Oppanna.com

ಸುಬ್ರಹ್ಮಣ್ಯ ಷಷ್ಠಿ ವ್ರತ

ಬರದೋರು :   ವಿಜಯತ್ತೆ    on   15/12/2012    12 ಒಪ್ಪಂಗೊ

ಸುಬ್ರಹ್ಮಣ್ಯ  ಷಷ್ಠಿ ವ್ರತವ  ಲೋಕಲ್ಲಿ ಮದಾಲು ಆಚರಿಸಿದವು

ಪುರಾತನ ಕಾಲಲ್ಲಿ ಹಿರಣ್ಯಾಕ್ಷ ಹೇಳ್ತ  ರಾಕ್ಷಸ ಇದ್ದಿದ್ದನಾಡ. ಅವನ ಮಗ° ತಾರಕಾಸುರನೂ ದುಷ್ಟನೆ. ಇವ°  ಗೋಕರ್ಣಲ್ಲಿ ಶಿವನ ತಪಸ್ಸು ಮಾಡಿ ಒಲಿಸಿಗೊಂಡ°. ಎಂತಕೆ ಎನ್ನ ತಪಸ್ಸು ಮಾಡಿ ಕರೆಸಿಗೊಂಡೆ ಕೇಳಿದ° ಶಿವ°.  ಅಂಬಗ, ಎನಗೆ ಮಹಾದೇವನಾದ ನಿನ್ನ ಹೊರತಾಗಿ ಬೇರೆ ಆರಿಂದಲೂ ಸಾವು ಬಪ್ಪಲಾಗ ಹಾಂಗೆ ವರ ಕೊಡೆಕು ಕೇಳಿಗೊಂಡ°. ಶಿವ° ತಥಾಸ್ತು ಹೇಳಿದ°. ವರ ಕೊಟ್ಟ ಪರಮಾತ್ಮ ಕೊಲ್ಲಲಿದ್ದೊ? ಹೇಳಿ ತಾರಕಾಸುರನ ಲೆಕ್ಕ: ಹೀಂಗೆ ಯೋಚಿಸಿಗೊಂಡು ಮದಾಂಧನಾಗಿ ದೇವತಗೊಕ್ಕೆ ತುಂಬ ಕಾಟ ಕೊಡ್ಳೆ ತೊಡಗಿದ°. ಎಲ್ಲ ದೇವತಗೊ ಇವನ ಕಾಟ ತಡೆಯದ್ದೆ ಸ್ವರ್ಗ ಬಿಟ್ಟು ಓಡಿದವಡ. ಇದರಿಂದಾಗಿ ಕಂಗೆಟ್ಟ ದೇವೇಂದ್ರ ದೇವಗುರುಗಳಾದ ಬ್ರಹಸ್ಪತಾಚಾರ್ಯರಲ್ಲಿಗೆ ಬಂದು ಇದಕ್ಕೆ ಪರಿಹಾರೋಪಾಯ ಹೇಳೆಕ್ಕು ಹೇಳಿ ಭಿನ್ನವಿಸಿದ°.

