ಸಣ್ಣಸಂಕೊಲೆ(shortlink):
ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ
ಮೊನ್ನೆ ಶೇಡಿಗುಮ್ಮೆ ಭಾವ ಮನಗೆ ಬಂದಿತ್ತಿದ್ದ (ನಮ್ಮ ಬೈಲಿಂಗೆ ಗೊಂತಿಪ್ಪವ ಅಲ್ಲ).
ಎಂಗೊ ಇಬ್ರೂ, ಆನು ಹುಟ್ಟಿದಲ್ಲಿಂದ ಡಿಗ್ರಿ ಮುಗುಸುವವರೆಗೆ ಒಂದೇ ಮನೆಲಿ ಬೆಳದವು, ಒಟ್ಟಿಂಗೆ ಆಡಿದವು, ಓದಿದವು. ಒಂದೇ ಶಾಲೆ, ಒಂದೇ ಕ್ಲಾಸ್, ಒಂದೇ ಕಾಲೇಜ್, ಒಂದೇ ಹೋಸ್ಟೆಲ್, ಒಂದೇ ರೂಂ. ಸಣ್ಣ ಇಪ್ಪಗ ಸಣ್ಣ ಸಣ್ಣ ಜಗಳಂಗೊ ಮಾಡಿದ್ದಿಲ್ಲೆ ಹೇಳ್ಲೆ ಎಡಿಯ. ಎಲ್ಲಿಗೆ ಹೋವುತ್ತರೂ ಒಟ್ಟೊಟ್ಟಿಂಗೆ. ನಿಂಗೊ ಅಣ್ಣ ತಮ್ಮಂದಿರೋ? ಆರು ಅಣ್ಣ, ಆರು ತಮ್ಮ ಹೇಳಿ ಕೇಳಿದವು ಎಷ್ಟೋ ಜನಂಗೊ. ಅಷ್ಟೊಂದು ಅನ್ಯೋನ್ಯತೆ. ಪ್ರಾಯಲ್ಲಿ 5 ತಿಂಗಳಿಂಗೆ ಅವ ದೊಡ್ಡವ. ಎನ್ನ ಮಾವನ ಮಗನೇ ಅಲ್ಲದ. ರಜ ಸಾಮ್ಯತೆ ಇಲ್ಲದ್ದೆ ಇರ ಕಾಂಬವಕ್ಕೆ. ತಂಗೆಯ, ಸೊಸೆಯಕ್ಕಳ ಎಲ್ಲ ಮಾತಾಡ್ಸುವದರ ಒಟ್ಟಿಂಗೆ ಹಳೆ ನೆಂಪುಗಳ ಕೆದಕ್ಕಲೂ ಆವುತ್ತು ಹೇಳಿ ಅವಂಗೆ ಎಂಗಳಲ್ಲಿಗೆ ಬಪ್ಪದು ಹೇಳಿರೆ ಕೊಶಿಯೇ. ಎಂಗೊಗೂ ಹಾಂಗೆ, ಮಾತಾಡಿ ಹೊತ್ತು ಹೋದ್ದು ಗೊಂತಪ್ಪದು ಕಾಫಿಗೋ ಊಟಕ್ಕೊ ದೆನುಗೊಳುವಗ. ಮೊನ್ನೆ ಹಾಂಗೆ ಬಂದಿಪ್ಪಗ, “ಎಂತ ಭಾವ, ಒಂದು ಸರ್ತಿ ಕಣ್ಯಾರಕ್ಕೆ ಹೋಗಿ ಬಪ್ಪನೋ” ಕೇಳಿದೆ. ಸುಮ್ಮನೆ ಎಂತ ಇದ್ದು? ಒಂದಿಷ್ಟು ಬ್ಯಾರಿಗಳ ಅಂಗಡಿ, ನಿಮಿಷಕೊಂದು ಬಪ್ಪ ಹೋಪ ಬಸ್ಸಿನ ಗೌಜಿ, “ಬತ್ತಕ್ಕ ಬತ್ತಕ್ಕ“ ಹೇಳಿ ಬಚ್ಚಂಗಾಯಿ ತುಂಡಿಂಗೆ ಎಂಜಲು ರಟ್ಟಿಸಿಯೊಂಡು ಬಸ್ಸಿನ ಹತ್ರಂಗೆ ಮಾರಲೆ ಬಪ್ಪ ಬ್ಯಾರಿ ಚೆಕ್ಕಂಗೊ, ಹಸಿ ಮೀನು, ಒಣಕ್ಕು ಮೀನಿನ ವಾಸನೆ, ಸರ್ಕಲ್ ತುಂಬಾ ಕೆಂಪು ಇಲ್ಲದ್ದರೆ ಪಚ್ಚೆ ಕೊಡಿಗೊ, ಇದರ ಎಲ್ಲ ನೋಡ್ಲೆ ಅಲ್ಲಿಗೆ ವರೆಗೆ ಎಂತಕೆ ಹೋಪದು ಹೇಳಿದ.
ನೀನು ಹೇಳುವದು ಈಗಾಣ “ಕುಂಬಳೆ” ಪೇಟೆಯ, ಆನು ಹೇಳುವದು ನಾವು ಸಣ್ಣ ಇಪ್ಪಗ ಹೋಗಿಯೊಂಡು ಇತ್ತಿದ್ದ “ಕಣ್ಯಾರ” ಪೇಟೆ ಹೇಳಿದೆ. ಅದು ಈಗ ಎಲ್ಲಿ ಇದ್ದು ಭಾವ ಹೇಳುವದು ಅವನ ಸರದಿ ಆತು. ನಾವು ಇಬ್ರೂ ಇದ್ದಲ್ಲದ, ನಮ್ಮ ನೆಂಪಿನ ಒಂದು 40-45 ವರ್ಷ ದಷ್ಟು ಹಿಂದೆ ಹಾಕಿರೆ ಅದೇ ಪೇಟೆ ಕಾಂಬಲೆ ಎಡಿಗು ಹೇಳಿದೆ. ನವಗೆ TV ಶೋ ದವರ ಹಾಂಗೆ ಹಿಪ್ನೋಟಿಸಮ್ ಎಲ್ಲ ಬೇಡ. ರಜ ನೆನಪಿನ ಹಿಂದಂಗೆ ಓಡಿಸಿದರೆ ಆತು ಹೇಳಿಯಪ್ಪಗ ಒಪ್ಪಿದ.
ಕುಂಬಳೆ ಸೀಮೆಲಿ ಇಪ್ಪ ಭಕ್ತರಿಂಗೆ ಮತ್ತೆ ಅವರ ದನ ಕಂಜಿಗೊಕ್ಕೆ ಅಭಯ ಕೊಡುವ ದೇವರು ಹೇಳಿರೆ “ಕಣಿಪುರ ಶ್ರೀ ಗೋಪಾಲ ಕೃಷ್ಣ” ನೇ ಸರಿ. ಎರಡೂ ಕೈಲಿ ಬೆಣ್ಣೆ ಮುದ್ದೆ ಹಿಡ್ಕಂಡು ನಿಂದೊಂಡಿಪ್ಪ “ಬಾಲ ಗೋಪಾಲ ಕೃಷ್ಣನ” ಕಣ್ವಋಷಿ ಪ್ರತಿಷ್ಠಾಪನೆ ಮಾಡಿದ ಕಾರಣ “ಕಣ್ವಪುರ” “ಕಣಿಪುರ” “ಕಣ್ಯಾರ” ಹೆಸರುಗೊ. ದೇವರ ಪ್ರತಿಷ್ಠಾಪಿಸಿ, “ಕುಂಭಂ”ದ ಅಭಿಷೇಕ ಮಾಡಿ ಅಪ್ಪಗ ಆ ನೀರು ಅಕ್ಷಯ ಆಗಿ ಹರುದತ್ತಡ. ಹಾಂಗೆ “ಕುಂಭ ಹೊಳೆ” ಮತ್ತೆ “ಕುಂಬಳೆ” ಆಗಿಯೂ ಪ್ರಸಿದ್ದಿ. ಸೀಮೆಲಿ ಎಲ್ಲಿಯೇ ದನಗೊ ಕಂಜಿ ಹಾಕಲಿ, ಶುದ್ದ ಆದ ದಿನದ ಮದಲಾಣ ಕರವಿನ ಹಾಲಿನ ಶ್ರೀ ದೇವರಿಂಗೆ ಅರ್ಪಿಸಿಯೇ ಉಪಯೋಗಿಸುವದು ಭಕ್ತರು ನಂಬಿಗೊಂಡು ಬಂದ ಒಂದು ನಂಬಿಕೆ. ಸುರುವಾಣ ತುಪ್ಪವನ್ನೂ ದೇವರಿಂಗೆ ಸಮರ್ಪಿಸದ್ದರೆ ಸಮಾಧಾನ ಆಗ ಅವಕ್ಕೆ. ಹೀಂಗಿಪ್ಪ ಪುಣ್ಯ ಕ್ಷೇತ್ರ “ಕಣ್ಯಾರ” . ದೇವರ ಅಲಂಕಾರ ಮಾಡಿ, ಮಧ್ಯಾಹ್ನದ ಪೂಜೆ ನೋಡುವದೇ ಒಂದು ಚೆಂದ. ಹೇಂಗಿಪ್ಪವಕ್ಕೂ ಭಕ್ತಿ ತನ್ನಿಂತಾನೇ ಬಕ್ಕು. ಪೂಜೆ ಕಳುದು ಅವಲಕ್ಕಿ ಪ್ರಸಾದ ಕೊಡುಗು. ಅದರ ತಿಂದೊಂಡು ಬಪ್ಪಗ ಬಾಯಿ ಚೀಪೆ ಅಕ್ಕು, ಮನಸ್ಸು ಹಗೂರ ಅಕ್ಕು.
ಊರು ಹೇಳಿ ಅಪ್ಪಗ ಸುಭಗಂಗೊ ಮಾತ್ರ ಅಲ್ಲ, ಕಳ್ಳರೂ ಇರ್ತವಲ್ಲದ. ದೇವಸ್ಥಾನದ ಮೂಡ ಹೊಡೆಲಿ ಮೇಗಂಗೆ ಬಂದರೆ ಒಂದು ಹಳೇ ಮನೆಯ ಹಾಂಗೆ ಕಾಂಬದೇ, ಹಾಂಗಿಪ್ಪವರ ವಿಚಾರುಸುವ “ಪೋಲೀಸ್ ಸ್ಟೇಷನ್”. ದೂರಂದ ನೋಡಿ ಗೊಂತು. ಖಾಕಿ ಚೆಡ್ಡಿ ಹಾಕಿಂಡು, ಕೈಲಿ ಲಾಠಿ ಹಿಡ್ಕೊಂಡು, ಪೇಟೆಲಿ ತಿರುಗುವ ಪೋಲೀಸ್ ಗಳ ಕಂಡಿದೆ. ಹೆಚ್ಚು ವಿಷಯ ಗೊಂತಿಲ್ಲೆ. ನವಗೆ ಅಗತ್ಯವೂ ಇಲ್ಲೆ ಅಲ್ಲದಾ?. ಇದಕ್ಕೆ ತಾಗಿ ಇಪ್ಪದು “ರೇಷನ್” ಅಂಗಡಿ. ಕೇರಳಲ್ಲಿ ವಾರಕ್ಕೊಂದರಿ ಅಕ್ಕಿ, ಸಕ್ಕರೆ, ಗೋಧಿ ಎಲ್ಲ ಕೊಡುಗು. ಚಿಮಿಣಿ ಎಣ್ಣೆ ಮತ್ತೆ ಸಕ್ಕರೆ ಮಾತ್ರ ತಿಂಗಳಿಂಗೊಂದು ಸರ್ತಿ. ಓಣಮ್, ಕ್ರಿಸ್ಮಸ್, ಬಕ್ರಿದ್ ಹಬ್ಬಂಗೊಕ್ಕೆ ಹೆಚ್ಚು ಸಕ್ಕರೆ ಕೊಡುಗು. ಶನಿವಾರ ಆದಿತ್ಯವಾರ ಎಂಗೊಗೆ ಶಾಲೆಗೆ ರಜೆ. ರೇಷನಿಂಗೆ ಹೋಪಗ ಅಜ್ಜ ಎಂಗಳನ್ನೂ ಕರಕ್ಕೊಂಡು ಹೋಕು. ಕ್ಯೂ ವಿಲ್ಲಿ ನಿಂಬಲೆ ಜನ ಬೇಕಲ್ಲದ. ಅಷ್ಟು ಹೊತ್ತಿಲ್ಲಿ ಅವಕ್ಕೆ ಬೇರೆ ಕೆಲಸಂಗಳ ಮುಗಿಸಿಯೊಂಡು ಬಪ್ಪಲೆ ಆವುತ್ತಲ್ಲದ. ಅಂಬಗ ಈಗಾಣ ಹಾಂಗೆ ರಿಕ್ಷಾ ಆಗಲೀ ಬಸ್ ಆಗಲೀ ಸೌಕರ್ಯ ಇತ್ತಿದ್ದಿಲ್ಲೆ. ಸಣ್ಣ ಸಣ್ಣ ಕಟ್ಟ ಮಾಡಿ ಎಲ್ಲರೂ ಹೆಗಲಿಲ್ಲಿ ಏರಿಸಿಯೊಂಡು ಬಪ್ಪದು. ಅಜ್ಜ ಸುಮ್ಮನೆ ಕಟ್ಟ ಹೊರಿಸಿಯೊಂಡು ಬಾರವು. ಅಲ್ಲೇ ಹತ್ರೆ ಇಪ್ಪ “ಅಡಿಗಳ” ಹೋಟ್ಲಿಲ್ಲಿ ಕಾಫಿ ಕುಡುದು, ಬನ್ಸೋ, ಗೋಳಿ ಬಜೆಯೋ, ಬಿಸ್ಕುಟ್ ರೊಟ್ಟಿಯೋ ತಿಂದಿಕ್ಕಿಯೇ ಎಂಗಳ ಸವಾರಿ ಮನೆಗೆ ಬಪ್ಪದು. ಹಾಂಗೆ ಅಜ್ಜನ ಒಟ್ಟಿಂಗೆ ಹೋಪದು ಹೇಳಿರೆ ಎಂಗೊಗೂ ಖುಶಿ.
