಣಾ ಘೋರಪಕ್ಷಿ ಶತೈರ್ವೃತಾ ॥೧೭॥
ಆ ನದಿ ಬಹು ಅಗಾಧವಾಗಿ ಪಾಪಿಗೊಕ್ಕೆ ದಾಂಟ್ಳೆ ಕಷ್ಟಕರವಾಗಿಯೂ, ಕೇಶಂದ ರಾಶಿತುಂಬಿದ ಚೆಂಡಿನಾಂಗೆ ತುಂಬಿ ದುರ್ಗಮವಾಗಿ, ದೊಡ್ಡ ಮೊಸಳೆಗಳಿಂದ ಕೂಡಿ ನೂರಾರು ಘೋರಪಕ್ಷಿಗಳಿಂದ ಪರಿವೃತವಾಗಿದ್ದು.
ಆಗತಂ ಪಾಪಿನಂ ದೃಷ್ಟ್ವಾ ಜ್ವಾಲಾಧೂಮಸಮಾಕುಲಾ ।
ಕ್ವಥತೇ ಸಾ ನದೀ ತಾರ್ಕ್ಷ್ಯ ಕಟಾಹಾಂತರ್ಘೃತಂ ಯಥಾ ॥೧೮॥
ಏ ಗರುಡ!, ಹತ್ರಂಗೆ ಬಪ್ಪ ಪಾಪಿಯ ನೋಡಿ ಆ ನದಿಯ ಜ್ವಾಲೆ ಮತ್ತೆ ಹೊಗೆಂದ ತುಂಬಿಗೊಂಡು, ಕೊಪ್ಪರಿಗೆಲಿ ತುಪ್ಪ ಕೊದಿವ ಹಾಂಗೆ ಕೊದಿತ್ತು.
ಕೃಮಿಭಿಃ ಸಂಕುಲಾ ಘೋರೈಃ ಸೂಚೀವಕ್ತ್ರೈ ಸಮಂತತಃ ।
ವಜತುಂಡೈರ್ಮಹಾಗೃಧ್ರೈರ್ವಾಯಸೈಃ ಪರಿವಾರಿತಾಃ ॥೧೯॥
ಸೂಜಿಯಾಂಗೆ ಮೋರೆ ಇಪ್ಪ, ಘೋರವಾದ ಹುಳುಗಳ ಗುಂಪಿಂದ ಆ ನದಿ ಇದ್ದು. ವಜ್ರದ ಸಮಾನವಾದ ಕೊಕ್ಕುಗೊ ಇಪ್ಪ ದೊಡ್ಡ ಹದ್ದುಗಳಿಂದಲೂ, ಕಾಕೆಗಳಿಂದಲೂ ಪರಿವೃತವಾಗಿದ್ದು.
ಶಿಶುಮಾರೈಶ್ಚ ಮಕರೈರ್ಜಲೌಕೋಮತ್ಸ್ಯಕಚ್ಛಪೈಃ ।
ಅನ್ಯೈರ್ಜಲಸ್ಥ ಜೀವೈಶ್ಚ ಪೂರಿತಾ ಮಾಂಸಭೇದಕೈಃ ॥೨೦॥
ಸಮುದ್ರಹಂದಿಗೊ, ಮೊಸಳೆಗೊ, ಜಿಗಣೆಗೊ, ಮೀನು, ಆಮೆ ಇನ್ನೂ ಮುಂತಾದ ನೀರಿಲ್ಲಿಯೇ ವಾಸಮಾಡುವಂತಹ ಮಾಂಸಂಗಳ ತಿಂಬಂತಹ ಪ್ರಾಣಿಗಳಿಂದ ಆ ನದಿ ಕೂಡಿದ್ದು.
ಪತಿತಾಸ್ತತ್ಪ್ರವಾಹೇ ಚ ಕ್ರಂದಂತಿ ಬಹು ಪಾಪಿನಃ ।
ಹಾ ಭ್ರಾತಃ ಪುತ್ರ ತಾತೇತಿ ಪ್ರಲಪಂತಿ ಮುಹುರ್ಮುಹುಃ ॥೨೧॥
ಬಹು ಪಾಪ ಮಾಡಿದವು ಆ ಪ್ರವಾಹಲ್ಲಿ ಬಿದ್ದು ಕೂಗುತ್ತವು. ‘ಹಾ ಒಡಹುಟ್ಟಿದವನೇ , ಹೇ ಮಗನೇ, ಹೇ ತಾತ’ ಹೇಳಿ ಪುನಃ ಪುನಃ ಪ್ರಲಾಪಿಸುತ್ತವು.
ಕ್ಷುಧಿತಾಸ್ತೃಷಿತಾಃ ಪಾಪಾಃ ಪಿಬಂತಿ ಕಿಲ ಶೋಣಿತಮ್ ।
ಸಾ ಸರಿದ್ರುಧಿರಾಪೂರಂ ವಹಂತಿ ಫೇನಿಲಂ ಬಹು ॥೨೨॥
ಹಶು ಆಸರಂದ ಕೂಡಿದ ಪಾಪಿಗೊ ನಿಶ್ಚಯವಾಗಿ ಅಲ್ಲಿ ನೆತ್ತರಿನ ಕುಡಿತ್ತವು. ಆ ನದಿ ರಕ್ತಪೂರ್ಣವಾಗಿ ಬಹು ನೊರೆಂದ ಕೂಡಿ ಹರಿತ್ತು.
ಮಹಾಘೋರಾತಿಘರ್ಜಂತೀ ದುರ್ನಿರೀಕ್ಷ್ಯಾ ಭಯಾವಹಾ ।
ತಸ್ಯಾ ದರ್ಶನಮಾತ್ರೇಣ ಪಾಪಾಃ ಸ್ಯುರ್ಗತಚೇತನಾಃ ॥೨೩॥
ಮಹಾಘೋರವಾದ, ಅತಿಯಾಗಿ ಘರ್ಜುಸುವ ಆ ನದಿ ನೋಡ್ಳೆ ಎಡಿಯದ್ದಷ್ಟು ಭಯಾನಕವಾಗಿದ್ದು. ಅದರ ನೋಡಿದ ಮಾತ್ರಕ್ಕೆ ಪಾಪಿಗೊ ಚೇತನಶೂನ್ಯರಾಗಿಬಿಡುತ್ತವು.
ಬಹುವೃಶ್ಚಿಕಸಂಕೀರ್ಣಾ ಸೇವಿತಾ ಕೃಷ್ಣಪನ್ನಗೈಃ ।
ತನ್ಮಧ್ಯೇ ಪತಿತಾನಾಂ ಚ ತ್ರಾತಾ ಕೋsಪಿ ನ ವಿದ್ಯತೇ ॥೨೪॥
ಅನೇಕ ಚೇಳುಗಳಿಂದ ತುಂಬಿಪ್ಪ ಘೋರಕೃಷ್ಣ ಸರ್ಪಂಗೊಕ್ಕೂ ಆಶ್ರಿತವಾದ ಆ ನದಿಯ ಮಧ್ಯಲ್ಲಿ ಬಿದ್ದಿಪ್ಪ ಪಾಪಿಗೊಕ್ಕೆ ರಕ್ಷಕರು ಆರೂ ಇಲ್ಲೆ.
ಆವರ್ತ ಶಸಾಹಸ್ತ್ರೈಃ ಪಾತಾಲೇ ಯಾಂತಿ ಪಾಪಿನಃ ।
ಕ್ಷಣಂ ತಿಷ್ಠಂತಿ ಪಾತಾಲೇ ಕ್ಷಣಾದುಪರಿವರ್ತಿನಃ ॥೨೫॥
ಅಲ್ಲಿ  ಸುಳಿಲಿ ಲಕ್ಷಾಂತರ ಸರ್ತಿ ಸುತ್ತಿಗೊಂಡು ಪಾಪಿಗೊ ಆ ನದಿಯ ತಳಕ್ಕೆ ಹೋವುತ್ತವು. ಅಲ್ಲಿ ಒಂದು ಕ್ಷಣ ನಿಂದು ಮತ್ತೆ ಕ್ಷಣಮಾತ್ರಲ್ಲಿ ಮೇಗೆ ಬತ್ತವು.
ಪಾಪಿನಾಂ ಪತನಾಯೈವ ನಿರ್ಮಿತಾ ಸಾ ನದೀ ಖಗ ।
ನಾಪರಂ ದೃಶ್ಯತೇ ತಸ್ಯಾ ದುಸ್ತರಾ ಬಹುದುಃಖದಾ ॥೨೬॥
ಏ ಪಕ್ಷಿಯೇ!, ಪಾಪಿಗಳ ಬೀಳುವದಕ್ಕೇಳಿಯೇ ಆ ನದಿ ನಿರ್ಮಿಸಲ್ಪಟ್ಟಿದು. ಅದರ ದಡ ಕಾಣುತ್ತಿಲ್ಲೆ. ಅದು ದಾಂಟ್ಳೆ ದುಸ್ಸಾಧ್ಯವೂ, ಬಹು ದುಃಖಮಯವೂ ಆಗಿದ್ದು.