ಅಂಬಗ ಬ್ರಹಸ್ಪತಿ,  “ದೇವೇಂದ್ರಾ.., ತಾರಕಾಸುರ ಶಿವನತ್ರೆ ಅವನ ಹೊರತಾಗಿ ಬೇರೆ ಆರಿಂದಲೂ ಸಾವು ಬಪ್ಪಲಾಗ ಹೇಳಿ ಕೇಳಿಗೊಂಡಿದನಷ್ಟೇ, ಇದಕ್ಕೆ ಮಹಾದೇವನೇ ಪರಿಹಾರ ಹೇಳುಗು” ಹೇಳಿದ°.  ದೇವಗುರುಗಳ ಈ ಮಾತಿನ ಕೇಳಿದ ದೇವೇಂದ್ರ ಕೈಲಾಸ ಪರ್ವತಕ್ಕೆ ಹೋಗಿ ಮಹಾದೇವನ ಅಡಿದಾವರಗೆ ಎರಗಿ, ವಿಷಯ ತಿಳಿಸಿ ಅವನತ್ರೆ, ” ಪ್ರಭೋ, ಶಂಕರಾ, ನೀನು ವರಕೊಟ್ಟ ನಿನ್ನ ಭಕ್ತನ ನಿನ್ನ ಕೈಯಾರೆ ಕೊಲ್ಲಲೆಡಿಯ ನಿಜ, ಅದಕ್ಕಾಗಿ ನಿನ್ನಾಂಗೇ ಒಬ್ಬ ಸಮರ್ಥ ಮಗನ ಎಂಗೊಗೆ ಕೊಡು, ಅವನ ನಮ್ಮ ದೇವಸೇನಗೆ ಅಧಿಪತಿಯಾಗಿ ಮಾಡುತ್ತೆ  ತಾರಕನ ಸಂಹಾರ ಮಾಡ್ಳೆ ನಿನ್ನಂಶಂದಲೇ ಹುಟ್ಟಿ ಬಂದವನೇ ಆಯೆಕ್ಕಲ್ಲದಾ?”.

ದೇವತೆಗಳ ಈ ಬಿನ್ನಹವ ಮನ್ನಿಸಿಗೊಂಡ ಮಹಾದೇವ°,  ಕೈಲಾಸ ಪರ್ವತಕ್ಕೆ ಹೋಗಿ ಮನದನ್ನೆ ಪಾರ್ವತೀ ದೇವಿಯೊಟ್ಟಿಂಗೆ ಅಲ್ಲಿಯ ಕೇಳೀಕುಂಜಲ್ಲಿ ವಿಲಾಸ ಶೃಂಗಾರಲ್ಲಿ ತೊಡಗಿದ°.  ಹೀಂಗೇ ಹಲವಾರು ವರ್ಷ ಕಳಾತು.  ಈಚಿಗೆ ತಾರಕನ ಉಪದ್ರ ತಾಳಿಯೊಂಬಲೆ ಎಡಿಯದ್ದೆ ದೇವತಗೊ, ವಾಯುದೇವನ ಶಿವನಲ್ಲಿಗೆ ಕಳಿಸಿದವು.  ವಾಯು, ಶಿವ-ಪಾರ್ವತಿಯರ ಏಕಾಂತ ಜಾಗ್ಗೇ ನುಗ್ಗಿ ಬಂದ°. ಈಗ ದೇವತಗೊಕ್ಕೆ ಮಾತು ಕೊಟ್ಟದು ನೆಂಪಾತು ಶಿವಂಗೆ.  ತನ್ನ ಕ್ರೀಡೆಯ ಅರ್ಧಕ್ಕೇ ನಿಲ್ಲುಸಿ ಎದ್ದು ಬಂದ°.  ತನ್ನ ಲಿಂಗ ಮಧ್ಯಲ್ಲಿಪ್ಪ ಅಮೋಘವಾದ ವೀರ್ಯವ ಅಗ್ನಿಯ ಮದ್ಯಲ್ಲಿ ಬಿಟ್ಟ°.  ಅಗ್ನಿಗೆ ಇದರ ತಾಳಿಯೊಂಬಲೆಡಿಯದ್ದೆ ಗಂಗಗೆ ಚೆಲ್ಲಿದ°.  ಗಂಗಗೂ ಶಿವನ ಶಕ್ತಿಪಾತವ ಸಹಿಸಿಗೊಂಬಲೆ ಎಡಿಗಾತಿಲ್ಲೆ.  ಗಂಗೆ ದಡಲ್ಲಿಪ್ಪ ದರ್ಭೆಹಾಸಿಂಗೆ ಚೆಲ್ಲಿತ್ತು.  ಅಷ್ಟೊತ್ತಿಂಗೆ ಅಲ್ಲಿ ಸಂಚರಿಸುತ್ತಿಪ್ಪ ಆರು ಜೆನ ಮುನಿಪತ್ನಿಯರಾದ ಕೃತ್ತಿಕೆಯರು ಬಂದವು.  ಅವಕ್ಕೆ ಇಂದ್ರ ಮೊದಲೆ ಹೇಳಿತ್ತಿದ್ದ° – ಇಲ್ಲಿ ಹುಟ್ಟಿದ ದ್ವಾದಶ ಆದಿತ್ಯರ ಹಾಂಗೆ ಕಾಂಬ, ಪ್ರಕಾಶಿಸುವ ಮಗ° ನಿಂಗೊಗೂ ಮಗನೇ ಹೇಳಿ.