ಅದಾ ಒಂದು ಸರ್ತಿ ಬ್ಯಾರಿ ಚೆಕ್ಕನೊಟ್ಟಿಂಗೆ ನೀನು ಲಡಾಯ ಮಾಡಿ ಅದರ ದೂಡಿದ್ದು ಹೇಳಿ ಭಾವ ನೆಂಪು ಮಾಡಿದ. ಅಪ್ಪು ಮತ್ತೆ. ರೇಷನಿಂಗೆ ಕ್ಯೂ ವಿಲ್ಲಿ ಎಡೆಲಿ ಸೇರಿದರೆ ಆರಿಂಗಾರೂ ಪಿಸುರು ಬಾರದ್ದೆ ಇಕ್ಕ. ಅವರ ಹಣೆ ಬರಹವೇ ಅಷ್ಟು. ನೇರ್ಪಕೆ ಒಂದು ಸಾಲಿಲ್ಲಿ ನಿಂಬಲೆ, ಅವರ ಮಿಲಾದ್ ದಿನ ಚೆಂದಕೆ ಮೆರವಣಿಗೆ ಹೋಪಲೆ, ಅವಕ್ಕೆ ಅರಡಿಗೋ? ಕುರಿ ಹಿಂಡುಗೊ ಆದರೂ ಅದಕ್ಕಿಂತ ಲಾಯಿಕ್ಕಲ್ಲಿ ಹೋಕು.
ಅಡಿಗಳ ಹೋಟ್ಲಿನ ಹತ್ರ ಇಪ್ಪದು ಬೈಚ್ಚನ “ಆಯುರ್ವೇದ ಅಂಗಡಿ”. ಎಂಗೊಗೆ ಎಲ್ಲವೂ ಅಂಗಡಿಗಳೇ. “ಕ್ಲಿನಿಕ್” ಹೇಳಿ ಬೋರ್ಡ್ ಎಂತ ಇತ್ತಿದ್ದಿಲ್ಲೆ. ಎದುರು ದೊಡ್ಡ ದೊಡ್ಡ ಕುಪ್ಪಿಗಳಲ್ಲಿ ಅರಿಷ್ಟಂಗೊ, ಅಗಲ ಬಾಯಿಯ ಸಣ್ಣ ಸಣ್ಣ ಕುಪ್ಪಿಗಳಲ್ಲಿ ಮಾತ್ರೆಗೊ, ನಾರು, ಬೇರುಗೊ ಎಲ್ಲಾ ಇಕ್ಕು. ಅಜ್ಜ ಮದ್ದಿಂಗೆ ಅಲ್ಲಿಗೆ ಹೋಪದು ಹೇಳಿರೆ ಎಂತಾರೂ ಬೇನೆ ಎಣ್ಣೆಯೋ ಮಣ್ಣೊ ಬೇಕಾರೆ ಮಾತ್ರ. ಇಲ್ಲದ್ದರೆ ಅಜ್ಜಂಗೆ ಅಳಿಯ “ಬೆಜಪ್ಪೆ ಶ್ಯಾಮ ಡಾಕ್ಟ್ರ” ಮದ್ದೇ ನಾಟುಗಷ್ಟೆ, ಮತ್ತೆ ಅದರಲ್ಲೇ ವಿಶ್ವಾಸ. ಈ ಅಂಗಡಿಗೆ ತಾಗಿ ಇಪ್ಪದು ಬೈಚ್ಚನ ಮಗ, ನಾರಾಯಣನ ಪುಸ್ತಕದ ಅಂಗಡಿ. ಶಾಲೆಗೆ ಬೇಕಾದ ಟೆಕ್ಸ್ಟ್ ಪುಸ್ತಕವೋ,ನೋಟ್ ಪುಸ್ತಕವೋ, ಪೆನ್ನೋ, ಪೆನ್ಸಿಲೋ, ರಬ್ಬರೋ, ಅಡಿಕೋಲೋ (scale) ಎಲ್ಲಾ ಅಲ್ಲಿಯೇ ಸಿಕ್ಕುಗಷ್ಟೆ. ರಜೆ ಮುಗುದು ಶಾಲೆ ಸುರು ಅಪ್ಪಗ ಎಲ್ಲಾ ಲೀಸ್ಟ್ ಮಾಡಿ ಕೊಟ್ಟರೆ ರೆಡಿ ಮಾಡಿ ಬಿಲ್ಲ್ ಮಾಡಿ ಮಡುಗ್ಗು. ಬಿಲ್ಲಿಲ್ಲಿ ಎಂತಾರೂ ತಪ್ಪು ಆದರೆ ಅಜ್ಜ ತಿದ್ದುಗು, ಒಂದು ಸರ್ತಿ ಬಿಲ್ ಮಾಡುವಾಗ ಅದರ ತಪ್ಪಿಂದಾಗಿ ಪೈಸೆ ಕೊಟ್ಟದು ಕಮ್ಮಿ ಆಯಿದು ಹೇಳಿ ಮನೆಗೆ ಎತ್ತಿ ಅಪ್ಪಗ ಗೊಂತಾಗಿ ಮತ್ತೆ ಮರುದಿನ ನಮ್ಮ ಹತ್ರ ಅಜ್ಜ ಕೊಟ್ಟು ಕಳಿಸಿದ್ದಲ್ಲದ. ಭಾವ ಹೇಳುವಾಗ ಎನಗೂ ನೆಂಪು ಆತು. ಹಾಂಗಾಗಿ ಅದಕ್ಕೆ ಅಜ್ಜನ ಹತ್ರ ಭಾರೀ ವಿಶ್ವಾಸ. “ನಿಮ್ಮ ಅಜ್ಜ ಲೆಕ್ಕದಲ್ಲಿ ಪಕ್ಕಾ” ಹೇಳಿ ಸಿಕ್ಕಿಪ್ಪಗ ಎಲ್ಲ ಹೇಳುಗು.
ಈ ಅಂಗಡಿ ಮತ್ತೆ ಹೋಟ್ಲಿನ ಎಡೆಲಿ ಇಪ್ಪ ಒರುಂಕಿಲ್ಲಿ ಮೂಡಂತಾಗಿ ಹೋದರೆ, ಶಾಲೆಯ ಮೈದಾನ ಮತ್ತೆ ಗವರ್ಮೆಂಟ್ ಶಾಲೆ. ಗಾಂಧೀ ಅಜ್ಜ ಬಂದು ಭಾಷಣ ಮಾಡಿದ ಮೈದಾನ ಹೇಳಿ ಎಂಗಳ ಅಜ್ಜ ಹೇಳುಗು. ಗಾಂಧೀ ಮೈದಾನ- ಅದುವೇ ಎಂಗೊಗೆ ಆಡ್ಲೆ , ಡ್ರಿಲ್ಲ್ ಮಾಡ್ಳೆ, ಸ್ಪೋರ್ಟ್ಸ್ ಡೇ ದಿನ ಸುಣ್ಣಲ್ಲಿ ಲೈನ್ ಹಾಕಿ ಓಡ್ಲೆ ಇಪ್ಪ ಜಾಗೆ. ಶಾಲೆಲಿ ಒಂದನೇ ಕ್ಲಾಸಿಂದ ಸುರು ಆಗಿ ಹತ್ತನೇ ವರೆಗೆ ಕಲಿವಲೆ ಅಕ್ಕು. ಮಲಯಾಳಿಗೊಕ್ಕೆ ಬೇರೆ ಡಿವಿಶನ್ ಇತ್ತಿದ್ದು. ಎಂಗೊ ಹೋಪಗ, ಪ್ರತಿ ಕ್ಲಾಸಿಲ್ಲಿ ಅವಕ್ಕೆ ಒಂದೊಂದು ಡಿವಿಶನ್, ನವಗೆ ಎರಡು ಇಲ್ಲದ್ದರೆ ಮೂರು. ಈಗ ಅದು ಅತ್ತೆ ಇತ್ತೆ ಆಯಿದು ಹೇಳಿ ಮೊನ್ನೆ ರಮೇಶ ಭಾವ ಹೇಳಿದ. ಹೀಂಗೇ ಮುಂದೆ ಹೋದರೆ ಕನ್ನಡ ಡಿವಿಶನ್ ಗಳ ಮುಚ್ಚುವ ಪರಿಸ್ಥಿತಿ ಬಂದರೂ ಬಕ್ಕು.
ಬಸ್ ಸ್ಟೇಂಡ್ ಹೇಳಿ ಒಂದು ಸಣ್ಣ ಕಟ್ಟೋಣ. ಅದರಲ್ಲಿ ಟಿಕೆಟ್ ಕೊಡ್ಲೆ ಒಂದು ಕೌಂಟರ್. ಒಂದು ಮನುಷ್ಯ ಕೂದೊಂಡು ಇಕ್ಕು. ಬಸ್ ಗಳೂ ಅಷ್ಟೆ. ಕಾಸರಗೋಡಿಂಗೆ ಹೋಪ ಬಸ್ ಗೊ ಗಂಟೆಗೆ ಒಂದೊಂದು ಬಂದೊಂಡು ಇಕ್ಕು. ಅದೇ ಕಟ್ಟೋಣದ ಒಂದು ಭಾಗಲ್ಲಿ ಬೀಡಿ ಬ್ರಾಂಚ್. ಟಿಕೆಟ್ ಕೊಡುವ ಮನುಷ್ಯನೇ ಅಲ್ಲಿ ಬೀಡಿ ಎಲೆ, ಅದಕ್ಕೆ ಬೇಕಾದ ಹೊಗೆ ಸೊಪ್ಪು, ನೂಲು ಎಲ್ಲ ಕೊಡುವದರ ಒಟ್ಟಿಂಗೆ, ಕಟ್ಟಿ ತಂದ ಬೀಡಿಯ ಕಟ್ಟಂಗಳ ಲೆಕ್ಕ ಮಾಡುವದು,ಅವಕ್ಕೆ ಲೆಕ್ಕ ಮಾಡಿ ಪೈಸ ಕೊಡುವದು, ಕಟ್ಟಂಗಳ ಓವೆನ್ ಲ್ಲಿ ಮಡುಗಿ ಹೊಗೆ ಹಾಕುವದು ಎಲ್ಲಾ ಮಾಡಿಯೊಂಡು ಇಕ್ಕು. ಅದಕ್ಕೆ ಇಡೀ ದಿನ ಟಿಕೆಟ್ ಕೊಡುವಷ್ಟು ಕೆಲಸ ಎಂತ ಇಲ್ಲೆ ಅಲ್ಲದ. “ಕೃಷ್ಣ” ಬೀಡಿಯನ್ನೇ ಸೇದಿರಿ ಹೇಳಿ “ಗೋಪಾಲ ಕೃಷ್ಣ” ಟಾಕೀಸಿಲ್ಲಿ ಸ್ಲೈಡ್ ಕೂಡಾ ಹಾಕಿಸಿಯೊಂಡು ಇತ್ತಿದ್ದು. (“ಸಿಗರೇಟ್ ಸೇವನೆ ಆರೋಗ್ಯಕ್ಕೆ ಹಾನಿಕರ” ಹೇಳಿ ಇನ್ನೂ ಶಾಸನ ಬಾರದ್ದ ಸಮಯ. ಬೀಡಿ ಎಳದರೆ ಆರೋಗ್ಯಕ್ಕೆ ಹಾಳು ಹೇಳಿ ಎಲ್ಲಿಯೂ ಹೇಳಿದ್ದವಿಲ್ಲೆ ಹೇಳಿ ಎಂಗಳ ಅಪ್ಪಚ್ಚಿ ಬೀಡಿ ಎಳಕ್ಕೊಂಡು ಹೇಳುಗು). ಈ ಬೀಡಿ ವಿಷಯ ಬಪ್ಪಗ ಒಂದು ನೆಂಪಾತು. ಒಂದು ದಿನ ಬೀಜ ಕೊಯಿದಿಕ್ಕಿ ಬಪ್ಪಗ, ದಾರಿಲಿ ಒಂದು ಇಡೀ ಬೀಡಿ ಕಟ್ಟ ಬಿದ್ದು ಸಿಕ್ಕಿತ್ತು. ಬೀಡಿ ಕಟ್ಟ ಸಿಕ್ಕಿ ಅಪ್ಪಗ ಒಂದರಿ ಹೊಗೆ ಎಳದರೆ ಎಂತ ಹೇಳಿ ಭಾವನೂ ಭಾವನೂ ಮಾತಾಡಿಯೊಂಡೆಯೊ. ಮನೆಲಿ ಅಜ್ಜ ಆಗಲೀ ಮಾವಂದಿರಾಗಲೀ ಬೀಡಿ ಎಳೆಯವು ಮಾತ್ರ ಅಲ್ಲದ್ದೆ ಮಕ್ಕೊ ಬೀಡಿ ಎಳದ್ದು ಗೊಂತಾದರೆ ಬೆನ್ನ ಚೋಲಿ ಎಳಗು. ಹೀಂಗಿಪ್ಪ ವಿಷಯಂಗಳಲ್ಲಿ ಅಷ್ಟು ಶಿಸ್ತು. ಬೀಡಿ ಎಳವದು ಬಿಡಿ, ಅದು ಸಿಕ್ಕಿದ ವಿಷಯ ಹೇಳಲೂ ಎಂಗೊಗೆ ಧೈರ್ಯ ಇಲ್ಲೆ.