ಏವಂ ಬಹುವಿಧಕ್ಲೇಶೇ ಯಮಮಾರ್ಗೇsತಿದುಃಖಿದೇ ।
ಕ್ರೋಶಂತಶ್ಚ ರುದಂತಶ್ಚ ದುಃಖಿತಾ ಯಾಂತಿ ಪಾಪಿನಃ ॥೨೭॥
ಹೀಂಗೆ ಬಹುವಿಧವಾಗಿ ಕ್ಲೇಶವ ಅನುಭವಿಸ್ಯೊಂಡು ಬಹು ದುಃಖಕರವಾದ ಯಮ ಮಾರ್ಗಲ್ಲಿ ಅಕ್ರೋಶ ಮಾಡ್ಯೊಂಡು, ರೋದಿಸ್ಯೊಂಡು, ದುಃಖಿತರಾದ ಪಾಪಿಗೊ ಹೋವುತ್ತವು.
ಪಾಶೇನ ಯಂತ್ರಿತಾಃ ಕೇಚಿತ್ತೃಷ್ಯಮಾಣಾಸ್ತಥಾಂಕುಶೈಃ ।
ಶಸ್ತ್ರಾಗ್ರೈಃ ಪೃಷ್ಠತಃ ಪ್ರೋತೈರ್ನಿಯಮಾನಾಶ್ಚ ಪಾಪಿನಃ ॥೨೮॥
ಪಾಶಂದ ಬಂಧಿಸಿ, ಕೆಲವರ ಅಂಕುಶಂದ ಎಳಕ್ಕೊಂಡು, ಬೆನ್ನಿಂಗೆ ಶಸ್ತ್ರಂಗಳ ಮೊನೆಂದ ಚುಚ್ಚಿಯೊಂಡು (ಯಮದೂತರುಗೊ) ಪಾಪಿಗಳ ಕರಕ್ಕೊಂಡು ಹೋವ್ತವು.
ನಾಸಾಗ್ರಪಾಶಕೃಷ್ಟಾಶ್ಚ ಕರ್ಣಪಾಶೈಸ್ತಥಾ ಪರೇ ।
ಕಾಲಪಾಶೈಃ ಕೃಷ್ಯಮಾಣಾಃ ಕಾಕೈಃ ಕೃಷ್ಯಾಸ್ತಥಾಪರೇ ॥೨೯॥
ಕೆಲವರಿಂಗೆ ಮೂಗಿನ ಕೊಡಿಲಿಯೂ, ಕೆಲವರಿಂಗೆ ಕೆಮಿಲಿಯೂ ಪಾಶವ ಹಾಕಿ ಎಳೆತ್ತವು. ಕೆಲವರ ಕಾಲಪಾಶಂದ ಬಂಧಿಸಿ ಕಾಕೆಯ ಹಾಂಗೆ ಎಳೆದು ಕರಕ್ಕೊಂಡೋವ್ತವು.
ಗ್ರೀವಾಬಾಹುಷು ಪಾದೇಷು ಬದ್ಧಾಃ ಪೃಷ್ಠೇ ಚ ಶೃಂಖಲೈಃ ।
ಅಯೋಭಾರಚಯಂ ಕೇಚಿದ್ವಹಂತಃ ಪಥಿ ಯಾಂತಿ ಯೇ ॥೩೦॥
ಕೆಲವರ ಕೊರಳಿಲ್ಲಿ, ತೋಳು, ಪಾದ ಮತ್ತೆ ಬೆನ್ನುಗಳಲ್ಲಿ ಸಂಕೊಲೆಂದ ಬಂಧಿಸಿ ಕಬ್ಬಿಣದ ಭಾರವ ಹೊರ್ಸಿಗೊಂಡು ಯಮಮಾರ್ಗಲ್ಲಿ ಹೋವುತ್ತವು.
ಯಮದೂತೈರ್ಮಹಾಘೋರೈಸ್ತಾಡ್ಯಮಾನಾಶ್ಚ ಮುದ್ಗರೈಃ ।
ವಮಂತೋ ರುಧಿರಂ ವಕ್ತ್ರಾತ್ತದೇವಾಶ್ನಂತಿ ತೇ ಪುನಃ ॥೩೧॥
ಮಹಾಘೋರರಾದ ಯಮದೂತರಿಂದ ಸುತ್ತಿಗೆಲಿ ಬಡುಶಿಗೊಂಡು ಬಾಯಿಂದ ನೆತ್ತರ ಕಾರಿಗೊಂಡು ಅದನ್ನೇ ಮತ್ತೆ ಮತ್ತೆ ತಿಂತವು.
ಶೋಚಂತಿ ಸ್ವಾನಿ ಕರ್ಮಾಣಿ ಗ್ಲಾನಿಂ ಗಚ್ಛಂತಿ ಜಂತವಃ ।
ಅತೀವ ದುಃಖಸಂಪನ್ನಾಃ ಪ್ರಯಾಂತಿ ಯಮಮಂದಿರಮ್ ॥೩೨॥
ತಾವು ಮಾಡಿದ ಕರ್ಮಂಗಳ ಚಿಂತೆಮಾಡಿಗೊಂಡು, ಮನಸ್ಸಿಲ್ಲಿ ಗ್ಲಾನಿ (ಅಸಹಾಯಕತೆ/ಅಶಕ್ತತೆ) ಹೊಂದಿ, ಅತೀ ದುಃಖವ ಹೊಂದಿಪ್ಪ ಆ ಪಾಪಿ ಜೀವಿಗೊ ಯಮನಾಲಯಕ್ಕೆ ಪ್ರಯಾಣ ಮಾಡುತ್ತವು.
ತಥಾ ಚ ಸ ವ್ರಜನ್ಮಾರ್ಗೇ ಪುತ್ರ ಪೌತ್ರ ಇತಿ ಬ್ರುವನ್ ।
ಹಾಹೇತಿ ಪ್ರರುದನ್ನಿತ್ಯಮನುತಪ್ಯತಿ ಮಂದಧೀಃ ॥೩೩॥
ಆ ಮಂದಬುದ್ಧಿಯ ಪಾಪಿಯು ಯಮಮಾರ್ಗಲ್ಲಿ ಹೋಗ್ಯೊಂಡು ‘ಏ ಮಗಾ°, ಏ ಪುಳ್ಳೀ’   ಹೇದು ಹಾಹಾಕಾರ ಮಾಡ್ಯೊಂಡು, ರೋದಿಸಿಗೊಂಡು, ದಿನಾ ಪಶ್ಚಾತ್ತಾಪ ಪಡುತ್ತ°.
ಮಹತಾ ಪುಣ್ಯಯೋಗೇನ ಮಾನುಷಂ ಜನ್ಮ ಲಭ್ಯತೇ ।
ತತ್ಪ್ರಾಪ್ಯ ನ ಕೃತೋ ಧರ್ಮಃ ಕೀದೃಶಂ ಹಿ ಮಯಾ ಕೃತಮ್ ॥೩೪॥
ಬಹುಪುಣ್ಯಫಲಂದ ಮನುಷ್ಯ ಜನ್ಮ ಸಿಕ್ಕುವದು. ಅದರ ಪಡದೂ ಆನು ಧರ್ಮವ ಆಚರಿಸಿದ್ದಿಲ್ಲೆ, ಮತ್ತೆಂತರ ಆನು ಮಾಡಿದ್ದದು!
ಮಯಾ ನ ದತ್ತಂ ನ ಹುತಂ ಹುತಾಶನೇ ತಪೋ ನ ತಪ್ತಂ ತ್ರಿದಶಾ ನ ಪೂಜಿತಾಃ ।
ನ ತೀರ್ಥಸೇವಾ ವಿಹಿತಾ ವಿಧಾನತೋ ದೇಹಿನ್ಕ್ವಚಿನ್ನಸ್ತರ ಯತ್ತ್ವಯಾ ಕೃತಮ್ ॥೩೫॥
ಎನ್ನಂದ ದಾನ ಕೊಡಲ್ಪಟ್ಟಿದಿಲ್ಲೆ, ಅಗ್ನಿಗೆ ಹವಿಸ್ಸು ಸಮರ್ಪಣೆ ಆಯ್ದಿಲ್ಲೆ, ತಪಸ್ಸು ಆಚರಿಸಲಟ್ಟಿದಿಲ್ಲೆ, ದೇವತೆಗೊ ಪೂಜಿಸಲ್ಪಟ್ಟಿದ್ದವಿಲ್ಲೆ, ವಿಧಿಪೂರ್ವಕ ತೀರ್ಥಸೇವನೆ ಮಾಡಲ್ಪಟ್ಟಿದ್ದಿಲ್ಲೆ. ಏ ದೇಹಿಯೇ! ನಿನ್ನಂದ ಎಂತ ಮಾಡಲ್ಪಟ್ಟತ್ತೋ ಎಲ್ಯಾರು ಪರಿಹರಿಸಿಗೊ.