ದೇವೇಂದ್ರನ ಅಪ್ಪಣೆ ಅಪ್ಪದ್ದೆ ಆರು ಜೆನ ಮುನಿಪತ್ನಿಯರೂ ಮಹಾದೇವನ ಶಕ್ತಿಯ ರಕ್ಷಣೆ ಮಾಡಿದವು.  ಹೀಂಗಿಪ್ಪಗ ಒಂದು ದಿನ ಶಿವನ ಆ ಶಕ್ತಿಂದ  ತೇಜಪುಂಜವಾದ ಒಂದು ಶಿಶು ಹುಟ್ಟಿತ್ತು. ಮಗು ಕೂಗಲೆ ಸುರುಮಾಡಿತ್ತು.  ಈ ಕೂಗು ಕೇಳಿ ಆರು ಜೆನ ಕೃತ್ತಿಕೆಯರೂ ಓಡಿ ಬಂದವು.  ಆರು ಜೆನ ಅಬ್ಬೆಕ್ಕೊ ಶಿಶುವಿನ ನೋಡಿಯಪ್ಪಗ ಅವರ ಎಲ್ಲೋರ ಮೊಲೆಲಿಯೂ ಹಾಲು ಸುರಿವಲೆ ಸುರುವಾತಡ.  ಆಶ್ಚರ್ಯ! ಮಗುವಿಂಗೆ ಆರು ಮೋರೆ ಹುಟ್ಟಿತ್ತಡ;  ಆರುಮೋರೆಲಿ ಮಲೆ ತಿಂದ ಕಾರಣ ಷಣ್ಮುಖ ಹೇಳಿ ಹೆಸರಾತು.  ಕೃತ್ತಿಕೆಯರ ಮಗನಾದ ಕಾರಣ ಕಾರ್ತಿಕೇಯ ಹೇಳಿಯೂ, ಶಿವ-ಪಾರ್ವತಿಯರ ಮಗನಾದ ಕಾರಣ ಕುಮಾರ ಹೇಳಿಯೂ, ಶಿವನ ರೇತಸ್ಸು ನೆಲಲ್ಲಿ ಬಿದ್ದು ಹುಟ್ಟಿದ ಕಾರಣ ಸ್ಕಂದ ಹೇಳಿಯೂ ಹೆಸರಾತು. ಶಂಕರ ಇಂದ್ರನ ಅಪೇಕ್ಷೆ ಹಾಂಗೆ ಇವನ ದೇವತೆಗಳ ಸೇನಾಪತಿಯಾಗಿ ಮಾಡಿದ°.  ಹಾಂಗಾಗಿ ಇವಂಗೆ ದೇವಸೇನಾಪತಿ ಹೇಳ್ತ ಹೆಸರೂ ಬಂತು. ಶಿವ°, ಮಗಂಗೆ ಶಕ್ತಿ ಹೇಳ್ತ ಆಯುಧವ ಕೊಟ್ಟು ನವಿಲಿನ ವಾಹನವಾಗಿ ಕೊಟ್ಟ°.  ಹಾಂಗಾಗಿ ಮಯೂರವಾಹನ ಹೇಳಿಯೂ ದೆನಿಗೇಳಿದವು.  ವಿಷ್ಣು ಇವಂಗೆ ಶಸ್ತ್ರಗಳನ್ನೂ ದೇವೇಂದ್ರ ಅಸ್ತ್ರಗಳನ್ನೂ ಮಾತೃ ಗಣಂಗೊ ಬಗೆ ಬಗೆಯ ಆಯುಧಂಗಳ ಕೊಟ್ಟವು.

