Oppanna.com

“ಮಾಹಿತಿ ಹಕ್ಕು ಕಾಯಿದೆ”- ಇದರ ತಿಳಿವದು ನಮ್ಮ ಹಕ್ಕು

ಬರದೋರು :   ಶರ್ಮಪ್ಪಚ್ಚಿ    on   11/01/2012    92 ಒಪ್ಪಂಗೊ

ಈ ದೇಶಲ್ಲಿ ಹುಟ್ಟಿದ ಪ್ರತಿಯೊಬ್ಬ ಪ್ರಜೆಯೂ ಒಂದಲ್ಲ ಒಂದು ರೀತಿಲಿ ತೆರಿಗೆ ಕಟ್ಟುತ್ತ°.
ಅದು ನೇರವಾಗಿ ಕಟ್ಟುವ  ಆದಾಯ ತೆರಿಗೆಯೇ ಆದಿಕ್ಕು, ವೃತ್ತಿ ತೆರಿಗೆಯೇ ಆದಿಕ್ಕು, ಸಂಪತ್ತು ತೆರಿಗೆಯೇ ಆದಿಕ್ಕು. ಜಾಗೆಗೆ ಕಟ್ಟುವ ತೀರ್ವೆ ಆಗಿಕ್ಕು, ಜಾಗೆ ರಿಜಿಸ್ಟ್ರಿ ಮಾಡುವಾಗ ಕಟ್ಟುವ ಸ್ಟೇಂಪ್ ಫೀಸ್ ಆದಿಕ್ಕು ಅಥವಾ ಇನ್ನಿತರ ಯಾವದೇ ರೂಪಲ್ಲಿ ಆಗಿಕ್ಕು.

ಮಾಹಿತಿ ಹಕ್ಕು ಕಾಯಿದೆ
ಮಾಹಿತಿ ಹಕ್ಕು ಕಾಯಿದೆ

ಇದೆಲ್ಲಾ ಕಟ್ಟದ್ದೆ ಇಪ್ಪ ಸಾಮಾನ್ಯ ಪ್ರಜೆ ಕೂಡಾ ಅಂಗಡಿಂದ ಸಾಮಾನು ತೆಕ್ಕೊಂಬಗ ಅದಕ್ಕೆ ತೆರಿಗೆ ಕಟ್ಟುತ್ತ°. ಹಾಂಗಾಗಿ ಪರೋಕ್ಷವಾಗಿ ಅವನು ಕೂಡಾ ತೆರಿಗೆದಾರನೇ ಆವ್ತ°. ಸರ್ಕಾರ ನೆಡವದೇ ಈ ತೆರಿಗೆ ಸಂಗ್ರಹಿಸಿದ ಪೈಸೆಂದ.
ಸರ್ಕಾರದ ಪ್ರತಿಯೊಂದು ಕಾರ್ಯಕ್ರಮಂಗಳಲ್ಲಿ, ನಾವು ಹಾಕಿದ ಪೈಸೆಯ ಉಪಯೋಗ ಆವ್ತು.
ಅಂಬಗ ನಾವು ಹಾಕಿದ ಪೈಸೆ ಎಂತ ಆವ್ತು ಹೇಳಿ ತಿಳ್ಕೊಳೆಕ್ಕು ಹೇಳಿ ನವಗೆ ಇರ್ತಿಲ್ಲೆಯೋ?
ತೆರಿಗೆ ರೂಪಲ್ಲಿ ಸಂಗ್ರಹಿಸಿದ ಎಲ್ಲಾ ಪೈಸೆ ಕೂಡಾ ಸರಿಯಾದ ದಾರಿಲಿಯೇ ಖರ್ಚು ಆವ್ತಿಲ್ಲೆ ಹೇಳುವದು ಎಲ್ಲರಿಂಗೂ ಗೊಂತಿಪ್ಪ ವಿಚಾರ.
ಯಾವದೇ ಒಂದು ಸರ್ಕಾರಿ ಕಾಮಗಾರಿ ಸುರು ಆದರೆ ಅದು ನೇರ್ಪಕೆ ಆವ್ತು ಹೇಳ್ಲೆ ಬತ್ತಿಲ್ಲೆ. ಸಾಮಾನ್ಯ ಜೆನಂಗೊಕ್ಕು ಕೂಡಾ ಮಾರ್ಗಲ್ಲಿ ಹೋಪಗ  ಗೊಂತಾವ್ತು.
ಪ್ರತಿ ವರ್ಷ ರಿಪೇರಿ ಹೇಳಿ ಅದಕ್ಕೆ ಖರ್ಚು ಎಷ್ಟು ಮಾಡ್ತವು!!!. ಆದರೆ ಒಂದು ಮಳೆ ಬಂದ ಕೂಡ್ಲೆ ಮಾರ್ಗ  ಮಾಯ ಆಗಿ ಎಲ್ಲೊಡಿಕೆ ತೋಡು ಆಗಿಂಡು ಇರ್ತು.
ಇದೆಲ್ಲಾ ನಾವು ಕಟ್ಟಿದ ಪೈಸೆಯ ದುರುಪಯೋಗ ಹೇಳಿ ನವಗೆ ಅನ್ಸುತ್ತಿಲ್ಲೆಯಾ?

ಹಾಂಗಾರೆ ಇದೆಲ್ಲಾ ನೋಡಿಂಡು ನಾವು ಸುಮ್ಮನೆ ಕೂರೆಕ್ಕಾ? ನಮ್ಮ ಪೈಸೆ ಹಾಳು ಅಪ್ಪದರ ನೋಡಿಂಡು ಕಣ್ಣು ಮುಚ್ಚಿ ಸಹಿಸಿಂಡು ಇರೆಕ್ಕಾ?
ಇದಕ್ಕೆಲ್ಲಾ ಒಂದೇ ಉತ್ತರ ಹೇಳಿರೆ, ನಮ್ಮ ಪೈಸೆ ಎಲ್ಲಿಗೆ ಹೋವ್ತು, ಹೇಂಗೆ ಖರ್ಚು ಆವ್ತು, ಇದರ  ಎಲ್ಲದರ ಬಗ್ಗೆ ನವಗೆ ಮಾಹಿತಿ ತಿಳಿತ್ತ ವ್ಯವಸ್ಥೆ ಇರೆಕ್ಕು ಮಾತ್ರ ಅಲ್ಲದ್ದೆ ಅದು ನಮ್ಮ ಹಕ್ಕು ಕೂಡಾ ಅಗಿರೆಕು.
ಇದಕ್ಕಾಗಿಯೇ ಬಂದದು “ಮಾಹಿತಿ ಹಕ್ಕು ಅಧಿನಿಯಮ ೨೦೦೫”. ಇದು ಸರ್ಕಾರದ ಅಧೀನಲ್ಲಿ ಇಪ್ಪ ಯಾವುದೇ ಕಾರ್ಯಾಲಯಂಗಳಂದ ನವಗೆ ಬೇಕಾದ ಮಾಹಿತಿ ತೆಕ್ಕೊಂಬಲೆ ಎಡಿತ್ತ ಹಾಂಗಿಪ್ಪ ಕಾನೂನು.

ಅಂಬಗ ಬಡಿಗೆ ಕೊಟ್ಟು ಬಡುಶಿಗೊಂಬಲೆ ಸರ್ಕಾರ ತಯಾರು ಇದ್ದೋ ಹೇಳಿ ಕಾಂಗು ನಿಂಗೊಗೆ
ಕೆಲವೊಂದು ಅನಿವಾರ್ಯತೆಂದಾಗಿ ಸುಪ್ರೀಂ ಕೋರ್ಟಿನ ಆದೇಶದ ಮೇರೆಗೆ ಈ ಕಾನೂನು ತಾರದ್ದೆ ನಿವೃತ್ತಿ ಇಲ್ಲದ್ದೆ ಆಯಿದು ಕೇಂದ್ರ ಸರಕಾರಕ್ಕೆ.
ಕೇಂದ್ರದ ಈ ಕಾನೂನಿನ ಎಲ್ಲಾ ರಾಜ್ಯಂಗಳೂ ಅನುಷ್ಠಾನಕ್ಕೆ ತರೆಕು ಹೇಳಿ ಆದ ಕಾರಣ ದೇಶದ ಎಲ್ಲಾ ರಾಜ್ಯಂಗಳಲ್ಲಿಯೂ ಇದು ಜ್ಯಾರಿಗೆ ಬಯಿಂದು. ಆದರೆ ಈ ಕಾನೂನು ಜಮ್ಮು ,ಮತ್ತೆ ಕಾಶ್ಮೀರಕ್ಕೆ ಅನ್ವಯ ಆವ್ತಿಲ್ಲೆ.
ಅಂಬಗ ಈ ಕಾನೂನಿನ ಉಪಯೋಗ ನಾವು ಹೇಂಗೆ ಪಡವಲೆ ಅಕ್ಕು ಹೇಳಿ ತಿಳ್ಕೊಂಬ°