ನ ಪೂಜಿತಾ ವಿಪ್ರಗಣಾಃ ಸುರಪಗಾ ನ ಚಾಶ್ರಿತಾಃ ಸತ್ಪುರುಷಾ ನ ಸೇವಿತಾಃ ।
ಪರೋಪಕಾರ ನ ಕೃತಾಃ ಕದಾಚನ ದೇಹಿನ್ಕ್ವಚಿನ್ನಿಸ್ತರ ಯತ್ತ್ವಯಾ ಕೃತಮ್ ॥೩೬॥
ಎನ್ನಿಂದ ಒಂದು ಸರ್ತಿಯಾರೂ ವೇದವಿದರುಗೊ (ವಿಪ್ರರು) ಪೂಜಿಸಲ್ಪಟ್ಟಿದ್ದವಿಲ್ಲೆ, ಗಂಗೆಲಿ (ಸುರಪಗಾ = ಗಂಗೆ) ಮೀಯಲ್ಪಟ್ಟಿದ್ದಿಲ್ಲೆ, ಸತ್ಪುರುಷ ಸೇವೆಯೂ ಮಾಡಲ್ಪಟ್ಟಿದ್ದಿಲ್ಲೆ, ಏ ದೇಹಿಯೇ! ನಿನ್ನಂದ ಎಂತ ಮಾಡಲ್ಪಟ್ಟತ್ತೋ ಎಲ್ಯಾರು ಪರಿಹರಿಸಿಗೊ.
ಜಲಾಶಯೋ ನೈವ ಕೃತೋ ಹಿ ನಿರ್ಜಲೇ ಮನುಷ್ಯ ಹೇತೋಃ ಪಶುಪಕ್ಷಿ ಹೇತವೇ ।
ಗೋವಿಪ್ರವೃತ್ತ್ಯರ್ಥಮಕಾರಿ ನಾಣ್ವಪಿ ದೇಹಿನ್ಕ್ವಚಿನ್ನಿಸ್ತರ ಯತ್ತ್ವಯಾ ಕೃತಮ್ ॥೩೭॥
ನೀರಿಲ್ಲದ್ದಲ್ಲಿ ಮನುಷ್ಯರಿಂಗೆ ಬೇಕಾಗಿ, ಪಶುಪಕ್ಷಿಗೊಕ್ಕೆ ಬೇಕಾಗಿ ಒಂದು ಜಲಾಶಯವೂ ನಿರ್ಮಿಸಲ್ಪಟ್ಟಿದ್ದಿಲ್ಲೆ. ಗೋಬ್ರಾಹ್ಮಣರ ಜೀವಿತಕ್ಕೋಸ್ಕರವಾಗಿ ಎನ್ನಿಂದ ಕಿಂಚಿತ್ ಸಹಾಯವೂ ಮಾಡಲ್ಪಟ್ಟಿದ್ದಿಲ್ಲೆ. ಏ ದೇಹಿಯೇ! ನಿನ್ನಂದ ಎಂತ ಮಾಡಲ್ಪಟ್ಟತ್ತೋ ಎಲ್ಯಾರು ಪರಿಹರಿಸಿಗೊ.
ನ ನಿತ್ಯದಾನಂ ನ ಗವಾಹ್ನಿಕಂ ಕೃತಂ ನ ವೇದಶಾಸ್ತ್ರಾರ್ಥವಚಃ ಪ್ರಮಾಣಿತಂ ।
ಶ್ರುತಂ ಪುರಾಣಂ ನ ಚ ಪೂಜಿತೋ ಜ್ಞೋ ದೇಹಿನ್ಕ್ವಚಿನ್ನಸ್ತರ ಯತ್ತ್ವಯಾ ಕೃತಮ್ ॥೩೮॥
ನಿತ್ಯದಾನ ಮಾಡಲ್ಪಟ್ಟಿದಿಲ್ಲೆ, ನಿತ್ಯವೂ ಒಂದು ಗೋವಿಂಗೆ ತೃಪ್ತಿಯಪ್ಪಷ್ಟು ಆಹಾರವನ್ನೂ  ಕೊಡಲ್ಪಟ್ಟಿದಿಲ್ಲೆ, ವೇದಶಾಸ್ತ್ರ ಪುರಾಣ ವಚನಂಗೊ ಕೇಳಲ್ಪಟ್ಟಿದ್ದಿಲ್ಲೆ, ಜ್ಞಾನಿಗೊ (ಜ್ಞೋ = ಜ್ಞಃ) ಪೂಜಿಸಲ್ಪಟ್ಟಿದ್ದವಿಲ್ಲೆ. ಏ ದೇಹಿಯೇ! ನಿನ್ನಂದ ಎಂತ ಮಾಡಲ್ಪಟ್ಟತ್ತೋ ಎಲ್ಯಾರು ಪರಿಹರಿಸಿಗೊ.
ಭರ್ತುರ್ಮಯಾ ನೈವ ಕೃತಂ ಹಿತಂ ವಚಃ ಪತಿವ್ರತಂ ನೈವ ಕದಾಪಿ ಪಾಲಿತಂ ।
ನ ಗೌರವಂ ಕ್ವಾಪಿ ಕೃತಂ ಗುರೂಚಿತಂ ದೇಹಿನ್ಕ್ವಚಿನ್ನಿಸ್ತರ ಯತ್ತ್ವಯಾ ಕೃತಮ್ ॥೩೯॥
ಪತಿಯ ಹಿತವಚನಂಗೊ ಎನ್ನಿಂದ ಪಾಲಿಸಲ್ಪಟ್ಟಿದ್ದಿಲ್ಲೆ, ಪಾತಿವ್ರತ್ಯ ಎನ್ನಿಂದ ಎಂದೂ ಕಾಪಾಡಲ್ಪಟ್ಟಿದ್ದಿಲ್ಲೆ, ಶ್ರೇಷ್ಠರಾದ ಗುರುಗಳು ಯೋಗ್ಯರೀತಿಲಿ ಎನ್ನಿಂದ ಗೌರವಿಸಲ್ಪಟ್ಟಿದ್ದವಿಲ್ಲೆ. ಏ ದೇಹಿಯೇ! ನಿನ್ನಂದ ಎಂತ ಮಾಡಲ್ಪಟ್ಟತ್ತೋ ಎಲ್ಯಾರು ಪರಿಹರಿಸಿಗೊ.
ನ ಧರ್ಮಬುದ್ಧ್ಯಾ ಪತಿರೇವ ಸೇವಿತೋ ವಹ್ನಿಪ್ರವೇಶೋ ನ ಕೃತೋ ಮೃತೇ ಪತೌ ।
ವೈಧವ್ಯಮಾಸಾದ್ಯ ತಪೋ ನ ಸೇವಿತಂ ದೇಹಿನ್ಕಚಿನ್ನಿಸ್ತರ ಯತ್ತ್ವಯಾ ಕೃತಮ್ ॥೪೦॥
ಧರ್ಮಬುದ್ಧಿಂದ ಪತಿಯ ಮಾತುಗೊ ಸೇವಿಸಲ್ಪಟ್ಟಿದ್ದಿಲ್ಲೆ, ಪರಿ ಸತ್ತಮತ್ತೆ ಸಹಗಮನ (ಅಗ್ನಿಪ್ರವೇಶ) ಮಾಡಲ್ಪಟ್ಟಿದ್ದಿಲ್ಲೆ. ವಿಧವೆ ಆದರೂ ತಪಸ್ಸು ಆಚರಿಸಲ್ಪಟ್ಟಿದ್ದಿಲ್ಲೆ. ಏ ದೇಹಿಯೇ! ನಿನ್ನಂದ ಎಂತ ಮಾಡಲ್ಪಟ್ಟತ್ತೋ ಎಲ್ಯಾರು ಪರಿಹರಿಸಿಗೊ.
ಮಾಸೋಪವಾಸೈರ್ನವಿಶೋಷಿತಂ ಮಯಾ ಚಾಂದ್ರಾಯಣೈರ್ವಾ ನಿಯಮೈಃ ಸವಿಸ್ತರೈಃ ।
ನಾರೀಶರೀರಂ ಬುಹುದುಃಖಭಾಜನಂ ಲಬ್ಧಂ ಮಯಾ ಪೂರ್ವ ಕೃತೈರ್ವಿಕರ್ಮಭಿಃ ॥೪೧॥
ಎನ್ನಿಂದ ಚಾಂದ್ರಾಯಣ ಮಾಸಿಕ ಉಪವಾಸವಾಗಲೀ, ವಿಸ್ತಾರವಾದ ವ್ರತನಿಯಮಂಗಳಾಗಲೀ ದೇಹಂದ ತಳದ್ದದ್ದಿಲ್ಲೆ. ಬಹುದುಃಖವ ಅನುಭವುಸುವ ಈ ನಾರೀ ಶರೀರ ಎನ್ನಂದ ಪೂರ್ವಲ್ಲಿ ಮಾಡಲ್ಪಟ್ಟ ದುಷ್ಕ್ರರ್ಮಂಗಳ ಫಲವಾಗಿಯೇ ಲಭಿಸಿದ್ದದು.
ಏವಂ ವಿಲಪ್ಯ ಬಹುಶಃ ಸ ಸ್ಮರನ್ಪೂರ್ವದೈಹಿಕಮ್ ।
ಮಾನುಷತ್ವಂ ಮಮ ಕುತ ಇತಿ ಕ್ರೋಶಸ್ಪ್ರಸರ್ಪತಿ ॥೪೨॥
ಹೀಂಗೆ ಬಹು ಪ್ರಲಾಪಿಸಿಗೊಂಡು ಜೀವಿ ಪೂರ್ವ ಜೀವನವ ಸ್ಮರಿಸಿಗೊಂಡು ‘ಆ ಎನ್ನ ಮಾನುಷತ್ವ ಎಲ್ಲ್?!’ ಹೇದು ಅಕ್ರೋಶ ಮಾಡಿಗೊಂಡು ಮುಂದೆ ನಡೆತ್ತ°.