ದೇವತಗೊ, ಸ್ಕಂದನ ಅವರ ಸೇನಾಪತಿಯಾಗಿ ಮಾಡಿಗೊಂಡು ತಾರಕಾಸುರನೊಟ್ಟಿಂಗೆ ಯುದ್ಧ ಮಾಡ್ಲೆ ಹೆರಟೊವು. ದೇವತಗೊಕ್ಕೂ ರಾಕ್ಷಸರಿಂಗೂ ರಕ್ತಶೃಂಗ ಪರ್ವತಲ್ಲಿ ಘನ ಘೋರ ಯುದ್ಧ ಅತು. ಸ್ಕಂದ ತನ್ನ ಅಪ್ಪ° ಕೊಟ್ಟ ಶಕ್ತ್ಯಾಯುಧಂದ ತಾರಕಾಸುರನ  ಸೀಳಿ   ನೆಲಕಚ್ಚಿಸಿದ°.  ತಾರಕಾಸುರ ಸತ್ತ ಸಂತೋಷಂದ ಸ್ವರ್ಗಕ್ಕೆ ಹಿಂತಿರುಗಿದವು.

ಸುಬ್ರಹ್ಮಣ್ಯ ಷಷ್ಟಿ ಮಹತ್ವ ಸ್ಕಂದನ ಶಕ್ತಿಪ್ರಹಾರಂದ ತಾರಕಾಸುರ ನೆಲಕ್ಕೆ ಬಿದ್ದಪ್ಪಗ ಭಯಂಕರ ಭೂಕಂಪ ಆತು.  ರಕ್ತಶೃಂಗ ಪರ್ವತ ರಜ್ಜ ಚಲಿಸಿತ್ತು , ಪರಿಣಾಮವಾಗಿ ಅಲ್ಲಿ ಇದ್ದ ಬ್ರಾಹ್ಮಣರಿಂಗೆ ಅಪಾಯ ಉಂಟಾಗಿ ಹೆದರಿ ಸ್ಕಂದಂಗೆ ಶಾಪ ಕೊಟ್ಟವು.  ಕೂಡ್ಳೇ ಹೊಯ್ದಾಡುತ್ತಿಪ್ಪ ರಕ್ತಶೄಂಗದ ಮೇಗೆ ಸ್ಕಂದ ತನ್ನ ಶಕ್ತ್ಯಾಯುಧವ ನಿಲ್ಲಿಸಿಕ್ಕಿ ಸತ್ತ ಬ್ರಾಹ್ಮಣರ ಬದುಕಿಸಿದ°.  ಹೀಂಗಾದರೂ ಬ್ರಾಹ್ಮಣರ ಶಾಪ ಹೋಯಿದಿಲ್ಲೆ.  ಅವ° ಕಾಳಸರ್ಪ ಆದ°.  ಇದರಿಂದ ಪಾರ್ವತಿಗೆ ಅತೀವ ದುಃಖ  ಆತು.  ಎಲ್ಲ ಅಬ್ಬೆಕ್ಕಳ ಹಾಂಗೆ ಪಾರ್ವತಿಯೂ ತನ್ನ ಮಗ° ಮದಲಾಣ ಹಾಂಗೆ ಅಪ್ಪಲೆ ಎಂತ ಮಾಡುದು? ಹೇಳಿ ಯೋಚನೆ ಮಾಡಿ ಒಂದು ನಿರ್ಧಾರಕ್ಕೆ ಬಂದು ನೂರೆಂಟು ಷಷ್ಟಿ ವ್ರತವನ್ನೂ ಉಪವಾಸ ವ್ರತವನ್ನೂ ಮಾಡ್ಳೆ ಸುರುಮಾಡಿತ್ತು.  ಈ ವ್ರತದ ಉದ್ಯಾಪನಕ್ಕೆ ಎಲ್ಲ ದೇವತಗಳನ್ನೂ ದೆನಿಗೇಳಿತ್ತು. ಸ್ಕಂದನೂ ಕಾಳಸರ್ಪ ರೂಪಲ್ಲಿ ಬಂದ°. ಆಶ್ಚರ್ಯ!. ವಿಷ್ಣುವಿನ ಸ್ಪರ್ಶಂದ;  ಪಾರ್ವತಿಯ ವ್ರತಾಚರಣೆಂದಲಾಗಿ ಕುಮಾರಂಗೆ ಮದಲಾಣ ರೂಪವೇಬಂತು! ಹೀಂಗೆ ಸುಬ್ರಹ್ಮಣ್ಯಷಷ್ಠಿ ವ್ರತವ ಲೋಕಲ್ಲಿ ಪಾರ್ವತೀದೇವಿಯೇ ಮದಾಲು ಆಚರಿಸಿ ಇಷ್ಟಾರ್ಥ ಈಡೇರಿಸಿಗೊಂಡತ್ತು.