ಎರಡು ದಿನದ ಕಾರ್ಯಾಗಾರಲ್ಲಿ ಆನು ತಿಳುದ ವಿಶಯವ ನಿಂಗೊಗೆ ತಿಳುಶುವದು ಎನ್ನ ಉದ್ದೇಶವೇ ಹೊರತು, ಕಾನೂನಿನ ಪ್ರತಿಯೊಂದು ನಿಯಮಂಗಳ ವಿವರಿಸಿ ತಿಳುಸುವಷ್ಟು ಜ್ಞಾನ ಎನಗೆ ಇಲ್ಲೆ. ಆದರೂ ಪ್ರಾಥಮಿಕ ಜ್ಞಾನ ಎಲ್ಲರಿಂಗೂ ಸಿಕ್ಕಲಿ  ಹೇಳ್ತದೇ ಈ ಲೇಖನದ ಉದ್ದೇಶ.
ಮಾಹಿತಿ ಹಕ್ಕು ಹೇಳುವದು ಭಾರತದ ಸಂವಿಧಾನದ ಪ್ರಕಾರ ಪ್ರತಿಯೊಬ್ಬ ಪ್ರಜೆಯ ಮೂಲಭೂತ ಹಕ್ಕಿಂಗೆ ಒಳಪಟ್ಟಿದು ಹೇಳಿ ಸುಪ್ರೀಂ ಕೋರ್ಟು ತೀರ್ಪು ಕೊಟ್ಟಿದು.

“ಮಾಹಿತಿ ಹಕ್ಕು ಅಧಿನಿಯಮ ೨೦೦೫” ಹೇಳ್ತ ಹೆಸರಿಲ್ಲಿ (Right to Information Act 2005) ಈ ಕಾಯಿದೆ ೧೨/೧೦/೨೦೦೫ ರಿಂದ ಜ್ಯಾರಿಲಿ ಇದ್ದು.
ಈ ಕಾನೂನಿನ ವ್ಯಾಪ್ತಿಗೆ ಆರೆಲ್ಲಾ ಬತ್ತವು (ಹೇಳಿರೆ ನಾವು ಯಾವ ಯಾವ ಕಾರ್ಯಾಲಯಂಗಳಿಂದ ಮಾಹಿತಿ ತೆಕ್ಕೊಂಬಲೆ ಎಡಿಗು)?

  • ಕೇಂದ್ರ ಸರ್ಕಾರ ಮತ್ತೆ ಅದರ ಅಧೀನಲ್ಲಿ ಬಪ್ಪ ಸಂಸ್ಥೆಗೊ, ಮತ್ತೆ ಕಾರ್ಯಾಲಯ
  • ರಾಜ್ಯ ಸರ್ಕಾರ ಮತ್ತೆ ಅದರ ಅಧೀನಲ್ಲಿ ಬಪ್ಪ ಸಂಸ್ಥೆಗೊ ಮತ್ತೆ ಕಾರ್ಯಾಲಯ.
  • ಆದಾಯ ತೆರಿಗೆ, ವಾಣಿಜ್ಯ ತೆರಿಗೆ ಕಾರ್ಯಾಲಯ.
  • ವಿತ್ತ ಮಂತ್ರಾಲಯ (Finance Ministry)
  • ಪಾಸ್‍ಪೋರ್ಟ್ ಆಪೀಸು
  • ಮುನ್ಸಿಪಾಲಿಟಿ ಆಫೀಸು,
  • ಪೋಲಿಸ್ ಸ್ಟೇಶನ್,
  • ನ್ಯಾಯಾಲಯ
  • ಸಾರ್ವಜನಿಕ ಕ್ಷೇತ್ರ ಘಟಕಂಗೊ (Public Sector Units)-ONGC, BHEL, HAL, NTPC ಇತ್ಯಾದಿ
  • ಬ್ಯಾಂಕ್ ಗೊ (Public Sector Banks)
  • ಸರ್ಕಾರದ ಅನುದಾನಂದ ನೆಡವ ಯಾವುದೇ ಸರ್ಕಾರೇತರ ಸಂಸ್ಥೆಗೊ (NGO-Non Government Organisation)

ಕೇಂದ್ರ ಸರಕಾರ ಅಥವಾ ರಾಜ್ಯ ಸರಕಾರದ ಬೇಹುಗಾರಿಕೆ ಮತ್ತೆ ರಕ್ಷಣಾ ವಿಭಾಗಂದ ಮಾಹಿತಿ ತೆಕ್ಕೊಂಬಲೆ ಸಾಧ್ಯ ಇಲ್ಲದ್ದರೂ, ಬ್ರಷ್ಟಾಚಾರ ಮತ್ತೆ ಮಾನವ ಹಕ್ಕು ಉಲ್ಲಂಘನೆ ಬಗ್ಗೆ ಮಾಹಿತಿಯ ಕೇಳಿದಲ್ಲಿ ಅವು ಕೊಡೆಕ್ಕಾವ್ತು

ಸಾಮಾನ್ಯವಾಗಿ ಹೇಳುವದಾದರೆ, ಸಾಮಾನ್ಯ ಜನರಿಂದ ಕೂಡಾ ಸಂಗ್ರಹ ಆವ್ತಾ ಇಪ್ಪ ತೆರಿಗೆ ಹಣಂದ ನೆಡವಂಥಹ ಯಾವುದೇ ಸಂಸ್ಥೆ, ಕಾರ್ಯಾಲಯಂಗೊಇದರ ವ್ಯಾಪ್ತಿಲಿ ಬತ್ತವು.

ಮಾಹಿತಿ ಪಡಕ್ಕೊಂಬಲೆ ನಾವು ಎಂತ ಮಾಡೆಕ್ಕು?

  • ಪ್ರತಿಯೊಂದು ಸಂಸ್ಥೆ/ಕಾರ್ಯಾಲಯಂಗಳಲ್ಲಿ, ಇದರ ಬಗ್ಗೆ ಅರ್ಜಿ ತೆಕ್ಕೊಂಬಲೆ ಹೇಳಿ ಪ್ರತ್ಯೇಕ ಅಧಿಕಾರಿಯ ನೇಮಕ ಮಾಡಿರ್ತವು. ಅವಕ್ಕೆ ಪಬ್ಲಿಕ್ ಇನ್ಫೋರ್ಮೇಷನ್ ಆಫೀಸರ್ (PIO) ಹೇಳ್ತವು. ಇವಕ್ಕೆ ನಮ್ಮ ಅರ್ಜಿ ಕಳುಸೆಕ್ಕು.
  • ದೊಡ್ಡ ಕಾರ್ಯಾಲಯಂಗಳಲ್ಲಿ, ಹಲವಾರು ವಿಭಾಗಂಗೊ ಇಪ್ಪಗ ಪ್ರತಿಯೊಂದು ವಿಭಾಗಲ್ಲಿ ಇವರ ಅಧೀನಲ್ಲಿ ಅಸ್ಸಿಸ್ಟೆಂಟ್ ಪಬ್ಲಿಕ್ ಇನ್ಫೋರ್ಮೇಷನ್ ಆಫೀಸರ್ (APIO) ಕೂಡಾ ಇಪ್ಪ ಸಾಧ್ಯತೆ ಇದ್ದು.
  • ನಮ್ಮ ಅರ್ಜಿಯ ಬಿಳಿ ಕಾಗದಲ್ಲಿ ಬರದು ಕಳುಸಲೆ ಅಕ್ಕು. ಅರ್ಜಿಯ ಇಂಗ್ಲೀಷ್, ಹಿಂದಿ ಅಥವಾ ಆಯಾಯ ಪ್ರಾಂತ್ಯದ ಭಾಷೆ (ಕನ್ನಡ)ಲ್ಲಿ ಬರವಲೆ ಅಕ್ಕು
  • ಅರ್ಜಿಲಿ ನಮ್ಮ ಹೆಸರು ಮತ್ತೆ ವಿಳಾಸ ಇರೆಕು.
  • ಯಾವದರ ಬಗ್ಗೆ ಮಾಹಿತಿ ಬೇಕು ಹೇಳುವದು ಸ್ಪಷ್ಟವಾಗಿ ಬರೆಕು.
  • ವೈಯಕ್ತಿಕ ಹೆಸರಿಲ್ಲಿಯೇ ಅರ್ಜಿ ಇರೆಕು.
  • ನವಗೆ ಯಾವುದರ ಬಗ್ಗೆ ಮಾಹಿತಿ ಬೇಕಾದ್ದು ಹೇಳಿ ಮೊದಲೇ ಸರಿಯಾಗಿ ತಿಳ್ಕೊಳೆಕ್ಕು.
  • ಆ ಮಾಹಿತಿ ಎಲ್ಲಿ ಸಿಕ್ಕುಗು ಹೇಳ್ತ ಬಗ್ಗೆ ತಿಳ್ಕೊಂಡು ಅಲ್ಲಿಯ PIO ಗೇ ಅರ್ಜಿಯ ಕಳುಸೆಕ್ಕು
  • ಪ್ರಶ್ನೆ ನೇರವಾಗಿರೆಕು ಮತ್ತೆ ಸ್ಪಷ್ಟತೆ ಇರೆಕ್ಕು. ಹಾರಿಕೆಯ ಪ್ರಶ್ನೆ ಅಪ್ಪಲಾಗ.
  • ನವಗೆ ಯಾವ ಉದ್ದೇಶಕ್ಕೆ ಆ ಮಾಹಿತಿ ಬೇಕು ಹೇಳ್ತ ವಿವರ ಅದರಲ್ಲಿ ಕೊಡೆಕಾದ ಅಗತ್ಯ ಇಲ್ಲೆ.
  • ಒಂದು ವಿಶಯಕ್ಕೆ ಸಂಬಂಧ ಪಟ್ಟ ಪ್ರಶ್ನೆಗಳ ಒಂದು ಅರ್ಜಿಲಿ ಕೇಳಲಕ್ಕು