ಅಷ್ಟಪ್ಪಗ ನೀನಲ್ಲದ ಮೆಲ್ಲಂಗೆ ಅಜ್ಜಿಯ ಸೆರಗಿಲ್ಲಿ ಕೈ ಉದ್ದಿಯೊಂಡು ವಿಷಯ ಹೇಳಿ ಮರುದಿನ ಕೆಲಸಕ್ಕೆ ಬಪ್ಪ ಮಮ್ಮದೆಗೆ ಅಜ್ಜ ಆ ಬೀಡಿ ಕಟ್ಟ ಕೊಟ್ಟದು ಹೇಳಿ ಭಾವ ನೆಂಪು ಮಾಡಿದ. (ಎನ್ನದೊಂದು ಅಭ್ಯಾಸ, ಕೈ ತೊಳದಿಕ್ಕಿ ಚೆಂಡಿ ಉದ್ದಲೆ ಅಜ್ಜಿ ಸೆರಗೇ ಆಯೆಕ್ಕು. ಅಜ್ಜಿ ಎಲ್ಲಿ ಇದ್ದರೂ ಹುಡ್ಕಿಂಡು ಹೋಗಿ ಕೈ, ಮೋರೆ ಎಲ್ಲ ಉದ್ದದ್ದೆ ಇರೆ. ಹೈಸ್ಕೂಲಿಂಗೆ ಹೋಪ ವರೆಗೆ ಈ ಒಂದು ದುರಭ್ಯಾಸ ಇತ್ತಿದ್ದು)
ಬಸ್ ಸೇಂಡಿನ ಹಿಂದೆಯೇ “ಮರ್ತು ಭಟ್ಟನ ಹೋಟೆಲ್” ಮತ್ತೆ ಒಂದು ದೊಡ್ಡ ಬಾವಿ. ಇದೇ ಬಾವಿಂದ ಎಲ್ಲರೂ ನೀರು ಕೊಂಡೋಕು. ಈಗ ಈ ಬಾವಿ ಇಲ್ಲೆ. ಒಂದು ಬಾಯಿ ಬಾರದ್ದ, ಪ್ರಾಯದ ಮನುಷ್ಯ ಇದರಿಂದಲೇ ಹೋಟೆಲಿಂಗೆ ನೀರು ತಂದು ತುಂಬುಸುಗು. ಮಾರ್ಗದ ಆಚ ಕರೆಲಿ ಪೆರ್ಣೆಯ ಹೆಬ್ಬಾರನ “ಕೃಷ್ಣ ಭವನ” ಹೋಟೆಲ್. ರಜ ಸಮಯ ಮಧ್ಯಾಹ್ನದ ಊಟಕ್ಕೆ ಎಂಗೊ ಅಲ್ಲಿಗೆ ಹೋದ್ದು ಇದ್ದು.
ಶಾಲೆಲಿ ಸ್ವಾತಂತ್ರ್ಯ ದಿನ “ಲಾಡು” ಸಿಕ್ಕದ್ದೆ ನೀನು ಕೂಗಿಂಡು ಮನೆಗೆ ಬಂದಿಪ್ಪಗ ಅದರ ಮರುದಿನ ಅಜ್ಜ ಇದೇ ಹೋಟೆಲಿಂದ ಅಲ್ಲದ ಲಾಡು ತಂದು ಕೊಟ್ಟದು ಹೇಳಿ ಭಾವ ನೆಂಪು ಮಾಡಿದ. ಅಪ್ಪಲ್ಲದ, ಅದಾ ಪ್ರತಿ ಸೋಮವಾರ ಪಾಯಸ ಕೊಟ್ಟೊಂಡು ಇತ್ತಿದ್ದವಲ್ಲದ, ಅಂಬಗ ಒಂದು ಸೋಮವಾರ ಅವು ಕೊಡದ್ದಿಪ್ಪಗ ನೀನು ನೆಂಪು ಮಾಡಿ, ಕೇಳು ಕೇಳು ಹೇಳಿ ಎನ್ನ ಪುಸಲಾಯಿಸಿದ್ದು, ಮತ್ತೆ ಆನು ಕೇಳಿ ಅಪ್ಪಗ ಕೈ ತುಂಬಾ ಕಡ್ಲೆ ಮಿಠಾಯಿ ಕೊಟ್ಟದು,ಅದರ ತಿಂದೋಂಡು ಶಾಲೆಗೆ ಹೋದ್ದು ನೆಂಪಾತೋ? ಕೇಳಿದೆ ಅವಂಗೆ.
ಬಸ್ ಸ್ಟೇಂಡಿನ ಹತ್ರವೇ ಒಂದು ಗೋಳಿ ಮರ. ಅದರ ಕೆಳ ಒಂದು ಚಮ್ಮಾರ. ಅಳತೆ ಕೊಟ್ರೆ ಚರ್ಮದ ಜೋಡು ಹೊಲುದು ಕೊಡುಗು. ಪಕ್ಕಕ್ಕೆಲ್ಲ ಹಾಳಾಗ. ಹಳತ್ತರ ರೆಪೇರಿಯೂ ಮಾಡಿ ಕೊಡುಗು. “ಜರ್ಕಂ ಬರ್ಕಂ” ಹೇಳಿ ಶಬ್ದ ಮಾಡುವ ಹಾಂಗಿಪ್ಪ ಮೆಟ್ಟಿನ ಜೋಡು ಹಾಕಿಂಡು ಬಂಬ್ರಾಣದ ಬಂಟ್ರುಗೊ ಪೇಟೆಲಿ ಅತ್ತಿಂದಿತ್ತ ನಡಕ್ಕೊಂಡು ಕಾರ್ಬಾರ್ ಮಾಡುಗು. ಈಗಾಣ ಹಾಂಗೆ ಮೆಟ್ಟಿನ ಅಂಗಡಿ ಬೇಕಾರೆ ಕಾಸ್ರೋಡಿಂಗೇ ಹೋಯೆಕ್ಕಷ್ಟೆ. ಮಕ್ಕೊ ಎಲ್ಲಾ ಶಾಲೆಗೆ ಹೋಪಗ ಬರೀ ಕಾಲಿಲ್ಲಿಯೇ ಹೋಯೆಕಷ್ಟೆ. ಮನೆಗೆ ನೆಡಕ್ಕೊಂಡು ಬಪ್ಪಗ ಕಲ್ಲು ಡಂಕಿಸಿಯೊಂಡು ರಜ ರಜ ನೆತ್ತರು ಹರಿಸಿಂಡು ಬಪ್ಪದು ಎಲ್ಲ ಮಾಮೂಲಿ (ಮಾರ್ಗಕ್ಕೆ ಡಾಮರು ಇತ್ತಿದ್ದಿಲ್ಲೆ. ಎಡೆಲಿ ಎಡೆಲಿ ಕೊಟ್ಟೆ ಕಲ್ಲು ಇಕ್ಕು.)
ಕೆಳಾಣ ಪೇಟೆಲಿ (ಕೆಳಾಣ ಪೇಟೆ ಹೆಳಿದ ಕೂಡ್ಲೇ ದೊಡ್ಡ ಪೇಟೆ ಹೇಳಿ ಜಾನ್ಸೆಡಿ. ಒಂದು ಕಾರ್ ಹೋವುತ್ತಷ್ಟು ಅಗಲದ ಮಾರ್ಗ, ಅದರ ಎರಡು ಹೊಡೆಲಿ ಅಂಗಡಿಗೊ ಅಷ್ಟೆ.) ನರಸಿಂಹನ ಜವುಳಿ ಅಂಗಡಿ, ಕುಙಿ ರಾಮನ ಜವುಳಿ ಅಂಗಡಿ, ಮಂಜು ಮಾಷ್ಟ್ರ ಚಾ ಹೊಡಿ, ಹೊಗೆಸೊಪ್ಪು ಮಾರುವ ಅಂಗಡಿ, ಹೊಡಿ ಭಟ್ಟನ ಅಂಗಡಿ, ಜೋಷಿಯ ಆಯುರ್ವೇದ ಶಾಪ್, ದಾಸ್ ನಾಯಕ ನ ದಿನಸಿ ಅಂಗಡಿ, ಶೆಟ್ಟಿ ಅಂಗಡಿ ಎಲ್ಲ ಇದೇ ಪೇಟೆಲಿ ಇಪ್ಪದು. ಹಾಂಗೆ ಮುಖ್ಯ ಪೇಟೆ ಹೇಳಿರೆ ಇದುವೇ. ಅಂಬಗಾಣ ಬಿಸಿನೆಸ್ ಸೆಂಟರ್. ಅಜ್ಜನೂ ಕುಙಿ ರಾಮನೂ ಒಟ್ಟಿಂಗೆ ಓದಿದವಡ. ಹಾಂಗೆ ಜವುಳಿ ಎಲ್ಲ ಅಲ್ಲಿಂದಲೇ. ದೊಡ್ಡ ಜೆಂಬಾರಂಗೊಕ್ಕೆ ಆದರೆ ಕಾಸ್ರೋಡಿನ “ಕಣ್ಣ” ನಲ್ಲಿಂದ. ದಾಸ್ ನಾಯಕ ಹೇಳಿರೆ ಅಜ್ಜಂಗೆ ಒಂದು ವಿಶ್ವಾಸದ ಜೆನ. ಎಂತ ದಿನಸಿ ಸಾಮಾನು ಬೇಕಾರೂ ಅಲ್ಲಿಂದಲೇ. ಅಲ್ಲಿ ಒಂದು ಲೆಕ್ಕ ಪುಸ್ತಕ. ಸೊಲುದ ಅಡಕ್ಕೆ ಕೂಡಾ ಅಜ್ಜ ಅವರ ಮೂಲಕವೇ ಮಂಗಳೂರಿಂಗೆ ಕಳುಸುಗು, ಅದುವೇ ಹೋಗಿ ಪೈಸ ಲೆಕ್ಕ ಮಾಡಿ ಪುಸ್ತಕಲ್ಲಿ ಬರಗು. ದಿನಸಿ ಸಾಮಾನಿನೊಟ್ಟಿಂಗೆ ಬಾರ್ ಸೋಪ್ ಕೂಡಾ ಅಲ್ಲಿ ಸಿಕ್ಕುಗು. ಮಾವಂಗೆ “ಫೋರ್ಹಾನ್ಸ್ ಪೇಸ್ಟ್, “ಹಮಾಮ್” ಸಾಬೂನು, “ಎವರೆಡಿ” ಟೋರ್ಚ್, ಬ್ಯಾಟರಿ, ಬಿಳಿ ವಸ್ತ್ರಕ್ಕೆ ಹಾಕುವ “ಟಿನೋಪಾಲ್” ಬೇಕಾರೆ ಶೆಟ್ಟಿ ಅಂಗಡಿ. ಈಗಾಣ ಹಾಂಗೆ ನೂರಾರು ನಮೂನೆಯ ಸೋಪ್ ಪೇಸ್ಟ್ ಇಲ್ಲೆ. ಮೀತ್ತ ಸಾಬೂನ್ ಹೇಳಿರೆ “ಹಮಾಮ್” ಇಲ್ಲದ್ದರೆ “ಲೈಫ್ ಬೋಯ್”, ಪೇಸ್ಟ್ ಹೇಳಿರೆ “ಕೋಲ್ಗೇಟ್”, “ಫೋರ್ಹಾನ್ಸ್” ಇಲ್ಲದ್ದರೆ “ನೀಮ್” ಅಷ್ಟೆ. ಜಾತ್ರೆ ಸಮಯಲ್ಲಿ ಖರ್ಜೂರ ಕೂಡಾ ಅಲ್ಲಿ ಸಿಕ್ಕುಗು.
ಬಸ್ ಸ್ಟೇಂಡಿನ ಎದುರು “ಎಲ್ಲೆಸ್ ಪ್ರಭು”ವಿನ ದಿನಸಿ ಅಂಗಡಿ, ಅದರ ಎದುರು ಎರಡು ಬಾಡಿಗೆ ಕಾರು ನಿಂದೊಂಡು ಇಕ್ಕು, ಒಂದು ಶೆಟ್ಟಿಗೆದ್ದೆ ಐತ್ತಪ್ಪ ನದ್ದು, ಇನ್ನೊಂದು ಒಂದು ಬ್ಯಾರಿದು, ಹೆಸರು ನೆಂಪು ಬತ್ತಿಲ್ಲೆ. ಎರಡು ಜೋಡೆತ್ತಿನ ಗಾಡಿ, ಒಂದು ಗಾಡಿ ಕುಂಟಗರಡ್ಕ “ಗಾಡಿ ನಾರಾಯಣ”ನದ್ದು, ಇನ್ನೊಂದು ಬ್ಯಾರಿದು. ಅಂಗಡಿಯ ಹಿಂದೆಯೇ ಗೋಪಾಲ ನಾಯಕನ “ಗೋಪಾಲ ಕೃಷ್ಣ” ಮಿಲ್ಲ್. ಗೋಧಿ, ಅಕ್ಕಿ, ಮೆಣಸು ಎಲ್ಲಾ ಹೊಡಿ ಮಾಡ್ಲೆ, ತೆಂಗಿನ ಕೊಪ್ರಂದ ಎಣ್ಣೆ ತೆಗವಲೆ ಎಲ್ಲಾ ಅಲ್ಲಿಗೇ ಹೋಯೆಕ್ಕು. ರೇಷನ್ ಗೋಧಿಯ ಅಲ್ಲಿ ಕೇರಿ ಸಜ್ಜಿ ಮಾಡಿಸಿ ಹೊಡಿ ಮಾಡ್ಸಿ ಮನೆಗೆ ಕೊಂಡು ಹೋಪದು (ಸಜ್ಜಿ ಮಾಡಿ ಕೊಡ್ಲೆ ಹೆಣ್ಣುಗೊ ಇತ್ತಿದ್ದವು). ಅದರ ಸೈಡಿಲ್ಲಿ ಒಂದು ಎಣ್ಣೆ ತೆಗೆತ್ತ ಗಾಣ ಇತ್ತಿದ್ದು. ಎತ್ತಿನ ಕಟ್ಟಿ ಗಾಣಲ್ಲಿ ಎಣ್ಣೆ ತೆಗಕೊಂಡು ಇತ್ತಿದ್ದಡ. ಮಿಲ್ಲ್ ಬಂದ ಮತ್ತೆ ಜೆನಂಗೊ ಗಾಣಕ್ಕೆ ಹೋಪದು ಬಿಟ್ಟು ಅದು ಬಾಗಿಲು ಹಾಕಿತ್ತು.