ದಕ್ಷಪ್ರಜಾಪತಿಯ ಮಗಳಾದ ದೇವಸೇನೆ ಒಂದು ದಿನ ಉದ್ಯಾನವನಲ್ಲಿ ತಿರುಗಿಗೊಂಡಿತ್ತು. ಅಂಬಗ ಕೇಶಿ ಹೇಳ್ತ ರಾಕ್ಷಸ ಅದರ ಅಪಹರಿಸಿತ್ತಿದ್ದ°. ಇಂದ್ರ ಆ ರಕ್ಕಸನ ಸೆರೆಂದ ಅದರ ಬಿಡಿಸಿ ತಾನೇ ರಕ್ಷಿಸಿಗೊಂಡಿತ್ತಿದ್ದ. ಷಣ್ಮುಖ ತಾರಕಾಸುರನನ್ನೂ ಶೂರಪದ್ಮಾಸುರನನ್ನೂ ಕೊಂದ ಮತ್ತೆ ದೇವಸೇನೆಯ ಷಣ್ಮುಖಂಗೆ ಇಂದ್ರ ಮದುವೆ ಮಾಡಿಸಿದ°. ಇವರ ಮದುವೆ ಸುಬ್ರಹ್ಮಣ್ಯಷಷ್ಟಿ ದಿನವೇ ಆತು. ಅವರಿಬ್ರ ಪಟ್ಟಾಭಿಷೇಕವಾದ ದಿನ ಶ್ರೀಪಂಚಮಿ ಹೇಳ್ತವು.

