Oppanna.com

ಚಿಂತನೆ: ಸೀತಾಮಾತೆ ಮಾತ್ರ ಅಪ್ಪದು ಬೇಡ ಹೇಳಿರೆ ಹೇಂಗೆ..!

ಬರದೋರು :   ಈಚ ಭಾವ    on   04/06/2012    6 ಒಪ್ಪಂಗೊ

ಜಗತ್ತಿಲಿ ಕಷ್ಟ ಇಲ್ಲದ್ದದು ಆರಿಂಗೆ ಹೇಳಿ..!
ಬೈಲಿನ ಆಚ ಕರೆ ತೋಡಿನ ಕರೇಲಿ ಬೆಳದು ನಿಂದ ಮಾವಿನ ಮರಕ್ಕೂ ಇದ್ದು.  ಮೈದುಂಬಿ ನಿಂದಿಪ್ಪಗ ಬೇಸಿಗೆ ರಜೇಲಿ ಅಜ್ಜನ ಮನೆಗೆ ಬಂದ ಮಕ್ಕಳಿಂದ ಹಿಡುದು, ಎಲ್ಲರೂ ಅದಕ್ಕೊಂದು ಕಲ್ಲು ಇಡ್ಕಿಕ್ಕಿಯೇ ಹೋಪದು..
ಅದರ ಎದುರೇ ನಿಂದು ಇಬ್ರಾಯಿ ಬ್ಯಾರಿ ಮರ ಕೊರ್ಪಾರ ಅಣ್ಣೇರೆ..? – ಹೇಳಿ ಶಾಸ್ತ್ರಿ ಮಾವನತ್ರೆ ಕೇಳ್ತು.
ಮಾವಿನ ಮರಕ್ಕೇ ಹಾಂಗಾದರೆ ಮನುಷ್ಯನ ಕಥೆ ಕಷ್ಟಂಗಳಿಂದ ಹೊರತಾಗಿಲ್ಲೆ ಹೇಳಿ ಆತಿಲೆಯೋ.!
ಇಂದ್ರಾಣ ದಿನಲ್ಲಿ ಮನುಷ್ಯ ತುಂಬ ಸ್ವಾರ್ಥಿ ಆಯಿದ.
ಎನ್ನ ಮನೆ, ಎನ್ನ ಮಕ್ಕ, ಎನ್ನ ಹೆಂಡತಿ. ಅಲ್ಲಿಗೆ ಮುಗುದತ್ತು. ಬೇರೆಯವಕ್ಕೆ ಏನಬೇಕಾದರೂ ಆಗಲಿ.. ಎನಗೆ ಮಾತ್ರ ಎಂತದೂ ಅಪ್ಪದೂ ಬೇಡ ದೇವರೇ  ಹೇಳಿಯೇ ಕೈಮುಗಿವದು.
ರಜ ಕಷ್ಟ ಬಂದರೆ ಸಾಕು. ಅಲ್ಲಿಗೆ ಜೀವನ ಮುಗುದೇ ಹೋತು. ಇನ್ನೆಂತದೂ ಒಳ್ದಿಲ್ಲೆ ಹೇಳ್ತದು ಹೆಚ್ಚಾಯ್ದು. ಬದುಕಿಲಿ ಸುಖ ಮಾತ್ರ ಬೇಕು ಕಷ್ಟ ಬೇಡ ಹೇಳಿರೆ ಹೇಂಗೆ?
ಒಂದಿಡೀ ದಿನ ಹಶುವಪ್ಪಾಗೆಲ್ಲ ಸೀವು ಮಾತ್ರವೇ ತಿಂಬದು ಬೇರೆಂತದೂ ತಿಂಬಲಿಲ್ಲೆ ಹೇಳಿರೆ ಅಕ್ಕೋ..?