ನಮ್ಮ ಹುದ್ದೆಯ ಬಗ್ಗೆ ಬರವಲೆ ಆಗ. ನಮ್ಮ ವೈಯಕ್ತಿಕ ವಿವರಂಗೊ (ಜಾತಿ, ಭಾಷೆ, ಪಂಗಡ, ಖಾಯಂ ವಿಳಾಸ) ಕೊಡೆಕು ಹೇಳಿ ಇಲ್ಲೆ.

ಅರ್ಜಿಯ ಯಾವುದೇ ಸಂಘ ಸಂಸ್ಥೆಯ ಲೆಟರ್ ಹೆಡ್ ಲ್ಲಿ ಕಳುಸಲೆ ಆಗ. ಎಂತಕೆ ಹೇಳಿರೆ ಇದು ಸಾಮಾನ್ಯ ಪ್ರಜೆಗೊಕ್ಕೆ ಬೇಕಾಗಿ ಇಪ್ಪ ಕಾನೂನು.

  • ಬೇರೆ ಬೇರೆ ವಿಶಯಂಗಳ ಬಗ್ಗೆ ಕೇಳುವಾಗ ಪ್ರತಿಯೊಂದು ವಿಶಯಕ್ಕೆ ಸಂಬಂಧ ಪಟ್ಟು ಒಂದೊಂದು ಅರ್ಜಿ ಸಲ್ಲುಸೆಕ್ಕು.
  • ಅರ್ಜಿ ಶುಲ್ಕ ಕಟ್ಟಿರೆಕು.
  • ಅರ್ಜಿಲಿ ೧೫೦ ಶಬ್ದವ ಮೀರಲೆ ಆಗ ಹೇಳಿ ಕರ್ನಾಟಕ ರಾಜ್ಯ ಇತ್ತೀಚೆಗೆ ಕಾನೂನು ಮಾಡಿದ್ದು
  • ಅರ್ಜಿ ಶುಲ್ಕ ೧೦ ರೂಪಾಯಿ. ಇದರ ಪೋಸ್ಟಲ್ ಓರ್ಡರ್, ಅಥವಾ ಇನ್ನಾವುದೇ (ಡಿಮಾಂಡ್ ಡ್ರಾಫ್ಟ್, ನಗದು) ರೂಪಲ್ಲಿ ಕೊಡ್ಲೆ ಅಕ್ಕು
  • ಅರ್ಜಿಯ ಸ್ಪೀಡ್ ಪೋಸ್ಟ್ ಅಥವಾ ರಿಜಿಸ್ಟರ್ಡ್ ಪೋಸ್ಟಿಲ್ಲಿ ಕಳುಸುವದು ಸೂಕ್ತ. ಎಂತಕೆ ಹೇಳಿರೆ ನಾವು ಕಳುಸಿದ್ದಕ್ಕೆ ದಾಖಲೆ ಇರ್ತು.

ನಾವು ಕೇಳುವ ಮಾಹಿತಿಗೊ ಯಾವದೇ ರೂಪಲ್ಲಿ ಇಪ್ಪಲಕ್ಕು

  • CD, Floppy, Hard Disk,
  • ಮೈಲ್,
  • ಸುತ್ತೋಲೆ, ಕರಾರು ಪತ್ರ, ಆದೇಶಂಗೊ, ಲಾಗ್ ಪುಸ್ತಕ, ವರದಿ, ಕಾಗ ಪತ್ರ, ವಿದ್ಯುನ್ಮಾನ ರೂಪಲ್ಲಿ ಇಪ್ಪ ಯಾವುದೇ ಮಾಹಿತಿಗೊ (Soft Copy)

ನಾವು ಈ ರೀತಿ ಅರ್ಜಿ ಕೊಟ್ಟ ಮತ್ತೆ ಎಂತ ಆವ್ತು?

  • ಕೊಟ್ಟ ಅರ್ಜಿ PIO ಗೆ ತಲುಪಿದರೆ, ಅದು ಅವಂಗೆ ಸಿಕ್ಕಿದ ೩೦ ದಿನ ಒಳ ನವಗೆ ಮಾಹಿತಿ ಒದಗಿಸಿ ಕೊಡೆಕು.
  • ಒಬ್ಬ ವ್ಯಕ್ತಿಯ ಜೀವಕ್ಕೆ ಅಥವಾ ಸ್ವಾತಂತ್ರ್ಯಕ್ಕೆ ಸಂಬಂಧ ಪಟ್ಟ ಮಾಹಿತಿ ಕೇಳಿದಲ್ಲಿ, ಆ ಮಾಹಿತಿಗಳ ೪೮ ಗಂಟೆಗಳ ಒಳ ಅವು ಒದಗಿಸಿ ಕೊಡೆಕ್ಕಾವ್ತು.
  • ಕಳುಸಿದ ಅರ್ಜಿಗೆ ಬೇಕಾದ ವಿವರ PIO ಹತ್ರೆ ಇಲ್ಲೆ,  APIO ಹತ್ರಂದ ಅವ° ಪಡದು ನವಗೆ ಕೊಡೆಕು ಹೇಳಿ ಆದರೆ, ಇದಕ್ಕಾಗಿ ಅವ  ೫ ದಿನದ ಹೆಚ್ಚಿದ ಅವಧಿ ತೆಕ್ಕೊಂಬಲೆ ಅಕ್ಕು. ಹಾಂಗಾಗಿ ನವಗೆ ಮಾಹಿತಿ ಸಿಕ್ಕುವಾಗ ೩೫ ದಿನ ಆಗಿ ಹೋಕು.
  • ಈ ವಾಯಿದೆಂದ ಒಳ ನವಗೆ ಅಲ್ಲಿಂದ ಉತ್ತರ ಬಪ್ಪಲೇ ಬೇಕು. ಬಾರದ್ದರೆ, ಇವರ ಮೇಗಾಣ ಅಧಿಕಾರಿಗೆ ನಾವು ದೂರು ಕೊಡ್ಲೆ ಅಕ್ಕು
  • ಯಾವುದೇ ಕಾರಣಕ್ಕೆ ತಡವಾಗಿ ಅವು ಮಾಹಿತಿ ಕೊಟ್ಟಲ್ಲಿ, ಅದಕ್ಕೆ ಅವು ಯಾವುದೇ ಶುಲ್ಕ ವಸೂಲು ಮಾಡುವ ಹಾಂಗಿಲ್ಲೆ.
  • ನಿಗದಿ ಮಾಡಿದ ೩೦/೩೫ ದಿನ ಒಳ ಮಾಹಿತಿ ಕೊಡದ್ದಲ್ಲಿ, ದಿನಕ್ಕೆ ೨೫೦ ರೂಪಾಯಿಯ ಹಾಂಗೆ ಆ ಅಧಿಕಾರಿಗೊ ದಂಡ ಕಟ್ಟೆಕ್ಕಾವ್ತು.