ಮಿಲ್ಲಿನ ಎದುರು, ಮಾರ್ಗದ ಇನ್ನೊಂದು ಹೊಡೆಲಿ ಕೊಗ್ಗ ಭಂಡಾರಿಯ ಸೆಲೂನ್. ಎರಡು ಮರದ ಕುರ್ಚಿ, ರಜ ದೊಡ್ಡ ಕಾಲಿನದ್ದು, ಕುಚ್ಚಿ ತೆಗವಗ ಕೂಬಲೆ ಇಪ್ಪದು. ಈಗಾಣ ತಿರುಗುವ, ಬೇಕಾದ ಎತ್ತರಕ್ಕೆ ಸರಿ ಹೊಂದುಸುವ ಹಾಂಗೆಲ್ಲ ಇಪ್ಪದು ಅಲ್ಲ. ಹೆರ ಒಂದು ಬೆಂಚು, ಕಾಯಿತ್ತವಕ್ಕೆ ಕೂಬಲೆ ಮತ್ತೆ “ನವಭಾರತ” ಪೇಪರ್ ಓದ್ಲೆ ಬೇಕಾಗಿಯೇ ಬಂದು ಓದುವವಕ್ಕೆ. ಪೇಪರ್ ಮನೆ ಮನೆಗೆ ಬಪ್ಪ ಕಾಲ ಅಲ್ಲ. ಪೇಪರ್ ಬೇಕಾರೆ ಕುಂಬಳೆಗೆ ನಿತ್ಯಾ ಹೋಗಿ ತರೆಕಷ್ಟೆ. ಅದೂದೆ ಮಧ್ಯಾಹ್ನಂದ ಮದಲೇ ಸಿಕ್ಕ. ಮಂಗಳೂರಿಂದ ರೈಲಿಲ್ಲಿ ಬಂದು ಬಟ್ವಾಡೆ ಆಯೆಕ್ಕು. ಕುಚ್ಚಿ ತೆಗೆಶೆಕ್ಕಾರೆ ಕೊಗ್ಗುವಿನಲ್ಲಿಗೇ ಹೋಯೆಕ್ಕಷ್ಟೆ. ಅಜ್ಜಂಗೆ ವಾರಕ್ಕೊಂದರಿ ಗಡ್ಡ ತೆಗವಲೆ ಅಲ್ಲಿಗೆ ಹೋದರೆ, ಊರವರ ಸುದ್ದಿ ಎಲ್ಲಾ ಸಿಕ್ಕುಗು. ಎಂಗಳೂ ತಿಂಗಳಿಂಗೆ ಒಂದರಿ ಆದರೂ ಅಜ್ಜನ ಒಟ್ಟಿಂಗೆ ಹೋಪೆಯೊ. ತಲೆಲಿ ಕತ್ತರಿ ಓಡುಸುವದರೊಟ್ಟಿಂಗೆ ಮಲಯಾಳಲ್ಲಿ ಸುದ್ದಿ ಎಲ್ಲಾ ಹೇಳುಗು. ಎಂಗೊಗೆ ರೆಜ ರೆಜ ಅರ್ಥ ಅಕ್ಕಷ್ಟೆ. ಪೇಪರ್ ಓದ್ಲೆ ಬಂದವು ಕೂಡಾ ಸುದ್ದಿ ಕೇಳುಗು ಮತ್ತೆ ಅವಕ್ಕೆ ಗೊಂತಿಪ್ಪದರ ಹೇಳುಗು. ಹಾಂಗಾಗಿ ಅದು ಬರೇ ಸೆಲೂನ್ ಮಾತ್ರ ಅಲ್ಲ ಸುದ್ದಿಯ “ಭಂಡಾರ” ಕೂಡಾ. ಕೊಗ್ಗುವಿನ “ಅಂಗಡಿ” ಹೇಳಿ ಎಂಗ ಹೇಳಿರೆ, “ಭಂಡ ಸಾಲೆ” ಹೇಳಿ ಅಜ್ಜ ನೆಗೆ ಮಾಡುಗು. ಅದರ ಮನೆ ಎಂಗಳ ಶಾಲೆ ಹತ್ರ. ಅಲ್ಲಿಯೂ ಅಷ್ಟೆ, ಮಕ್ಕೊಗೆ ಬುತ್ತಿ ಪಾತ್ರೆ ಮಡುಗಲೆ ಒಂದು ಬೇರೆ ಕೋಣೆ, ಕೈ ತೊಳವಲೆ, ಬುತ್ತಿ ಪಾತ್ರೆ ತೊಳವಲೆ ನೀರಿನ ವ್ಯವಸ್ಥೆ ಎಲ್ಲಾ ಮಾಡಿ ಕೊಡುಗು. ಎಲ್ಲಾ ವ್ಯವಹಾರಂಗಳೂ ವಿಶ್ವಾಸಲ್ಲಿ ನಡಕ್ಕೊಂಡು ಇತ್ತಿದ್ದು. ವಿಷು ಕಣಿಗೆ, ಕೊಗ್ಗು ಅಜ್ಜನ ಮನೆಗೆ ಬಕ್ಕು. ಅದಕ್ಕೆ ವಿಶೇಷ ಮರ್ಯಾದೆ ಆಗಿ 50 ಹಣ್ಣಡಕ್ಕೆಯೂ 5 ತೆಂಗಿನ ಕಾಯಿಯೂ ಕೊಡುಗು. ಸಣ್ಣ ಭಾವಂದಿರ ಚೌಳಕ್ಕೆ ಮನೆಗೆ ಬಂದು ಅದರ ಕ್ರಮ ಮಾಡಿ ವಸ್ತ್ರ, ಅಕ್ಕಿ,ಕಾಯಿ ಪೈಸ ಎಲ್ಲ ಕೊಂಡು ಹೋಕು. ಅಜ್ಜಂಗೆ ಸೌಖ್ಯ ಇಲ್ಲದಿಪ್ಪಗ ಮನೆಗೆ ಬಂದು ಕ್ಷೌರವೂ ಮಾಡುಗು. ಹಾಂಗಿಪ್ಪ ಒಂದು ಅವಿನಾವ ಭಾವ ಸಂಬಂಧ.
ಊಟಕ್ಕೆ ಬನ್ನಿ ಹೇಳಿ ಆಗಂದಳೇ ಹೇಳ್ತಾ ಇದ್ದೆ, ನಿಂಗೊಗೆ ಕೇಳ್ತೇ ಇಲ್ಲೆ ಹೇಳಿ ಹೆಂಡತಿ ಆಕ್ಷೇಪ ಎತ್ತಿತ್ತು. ನಿಂಗೊಗೆ ಮಾತಾಡಿ ಮುಗಿಯದ್ರೆ ಉಂಡಿಕ್ಕಿ ಮಾತಾಡಿ ಹೇಳಿ ಸಲಹೆಯೂ ಬಂತು.
ಎನಗೆ ಉಂಡ ಕೂಡ್ಲೇ ಹೋಯೆಕ್ಕು, ಮತ್ತೆ ಮಾತಡ್ಲೆ ಪುರುಸೊತ್ತು ಇಲ್ಲೆ. ಬಪ್ಪ ವಾರ ಕಣ್ಯಾರಲ್ಲಿ ರಂಗ ಪೂಜೆ ಇದ್ದಲ್ಲದ, ಅಂಬಗ ಕಾರಿಲ್ಲಿ ಮಾತಾಡಿಂಡು ಹೋಪಲೆ ಅಕ್ಕು ಹೇಳಿದ ಭಾವ. ನೀನು ಡ್ರೈವ್ ಮಾಡುವದಾರೆ ಎಲ್ಲಿ ಮಾತಾಡ್ಲೆ ಬಿಡ್ತೆ? ಆನು ಕಾರ್ ತೆಕ್ಕೊಂಡು ಬತ್ತೆ, ಒಟ್ಟಿಂಗೆ ಮಾತಾಡಿಂಡು ಹೋಪ ಹೇಳಿದೆ. ಅವನೂ ಒಪ್ಪಿದ.
—————————————————————————-
ನಾರಾಯಣನ ಜೋಡೆತ್ತಿನ ಗಾಡಿಲಿ ಶಾಲೆಂದ ಮನೆಗೆ ಬಂದದು ನೆಂಪು ಬತ್ತೋ? ಕೇಳಿದೆ. ನಿನಗೆ ಎಂತ ಈಗ ನೆಂಪು ಆದ್ದು? ಕೇಳಿದ ಭಾವ. ಅಲ್ಲ ಈ ಮಾರ್ಗಲ್ಲಿ ಕಾರಿಲ್ಲಿ ಹೋಪಗ ಗಾಡಿಯೂ ನೆಂಪು ಅಕ್ಕು, ದೋಣಿಯೂ ನೆಂಪು ಅಕ್ಕು, ಅಷ್ಟು ಎತ್ತಿ ಎತ್ತಿ ಹಾಕುತ್ತು, ದೋಣಿ ಒಚ್ಚಿದ ಹಾಂಗೆ ಒಚ್ಚುತ್ತೂದೆ.
ಅದು ಜೋಡೆತ್ತಿನ ಗಾಡಿ. ಎರಡು ಹೊಡೆಲಿ ಬೆಳೀ ಬಣ್ಣದ ,ಒಳ್ಳೆ ಎತ್ತರದ ಎತ್ತುಗೊ. ಕೊಂಬು ನೋಡಿರೇ ಹೆದರಿಕೆ ಅಕ್ಕು, ಅಷ್ಟು ದೊಡ್ಡ ಚೂಪಾದ ಕೊಂಬುಗೊ. ಲಾಯಿಕಲ್ಲಿ ಕೆರಸಿ ಪೋಲಿಶ್ ಮಾಡಿದ ಹಾಂಗೆ ಇಕ್ಕು. ಕೊರಳಿಲ್ಲಿ ಸಣ್ಣ ಮಣಿ ಗಂಟೆ. ಗಾಡಿ ಹೋಪಗ “ಕಿಣಿ ಕಿಣಿ” ಶಬ್ದ ಮಾಡುಗು. ಈಗಾಣ ವಾಹನಂಗೊಕ್ಕೆ ಇಪ್ಪ ಹಾಂಗೆ “ಹಾರ್ನ್“ ಇಲ್ಲೆ ಅದ. ನಾರಾಯಣನ ಕೈಲಿ ಒಂದು ಚಾಟಿ. ಕೆಲಾವು ಸರ್ತಿ ಅಂಬ್ರೆಪ್ಪು ಆದರೆ ಮೆಲ್ಲಂಗೆ ಎತ್ತುಗೊಕ್ಕೆ ಅದರ ಬೀಸುಗು. ಬರೀ ಪಾಪದ ಎತ್ತುಗೊ. ಇಲ್ಲದ್ದರೆ ಸಾಮಾನುಗಳ ಎಳಕ್ಕೊಂಡು, ಪೆಟ್ಟು ತಿಂದೊಂಡು, ತಳೀಯದ್ದೆ ಹೋಕೋ?. ಗಾಡಿಯ ಕೆಳಾಂಗೆ ಒಂದು ಲಾಟಾನು ನೇಲಿಸಿಯೊಂಡು ಇಕ್ಕು. ಇರುಳು ಹೋಯೆಕ್ಕಾರೆ ಬೇಕಲ್ಲದ. ತಲೆ ಹೊರೆಲಿ ತಪ್ಪದರಿಂದ ಹೆಚ್ಚಿನ ಸಾಮಾನು ಇದ್ದರೆ ಗಾಡಿಯೇ ಆಯೆಕ್ಕಷ್ಟೆ. ದಾರಿಲಿ ಶಾಲೆ ಮಕ್ಕೊ ಸಿಕಿದರೆ ಅವರ ಹತ್ತಿಸಿಯೊಂಡು ಬಕ್ಕು (ಸಾಮಾನು ಹೆಚ್ಚು ಎಂತ ಇಲ್ಲದ್ದರೆ). ಗಾಡಿ ಹೋಪಗ ರಜ ಅತ್ತ ಇತ್ತ ಮಾಲದ್ದೆ ಇರ. ಮಾರ್ಗವೂ ಹಾಂಗೇ ಇತ್ತಿದ್ದು. ಮಕ್ಕೊಗೆ ಒಂದು ಕೊಶಿ ಅದರಲ್ಲಿ ಒಚ್ಚಿಂಡು ಹೋಪಲೆ.