ದಶಸಪ್ತ ದಿನಾನ್ಯೇಕೋ ವಾಯುವೇಗೇನ ಗಚ್ಛತಿ ।
ಅಷ್ಟಾದಶೇ ದಿನೇ ತಾರ್ಕ್ಷ್ಯ ಪ್ರೇತಃ ಸೌಮ್ಯಪುರಂ ವ್ರಜೇತ್ ॥೪೩॥
ಏ ಗರುಡ!, ಹದಿನೇಳು ದಿನಂಗೊ ಒಂಟಿಯಾಗಿ ವಾಯುವೇಗಂದ ಹೋವುತ್ತು. ಹದಿನೆಂಟನೇ ದಿನ ಆ ಜೀವ ಸೌಮ್ಯಪುರವ ತಲಪುತ್ತು.
 
ಗದ್ಯ ರೂಪಲ್ಲಿ –
ಗರುಡ° ಭಗವಂತ° ಮಹಾವಿಷ್ಣುವಿನತ್ರೆ ಕೇಳಿದ° – ಹೇ ಕೇಶವ!, ಯಮಲೋಕದ ಮಾರ್ಗ ಯಾವ ಪ್ರಕಾರ ದುಃಖದಾಯಕವಾಗಿದ್ದು. ಪಾಪಿಗೊ ಅಲ್ಲಿಗೆ ಯಾವ ರೀತಿಲಿ ಹೋವುತ್ತವು. ಅದರ ಎನಗೆ ತಿಳುಶು.
ವಿಷ್ಣು ಹೇಳ್ತ° – ಏ ಗರುಡ°, ಮಹಾದುಃಖಪ್ರದಾಯಕವಾದ ಯಮಮಾರ್ಗದ ವಿಷಯದ ಬಗ್ಗೆ ನಿನಗೆ ಹೇಳ್ತೆ ಕೇಳು. ಎನ್ನ ಭಕ್ತನಾಗಿದ್ದರೂ ಕೂಡ ನೀನು ಅದರ ಕೇಳಿ ಹೆದರಿಕೆಂದ ನಡುಗಿಹೋಪೆ. ಜೀವಿಗೊ ವಿಶ್ರಾಂತಿ ಪಡವಲೆ ಯಮ ಮಾರ್ಗಲ್ಲಿ ಮರದ ನೆರಳೇ ಇರ. ಜೀವದ ರಕ್ಷಣೆಗೆ ಬೇಕಾದ ಆಹಾರಂಗೊ ಸಿಕ್ಕ. ಬಹುದಾಹಂದ ಪೀಡಿತನಪ್ಪ ಜೀವಿಯ ಆಸರು ತಣುಶಲೆ ಅಲ್ಲಿ ನೀರೂ ಸಾನ ಸಿಕ್ಕ. ಅಲ್ಲಿ ಪ್ರಳಯ ಕಾಲದ ದ್ವಾದಶಾದಿತ್ಯರಂತೆ ಸೂರ್ಯ° ಧಗಧಗಿಸುತ್ತ°. ಆ ಮಾರ್ಗಲ್ಲಿ ಹೋಪ ಪಾಪಿ ಕೆಲವೊಂದರಿ ಅತ್ಯಂತ ಶೀತಗಾಳಿಂದ ಪೀಡಿತನಾವುತ್ತ°, ಕೆಲವೊಂದರಿ ಮುಳ್ಳುಗೊ ಕಂತುತ್ತು, ಕೆಲವೊಂದರಿ ವಿಷಕಾರಿ ಸರ್ಪಂಗಳೂ ಕಚ್ಚುತ್ತು. ಕೆಲವು ದಿಕ್ಕೆ ಸಿಂಹ ಹುಲಿ ಮತ್ತೆ ನಾಯಿ ಕಚ್ಚತ್ತು. ಇನ್ನು ಕೆಲವು ದಿಕ್ಕೆ ಚೇಳುಗಳ ಸಮೂಹಂದ ಕಚ್ಚಲ್ಪಡುತ್ತ°. ಕೆಲವು ದಿಕ್ಕಿ ಕಿಚ್ಚಿಂದ ಸುಡಲ್ಪಡುತ್ತ°. ಹೀಂಗೆ ಮುಂದೆ ಹೋಪ ಜೀವಿಗೆ ಅತಿ ಭಯಂಕರವಾದ, ಎರಡು ಸಾವಿರ ಯೋಜನಗಳಷ್ಟು ವಿಸ್ತೀರ್ಣ ಇಪ್ಪ ಖಡ್ಗದಾಂಗೆ ಹರಿತವಾಗಿಪ್ಪ ಎಲೆಗಳಿಪ್ಪ ‘ಅಸಿಪತ್ರವನ’ ಹೇಳ್ವ ಘೋರ ವನ ಪ್ರದೇಶವ ತಲಪುತ್ತ°. ಆ  ಅಸಿಪತ್ರ ವನವು  ಕಾಕೆ ಗೂಬೆ ಕಾಕೆ ಗೂಬೆ ಗಿಡುಗ ಹದ್ದು ಜೇನಹುಳು ನುಸಿ ಕಾಡ್ಗಿಚ್ಚು ಮತ್ತೆ ಅದರ ಕತ್ತಿ ಹಾಂಗಿಪ್ಪ ಎಲೆ ಇವುಗಳಿಂದ ಯುಕ್ತವಾಗಿದ್ದು. ಅಲ್ಲಿ ಅದರಿಂದ ಪಾಪಿ ಜೀವಿ ಛಿನ್ನಭಿನ್ನನಾವುತ್ತ°. ಒಂದಿಕ್ಕೆ ಅಂಧಕಾರದ ಬಾವಿ ಬಿದ್ದರೆ ಇನ್ನೊಂದಿಕ್ಕೆ ಎತ್ತರದ ಪರ್ವತಂದ ಕೆಳ ಉರುಳಿ ಬೀಳುತ್ತ°. ಕೆಲವು ದಿಕ್ಕೆ  ಹರಿತವಾದ ಕತ್ತಿಯ ಅಲಗು ಮತ್ತೆ ಭರ್ಜಿಗಳ ಮೇಲೆ ನಡೆತ್ತ°. ಒಂದಿಕ್ಕೆ ಗಾಢವಾದ ಅಂಧಕಾರಲ್ಲಿ ಬಿದ್ದರೆ ಇನ್ನೊಂದಿಕ್ಕೆ ಜಿಗಣೆಗಳಿಂದ ಕೂಡಿಪ್ಪ ಕೆಸರಿಲ್ಲಿಯೂ ಮತ್ತೊಂದಿಕ್ಕೆ ಸುಡುತ್ತಿಪ್ಪ ಕೆಸರಿನ ಮಡುವಿಲ್ಲಿ ಬೀಳುತ್ತ°. ಕೆಲವು ದಿಕ್ಕೆ ಕಾದು ಧಗಧಗಿಸುವ ಹೊಯಿಗೆಂದ ವ್ಯಾಪ್ತ ಇನ್ನೊಂದಿಕ್ಕೆ ಕೆಂಪುಕೆಂಪನೆ ಕಾದ ತಾಮ್ರಮಯ ಲೋಹದ ಮಾರ್ಗ, ಮತ್ತೆ ಕೆಲವು ದಿಕ್ಕೆ ಕಿಚ್ಚಿನ ಉಂಡೆಗಳೇ ಇಪ್ಪ ಮತ್ತೊಂದು ದಿಕ್ಕೆ ಕೆಂಡದ ಮಳೆಯೂ, ಮತ್ತೆ ಕೆಲವು ದಿಕ್ಕೆ ಕಪ್ಪು ಹೊಗೆ ತುಂಬಿಗೊಂಡಿದ್ದು. ಅಲ್ಲಲ್ಲಿ  ವಜ್ರಂದೊಡಗೂಡಿದ ಕಲ್ಲುಗಳ ಮಳೆಯೂ, ನೆತ್ತರಿನ ಮಳೆಯೂ, ಶಸ್ತ್ರಗಳ ಮಳೆಯೂ ಮತ್ತೆ ಕಾದ ನೀರಿನ ಮಳೆಯೂ ಸುರಿತ್ತು. ಕೆಲವು ದಿಕ್ಕೆ ಕ್ಷಾರ ತುಂಬಿದ ಕೆಸರಿನ ಮಳೆ, ಒಂದಿಕ್ಕೆ ಅತೀ ಆಳವಾದ ಹೊಂಡ, ಇನ್ನೊಂದಿಕ್ಕೆ ಅತ್ಯಂತ ಎತ್ತರದ ಜಾಗಗೆ ಹತ್ತಿ ಗುಹೆಗಳನ್ನೂ ಪ್ರವೇಶಿಸೆಕ್ಕಾವ್ತು. ಅಲ್ಲಿ ಗಾಢಾಂಧಕಾರ ತುಂಬಿಗೊಂಡಿದ್ದು ಮತ್ತೆ ಬಹುಕಷ್ಟಪಟ್ಟು ದುಃಖಿಸ್ಯೊಂಡು ಹತ್ತೇಕ್ಕಾದ ಶಿಲೆಗೊ. ಅಲ್ಲಲ್ಲಿ ರೆಶಿಗೆ, ನೆತ್ತರು ಮತ್ತೆ ಮಲಂದ ತುಂಬಿದ ಹೊಂಡಂಗೊ ಇದ್ದು. ಇವುಗೆಳೆಲ್ಲವ ದಾಂಟಿ ನಡದು ಮುಂದೆ ಹೋಯೇಕ್ಕಾವ್ತು.