ಹಾಂಗಾರೆ ೧೦ ರೂಪಾಯಿ ಕಟ್ಟಿದ್ದಲ್ಲಿ ಎಲ್ಲಾ ಮಾಹಿತಿ ಅವು ಕೊಡ್ತವೋ ಕೇಳಿರೆ, ಇಲ್ಲೆ ಹೇಳ್ಲಕ್ಕು

  • ನಾವು ಕೇಳಿದ ಮಾಹಿತಿಗೊ ಹಸ್ತ ಪ್ರತಿ ಅಥವಾ ಮುದ್ರಿತ ರೂಪಲ್ಲಿ ಇದ್ದರೆ, ಅದರ ಫೋಟೊ ಕೋಪಿ ತೆಗದು ಕೊಡೆಕು.
  • ಆದರೆ ಇದಕ್ಕೆ ಪ್ರತಿ ಪುಟಕ್ಕೆ ಅವು ೨ ರೂಪಾಯಿ ಹಾಂಗೆ ನವಗೆ ಚಾರ್ಜ್ ಮಾಡ್ಲೆ ಅಕ್ಕು. ಈ ಬಗ್ಗೆ ನವಗೆ ಮಾಹಿತಿ ಕೊಟ್ಟು, ನಾವು ಪೈಸೆ ಕಟ್ಟಿದ ಮತ್ತೆ, ನವಗೆ ಫೋಟೊ ಕೋಪಿಯ ಅವು ಕಳುಸಿ ಕೊಡೆಕ್ಕಾವ್ತು.
  • ನಾವು ಕೇಳಿದ ಮಾಹಿತಿ ವಿದ್ಯುನ್ಮಾನ ಮಾಧ್ಯಮ (soft copy) ಲ್ಲಿ ಇದ್ದರೆ, ಅದರ ಪ್ರತಿಗೆ ಪ್ರತಿ CD ಗೆ ೫೦ ರೂಪಾಯಿಯ ಹಾಂಗೆ ಚಾರ್ಜ್ ಮಾಡ್ತವು.
  • ಯಾವದೇ ರಿಕಾರ್ಡುಗಳ ನಾವೇ ಹೋಗಿ ನೋಡೆಕ್ಕಾದರೆ, ಮೊದಲಾಗಿ ಇಂಥಾ ದಿನ ಇಷ್ಟು ಹೊತ್ತಿಂಗೆ ಬತ್ತೆ, ಇಷ್ಟು ಹೊತ್ತು ವರೆಗೆ ಇರ್ತೆ ಹೇಳ್ತ ಮಾಹಿತಿ ಅವಕ್ಕೆ ಕೊಡೆಕು.
    ನಾವು ಅಲ್ಲಿ ಇಪ್ಪ  ಸುರುವಾಣ ಒಂದು ಗಂಟೆಗೆ ಎಂತ ಚಾರ್ಜ್ ಮಾಡುವ ಹಾಂಗಿಲ್ಲೆ. ಮತ್ತೆ ಪ್ರತಿ ಗಂಟೆಗೆ ೫ ರೂಪಾಯಿಯ ಹಾಂಗೆ ಅವು ಚಾರ್ಜ್ ಮಾಡ್ಲೆ ಅಕ್ಕು
  • ದೇಶದ ರಕ್ಷಣೆಗೆ ಸಂಬಂಧ ಪಟ್ಟದು, ಕೋರ್ಟ್ ಕೇಸಿಲ್ಲಿ ಇಪ್ಪ ಮಾಹಿತಿಗೊ, ವೈಜ್ಞಾನಿಕ ಮಾಹಿತಿಗೊ, ಅಥವಾ ತುಂಬಾ ರಹಸ್ಯ ಮಾಹಿತಿಗಳ ನಾವು ಕೇಳಿದರೂ, ಅವು ಕೊಡೆಕಾದ ಅಗತ್ಯ ಇಲ್ಲೆ.
    ಒಬ್ಬನ ವೈಯಕ್ತಿಕ ವಿಶಯಂಗಳ ಬಗ್ಗೆ ನಾವು ಕೇಳಿದ ಮಾಹಿತಿ ಅವು ಕೊಡೆಕಾದ ಅಗತ್ಯ ಇಲ್ಲೆ.
  • ಒಂದು ವೇಳೆ ನಾವು ಕೇಳಿದ ಮಾಹಿತಿ ಅವು  ಒದಗುಸುತ್ತವಿಲ್ಲೆ ಹೇಳಿ ಆದರೆ, ಅದಕ್ಕೆ ಸರಿಯಾದ ಕಾರಣ ಕೊಡೆಕು. ಮತ್ತೆ ಇಂತಿಷ್ಟು ದಿನದ ಒಳ ಈ ಬಗ್ಗೆ ಅಪೀಲ್ ಮಾಡ್ಲಕ್ಕುಹೇಳಿಯೂ,ಅದರ ಆರಿಂಗೆ ಮಾಡೆಕ್ಕಾದ್ದು ಹೇಳಿಯೂ ತಿಳುಶೆಕ್ಕು.
  • ಈ ಕಾನೂನಿನ ಬಲಂದಾಗಿ ಎಷ್ಟೋ ಅವ್ಯವಹಾರಂಗೊ, ಬ್ರಷ್ಟಾಚಾರಂಗೊ ಬಯಲಿಂಗೆ ಬಯಿಂದು.
  • ಇಂದು ಜೈಲಿಲ್ಲಿ ಕೂರಿಸಿ ಸಮ್ಮಾನ ಮಾಡ್ತ ಕಸಬಿಂಗೆ ಅಥವಾ ಅಬ್ಜಲ್ ಗುರುವಿಂಗೆ ನಮ್ಮ ತೆರಿಗೆಂದ ಎಷ್ಟು ಪೈಸೆ ಖರ್ಚು ಮಾಡಿದ್ದವು ಹೇಳ್ತ ವಿವರಂಗೊ ಎಲ್ಲಾ ತಿಳಿವಲೆ ಸಹಕಾರಿ ಆದ್ದು ಇದೇ ಕಾನೂನು.

ಜ್ಯಾರಿಲಿ ಇಪ್ಪ ಒಂದು ಪ್ರಬಲವಾದ ಕಾಯಿದೆಯ ಉಪಯೋಗ ಮಾಡಿ ಮಾಹಿತಿ ತೆಕ್ಕೊಂಬ ಅಧಿಕಾರ ನವಗೆ ಇದ್ದು.

ಈ ಅಸ್ತ್ರವ ಬೇಕಾದ ಕಾಲಕ್ಕೆ ಉಪಯೋಗಿಸಿ ಬೇಕಾದ ಮಾಹಿತಿ ಪಡಕ್ಕೊಂಬೊ°.

~*~*~

ಈ ಲೇಖನದ ಉದ್ದೇಶ ಹೀಗೊಂದು ಕಾಯಿದೆ ಇದೆ ಎಂದು ತಿಳಿಯಪಡಿಸುವುದು ಮಾತ್ರ. ನಾವು ಯಾವುದೇ  consultation ಸಂಘಟನೆಯಲ್ಲ.
ಶರ್ಮಪ್ಪಚ್ಚಿ
Latest posts by ಶರ್ಮಪ್ಪಚ್ಚಿ (see all)

92 thoughts on ““ಮಾಹಿತಿ ಹಕ್ಕು ಕಾಯಿದೆ”- ಇದರ ತಿಳಿವದು ನಮ್ಮ ಹಕ್ಕು

  1. ಶರ್ಮಪ್ಪಚ್ಚಿಯ ಶುದ್ದಿಗೆ ಡಿಮಾಂಡಪ್ಪೋ ಡಿಮಾಂಡ್.

  2. ಸರ್ ಒಬ್ಬ ಸರಕಾರಿ ಅಧಿಕಾರಿ ತನ್ನ ಅನ್ಯಾರೋಗದಿಂದ ಇರುವಾಗ ಅಂತ ಬೇರೆ ವ್ಯಕ್ತಿಯನ್ನು ತನ್ನ ಸಹಾಯಕ ಕೆಲಸಗಾರನಾಗಿ ತೆಗೆದುಕೊಳ್ಳಬಹುದ ಇಲ್ಲವಾ ಇದ್ದರ ಬಗ್ಗೆ ಮಾಹಿತಿ ಬೇಕು

  3. ಬಿ. ಫಿ. ಎಲ್ ಕಾರ್ಡ ಬಗ್ಗೆ ಮಾಹಿತಿಯನ್ನು ಉಚಿತವಾಗಿ ಕೊಡಬೇಕು

  4. ನಾನು ಪುರಸಭೆಗೆ ಮಾಹಿತಿ ಕೇಳಬೇಕು… ಗೃಹ ನಿರ್ಮಾಣ ಮತ್ತು ಶೌಚಾಲಯ ನಿರ್ಮಾಣದ ಬಗ್ಗೆ. ಯಾಕೆಂದರೆ ನೀಡಬೇಕಾದ ಫಲಾನುಭವಿಗಳಿಗೆ ನೀಡದೇ ತಮಗೆ ಬೇಕಾಗಿರುವವರಿಗೆ ಮಾತ್ರ ಇದರ ಉಪಯೋಗ ಮಾಡಿದ್ದಾರೆ ಆದ ಕಾರಣ ನಾನು ಯಾವ ಯೋಜನೆಯಡಿ ಮಾಹಿತಿ ಹಕ್ಕು ಅರ್ಜಿ ಸಲ್ಲಿಸಬೇಕು ಎಂಬುದನ್ನು ತಿಳಿಸಿ….

