ಚೋಲು - ಡಬ್ಬಲ್ ಚೋಲು

ಬೈಲಿನ ಶುದ್ದಿಗೊ:

ಬೈಲಿನ ನೆರೆಕರೆ:

ಗುರಿಕ್ಕಾರ°ಒಪ್ಪಣ್ಣಶ್ಯಾಮಣ್ಣವೇಣಿಯಕ್ಕ°ಅಕ್ಷರ°ಕೇಜಿಮಾವ°ವೇಣೂರಣ್ಣಒಪ್ಪಕ್ಕಶರ್ಮಪ್ಪಚ್ಚಿಬಟ್ಟಮಾವ°ಅಡ್ಕತ್ತಿಮಾರುಮಾವ°ಶಾಂತತ್ತೆಪುತ್ತೂರಿನ ಪುಟ್ಟಕ್ಕಪುಟ್ಟಬಾವ°ಶುದ್ದಿಕ್ಕಾರ°ಡಾಗುಟ್ರಕ್ಕ°ನೀರ್ಕಜೆ ಮಹೇಶದೀಪಿಕಾಕಾವಿನಮೂಲೆ ಮಾಣಿಕಳಾಯಿ ಗೀತತ್ತೆಬಂಡಾಡಿ ಅಜ್ಜಿಅಕ್ಷರದಣ್ಣಅನು ಉಡುಪುಮೂಲೆಪವನಜಮಾವಪೆಂಗಣ್ಣ°ಗೋಪಾಲಣ್ಣತೆಕ್ಕುಂಜ ಕುಮಾರ ಮಾವ°ಶೇಡಿಗುಮ್ಮೆ ಪುಳ್ಳಿವಸಂತರಾಜ್ ಹಳೆಮನೆಸಂಪಾದಕ° (editor)ಮುಳಿಯ ಭಾವಎರುಂಬು ಅಪ್ಪಚ್ಚಿಡಾಮಹೇಶಣ್ಣಕೊಳಚ್ಚಿಪ್ಪು ಬಾವಗಣೇಶ ಮಾವ°ಪುತ್ತೂರುಬಾವಚುಬ್ಬಣ್ಣಚೆನ್ನೈ ಭಾವ°ಬೊಳುಂಬು ಮಾವ°ಶ್ರೀಅಕ್ಕ°ಪೆರ್ಲದಣ್ಣಸರ್ಪಮಲೆ ಮಾವ°ಮಾಷ್ಟ್ರುಮಾವ°ದೇವಸ್ಯ ಮಾಣಿಯೇನಂಕೂಡ್ಳು ಅಣ್ಣಕೆದೂರು ಡಾಕ್ಟ್ರುಬಾವ°ಸುಭಗಸುವರ್ಣಿನೀ ಕೊಣಲೆಬಲ್ನಾಡುಮಾಣಿಜಯಶ್ರೀ ನೀರಮೂಲೆಹಳೆಮನೆ ಅಣ್ಣಚೂರಿಬೈಲು ದೀಪಕ್ಕನೆಗೆಗಾರ°ಚೆನ್ನಬೆಟ್ಟಣ್ಣವಿದ್ವಾನಣ್ಣದೊಡ್ಡಮಾವ°ಡೈಮಂಡು ಭಾವದೊಡ್ಡಭಾವಅನುಶ್ರೀ ಬಂಡಾಡಿಅಜ್ಜಕಾನ ಭಾವಮಂಗ್ಳೂರ ಮಾಣಿ


ಗೋಕರ್ಣಕ್ಕೊಂದು ಪ್ರಯಾಣ, ರುದ್ರ ಸಮರ್ಪಣೆ

March 2, 2011 ರ 10:01 amಗೆ ನಮ್ಮ ಶರ್ಮಪ್ಪಚ್ಚಿ ಬರದ್ದು, ಇದುವರೆಗೆ 29 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಇಂದು ಶಿವರಾತ್ರಿ.
ನಮ್ಮ ಊರಿನ ಎಲ್ಲಾ ಶಿವ ದೇವಸ್ಥಾನಂಗಳಲ್ಲಿಯೂ ಜಾತ್ರೆಯ ಗೌಜಿ.
ನಮ್ಮ ಮಂಡಲದ ದೇವಸ್ಥಾನ ಗೋಕರ್ಣಲ್ಲಿ ಒಂದು ವಾರದ ಹಬ್ಬದ ಗೌಜಿ!

ನಿತ್ಯವೂ ಕೋಟಿರುದ್ರದ ಸಂಭ್ರಮದ ಎಡಕ್ಕಿಲಿ, ಗೋಕರ್ಣದ ಜಾತ್ರೆಯೂ ಸೇರಿ ಗೌಜಿ ಅಪ್ಪಗ ನಾವೆಲ್ಲರೂ ಒಂದರಿ ಗೋಕರ್ಣವ ನೆಂಪು ಮಾಡೆಡದೋ?
ಮೊನ್ನೆ ಶರ್ಮಪ್ಪಚ್ಚಿಯವು ಗೋಕರ್ಣಕ್ಕೆ ಹೋಗಿ ರುದ್ರ ಹೇಳಿಕ್ಕಿ ಬಂದವು.
ಗೋಕರ್ಣದ ಮಹಾ ಶಿವರಾತ್ರಿಯ ದಿನ ಶರ್ಮಪ್ಪಚ್ಚಿಯ ವಿಶೇಷ ಲೇಖನ, ಬೈಲಿಂಗಾಗಿ..

ಗೋಕರ್ಣಕ್ಕೊಂದು ಪ್ರಯಾಣ, ರುದ್ರ ಸಮರ್ಪಣೆ :

ಸೇವೆಯೆಂಬ ಯಜ್ಞದಲ್ಲಿ ಸಮಿಧೆಯಂತೆ ಉರಿಯುವ ಹೇಳಿ ನಮ್ಮ ಬಾಲಣ್ಣ, ಶಿಬಿರ ಗಾನ ಹೇಳ್ಲೆ ಸುರು ಮಾಡಿ ಅಪ್ಪಗ ಅದಕ್ಕೆ ಸ್ವರ ಸೇರಿಸಿದವರಲ್ಲಿ 9 ವರ್ಷದ ಮಾಣಿಂದ ಹಿಡುದು, ತಲೆ ಹಣ್ಣಾದ ಪ್ರಾಯಸ್ಥರೂ ಇತ್ತಿದ್ದವು.
ಈ ಸಮಾಜಕ್ಕೆ ನಮ್ಮಿಂದ ಎಡಿಗಾದ ಸೇವೆಯ ನಿಷ್ಕಲ್ಮಶ ಮನಸ್ಸಿಂದ ಮಾಡೆಕ್ಕು, ಆ ಯಜ್ಞಲ್ಲಿ ನಮ್ಮ ನಾವು ತೊಡಗಿಸಿಂಡು ಅದರಲ್ಲಿ ಸಮಿಧೆ ಅಯೆಕ್ಕು ಹೇಳುವ ಉದಾರ ತತ್ವ ತಿಳಿಶಿ ಕೊಡುವ ಈ ಪದ್ಯ ಕೇಳಿ ಅಪ್ಪಗ ಆರಿಂಗಾರೂ ಒಂದರಿ ಮೈ ರೋಮಾಂಚನ ಆಗದ್ದೆ ಇರ, ಸ್ವರ ಸೇರುಸದ್ದೆ ಇರವು.
ಅಷ್ಟೊಂದು ಶಕ್ತಿ ಇದ್ದು ಅದರಲ್ಲಿ. ಬೆಂಕಿಗೆ ಆಹುತಿ ಅಪ್ಪ ಸಮಿಧೆ, ಆನು ಉರಿತ್ತಾ ಇದ್ದೆ ಹೇಳಿ ಜಾನ್ಸುತ್ತಿಲ್ಲೆ.
ಯಜ್ಞದ ಹವಿಸ್ಸಿನೊಟ್ಟಿಂಗೆ ಭಾಗಿಯಾಗಿ ಪುಣ್ಯ ಕಾರ್ಯಲ್ಲಿ ಪಾಲ್ಗೊಳ್ಳುವ ಅವಕಾಶ
ಎನಗೂ ಸಿಕಿತ್ತನ್ನೆ ಹೇಳಿ ಜಾನ್ಸುತ್ತಡ.
ಸಮಾಜಕ್ಕೆ ನಮ್ಮ ಸೇವೆ ಕೂಡಾ ಇದೇ ರೀತಿ ಆಗಿರೆಕ್ಕು.

ನವಗೆಲ್ಲಾ ಗೊಂತಿಪ್ಪ ವಿಶಯವೇ.
ನಮ್ಮ ಗುರುಗೊ, ಶ್ರೀ ಶ್ರೀ ರಾಘವೇಶ್ವರ ಮಹಾಸ್ವಾಮಿಯವು ಶಿಷ್ಯ ಸಮೂಹವ ಒಂದು ಸನ್ಮಾರ್ಗಲ್ಲಿ ಕರಕ್ಕೊಂಡು ಹೋವ್ತಾ ಇದ್ದವು.
ಈಗಾಣ ವಿದ್ಯಾಭ್ಯಾಸದೊಟ್ಟಿಂಗೆ, ನಮ್ಮ ಮೂಲ ವಿದ್ಯೆಯ ಒಳುಶಿ ಬೆಳೆಶೆಕ್ಕು ಹೇಳುವದೇ ಅವರ ಸಂಕಲ್ಪ. “ಹೊಸ ಚಿಗುರು ಹಳೆ ಬೇರು ಕೂಡಿರಲು ಮರ ಸೊಬಗು”.
ನವಗೂ ಹಾಂಗೆ ಅಲ್ಲದಾ. ಮೂಲ ಸಂಸ್ಕೃತಿಯ ಬಿಡದ್ದೆ, ಈಗಾಣದ್ದರಲ್ಲಿಯ ಒಳ್ಳೆದರ ತೆಕ್ಕೊಂಡು ಎಲ್ಲರೂ ಎಲ್ಲಾ ರೀತಿಲಿಯೂ ಸಾಕ್ಷರರಾಯೆಕ್ಕಾದ್ದೇ ಇಂದ್ರಾಣ ಅವಶ್ಯಕತೆ.
ಇದರದ್ದೇ ಒಂದು ಅಂಗ, ಗೋಕರ್ಣದ ಶ್ರೀ ಮಹಾಬಲೇಶ್ವರನ ಸನ್ನಿಧಿಲಿ ಕೋಟಿರುದ್ರ ಆಯೆಕ್ಕು ಹೇಳುವ ನಮ್ಮ ಶ್ರೀ ಶ್ರೀಗಳ ಸಂಕಲ್ಪ.
ಈ ಒಂದು ಆಂದೋಲನಲ್ಲಿ ಭಾಗವಹಿಸುವ ಪುಣ್ಯ ನವಗೆ ಸಿಕ್ಕಲೆ ಮೂಲ ಪ್ರೇರಣೆ ಶ್ರೀ ಶ್ರೀಗಳೇ ಹೇಳುವದಕ್ಕೆ ಎರಡು ಮಾತಿಲ್ಲೆ.