ಅಲ್ಲಿ ಮಾರ್ಗದ ಮಧ್ಯಲ್ಲಿ ಅತ್ಯಂತ ಉಗ್ರ ಮತ್ತೆ ಘೋರವಾದ `ವೈತರಣೀ’ ನದಿ ಪ್ರವಹಿಸುತ್ತು. ಅದರ ವಿಷಯ ಕೇಳಿರೇ ಹೆದರಿಕೆಯಪ್ಪಗ ಇನ್ನು ನೋಡಿರೆ ದುಃಖವುಂಟಾಗದ್ದಿಕ್ಕೋ!.. ಮಹಾಘೋರವಾದ, ಅತಿಯಾಗಿ ಘರ್ಜುಸುವ ಆ ನದಿ ನೋಡ್ಳೆ ಎಡಿಯದ್ದಷ್ಟು ಭಯಾನಕವಾಗಿದ್ದು. ಅದರ ನೋಡಿದ ಮಾತ್ರಕ್ಕೆ ಪಾಪಿಗೊ ಚೇತನಶೂನ್ಯರಾಗಿಬಿಡುತ್ತವು. ಅನೇಕ ಚೇಳುಗಳಿಂದ ತುಂಬಿಪ್ಪ ಘೋರಕೃಷ್ಣ ಸರ್ಪಂಗೊಕ್ಕೂ ಆಶ್ರಿತವಾದ ಆ ನದಿಯ ಮಧ್ಯಲ್ಲಿ ಬಿದ್ದಿಪ್ಪ ಪಾಪಿಗೊಕ್ಕೆ ರಕ್ಷಕರು ಆರೂ ಇಲ್ಲೆ. ಅಲ್ಲಿ  ಸುಳಿಲಿ ಲಕ್ಷಾಂತರ ಸರ್ತಿ ಸುತ್ತಿಗೊಂಡು ಪಾಪಿಗೊ ಆ ನದಿಯ ತಳಕ್ಕೆ ಹೋವುತ್ತವು. ಅಲ್ಲಿ ಒಂದು ಕ್ಷಣ ನಿಂದು ಮತ್ತೆ ಕ್ಷಣಮಾತ್ರಲ್ಲಿ ಮೇಗೆ ಬತ್ತವು. ಪಾಪಿಗಳ ಬೀಳುವದಕ್ಕೇಳಿಯೇ ಆ ನದಿ ನಿರ್ಮಿಸಲ್ಪಟ್ಟಿದು. ಅದರ ದಡ ಕಾಣುತ್ತಿಲ್ಲೆ. ಅದು ದಾಂಟ್ಳೆ ದುಸ್ಸಾಧ್ಯವೂ, ಬಹು ದುಃಖಮಯವೂ ಆಗಿದ್ದು. ಹೀಂಗೆ ಬಹುವಿಧವಾಗಿ ಕ್ಲೇಶವ ಅನುಭವಿಸ್ಯೊಂಡು ಬಹು ದುಃಖಕರವಾದ ಯಮ ಮಾರ್ಗಲ್ಲಿ ಅಕ್ರೋಶ ಮಾಡ್ಯೊಂಡು, ರೋದಿಸ್ಯೊಂಡು, ದುಃಖಿತರಾದ ಪಾಪಿಗೊ ಹೋವುತ್ತವು. ಆ ಪಾಪಿಗಳ ಕೊರಳು ಕೈ ಮತ್ತೆ ಕಾಲಿಂಗೆ ಸರಪಳಿ ಕಟ್ಟಿಸಿಗೊಂಡು ಹಾಂಗೂ ತಮ್ಮ ಬೆನ್ನಲ್ಲಿ ಲೋಹದ ಭಾವರ ಹೊತ್ತುಗೊಂಡು ಮುಂದೆ ಹೋವ್ತವು. ಅತ್ಯಂತ ಘೋರರಾದ ಯಮದೂತರುಗೊ ಸುತ್ತಿಗೆ ತೆಗದು ಜೆಪ್ಪುತ್ತವು. ಪಾಪಿಗಳ ಬಾಯಿಂದ ರಕ್ತ ಕಾರಿಗೊಂಡು ಮತ್ತೆ ಅದನ್ನೇ ಕುಡ್ಕೊಂಡು ಮುಂದೆ ಹೋವುತ್ತವು.  ಆ ಸಮಯಲ್ಲಿ ತನ್ನ ದುಷ್ಕರ್ಮಂಗಳ ಬಗ್ಗೆ ತಾನೇ ಚಿಂತಿಸ್ಯೊಂಡು ಜೀವಿ ಅತ್ಯಂತ ತಪ್ಪಿತಸ್ಥ ಭಾವನೆಯ ಅನುಭವ ಹೊಂದಿ ಅತೀವ ದುಃಖಪೀಡಿತನಾಗಿ ಯಮಲೋಕದತ್ತೆ ನಡೆತ್ತ°. 
ಈ ಪ್ರಕಾರವಾಗಿ ಯಮಮಾರ್ಗಲ್ಲಿ ಹೋಗ್ಯೊಂಡು, ಆ ಮಂದ ಬುದ್ಧಿಯ ಜೀವಿ ‘ಏ ಮಗಾ°, ಏ ಪುಳ್ಳೀ’ ಹೇದು ಮಕ್ಕಳ ಪುಳ್ಳ್ಯಕ್ಕಳ ಕೂಗಿ ದೆನಿಗೊಂಡು ‘ಅಯ್ಯೋ.. ಅಯ್ಯೋ’  ಹೇದು ಹಾಹಾಕಾರ ಮಾಡ್ಯೊಂಡು, ರೋದಿಸಿಗೊಂಡು, ದಿನಾ ಪಶ್ಚಾತ್ತಾಪ ಪಟ್ಟುಗೊಂಡು ಈ ರೀತಿಯಾಗಿ ವಿಚಾರ ಮಾಡುತ್ತ –
“ಬಹುಪುಣ್ಯಫಲಂದ ಮನುಷ್ಯ ಜನ್ಮ ಸಿಕ್ಕುವದು. ಅದರ ಪಡದೂ ಆನು ಧರ್ಮವ ಆಚರಿಸಿದ್ದಿಲ್ಲೆ, ಮತ್ತೆಂತರ ಆನು ಮಾಡಿದ್ದದು! ಅಂತಹ ಪುಣ್ಯ ಮನುಷ್ಯ ಜನ್ಮವ ಪಡದೂ ಆನು ಜೀವನಲ್ಲಿ ದಾನ ಮಾಡಿದ್ದಿಲ್ಲೆ, ತಪಸ್ಸು ಮಾಡಿದ್ದಿಲ್ಲೆ, ದೇವತೆಗಳ ಪೂಜೆ ಮಾಡಿದ್ದಿಲ್ಲೆ, ಅಗ್ನಿಲಿ ಹವಿಸ್ಸು ಹೋಮಿಸಿದ್ದಿಲ್ಲೆ, ವಿಧಿ ವಿಧಾನದ ಉಪವಾಸ ತೀರ್ಥಸೇವನೆ ಮಾಡಿದ್ದಿಲ್ಲೆ. ಹಾಂಗಾಗಿ ಏ ಜೀವಿಯೇ! ನೀನೆಂತ ಮಾಡಿದ್ದೆಯೋ ಅದರ ಫಲವ ಅನುಭವುಸು.
ಬ್ರಾಹ್ಮಣರ ಪೂಜೆ ಮಾಡಿದ್ದಿಲ್ಲೆ, ದೇವನದಿ ಗಂಗಾಮಾತೆಯ ಆಶ್ರಯ ಪಡದ್ದಿಲ್ಲೆ, ಸತ್ಪುರಷರ ಸೇವೆ ಮಾಡಿದ್ದಿಲ್ಲೆ, ಅನ್ಯರಿಂಗೆ ಎಂದೂ ಊಟ ಮಾಡಿಸಿದ್ದಿಲ್ಲೆ. ಹಾಂಗಾಗಿ ಏ ಜೀವಿಯೇ! ನೀನೆಂತ ಮಾಡಿದ್ದೆಯೋ ಅದರ ಫಲವ ಅನುಭವುಸು”.
ಮನುಷ್ಯರು ಮತ್ತೆ ಪಶು-ಪಕ್ಷಿಗೊಕ್ಕೆ ಜಲಹೀನ ಪ್ರದೇಶಲ್ಲಿ ಜಲಾಶಯವನ್ನೂ ನಿರ್ಮಿಸಿದ್ದಿಲ್ಲೆ, ಗೋ-ಬ್ರಾಹ್ಮಣರ ಜೀವನ ನಿರ್ವಹಣೆಗೆ ಅಲ್ಪ ಪ್ರಯತ್ನವನ್ನೂ ಸಾನ ಮಾಡಿದ್ದಿಲ್ಲೆ. ಹಾಂಗಾಗಿ ಏ ಜೀವಿಯೇ! ನೀನೆಂತ ಮಾಡಿದ್ದೆಯೋ ಅದರ ಫಲವ ಅನುಭವುಸು.