  5. naanu Obc Certificate bekagide arji 2baari haakiddaru tahasildar reject maadiddare kaaran koduttilla tahadildar panditrav biradar

  6. ನನ್ನ ಹೆಸರು ಬಸವರಾಜ ನನ್ನಗೆ ನಮ್ಮ ಗ್ರಾಮ ಪಂಚಾಯತಯಲ್ಲಿ ಬರುವ ರಸ್ತೆಗಳ ಪೂಟಗಳಲ್ಲಿ ವಿವರಣೆ ಬೆಕಾಗಿದೆ ಅದಕೆ ಯಾರಿಗೆ ಅಜೀ ಸಲ್ಲೀಸಬೇಕು ವಿವರಣೆ ನೀಡಿ

  7. manyare navu vijayapur ,indi tq.babalada gram panchayat adiyalli baruvavaru , vyayaktika nalagala amount varshikavagi estu tax tegedukollabeku panchayat nalli , yakandare namage 1000 rs varshakke tegedu Kolkata idare , panchayata nalli bikshukara Kara, angavikalara Kara, arogya Kara heegu iruttadeye idara mayiti namage tilisi sir

  8. Sir/madam.
    PDO ..madan hipparga ivarige gram panchayati yalli mahiti application nedi…100 days agide….adru mahiti niduttilla kelidre koduteni anta helutidare….Tp AO officers Avarigu application kottu 15 days adru yavaderiti..reply bandilla…hagadre navu enu madabeku…yarige arji.salisabeku….Tbilisi…

    1. ೨೦೦೫ ರಲ್ಲಿ ಜಾರಿಗೆ ಬಂದರು ಈಗ ಹೆಚ್ಹು ಚಲಾವಣೆಯಲ್ಲಿ ಇದೆ

  9. ರೇಶನ್ ಕಾರ್ಡ್ಗಳೂ ಯಾವಾಗ್ ಬಿಡುಗಡೆ ಆಗುತ್ತವೆ ….

  10. ಯಲರು resahn ಕಾರ್ಡ್ ಯಾವಾಗೆ ಬರುತವೋ ಯಲರು resahan ಕಾರ್ಡ್ ಹಾಕಿ ಬಹಳ ದೇನಾ ಆದರು ಇನು ಕಾರ್ಡ್ ಬಂದಿಲ

    ಮಾತು ವೋಟರ್ ಕಾರ್ಡ್ ೨೧ ದೆನದಲಿ ಕುಡ ಬೇಕು ಆದ್ರೂನು ವೋಟರ್ ಕಾರ್ಡ್ ನು ಬರುತಾ ಇಲ್ಲ

    ಇದರ ಬಗೆ ಮಾಹೆತಿ ಯನು ಕುಡ್ಲೆ ತಿಳಿಸಬೇಕೆಂದು ವಿನಂತಿ ….

    ತಮ್ಮ ವಿಕ್ಷ್ವಸಿ ಮನ್ಸೂರ್ ಮ್ ಭಾವಿಕಟ್ಟಿ
    ಸಾ : ಅಣ್ಣಿಗೇರಿ

  11. ತುಂಬಾ ಒಳ್ಳೆಯ ಸುದ್ದಿ ಜನರಲ್ಲಿ ಹೀಗೆ ಜಾಗೃತಿ ಉಂಟು ಮಾಡಿ

  12. ರಾಯಚೂರು ಜಿಲ್ಲೆಯ ಸಿಂಧನೂರು ನಗರದ ನಗರಸಭೆಗೆ ಇದೀಗ ಪತ್ರಕರ್ತರು ಅಕ್ರಮವಾಗಿ ಸುಳ್ಳು ದಾಖಲೆ ಸಲ್ಲಿಸಿ (ದಾಖಲೆ ಯಾವುದೇ ದಾಖಲೆ ಸಲ್ಲಿಸದೇ)ನಿವೇಶನ ಪಡೆದುಕೊಂಡಿದ್ದ ರ ಕುರಿತಾಗಿ, ಹಾಗೂ ನ್ಯಾಯಾಲಯ ಜಾಗೆಯಲ್ಲಿ ನಗರಸಭೆ ವತಿಯಿಂದ ಉದ್ಯಾನವನ ನಿರ್ಮಿಸುತ್ತಿರುವರು ಅದರ ಟೆಂಡರ್ ಮಾಹಿತಿ, ಡಿಜೈನ್ ಕೇಳಿರುತ್ತೇನೆ ಮಾಹಿತಿಯನ್ನು ನೀಡುತ್ತಿಲ್ಲ. ಅಥವಾ ಇಲ್ಲ ಎಂದು ತಪ್ಪಾಗಿ ನೀಡಿರುತ್ತಾರೆ ನಾನೇನು ಮಾಡಬೇಕು ?

  13. ನಾನು ಒಬ್ಬ ತಮಿಳು scಆಗಿದ್ಧು ನನ್ನ ತಂಧೆಯ ಹೆಸರು ಸುಬ್ರಮಣಿ ಎಂಬ ಕಾರಣಕ್ಕೆ ನನಗೆ ನನ್ನ ಜಾತಿ ಪ್ರಮಾಣ ಪತ್ರವನ್ನು ಕೊಡಲು ನಿರಕರಿಸುತಿದ್ದರೆ ಧಯಮಡಿ ನನಗೆ ನನ್ನ ಜಾತಿ ಪ್ರಮಾಣ ಪತ್ರವನ್ನು ಕೊಡಲು ಅಧೆಶಮಡಿ ನಾನು ಒಬ್ಬ ಡೀಗ್ರೀ ಮುಗಿಸಿದ್ದು ವಿಧ್ಯಾರ್ಥಿ ಮತ್ತು ಕಡು ಬದವನಗಿರುತ್ಹೇನೆ ನನ್ನ ಜಾತಿಯು ಮೋಚಿ ಹಗಿರುಥಧೆ ನನಗೆ ಜಾತಿ ಪ್ರಮಾಣ ಪತ್ರ ಇಲ್ಲಧ ಕರಣ ಶಿಕ್ಷಣ ಮತ್ತು ಉಧ್ಯೊಗ ಎರಡಕ್ಕೂ ತುಂಬ ತೊಂಧರೆ ಆಗುತ್ಹಿಧೆ ಇ ಬಗ್ಗೆ ಕ್ರಮಗೊಳ್ಳಿ ನಾನು ಶಿವಮೊಗ್ಗ ಜಿಲ್ಲೆ ಭದ್ರಾವತಿ ಥಳುಕ್ ಟಿಕೆ ರಸ್ತೆ ನೆಹರು ನಗರ ವಾಸಿ ಧಯಮಡಿ ನನ್ನ ಸಮಸ್ಯೆ ಯನ್ನು ಬಗೆ ಹರಿಸಿ 7204893760 ಇದು ನನ್ನ ಮೊಬೈಲ್ ಸಂಕೆ ಇ ಬಗ್ಗೆ ನನಗೆ ಪರಿಹಾರ ಮತ್ತು ಸೂಕ್ತ ಮಾಹಿತಿ ನೀಡಿ

    1. ನಿಮ್ಮ ತಂದೆ ಪರಿಶಿಷ್ಟ ಜಾತಿಯವರೆಂಬ ಪ್ರಮಾಣ ಪತ್ರ ಇದೆಯೇ? ಇರುವುದಾದರೆ ಅದನ್ನು ತಾಲೂಕು ಕಚೇರಿಗೆ ತೋರಿಸಿ, ಅವರಿಗೆ ಅರ್ಜಿ ಸಲ್ಲಿಸಿ.

    2. ಅಂದರೆ ತಂದೆಯ ಶಾಲಾ ದಾಖಲೆ , ರೇಶನ್ ಕಾರ್ಡ್ ,ಸರ್ಕಾರದಿಂದ ಕೊಡಲಾದ ಯಾವುದೇ ದಾಖಲೆ ಇದ್ದರೆ ಅದನ್ನು ಸಲ್ಲಿಸಿ

  14. ನಾಗರಾಜ ಅವರೇ, ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು…
    ಇದು ಹವಿಗನ್ನಡ (ಹವ್ಯಕ) ಭಾಷೆಗೆ ಮೀಸಲಾದ ವೆಬ್‌ಸೈಟ್‌. ಹಾಗಾಗಿ ಕನ್ನಡ ಇಲ್ಲಿ ಕಾಣಿಸದು. ಮೇಲಿನ ಲೇಖನ ತಮಗೆ ಅರ್ಥವಾಗಿದೆ ಎಂದು ನನ್ನ ಅನಿಸಿಕೆ. ಎಲ್ಲರಿಗೂ ಈ ಭಾಷೆಯನ್ನು ಪರಿಚಯಿಸುವ ಸಣ್ಣ ಪ್ರಯತ್ನವೇ ಈ ವೆಬ್‌ಸೈಟ್.

  15. ಒಳ್ಳೆ ಕೆಲಸ ಮಾಡಿರುವಿರಿ, ಇದನ್ನು ಸ್ಪಷ್ಟ ಕನ್ನಡದಲ್ಲಿ ನೀಡಲು ಪ್ರಯತ್ನಿಸಿ

  16. ಕನ್ನಡದಲ್ಲಿ ಚನ್ನಾಗಿ ಟೈಪ ಮಾಡಿ

  17. Kptcl GANGMEN hale workers ಮೊಬೈಲ್
    Nom and work deivesion Address

  18. ನನಗೆ ಆಹಾರ್ ಬಗ್ಗೆ, ಪwiತರ cIಟಿ ಬಗ್ಗೆ ಮಾಹಿತಿ ಬೇಕು.