*****

ಗೋಕರ್ಣಲ್ಲಿ ರುದ್ರ ಸಮರ್ಪಣೆ ಆಯೆಕ್ಕು ಹೇಳಿ ಪ್ರೇರಣೆ ಬಂದು ಹೆರಟದು ೪೩ ಜೆನಂಗಳ ಎಂಗಳ ತಂಡ. ಎಲ್ಲರೂ ಒಟ್ಟಿಂಗೆ ಹೋದರೆ, ಪರಿಚಯವೂ ಆವುತ್ತು, ಸಂವಹನವೂ ಆವ್ತು ಹೇಳ್ತ ದೃಷ್ಟಿಂದ, ರಾಜ್ಯ ಸುವರ್ಣ ಸಾರಿಗೆ ಬಸ್ಸನ್ನೇ ಏರ್ಪಾಡು ಮಾಡಿ, ಮಂಗಳೂರಿನವರನ್ನೂ ಸೇರಿಸಿಂಡು ಹೆರಟ ತಂಡದ ಕಾರ್ಯ ನಿರ್ವಹಣೆ ಎಂಗಳ ವಲಯದ ಪ್ರಸಾರ ವಿಭಾಗದ ಮುಖ್ಯಸ್ಥರೇ ಆದ, ಶ್ರೀ ಬಾಯಾಡಿ ಬಾಲಕೃಷ್ಣ ಭಟ್.
ಸಮಾನ ಮನಸ್ಕರ ಗುಂಪು ಮಾಡಿ, ಹಲವಾರು ಚಾರಣ ಕಾರ್ಯಕ್ರಮಂಗಳ ನಿರ್ವಹಿಸಿದ ಅನುಭವಿ. ಸಂಘಟನೆ ಮಾಡಿ ಕಾರ್ಯಕ್ರಮದ ರೂಪು ರೇಷೆ ಮಾಡುವದರಲ್ಲಿ ಎತ್ತಿದ ಕೈ.

*****

ಸೂರ್ಯಾಸ್ತ ಆದಪ್ಪಗ ಹೆರಟ ಎಂಗಳ ಪ್ರಯಾಣ, ಕುಂದಾಪುರಕ್ಕೆ ಎತ್ತುವಾಗ ಸಮಯ ಸುಮಾರು 9 ಘಂಟೆ ಇರುಳು.

ಗೋಕರ್ಣಲ್ಲಿ ರುದ್ರ ಸಮರ್ಪಣೆ

ಹೊತ್ತೋಪಗ ಆಪೀಸಿಂದ ಮನಗೆ ಎತ್ತಿಕ್ಕಿ ಗಡಿಬಿಡಿಲಿ ಹೆರಟು ಬಂದವಕ್ಕೆ ಹೊಟ್ಟೆ ತಾಳ ಹಾಕುವ ಸಮಯ.

ಊಟದ ಏರ್ಪಾಡು ಕಲ್ಯಾಣ ಮಂಟಪಲ್ಲಿ.

ಎಂಗಳ ಗೌಜಿ ನೋಡಿದ ದಾರಿ ಕರೇಯಾಣ ಮನೆಯವು ದಿಬ್ಬಣ ಬತ್ತಾ ಇದ್ದಾ ನೋಡ್ಲೆ ಹೆರೆ ಬಂದು ನಿಂದವು.
ಅವರ ಕುತೂಹಲಕ್ಕೆ ತಣ್ಣೀರು ಬಿದ್ದಿಕ್ಕು ಹೇಳಿ ಪ್ರತ್ಯೇಕ ಹೇಳೆಕ್ಕೂಳಿ ಇಲ್ಲೆನ್ನೆ. ಮದಿಮ್ಮಾಯ ಮದಿಮ್ಮಾಳು ಇಲ್ಲದ್ದೆ ಇದೆಂತ ದಿಬ್ಬಾಣ ಜಾನ್ಸಿ, ಅವು ಒಳ ಹೊಕ್ಕರೂ, ಅವರ ನಾಯಿ ಸ್ವಾಗತ ಭಾಷಣ ಮಾಡುವದರ ನಿಲ್ಸಿದ್ದಿಲ್ಲೆ !!!.

ಭರ್ಜರಿ ಊಟದ ವೆವಸ್ಥೆ. ಅವರ ಮನೆ ಜೆಂಬಾರಕ್ಕೆ ಹೋದ ಹಾಂಗೇ ಅನುಭವ ಆತು. ಹಾಲ್ ನ ಯಜಮಾನ್ರು ಖುದ್ದಾಗಿ ನಿಂದು, ಒತ್ತಾಯ ಮಾಡಿ ಸ್ವೀಟ್, ಪಾಯಸ, ಪೋಡಿ ಬಳುಸಿದವು. ಇಲ್ಲಿಯೇ ನಿಂದು ಮರುದಿನ ಉದಿಯಪ್ಪಗ ಹೋಪಲಕ್ಕು ಹೇಳಿ ಹೇಳಿಕೆಯೂ ಬಂತು ಅವರಿಂದ.
ರೆಜ ಹಳಬರಿಂಗೆ, ಮಾವನ ಮನೆಯ ಸುರುವಾಣ ಸಮ್ಮಾನಂಗಳ ನೆಂಪುಮಾಡಿಸಿತ್ತು.

ಬಸ್ಸಿಲ್ಲಿ ಕೂದು ರೆಜ ಹೊತ್ತು ಅಪ್ಪಗ ಹೆಚ್ಚಿನವಕ್ಕೂ ಒರಕ್ಕು ಬಪ್ಪಲೆ ಈ ಊಟ ಸಹಾಯ ಮಾಡಿತ್ತು ಹೇಳ್ತಲ್ಲಿ ಯೇವ ಸಂಶಯವೂ ಇಲ್ಲೆ.

ಎಂಗಳಿಂದ ಮೊದಲೇ ಉದಿಯಪ್ಪಗಳೇ ಇಲ್ಲಿಂದ ಹೋದವು 3 ಜೆನಂಗೊ, ಹಸೆ, ವಸ್ತ್ರ ರೆಡಿ ಮಾಡಿ, ಮನುಗಲೆ ಇಪ್ಪ ವೆವಸ್ಥೆ  ಗೋಕರ್ಣಲ್ಲಿ ಮಾಡಿತ್ತಿದ್ದವು.
ಬಸ್ಸಿಲ್ಲಿ ಈಗಳೇ ಒರಗಿರೆ ಅಲ್ಲಿ ವೆವಸ್ಥೆ ಮಾಡಿದ್ದು ಪ್ರಯೋಜನಕ್ಕೆ ಇಲ್ಲದ್ದ ಹಾಂಗೆ ಅಕ್ಕನ್ನೇ, ಹೇಳಿದ್ದು ಆರ ಕೆಮಿಗೂ ಬಿದ್ದ ಹಾಂಗೆ ಕಂಡತ್ತಿಲ್ಲೆ !!!.

*****

ಗೋಕರ್ಣಕ್ಕೆ ಎತ್ತುವಾಗ ನೆಡು ಇರುಳಾಣ 1:30 ಗಂಟೆ. ಉಳಕ್ಕೊಂಬ ವೆವಸ್ಥೆ, ಕೋಟಿ ತೀರ್ಥದ ಹತ್ರೆ ಇತ್ತೀಚೆಗೆ ಕಟ್ಟಿದ ಹಾಲಿಲ್ಲಿ.

ವಿಶಾಲವಾದ ಹಾಲ್. ಒಂದು ನೂರು ಜೆನಂಗೊ ಇದ್ದರೂ ಮನುಗಲೇ ಬೇಕಾಷ್ಟು ಜಾಗೆ. ಎಂಗೊ ಹೋಪಗ ಅಲ್ಲಿ ಹೀಂಗೆ ರುದ್ರ ಹೇಳ್ಳೆ ಬೊಂಬಾಯಿಂದ  ಬಂದ ಕೆಲವು ಜೆನಂಗೊ ಇತ್ತಿದ್ದವು.
ಹೊತ್ತಲ್ಲದ್ದ ಹೊತ್ತಿಂಗೆ ಎತ್ತಿದ ಎಂಗಳ ಗಲಾಟೆ ಕೇಳಿದ ಆ ಜೆನಂಗೊ, ಅವರ ಒರಕ್ಕು ಹಾಳು ಮಾಡಿದ ಎಂಗಳ ಪರಂಚಿದ್ದು ಎಂಗೊಗೆ ಕೇಳಿದ್ದಿಲ್ಲೆ!!!

*****

ಒರಕ್ಕು ಬಂದವಕ್ಕೆ, ಉದೆಕಾಲ ಬೇಗ ಎದ್ದು ದೇವಸ್ಥಾನಕ್ಕೆ ಹೋಪ ತಯಾರಿ. ಬಾರದ್ದವಕ್ಕೆ ಸಮಯ ಎಷ್ಟು ಆತು ಹೇಳಿ ಅಂಬಗಂಬಗ ವಾಚು ನೋಡುವ ಕೆಲಸ. ಬಡಿವಲೆ ರೆಜ ನುಸಿಗಳೂ ಇತ್ತಿದ್ದವು.

6 ಘಂಟೆಗೇ ದೇವಸ್ಥಾನಲ್ಲಿ ಸಿಕ್ಕುತ್ತೆ ಹೇಳಿತ್ತಿದ್ದವು ಎಂಗೊಗೆ ರುದ್ರ ಕಲಿಶಿದ ಗುರುಗೊ.

ಬೆಶಿ ನೀರೇ ಆಯೆಕ್ಕಾದವು ರೆಜ ಕಾದು ಕೂದರೆ, ಬಾಕಿ ಇಪ್ಪವು, ಆಚಾರಕ್ಕೂ ಆತು ಸೌಕರ್ಯಕ್ಕೂ ಆತು ಹೇಳಿ ಕೋಟಿ ತೀರ್ಥಲ್ಲಿ ಮಿಂದೊಂಡು ಬಂದವು.
ಇನ್ನು ಕೆಲವು ಜೆನಂಗೊಕ್ಕೆ ಓಪನ್ ಬಾತ್ ರೂಂ.
ನಿಂಗಳ ಚೀಲಂಗಳ ಬೇಕಾರೆ ಇಲ್ಲಿ ಮಡುಗಿಕ್ಕಿ ಹೋಗಿ ಆದರೆ ಪೈಸೆ, ಮೊಬೈಲು ಎಲ್ಲಾ ತೆಕ್ಕೊಂಡೇ ಹೋಗಿ ಹೇಳಿ ಜಾಗ್ರತೆ ಹೇಳಿದವು ಅಲ್ಲಿ ಮೇಲುಸ್ತುವಾರಿ ನೋಡುವ ಹಿರಿಯರು.
ಭಟ್ಟಕ್ಕಳ ಮನೆಗಳ ಎಡೆಕ್ಕಿಲಿ ದಾರಿ ಆಗಿ, ಎಂಗಳ ಪ್ರಯಾಣ ದೇವಸ್ಥಾನಕ್ಕೆ ಎತ್ತಿತ್ತು.