ಸುಬ್ರಹ್ಮಣ್ಯ ದೇವಸ್ಥಾನ ದಕ್ಷಿಣಕನ್ನಡದ ಸುಳ್ಯ ತಾಲೂಕಿನ ಒಂದು ಪುಣ್ಯಕ್ಷೇತ್ರ. ಇದರ ಹತ್ತರೆ ಕುಮಾರಧಾರಾ ಹೊಳೆ ಹರಿತ್ತು. ಈ ದೇವಸ್ಥಾನದ ಮೂಡು ಹೊಡೆಲಿ ಕುಮಾರಪರ್ವತ ತಲೆ ನೆಗ್ಗಿ ನಿಂದೊಡಿದ್ದು. ಚೈತ್ರ ಶುಕ್ಲ ಷಷ್ಟಿದಿನ ಸುಬ್ರಹ್ಮಣ್ಯಲ್ಲಿ ವಿಜೃಂಭಣೆಲಿ ಜಾತ್ರೆ ಆವುತ್ತು. ಈದಿನವ ಕುಕ್ಕೆಷಷ್ಠಿ, ಸ್ಕಂದಷಷ್ಠಿ, ಸುಬ್ರಹ್ಮಣ್ಯಷಷ್ಠಿ ಹೀಂಗೆಲ್ಲ ಹೇಳ್ತವು.ಇಲ್ಲಿ ಷಷ್ಠಿದಿನ ರಥ ಎಳವಗ ಮದಾಲು ರಥದ ಸುತ್ತೂ ಆಕಾಶಲ್ಲಿ ಗರುಡ ಪಕ್ಷಿ ಮೂರು ಸುತ್ತು ಹಾಕುತ್ತಡ. ಇಲ್ಯಾಣ ರಥ ತುಂಬಾ ದೊಡ್ಡದು. ರಥ ಎಳವ ಬಳ್ಳಿ ಹೇಳಿರೆ ನಾಗರಬೆತ್ತ. ರಥ ಎಳವಲೆ ಸೇರಿದ ಜೆನಂಗೊ ಅವವು ಕೈ ಹಿಡುದಷ್ಟು ಜಾಗೆಯ ಬಳ್ಳಿಯ [ಬೆತ್ತ] ಚೂರು ಪ್ರಸಾದ ರೂಪಲ್ಲಿ ಮನಗೆ ತೆಕ್ಕಂಡು ಹೋವುತ್ತವು. ಇದರ ಗಂಧ ತಳೆತ್ತ ಹಾಂಗೆ  ತಳದು ಚರ್ಮವ್ಯಾಧಿಗೆ ಕಿಟ್ಟಿರೆ ಗುಣ ಆವುತ್ತು ಹೇಳಿ ನಂಬಿಕೆ, ಅನುಭವವೂ ಇದ್ದು. ಸರ್ಪನ  ದೋಶ,  ಸಂತಾನಹೀನತೆ, ಪಾಂಡುರೋಗ ಮೊದಲಾದ ದೋಷಕ್ಕೆ ಸುಬ್ರಹ್ಮಣ್ಯನ ನಂಬಿರೆ ಒಳ್ಳೆ ಫಲ ಸಿಕ್ಕುತ್ತು ಹೇಳ್ತ ಅಚಲ ನಂಬಿಕೆ ಭಕ್ತಾದಿಗಳಲ್ಲಿದ್ದು.

~~**~~**~~

12 thoughts on “ಸುಬ್ರಹ್ಮಣ್ಯ ಷಷ್ಠಿ ವ್ರತ

  1. ಉಡುಪುಮೂಲೆ ಅಪ್ಪಚ್ಹಿಗೆ ಮನದಾಳದ ಧನ್ಯವಾದಂಗೊ ಏವದಕ್ಕೂ ಪ್ರೋಹ್ತ್ಸಾಹಸಿಕ್ಕೀರೆ ಉತ್ಸಾಹ ಬಪ್ಪದಲ್ಲೋ ಆಪ್ಪಚ್ಹಿ,?