  19. “ಮಾಹಿತಿ ಹಕ್ಕು ಕಾಯಿದೆ” ಈ ಮಾಹಿತಿಗೆ ಬಂದ ಒಪ್ಪದ ಹಿಂದೆ ಹೋಗಿ, ವಿಷಯ ಇಂದು ಓದಿದೆ!. ನಮ್ಮ ಹಕ್ಕು ಕಾಯಿದಗೆ ಸಂಬಂಧ ಪಟ್ಟ ವಿಚಾರ!! ಒಳ್ಳೆ ಮಾಹಿತಿ ಕೊಟ್ಟ ಶರ್ಮಭಾವಂಗೆ ಧನ್ಯವಾದ.

  20. ನಾನು ಒಂದು ಮಾಹಿತಿ ಕೇಳಿ ಮೂರು ತಿಂಗಳಾಯಿತ್ತು ಮಾಹಿತಿ ಕೋಟ್ಟಿಲ್ಲ ಮುಂದೆ ಏನು ಮಾಡಬೇಕು ತಿಳಿಸಿ ಮೋ:-9008821215

  21. ಅನ್ಯಾಯ ತಡಯುದಕೆ “ಮಾಹಿತಿ ಹಕ್ಕು ಕಾಯಿದೆ” ತುಂಬಾ ಒಳಯದಾಗಿದೆ

  22. ಇ-ಮೇಲ್ ಮುಕಾಂತರ ಇದ್ದರೆ ಚೆನ್ನಾಗಿರುತೆ

  23. bmrcl maintainer\train operator final marks list was incorrect it seems something went to wrong

  24. nanu state bank of india ge mahiti hakku hakabeku because sc loan nandu select agide but manager kodtayilla nanu hakabeku hainugarik gagi loan keltayidu respance madtayilla

  25. ಚಾಮುಂಡೇಶ್ವರಿ ಎಲೆಕ್ಟ್ರಿಸಿಟಿ ಸಪ್ಲೈ ಕಾರ್ಪೋರೇಶನ್ ಲಿಮಿಟೆಡ್ ಅಸಿಸ್ಟೆಂಟ್ ಲಿನೆಮನ್ ಪೋಸ್ಟ್ಸ ಸೆಲೆಕ್ಷನ್

  26. PDO ಗ್ರಾಮ ಪಂಚಾಯತ್ dongaragon ಅವರು ಇಂದಿರಾ ಆವಾಸ ಯೋಜನೆ ೨೦೧೪-೧೫ ನೇ ಅಡಿ ಮನೆಗಳ ಹಂಚಿಕೆ ಫಾಲನುಭಾವಿಗಳ ಆಯ್ಕೆ ಪಟ್ಟಿ ಕೇಳಿದರು ಕೊಡುತ್ತಿಲ್ಲ

  27. ನಮ್ಮ ಗ್ರಾಮ ಪಂಚಾಯತ್ ನಲ್ಲಿ ಮನೆಗಳನ್ನು ಸದಸ್ಯರು ತಲಾ 20000 ಸಾವಿರ ರೂಪಾಯಿಗಳನ್ನು ತಗೆದುಕೊಂಡು ಬಡವರಿಗೆ ಅನ್ನಾಯ ಮಾಡುತ್ತಿದ್ದಾರೆ ಅದನ್ನು ಕೇಳಲು ಹೋದರೆ ನಾವು ಆಯ್ಕೆ ಮಾಡಿದ್ದೇವಿ ಅಂತ ಸುಳ್ಳು ಹೇಳಿ ಕಳುಸುತ್ತಾರೆ ಮತ್ತು ಆ ಆಯ್ಕೆ ಮಾಡಿದ ಯಾದಿಯನ್ನು ನೋಟಿಸ್ ಬೋರ್ಡಿಗಿ ಅಚ್ಚು ಅಂದರೆ ಅದನ್ನು ಅಚ್ಚುವುದಿಲ್ಲಾ ಅಂತ ಹೇಳುತ್ತಾರೆ ನೀವು ಯಾರಿಗೆ ಬೇಕಾದರು ಹೇಳಿ ನಾವು ಅದನ್ನು ಅಚ್ಚುವದಿಲ್ಲಾ ಅಂತ ಹೇಳುತ್ತಾರೆ ಇದನ್ನು ಪರೀಸಿಲನೆ ಮಾಡಿ ಆ ಯಾದಿಯನ್ನು ತಡೆ ಇಡಿಯಬೇಕೆಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇವೆ. ಸಾ|| ಹಾಲಕೆರೆ ತಾ|| ರೋಣ ಜಿ|| ಗದಗ ರಾಜ್ಯ || ಕರ್ನಾಟಕ

    1. ನಾನು ಕೂಡ ನಿನ್ನ ತರಹದ ಸಮಸ್ಯೆ ಅನುಬವಿಸುತ್ತಿದ್ದೇನೆ

  28. http://d22r54gnmuhwmk.cloudfront.net/photos/9/fo/jm/GNFojmGhVHeXrPN-556×313-noPad.jpg
    This petition will be delivered to:

    Prime Minister of India
    Narender Modi
    Appoint Chief Information Commissioner in the Central Information Commission

    Anjali Bhardwaj
    Petition by
    Anjali Bhardwaj
    New Delhi, India

    Dear Shri Narendra Modi,

    The Right to Information Act is under threat once again! This time due to the Government not appointing a Chief Information Commissioner.

    How can the Central Information Commission (CIC), responsible for adjudicating RTI appeals, function effectively without a Chief Information Commissioner?

    Yet for the first time sincethe landmark legislation was passed in 2005, there is no Chief Information Commissioner in the CIC. The post has remained vacant since August 22, 2014.

    This massive delay in appointing a new Chief is severely hampering the working of the Information Commission. There is already a huge backlog in the Commission with close to 25,000 appeals and complaints pending.

    This ever-increasing backlog of cases challenges the citizen’s fundamental Right to Information and creates roadblocks in fighting corruption, big and small.

    PM Modi, you have often stressed on ‘anti-corruption’ and ‘quest for transparency’ as the driving forces of your good governance program. How then can such a key institution to fight corruption remain rudderless?

    According to media reports, the delay in appointing a new Chief is because there is no Leader of Opposition. However, the RTI Act clearly states that in the absence of a recognised Leader of Opposition, the leader of the single largest opposition party should be part of the committee to appoint the new chief.

    Since the RTI Act is absolutely clear on this, we ask you, as a citizens of this country, to ensure the post is filled immediately.

    The RTI Act is one of the most empowering legislations for citizens and there are millions of examples from across the country on how people have successfully used RTI to hold the government accountable.

    We, therefore, ask you to appoint a Chief Information Commissioner without further delay and walk the talk on your transparency and good governance agenda.

    Yours Sincerely,

    Anjali Bhardwaj, Nikhil Dey & Amrita Johri

    To:
    Narender Modi, Prime Minister of India
    Appoint Chief Information Commissioner in the Central Information Commission
    Sincerely,
    [Your name]

  29. ಸರ nanagi holada saluyagi nanu ಬೂ mapana ealakigi arji ಸಲಿಸೆದು ೬ ಮಂತ್ಸ್ ಆಯಿತು ಬಟ್ yuadi ಪ್ರತಿಕ್ರಿಯಿ ಬದಿಲ್ಲ nanu ಮಾಹಿತಿ ಹಕಿನಲ್ಲಿ kilabahudi ಸರ್.

  30. ಚಲೋ ಮಾಡಿ ಹೇಳಿದ್ದಿ. ಸರಳವಾಗಿ ಅರ್ಥ ಆಗೋ ಹಾಗಿದ್ದು. ಆದರೆ ನಾವೇ ಖುದ್ದುಭೇಟಿ ನೀಡಿ ರೆಕಾರ್ಡು ನೋಡುವ ವಿಧಾನ ಹೇಗೆ ಹೇಳಿ ಗೊತ್ತಾಜಿಲ್ಲೆ.

  31. nimma bhashe bhahala ista Aitu. sarakari kacherigalali mahiti hakku upayogisi harass Aguthide. namaganthu sarakari seve saakagi bittide. nimma suggestion Enu?

    1. ನಮ್ಮ ಉದ್ದೇಶ “ಮಾಹಿತಿ ಹಕ್ಕು ಕಾಯಿದೆ” ಬಗ್ಗೆ ಜನರಿಗೆ ಮಾಹಿತಿ ಕೊಡುವುದು ಮಾತ್ರ.
      ಯಾವುದೇ ಕಾನೂನುಗಳು ಬಂದಾಗ ಉಪಯೋಗದೊಂದಿಗೆ ದುರುಪಯೋಗವೂ ಆಗುವ ಸಾಧ್ಯತೆ ಇದ್ದೇ ಇದೆ.