ಹಾಂಗೆಯೇ ಜೀವನಲ್ಲಿ ಕಷ್ಟ ಸುಖಂಗಳ ಎರಡನ್ನೂ ನಾವು ಕಾಣೆಕ್ಕು. ಕಷ್ಟ ಬಂದಪ್ಪಾಗೆಲ್ಲ ನಮ್ಮ ಮನಸ್ಸು ಮಾಗುತ್ತು. ಎದುರುಸುವ ಧೈರ್ಯ ಬತ್ತು.
ಸುಖ ಮಾತ್ರ ಸಿಕ್ಕಿಗೊಂಡಿದ್ದರೆ ಎಂತದೂ ಇಲ್ಲೆ. ಒಂದೇ ದಿನಕ್ಕೆ ಮನಸ್ಸು ಮೊಸರು ಕಡದ ಹಾಂಗೆ ಆಗಿರ್ತು.
ಯಾವ ಸಮಸ್ಯೆ ಬಂದರೂ ಎದುರುಸುವ ಮನಸ್ಸು ಬೇಕಷ್ಟೆ.
ಕೆಲವು ಸರ್ತಿ ನಾವು ಕಲ್ಪನೆಲಿಯೂ ಗ್ರೇಶದ್ದಾಂಗಿಪ್ಪ ಕಷ್ಟಂಗ ಅನುಭವಂಗ ಬಕ್ಕು.
ಅದು ನಮ್ಮ ಬದುಕಿನ ಅನುಭವಿಸುಲೆ ಸಿಕ್ಕ ಅವಕಾಶ ಹೇಳಿ ನಾವು ಗ್ರೇಶಿಗೊಳ್ಳೇಕು.
ಕಷ್ಟಂಗ ಎದುರಾದಪ್ಪಗಳೇ ನಾವು ಎಲ್ಲಿ ನಿಂದಿದು, ನಮ್ಮ ಬುದ್ಧಿಶಕ್ತಿ ಎಂತದು ಹೇಳಿ ಗೊಂತಪ್ಪದು. ಕಷ್ಟಂಗ ಬಂದಾಗೆಲ್ಲ..
ನಮ್ಮ ಬೆಳವಣಿಗೆಗೆ ಹೇಂಗೆ ಉಪಯೋಗಿಸೆಕ್ಕು ಹೇಳಿ ಗೊಂತಪ್ಪದು.
ಒಬ್ಬ ಪುಣ್ಯಾತ್ಮ ಹೊಸ ಇಸ್ತ್ರಿ ಪೆಟ್ಟಿಗೆ ತೆಕ್ಕೊಂಡ ಎಂತ ಮಾಡಿರೂ ಇಸ್ತ್ರಿ ಬೀಳ್ತಿಲೆ. ಕೋಪಲ್ಲಿ ಸೀದ ಅಂಗಡಿಗೆ ಹೋಗಿ ಇವಂದು ಜೋರು ಬೊಬ್ಬೆ.
“ನಿಂಗಳ ಇಸ್ತ್ರಿ ಪೆಟ್ಟಿಗೆ ಆರಿಂಗೆ ಬೇಕು ಸರಿಯೇ ಇಲ್ಲೆ” ಹೀಂಗೆಲ್ಲ..
“ಬೊಬ್ಬೆ ಹಾಕೆಡಿ. ಹೊಸ ಇಸ್ತ್ರಿ ಪೆಟ್ಟಿಗೆ ಕೊಡುವ” ಹೇಳಿದವು.
ನಿಂಗಳ ನೆರಿಗೆ ಬಿದ್ದ ಅಂಗಿಯನ್ನೂ ಬಿಚ್ಚಿ ಕೊಡಿ ಈಗಳೇ ಪರೀಕ್ಷೆದೆ ಮಾಡುವ ಹೇಳಿದವು. ಅಂಗಿ ಬಿಚ್ಚಿ ಕೊಟ್ಟ.