  2. ತ೦ಗೆ ವಿಜಯಾ,
    ಹರೇ ರಾಮ;ಸಕಾಲಿಕ ಲೇಖನ. ಮಕ್ಕೊಗುದೆ ಕೊಶಿ ಕೊಡುವಾ೦ಗೆ ಬೈ೦ದು. ಬೊಳು೦ಬು ಗೋಪಾಲಣ್ಣನ ಸ೦ಶಯಕ್ಕೆ ಒ೦ದು ಮಾತು- ದೇವಲೋಕಕ್ಕೂ ಭೂಲೋಕಕ್ಕೂ ಒ೦ದೇ ರೀತಿಯ ಸಮ್ಮ೦ದ ಕಲ್ಪನೆ ಮಾಡುವದು ಸಮ೦ಜಸವೋ? ಅವಕ್ಕೂ ನಮಗೂ ಒ೦ದೇ ಸ೦ವಿಧಾನವೋ ?ವೇದ ಕಾಲಲ್ಲಿ ಈ ಬಗೆಯ ಕಲ್ಪನಗೆ ಅವಕಾಶ ಇತ್ತಿಲ್ಲೆ.ಆದರೆ ಪುರಾಣ ಕಾಲಕ್ಕೆ ಬ೦ದ ಮೇಗೆಯೇ ಇ೦ಥ ಮಾನವ ಜಗತ್ತಿಲ್ಲಿಪ್ಪ ಕ್ರಮಲ್ಲಿಯೇ ಚಿ೦ತನೆ ಮಾಡುವ ಹೊಸ ಬಗೆಯ ಆಯಾಮ ಸುರುವಾಗಿರೆಕು. ಎಲ್ಲವನ್ನು ನಮ್ಮ ಮೂಗಿನ ನೇರಕ್ಕೆ ನೋಡುವ ಕ್ರಮ ಸಾಹಿತ್ಯ ಚಿ೦ತಕರಲ್ಲಿಯೂ ಬೆಳದಾ೦ಗೆ ಕಾಣ್ತು! ಪುರಾಣದ ಬ್ರಹ್ಮ ಕಪಾಲದ ಕತೆಲಿ, ಬ್ರಹ್ಮ- ಸರಸ್ವತಿಯ ಸಮ್ಮ೦ದ; ಯಮ-ಯಮಿಯರ ಸಮ್ಮ೦ದ ಇದಕ್ಕೆಲ್ಲ ಎ೦ತ ಸಮಾದಾನ ಹೇಳ್ವದು.ಅಲ್ಲದಾ? ಅ೦ತು ಈ ಲೇಖನ ಚಿ೦ತನಕ್ಕೂಎಡೆಮಾಡಿ ಕೊಟ್ಟದು.ಒಳ್ಳೆದೆ. ಇ೦ಥ ಉತ್ತಮ ಲೇಖನ ಬೈಲಿಲ್ಲಿ ಬ೦ದೊ೦ಡಿರಲಿ ಹೇದು ಸ್ವಾಗತದೊಟ್ಟಿ೦ಗೊ೦ದು ಒಪ್ಪ.

  3. ನಿಂಗಳ ಸಂಶಯದ ಹಾಂಗೆ ಎನಗೂ ಜಿಜ್ನಾಸೆ ಬಂತು ಆನು ಮತ್ತೆ ಸ್ತಡೀಮಾಡಿದೆ ಅನುಭವಸ್ತರಲ್ಲಿ ಕೇಳಿದೆ ದಾಕ್ಷಾಯಿಣಿ ಸ್ವಾಯಂಭುವ ಮನ್ವಂತರದ ದಕ್ಷನ ಮಗಳು . ಇದು ಚಾಕ್ಷುಷ ಮನ್ವಂತರದವ

    1. ಧನ್ಯವಾದಂಗೊ. ದಕ್ಷನಲ್ಲಿಯೂ ಒಂದನೇ, ಎರಡನೇ ಹೇಳಿ ಇದ್ದಂಬಗ. ಈಗ ಸರಿಯಾತು.

  4. ಸುಬ್ರಹ್ಮಣ್ಯ ಷಷ್ಠಿ ಯ ಮಹತ್ವ, ನಾಗ/ಸುಬ್ರಹ್ಮಣ್ಯರ ಸಂಬಂಧವ ಚೆಂದಕೆ ವಿವರಿಸಿ ಕೊಟ್ಟ ವಿಜಯಕ್ಕಂಗೆ ಧನ್ಯವಾದಂಗೊ. ಲೇಖನ ಸಮಯೋಚಿತವಾಗಿ ಬಯಿಂದು ಲಾಯಕಿದ್ದು. ಕತೆಲಿ ಎನಗೊಂದು ಸಣ್ಣ ಸಂಶಯ. ದಕ್ಷ ಪ್ರಜಾಪತಿಯ ಮಗಳು ದೇವಸೇನೆಯ ಸುಬ್ರಹ್ಮಣ್ಯ ಮದುವೆ ಆದ ಹೇಳ್ತ ವಿಚಾರ. ದಾಕ್ಷಾಯಣಿ/ಪಾರ್ವತಿ ದೇವಿಯುದೆ ದಕ್ಷನ ಮಗಳೇ ಅಲ್ಲದೊ ? ಅಂಬಗ ಸುಬ್ರಹ್ಮಣ್ಯ ಚಿಕ್ಕಮ್ಮನ ಮದುವೆ ಆದ ಹಾಂಗಾತಿಲ್ಲೆಯೊ ?