  32. ಸರ್ ನಿಮಗೆ ಉತ್ತರ ಗೊತ್ತಿದ್ದರೆ ದಯಮಾಡಿ ಕೊಡಿ. ಇಲ್ಲದಿದ್ದರೆ ನಮಗೂ ಅದರ ಬಗ್ಗೆ ತಲೆನೋವೂ ಬೇಡಾ ಸರ್.

    1. ಇಲ್ಲಿ ಕೊಟ್ಟ ಲೇಖನದ ಉದ್ದೇಶ ಮಾಹಿತಿ ಹಕ್ಕು ಕಾಯಿದೆ ಬಗ್ಗೆ ಮಾತ್ರ.
      ಯಾವುದೇ ಮಾಹಿತಿ ಬೇಕಿದ್ದಲ್ಲಿ ಆಯಾಯ ಕಚೇರಿಯ ಪಬ್ಲಿಕ್ ಇನ್ಫೋರ್ಮೇಷನ್ ಆಫೀಸರ್ (PIO) ಮೂಲಕವೇ ತಿಳಿಯ ಬೇಕು.

  33. ಸರ್ ನಾನು ಕೇಳುವುದೇನೆಂದರೆ ಯಾವುದೆ ವೆಕಲ್ ತೆಗೆದುಕೊಂಡರೆ ಉದಾಹರಣೆಗೆ ಮೋಟರ ಸಯ್ಕಲ್ ಅದಕ್ಕೆ ಇನ್ಫುರೆನ್ಫ್ ಬೇಕಾ. ಬೇಕಿದ್ದರೂ ಅದು ಏಕೆ ?. ಅದಕೇ ಮತ್ತು ಪೋಲಿಸರಿಗೆ ಏನು ಸಂಬಂಧ ? ಅದಕ್ಕೆ ೩೦೦ ರೂ ದಂಡ ಕಟ್ತಬೇಕೆ. ದಯವಿಟ್ಟು ಮಾಹಿತಿ ಕೊಡಿ

  34. ಸರ್ ನಾನು ಕೇಳುವುದೇನೆಂದರೆ ಯಾವುದೆ ವೆಕಲ್ ತೆಗೆದುಕೊಂಡರೆ ಉದಾಹರಣೆಗೆ ಮೋಟರ ಸಯ್ಕಲ್ ಅದಕ್ಕೆ ಇನ್ಫುರೆನ್ಫ್ ಬೇಕಾ. ಬೇಕಿದ್ದರೂ ಅದು ಏಕೆ ?. ಅದಕೇ ಮತ್ತು ಪೋಲಿಸರಿಗೆ ಏನು ಸಂಬಂಧ ? ಅದಕ್ಕೆ ೩೦೦ ರೂ ದಂಡ ಕಟ್ತಬೇಕೆ. ದಯವಿಟ್ಟು ಮಾಹಿತಿ ಕೊಡಿ

  35. ಮಾಹಿತಿ ಪಡೆಯಲು ಅರ್ಜಿ ಸಲ್ಲಿಸಿ ೪೦ ದಿನ ಕಳೆದರೂ ಇದುವರೆಗು ಮಾಹಿತಿ ನೀಡಿಲ್ಲ ಈಗ ನಾನೇನು ಮಾಡಬೇಕು ?

    1. ಗೋವಿಂದರಾಜು,
      ಅದು ಹವ್ಯಕ ಭಾಷೆ. spelling mistake ಅಲ್ಲ ಅನ್ಸಿತ್ತುದೆ.

  36. ಮಾಹಿತಿ ಹಕ್ಕಿನ ಕಾಯಿದೆಯ ವಿವರವಾದ ಮಾಹಿತಿಗೆ ಧನ್ಯವಾದ ಅಪ್ಪಚ್ಚಿ.

  37. ಅಪ್ಪಚ್ಚಿ,
    ಯಾವತ್ರಾಣ ಹಾಂಗೆ ಪರಿಪೂರ್ಣ ವಿವರಂಗಳ ತೆಕ್ಕೊಂಡು ಬಯಿಂದಿ. ತುಂಬಾ ವಿಷಯಂಗ ಗೊಂತಾತು.

    ಮಾಹಿತಿ ಹಕ್ಕು ಕಾಯಿದೆ ಹೇಳಿದರೆ ಎಂತದು? ಎಂತಕ್ಕೆ ಇಪ್ಪದು? ಎಂತ ಆವುತ್ತು? ಇತ್ಯಾದಿ ವಿವರಂಗಳ ಒಂದಾಗಿ ಒಂದು ಲಾಯ್ಕಲ್ಲಿ ವಿವರ್ಸಿದ್ದಿ ಅಪ್ಪಚ್ಚಿ.

    ಧನ್ಯವಾದಂಗೋ.

    1. ಸಣ್ಣ ಮಟ್ಟಿನ ಪ್ರಥಮ ಮಾಹಿತಿ ಕೊಡ್ತ ಪ್ರಯತ್ನ ಮಾಡಿದ್ದೆ.
      ವಿಮರ್ಷೆಗೆ ಧನ್ಯವಾದಂಗೊ

  38. ತುಂಬಾ ತುಂಬಾ ಧನ್ಯವಾದಂಗೊ ಅಪ್ಪಚಿಗೆ.

  39. ಮಾಹಿತಿ ಹಕ್ಕು ಅಧಿನಿಯಮ ನಾಗರಿಕರಿಂಗೆ ಒಂದು ಪ್ರಬಲ ಅಸ್ತ್ರ.
    ಕೆಲವರು ಇನ್ನೊಬ್ಬರ ಮೇಲೆ ದ್ವೇಷ ಸಾಧಿಸಲೆ,ಇನ್ನೊಬ್ಬರ ಬಗ್ಗೆ ಅನಗತ್ಯವಾಗಿ ತಿಳಿವಲೆ ಇದರ ದುರುಪಯೋಗ ಮಾಡುತ್ತವು.ಆದರೂ ಈ ಕಾಯದೆ ತುಂಬಾ ಉಪಯೋಗಿ.
    ಇದರ ಪ್ರಕಾರ ಪ್ರತಿ ಇಲಾಖೆಲಿ ಕೆಲಸ ಮಾಡುವ ಅಧಿಕಾರಿಗಳ ಹೆಸರು,ವಿವರ ಜಾಲತಾಣಲ್ಲಿ ಲಭ್ಯ.
    ಅದರ ನೋಡಿಕೊಂಡು ಅರ್ಜಿ ಸಲ್ಲಿಸೆಕ್ಕು.ಪೋಸ್ಟಲ್ ಆರ್ಡರ್ ಅಥವಾ ಡ್ರಾಫ್ಟ್ ನ ಆ ಇಲಾಖೆಲಿ ಆರ ಹೆಸರಿಲಿ ತೆಗೆಯೆಕ್ಕು, ಆರು ಪಿ.ಐ.ಒ. ಯಾ ಎ.ಪಿ.ಐ.ಒ. ಹೇಳಿ ಪ್ರತಿ ಕಚೇರಿಯವೂ ಸಾರ್ವಜನಿಕ ತಿಳುವಳಿಕೆ ಪತ್ರ ಜಾರಿ ಮಾಡೆಕ್ಕು ಹೇಳಿಯೂ ಇದ್ದು.
    ಒಂದು ಕಚೇರಿಲಿ ಬೇಕಾದ ಮಾಹಿತಿ ಇಲ್ಲದ್ದರೆ ಅವು ಅವರ ಅಧೀನಸ್ಠ ಕಚೇರಿಗೆ ಅರ್ಜಿಯ ಕಳಿಸಿ ಮಾಹಿತಿ ಕಳಿಸಲೆ ಹೇಳುತ್ತವು![ಹಾಂಗೆ ಈ ಕಾಯದೆಲಿ ಅವಕಾಶ ಇದ್ದು].ಉದಾಹರಣೆಗೆ,ಈ ವರ್ಷ ಎಷ್ಟು ಜನ ತೆರಿಗೆ ಅಧಿಕಾರಿಗಳ ಎಲ್ಲೆಲ್ಲಿ ನೇಮಿಸಿದ್ದವು ಹೇಳುವ ಅಖಿಲ ಭಾರತ ದೇಶದ ಮಾಹಿತಿ ಬರೇ ಹತ್ತೇ ರೂಪಾಯಿಗೆ ನಾವು ದಿಲ್ಲಿಯ ಆದಾಯ ಕರ ಇಲಾಖೆಯ ಮಾಹಿತಿ ಅಧಿಕಾರಿಗೆ ಬರೆದರೆ, ಹತ್ತು ಹಲವು ಕಮಿಶನರೇಟಿಂದ ಸಿಕ್ಕುಗು-ಇದು ಈ ಕಾಯದೆಯಿಂದಾಗಿ ಸಾಧ್ಯ.
    ಈ ಉತ್ತಮ ಲೇಖನಕ್ಕಾಗಿ ಶರ್ಮಣ್ಣಂಗೆ ಅಭಿನಂದನೆ.