ಪ್ರಶಾಂತ ಆಗಿಪ್ಪ ಜಾಗೆ ಆಯೆಕ್ಕು ಹೇಳಿ ಬಡಗ ಗೋಪುರಲ್ಲಿ ಹಸೆ ಹಾಕಿ ಸಾಲಾಗಿ ಕೂದೆಯೊ°.
ಲಘುನ್ಯಾಸ ಆಗಿ, ಏಕ ಸ್ವರಲ್ಲಿ ಸುರು ಮಾಡಿದೆಯೊ° ಓಂ ನಮೋ ಭಗವತೇ ರುದ್ರಾಯ….

******
ದೇವಸ್ಥಾನಕ್ಕೆ ಸುತ್ತು ಹಾಕುವರಲ್ಲಿ ಕೆಲವು ಜೆನಂಗೊಕ್ಕೆ ರುದ್ರ ಕೇಳಿ ಕೊಶೀ ಆಗಿ ಅಲ್ಲಿಯೇ ಕರೇಲಿ ನಿಂದು ಕೇಳಿದವು.
ಇನ್ನು ಕೆಲವು ಭಟ್ಟಕ್ಕೊ ಮಂತ್ರಕ್ಕೆ ಸರಿಯಾಗಿ ತೊಡಿ ಹನುಸಿಂಡು ಸುತ್ತು ಹಾಕುವದೂ ಕಂಡತ್ತು.  ಒಬ್ರು ಪ್ರಾಯದ ಹೆಮ್ಮಕ್ಕೊ, ಬ್ರಹ್ಮ ಸಭೆಗೆ ಭಕ್ತಿಲಿ ಕೈ ಮುಗುದಿಕ್ಕಿ ಮುಂದೆ ಹೋದವು.

ಎಲ್ಲರೂ ಸೇರಿ ಒಟ್ಟಿಂಗೆ ಹೇಳುವದಲ್ಲದ. ಸ್ವರ ರೆಜ ಎತ್ತರಲ್ಲಿ ಇತ್ತಿದ್ದು.

ಒಟ್ಟಿಂಗೆ ಹೆಚ್ಚು ಆವರ್ತನ ಹೇಳಿ ಅಭ್ಯಾಸ ಇಲ್ಲೆ. ಉದಿಯಪ್ಪಗಾಣ ತಿಂಡಿ ಕಾಪಿ ಎಂತ ಅಯಿದಿಲ್ಲೆ. ಹೊಟ್ಟೆಖಾಲಿ.

ಆವರ್ತನ ಆದ ಹಾಂಗೆ, ಕೆಲವು ಜೆನಂಗಳ ಸ್ವರ, ಮಧ್ಯಮಂದ ಮಂದ್ರಕ್ಕೆ ಇಳುದತ್ತು. ಇನ್ನು ಕೆಲವು ಜೆನಂಗೊ, ಮನಸ್ಸಿಲ್ಲಿ ಹೇಳಿದರೂ ಫಲ ಅಷ್ಟೇ ಇದ್ದು ಹೇಳಿ ತಿಳ್ಕೊಂಡಿದವು ಹೇಳಿ ಗೊಂತಾತು.
ಅಂತೂ 8:30 ಘಂಟೆ ಅಪ್ಪಗ ಉಪಹಾರಕ್ಕೆ ಹೆರಟೆಯೊ. ಅವಲಕ್ಕಿ ಉಪ್ಕರಿ, ಅವಲಕ್ಕಿ ಉಸುಳಿ, ಮೊಸರು, ಉಪ್ಪಿನ ಕಾಯಿ, ಕಾಪಿಯೋ ಚಾಯವೋ, ಬೇಕಾದ್ದು, ಬೇಕಾಷ್ಟು ಬಳುಸಿದವು. ಮರ್ಯಾದೆ ಮಾಡಿದರೆ ಹೊಟ್ಟೆ ಕೇಳೆಕ್ಕನ್ನೆ !!!

ಪುನಃ ಕೂದತ್ತು, ನಿಲ್ಸಿದ್ದರ ಮುಂದುವರ್ಸಲೆ.

ಚಾಣಿ ತಲೆಯವಕ್ಕೆ, ಮೋರೆ ತೊಳವಗ ಎಲ್ಲಿವರೆಗೆ ತೊಳೆಕ್ಕಾವ್ತು ಹೇಳಿ ಗೊಂತಾವ್ತಿಲ್ಲೆ ಅಡ - ಹಾಂಗೊಂದು ತಮಾಶೆ.
ಎಲ್ಲಿ ವರೆಗೆ ಈಪುತಿ (ವಿಭೂತಿ) ಉದ್ದೆಕ್ಕು ಹೇಳಿ ಕೂಡಾ ಗೊಂತಾವ್ತಿಲ್ಲೆ ಹೇಳಿ ಅದಕ್ಕೆ ಸೇರ್ಸಲೆ ಅಕ್ಕು ಹೇಳಿ ಅಂಬಗ ಗೊಂತಾತದ.
ಹಾಂಗಿಪ್ಪ ಹಿರಿಯ ತಲೆಯವು ಒಬ್ಬರು ಎಂಗಳ ಗೋಪುರಕ್ಕೆ ಬಂದವು. ದೊಡ್ಡ ಕಂಬಿಯ ಬ್ರಹ್ಮ ವಸ್ತ್ರ, ಕಚ್ಚೆ ಪಂಚೆ, ವಿಭೂತಿ ಅಡ್ಡ ನಾಮ. ನಿಂಗಳೊಟ್ಟಿಂಗೆ ಆನೂ ಸೇರುತ್ತೆ ಹೇಳಿದವು.
ನಮ್ಮ ಭಾಷೆ ಅವಕ್ಕೆ ಬತ್ತಿಲ್ಲೆ, ಅವರ ಭಾಷೆ ನವಗೆ ಅರಡಿಯ. ರುದ್ರ ಹೇಳ್ಲೆ ಭಾಷೆ ಒಂದೇ ಅಲ್ಲದ. ನವಗೆಂತ ತೊಂದರೆ. ಆಗಲಿ ಹೇಳಿದೆಯೊ. ಒಂದು ಆವರ್ತನ ಆತು. ಮತ್ತಾಣ ಆವರ್ತನಕ್ಕೆ ಎಂಗೊ ಸುರು ಮಾಡಿದೆಯೊ°.

ಅದಾ ಆ ಬ್ರಾಹ್ಮಣಂಗೆ ಎಂತದೋ ತಪ್ಪಿದ ಅನುಭವ. ಕೇಳಿಯೇ ಬಿಟ್ಟವು. ಒಂದರಿ ರುದ್ರ ಹೇಳಿಕ್ಕಿ ಒಂದು ಅನುವಾಕ ಚಮಕ ಹೇಳೆಕ್ಕಲ್ಲದಾ.
ನಿಂಗೊ ಪುನಃ ರುದ್ರಕ್ಕೆ ಎಂತಕೆ ಹೋದ್ದು ಹೇಳಿ.
ಎಂಗೊ ನಿಶ್ಚಯ ಮಾಡಿದ್ದೇ ಹಾಂಗೆ. ಎಕಾದಶ ರುದ್ರ ಆಗಿಕ್ಕಿ ಒಂದಾವರ್ತ ಚಮಕ ಹೇಳುವದು ಹೇಳಿ, ಅವಕ್ಕೆ ಅರ್ಥ ಅಪ್ಪ ಭಾಷೆಲಿ ಹೇಳಿದೆಯೊ°.

“ಹಾಂಗೆ ಕ್ರಮ ಇಲ್ಲೆ. ಒಂದು ಆವರ್ತನ ರುದ್ರ ಆಗಿಕ್ಕಿ ಒಂದು ಅನುವಾಕ ಚಮಕ ಆಯೆಕ್ಕೇ”, ಅವರದ್ದು ವಾದ.
ಅತಿ ರುದ್ರಹೇಳುವಾಗ ಉಪ್ಪು ಹಾಕಿದ್ದನ್ನೂ ತಿಂಬಲೆ ಆಗ ಹೇಳ್ತ ಮಾಹಿತಿಯೂ ಕೊಟ್ಟವು ಒಟ್ಟಿಂಗೆ.

ಎರಡು ಸರ್ತಿ ಹಿಂಗೆ ವಾದ ವಿವಾದ ಆತು, ಎಲ್ಲರಿಂಗೂ ಅರ್ಥ ಆದ ಆಂಗ್ಲ ಭಾಷೆಲಿ.
ಹೆಚ್ಚು ವಾಗ್ವಾದ ಮಾಡ್ಲೆ ಎಂಗೊ ತಯಾರು ಇಲ್ಲೆ.
ಈಗ ಅವಕ್ಕೆ ಅರ್ಥ ಆಗದ್ದ ನಮ್ಮ ಭಾಷೆಲಿಯೇ ಹೇಳಿದೆಯೊ “ನಾವು ಮುಂದುವರುಸುವೊ°”

ಓಂ ನಮೋ ಭಗವತೇ ರುದ್ರಾಯ….

ಪುಣ್ಯಾತ್ಮ ಕೂಬಲೆ ಹಾಸಿದ ಹಸೆಯ ತೆಕ್ಕೊಂಡು ಹೆರಟದೇ.

ಇವು ಆರ ಹತ್ರೆ ಕೋಪಿಸಿಗೊಂಬದು !!!.
ಹೋದರೆ ಹೋಗಲಿ. ನಾವಾಗಿ ದೆನುಗೊಳಿ ಹಸೆ ಹಾಕಿ ಅಸರಿಂಗೆ ಕೊಟ್ಟು ಕೂರಿಸಿದವು ಅಂತೂ ಅಲ್ಲ. ಅಹಂಕಾರಕ್ಕೆ ಉದಾಸೀನವೇ ಮದ್ದು.
ಇದೇ ಬ್ರಾಹ್ಮಣ, ಮತ್ತೆ ತಾಮ್ರಗೌರಿ ದೇವಸ್ಥಾನದ ಗೋಪುರಲ್ಲಿ ಸಣ್ಣ ಮಕ್ಕಳೊಟ್ಟಿಂಗೆ ಕೂದು ರುದ್ರ ಜೆಪ ಮುಂದುವರಿಸಿದ್ದು ಕಾಂಬಲೆ ಸಿಕ್ಕಿತ್ತು.