ಇಸ್ತ್ರಿ ಪೆಟ್ಟಿಗೆ ತೆಗದು ಅಂಗಡಿ ಮನುಷ್ಯ ಪ್ಲಗ್ಗಿಂಗೆ ಸಿಕ್ಕಿಸಿತ್ತಡ.. ಇವ ಕೂಡ್ಲೇ ಹೇಳಿದಡ. – “ಓಯ್ ನಿಂಗ ಈ ವಿಷ್ಯ ಹೇಳಿದ್ದೇ ಇಲ್ಲೆ..!
ಹೀಂಗೆ ಕೆಲವು ಸರ್ತಿ, ನಮ್ಮ ಬುದ್ಧಿ ನಮ್ಮ ಕೈಲಿರ್ತಿಲೆ.
ಎಂತದೋ ಯೋಚನೆ, ಮತ್ತೊಬ್ಬರಿಂಗೆ ಬೈವ ವಿಷಯ ಮಾತ್ರ ಗೊಂತಿಪ್ಪದು.
ಹೆರಾಣ ವಿಷಯಂಗಳ ಮಾನಸಿಕವಾಗಿ ತೆಕ್ಕೊಂಡ್ರೆ ಒಂದು ಅನುಭವ ತೆಕ್ಕೊಳದ್ರೆ ಮತ್ತೊಂದು ರೀತಿ.
ಈ ವಿಷ್ಯಲ್ಲಿ ನಾವು ಎಚ್ಚರಿಕೆಲಿ ಇರೇಕು. ಯಾವುದೂ ಹೆಚ್ಚಪ್ಪಲಾಗ, ಕಮ್ಮಿಯೂ ಅಪ್ಪಲಾಗ. ನಮ್ಮ ನಿರೀಕ್ಷೆಗೆ ತಕ್ಕಂತ್ರೆ ನಡೆಯದ್ರೆ, ಪಿಸುರು, ಅಸಹಾಯಕತೆ ಎಲ್ಲವೂ ಆವ್ತ.  ಅದೊಂದು ಅನುಭವ.
ಎಲ್ಲವೂ ನಾವು ಗ್ರೇಶಿದಾಂಗೆ ನಡದರೆ ಬದುಕಿಲಿ ಉತ್ಸಾಹವೇ ಇರ.
ಸವಾಲುಗ ಕಾಣದ್ದ ಬದುಕು ಬದುಕೇ ಅಲ್ಲ. ಹೆರ ಏನೇ ಆಗಲಿ ಅದರ ಎದುರಿಸಿ ಒಳಾಂತರ್ಯ ಶಾಂತವಾಗಿದ್ದು ಹೇಳಿರೆ, ಎದುರಾದ ಯಾವ ಕಷ್ಟವೂ ಕಷ್ಟವೇ ಅಲ್ಲ ಹೇಳಿ ಕಾಣದ್ದೆ ಇರ.
ಹಾಂಗೇಳಿ ಜೀವನಲ್ಲಿ ಹಾಂಗಾತು ಭಾವ… ಹೀಂಗಾತು ಭಾವ ಹೇಳಿ ತಳಿಯದ್ದೆ ಎಲ್ಲವನ್ನೂ ಸ್ವೀಕರಿಸಿಗೊಂಡೇ ಇಪ್ಪದಾ..?
ಅಲ್ಲ. ನವಗೆ ಬೇಕಾದ್ದರ ಪಡವಲೆ ರಜ ಪ್ರಯತ್ನವೂ ಪಡೇಕು.
ಅಷ್ಟಪ್ಪಗ ಅಲ್ಲಿ ಇಲ್ಲಿ ವಿರೋಧ, ಕಷ್ಟಂಗ, ತಿರ್ಗಾಸು ಎಲ್ಲವುದೇ ಕಾಂಬದು. ಮಾರ್ಗ ಸರ್ತ ಇದ್ದರೆ ಡ್ರೈವಿಂಗ್ ಗಮ್ಮತ್ತೇ ಇಲ್ಲೆ. ತಿರ್ಗಾಸುಗ ಇದ್ದರೆ ಅಲ್ಲದಾ ಕೊಶಿ ಅಪ್ಪದು?