    1. ಲೇಖನಕ್ಕೆ ಪೂರಕ ಮಾಹಿತಿಯನ್ನೂ ಒದಗಿಸಿದ್ದಕ್ಕೆ ಧನ್ಯವಾದಂಗೊ ಗೋಪಾಲಂಗೆ.

  40. ಮಾಹಿತಿಯುಕ್ತ ಶುದ್ದಿಗೆ ಒಪ್ಪ೦ಗೊ ಅಪ್ಪಚ್ಚೀ..

  41. ಬೈಲಿನವಕ್ಕೆ ಅಗತ್ಯ ಬಿದ್ದರೆ ಒಂದು ಪ್ರಬಲವಾದ ಅಸ್ತ್ರ ಅಪ್ಪಚ್ಚಿ ಕೈಲಿ ಇದ್ದು ಹೇಳಿ ಧೈರ್ಯ 🙂 ಧನ್ಯವಾದಂಗ…

    1. ಅಪ್ಪಚ್ಚಿ ಕೈಲಿ ಮಾ೦ತ್ರ ಅಲ್ಲ ಜಯಕ್ಕಾ.. ನವಗೆ ಆರಿ೦ಗೆ ಬೇಕಾರೂ ಈ ಅಸ್ತ್ರ ಉಪಯೋಗಿಸಲಕ್ಕು..

      1. ‘ಆತ್ಮ ಜ್ಹಾನ’ ಹೇಳಿ ಒಂದು ಜ್ಹಾನ ಇದ್ದು… ಅದರ ಪಡದರೆ ಹೀಂಗಿದ್ದ ಮಾಹಿತಿಗಳ ಎಲ್ಲ ವಿವರವಾಗಿ ಓದಿ ತಲೆಲಿ ಸ್ಟೋರ್ ಮಾಡುವ ಕಷ್ಟ ಇಲ್ಲೇ… ಹಾಂಗೆ ಹೇಳಿ ಅಗತ್ಯ ಇಪ್ಪಗ ಉಪಯೋಗಿಸುಲೂ ಎಡಿತ್ತು… ಜೀವನ ತುಂಬಾ ತುಂಬಾ ಸುಲಭ…

  42. ಸಾರ್ವಜನಿಕ ಹಿತ ರಕ್ಷಣೆಗಾಗಿ ಇಪ್ಪ ಮಾಹಿತಿ ಹಕ್ಕು ಕಾನೂನಿನ ಬಗ್ಗೆ ಉತ್ತಮ ಮಾಹಿತಿ ಕೊಟ್ಟತ್ತು ಶರ್ಮಪ್ಪಚ್ಚಿಯ ಲೇಖನ. ಗೊಂತಿಲ್ಲದ ಸುಮಾರು ವಿಷಯಂಗೊ ಗೊಂತಾತು. ೨೦೦೫ನೇ ಇಸವಿಂದಲೇ ಇದು ಜ್ಯಾರಿಗೆ ಬಂದರೂ ನಾವಾರೂ ಇದರ ಗೊಡವೆಗೆ ಹೋಗದ್ದೆ ಇಪ್ಪದು ನಾಚಿಕೆಯ ವಿಷಯ. ಮಾಹಿತಿ ತೆಕ್ಕೊಂಡರುದೆ ಶ್ರೀ ಸಾಮಾನ್ಯಂಗೆ ಎಂತ ಮಾಡ್ಳೆ ಎಡಿಗು ?

    1. ೨೦೦೫ ರಿಂದಲೇ ಜ್ಯಾರಿಗೆ ಬಂದರೂ, ಇನ್ನೂದೆ ಎಷ್ಟೋ ಜೆನಂಗೊಕ್ಕೆ ಇದರ ಬಗ್ಗೆ ಮಾಹಿತಿ ಇಲ್ಲೆ. ಇದರ ಬಗ್ಗೆ ಜನ ಜಾಗೃತಿ ಸರಿಯಾಗಿ ಆಯಿದಿಲ್ಲೆ.

  43. ಶುದ್ದಿಗೆ ಧನ್ಯವಾದಂಗೊ ಅಪ್ಪಚ್ಚಿ..ಎಲ್ಲೋರು ಉಪಯೋಗಿಸಬಹುದಾದ ಕಾಯಿದೆ,
    ಎನಗೆ ಗೊಂತಿಪ್ಪ ಒಂದೆರದಡು ವಿಷಯ..
    {ಆ ಮಾಹಿತಿ ಎಲ್ಲಿ ಸಿಕ್ಕುಗು ಹೇಳ್ತ ಬಗ್ಗೆ ತಿಳ್ಕೊಂಡು ಅಲ್ಲಿಯ PIO ಗೇ ಅರ್ಜಿಯ ಕಳುಸೆಕ್ಕು} ಈ ಕಾಯಿದೆ ಸಾಮಾನ್ಯನಿಂದ ಜನಸಾಮಾನ್ಯಂಗೂ ಇಪ್ಪ ಕಾರಣ ಅವ ಎಲ್ಲಿ ಬೇಕಾರೂ ಅರ್ಜಿ ಕೊಡ್ಲಕ್ಕು. PIO/APIO ಇದು ಎನಗೆ ಸಂಬಂದಪಟ್ಟದಲ್ಲ ಹೇಳಿ ಹೇಳುವಾಂಗಿಲ್ಲೆ. ಅವ ಅದರ ಸರಿಯಾದ ಜಾಗಗೆ ಕಳುಸಿ ಅರ್ಜಿದಾರಂಗೂ ತಿಳುಸೆಕು. ಮುಂದೆ ಸಂಬಂದಪಟ್ಟ ಮಾಹಿತಿ ಆಚವನೇ ಕೊಡುದು.
    {ನಾವು ಕೇಳುವ ಮಾಹಿತಿಗೊ ಯಾವದೇ ರೂಪಲ್ಲಿ ಇಪ್ಪಲಕ್ಕು} ಯಾವುದೆ ವಸ್ತುವಿನ “sample” ಕೂಡಾ ಮಾಹಿತಿ ಹೇಳಿಯೇ ಪರಿಗಣುಸುತ್ತವು, ಹೇಳಿರೆ ಕೆಲಸಕ್ಕೆ ಟೆಂಡರ್ ತೆಕ್ಕೊಂಡವು ಅದರಲ್ಲಿ ಒಪ್ಪಿದ ಹಾಂಗಿಪ್ಪ ಸಾಮಾನುಗಳ ಹಾಕುತ್ತವೋ ಇಲ್ಲೆಯೋ ಹೇಳಿ ನೋಡ್ಲೆ..

    ಧನ್ಯವಾದಂಗೊ..

    1. ಪೂರಕ ಮಾಹಿತಿಯೊಟ್ಟಿಂಗೆ ವಿಮರ್ಶಿಸಿದ್ದಕ್ಕೆ ಧನ್ಯವಾದಂಗೊ

  44. ಉಪಯುಕ್ತ ಮಾಹಿತಿ.
    RTI ಕಾನೂನು ಬಪ್ಪಲ್ಲಿ ಅರವಿಂದ್ ಕೇಜ್ರಿವಾಲ್ ರ ಹೋರಾಟ, ದೊಡ್ಡದು.

    1. ಅರವಿಂದ ಕೇಜ್ರಿವಾಲ್ ಕೊಡುಗೆ ತುಂಬಾ ದೊಡ್ದದು. ಇವರೆಲ್ಲರ ಹೋರಾಟದ ಫಲವೇ ಈ ಕಾನೂನು ಜ್ಯಾರಿಗೆ ಬಪ್ಪಲೆ ಕಾರಣ
      ಧನ್ಯವಾದಂಗೊ

  45. ಮಾಹಿತಿ ಹಕ್ಕಿನ ಬಗೆಗಿನ ಮಾಹಿತಿಗೆ ದನ್ಯವಾದಂಗೊ.

  46. ಬಾಕಿದ್ದೋರ ಪಂಚಾತಿಗೆ ಎನ ಬೇಡ. ಆದರೆ, ಎನಗಂತೂ ಹೀಂಗಪ್ಪ ಒಂದು ಸಂಗತಿ ಇದ್ದು ಹೇಳಿಯೇ ಗೊಂತಿತ್ತಿಲ್ಲೆ. ಸಂಗ್ರಹಿಸಿ ಬೈಲಿಲಿ ಪ್ರಸ್ತುತ ಪಡಿಸಿದ ಅಪ್ಪಚ್ಚಿಗೆ ಧನ್ಯವಾದ.

    ಶುದ್ದಿ ಲಾಯಕ ಆಯ್ದು ಹೇಳುವದಕ್ಕಿಂತ ಅತ್ತ್ಯಂತ ಉಪಯುಕ್ತ ಮಾಹಿತಿಯಾಗಿದ್ದು ಹೇಳುವುದೇ ಸೂಕ್ತ ಹೇಳಿ ಮೆಚ್ಚುಗೆ ವ್ಯಕ್ತಪಡುಸುವದು – ‘ಚೆನ್ನೈವಾಣಿ’.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×