ಏಕಾದಶ ರುದ್ರ, ಚಮಕ, ಪುರುಷಸೂಕ್ತ, ಗಣಪತಿ ಅಥರ್ವಶೀರ್ಷ ಹೇಳಿ, ಕ್ಷೇತ್ರದ ಆತ್ಮ ಲಿಂಗ ದರ್ಶನ, ಸ್ಪರ್ಶನ ಮಾಡಿ ಧನ್ಯತಾ ಭಾವನೆಂದ ಹೆರ ಬಂದು ಉಂಡಿಕ್ಕಿ ಹೆರಟೆಯೊ°.

*****

ಮುಂದಾಣ ನಮ್ಮ ಪ್ರಯಾಣ ಬಸ್ಸಿಲ್ಲಿ. ಊರಿಂಗೆ ವಾಪಾಸು ಬಪ್ಪ ಗೌಜಿ. ಮನೆ ಸೇರುವ ಕೊಶಿ. ಬಸ್ ಸ್ಟೇಂಡಿಲ್ಲಿ ಒಂದು ಕೇಟಿ ಕುಡುದು ಮಧ್ಯಾಹ್ನದ ಒರಕ್ಕು ಬಾರದ್ದ ಹಾಂಗೆ ಒಂದು ವೆವಸ್ಥೆ ಅತು.

ಇಲ್ಲದ್ದರೋ. ಕೆಲವು ಜೆನಂಗೊಕ್ಕೆ ಅದು ಎಂತ ಆವ್ತು ಗೊಂತಿಲ್ಲೆ.

ಬಸ್ ಹತ್ತಿ ಸೀಟಿಲ್ಲಿ ಕೂದ ಕೂಡ್ಲೆ ಬೋಧ ಇಲ್ಲದ್ದ ಒರಕ್ಕು ಬತ್ತು,

ಹತ್ರಾಣವರ ಹೆಗಲು ತಲೆ ದಿಂಬು ಆವುತ್ತು. ಅವ° ಬಿಟ್ರೆ. ಇಲ್ಲದ್ದರೆ ತಾಡುತ್ತ ತಲೆ ಕೊಂಬು ಅಕ್ಕು.

ನಮ್ಮ ಸವಾರಿ ಅಶೋಕೆಗೆ ಹೆರಟತ್ತು. ಮಲ್ಲಿಕಾರ್ಜುನ ದೇವರಿಂಗೆ ಕೈ ಮುಗುದು, ಶ್ರೀ ಗುರುಗಳ ಚಾತುರ್ಮಾಸ್ಯ ಆದಲ್ಲಿಗೆ ಬಂದಪ್ಪಗ, ಅಲ್ಲಿ ಎಂಗೊಗೆ ಸ್ವಾಗತ ಹೇಳ್ಲೆ ಜೆನಂಗೊ ಇತ್ತಿದ್ದವು.
ವಿರಾಟ್ ಪೂಜೆಗೆ ಈಗಾಗಲೇ 70 ಸಾವಿರ ಚದರ ಅಡಿಯಷ್ಟು ಜಾಗೆ ಸಮತಟ್ಟು ಮಾಡಿ ಆಯಿದು , ಇನ್ನು 30 ಸಾವಿರ ಚದರ ಅಡಿಯಷ್ಟು ಜಾಗೆ ತಯಾರು ಮಾಡ್ಲೆ ಇದ್ದು ಹೇಳ್ತ ಮಾಹಿತಿ ಸಿಕ್ಕಿತ್ತು. ಚಾಯ ಕುಡುದಿಕ್ಕಿಯೇ ಹೋಯೆಕ್ಕು ಹೇಳಿ ಅಪ್ಪಣೆ ಅತು. ಚಾತುರ್ಮಾಸ್ಯದ ಸಂದರ್ಭ ನೆಂಪಿಂಗೆ ಬಂತು. ಅದಕ್ಕಿಂತಲೂ ದೊಡ್ಡ ಕಾರ್ಯಕ್ರಮ, ವಿರಾಟ್ ಪೂಜೆ ಇಲ್ಲಿಯೇ ಆಪ್ಪದು ಹೇಳ್ತರ ಮನಸ್ಸಿಲ್ಲಿಯೇ ಕಲ್ಪಿಸಿ, ಅಂಬಗಾಣ ವೈಭವ ಹೇಂಗಿಕ್ಕು ಹೇಳಿ ಆಲೋಚನೆ ಮಾಡಿದೆ. ಹೂಗಿನ ಚೆಪ್ಪರ, ಎಲ್ಲಿ ನೋಡಿರೂ ವೇಷ್ಟಿ ಸುತ್ತಿ,ಶಾಲು ಹೊದಕ್ಕೊಂಡು ಅತ್ತಿತ್ತ ಹೋಪ ಭಕ್ತರ ಸಮೂಹ,  14,641 ಜೆನಂಗೊ ಏಕ ಕಾಲಲ್ಲಿ “ಓಂ ನಮೋ ಭಗವತೇ ರುದ್ರಾಯ” ಹೇಳಿ ಸುರು ಮಾಡುವದು. ಅಲ್ಲಿ ಒಂದು ತರಂಗ ಸೃಷ್ಟಿ ಅಪ್ಪದು, ಅದರಲ್ಲಿ ನಾವು ಭಾಗವಹಿಸುವದು, ಆ ನಾದ ತರಂಗದ ಕಂಪನದ ಅನುಭವ ಪ್ರಾಪ್ತಿ ಅಪ್ಪದು, ಒಂದು ವೈದಿಕ ಲೋಕವೇ ಸೃಷ್ಟಿ ಆದ ಹಾಂಗೆ ಇಕ್ಕು. ಎಲ್ಲವೂ ಕಲ್ಪನೆಗೆ ಸಿಕ್ಕದ್ದು. ನೋಡೆಕ್ಕು, ಕೇಳೆಕ್ಕು, ಅನುಭವಿಸೆಕ್ಕು.

*****

ಸಮಯದ ಅಭಾವಂದಾಗಿ ಹನುಮಂತನ ಜನ್ಮ ಸ್ಥಾನಕ್ಕೆ ಹೋಪ ಕಾರ್ಯಕ್ರಮ ರದ್ದು ಆತು.
ಬಸ್ ಹೋವ್ತ ಸ್ಪೀಡ್ ಸಾಕಾವ್ತಿಲ್ಲೆ ಹೇಳಿದವು ಡ್ರೈವರ್ ಹತ್ರೆ.ಏನ್ ದಾದ ಮಲ್ಪುನ, ಇಂದೆಕ್ಕು ಗವರ್ನರ್ ಪಾಡ್ದೇರು ಹೇಳಿದ  ಡ್ರೈವರ್.

ಅಪ್ಪಲ್ಲದ, ಗವರ್ನರ್ ಕೂದರೆ ಮತ್ತೆ ಸ್ಪೀಡ್ ಹೋಪದು ಹೇಂಗೆ?

ಕಾಣ್ತಿಲ್ಲೆಯೋ ನಮ್ಮ ಸ್ಟೇಟಿಲ್ಲಿ ಗವರ್ನರ್ ನ ಕಾರ್ಬಾರು.
ಇಡೀ ರಾಜ್ಯವನ್ನೇ ಮುಂದೆ ಹೋಪಲೆ ಬಿಡದ್ದಿಪ್ಪ ಗವರ್ನರ್ ಇಪ್ಪಗ ಬಸ್ಸಿನ ಗವರ್ನರ್ ಎಂತ ಲೆಕ್ಕಕ್ಕೆ? ಗವರ್ನರ್ ಇಪ್ಪದೇ ಸ್ಪೀಡ್ ಕಂಟ್ರೋಲ್ ಮಾಡ್ಲೆ ಅಲ್ಲದಾ?

ಹೊತ್ತೋಪಗಾಣ ಚಾ ತಿಂಡಿಗೆ ಎಂತ ವೆವಸ್ಥೆ?. ಹಾಂಗೊಂದು ಸಂಶಯ ಬಂತು ಕೆಲವರಿಂಗೆ. ನಿನ್ನೆಯಾಣ ಸಮ್ಮಾನ ಮರದ್ದಿಲ್ಲೆ ಇದಾ.
ಹೇಂಗೂ ನಿನ್ನೆ ಇರುಳು ಉಂಡ ಕಲ್ಯಾಣ ಮಂಟಪ ಇದ್ದು. ಚಾಯ ತಿಂಡಿಯ ವೆವಸ್ಥೆ ಅಲ್ಲಿಯೇ ಮಾಡುವೊ ಹೇಳಿ ತೀರ್ಮಾನ ಆತು. ಎಲ್ಲರೂ ಒಮ್ಮತಂದ ಸಮ್ಮತಿಸಿದವು.

ಅವಲಕ್ಕಿ, ಸಜ್ಜಿಗೆ, ಉದ್ದಿನ ವಡೆ, ಪಾಯಸ, ಚಾ, ಕಾಪಿ, ಪುನಃ ಸಮ್ಮಾನ. ಇರುಳು ಉಂಡಿಕ್ಕಿ ಹೋವ್ತರೆ ವೆವಸ್ಥೆ ಮಾಡ್ತೆ ಹೇಳ್ತ ಭರವಸೆ.
ಇಷ್ಟೆಲ್ಲಾ ತಿಂದ ಮತ್ತೆ ಸುಮ್ಮನೆ ಕೂದರೆ ಅಕ್ಕಾ? ಪ್ರಯಾಣಲ್ಲಿ ಒಂದು ಗಮ್ಮತ್ತು ಕೂಡಾ ಬೇಕಲ್ಲದ.
ಶಿಬಿರ ಗೀತೆ, ಭಜನೆ, ಸಮೂಹ ಗಾಯನ, ಎಲ್ಲವೂ ಒಂದಾದ ಮತ್ತೆ ಒಂದು. ಪುರುಸ್ತೊತ್ತು ಇಲ್ಲೆ. ಜೆಂಬಾರಂಗಳಲ್ಲಿ ಚೂರ್ಣಿಕೆ ಹೇಳ್ಲೆ ಸ್ಪರ್ಧೆ ಆವ್ತಲ್ಲದಾ, ಹಾಂಗೇ ಆತು. ಎಲ್ಲರೂ ಸ್ವರ ಸೇರಿಸಿದವು.