ಇನ್ನೊಂದು ಜೋಡೆತ್ತಿನ ಗಾಡಿ ಹೆಚ್ಚು ಉಪಯೋಗ ಆಗಿಂಡು ಇತ್ತಿದ್ದು “ಸಿನೆಮಾ ಟಾಕೀಸ್” ನವಕ್ಕೆ. ಅವಕ್ಕೆ ಹೊಸ ಸಿನೆಮಾ ಬಂದಪ್ಪಗ ಪ್ರಚಾರಕ್ಕೆ ಗಾಡಿ ಆಯೆಕ್ಕಷ್ಟೆ. ಗಾಡಿಯ ಎರಡೂ ಹೊಡೆಲಿ ಸಿನೆಮಾದ ಪೋಸ್ಟರ್ ಕಟ್ಟಿ, ನೋಟೀಸ್ ನ ದಾರಿಲಿ ಇಡೀ ಬಿಕ್ಕಿಂಡು, ಮೈಕಲ್ಲಿ ಬೊಬ್ಬೆ ಹೊಡಕ್ಕೊಂಡು ಹೋಕು. ಶಾಲೆಂದ ಬಪ್ಪಗ ಆ ನೋಟೀಸಿನ ಇಡುಕ್ಕುತ್ತರ ಹಿಂದೆ ಓಡಿಂಡು ಹೆರ್ಕುತ್ತ ಗೌಜಿ. ಸಿನೆಮಾದ ಕತೆ, ನಾಯಕ, ನಾಯಕಿ ಆರು ಎಲ್ಲ ವಿವರ ಅದರಲ್ಲಿ ಇಕ್ಕು. ದಿನ ನಿತ್ಯ ಎರಡು ಶೋ ಆದರೆ ಶನಿವಾರ ಮತ್ತೆ ಆದಿತ್ಯವಾರ ಮಧ್ಯಾನ್ಹ “ಮೇಟಿನಿ” ಶೋ ಮಡುಗ್ಗು. ಮುಳಿ ಮಾಡಿನ ಕಟ್ಟೋಣದ ಮಾಡಿನ ಮೇಗೆ ಊರಿಡೀ ಕೇಳಲೆ ಎರಡು ಮೈಕ. “ನಮೋ ವೆಂಕಟೇಶಾ.. ನಮೋ ತಿರುಮಲೇಶಾ”..ಹೇಳಿ ಹೊತ್ತೋಪಗ ಪದ್ಯ ಹಾಕಿರೆ, ಟಿಕೆಟ್ ಕೊಡ್ಲೆ ಸುರು ಮಾಡಿದವು ಹೇಳಿ ಲೆಕ್ಕ. ಮತ್ತೆ ಸಾಲಾಗಿ ತಮಿಳು, ಮಲಯಾಳ ಪದ್ಯಂಗಳೋ ಹಾಕಿಂಡು ಇಕ್ಕು. ಒಳದಿಕೆ, ಪರದೆಯ ಹತ್ತರೆ ಕೂಡು ನೋಡಲೆ ಹೊಯಿಗೆ ಹಾಕಿದ ನೆಲ, ಅದರ ಹಿಂದೆ ಸಾಲಾಗಿ ಮರದ ಬೆಂಚುಗೊ, ಅದರ ಹಿಂದೆ ಕೆಲವು ಸಾಲು ಮರದ ಕುರ್ಚಿಗೊ. ಒಳದಿಕಿ ಬೀಡಿ ಎಳಕ್ಕೊಂಡು ಕೆಲವು ಜೆನಂಗೊ ಇಕ್ಕು. ಸಿನೆಮಾದ ರೀಲಿಂದ ಪರದೆಗೆ ಬಪ್ಪ ಬೆಣಚ್ಚಿ, ಬೀಡಿಯ ಹೊಗೆಲಿ ಸರಿಯಾಗಿ ಕಾಂಗು. ಒಂದು ಸಿನೆಮಾಕ್ಕೆ ಒಂದೇ “ಇಂಟರ್ವಲ್” ಅಲ್ಲ. ಕೆಲವು ಸರ್ತಿ ಐದೋ, ಆರೋ ಅಕ್ಕು. ಅಷ್ಟಪ್ಪಗ ಕೆಲವು ಜನಂಗೊ ಹೆರ ಹೋಗಿ ಇನ್ನೊಂದು ಬೀಡಿ ಎಳದು, “ಗೋಳಿ ಸೋಡಾ” ಮಣ್ಣ ಕುಡುದಿಕ್ಕಿ ಬಕ್ಕು. ಎಂಗೊಗೆ ಎದುರು ಕೂದು ನೋಡ್ಲೆ ಇಷ್ಟ. ಹತ್ತರಂದ ಕಾಣುತ್ತು ಹೇಳಿ. ಕಣ್ಣು ಹಾಳಕ್ಕು ಹೇಳಿ ಅಜ್ಜನ ಉಪದೇಶ. ಹಾಂಗೆ ತಿಂಗಳಿಂಗೆ ಒಂದರಿ ಮಣ್ಣೊ, ಕನ್ನಡ ಸಿನೆಮಾ ಬಂದಿಪ್ಪಗ, ಬೆಂಚಿಲ್ಲಿ ಕೂದು ನೋಡಿಕ್ಕಿ ಬಪ್ಪೆಯೊ. ನೆಲಕ್ಕಲ್ಲಿ ಕೂರುತ್ತವಕ್ಕೆ 25 ಪೈಸ ಆದರೆ ಬೆಂಚಿನವಕ್ಕೆ 50, ಮತ್ತೆ ಕುರ್ಚಿಯವಕ್ಕೆ 1 ರೂಪಾಯಿ ಹೇಳಿ ಎನ್ನ ನೆಂಪು. ಮನೆಗೆ ಬಂದಿಕ್ಕಿ, ಸಿನೆಮಾದ ಕಥೆಯ ವಿವರುಸಲೆ ಇದ್ದು. ಆ ಕೆಲಸ ಎನಗೇ ಇಪ್ಪದು. ಟಾಕೀಸಿನ ಹೆರ ಬಿದ್ದೊಂಡು ಇಪ್ಪ ರೀಲಿನ ತುಂಡಿನ ಹೆರ್ಕಿ ತಪ್ಪದು, ಭೂತ ಕನ್ನಡಿ ಎದುರು ಅದರ ಹಿಡುದು, ಕನ್ನಾಟಿಲಿ ಸೂರ್ಯನ ಬೆಣಚ್ಚಿ ಹಾಕಿ, ಗೋಡೆಲಿ ಚಿತ್ರವ ದೊಡ್ಡಕೆ ಬಪ್ಪ ಹಾಂಗೆ ಮಾಡಿ ಮನೆಯವಕ್ಕೆ ತೋರುಸುವದು ಎಲ್ಲ ಕೊಶಿಯೋ ಕೊಶಿ. ಭೂತ ಕನ್ನಡಿ ಹಿಡಿವಲೆ ಒಬ್ಬ, ಬೆಣಚ್ಚಿಗೆ ಇಪ್ಪ ಕನ್ನಾಟಿಯ ಹಿಡಿವಲೆ ಇನ್ನೊಬ್ಬ, ಬಿಳಿ ವಸ್ತ್ರವ ಹಿಡಿವಲೆ ಇನ್ನಿಬ್ರು, ಕನ್ನಾಟಿ ಬೆಶಿಲಿಂಗೆ ಹಿಡುದು ಹಾಳು ಮಾಡೆಡಿ ಹೇಳಿ ಅತ್ತೆಯಕ್ಕಳ ಗೌಜಿ. ಎಲ್ಲಾ ಸೇರಿ ಗೌಜಿಯೋ ಗೌಜಿ.
ಗಾಡಿ ನಾರಾಯಣ ಮಾತ್ರ ಅಲ್ಲ. ಕಾರಿನ ಐತ್ತಪ್ಪನೂದೆ, ಕಾರು ಖಾಲಿ ಇದ್ದರೆ ಶಾಲೆ ಮಕ್ಕಳ ಕೂರಿಸಿಂಡು ಬಕ್ಕು. ಐತ್ತಪ್ಪನ ಅಂಬಾಸಡರ್ ಕಾರ್ ಕಂಡರೆ ಎಂಗೊಗೂ ಒಂದು ಆಶೆ. ಕೂರಿಸಿಂಡು ಹೋದರೆ ನೆಡೆವ ಕೆಲಸ ಇಲ್ಲೆ ಅನ್ನೆ ಮತ್ತೆ ಬೇಗ ಮನೆಗೆ ಎತ್ತಲೆ ಆವುತ್ತನ್ನೆ ಹೇಳಿ. ಅದು, ಎಂಗಳ ಎಂತಾರೂ ಮಾತಾಡಿಸಿಂಡೇ ಬಕ್ಕು, ಸುಮ್ಮನೆ ಗುಮ್ಮನ ಹಾಂಗೆ ಕೂರ. ಅದು ಸ್ಟೇರಿಂಗಿನ ತಿರುಗುಸುವದು, ಗೇರ್ ಹಾಕುವದು ಎಲ್ಲವನ್ನೂ ಗಮನ ಕೊಟ್ಟು ನೋಡುವೆಯೊ. ಮನೆಲಿ ಹೋಗಿ ಹಾಂಗೇ ಕಾರ್ ಓಡುಸುಗೂದೆ. ಮಕ್ಕಳ ಕೊಶಿ ನೋಡಿಯೇ ಅವಕ್ಕೆ ಕೊಶೀ ಅಪ್ಪದು. ಈಗಾಣ ಮಕ್ಕಳ ಹಾಂಗೆ ಮುಟ್ಟಿದ್ದಕ್ಕೆ ಕಿಟ್ಟಿದ್ದಕ್ಕೆ ಎಲ್ಲ ಥಾಂಕ್ಸ್ ಹೇಳ್ಲೆ ಎಂಗೊಗೆ ಕಲಿಸಿದ್ದವಿಲ್ಲೆ ಅದ. ಅವೂದೆ ಅದರ ನಿರೀಕ್ಷೆಲಿ ಇತ್ತಿದ್ದವಿಲ್ಲೆ ಅಲ್ಲದ. ಇಳುದಿಕ್ಕಿ ಹೋಪಗ ಒಂದು ಆತ್ಮೀಯ ನೆಗೆ ಅಷ್ಟೆ.
ರಜಾ ದೂರದ ಊರಿಂಗೆ ಹೋಯೆಕ್ಕಾರೆ ಬಸ್ ಲ್ಲಿ ಹೋಪದು. ಉದೀಯಪ್ಪಗ 6 ಘಂಟೆಗೆ ಪುತೂರಿಂಗೆ ಹೋಪ CPC ಬಸ್ ಮತ್ತೆ ಕತ್ತಲಪ್ಪಗ 6 ಘಂಟೆಗೆ ವಾಪಸ್ ಬಕ್ಕು. ಬಹುಶಃ ಅದು ಮಂಗಳೂರಿಂಗೆ ವರೆಗೆ ಹೋಗಿ ಬಂದೊಂಡು ಇತ್ತಿದ್ದು. ಇನ್ನೊಂದು ಅಡ್ಕಸ್ಥಳ KBT ಬಸ್, ದಿನಕ್ಕೆ ಎರಡು ಸರ್ವೀಸ್ ಮಾಡುಗು. ಈ ಎರಡು ಬಸ್ಸನ್ನೇ ನಂಬಿಂಡು ಪ್ರಯಾಣ ಮಾಡೆಕ್ಕಷ್ಟೆ. ಸಾಧಾರಣ 32 ಸೀಟಿನ ಸಣ್ಣ ಬಸ್. ಈ KBT ಬಸ್ ಲ್ಲಿ ಒಂದು ’ ಡೈಬರ್” (ಊರವು ಹಾಂಗೇ ಹೇಳುವದು ಡ್ರೈವರ್ ನ) ಖಾಕಿ ಅಂಗಿಯೂ ಖಾಕಿ ಚೆಡ್ಡಿಯೂ ಹಾಕಿಂಡು ಎಲೆ ಜಗುಕ್ಕೊಂಡು ಇಕ್ಕು. ಸ್ಟೇರಿಂಗಿನ ಮಧ್ಯಲ್ಲಿ ಒಂದು ಸಣ್ಣ “ಗುಳಿ”. ಅದರಲ್ಲಿ ಎಲೆ, ಅಡಕ್ಕೆ ಹೋಳು,ಸುಣ್ಣ, ಹೊಗೆ ಸೊಪ್ಪು ಎಲ್ಲಾ ರಜ ರಜ ಮಡ್ಕೊಂಗು. ಜನಂಗಳ ಹತ್ತುಸಲೋ ಇಳುಸಲೋ ಮಣ್ಣೋ ಬಸ್ಸಿನ ನಿಲ್ಲಿಸಿ ಅಪ್ಪಗ ಅದರ ಎಲ್ಲ ಬೇಕಾದ ಹಾಂಗೆ ಸೇರಿಸಿ ಎಲೆ ಜಗಿವಲೆ ಸುರು ಮಾಡುಗು. ಎದುರಾಣ ಸೀಟಿನವರ ಹತ್ರ ಸುಖ ದುಃಖ ಎಲ್ಲಾ ಮಾತಾಡಿಂಡು ಡ್ರೈವ್ ಮಾಡುಗು. ಗೇರಿನ ಕುಟ್ಟಿಯ ಹಿಡಿವಲೆ ಒಂದು ಜನ. ಅದಕ್ಕೆ ಅಲ್ಲಿಂದ ಎದ್ದು ಹೋಪಲೆ ಎಡಿಯ. ಅದು ಒಂದು ಕ್ರಮ ಆದಿಕ್ಕು ಹೇಳಿ ಎಂಗೊ ಜಾನ್ಸಿಗೊಂಡು ಇತ್ತಿದ್ದೆಯೊ. (ಆ ಬಸ್ಸಿಂಗೆ ಗೇರ್ ಸರಿ ಬಿದ್ದೊಂಡು ಇತ್ತಿದ್ದಿಲ್ಲೆ ಹೇಳಿ ಕಾಣುತ್ತು ಹೇಳಿ ದೊಡ್ಡ ಅಪ್ಪಗ ಅರ್ಥ ಆತು.) ಎಂಗೊಗೆ ಡ್ರೈವರನ ಎದುರಾಣ ಸೀಟಿಲ್ಲಿ ಕೂದೊಂಡು ನೋಡುವದೇ ಕೊಶಿ. ಮತ್ತೆ ಮನೆಲಿ ಬಂದು ಕುಞಿ ಭಾವಂದಿರ ಬಸ್ ಓಡುಸುವ ಪ್ರಯೋಗ ಇದ್ದನ್ನೆ.