  5. ಷಷ್ಠಿ ವ್ರತದ ಹಿನ್ನೆಲೆಯ ಶುದ್ದಿ ಲಾಯ್ಕ ಆಯಿದು ಅತ್ತೆ.ಸುಬ್ರಹ್ಮಣ್ಯ ಕ್ಷೇತ್ರಕ್ಕೂ ನಾಗ೦ಗೂ ಸ೦ಬ೦ಧದ ಕಾರಣ ಗೊ೦ತಿತ್ತಿಲ್ಲೆ.
    ಧನ್ಯವಾದ.

  6. ಶರ್ಮಭಾವಂಗೆ, ಸೇಡಿಗುಮ್ಮೆ ಭಾವನೋರ ಮಗ ಗೋಪಾಲಂಗೆ, ಪೆರ್ವ ಗಣೇಶಂಗೆ, ಈಬರಹಕ್ಕೆಒಪ್ಪ ಕೊಟ್ಟ ಎಲ್ಲೋರಿಂಗು ಧನ್ಯವಾದಂಗೊ

  7. ಸುಬ್ರಹ್ಮಣ್ಯ ಷಷ್ಠಿ ಆರು ಮೊದಾಲು ಮಾಡಿದ್ದು ಹೇಳ್ತ ವಿವರದೊಟ್ಟಿಂಗೆ, ಅವಂಗೆ ಬೇರೆ ಬೇರೆ ಹೆಸರು ಬಪ್ಪಲೆ ಎಂತ ಕಾರಣ, ವ್ರತ ಆಚರಣೆ ಎಲ್ಲವನ್ನೂ ತಿಳಿಶಿಕೊಟ್ಟ ಒಳ್ಳೆ ಲೇಖನ, ಸಮಯೋಚಿತ ಕೂಡಾ.

  8. ಒನ್ದು ಯಕ್ಷಗಾನ ಪ್ರಸ೦ಗಲ್ಲ್ಲಿ ಇಪ್ಪಷ್ಟು ವಿಷಯ೦ಗಳ ಸ೦ಕ್ಷಿಪ್ತವಾಗಿ, ಸರಳವಾಗಿ, ಲಾಯಿಕ್ಕಲಿ ಹೇಳಿ ಕೊಟ್ಟ ವಿಜಯತ್ತೆಗೆ ಧನ್ಯವಾದ೦ಗೊ

  9. ಸುಬ್ರಹ್ಮಣ್ಯ ಮತ್ತೆ ನಾಗಂಗೆ ಇಪ್ಪ ಸಂಬಂಧವ ಪೌರಾಣಿಕ ನೆಲೆಲಿ ವಿವರಿಸಿದ ಚಿಕ್ಕಮ್ಮಂಗೆ ನಮಸ್ಕಾರ.
    ಸುಬ್ರಹ್ಮಣ್ಯ ಕ್ಷೇತ್ರ ಕೃಷಿಕರಿಂಗೆ ಅತ್ಯಂತ ಆಪ್ತನಾದ ದೇವರ ಕ್ಷೇತ್ರ.

  10. ಪ್ರಥಮವಾಗಿ ಈ ಬರಹಕ್ಕೆ ಒಪ್ಪಕೊಟ್ಟ ಚೆನ್ನ್ಯೈಭಾವಂಗೆ ಪ್ರಥಮತ; ಧನ್ಯವಾದಂಗೊ

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×