ಅಂಬಗಳೇ ಅದ ನಮ್ಮ ಬಾಲಣ್ಣ “ಸೇವೆಯೆಂಬ ಯಜ್ಞನದಲ್ಲಿ ಸಮಿಧೆಯಂತೆ ಉರಿಯುವ”- ಹೇಳಿ ಸುರು ಹಚ್ಚಿದ್ದು.
ಒಂದೊಂದು ಗೀತೆ ಆದ ಕೂಡ್ಲೆ ಜೈಕಾರ.

ಬೋಲೋ ಶ್ರೀ ರಾಮ ಚಂದ್ರ ಕೀ- ಒಬ್ಬನ ಗಟ್ಟಿ ಸ್ವರ
ಜೈ-
ಎಲ್ಲರೂ ಜೋರಾಗಿ

ಬೋಲೋ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜೀ ಕೀ
ಜೈ

ಬೋಲೋ ಶ್ರೀ ಹನುಮಾನ್ ಜೀ ಕೀ
ಜೈ

ಬೋಲೋ ಭಾರತ್ ಮಾತಾ ಕೀ
ಜೈ

ಪದ್ಯ ಸುರುಮಾಡಿದವಂಗೂ ಜೈ ಕಾರ ಹಾಕಿ ಆತು.

*****

ಹನುಮಂತನ ಜನ್ಮ ಸ್ಥಾನಕ್ಕೆ ಹೋಪಲೆ ಸಮಯ ಸಿಕ್ಕದ್ದರೂ , ಒಬ್ಬಂಗೆ ಅದೆಂತದೋ ನೆಂಪಾತು.
ಹೇಳಿಯೇ ಬಿಟ್ಟವು ಎಲ್ಲಾ ಪ್ರಾಣಿಗೊಕ್ಕೂ ಬೀಲ ಇದ್ದು. ನವಗೆ ಮನುಷ್ಯರಿಂಗೆ ಮಾತ್ರ ಬೀಲ ಎಂತಕೆ ಇಲ್ಲೆ. ಅದು ಬೇಕು ಹೇಳಿ ದೇವರಿಂಗೆ ಒಂದು ಅರ್ಜಿ ಹಾಕೆಕ್ಕು. ಈಗ ಬೀಲ ಇದ್ದರೆ ಒಳ್ಳೆದೋ ಇಲ್ಲದ್ದರೆ ಒಳ್ಳೆದೋ ಹೇಳಿ ಈ ಸಭೆಲಿ ತೀರ್ಮಾನ ಆಯೆಕ್ಕು ಹೇಳ್ತ ಪ್ರಸ್ತಾವನೆಯೂ ಮಾಡಿದವು.

“ಬೀಲ ಇಲ್ಲದ್ದೇ ಮರ್ಕಟ ಬುದ್ಧಿ ತೋರ್ಸುತ್ತು, ಇನ್ನು ಅದು ಕೂಡಾ ಇದ್ದರೆ ಹೇಂಗಿಕ್ಕು”? ಒಬ್ಬ ಹೇಳಿದ
“ಅದಾ ಮನುಷ್ಯರ ಹಾಂಗೆ ಮಾಡೆಡ ಹೇಳಿ ಮಂಗಂಗೊ ಹೇಳುಗು, ಅವರ ಮಕ್ಕೊಗೆ”  ಇನ್ನೊಬ್ಬ ಹೇಳಿದ
“ಗೆಡ್ಡ ತೆಗವಲೆ ಬ್ರಷ್ ಹುಡ್ಕೆಕ್ಕು ಹೇಳಿ ಇಲ್ಲೆ, ಬೀಲದ ಕೊಡಿಯನ್ನೇ ಉಪಯೋಗಿಸಿರೆ ಆತು”
“ಪೇಂಟ್ ಹಾಕುತ್ಸು ಹೇಂಗೆ”?
“ಅದಕ್ಕೆ ಟೈಲರ್ ಹತ್ರೆ ಹೇಳಿ ವೆವಸ್ಥೆ ಮಾಡ್ಲಕ್ಕು. ಬೆಲ್ಟ್ ತೆಗೆತ್ತ ಪೈಸೆ ಒಳುದತ್ತು”

ವೇಷ್ಟಿ ಸುತ್ತುತ್ತು ಹೇಂಗೆ?
“ಬೀಲವನ್ನೇ ಬೆಲ್ಟ್ ಆಗಿ ಮಾಡಿರೆ ಆತು, ವಸ್ತ್ರ ಜಾರ”
“ಕುರ್ಚಿಲಿ ಕೂರ್ತು ಹೇಂಗೆ”?
“ಹನುಮಂತ ಬೀಲವನ್ನೇ ಸುತ್ತಿ ಕುರ್ಚಿಯ ಹಾಂಗೆ ಮಾಡಿ ಅದರ ಮೇಗೆ ಕೂಯಿದ ಇಲ್ಲೆಯಾ? ಕುರ್ಚಿ ಎಂತಕೆ”?

“ಬಸ್ಸಿಲ್ಲಿ  ನಿಂದೊಂಡು ಹೋಪಗ ಬೀಲವನ್ನೇ ಮೇಗಾಣ ಸರಳಿಂಗೆ ನೇಲ್ಸಿರೆ ಮತ್ತೆ ಬೀಳ ಅದ”

“ಡ್ರೈವ್ ಮಾಡುವಾಗ ಮೊಬೈಲ್ ರಿಂಗ್ ಆದರೆ, ಬೀಲಲ್ಲಿ ಹಿಡ್ಕೊಂಡು ಮಾತಾಡ್ಲೆ ಅಕ್ಕದ”

“ಮದುವೆ ಅಪ್ಪಗ ಕೈ ಪತ್ತಾವಿನ ಹೇಳ್ತರ ಬದಲು ಬೀಲ ಪತ್ತಾವಿನ ಹೇಳಿ ಒಂದು ಕಾರ್ಯಕ್ರಮ ಅಕ್ಕದ”
ಒಬ್ಬೊಬ್ಬ ಒಂದೊಂದು ಮರ್ಕಟ ವಿದ್ಯಮಾನ ಹೇಳಿದವು.

ಬೀಲ ಬೇಕು ಹೇಳಿ ನಿಶ್ಚಯ ಮಾಡಿ ಅರ್ಜಿ ಹಾಕಿದ್ದವೋ ಗೊಂತಾಯಿದಿಲ್ಲೆ. ಆದರೆ, ಎಲ್ಲರೂ ಒಂದರಿ ಬೀಲ ಇಪ್ಪವರ ಹಾಂಗೆ ಮಾತಾಡಿದ್ದಂತೂ ಸತ್ಯ.

******

ಬಸ್ ಮುಲ್ಕಿಗೆ ಎತ್ತಿತ್ತು.
ಇನ್ನು ರಾಮ ತಾರಕ ಮಂತ್ರ ಶಾಂತಿ ಮಂತ್ರ ಹೇಳಿ ಸಭಾ ಕಾರ್ಯಕ್ರಮ ಮುಗುಶುವೊ° ಹೇಳಿ ತೀರ್ಮಾನ ಆತು.

ಪರಸ್ಪರ ಧನ್ಯವಾದ ಸಮರ್ಪಣೆಯೂ ಆತು.

ಒಂದು ಅವಿಸ್ಮರಣೀಯ ಕಾರ್ಯಕ್ರಮಕ್ಕೆ ಮಂಗಳ ಹಾಡಿ ಆತು.

***

“ಸೇವೆಯೆಂಬ ಯಜ್ಞದಲ್ಲಿ ಸಮಿಧೆಯಂತೆ ಉರಿಯುವ”- ಆನು ಹೇಳ್ತಾ ಇದ್ದೆ.
ನಿಂಗಳೂ ಸ್ವರ ಸೇರುಸುತ್ತಾ ಇದ್ದಿ ಅಲ್ಲದಾ?

ಸೂ: ಗೋಕರ್ಣ ಯಾತ್ರೆಯ ಸಂದರ್ಭಲ್ಲಿ ತೆಗದ ಕೆಲವು ಪಟಂಗೊ:

ಗೋಕರ್ಣಕ್ಕೊಂದು ಪ್ರಯಾಣ, ರುದ್ರ ಸಮರ್ಪಣೆ, 5.0 out of 5 based on 2 ratings
ಶುದ್ದಿಶಬ್ದಂಗೊ (tags): , , , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ ಶರ್ಮಪ್ಪಚ್ಚಿ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 29 ಒಪ್ಪಂಗೊ

  1. ಚೆನ್ನೈ ಭಾವ
    ಚೆನ್ನೈ ಭಾವ°
    VA:F [1.9.3_1094]
    Rating: +1 (from 1 vote)

    ಶುಭಾಶಯಗಳು ಶರ್ಮಪ್ಪಚ್ಚಿ. ಗೋಕರ್ಣದ ಈಗಾಣ ವ್ಯವಸ್ಥೆ ನವಗೆಲ್ಲಾ ‘ನಮ್ಮ ಗೋಕರ್ಣ’ ಹೇಳಿ ಹೆಮ್ಮೆಂದ ಹೇಳಿಗೊಂಬಲಾವ್ತು.

    ಅಲ್ಲಿ ಹೋಗಿ ಬಂದರೆ ನಿಂಗೊ ಹೇಳಿದ ಎಲ್ಲ ಚಿತ್ರಣ ‘ಓ ಅಪ್ಪನ್ನೇ ‘ ಹೇಳಿ ಖಂಡಿತಾ ಅಕ್ಕು. ಈಗಾಗಲೇ ಹೊಗಿಬಂದವಕ್ಕೆ ಇನ್ನೊಂದರಿ, ಮತ್ತೊಂದರಿ ಹೋಯೆಕು ಹೇಳಿಯೂ ಕಾಂಗು.

    ಎಂಥಾ ಚೊಕ್ಕ ವ್ಯವಸ್ಥೆ . ಎಂಥಾ ಅಚ್ಚುಕಟ್ಟು . ಎಲ್ಲವೂ ಸರಳ ಆದರೂ ಚಂದ.

    ನೋಡಿ, ಭೂಪಣ್ಣ ಹೆರಡ್ಲೂ ಸಾಕೀಗ ಇದರ ಓದಿಕ್ಕಿ.

    [ಉತ್ತರುಸಿ]

    ಮಂಗ್ಳೂರ ಮಾಣಿ... ಉತ್ತರ ಕೊಟ್ಟದು:
    ಮಂಗ್ಳೂರ ಮಾಣಿ

    VA:F [1.9.3_1094]
    Rating: 0 (from 0 votes)

    ಅಪ್ಪಪ್ಪು..