ದೂರಕ್ಕೆ ಹೋಪದು ಹೇಳಿರೆ “ಕಾವೇರಿಕಾನ ದೊಡ್ಡಬ್ಬೆಯಲ್ಲಿಗೋ” ಇಲ್ಲ “ಹಳೆಮನೆಗೋ” ಅಷ್ಟೆ. ಬಸ್ ಸಿಕ್ಕದ್ದರೆ ಶಾಂತಿಪಳ್ಳಂದ “ನಟರಾಜ ಸರ್ವೀಸ್”. ಶಾಲೆಗೆ ನಿತ್ಯಾ ನೆಡದು ಅಭ್ಯಾಸ ಇದ್ದಲ್ಲದ, ನೆಡವಲೆ ಬಙ ಹೇಳಿ ಆಗಿಂಡು ಇತ್ತಿದ್ದಿಲ್ಲೆ. ಬಸ್ಸಿಂಗೆ ಕೊಡುವ ಪೈಸ ಒಳುದತ್ತಲ್ಲದ. ಆ ಪೈಸೆಯ ಅಜ್ಜ ವಾಪಾಸ್ ಕೇಳವು, ನಿಂಗ ಒಳುಸಿದ್ದು ನಿಂಗೊಗೆ ಆತು ಹೇಳುಗು. ಬೇಡದ್ದಕ್ಕೆ ಖರ್ಚು ಮಾಡೆಡಿ ಹೇಳಿ ಜಾಗ್ರತೆ ಕೂಡಾ ಹೇಳುಗು. ಶಾಲೆ ಬಿಟ್ಟಪ್ಪಗ “ಐಸ್ ಕೇಂಡಿ” ತಿಂಬಲೆ ಅದು ಉಪಯೋಗ ಆಗಿಂಡು ಇತ್ತಿದ್ದು. ಶಾಲೆ ಬಿಡುವ ಸಮಯಕ್ಕೆ ಸರಿ ಆಗಿ ಐಸ್ ಕೇಂಡಿ ಮಾರುವವು ಅಲ್ಲಿಗೆ ಬಂದು “ಕಿಣಿ ಕಿಣಿ” ಮಣಿ ಆಡುಸುಗು. “ಪೂಜೆ ಆತು, ಇನ್ನು ದಕ್ಷಿಣೆ ಹಾಕಿ ಪ್ರಸಾದ (ಐಸ್ ಕೇಂಡಿ) ತೆಕ್ಕೊಂಬಲೆ ಅಕ್ಕು” ಹೇಳಿ ಎಂಗೊ ನೆಗೆ ಮಾಡಿಂಡು ಚೀಪುವೆಯೊ..
ಹೋಪದು ದೀವಸ್ಥಾನಕ್ಕೆ, ಊರವರ ಸುದ್ದಿ ಎಲ್ಲ ಎಂತಕೆ ಮಾತಾಡಿಂಡು ಹೋಪದು? ಹೆಂಡತಿ ಆಕ್ಷೇಪ ಎತ್ತಿತ್ತು. ಅದು ಅಪ್ಪು ಕತ್ತಲೆ ಆವುತ್ತ ಇದ್ದು. ಎದುರಾಣವರ ಹೆಡ್ ಲೈಟಿಂಗೆ ಡ್ರೈವ್ ಮಾಡ್ಲೆ ರಜ ಕಷ್ಟವೂ ಆವುತ್ತು. ದೇವಸ್ಥಾನಲ್ಲಿ ಪೂಜೆ ಸುರು ಅಪ್ಪಲೆ ಆತೋ ಎಂತ. ಚೆಂದಕೆ ಅಲಂಕಾರ ಮಾಡಿದ, ದೇವರ ಪೂಜೆ ನೋಡಿ ಶೇಡಿಗುಮ್ಮೆಗೆ ಹೋಪ ಹೇಳಿ ಎಂಗಳ ಮಾತು ನಿಲ್ಲಿಸಿದೆಯೊ.
ಕಾಲ ಬದಲಾದ ಹಾಂಗೆ ಬದಲಾವಣೆಯೂ ತುಂಬಾ ಆವುತ್ತು. (ನೆಂಪುಗೊ ಮಾತ್ರ ಹಾಂಗೇ ಒಳಿತ್ತು). ನಾರಾಯಣನ ಜೋಡೆತ್ತಿನ ಗಾಡಿ, ಐತಪ್ಪನ ಕಾರು. ಕೊಗ್ಗಿನ ಸೆಲೂನ್, ಹಳೇ ಬಸ್ ಸ್ಟೇಂಡ್,ಅದರ ಹಿಂದಾಣ ಬಾವಿ, ಎಲ್ಲೆಸ್ ಪ್ರಭುವಿನ ಅಂಗಡಿ, ಮರ್ತು ಭಟ್ಟನ ಹೋಟೆಲ್, ಮುಳಿ ಮಾಡಿನ ಸಿನೆಮಾ ಕಟ್ಟೋಣ,ಎಣ್ಣೆ ತೆಗವ ಗಾಣ, ಎಲ್ಲಾ ಹುಡ್ಕಿರೆ ಈಗ ಅದರ ಕುರುಹು ಕೂಡ ಸಿಕ್ಕ. ನಾವು ಕಾಲಕ್ಕೆ ಸರಿಯಾಗಿ ಬದಲಾಗಿಂಡು ಹೊಂದಿಯೊಂಡು ಹೋಯೆಕ್ಕು ಅಲ್ಲದ.
ಹಾಂಗೆ ಹೇಳಿ, ನಮ್ಮತನದ ಮೇಲೆ ಬೇರೆಯವರ ಸವಾರಿ ಅಪ್ಪಲೆ ಬಿಡ್ಲೆ ಆಗ ಅಲ್ಲದ..
(ಚಿತ್ರಕೃಪೆ: ಇಂಟರ್ನೆಟ್ಟು)
ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ ಶರ್ಮಪ್ಪಚ್ಚಿ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.
ಶರ್ಮಣ್ಣ… ಭಾರೀ ಲಾಯ್ಕಾಯಿದು ಬರಹ. ಕುಂಬಳೆ ಪೇಟೆ ‘ಕಣ್ಯಾರ’ ಆಗಿಪ್ಪಗಾಣ ಶುದ್ದಿ ಓದಿ ಕೊಶಿ ಆತು. ಇದರಲ್ಲಿ ಕೆಲವು ಸಂಗತಿ ಮನೆಲಿ ಅಪ್ಪ ಅಂಬಗಂಬಗ ಹೇಳ್ಯೊಂಡು ಇಕ್ಕು. ಆನುದೇ ಹೈಸ್ಕೂಲಿಂಗೆ ಅಲ್ಲಿಗೇ ಹೋದ ಕಾರಣ ಕೆಲಾವು ಸಂಗತಿ ಎನಗುದೇ ನೆನಪಾತು.
ಆನು ಶಾಲೆಗೆ ಹೋಗ್ಯೊಂಡು ಇಪ್ಪಗ ಇತ್ತಿದ್ದ ಶರ್ಮಿಳಾ ಕೋಲ್ಡ್ ಹೌಸ್, ಅದರತ್ರೆ ಇತ್ತಿದ್ದ ಕೊಂಕಣಿಯ ಮಿಲ್ಲು… ಇದು ಏವದೂ ಈಗ ಬಂದವಕ್ಕೆ ಕಾಂಬಲೆ ಸಿಕ್ಕ. ಕೊಂಕಣಿಯ ಮಿಲ್ಲು ಇತ್ತಿದ್ದಲ್ಲಿ ಈಗ ಬ್ಯಾರಿಯ ದೊಡ್ಡ ಶಾಪಿಂಗ್ ಕಾಂಪ್ಲೆಕ್ಸ್ ಬಯಿಂದು. ತುಂಬ ವರ್ಷಂದ ಈ ಸೈಡಿಂಗೆ ಬಾರದ್ದವಕ್ಕೆ ಇದು ಮೊದಲಾಣ ಪೇಟೆ ಅಪ್ಪೋ ಅಲ್ಲದೋ ಹೇಳ್ತಷ್ಟು ಸಂಶಯ ಖಂಡಿತ ಬಕ್ಕು. ಅದು ಈಗ ಕೊಡೆಯಾಲಕ್ಕೆ ಹೋದರೂ ಹಾಂಗೇ ಆವುತ್ತು ಅಲ್ಲದಾ? ಅಂದು ‘ವುಡ್ಸೈಡ್’ ಹೋಟ್ಲಿಲ್ಲಿ ಊಟ ಮಾಡಿದವಕ್ಕೆ ಈಗ ಅಲ್ಲಿ ಹೋದರೆ ‘ಸಿಟಿ ಸೆಂಟರ್’ ಹೇಳ್ತ ದೊಡ್ಡ ‘ಮಾಲ್’ ಕಾಣುಗು, ಅಷ್ಟೇ. ಮೊನ್ನೆ ಆ ಮಾಲ್ನ ಒಳಾಂಗೆ ನೋಡ್ಲೆ ಹೇಳಿ ಹೋದೆ. ಕೆಲಾವು ಅಂಗಡಿಗೊ ಸುರು ಆಯಿದು. ಕೆಲವರ ಕೆಲಸ ಆವುತ್ತಾ ಇದ್ದಷ್ಟೆ. ಅದ್ಭುತ…! ಕೊಡೆಯಾಲಲ್ಲಿ ಇಷ್ಟರವರೆಗೆ ಹೀಂಗಿಪ್ಪ ಕಟ್ಟೋಣ ಕಂಡಿದಿಲ್ಲೆ. ಚೆನ್ನೈಗೆ ಹೋಗಿಪ್ಪಗ ‘ಸ್ಪೆನ್ಸರ್ಸ್ ಪ್ಲಾಝಾ’ ನೋಡಿತ್ತಿದ್ದೆ. ಅಷ್ಟಕೆ ಇಲ್ಲದ್ರೂ, ಸಾಧಾರಣ ಹಾಂಗೇ ಇದ್ದು… ಒಟ್ಟಾರೆ ಬದಲಾವಣೆ ಆವುತ್ತಾ ಇದ್ದು ನಮ್ಮ ಬದುಕು…
ಅಂತೂ ‘ಬ್ಲ್ಯಾಕ್ ಽ ವೈಟ್’ ನೆನಪು ಮಾಡಿ ಕೊಟ್ಟದಕ್ಕೆ ಶರ್ಮಣ್ಣಂಗೆ ಧನ್ಯವಾದಂಗೊ…
[ಉತ್ತರುಸಿ]
ಹೊತ್ತುವೇಳೆ: 26 May,2010ರ 7:40 PM ಗೆ. (ಒಪ್ಪಸಂಕೊಲೆ)
ಅಪ್ಪು ಹರೀಶ. ಮಂಗಳೂರಿಲ್ಲಿ “ವಿಶ್ವ ಭವನ ಹೇಳಿ” ಹೋದರೆ ಚಿನ್ನದ ಅಂಗಡಿ, “ರಾಮ್ ಫಾರ್ಮಸಿ” ಹೇಳಿ ಹೋದರೆ ಮೆಟ್ಟಿನ ಅಂಗಡಿ, ಮಾನ್ಯದ ವೆಂಕಟ್ರಾಯನ “ಪುಸ್ತಕದ ಅಂಗಡಿ” ಹೇಳಿ ಹೋದರೆ ಕಾರ್ ಪಾರ್ಕ್, ಅಲೋಶಿಯಸ್ ಕಾಲೇಜಿನ ಕಾಂಪೌಂಡಿನ ಒಳ ಹೋದರೆ ಹಲವಾರು ಬಹು ಮಹಡಿ ಕಟ್ಟಡ (college buildings).
ಇಂದ್ರ ಭವನ ಮಾತ್ರ ಹಾಂಗೇ ಇದ್ದು ಈಗಳೂ.
[ಉತ್ತರುಸಿ]
ಶರ್ಮಣ್ಣನ ಹಳೆ ನೆನೆಪಿನ ಅಲೆಗೊ ತುಂಬ ಒಳ್ಳೆಯದಾಗಿ ಕೀಲಿಮಣೆಗೆ ಹರಿದು ಬಯಿಂದು.ಆನೂ ಎನ್ನ ಹಳೆ ನೀರ್ಚಾಲಿಂಗೆ ರಜ ಹೊತ್ತು ಹೋಗಿ ಬಂದ ಹಾಂಗೆ ಆತು.ನಮ್ಮ ಕವಿವರ್ಯ ದಿ.ಮಲ್ಲತ್ತೇರು ಗಂಗಾಧರ ಭಟ್ರು ಹೇಳಿದ್ದು ನೆಂಪಿದ್ದು-
‘ಅನುಭವವು ಸಿಹಿಯಲ್ಲ,ಅದರ ನೆನಪೇ ಸಿಹಿಯು-’
ಶರ್ಮಣ್ಣ ಪುರುಸೊತ್ತು ಮಾಡಿಯೊಂಡು ಇನ್ನೂ ತುಂಬ ಹೊತ್ತು ಕೀಲಿಮಣೆಲಿ ಕೈ ಆಡಿಸಿ!!
[ಉತ್ತರುಸಿ]
A GOOD REMINISCENCES. I TOO CAN VISUALISE SOME PAST EVENTS WHEN READING. ANYHOW THANKS FOR THE OLD REMEMBERING NEWS
[ಉತ್ತರುಸಿ]
ಹೊತ್ತುವೇಳೆ: 27 May,2010ರ 8:46 PM ಗೆ. (ಒಪ್ಪಸಂಕೊಲೆ)
ರಮೇಶ ಭಾವಾ, ಕಷ್ಟ ಪಟ್ಟು ನಮ್ಮ ಭಾಷೇಲೇ ಬರೆ ಮಾರಾಯಾ,
ಮತ್ತೆ ಹೇಂಗಿದ್ದೆ,ಎಂಥ ಸುದ್ದಿ?
[ಉತ್ತರುಸಿ]
ಹೊತ್ತುವೇಳೆ: 28 May,2010ರ 7:39 AM ಗೆ. (ಒಪ್ಪಸಂಕೊಲೆ)
ಸಮಯ ಇಲ್ಲೆ . ಯಂತ ಮಾಡುವದು?
[ಉತ್ತರುಸಿ]
ಹಳೆ ನೆನಪಿಲ್ಲಿ ಮಿಂದ ಹಾಂಗೆ ಆತು ಅಂಕಲ್, ಮತ್ತೆ ಮನಸ್ಸಿಂಗೆ ನಾಟಿದ ವಿಚಾರ ಹೇಳಿರೆ ನಮ್ಮತನದ ಮೇಲೆ ಬೇರೆಯವರ ಸವಾರಿ ಅಪ್ಪಲೆ ಬಿಡ್ಲೆ ಆಗ ಅಲ್ಲದ..