ಮನುಷ್ಯ ಹುಟ್ಟಿ  ಬೆಳವಲೆ ಸುರು ಅಪ್ಪಗಳೇ ಶಾಲೆ ಚೀಲ ಬೆನ್ನಿಂಗೇರಿದ ಹಾಂಗೆ ಬದುಕಿಲಿ ಕಷ್ಟ ಹೆಗಲೇರ್ತು.
ನಾವು ಯಾವಾಗ್ಲೂ ದುಃಖ ಪಟ್ಟುಗೊಂಡೇ ಅದರ ಹೊತ್ತುಗೊಂಡು ತಿರುಗುದಾ?
ಅಲ್ಲಾ ಆದಷ್ಟೂ ನೆಗೆ ಮಾಡಿಗೊಂಡು ಸಕಾರಾತ್ಮಕ ಮನಸ್ಸಿಲಿ ಅದರ ಭಾರ ಇಳುಗುಲೆ ನೋಡುದಾ ಹೇಳುದು ನವಗೇ ಬಿಟ್ಟದು.
ಇದರ ಆರೂ, ಆರಿಂಗೂ ಬಂದು ಹೇಳಿಕೊಡ್ತವಿಲ್ಲೆ ಅಲ್ಲದಾ? ಈ ಕೆಲಸ ಆತೇ ಇಲ್ಲೆ ಹೇಳಿರೆ ಬಿಡಿ. ಮತ್ತೊಂದು ವಿಧಲ್ಲಿ ಪ್ರಯತ್ನ ಮಾಡ್ಲಕ್ಕು.
ಯಶಸ್ಸು ಸಿಕ್ಕದ್ದೆ ಎಲ್ಲಿಗೂ ಹೋಗ.
ಮಾವಿನ ಹಣ್ಣಿನ ಮರ ಹತ್ತುಲೆ ಎಡಿತ್ತಿಲೆ, ಉರಿ ಕಂಡಾವಟ್ಟೆ ಇದ್ದು ಹೇಳಿರೆ, ಕೊಕ್ಕೆ ತಂದಾದರೂ ಕೊಯ್ಯೆಕು.
ಆದರೆ ನವಗೆ ಆಲೋಚನೆ ಮಾಡುವಷ್ಟು ತಾಳ್ಮೆ, ಬುದ್ದಿಶಕ್ತಿ ಉಪಯೋಗಿಸುವ ಮನಸ್ಸು ಬೇಕಷ್ಟೆ. ಸಮಸ್ಯೆ ಇಪ್ಪಲ್ಲೇ ಪರಿಹಾರವೂ ಇರ್ತು.
ಆನೂ ಶ್ರೀರಾಮಚಂದ್ರನ ಹಾಂಗೆ ಆಯೆಕ್ಕು, ದೊಡ್ಡ ಸಾಮ್ರಾಜ್ಯ, ಸಂಪತ್ತು, ಲವಕುಶರ ಹಾಂಗೆ ಮಕ್ಕ, ಸಂಸಾರ ಎಲ್ಲವೂ ಬೇಕು ಹೇಳಿ ಗ್ರೇಶುತ್ತವು.
ಆದರೆ ಆರುದೇ ಜೀವನಲ್ಲಿ ಸೀತಾಮಾತೆ ಮಾತ್ರ ಅಪ್ಪದು ಬೇಡ ಹೇಳಿರ್ತವು.
ಕಷ್ಟಂಗಳ ಎದುರುಸುವ ಛಾತಿಯೇ ಇಲ್ಲದ್ರೆ, ಹೇಂಗಪ್ಪದು?
ಸೀತಾಮಾತೆಗೆ ಕಡೇಂಗಾದರೂ ಸುಖ ಸಿಕ್ಕಿದ್ದು, ಯಾವುದನ್ನೂ ಎದುರುಸುವ ಮನಸ್ಥಿತಿ ಇಲ್ಲದ್ರೆ, ನವಗೆ ಅದೂ ಸಿಕ್ಕ!
~*~*~