    [ಉತ್ತರುಸಿ]

    ಶರ್ಮಪ್ಪಚ್ಚಿ ಉತ್ತರ ಕೊಟ್ಟದು:
    ಶರ್ಮಪ್ಪಚ್ಚಿ

    VA:F [1.9.3_1094]
    Rating: 0 (from 0 votes)

    ಒಂದರಿ ಹೋದವಕ್ಕೆ ಇನ್ನೊಂದರಿ ಹೋಯೆಕ್ಕು ಹೇಳಿ ಅಪ್ಪ ಶಕ್ತಿ ಇದ್ದು ಅಲ್ಲಿ.
    ಒಪ್ಪ ಕೊಟ್ಟ ಭಾವಯ್ಯಂಗೆ ಮತ್ತೆ ಮಂಗ್ಳೂರು ಮಾಣಿಗೆ ಧನ್ಯವಾದಂಗೊ

    [ಉತ್ತರುಸಿ]

  2. ಗಣೇಶ ಮಾವ°
    ಗಣೇಶ ಮಾವ°
    VN:F [1.9.3_1094]
    Rating: +1 (from 1 vote)

    ತುಂಬಾ ಚೆಂದಕೆ ಗೋಕರ್ಣ ಪ್ರಯಾಣವ ವಿವರ್ಸಿದ್ದಿ ಶರ್ಮಪ್ಪಚ್ಚೀ,,ಒಂದರಿ ಮನಸ್ಸಿಲಿ ಹೋಗಿ ಅನುಭವಿಸಿದ ಹಾಂಗೆ ಆತು.ಧನ್ಯವಾದಂಗೋ..

    [ಉತ್ತರುಸಿ]

    ಶರ್ಮಪ್ಪಚ್ಚಿ ಉತ್ತರ ಕೊಟ್ಟದು:
    ಶರ್ಮಪ್ಪಚ್ಚಿ

    VA:F [1.9.3_1094]
    Rating: 0 (from 0 votes)

    ಧನ್ಯವಾದಂಗೊ ಗಣೇಶ

    [ಉತ್ತರುಸಿ]

  3. ಮಹೇಶ
    ಡಾಮಹೇಶಣ್ಣ
    VA:F [1.9.3_1094]
    Rating: 0 (from 0 votes)

    {ಪುಣ್ಯಾತ್ಮ ಕೂಬಲೆ ಹಾಸಿದ ಹಸೆಯ ತೆಕ್ಕೊಂಡು ಹೆರಟದೇ.}
    ಕ್ರಮ೦ಗಳ ವಿಶಯಲ್ಲಿ ಜಗಳ ಮಾಡಿ ಕಾರ್ಯದ ಉದ್ದೇಶವೇ ಈಡೇರದ್ರೆ ಹೇ೦ಗೆ?
    ಪಟದ ಫ್ರೇಮು ಚೆ೦ದ ಮಾಡ್ಲೆ ಹೋಗಿ ಪಟ ಹಾಳಾದ ಹಾ೦ಗೆ.

    ಲಾಯಕ ವಿವರುಸಿದ್ದಿ ಅನುಭವವ.

    [ಉತ್ತರುಸಿ]

    ಶರ್ಮಪ್ಪಚ್ಚಿ ಉತ್ತರ ಕೊಟ್ಟದು:
    ಶರ್ಮಪ್ಪಚ್ಚಿ

    VA:F [1.9.3_1094]
    Rating: 0 (from 0 votes)

    [ಜಗಳ ಮಾಡಿ ಕಾರ್ಯದ ಉದ್ದೇಶವೇ ಈಡೇರದ್ರೆ] ಮೊಂಡುವಾದ ಮಾಡ್ತವರೆ ಹತ್ರೆ ಮಾತೆಂತರ ಹೇಳಿ ಎಂಗೊ ಎಂಗಳಷ್ಟಕ್ಕೆ ಮುಂದುವರಿಸುವದು ಅನಿವಾರ್ಯ ಆಗಿತ್ತು.
    ಒಪ್ಪ ಕೊಟ್ಟ ಮಹೇಶಂಗೆ ಧನ್ಯವಾದಂಗೊ

    [ಉತ್ತರುಸಿ]

  4. ಶ್ರೀಅಕ್ಕ°
    ಶ್ರೀಅಕ್ಕ°
    VN:F [1.9.3_1094]
    Rating: +1 (from 1 vote)

    ಶರ್ಮಪ್ಪಚ್ಚಿ, ನಿಂಗಳ ಗೋಕರ್ಣಕ್ಕೆ ಹೋಗಿ ರುದ್ರ ಒಪ್ಪುಸಿದ ಕಥನ ತುಂಬಾ ಲಾಯ್ಕಲ್ಲಿ ಬಯಿಂದು. ನಿಂಗಳ ಒಟ್ಟಿಂಗೆ ಹೋಗಿ ಬಂದ ಹಾಂಗೆ ಆತು.
    [ಸೇವೆಯೆಂಬ ಯಜ್ಞದಲ್ಲಿ ಸಮಿಧೆಯಂತೆ ಉರಿಯುವ] ಈ ಒಂದು ವಾಕ್ಯಕ್ಕೆ ಎಷ್ಟು ಮಹತ್ವ ಇದ್ದು ಹೇಳಿ ಹೇಳಿದ್ದು ಲಾಯ್ಕಾಯಿದು. ಸಮಿಧೆಯ ಹಾಂಗೆ ನಾವುದೇ ಜೀವನ ಯಜ್ಞಲ್ಲಿ ಪಾಲ್ಗೊಳ್ಳೆಕ್ಕು ಹೇಳಿ ತಿಳಿಶಿ ಕೊಟ್ಟದು ಲಾಯ್ಕಾಯಿದು. ನಿಂಗೋ ಹೋಗಿ ಬಪ್ಪಗ ಆದ ಎಲ್ಲ ವಿಷಯವನ್ನುದೇ ಚೆಂದಕ್ಕೆ ಹೇಳಿದ್ದಿ. ವಿವರಣೆಗೋ ಲಾಯ್ಕಲ್ಲಿ ಬಯಿಂದು ಅಪ್ಪಚ್ಚಿ.
    ನಾಳ್ದು ‘ವಿರಾಟ್ ಪೂಜೆ’ ಗೆ ಇಪ್ಪ ಏರ್ಪಾಡಿನ ನೋಡಿ ಬಂದ ಹಾಂಗೆ ಆತು.
    ಬಸ್ಸಿಲಿ ಬಪ್ಪಗ ನಡದ ಮರ್ಕಟವಿದ್ಯಮಾನ ನೋಡಿ ನೆಗೆ ತಡದ್ದಿಲ್ಲೆ.

    ಅಪ್ಪಚ್ಚಿ, ಶುದ್ದಿ ಚೆಂದ ಆಯಿದು. ನಿಂಗಳ ಒಟ್ಟಿಂಗೆ ಎಂಗಳ ಸ್ವರವುದೇ ಇದ್ದು…. ಒಟ್ಟಿಂಗೆ ಯಜ್ಞಲ್ಲಿ ಪಾಲ್ಗೊಂಬ°..

    [ಉತ್ತರುಸಿ]

    ಶರ್ಮಪ್ಪಚ್ಚಿ ಉತ್ತರ ಕೊಟ್ಟದು:
    ಶರ್ಮಪ್ಪಚ್ಚಿ

    VA:F [1.9.3_1094]
    Rating: +1 (from 1 vote)

    ಶ್ರೀ,
    ಶುದ್ದಿಯ ಚೆಂದಕೆ ವಿಮರ್ಶೆ ಮಾಡಿ, ಪ್ರೋತ್ಸಾಹ ಕೊಡುವದಕ್ಕೆ ಧನ್ಯವಾದಂಗೊ

    [ಉತ್ತರುಸಿ]

  5. ರಘುಮುಳಿಯ
    ಮುಳಿಯ ಭಾವ
    VA:F [1.9.3_1094]
    Rating: +1 (from 1 vote)

    ಶರ್ಮಪ್ಪಚ್ಚೀ,
    ಗೋಕರ್ಣಕ್ಕೆ ಹೋಗಿ ರುದ್ರ ಸಮರ್ಪಣೆ ಮಾಡಿದ ಪುಣ್ಯಕಾರ್ಯದ ಅನುಭವವ ರಸವತ್ತಾಗಿ ವರ್ಣಿಸಿದ್ದಿ.ನಿ೦ಗಳ ಒಟ್ಟಿ೦ಗೆ ಒ೦ದರಿ ಪ್ರಯಾಣ ಮಾಡಿದ ಅನುಭವ ಆತು.
    ಸಮಿಧೆಯ ಉದಾಹರಣೆ ಕೊಟ್ಟು ನಿ೦ಗೊ ಹೇಳಿದ ಮಾತು ನಮ್ಮೆಲ್ಲರ ಜೀವನದ ಧ್ಯೇಯ ಆಗಿರೆಕ್ಕು,ಅಲ್ಲದೋ?ಹೊತ್ತುವ ದೀಪದ ನೆಣೆಯ ಹಾ೦ಗೆ ನಾವೂ ಬದುಕ್ಕೆಕ್ಕು ಹೇಳುವ ಮಾತು ಮನಸ್ಸಿಲಿರೆಕ್ಕು.
    ಕು೦ದಾಪುರಲ್ಲಿ ಸಿಕ್ಕಿದ ಸಮ್ಮಾನ,ಬೊ೦ಬಾಯಿಯ ಜೆನ೦ಗ ಪರ೦ಚಿದ್ದು ಕೆಮಿಗೆ ಬೀಳದ್ದದು,ನುಸಿಪೆಟ್ತು,ರುದ್ರ ಹೇಳಿದ ಕ್ರಮ,ಎಡೇಲಿ ನೆಡದ ಪಿಟ್ಕಾಯಣ ಎಲ್ಲವೂ ಕಣ್ಣ ಮು೦ದೆ ಕ೦ಡ ಹಾ೦ಗೆ ಆತೊ೦ದರಿ.
    ತಿರುಗಿ ಬಪ್ಪಗಾಣ ನಿ೦ಗಳ ಅನುಭವಕ್ಕೂ ರಾಮ ದೇವರ ಪಟ್ಟಾಭಿಷೇಕಲ್ಲಿ ಊಟದ ಹ೦ತಿಲಿ ಹಾರಿದ ನಮ್ಮ ಪೂರ್ವಜರ ಆಟಕ್ಕೂ ಹೋಲಿಕೆ ಕ೦ಡತ್ತು.
    ಶಿವರಾತ್ರಿಯ ಶುಭದಿನಕ್ಕೆ ಒಪ್ಪುತ್ತ ಬರಹ.ಧನ್ಯವಾದ.