ನೀನು ನಿತ್ಯ ದಾನ ಮಾಡಿದ್ದಿಲ್ಲೆ, ಗೋವುಗಳ ಪಾಲನೆ ಪೋಷಣೆಯ ವ್ಯವಸ್ಥೆ ಮಾಡಿದ್ದಿಲ್ಲೆ, ವೇದ ಶಾಸ್ತ್ರ ಪುರಾಣ ವಚನಂಗೊಕ್ಕೆ ಕೆಮಿ ಕೊಟ್ಟಿದಿಲ್ಲೆ, ವಿದ್ವಾಂಸರ ಪೂಜಿಸಿದ್ದಿಲ್ಲೆ. ಹಾಂಗಾಗಿ ಏ ಜೀವಿಯೇ!, ನೀನೆಂತ ಮಾಡಿದೆಯೋ ಆ ದುಷ್ಕರ್ಮಂಗಳ ಫಲವ ನೀನೀಗ ಅನುಭವುಸು”.
ಗೆಂಡುಗೊ ಅಲ್ಲದ್ದೆ ಹೆಮ್ಮಕ್ಕಳೂ ಈ ಸನ್ನಿವೇಶಲ್ಲಿ ಈ ರೀತಿಯಾಗಿ ಪಶ್ಚಾತ್ತಾಪ ಪಡುತ್ತವು – ” ಆನು ಪತಿಯ ಹಿತಕರ ಆಜ್ಞೆಯ ಪಾಲಿಸಿದ್ದಿಲ್ಲೆ, ಪಾತಿವ್ರತ್ಯ ಧರ್ಮದ ಪಾಲನೆಯ ಕೂಡ ಪಾಲಿಸಿದ್ದಿಲ್ಲೆ, ಗುರುಜನರಿಂಗೆ ಗೌರವಾನ್ವಿತರಿಂಗೆ ಸಂಮ್ಮಾನ ಎಂದೂ ಮಾಡಿದ್ದಿಲ್ಲೆ. ಹಾಂಗಾಗಿ ಏ ಜೀವಿಯೇ, ನೀನೆಂತ ಮಾಡಿದ್ದೆಯೋ ಅದರ ಫಲವ ಈಗ ನೀನು ಅನುಭವುಸು.
ಧರ್ಮಬುದ್ಧಿಂದ ಏಕಮಾತ್ರ ಪತಿಯ ಸೇವೆಯ ಮಾಡಿದ್ದಿಲ್ಲೆ, ಪತಿಯ ಮೃತ್ಯುವಿನ ನಂತರ ಅಗ್ನಿಪ್ರವೇಶ ಮಾಡಿ ಅವನ ಸಹಗಮನ ಮಾಡಿದ್ದಿಲ್ಲೆ, ವೈಧವ್ಯವ ಪ್ರಾಪ್ತಿ ಹೊಂದಿ ತ್ಯಾಗಮಯ ಜೀವನವ ನಡೆಶಿದ್ದಿಲ್ಲೆ. ಹಾಂಗಾಗಿ ಏ ಜೀವಿಯೇ, ನೀನೆಂತ ಮಾಡಿದ್ದೆಯೋ ಅದರ ಫಲವ ಈಗ ನೀನು ಅನುಭವುಸು.
ಮಾಸಪರ್ಯಂತಾ ಮಾಡುವ ಉಪವಾಸಂಗಳಿಮ್ದ ಹಾಂಗೂ ಚಂದ್ರಾಯಣ ವ್ರತಾದಿ ಸುವಿಸ್ತೀರ್ಣ ನಿಯಮಂಗಳ ಪಾಲನೆಂದ ಶರೀರ ಶೋಷಿಸಿದ್ದಿಲ್ಲೆ. ಪೂರ್ವ ಜನ್ಮಲ್ಲಿ ಮಾಡಿದ ದುಷ್ಕರ್ಮಂಗಳಿಂದ ಅನೇಕ ಪ್ರಕಾರದ ದುಃಖದ ಪ್ರಾಪ್ತಿಗಾಗಿ ಸ್ತ್ರೀ ಶರೀರ ಪ್ರಾಪ್ತಿಯಾತು”.
ಹೀಂಗೆ ಅನೇಕ ಪ್ರಕಾರದ ರೋದನೆ ಮಾಡಿಗೊಂಡು, ಪೂರ್ವ ಶರೀರದ ನೆಂಪು ಮಾಡಿಯೊಂಡು ‘ಎನ್ನ ನರಜನ್ಮ ಶರೀರ ಎಲ್ಲಿ ಹೋತು’ ಹೇಳಿ ಕೂಗಿಗೊಂಡು ಪಾಪಿ ಜೀವಿ ಯಮ ಮಾರ್ಗಲ್ಲಿ ಮುಂದೆ ಹೋವುತ್ತ°. ಈ ಪ್ರಕಾರವಾಗಿ ಹದಿನೇಳು ದಿನಗಳ ವರೇಂಗೆ ಏಕಾಂಗಿಯಾಗಿ ವಾಯುವೇಗಂದ ನಡಕ್ಕೊಂಡು ಹೋಗಿ ಆ ಪ್ರೇತ ಜೀವಿ ಹದಿನೆಂಟನೇ ದಿನ ಸೌಮ್ಯಪುರವ ಹೋಗಿ ಸೇರುತ್ತ°.
 
ಮುಂದೆ ಅಲ್ಲಿ ಎಂತಾವ್ತು….  ಬಪ್ಪ ವಾರ ನೋಡುವೋ°.
 
[ ಚಿಂತನೀಯಾ- 
ವೇದ ಶಾಸ್ತ್ರ ಪುರಾಣಂಗೊ ಇಪ್ಪದು ಧರ್ಮವ ಸಾರ್ಲೆ. ಅದು ಭಗವಂತನಿಂದ ಹೇಳಲ್ಪಟ್ಟದ್ದು.  ಭಗವಂತನಿಂದ ಈ ಭೂಮಿಗೆ ಬಂದ ಜೀವಿ ಧರ್ಮಾನುಸಾರ ಜೀವನ ಮಾಡೇಕ್ಕಾದ್ದು ಕರ್ತವ್ಯ. ಏವಾಗ ಧರ್ಮದ ಬಗ್ಗೆ ಅನಾಸಕ್ತಿ ಬಂತೋ ಅದು ಧರ್ಮವ ತಿರಸ್ಕರಿಸಿದಾಂಗೆ. ಧರ್ಮವ ತಿರಸ್ಕರಿಸಿರೆ ಭಗವಂತನ ತಿರಸ್ಕರಿಸಿದಾಂಗೆ. ನಾವು ಮಾಡುವ ಪ್ರತಿಯೊಂದು ಕರ್ಮವೂ, ಕಾರ್ಯೆಯೂ ಭಗವಂತನ ದಿನಚರಿ ಪುಸ್ತಕಲ್ಲಿ ದಾಖಲೆ ಆವ್ತು. ಮುಂದೆ ಅದಕ್ಕೆ ಶಾಸ್ತಿಯ ನಾವು ಅನುಭವುಸೆಕ್ಕಾವ್ತು. ಇದರ ಪರಿಜ್ಞಾನ ಸದಾ ಇರೆಕು. ಹಾಂಗಾಗಿ ನಾವು ಹಾದಿ ತಪ್ಪದ್ದಾಂಗೆ ಇರೇಕಾರೆ ಸದಾ ನಾವು ಧರ್ಮ ಪಾರಾಯಣ ಮಾಡೇಕು, ಧರ್ಮಪರಾಯಣರೂ ಆಯೇಕು. ಇಲ್ಲದ್ರೆ ಎಲ್ಲ ಒಟ್ಟು ಸೇರ್ಸಿ ಮುಂದೆ ಒಂದಿನ ಅನುಭವುಸೆಕ್ಕಾವ್ತು. ಭಗವಂತನಲ್ಲಿ ನವಗಿರೆಕ್ಕಾದ್ದು ಶ್ರದ್ಧಾ ಭಕ್ತಿಯ ನಂಬಿಕೆ ವಿಶ್ವಾಸ. ಅದು ನಮ್ಮಲ್ಲಿ ದೃಢವಾಗಿರೆಕು. ಭಕ್ತಿಯ ಪರಾಕಾಷ್ಠವೇ ಶರಣಾಗತಿ. ಭಗವಂತನಲ್ಲಿ ಸಂಪೂರ್ಣ ಶರಣಾಗತನಾಗಿ ಅವನೇ ಸರ್ವಗತ, ಅವನೇ ಸರ್ವ ಸಮರ್ಥ ಹೇಳಿ ನಂಬಿಗೊಂಡು ನಾವು ಕರ್ಮನಿರತರಾದರೆ ಯಶಸ್ಸು ನಿಶ್ಚಯ. ಅಂತಹ ದೃಢ ನಿಶ್ಚಯ ನಮ್ಮಲ್ಲಿದ್ದರೆ ನಾವು ಎಂತಹ ಕಷ್ಟ ಪರಿಸ್ಥಿತಿಯನ್ನೂ ಎದುರುಸುಲೆ ಧೈರ್ಯ ಶಕ್ತಿಯ ಕೊಡುತ್ತು. ಇದುವೇ ವೈರಾಗ್ಯ. ಪುನಃ ವೈರಾಗ್ಯ ಹೇಳಿರೆ ಎಲ್ಲವನ್ನೂ ಬಿಟ್ಟಿಪ್ಪ ವೈರಾಗ್ಯ ಅಪ್ಪಲಾಗ. ಧರ್ಮ ಅರ್ಥ ಕಾಮ ಮೋಕ್ಷ ಸಾಧನೆ ಮಾಡುವಲ್ಲಿ ವೈರಾಗ್ಯ ಅಡ್ಡಿ ಬಪ್ಪಲಾಗ. ಎಲ್ಲವುದರ ಒಟ್ಟಿಂಗೇ ಇದ್ದುಗೊಂಡು ಯಾವುದನ್ನೂ ಅತಿಯಾಗಿ ಅಂಟಿಸಿಗೊಳ್ಳದ್ದೆ ಇರೆಕ್ಕಾದ್ದು ಅತೀ ಮಹತ್ವದ ವಿಷಯ. ಅಲ್ಲದ್ದೆ ಸಂಪೂರ್ಣ ವೈರಾಗ್ಯವ ತಾಳಿ ಮೋಕ್ಷ ಸಾಧನೆ ಮಾಡ್ತೆ ಹೇಳುವದು ಸೂಕ್ತ ಆವ್ತಿಲ್ಲೆ. ಅದು ನಮ್ಮ ಕರ್ತವ್ಯ ಚ್ಯುತಿಗೆ ಆಳಪ್ಪಂತೆ ಮಾಡ್ವ ಸಾಧ್ಯತೆ ಇದ್ದು. ಕರ್ಮದ ಬಗ್ಗೆ ಪ್ರಜ್ಞೆ ಮಡಿಕ್ಕೊಂಡು ವೈರಾಗ್ಯದ ಸಾಧನೆ ಮಾಡಿರೆ ಪುಣ್ಯ ಲೋಕವ ಸೇರುವ ಮಾರ್ಗಲ್ಲಿ ಹೋಪಲಕ್ಕು. ಇಲ್ಲದ್ರೆ ಪಾಪಿಗಳ ನರಕ ಮಾರ್ಗವೇ ನಿಶ್ಚಯ.