[ಉತ್ತರುಸಿ]
ಹೊತ್ತುವೇಳೆ: 28 May,2010ರ 12:14 AM ಗೆ. (ಒಪ್ಪಸಂಕೊಲೆ)
ಅಂಕಲೋ? ಅದೆಂತಕೆ ಹಾಂಗೆ ಹೇಳುದು ಅವರ? ಪಾಪ!
ಅವು ’ಶರ್ಮಪ್ಪಚ್ಚಿ’ ಅಲ್ದಾ?
ಚೆ ಚೆ, ಆಗ ಮಾಣಿ ಹಾಂಗೇಳುಲೆ – ಅಪ್ಪಮ್ಮಂಗೆ ಗೊಂತಾದರೆ ಬೇಜಾರಕ್ಕು, ಹಾಂ!
ಬೈಲಿಲಿ ಬಾಯಿತುಂಬ ಮಾವ/ ಅಪ್ಪಚ್ಚಿ ಹೇಳುವೊ°, ಆತಾ?
[ಉತ್ತರುಸಿ]
ಹೊತ್ತುವೇಳೆ: 28 May,2010ರ 2:11 PM ಗೆ. (ಒಪ್ಪಸಂಕೊಲೆ)
ಅದಪ್ಪು ಒಪ್ಪಣ್ಣ….. ಮಾವ,ಅತ್ತೆ,ಅಪ್ಪಚ್ಚಿ ಇಂತಾ ಶಬ್ದಂಗಳಲ್ಲಿ ಇಪ್ಪ ಆತ್ಮೀಯತೆ ಅಂಕಲ್ ಆಂಟಿಗಳಲ್ಲಿ ಇರ್ತಿಲ್ಲೆ…
ಅದೇ ಇಲ್ಲಿಯಾಣ ವಿಶೇಷ,ಎಲ್ಲರೂ ಅಣ್ಣ,ಅಕ್ಕ,ಮಾವ,ಅತ್ತೆ,ಅಪ್ಪಚ್ಚಿ ಹೇಳಿ ಒಂದೇ ಮನೆಯೋರಾಂಗೆ ವಿಷಯಂಗಳ ಹಂಚಿಗೊಂಬದು…
[ಉತ್ತರುಸಿ]
ಕಣ್ಯಾರ ದೇವಸ್ಥಾನಕ್ಕೆ ಎಣ್ಣೆ ಮಿಲ್ಲು ಇದ್ದ ಆ ಸಪೂರ ಮಾರ್ಗಲ್ಲಿ ಹೋಪಾಗ ಬತ್ತ ತೆಂಗಿನ ಹಿಂಡಿ ಪರಿಮಳ, ಜೋಶಿ ಮದ್ದಿನಂಗಡಿಯ ಅರಿಷ್ಟದ ಪರಿಮಳ ಎನಗೆ ಇನ್ನೂ ನೆಂಪಿದ್ದು. ರೇಶನ್ ಅಂಗಡಿಯ ಒಳ ಗುಬ್ಬಚ್ಚಿಗಳ ಕಿಚಿಪಿಚಿ, ಪಾರಿವಾಳಂಗಳ ಗುಟುರು ಗುಟುರು ಶಬ್ದಂಗೊ ಕೇಳದ್ದೆ ಅದೆಷ್ಟು ಸಮಯ ಆತು ! ಶರ್ಮಪ್ಪಚ್ಚಿಯ ಹಿಂದಾಣ ನೆನಪುಗಳ ಲೇಖನ ಓದುವಗ ಎಲ್ಲವೂ ಮತ್ತೊಂದರಿ ನೆಂಪಾತು. ಪೈಸೆಗೆ ಕಷ್ಟ ಇದ್ದರೂ ಆ ದಿನಂಗೊ ಅದೆಷ್ಟು ಚೆಂದ ಇತ್ತು ಅಲ್ಲದೋ? ಲಾಯಕಾಗಿತ್ತು ಲೇಖನ.
ಸಿನೆಮಾ ನೋಡಿಕ್ಕಿ ಹೆರ ಬಪ್ಪಗ, ಚೌಕ್ಕ (ಕರ್ಚೀಫು) ಇಡೀ ಬೀಡಿ ವಾಸನೆ ಬಂದೊಂಡಿತ್ತು. ಸಿನೆಮಾ ಸುರು ಅಪ್ಪಲಪ್ಪಗ ಎದುರಾಣ ಪರದೆ “ಟೆಂಟೆಟೇಂ” ಹೇಳಿ ಮೇಲೆ ಹೋಪಾಗ, ಅದರ ಮೇಲೆ “ವೆಲ್ಕಂ” ಹೇಳಿ ಕಂಡಪ್ಪಗ ಅದೆಶ್ಟು ಕೊಶಿ ಅಲ್ಲದೊ ? ಶರ್ಮಪ್ಪಚ್ಚಿ, ಸವಿ ಸವಿ ನೆನಪು, ಸಾವಿರ ನೆನಪು .. ಪದ್ಯ ನೆಂಪಾವುತ್ತು. ಹಿಂಗೆ ಬರೆತ್ತಾ ಇರಿ.
[ಉತ್ತರುಸಿ]
ಶರ್ಮಪ್ಪಚ್ಚಿ,
ಶುದ್ದಿ ಬಾರೀ ಲಾಯಿಕಾಯಿದು!
ಕೂದಂಡು ಓದಿಗೊಂಡಿಪ್ಪಗ ಒಂದು ತಲೆಮಾರು ಹಿಂದಾಣ ಕಣಿಯಾರದ ನೆಂಪಾತು!
ಅಂಬಗಾಣ ಚಿತ್ರವ ಯಥಾರೂಪ ಅಕ್ಷರಕ್ಕೆ ಇಳುಸಿದ್ದಿ. ಬೊಳುಂಬು ಮಾವನ ಸಿನೆಮ ಸುರುಅಪ್ಪಗಾಣ ಶಬ್ದ ಅಂತೂ ಕೆಮಿಗೆ ಕುಟ್ಟುತ್ತು!!
ಬಾರೀ ಗಮ್ಮತ್ತಾಯಿದು.
ಶುದ್ದಿಗೊಂದು ಒಪ್ಪ!
ಹೇಳಿದಾಂಗೆ,
ನಿಂಗೊ ಹೇಳಿದ ಈ ಶುದ್ದಿಯ ಈಂದುಗುಳಿಅತ್ತಗೆ ಹೇಳಿದೆ!
ಗೊಪಾಲಕೃಷ್ಣ ಟೋಕೀಸು ಇದ್ದತ್ತು, ಅದರಿಂದ ಮದಲೇ ಗಜಾನನ ಟೋಕೀಸುದೇ ಇದ್ದದರ ಹೇಳಿದವಿದಾ!
ಅದೂ ಅಲ್ಲದ್ದೆ ದಾಸ್ ನಾಯಕ ನ ದಿನಸಿ ಅಂಗಡಿಯ ಒತ್ತಕ್ಕೆ ಇದ್ದ ಉಪ್ಪು ನಾಯ್ಕನ ಜೌಳಿ ಅಂಗುಡಿಯೋ, ಶ್ರೀನಿವಾಸನ ಕಬ್ಬಿಣದ ಅಂಗುಡಿಯೋ – ಇದೆಲ್ಲ ಮರದತ್ತೋ ಅಂಬಗ, ಶುದ್ದಿ ಹೇಳ್ತ ಬರಲ್ಲಿ – ಹೇಳಿ ಕೇಳಿದವು.
ಅಪ್ಪೋ ಶರ್ಮಪ್ಪಚ್ಚಿ, ಅದೆಲ್ಲ ಇತ್ತಾ?
[ಉತ್ತರುಸಿ]
ಒಪ್ಪಣ್ಣ,
ಈಂದುಗುಳಿ ಅತ್ತೆ ಹೇಳಿದ್ದು ಸರಿ. ಹಳೆ ನೆನಪಿಲ್ಲಿ ಕೆಲವು ಬಿಟ್ಟು ಹೋಯಿದು. ಅಂಬಗ ಇತ್ತಿದ್ದದು ಗಜಾನನ ಟಾಕೀಸು (ಆನು ಬರದ್ದು ತಪ್ಪಿದ್ದು):) ಗೊಪಾಲಕೃಷ್ಣ ಟೋಕೀಸು ಮತ್ತೆ ಬಂದದು . ಇನ್ನೂ ಹಳಬರ ಲೆಕ್ಕಲ್ಲಿ, ಕೆದೂರು ಡಾಕ್ಟ್ರ ಕುಂಬಳೆ ಮನೆ ಹತ್ರ ಇನ್ನೊಂದು ಟಾಕೀಸು ಇತ್ತಿದ್ದು. ಎಂಗೊಗೆ ಅದರ ಕಟ್ಟೋಣ ನೋಡಿದ ನೆಂಪು ಇದ್ದು. ಅಂಬಗಳೇ ಟಾಕೀಸಿನ ಬೋರ್ಡ್ ಇತ್ತಿದ್ದಿಲ್ಲೆ ಮತ್ತೆ ಸಿನೆಮಾ ನಡಕ್ಕೊಂಡು ಇತ್ತಿದ್ದಿಲ್ಲೆ.
ಉಪ್ಪು ನಾಯ್ಕನ ಜೌಳಿ ಅಂಗುಡಿ, ಶ್ರೀನಿವಾಸನ ಕಬ್ಬಿಣದ ಅಂಗಡಿ – ಇದೆಲ್ಲ ಎಂಗೊಗೆ ಹೆಚ್ಚು ಸಂಪರ್ಕ ಇತ್ತಿದ್ದಿಲ್ಲೆ. ಹಾಂಗಾಗಿ ಮರದ್ದು. ಈಗ ನೆಂಪು ಆತು. ಹಾಂಗೇ ದಾಸ ನಾಯ್ಕನ ಅಂಗಡಿಗೆ ತಾಗಿ ಒಂದು ಕೊಂಕಣಿಯ ಹೋಟ್ಲು ಇತ್ತಿದ್ದು.
ಗೋಪಾಲ ಮಾವ ಹೇಳಿದ ಹಾಂಗೆ ಅಂಬಗ ಪೇಟೆಲಿ ಹೋದರೆ ಅರಿಷ್ಟದ ಪರಿಮಳ, ತೆಂಗಿನೆಣ್ಣೆ ಪರಿಮಳ. ಈಗ??????
ಅದೆಲ್ಲ ಸರಿ. ಈಂದುಗುಳಿ ಅತ್ತೆಯ ಪರಿಚಯ ಆಯಿದಿಲ್ಲೆ ಅನ್ನೆ?
[ಉತ್ತರುಸಿ]
ಹೊತ್ತುವೇಳೆ: 4 June,2010ರ 8:00 AM ಗೆ. (ಒಪ್ಪಸಂಕೊಲೆ)
{ ಕೆದೂರು ಡಾಕ್ಟ್ರ ಕುಂಬಳೆ ಮನೆ ಹತ್ರ ಇನ್ನೊಂದು ಟಾಕೀಸು ಇತ್ತಿದ್ದು. }
ನಿಂಗೊ ಹೀಂಗೆ ಹೇಳಿದ ಮತ್ತೆ ಓ ಮೊನ್ನೆ ಹೋಗಿ ನೋಡಿದೆ.
ಕೆದೂರು ಡಾಕ್ಟ್ರ ಕುಂಬಳೆ ಮನೆಯ ಒತ್ತಕ್ಕೆ ಸುಮಾರು ಮನೆಗೊ ಕಂಡತ್ತು, ಟಾಕೀಸು ಕಂಡತ್ತ್ತಿಲ್ಲೆ ಅಪ್ಪಚ್ಚಿ.
ಈಂದುಗುಳಿ ಅತ್ತೆಯ ಗೊಂತಾಗದ್ದರೆ ಸಾರ ಇಲ್ಲೆ!
ಶೇಡಿಯಮ್ಮೆಂದ ಹಳೆಮನೆಗೆ ಬಂದೋರ ಮರದಿಕ್ಕೆಡಿ ಇನ್ನ್ನು, ಹಾಂ!!
[ಉತ್ತರುಸಿ]
ಹೊತ್ತುವೇಳೆ: 4 June,2010ರ 9:17 AM ಗೆ. (ಒಪ್ಪಸಂಕೊಲೆ)
ಒಪ್ಪಣ್ಣ,
ಕೆದೂರು ಡಾಕ್ಟ್ರ ಕುಂಬಳೆ ಮನೆಗೆ ಹೋಪ ಸೈಡ್ ರೋಡಿನ ಕರೆಲಿ ಮೈನ್ ಮಾರ್ಗಕ್ಕೆ ಒತ್ತ ಆಗಿ ಒಂದು ಹಾಳು ಬಿದ್ದ ಖಾಲಿ ಸೈಟ್ ಇದ್ದು. ಅದಕ್ಕೆ ಗೇಟ್ ಎಂತ ಇಲ್ಲೆ. ಅದರಲ್ಲಿ ಆನು ಹೇಳಿದ ಹಳೆ ಟಾಕೀಸ್ ಇತ್ತಿದ್ದದು. ಇನ್ನೊಂದು ಸರ್ತಿ ಅತ್ಲಾಗಿ ಹೋದರೆ ಅಂದಾಜು ಅಕ್ಕು ಆತೋ!!!