    [ಉತ್ತರುಸಿ]

    ಶರ್ಮಪ್ಪಚ್ಚಿ ಉತ್ತರ ಕೊಟ್ಟದು:
    ಶರ್ಮಪ್ಪಚ್ಚಿ

    VA:F [1.9.3_1094]
    Rating: 0 (from 0 votes)

    [ಹೊತ್ತುವ ದೀಪದ ನೆಣೆಯ ಹಾ೦ಗೆ ನಾವೂ ಬದುಕ್ಕೆಕ್ಕು ಹೇಳುವ ಮಾತು ಮನಸ್ಸಿಲಿರೆಕ್ಕು.] ಒಂದು ಒಳ್ಲೆ ವಿಚಾರ ತಿಳಿಶಿ ಕೊಟ್ಟೆ ರಘು.
    ಧನ್ಯವಾದಂಗೊ

    [ಉತ್ತರುಸಿ]

  6. ಒಪ್ಪಣ್ಣ
    ಒಪ್ಪಣ್ಣ
    VA:F [1.9.3_1094]
    Rating: +1 (from 1 vote)

    ಶರ್ಮಪ್ಪಚ್ಚೀ..
    ಶುದ್ದಿ ಪಷ್ಟಾಯಿದು.

    ಶಿವರಾತ್ರಿಯ ವಿಶೇಷ ದಿನವೇ ಗೋಕರ್ಣ, ಅಶೋಕೆಯ ಪಟ ಕಂಡು ಮನಸ್ಸು ತೃಪ್ತಿ ಆತು.
    ಗೋಕರ್ಣಲ್ಲಿ ನಿಂಗೊ ರುದ್ರ ಹೇಳುವಗ ಬೈಲಿಂಗೂ ಒಂದು ಆಶೀರ್ವಾದ ಸಿಕ್ಕಲಿ ಹೇಳಿ ನೆಂಪಾಯಿದಲ್ಲದೋ ಅಪ್ಪಚ್ಚೀ?

    ಕುಂದಾಪುರಲ್ಲಿ ಸಮ್ಮಾನ ಮಾಡುವಗ ಹಳೆಕಾಲ ನೆಂಪಾದ್ದು ;-)
    ಆಚರೊಂಕ್‍ಲಾ ಆನ್, ಸುಕೊಂಕ್‍ಕ್ಲಾ ಆನ್ – ಹೇಳ್ತ ಗಾದೆ ನೆಂಪಾದ್ದು,
    ಹಾಂಕಾರಕ್ಕೆ ಉದಾಸಿನ ಮದ್ದು ಹೇಳಿಗೊಂಡು ಸುಮ್ಮನೆ ಕೂದ್ದು,
    ಗವರ್ನರ್ ಇಪ್ಪದೇ ಸ್ಪೀಡು ಕಂಟ್ರೋಲಿಂಗೆ – ಹೇಳಿ ಡ್ರೈವರ° ಹೇಳಿದ್ದು
    ಬೀಲ ಪತ್ತಾವುನೆ..
    ..
    ಒಂದೋ ಎರಡೋ..
    ಎಲ್ಲವುದೇ ನೈಜ, ಪರಿಪೂರ್ಣ! ಒಳ್ಳೆ ಶುದ್ದಿಗೆ ಧನ್ಯವಾದಂಗೊ :-)

    [ಉತ್ತರುಸಿ]

    ಶರ್ಮಪ್ಪಚ್ಚಿ ಉತ್ತರ ಕೊಟ್ಟದು:
    ಶರ್ಮಪ್ಪಚ್ಚಿ

    VA:F [1.9.3_1094]
    Rating: 0 (from 0 votes)

    ಮೊದಲಾಗಿ ಗುರಿಕ್ಕಾರ್ರಿಂಗೆ ಒಂದು ಧನ್ಯವಾದ ಹೇಳೆಕ್ಕು ಒಪ್ಪಣ್ಣ.
    ಶಿವರಾತ್ರಿ ಸಂದರ್ಭಲ್ಲಿ ಈ ಲೇಖನ ಪ್ರಕಟ ಮಾಡಿದ್ದಕ್ಕೆ
    [ಬೈಲಿಂಗೂ ಒಂದು ಆಶೀರ್ವಾದ ಸಿಕ್ಕಲಿ ಹೇಳಿ ನೆಂಪಾಯಿದಲ್ಲದೋ]-ಖಂಡಿತಾ. ಬೈಲಿನ ಮರವ ಪ್ರಶ್ನೆಯೇ ಇಲ್ಲೆ.
    [ಆಚರೊಂಕ್‍ಲಾ ಆನ್, ಸುಕೊಂಕ್‍ಕ್ಲಾ ಆನ್ ]ಈ ತುಳು ಗಾದೆಯ ಮೂಲ ಸ್ವರೂಪ ಕೊಟ್ಟದಕ್ಕೆ ಧನ್ಯವಾದಂಗೊ. ಭಾವಾರ್ಥ ಮಾತ್ರ ಗೊಂತಿತ್ತು.
    ನಿಂಗಳ ಎಲ್ಲರ ನಿರಂತರ ಪ್ರೋತ್ಸಾಹವೇ ಈ ಲೇಖನಕ್ಕೆ ಪ್ರೇರಣೆ.

    [ಉತ್ತರುಸಿ]

  7. jayashree.neeramoole
    ಜಯಶ್ರೀ ನೀರಮೂಲೆ
    VN:F [1.9.3_1094]
    Rating: 0 (from 0 votes)

    ಎಂತಹ ಅದ್ಭುತವಾದ ಕರೆ ಅಪ್ಪಚ್ಚಿ….. “ಸೇವೆಯೆಂಬ ಯಜ್ಹ್ನದಲ್ಲಿ ಸಮಿಧಿಯಂತೆ ಉರಿಯುವ”…. ನಾವೆಲ್ಲರೂ ಈ ಕರೆಗೆ ಸ್ವರ ಸೇರುಸಿ ರಾಮನ ಸೇವೆ ಮಾಡಿತ್ತು ಹೇಳಿ ಆದರೆ ರಾಮ ರಾಜ್ಯದ ಕನಸು ನನಸಪ್ಪದರಲ್ಲಿ ಯಾವುದೇ ಸಂಶಯ ಇಲ್ಲೆ…..

    [ಉತ್ತರುಸಿ]

    ಶರ್ಮಪ್ಪಚ್ಚಿ ಉತ್ತರ ಕೊಟ್ಟದು:
    ಶರ್ಮಪ್ಪಚ್ಚಿ

    VA:F [1.9.3_1094]
    Rating: 0 (from 0 votes)

    [ರಾಮ ರಾಜ್ಯದ ಕನಸು ನನಸಪ್ಪದರಲ್ಲಿ ಯಾವುದೇ ಸಂಶಯ ಇಲ್ಲೆ…..] ಖಂಡಿತಾ ಅಪ್ಪು.
    ಧನ್ಯವಾದಂಗೊ.

    [ಉತ್ತರುಸಿ]

    jayashree.neeramoole ಉತ್ತರ ಕೊಟ್ಟದು:
    ಜಯಶ್ರೀ ನೀರಮೂಲೆ

    VN:F [1.9.3_1094]
    Rating: 0 (from 0 votes)

    ‘ರಾಮ ರಾಜ್ಯ’…. ‘ಕಪಿ ಸೇನೆ’…. ಈ ಶಬ್ದಂಗಳ ಒಂದೇ ಕಡೆ ಕಾಂಬಗ ಗುರುಗಳ ರಾಮಾಯಣ ಪ್ರವಚನ ಇಡೀ ಪುನಃ ಒಂದರಿ ಕಣ್ಣ ಮುಂದೆ ಬಂತು. ಧನ್ಯವಾದಂಗೋ…

    [ಉತ್ತರುಸಿ]

  8. ಮಂಗ್ಳೂರ ಮಾಣಿ...
    ಮಂಗ್ಳೂರ ಮಾಣಿ
    VA:F [1.9.3_1094]
    Rating: 0 (from 0 votes)

    ನಿಂಗೊ ಬರದ್ದರ ಓದಿ ಆನೇ ಹೋದ ಹಾಂಗೆ ಆತಿದಾ…

    [ಉತ್ತರುಸಿ]

    ಶರ್ಮಪ್ಪಚ್ಚಿ ಉತ್ತರ ಕೊಟ್ಟದು:
    ಶರ್ಮಪ್ಪಚ್ಚಿ

    VA:F [1.9.3_1094]
    Rating: 0 (from 0 votes)

    ಧನ್ಯವಾದಂಗೊ.
    ಇನ್ನೊಂದು ಸರ್ತಿ ನೀನೂದೆ ಸೇರು ಎಂಗಳೊಟ್ಟಿಂಗೆ.

    [ಉತ್ತರುಸಿ]

    ಮಂಗ್ಳೂರ ಮಾಣಿ... ಉತ್ತರ ಕೊಟ್ಟದು:
    ಮಂಗ್ಳೂರ ಮಾಣಿ

    VA:F [1.9.3_1094]
    Rating: 0 (from 0 votes)

    ಖಂಡಿತ.

    [ಉತ್ತರುಸಿ]

  9. Gopalakrishna BHAT S.K.
    ಗೋಪಾಲಣ್ಣ
    VA:F [1.9.3_1094]
    Rating: 0 (from 0 votes)

    ಬಾಯಾಡಿ ಬಾಲಣ್ಣನ ಸ್ವರ ಎಷ್ಟು ತಾರಕಕ್ಕೆ ಹೋದರೂ ಹಿತವಾಗಿ ಇರುತ್ತು.ಕೆಮಿಲಿ ಅನುರಣಿಸುತ್ತಾ ಇರುತ್ತು.ಮೊನ್ನೆ ಆನು ಬಾರದ್ದ ಕಾರಣ ಇದರ ವಿವರ ಓದಿ ಕುಶಿ ಆತು.ಬಪ್ಪಲೆ ಸಾಧ್ಯ ಆಗದ್ದಕ್ಕೆ ರಜ ಬೇಜಾರವೂ ಆತು.
    ಕೆಲವರು ಅವು ನಂಬಿದ್ದೇ ಸರಿ ಹೇಳುವವು.{ಗೊಕರ್ಣಲ್ಲಿ ನಿಂಗೊಗೆ ಸಿಕ್ಕಿದವು ಅಂಥವು!}ಅವರ ಪಾಡಿಂಗೆ ಅವರ ಬಿಟ್ಟದು ಸರಿ ಆತು.ಇಲ್ಲದ್ದೆ ಹೋದರೆ ರುದ್ರ ಹೇಳುಲೆ ಹೋಗಿ ರೌದ್ರ ರಣ ಆಗಿ ಹೋವ್ತಿತ್ತು.

    [ಉತ್ತರುಸಿ]

    ಶರ್ಮಪ್ಪಚ್ಚಿ ಉತ್ತರ ಕೊಟ್ಟದು:
    ಶರ್ಮಪ್ಪಚ್ಚಿ

    VA:F [1.9.3_1094]
    Rating: 0 (from 0 votes)

    [ಅವರ ಪಾಡಿಂಗೆ ಅವರ ಬಿಟ್ಟದು ಸರಿ ಆತು].ಖಂಡಿತಾ ಅಪ್ಪು.
    ಧನ್ಯವಾದಂಗೊ.