ನಾವು ಸತ್ತಪ್ಪಗ ನಮ್ಮ ಬಂಧುಗೊ ಮನೆಬಾಗಿಲ ವರೇಂಗೆ ಬಕ್ಕು , ಅಥವಾ ಸ್ಮಶಾನದ ವರೇಂಗೆ ಬಕ್ಕು. ಆದರೆ ನಮ್ಮ ನಿಜವಾದ ಆಪದ್ಬಂಧು ಭಗವಂತ° ಒಬ್ಬನೆ. ಆ ಬಂಧುತ್ವ ಜನ್ಮ ಜನ್ಮಾಂತರಲ್ಲಿಯೂ ನಮ್ಮ ಬಿಟ್ಟು ಹೋಗ. ಹಾಂಗಾಗಿ ಭಗವನ್ನಾಮವೊಂದೇ ನಮ್ಮ ಜೀವನ್ಮಂತ್ರ ಆಗಿಪ್ಪದು ಶ್ರೇಯಸ್ಕರ.
ಜನ್ಮ ಜನ್ಮಾಂತರ ಪುಣ್ಯಕರ್ಮದ ಫಲವಾಗಿ ನವಗೆ ಸಿಕ್ಕುವದು ಮನುಷ್ಯ ಜನ್ಮ. ಮನುಷ್ಯ ಹೇಳಿರೆ ಬುದ್ಧಿಯಿಪ್ಪ ಪ್ರಾಣಿ. ಹಾಂಗಾಗಿ ಮನುಷ್ಯ ಯಾವತ್ತೂ ಬುದ್ಧಿಪೂರ್ವಕವಾಗಿ ಕರ್ಮನಿರತನಾಗಿಪ್ಪದು ಶ್ರೇಯಸ್ಕರ. ಅದನ್ನೇ ದಾಸವರೇಣ್ಯರು ಹಾಡಿದ್ದದು – ‘ಮಾನವ ಜನ್ಮ ದೊಡ್ಡದು..’.
ಧನಧಾನ್ಯವಸ್ತು ವಾಹನಾದಿಗಳ ಎಷ್ಟು ಕೂಡಿ ಹಾಕಿರೂ ಏವ ಪ್ರಯೋಜನಕ್ಕೂ ಆವ್ತಿಲ್ಲೆ. ಅದು ಅಹಂಕಾರವ ವೃದ್ಧಿಸುತ್ತದಲ್ಲದೆ ಶ್ರೇಯಸ್ಸಿಂಗೆ ಕಾರಣ ಆವ್ತಿಲ್ಲೆ. ನಾವು ಸಂಪಾದಿಸಿದ್ದರ ಇಲ್ಲದ್ದ ಅರ್ಹರಿಂಗೆ ದಾನವಾಗಿ ಕೊಟ್ಟು ಪುಣ್ಯ ಸಂಪಾದುಸುವದು ನಾವು ಈ ಮನುಷ್ಯ ಜನ್ಮಲ್ಲಿ ಮಾಡ್ಳೆ ಎಡಿಗಪ್ಪ ಬಹುದೊಡ್ಡ ಕಾರ್ಯ.
ಬ್ರಾಹ್ಮಣರು ವೇದ ಶಾಸ್ತ್ರಂಗಳ ಪಾಲಕರಾದ್ದರಿಂದ ಬ್ರಾಹ್ಮಣರ ಪೋಷಿಸೆಕ್ಕಾದ್ದು ಕರ್ತವ್ಯ. ಹಾಂಗೆ ಮಾಡುವದರಿಂದ ವೇದ ಶಾಸ್ತ್ರಂಗಳ ಪೋಷಿಸಿದ್ದಕ್ಕೆ ಸಮ ಆವ್ತು.
ಸತ್ಪುರುಷರು ಸದಾಚಾರಕ್ಕೆ ಮಾರ್ಗದರ್ಶಕರು. ಅಂತಹ ಸತ್ಪುತ್ರರ ಸೇವೆ ಮಾಡೇಕ್ಕಾದ್ದು ಮನುಷ್ಯನಾದವನ ಕರ್ತವ್ಯ.
ಭಗವಂತ° – ಸರ್ವಗತ°, ಸರ್ವನಿಯಾಮಕ°, ಸರ್ವಂತಾರ್ಯಾಮಿ. ಪ್ರತಿಯೊಬ್ಬ ವ್ಯಕ್ತಿಲಿಯೂ, ಪ್ರತಿಯೊಂದು ವಸ್ತುವಿಲ್ಲಿಯೂ ಭಗವಂತ° ಇದ್ದ. ಹಾಂಗಾಗಿ ಪರಮಾತ್ಮನ ದೃಶ್ಯಪ್ರತಿನಿಧಿಗೊ ಆದ ಇತರ ಜನರ ಸೇವೆ ಮಾಡೇಕ್ಕಾದ್ದು ಕರ್ತವ್ಯ. ಅದುವೇ ಜನಾರ್ದನ ಸೇವೆ ಆವ್ತು.
ಹಶು ಆಸರು ಹೇಳ್ತದು ಪ್ರತಿಯೊಬ್ಬಂಗೂ ಇಪ್ಪಂತಾದ್ದು. ಅದು ಮನುಷ್ಯ, ಪ್ರಾಣಿ, ಜೀವ ಜಂತು ಹೇಳಿ ಬೇಧ ಭಾವ ಇಲ್ಲದ್ದೆ ಎಲ್ಲೋರಲ್ಲಿಯೂ ಇಪ್ಪಂತಾದ್ದು. ಹಶು ಅಡುಗುಸಲೆ ಆಹಾರ ಜಲವೇ ಅಗತ್ಯ. ಹಾಂಗಾಗಿ ಮನುಷ್ಯ ಪ್ರಾಣಿ ಜೀವಿಗೊಕ್ಕೆ ಅನುಕೂಲ ಅಪ್ಪಲೆ ಇವುಗಳ ನಮ್ಮಿಂದ ಎಡಿಗಪ್ಪಾಷ್ಟು  ಒದಗಿಸಿ ಕೊಡುವದು ಭಗವಂತನ ಸೇವೆ ಮಾಡಿದ್ದದಕ್ಕೇ ಸಮಾನ. ನಾವು ತಿಂಬಗ ನಮ್ಮ ಎದುರು ವಾ ಸುತ್ತುಮುತ್ತ ಇಪ್ಪವರ ಹಶುವ ನೀಗಿಸಿ ನಾವು ಉಂಬದು ಮಹಾಪುಣ್ಯ ಕಾರ್ಯ. ದಿನಕ್ಕೆ ಒಬ್ಬಂಗಾರು ಊಟ ಕೊಡುವದು ಅಥವಾ ಪ್ರಾಣಿ, ಮೃಗ, ಪಕ್ಷಿಗೊಕ್ಕೆ ಆಹಾರ ಕೊಡುವದು ಪುಣ್ಯ ಕಾರ್ಯ. ಹಾಂಗಾಗಿ ಭೂತಯಜ್ಞವ ನಿತ್ಯ ಆಚರುಸೆಕು ಹೇಳಿ ಶಾಸ್ತ್ರ.