6 thoughts on “ಚಿಂತನೆ: ಸೀತಾಮಾತೆ ಮಾತ್ರ ಅಪ್ಪದು ಬೇಡ ಹೇಳಿರೆ ಹೇಂಗೆ..!

  1. ಕಸ್ಟ್ಟ ಅನುಭವಿದರೇ ಸುಖದ ರುಚಿ ಗೊಂತಪ್ಪದು …ಎರಡನ್ನೂ ಸಮಾನ ವಾಗಿ ಸ್ವೀಕರಿಸೆಕ್ಕು ಅದುವೇ ಜೀವನ ..ಕಸ್ಟ್ಟ ಮನುಶ್ಯನ ತಿದ್ದುತ್ತು ಸುಖ ಮನುಶ್ಯನ ಹಾಳುಮಾಡುತ್ತು.. ಶುದ್ದಿ ಲಾಯಿಕ ಆಯಿದು ..ಒಂದು ಒಪ್ಪ..

  2. ದಿನನಿತ್ಯದ ಜೀವನದ ಘಟನೆಗಳ ಉದಾಹರಣೆಗಳೊಟ್ಟಿ೦ಗೆ ಸಕಾರಾತ್ಮಕ ದೄಷ್ಟಿಕೋನವ ಬೆಳೆಶಿಗೊ೦ಬಲೆ ಸಹಕಾರಿ ಅಪ್ಪ ಈ ಚಿ೦ತನೆ ಕೊಶಿ ಕೊಟ್ಟತ್ತು ಭಾವ.

  3. ಚಿಂತನೆಯ ನೆಲೆಲಿ ವಿಷಯ ಮಂಥನ ಲಾಯಕಾಯಿದು. ಬಹಳಷ್ಟು ವಿಷಯಂಗಳ ಈಗಾಣ ಕಾಲಕ್ಕೆ ಹೊಂದುಸಿ ಬರದ್ದದು ಮತ್ತೂ ಚೆಂದ ಆತು. ಈಚಣ್ಣನ ಚಿಂತನ ಸರಣಿ ಮುಂದುವರಿಯಲಿ.

  4. ಕಷ್ಟ ಬಂದರೂ ಅದರ ಎದುರಿಸಿ ನಿಂಬಲೆ ನವಗೆ ಧೈರ್ಯ ಬರೆಕ್ಕು ಹೇಳುದರ ಭಾರಿ ಲಾಯ್ಕಲ್ಲಿ ಹೇಳಿದ್ದಿ ಅಣ್ಣ…………..ಧನ್ಯವಾದಂಗೊ.

  5. ಮಾರ್ಗ ಸರ್ತ ಇದ್ದರೆ ವರಕ್ಕು ತೂಗಿ ಎಂತದೂ ಆಕ್ಕು ಹಾಂಗೆಯೇ ಜೀವನ ಹೇಳುವ ಮಾರ್ಗಲ್ಲಿ ರಜ್ಜಾದರೂ ತಿರ್ಗಾಸುಗೋ ಬೇಕೇ ಬೇಕು. ಅದಿಲ್ಲದ್ದರೆ ಮಜಾ ಇಲ್ಲೆ. ಲಾಯ್ಕ ಆಯ್ದು ಶುದ್ದಿ.

  6. ಒಳ್ಳೆ ಚಿಂತನೆ. ಶುದ್ದಿ ಲಾಯಕ ಓದಿಸಿಗೊಂಡು ಹೋತು. ಶೈಲಿ ಲಾಯಕ ಆಯ್ದು. ಚೀಪೆ ಮಾತ್ರ ಸಾಲ . ಸುಖ ದುಃಖವ ಸಮಾನವಾಗಿ ಎದುರಿಸಿ ಸದಾ ಪ್ರಯತ್ನಲ್ಲಿ ಇದ್ದರೆ ನೋವು ಹೇಳುವ ಕಷ್ಟಕ್ಕೆ ಅಸ್ಪದ ಇಲ್ಲೆ ಎಂಬ ಈಚಣ್ಣನ ಶುದ್ದಿ ಒಪ್ಪ ಹೇಳಿತ್ತು – ‘ಚೆನ್ನೈವಾಣಿ’

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×