[ಉತ್ತರುಸಿ]
ಹೊತ್ತುವೇಳೆ: 4 June,2010ರ 10:54 AM ಗೆ. (ಒಪ್ಪಸಂಕೊಲೆ)
ಶರ್ಮಪ್ಪಚ್ಚಿ, ಒಪ್ಪಣ್ಣ ನ್ಗೆ ಮನೆಗ ಮಾತ್ರ ಕಂಡದು ಹೇಳ್ತ° ಅವ° ಯಾವ ಮನೆ ನೋಡಿದನೋ? ಮನೆಯೊಳ ‘ಮನೆಯೋಳ’ ನೋಡಿದನೋ? ಬಹುಷಃ ಕಣ್ಣಿ ನ್ಗೆಂತದೋ ತಡೆ ಬಂದು ಖಾಲಿ ಸೈಟ್, ಅವನ ಸೈಟಿಂಗೆ ಬಯಿಂದಿಲ್ಲೇ ಆದಿಕ್ಕು…… ಅಲ್ಲದಾ? ಅವ° ಇನ್ನೊಂದರಿ ಹೋದರು ಕಾಣದಾ ಹೇಳಿ…
[ಉತ್ತರುಸಿ]
ಹೊತ್ತುವೇಳೆ: 4 June,2010ರ 11:15 AM ಗೆ. (ಒಪ್ಪಸಂಕೊಲೆ)
ನೀನು ಚಿಂತೆ ಮಾಡೆಡ ಶ್ರೀ ಅಕ್ಕಾ… ಒಪ್ಪಣ್ಣಂಗೆ ಮರತ್ತು ಹೋಪಲೆ ಸುರು ಆಯಿದಡ್ಡ… ಹಾಂಗಾಗಿ ಆನು ಅವಂತ್ರೆ,ಎನ್ನ ಔಷಧಾಲಯಕ್ಕೆ ಬಪ್ಪಲೆ ಹೀಳಿದ್ದೆ.. ಬಂದಿಪ್ಪಗ ಕಣ್ಣು ಪರೀಕ್ಷೆ ಮಾಡ್ತೆ.. ಎಂತಾರು ದೋಷ ಇದ್ದರೆ ಭಾವಂತ್ರೆ ಕಳ್ಸಿ ಕೊಡ್ತೆ,ಭಾವ ಸರಿಯಾಗಿ ಔಷಧಿ ಕೊಡುಗು…. ಆಗದಾ??
[ಉತ್ತರುಸಿ]
ಹೊತ್ತುವೇಳೆ: 4 June,2010ರ 11:43 AM ಗೆ. (ಒಪ್ಪಸಂಕೊಲೆ)
ಅದೇ,ಕಾನಾವು ಭಾವ,ಕಣ್ಣಿನ ಡಾಗುಟ್ರು ಪುತ್ತೂರಿಲಿ ಇಪ್ಪವು… ಅವರ ಹತ್ತರೆ ಕಳ್ಸಿ ಕೊಡ್ತೆ,ಆಗದೊ ಅಕ್ಕಾ?? ಒಪ್ಪಣ್ಣಂಗೆ ತೊಂದರೆ ಆದರೆ ತುಂಬಾ ಕಷ್ಟ ಆವುತ್ತು… ನಮ್ಮ ಬೈಲಿನೋರಿಂಗೆ ಅತ್ಯಂತ ಬೇಕಾದವ ಅವ….ಈ ವಾರ ಅವಂಗೋಸ್ಕರ ಕಾಯಿತ್ತಾ ಇಪ್ಪೋರಿಂಗೂ ಬೇಜಾರಕ್ಕು….
[ಉತ್ತರುಸಿ]
ಹೊತ್ತುವೇಳೆ: 4 June,2010ರ 12:07 PM ಗೆ. (ಒಪ್ಪಸಂಕೊಲೆ)
ಆತಪ್ಪಾ.., ಕಳುಸಿ ಕೊಡು… ಭಾವನ ಹತ್ತರೆ ಫೋನ್ ಮಾಡಿಯೂ ಹೇಳು ಫೀಸ್ ತೆಕ್ಕೊಂಬದು ಬೇಡಾ ಹೇಳಿ…. ಇವ° ನಮ್ಮ ಬೈಲಿನ್ಗೆ ಆಪ್ತ° ಹೇಳಿ… ಮತ್ತೆ ಗುಟ್ಟಿಲಿ ಹೇಳು, ಫೀಸಿನ ಪೈಸೆ ಮೊದಲೇ ತೆಕ್ಕೊಂಡಿದೆ ಹೇಳಿ…
[ಉತ್ತರುಸಿ]
ಹೊತ್ತುವೇಳೆ: 4 June,2010ರ 9:20 AM ಗೆ. (ಒಪ್ಪಸಂಕೊಲೆ)
ಸೇಡಿಯಮ್ಮೆಂದ ಮನೆ ಬೆಳಗಲೆ ಬಂದದರ ಮರವಲೆ ಇದ್ದೋ ಒಪ್ಪಣ್ಣ?
[ಉತ್ತರುಸಿ]
ಹೊತ್ತುವೇಳೆ: 5 June,2010ರ 3:15 PM ಗೆ. (ಒಪ್ಪಸಂಕೊಲೆ)
ನಿಂಗೊಗೆ ಕನುಫ್ಯೂಸು ಬಂದ್ಸು ಎಲ್ಲಿ ಹೇಳಿ ಎನ ಗೊಂತಾತು. ಶರ್ಮಪ್ಪಚ್ಚಿ ಹೇಳ್ಸು ಹಳೆಯ ಕೆದೂರು ಡಾಕ್ಟ್ರು ಶಂಭಟ್ರು ಅವು ಈಗ ಇಲ್ಲೆ. ಒಪ್ಪಣ್ಣ ಹೇಳ್ತ ಕೆದೂರು ಡಾಕ್ಟ್ರು ಅಲ್ಲಿಂದ ರೆಜಾ ದೂರಲ್ಲಿಪ್ಪವು. ಇಬ್ರೂ ಬೇರೆ ಬೇರೆ. ಒಪ್ಪಣ್ಣನ ಕೆದೂರು ಡಾಕ್ಟ್ರು ಬೋಧ ತಪ್ಪುಸುತ್ತ ಜವ್ವನಿಗ !
[ಉತ್ತರುಸಿ]
ಹೊತ್ತುವೇಳೆ: 5 June,2010ರ 8:35 PM ಗೆ. (ಒಪ್ಪಸಂಕೊಲೆ)
ರವಿ,
ಆನು ಹೇಳಿದ್ದು ಬೆಜಪ್ಪೆ ಶ್ಯಾಮ ಡಾಕ್ಟ್ರ ಅಲ್ಲ. ಈಗಾಣ ಕೆದೂರು ಡಾಕ್ಟ್ರ ಕುಂಬಳೆ ಮನೆಗೆ ಹೋಪಗ, ಮುಖ್ಯ ಮಾರ್ಗಂದ ತಿರುಗುವಲ್ಲಿ ಸಣ್ಣ ಬಸ್ ಸ್ಟೇಂಡ್ ಇದ್ದಲ್ಲದ. ಅದರ ಹಿಂದೆ ಒಂದು ಖಾಲಿ ಸೈಟ್ ಇದ್ದು. ಅದರಲ್ಲಿ ಒಂದು ಕಾಲಲ್ಲಿ ಸಿನೆಮಾ ಕಟ್ಟೋಣ ಇತ್ತಿದ್ದು ಹೇಳಿ ಎನ್ನ ಅಜ್ಜ ಹೇಳಿಂಡು ಇತ್ತಿದ್ದವು. ಎಂಗೊ ಸಣ್ಣ ಇಪ್ಪಗ ಕಟ್ಟೋಣ ಇತ್ತಿದ್ದು, ಆದರೆ ಸಿನೆಮಾ ಶೋ ಇತ್ತಿದ್ದಿಲ್ಲೆ
[ಉತ್ತರುಸಿ]
ನಮ್ಮ ಬೈಲಿಂಗೆ ಗೊಂತಿಪ್ಪ ಶೇಡಿಗುಮ್ಮೆ ಬಾವಂಗೆ ಇಷ್ಟೆಲ್ಲ ಅರಡಿಯ ಅಪ್ಪ!
ಅವಂಗೆ ಇಷ್ಟು ಹಳತ್ತು ನೆಂಪಾಯೆಕಾರೆ ಮಜಲುಕೆರೆಂದ ಉರಗೆ ಲೇಹ ತಂದು ತಿನ್ನೆಕ್ಕಷ್ಟೆ!
[ಉತ್ತರುಸಿ]
ಶರ್ಮ ಭಾವಂಗೆ ಪ್ರಾಯ ಆದ್ದದು ಗೊಂತಾವುತ್ತು. ಐವತ್ತು ದಾಂಟಿದ ಮತ್ತೆ, ಮನುಷ್ಯ ಹಿಂದೆ ತಿರುಗಿ ನೋಡ್ಲೆ ಸುರು ಮಾಡ್ತ. ಸಣ್ಣ ಇಪ್ಪಗಾಣ ಸಂಗತಿಗೊ ಎಲ್ಲಾ ನೆಂಪಂಪಲೆ ಸುರು ಆವುತ್ತು. ಎನಗೂ ಹಾಂಗೆ ಆವುತ್ತು. ಶಾಲಗೆ ಹೋಪಗ ಕಲ್ತದು, ನೋಡಿದ್ದು ಎಲ್ಲ ಸರಿಯಾಗಿ ನೆಂಪಾವುತ್ತು. ಆ ಕಾಲದ ಬಗ್ಗೆ ಎಷ್ಟೂ ಮಾತಾಡ್ಲೆ ಎಡಿಗು. ನವಗೆ ಅದರೆಲ್ಲಾ ಮಾತಾಡ್ಳೆ ಕೊಶಿ ಆವುತ್ತು. ಆದರೆ ಈಗಾಣ ಮಕ್ಕೊಗೆ ಅಂದ್ರಾಣ ಕಾಲದ ಜೀವನದ ಸರಿಯಾದ ಕಲ್ಪನೆ ಮಾಡ್ಳೆ ಸಾಧ್ಯವೇ ಇಲ್ಲೆ. ನಾವು ಹೇಳಿದರೂ ಕೇಳುವ ಆಸಕ್ತಿ ಇರ. ನಾವು “ಆ ಕಾಲವೊಂದಿತ್ತು ಭವ್ಯವಾಗಿತ್ತು, ದಿವ್ಯವಾಗಿತ್ತು” ಹೇಳಿ ಹೇಳ್ಲೆ ಆಗ. ಅಂದಿಂಗೆ ಅದೇ ಸರಿ, ಇಂದಿಂಗೆ ಇದೇ ಸರಿ.
ಒಪ್ಪಣ್ಣ ಹೇಳ್ತ ಹಾಂಗೆ ಅದೆಲ್ಲ ಇರಳಿ, ಶರ್ಮ ಭಾವ ಬರದ್ದು ಲಾಯಿಕಾಯಿದು; ಹೀಂಗೆ ನೆಂಪಿನ ಸುರುಳಿ ಬಿಡಿಸೆಂಡು ಹೋಗಿ!
[ಉತ್ತರುಸಿ]
ಹೊತ್ತುವೇಳೆ: 5 June,2010ರ 8:37 PM ಗೆ. (ಒಪ್ಪಸಂಕೊಲೆ)
ಉದಯ ಭಾವಂಗೆ ನಮಸ್ತೆ. ನಿಂಗಳ ಪ್ರೋತ್ಸಾಹ ಇದ್ದರೆ ರಜ ರಜ ಬರವಲೆ ಪ್ರಯತ್ನಿಸುತ್ತೆ. ಬಯಲಿಂಗೆ ನಿಂಗಳ ಪರಿಚಯ ಮಾಡಿ ಕೊಡ್ತೀರಾ?
[ಉತ್ತರುಸಿ]
ಹೊತ್ತುವೇಳೆ: 9 June,2010ರ 7:19 PM ಗೆ. (ಒಪ್ಪಸಂಕೊಲೆ)
ಪರಿಚಯ ಮುಖ್ಯ ಅಲ್ಲ. ಬಯಲಿಂಗೆ ಇಳುದ ಮೇಲೆ ನಿದಾನಕ್ಕೆ ಗೊಂತಾಗದ್ದೆ ಇರ.
[ಉತ್ತರುಸಿ]
Sharmanna, Ningala lekhana odi thumba khushi aathu. Ottinge modalina Kumbale, Hale nempu manassu thumbi banthu. Thumba chandakke baraddi.
[ಉತ್ತರುಸಿ]
ಶರ್ಮ ಭಾವ,
ಲೇಖನ ಓದಿ ತುಂಬಾ ಸಂತೋಷ ಆತು. ನಿಂಗಳ ಬರವಣಿಗೆಯ ಶೈಲಿಗೆ ಹಳೆ ಸವಿ ನೆನಪೆಲ್ಲ ಕಣ್ಣಿಂಗೆ ಕಟ್ಟಿದ ಹಾಂಗೆ ಅನುಭವ ಆತು. ಧನ್ಯವಾದಂಗೋ !
[ಉತ್ತರುಸಿ]
ಶರ್ಮಣ್ಣ,
ನಿಂಗೋಗೆ ಫೋಟೋಗ್ರಫಿ, ಸಂಗೀತ, ಮತ್ತೆ ಅಡುಗೆ ಹವ್ಯಾಸ ಇದ್ದು ಹೇಳಿ ಗೊಂತಿತ್ತು. ಆದರೆ ಇಷ್ಟು ಒಳ್ಳೆ ಬರವಣಿಗೆಯ ಹವ್ಯಾಸದೇ ಇದ್ದು ಹೇಳಿ ‘oppanna.com’ ದ ಗೊಂತಾದ್ದು..! Great Anna…ಹೀಂಗೆ ಒಳ್ಳೆ ಒಳ್ಳೆ ಲೇಖನ ಕೊಡ್ತಾ ಇರಿ. ಓದುಲೆ ಖುಷಿ ಆವುತ್ತು.
[ಉತ್ತರುಸಿ]
very good.
[ಉತ್ತರುಸಿ]
aa talkiesna hesaru vijayalakshmi talkies.adu gajanana kkintha modale iddadu.enage kandu gonthille. 1960kke modalu iddikku. enna annange sariyagi nenapiddu.
[ಉತ್ತರುಸಿ]
ಹೊತ್ತುವೇಳೆ: 1 September,2010ರ 9:10 AM ಗೆ. (ಒಪ್ಪಸಂಕೊಲೆ)
ಮಾಹಿತಿ ಕೊಟ್ಟದಕ್ಕೆ ಧನ್ಯವಾದಂಗೊ
[ಉತ್ತರುಸಿ]