ವೇದ ಶಾಸ್ತ್ರ ಪುರಾಣಂಗಳಲ್ಲಿ ವಿಶ್ವಾಸ ಮಡಿಕ್ಕೊಳ್ಳೆಕು. ಅದು ನಮ್ಮ ಆತ್ಮಸಂಯಮ, ಇಂದ್ರಿಯ ನಿಗ್ರಹಕ್ಕೆ, ರೋಗ ರುಜಿನಂಗಳಿಂದ ತಪ್ಪುಸುತ್ತು. ಕಾಮ ಕ್ರೋಧ ಅಸೂಯೆ ಅಹಂಕಾರಂಗೊ ಹತ್ತರೆ ಬಾರ.
ಎಲ್ಲರಲ್ಲೂ ಏಕತ್ವ ಭಾವನೆ ಮಡಿಕ್ಕೊಳ್ಳೆಕು. ಇದು ನಮ್ಮ ಘನತೆಯ ಹೆಚ್ಚಿಸುತ್ತು, ಅಧ್ಯಾತ್ಮ ಜ್ಞಾನವನ್ನೂ ತಿಳಿವ ಶಕ್ತಿಯ ಕೊಡುತ್ತು.
ಮಹಾಪುರುಷರ, ಜ್ಞಾನಿಗಳ, ಗುರುಗಳ ಸದಾ ಸೇವೆ ಮಾಡಿ ಗೌರವಿಸೆಕು. ಅವು ನಮ್ಮ ಎದುರು ಇಪ್ಪ ಪ್ರತ್ಯಕ್ಷ ಅನುಭವ ಸಾಕ್ಷಿಗೊ. ಅವರ ತಿರಸ್ಕರುಸುವದು ಹೇಳಿರೆ ಜ್ಞಾನವ ತಿರಸ್ಕರಿಸಿದ್ದಕ್ಕೆ ಸಮ.
ಸ್ತ್ರೀಯಾದವಳಿಂಗೆ ತನ್ನ ಪತಿಸೇವೆ, ಪತಿಯ ಅಭೀಷ್ಟ, ಅವನ ಆಜ್ಞಾಪಾಲನೆ ಮಾಡಿಗೊಂಡು ಭಗವಂತನ ಆರಾಧೆನೆಲಿ ತೊಡಗೆಕು. ಪಾತಿವ್ಯತ್ಯ ಕಾಪಾಡುವದು ಸ್ತ್ರೀಯರಿಂಗೆ ಭೂಷಣ ಮಾತ್ರ ಅಲ್ಲದ್ದೆ ಶ್ರೇಯಸ್ಕರವೂ ಅಪ್ಪು.
ಜ್ಞಾನದೀಪವ ತೋರ್ಸಿ ನಮ್ಮ ಅಜ್ಞಾನದ ಅಂಧಕಾರವ ನೀಗುಸುವ ಗುರುಗೊ ಸದಾ ಪೂಜನೀಯರು. ಅಂತಹ ಗುರು ಹಿರಿಯರ ಸೇವೆ ಮಾಡೇಕ್ಕಾದ್ದು ಆದ್ಯ ಕರ್ತವ್ಯ. ಗುರು ನಮ್ಮ ತೇಜಸ್ಸಿನ ಹೆಚ್ಚುಸುವ ಸಾಧನ.
ಉಪವಾಸ ಮನುಷ್ಯ ಜೀವನಲ್ಲಿ ಅತೀ ಅಗತ್ಯ. ಇದು ನಮ್ಮ ಆರೋಗ್ಯ ವೃದ್ಧಿಗೂ ಸಹಾಯಕ, ಭಗವದ್ ಸೇವೆಗೂ ಸಹಕಾರಿ. ಭಗವಂತನ ಹತ್ರೆ ನಮ್ಮ ಹೃದಯವ ಬಿಚ್ಚಿ ಮಡುಗುವದೇ ಉಪವಾಸ. ಒಂದಿನ ಆಹಾರವ ಬಿಡುವದು ಉಪವಾಸ ಅಲ್ಲ.
ಧರ್ಮಲ್ಲಿ ನಡವದು, ಧರ್ಮವ ಕಾಪಾಡುವದು, ಧರ್ಮ ವಿಮುಖರಾದವರ ಧರ್ಮ ಮಾರ್ಗಕ್ಕೆ ಪರಿವರ್ತನೆ ಮಾಡುವದು ನಮ್ಮ ಧರ್ಮ.
ಜನ್ಮಜನ್ಮಾಂತರದ ಪುಣ್ಯದಫಲವಾಗಿ ಸಿಕ್ಕುವದು ನರಜನ್ಮ. ಇದರ ಸಾರ್ಥಕ ಪಡಿಸಿಕ್ಕೊಳ್ಳೆಕ್ಕಾದ್ದು ಕರ್ತವ್ಯ ಹಾಂಗೂ ಬುದ್ಧಿತನ.
ಪ್ರಪಂಚಕ್ಕೆ ನಾವು ಬಪ್ಪದು ಒಂಟಿಯಾಗಿ, ಪ್ರಪಂಚಂದ ನಾವು ಹೋಪಗಳೂ ಒಂಟಿ. ಹಾಂಗಾಗಿ ನವಗೆ ನಾವೇ ಜವಾಬ್ದಾರರು. ಇಲ್ಲದ್ರೆ ಎಲ್ಲ ಮುಗುದಮತ್ತೆ ನಾವು ಒಂಟಿಯಾಗಿ ಪರಿತಪಿಸೆಕ್ಕಾಗಿ ಬತ್ತು.
ಗೆಂಡುಮಕ್ಕೊ ಆಗಲೀ ಹೆಮ್ಮಕ್ಕ ಆಗಲೀ ಅವಕ್ಕವಕ್ಕೆ ಪ್ರಪ್ರತ್ಯೇಕ ಧರ್ಮಮಾರ್ಗಂಗೊ. ಆದರೆ ಲಕ್ಷ್ಯ ಒಂದೇ . ಅವರವರ ಧರ್ಮ ಮಾರ್ಗಲ್ಲಿ ನಡವದೇ ಮೋಕ್ಷ್ಯದ ಸುಗಮ ಮಾರ್ಗ.
ಪ್ರಪಂಚಲ್ಲಿ ಇಪ್ಪದು ಎಲ್ಲವೂ ಜೀವಿಗೆ ಅನುಭವುಸಲೆ. ಆದರೆ ಅದು ನಿಯಮಿತವಾಗಿರಲಿ, ನಿರ್ಲಿಪ್ತತೆಂದ ಕೂಡಿರಲಿ.
ಭಗವಂತನಲ್ಲಿಂದ ಬಂದ ನಾವು ಭಗವಂತನಲ್ಲಿಗೆ ಹೋಯೇಕ್ಕಾದ್ದು ನಮ್ಮ ಕರ್ತವ್ಯ. ಅದಕ್ಕೆ ಬೇಕಾದ ಸತ್ಕರ್ಮ ನಿರತನಾಗಿಪ್ಪಲೆ ಭಗವಂತ° ಅನುಗ್ರಹಿಸಲಿ ಹೇಳ್ವ ಪ್ರಾರ್ಥನೆ ಸದಾ ನಮ್ಮದಾಗಿರಲಿ. ॥ಹರೇ ರಾಮ॥ ]
 

2 thoughts on “ಗರುಡ ಪುರಾಣ – ಅಧ್ಯಾಯ 02 – ಭಾಗ 01

  1. ಇ೦ದಿನ ಬದುಕಿನ ಧರ್ಮಮಾರ್ಗಲ್ಲಿ ನೆಡದು ಸಾರ್ಥಕಗೊಳುಸಿರೆ ಮು೦ದಾಣ ದಾರಿ ಸುಗಮ ಹೇಳ್ತ ಸ೦ದೇಶ.ನಿಜಕ್ಕೂ ಬದುಕ್ಕಿಪ್ಪಗ ಓದೆಕ್ಕಾದ,ಅನುಸರಿಸೆಕ್ಕಾದ ಗ್ರ೦ಥ ಇದು.

  2. ಸತಿಯಾಗಲಿ- ಪತಿಯಾಗಲಿ ತನ್ನ ಸಹಜೀವಿಯ ಮರಣಾನಂತರ ತನ್ನ ಕಾಮನೆಗಳ ಅಗ್ನಿಗೆ ಆಹುತಿ ಮಾಡಿ, ತನ್ನ ಜೀವನದ ಕರ್ತವ್ಯ ನಿರ್ವಹಣೆ ಮಾದೆಕ್ಕು ಹೇಳಿ ತಿಳಿಯೆಕ್ಕು.–“-ಗೆಂಡ ಸತ್ತಪ್ಪಾಗ ಹೆಂಡತಿ ಒಟ್ಟಿಂಗೆ ಚಿತೆ ಏರೆಕ್ಕು ಹೇಳಿ ಭಗವಂತ ಹೇಳಿರ” ಇದು ಎನ್ನ ಅಭಿಪ್ರಾಯ. ಇಸ್ಟೊಂದು ವಿವರವಾಗಿ ಗರುಡ ಪುರಾಣ ತಿಳಿಸಿದ ನಿಂಗೊಗೆ ಧನ್ಯವಾದ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×