    [ಉತ್ತರುಸಿ]

  10. ಬೊಳುಂಬು ಮಾವ
    ಬೊಳುಂಬು ಮಾವ°
    VA:F [1.9.3_1094]
    Rating: 0 (from 0 votes)

    ಗೋಕರ್ಣ ಪ್ರಯಾಣ, ರುದ್ರ ಸಮರ್ಪಣೆಯ ಅನುಭವ ಕಥನ ಲಾಯಕಾಯಿದು. ಮಧ್ಯೆ, ಮಧ್ಯೆ ಉಪಮೆ, ಗಾದೆ ಮಾತುಗೊ, ಮತ್ತೂ ರಂಜಿಸಿತ್ತು. ಕುಂದಾಪುರದ ಸನ್ಮಾನ, ಬಸ್ಸಿಲ್ಲಿ ಜೈಕಾರ, ಗದ್ದಲ, ಮನಸ್ಸಿಂಗೆ ಬಂದ ಲಾಂಗೂಲಾಭಿಲಾಶೆ , ಹಾಂಕಾರದ ಹರಿಕಾರನೊಬ್ಬನ ಅಧಿಕಪ್ರಸಂಗತನ, ಎಲ್ಲ ಘಟನೆಗಳ ವಿವರಣೆ ಚೆಂದ ಆಯಿದು. ಅಲ್ಯಾಣ ಅಚ್ಚುಕಟ್ಟಾದ ವ್ಯವಸ್ಥೆ ಕಂಡು ಕೊಶಿ ಆತು. ಪೂರಕವಾದ ಪಟಂಗಳೂ ಪಸ್ಟ್ ಕ್ಲಾಸು ಇದ್ದು.

    [ಉತ್ತರುಸಿ]

  11. ಶರ್ಮಪ್ಪಚ್ಚಿ
    ಶರ್ಮಪ್ಪಚ್ಚಿ
    VA:F [1.9.3_1094]
    Rating: 0 (from 0 votes)

    ವಿಮರ್ಶಾತ್ಮಕ ಒಪ್ಪ ಕೊಟ್ಟದಕ್ಕೆ ಧನ್ಯವಾದಂಗೊ.

    [ಉತ್ತರುಸಿ]

  12. ramesh kainthaje
    VA:F [1.9.3_1094]
    Rating: +1 (from 1 vote)

    sharmaaji,
    ningala article thumba laika iddu, swathaha ningala otting gokarnakke hogi banda haange ayidu. ningala haasya mishritha saral shaili thumba khushi kottattu. bassu prayanada haasya anubhva anthoo thumba rasamaya. baravanige munduvarisi,

    ramesh kainthaje

    [ಉತ್ತರುಸಿ]

    ಶರ್ಮಪ್ಪಚ್ಚಿ ಉತ್ತರ ಕೊಟ್ಟದು:
    ಶರ್ಮಪ್ಪಚ್ಚಿ

    VA:F [1.9.3_1094]
    Rating: 0 (from 0 votes)

    [baravanige munduvarisi,]
    ಈ ಪ್ರೋತ್ಸಾಹದ ಮಾತುಗೊಕ್ಕೆ ಧನ್ಯವಾದಂಗೊ

    [ಉತ್ತರುಸಿ]

  13. ಸುಭಗ
    ಸುಭಗ
    VN:F [1.9.3_1094]
    Rating: 0 (from 0 votes)

    ಅಪ್ಪಚ್ಚಿ, ‘ಕೋಟಿ ರುದ್ರ’ ಪುಣ್ಯಕಾರ್ಯಲ್ಲಿ ಭಾಗವಹಿಸಿ ಬಂದ ಅನುಭವವ ಸವಿಸ್ತಾರವಾಗಿ ಸ್ವಾರಸ್ಯಕರವಾಗಿ ನಿರೂಪಣೆ ಮಾಡಿದ್ದಿ. ಗಂಭೀರ ವಿಶಯಕ್ಕೆ ತಿಳಿಹಾಸ್ಯ ಲೇಪನ ಕೊಟ್ಟು ಗದ್ಯ ‘ಹೃದ್ಯ’ ಅಪ್ಪಹಾಂಗೆ ಮಾಡಿದ್ದಿ. ಬೈಲಿಲ್ಲಿಪ್ಪ ಇತರರಿಂಗು ಈ ಲೇಖನಂದಾಗಿ ಹೀಂಗಿಪ್ಪ ಸೇವಾಕಾರ್ಯಂಗಳಲ್ಲಿ ಭಾಗವಹಿಸಲೆ ಪ್ರೇರಣೆ ಸಿಕ್ಕುಗು ಹೇಳಿ ಆನು ಗ್ರೇಶುತ್ತೆ.
    ಶುದ್ದಿಗೆ ಸಿಕ್ಕುಸಿದ ‘ಬೀಲ’- ಅದೇ ಒಂದು ಪರಿಪೂರ್ಣ ಲಘುಬರಹ ಅಪ್ಪ ರೀತಿಲಿ ಹಲವಾರು ವಿಷಯಂಗಳ ಪ್ರಸ್ತಾಪ ಮಾಡಿದ್ದಿ!
    ಇದರ ಓದಿಯಪ್ಪಗ ರಾಮಾಯಣದ ಒಂದು ತಮಾಶೆ ಕತೆ ನೆಂಪಾತು-

    ಸೀತೆ ತುಂಬಾ ಚೆಂದ ಇದ್ದು ಹೇಳಿ ಎಲ್ಲೋರೂ ಹೇಳುದು ಕೇಳಿಯಪ್ಪಗ ಕಿಷ್ಕಿಂಧೆಯ ವಾನರಸ್ತ್ರೀಗೊಕ್ಕೆ ಅದರ ಒಂದಾರಿ ಕಣ್ಣಾರೆ ಕಾಣೆಕ್ಕು; ಅದರ ಚೆಂದವ ನೋಡಿ ಕೊಶಿಪಡೆಕು ಹೇಳಿ ತುಂಬಾ ಆಶೆ ಆಗಿಂಡು ಇತ್ತಡ. ಅಕೇರಿಗೆ ಶ್ರೀರಾಮ ಪಟ್ಟಾಭಿಷೇಕ ಸಂದರ್ಭಲ್ಲಿ ಅವಕ್ಕೆ ಸೀತೆಯ ಕಾಂಬ ಅವಕಾಶ ಸಿಕ್ಕಿತ್ತಡ. ಅಷ್ಟಪ್ಪಗ ಒಂದು ಮಂಗೆತ್ತಿ ಹೆಮ್ಮಕ್ಕೊ ಹೇಳಿತ್ತಡ-
    “ಎಬೇಯಾ… ಸೀತೆ ಚೆಂದ ಅಡ, ಚೆಂದ..! ಥೂ ಅದಕ್ಕೆ ಬೀಲವೇ ಇಲ್ಲೆ, ಮತ್ತೆಂತರ ಚೆಂದ..?!!” ;)

    [ಉತ್ತರುಸಿ]

    ಶರ್ಮಪ್ಪಚ್ಚಿ ಉತ್ತರ ಕೊಟ್ಟದು:
    ಶರ್ಮಪ್ಪಚ್ಚಿ

    VA:F [1.9.3_1094]
    Rating: 0 (from 0 votes)

    ತಮಾಶೆ ಕತೆಯ ಪೂರಕವಾಗಿ ಕೊಟ್ಟು ವಿಮರ್ಶೆ ಮಾಡಿದ್ದಕ್ಕೆ
    ಧನ್ಯವಾದಂಗೊ

    [ಉತ್ತರುಸಿ]

  14. ಅಭಿ
    VA:F [1.9.3_1094]
    Rating: 0 (from 0 votes)

    ಲಾಯ್ಕ ಆಯ್ದು. . .

    [ಉತ್ತರುಸಿ]

  15. ಬಾಯಾಡಿ ಬಾಲಣ್ಣ
    VA:F [1.9.3_1094]
    Rating: 0 (from 0 votes)

    ಪಶ್ತು ಕ್ಲಾಸು ಶರ್ಮಣ್ಣ. ಹೇಳಿದ ಹಾ೦ಗೆ-ನಾವು ಹೋದ ಗಮ್ಮತ್ತು ಹ೦ಚಿದರೆ ಬಾಕಿದ್ದವಕ್ಕೆ ಸ್ಪೂರ್ತಿ ಯಾಯೆಕ್ಕು.ಈಗ ಅವಕ್ಕೆ ಊತದ ವ್ಯವಸ್ಥೆ ಆಯಕ್ಕಲ್ಲದ?ಕುನ್ದಾಪುರದ ವೆ೦ಕಟಲಕ್ಶೀ ಸಭಾಭವನದ ಐತಾಳರ ಫೋನು +೯೧-೯೪೮೧೭೫೪೩೭೦ ಸದಾ ಉಮ್ಬೋರ ಹಶು ತಣಿಸುಲೆ ಇದ್ದು.ಮು೦ಚಿತವಾಗಿ ತಿಳಿಶಿ ಹೋಯೆಕ್ಕು.ನಾಡಿದ್ದಿ೦ಗೆ ವಿರಾಟ್ ಪೂಜೆಗೆ ಹೋಪ ಹೆಮ್ಮಕ್ಕೊ,ಮಕ್ಕೊ,ಪ್ರಾಯಸ್ಟರಿ೦ಗೆ-ಹೋಟೆಲ್ಲಿಲಿ ಪರಡುವ ಕೆಲಸಕ್ಕಿ೦ತ-ಉತ್ತಮ..

    [ಉತ್ತರುಸಿ]

ಒಪ್ಪ ಕೊಡ್ಳೆ ಇಲ್ಲಿ ಬರೆಯಿ:

ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಸದ್ಯದ ಪಟಂಗೊ

ಮಳೆಗಾಲದ ಅಟ್ಟಣೆಲಿ ಅಟ್ಟ-ಕೊಟ್ಟಗೆ ತುಂಬಿತ್ತೋ?ಪರೀಕ್ಷಾ ಫಲಿತಾಂಶ: ಚಿಂತೆ ಬಿಡಿ, ಚಿಂತನೆ ಮಾಡಿ!ಶ್ರೀಮದ್ಭಗವದ್ಗೀತಾ – ತೃತೀಯೋsಧ್ಯಾಯಃ – ಕರ್ಮಯೋಗಃ – ಶ್ಲೋಕಂಗೊ – 31- 40

ಬೆಶಿ ಬೆಶಿ ಒಪ್ಪಂಗೊ..

Switch to our mobile site

Powered By Indic IME